ಅಯೋಧ್ಯಾ ಆಂದೋಲನ: ಭಾರತದ ಅಂತರಾತ್ಮದ ಧ್ವನಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿ ಆಗಿದೆ. ಇನ್ನು ಅದರ ಸಾಕ್ಷಾತ್ಕಾರವಷ್ಟೇ ಬಾಕಿ. ಇಡೀ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ಮುಗಿದು, ಮಂದಿರವೂ ಭಕ್ತರಿಗೆ ತೆರೆದುಕೊಳ್ಳಲಿ ಎಂಬುದು ಭಾರತೀಯರೆಲ್ಲರ ಆಕಾಂಕ್ಷೆ. ಆದರೆ, ಈ ಮಂದಿರಕ್ಕಾಗಿ ಮಾಜಿ ಉಪ ಪ್ರಧಾನಿ ಎಲ್.ಕೆ. ಆಡ್ವಾಣಿ ಅವರು ನಡೆಸಿದ ರಥಯಾತ್ರೆ ಅತಿದೊಡ್ಡ ಮೈಲುಗಲ್ಲು. ಈ ವಿಷಯದಲ್ಲಿ ಕೆಲ ಪ್ರಧಾನ ಮಂತ್ರಿಗಳು ಮಾಡಿದ್ದೇನು? ಮಂದಿರದ ಸುತ್ತ ನಡೆದ ರಾಜಕೀಯವೇನು? ಸ್ವತಃ ಅದೆಲ್ಲವನ್ನು ಆಡ್ವಾಣಿ ತಮ್ಮ ’ಮೈ ಕಂಟ್ರಿ ಮೈ ಲೈಫ್’ ಕೃತಿಯಲ್ಲಿ ವಸ್ತುನಿಷ್ಠವಾಗಿ ದಾಖಲಿಸಿದ್ದಾರೆ. ಆ ಬರಹವನ್ನು ಕನ್ನಡದ ಬಹುಮುಖ್ಯ ಅನುವಾದಕರಲ್ಲಿ ಒಬ್ಬರಾದ ಬಿ.ಎಸ್. ಜಯಪ್ರಕಾಶ ನಾರಾಯಣ ಕನ್ನಡೀಕರಿಸಿದ್ದಾರೆ. ಅದನ್ನು ಸಿಕೆನ್ಯೂಸ್ ನೌ.ಕಾಂ ಯಥಾವತ್ತಾಗಿ ಪ್ರಕಟಿಸಿದೆ.