ಹೂತಿಟ್ಟ ಶೌರ್ಯ !! ನಾಗಾ ವೀರರ ಕೆಚ್ಚನ್ನುಈಶಾನ್ಯ ಕಣಿವೆಗಳಲ್ಲೇ ಮಣ್ಣು ಮಾಡಿದ ಪುಕ್ಕಲಾಂಗ್ಲರು

ಬ್ರಿಟಿಷ್ ಆಡಳಿತ ಬೇಕೆಂದೇ ನಾಗಾಗಳ ಜತೆ ನಡೆಸಿದ ಹೋರಾಟವನ್ನು ಮರೆಮಾಚಿದೆ. ಆಪ್ಘಾನಿಸ್ತಾನದಲ್ಲಿ ನಡೆಸಿದ ಯುದ್ಧವನ್ನು ವೃಭವೀಕರಿಸುವ ಸ್ವಾರ್ಥದಿಂದ ಆಂಗ್ಲರು ವಿಶ್ವದ ಗಮನ ಸೆಳೆಯಬೇಕಿದ್ದ ಈ ಸಂಗ್ರಾಮವನ್ನು ನಾಗಾ ಕಣಿವೆಗಳು ದಾಟದಂತೆ ನೋಡಿಕೊಂಡರು. ಈ ಅಸಾಮಾನ್ಯ ಇತಿಹಾಸದ ಮೇಲೆ ಈಗಲಾರದೂ ಬೆಳಕು ಚೆಲ್ಲಬೇಕಿದೆ. ಆ ನಿಟ್ಟಿನಲ್ಲಿ ಜಾನ್ಸ್’ಸ್ಟೋನ್ ಅವರ ಕದನರಂಗದ ಪ್ರತ್ಯಕ್ಷ ಕಥನವನ್ನು ಕನ್ನಡೀಕರಿಸಿದ್ದಾರೆ ಹಿರಿಯ ಭೂವಿಜ್ಞಾನಿ ಡಾ.ಎಂ. ವೆಂಕಟಸ್ವಾಮಿ.