ಭರತಭೂಮಿಯ ಶಕ್ತಿ ಎಂದರೆ ಇದೇನಾ? ಈಶಾನ್ಯ ಕಣಿವೆಗಳಲ್ಲಿ ಚಿತ್ತಾಗಿ ಓಡಿದರಾ ಜಗದೇಕವೀರರು!!

ಈ ಯುದ್ಧದ ಕಥೆ ಓದುತ್ತಿದ್ದರೆ ಮೈಜುಂ ಎನ್ನುತ್ತದೆ. ನೆತ್ತಿ ಮೇಲೆ ದೊಡ್ಡದೊಡ್ಡ ಕಿರೀಟಗಳನ್ನಿಟ್ಟುಕೊಂಡ ಅರಸರೆಲ್ಲ ಆಂಗ್ಲರಿಗೆ ಜೈಹೋ ಎಂದ ಕಾಲಲ್ಲೇ ನಾಗಾ ವೀರರು ನಿಜ ಸಿಂಹಗಳಂತೆ ಘರ್ಜಿಸಿದ್ದರು. ಕೇವಲ ಬಿಲ್ಲುಬಾಣಗಳಿಂದಲೇ ಅವರ ಎದೆ ಸೀಳಿದ್ದರು. ಜಗತ್ತು ಗೆದ್ದು ಜಗದೇಕವೀರರಂತೆ ಮರೆಯುತ್ತಿದ್ದ ಬ್ರಿಟಿಷರು, ನಾಗಾ ಕಣಿವೆಗಳಲ್ಲಿ ಚಿತ್ತಾಗಿದ್ದರು. ಸ್ವತಃ ಯದ್ಧದಲ್ಲಿ ಆಂಗ್ಲರನ್ನು ಮುನ್ನಡೆಸಿದ ಜಾನ್ಸ್ಟೋನ್ ಬರೆದ ಯುದ್ಧದ ಕಥೆಯನ್ನು ಹಿರಿಯ ಭೂವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈಗಾಗಲೇ 4 ಭಾಗಗಳಲ್ಲಿ ಪ್ರಕಟವಾದ ಈ ರೋಚಕ ಕಥನಕ್ಕೆ ಓದುಗರು ಮಾರುಹೋಗಿದ್ದಾರೆ.