ರಾಜರಾಜೇಶ್ವರಿ ನಗರ; ಒಳಗೊಳಗೇ ಲೆಕ್ಕ ತಪ್ಪಿತಾ ಬಿಜೆಪಿ!?

ಬಿಜೆಪಿ ಪಾಲಿಗೆ ನಿರ್ಣಾಯಕವಾಗಿರುವ ರಾಜರಾಜೇಶ್ವರಿ ನಗರ ವಿಧಾನಸಭೆ ಕೇತ್ರದ ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆ ವಿಷಯವು ಪಕ್ಷದಲ್ಲಿ ವಲಸಿಗರು ಮತ್ತು ಮೂಲ ನಿವಾಸಿಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಈ ತಿಕ್ಕಾಟದ ಲಾಭವನ್ನು ಪಡೆಯಲು ಕಾಂಗ್ರೆಸ್‌ ಸರ್ಕಸ್‌ ಮಾಡುತ್ತಿದ್ದರೆ, ಜೆಡಿಎಸ್‌ ಮಾತ್ರ ಕೊನೆಕ್ಷಣದವರೆಗೂ ಮುಗುಮ್ಮಾಗಿಯೇ ಇದ್ದು, ತನ್ನ ಗುಟ್ಟು ರಟ್ಟಾಗದಂತೆ ಎಚ್ಚರ ವಹಿಸಿದೆ.