ಎ.ಕೆ.ಗೋಪಾಲನ್‌ ಮಾತು ಕೇಳದೇ ಕಮ್ಯುನಿಸ್ಟರು ಹಾಳಾದರು! ಬಿಜೆಪಿಗರು ದತ್ತೋಪಂತರು ಹೇಳಿದ್ದನ್ನು ಕೇಳಲೇಬೇಕು, ಇಲ್ಲದಿದ್ದರೆ ಇವರೂ ಹಾಳಾಗುವುದು ಖಚಿತ!!

ಕಾರ್ಯಕರ್ತರಾಗಿ ಜನರ ನಡುವೆ ಇರಬೇಕಿದ್ದ ಕಮ್ಯುನಿಸ್ಟರು ಅಧಿಕಾರದ ರುಚಿಗೆ ಬಿದ್ದು ಹೇಗೆ ಪತನವಾದರೋ ಅದೇ ದಾರಿಯಲ್ಲಿ ಬಿಜೆಪಿಗರೂ ನಿಂತಿದ್ದಾರಾ? ಭಾರತೀಯ ಕಾರ್ಮಿಕ ಸಂಘದ ನಾಯಕ ಹಾಗೂ ಸ್ವದೇಶೀ ಜಾಗರಣ್ ಮಂಚ್, ಭಾರತೀಯ ಮಜ್ದೂರ್ ಸಂಘ್, ಭಾರತೀಯ ಕಿಸಾನ್ ಸಂಘ್‌ಗಳ ಸಂಸ್ಥಾಪಕ ದತ್ತೋಪಂತ ಠೇಂಗಡಿ ಹೇಳಿದ್ದ ಕಿವಿಮಾತುಗಳನ್ನು ಕಮಲಪಡೆ ಕಾರ್ಯಕರ್ತರು ಮರೆತಿದ್ದಾರಾ? ಹಾಗಾದರೆ, ದತ್ತೋಪಂತರು ಹೇಳಿದ್ದೇನು? ಇವತ್ತಿನ ಬಿಜೆಪಿಗೆ ಅವರ ಮಾತುಗಳು ಏಕೆ ಮುಖ್ಯ? ಅರ್ಥಪೂರ್ಣವಾಗಿ ಬರೆದಿದ್ದಾರೆ ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಅವರು.