ಬಾಗೇಪಲ್ಲಿ ತಾಲ್ಲೂಕಿನಲ್ಲಿ ಪಂಚಾಯಿತಿ ವೈಷಮ್ಯದ ವಿಕೃತಿ; ಹಂದಿಗಳಿಗೆ ವಿಷವಿಕ್ಕಿ ಕೊಂದ ಕಿಡಿಗೇಡಿಗಳು, ಬೀದಿಗೆ ಬಿದ್ದ ಬಡಕುಟುಂಬ

ಹಳೆಯ ವೈಷಮ್ಯ, ರಾಜಕೀಯ ಸೇಡು, ಹೊಟ್ಟೆಕಿಚ್ಚಿಗೆ ಇಲ್ಲಿದೆ ನಿದರ್ಶನ. ಜೀವನೋಪಾಯಕ್ಕಾಗಿ ಬಡ ಮಹಿಳೆಯೊಬ್ಬರು ಸಾಕಿದ್ದ ಹಂದಿಗಳಿಗೆ ದುರುಳರು ವಿಷವುಣಿಸಿ ಕೊಂದು ಹಾಕಿ ಬಡ ಕುಟುಂಬ ಒಂದನ್ನು ಬೀದಿಪಾಲು ಮಾಡಿರುವ ಘಟನೆ ತಾಲ್ಲೂಕಿನ ತಿಮಾಕಲಪಲ್ಲಿ ಗ್ರಾಮದಲ್ಲಿ ಬುಧವಾರ ನಡೆದಿದೆ.