ಶಿಷ್ಟಾಚಾರ ಮರೆತ ಕನ್ನಡಹಬ್ಬದ ಮೇಲೆ ಕೋವಿಡ್‌ ಕರಿನೆರಳಾ? ಅಥವಾ ಜಿಲ್ಲಾ ಕಸಾಪ ಎಡವಟ್ಟುಗಳಾ? ಚಿಕ್ಕಬಳ್ಳಾಪುರ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನ ನೀರಸ ಅಂತ್ಯ

ಸಮ್ಮೇಳನಾಧ್ಯಕ್ಷರ ಮೆರವಣಿಗೆ ಇಲ್ಲ. ನಗರದಲ್ಲಿ ಕನ್ನಡ ಸಂಭ್ರಮ ಕಾಣಲಿಲ್ಲ, ಭಾವುಟಗಳು ರಾರಾಜಿಸಲಿಲ್ಲ. ಸಮ್ಮೇಳನಾಧ್ಯಕ್ಷರಿಗೆ ಶುಭಾಶಯ ಪತ್ರಗಳೂ ಗೋಚರಿಸಲಿಲ್ಲ, ಕನಿಷ್ಠ ಮಾಧ್ಯಮಗಳಿಗೆ ಆಹ್ವಾನ ಪತ್ರಿಕೆಗಳೇ ತಲುಪದೇ ಸಮ್ಮೇಳನವು ಸುದ್ದಿಯಾಗಲೇ ಇಲ್ಲ!! ಆಹ್ವಾನ ಪತ್ರಿಕೆಯಲ್ಲಿ ಹೆಸರುಗಳಿದ್ದರೂ ರಾಜಕಾರಣಿಗಳು ಅತ್ತ ಸುಳಿಯಲಿಲ್ಲ.