ದತ್ತೋಪಂತ ಠೇಂಗಡಿ ಹೇಳಿದ ಬಂಗಾರದಂಥ ಮಾತುಗಳನ್ನು ಮರೆತ ಯಡಿಯೂರಪ್ಪ ಟೀಂ; ಎ.ಕೆ.ಗೋಪಾಲನ್‌ ಮಾತು ಅಲಕ್ಷಿಸಿ ಕಮ್ಯುನಿಸ್ಟರು ಹಾಳಾದರು, ಇತಿಹಾಸದಿಂದ ಪಾಠ ಕಲಿಯದ ಬಿಜೆಪಿಗರು!!

ನರೇಂದ್ರ ಮೋದಿ ಸರಕಾರಕ್ಕೆ ಏಳು ವರ್ಷ ತುಂಬಿದ ಹೊತ್ತು ಮತ್ತೂ ಸಚಿವ ಸಿ.ಪಿ.ಯೋಗೀಶ್ವರ್‌ ಪ್ರಹಸನ ಸೇರಿ ಕೆಲ ದಿನಗಳಿಂದ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ರಂಪಾಟ ಮತ್ತೊಮ್ಮೆ ದತ್ತೋಪಂತರನ್ನು ನೆನಪು ಮಾಡುವಂತೆ ಮಾಡಿದೆ. ಜತೆಗೆ, ಕಮ್ಯುನಿಸ್ಟ್‌ ನಾಯಕ ಎ.ಕೆ.ಗೋಪಾಲನ್‌ ಅವರನ್ನೂ ಕೂಡ… ಶಿಸ್ತಿನ ಬಿಜೆಪಿಯಲ್ಲಿನ ತಿಕ್ಕಾಟಕ್ಕೂ ಇವರಿಗೂ ಸಂಬಂಧವಾದರೂ ಏನು?