• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ವಿಶ್ವ ಗುಬ್ಬಚ್ಚಿಗಳ ದಿನ ಆಯಿತು; ಇನ್ನು ಪರಿಸರಕ್ಕೆ ಬೆಟ್ಟದಷ್ಟು ಒಳ್ಳೆಯದು ಮಾಡುವ ಈ ಪುಟ್ಟ ಪಕ್ಷಿಗಳನ್ನು ಕಾಪಾಡಿಕೊಳ್ಳೋಣ, ಮುಂದಿನ ತಲೆಮಾರಿಗೂ ಉಳಿಸಿಕೊಳ್ಳೋಣ

cknewsnow desk by cknewsnow desk
March 20, 2021
in EDITORS'S PICKS, GUEST COLUMN, STATE
Reading Time: 2 mins read
0
ವಿಶ್ವ ಗುಬ್ಬಚ್ಚಿಗಳ ದಿನ ಆಯಿತು; ಇನ್ನು ಪರಿಸರಕ್ಕೆ ಬೆಟ್ಟದಷ್ಟು ಒಳ್ಳೆಯದು ಮಾಡುವ ಈ ಪುಟ್ಟ ಪಕ್ಷಿಗಳನ್ನು ಕಾಪಾಡಿಕೊಳ್ಳೋಣ, ಮುಂದಿನ ತಲೆಮಾರಿಗೂ ಉಳಿಸಿಕೊಳ್ಳೋಣ
937
VIEWS
FacebookTwitterWhatsuplinkedinEmail

ಅಂತು ಲೆಕ್ಕಕ್ಕೆ ವಿಶ್ವ ಗುಬ್ಬಚ್ಚಿಗಳ ದಿನ ಮುಗಿಯಿತು. ಜಾಲತಾಣಗಳಲ್ಲಿ ಅವುಗಳ ಮೇಲೆ ಪ್ರೀತಿ ಉಕ್ಕಿ ಹರಿಯಿತೇನೋ ಸರಿ. ಆದರೆ, ನಮ್ಮ ಕಣ್ಣೆದುರೇ ನಮ್ಮೆಲ್ಲರ ಬದುಕಿನ ಜೀವನಾಡಿಯಂತೆ ಆಗಿಹೋಗಿದ್ದ ಗುಬ್ಬಚ್ಚಿಗಳ ಸಂತತಿ ಅಳಿಯುತ್ತಿದೆ. ಈ ತಲೆಮಾರಿನ ಮಕ್ಕಳಿಗೆ ಈ ಪುಟ್ಟ ಪಕ್ಷಿಗಳು ಅಪರೂಪವಾಗಿವೆ. ಪರಿಸರ ಮತ್ತು ಮನುಷ್ಯನ ನಡುವೆ ಸಮತೋಲನಕ್ಕೆ ಬೆಟ್ಟದಷ್ಟು ಕೊಡುಗೆ ನೀಡುವ ಈ ಪುಟಾಣಿ ಪಕ್ಷಿಯನ್ನು ಇನ್ನಾದರೂ ಉಳಿಸಿಕೊಳ್ಳೋಣ ಎನ್ನುತ್ತಿದ್ದಾರೆ ನಮ್ಮ ಅಂಕಣಕಾರ ಡಾ. ಗುರುಪ್ರಸಾದ ಎಚ್.ಎಸ್.

All Photos: Ramesh Hirejambur


ಕನ್ನಡದಲ್ಲಿ ಗುಬ್ಬಿ ಎಂದು ಹಿಂದಿ ಭಾಷೆಯಲ್ಲಿ ಗೊರೆಯಾ, ತಮಿಳು ಹಾಗೂ ಮಲೆಯಾಳಿ ಭಾಷೆಯಲ್ಲಿ ಕುರುವಿ, ಚಿಟ್ಟುಕುರುವಿ, ತೆಲುಗು ಭಾಷೆಯಲ್ಲಿ ಪಿಚುಕಾ, ಗುಜರಾತಿ ಭಾಷೆಯಲ್ಲಿ ಚಕ್ಲಿ, ಮರಾಠಿಯಲ್ಲಿ ಚಿಮನಿ, ಪಂಜಾಬಿ ಭಾಷೆಯಲ್ಲಿ ಚಿರಿ ಹಾಗೂ ಉರ್ದು ಭಾಷೆಯಲ್ಲಿ ಚಿರ್ಯಾ, ನಮ್ಮ ಮನೆ ಅಂಗಳದ ಗುಬ್ಬಚ್ಚಿಗಳಿಗೆ ಜಗತ್ತಿನ ಎಲ್ಲ ಭಾಷೆಗಳಲ್ಲಿ ಕರೆಯುವ ಹೆಸರುಗಳಿವೆ.

ಲೋಕದಲಿ, ರೆಕ್ಕೆ ಮೂಡುವುದೆನಗೆ!
ಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ..!

ಎಂದು ರಾಷ್ಟ್ರಕವಿ ಕುವೆಂಪು ಅವರು ಕರೆಯುವ ಹಾಗೆ ನಾವು ಚಿಕ್ಕಂದಿನಿಂದಲೂ ನೊಡುತ್ತ ಬಂದಿರುವ ಗುಬ್ಬಿಗಳು ಇಂದು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಅವುಗಳ ಬದುಕಿನ ದೈನಂದಿನ ಹೋರಾಟದಲ್ಲಿ ಎದುರಿಸುವ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲುವ ಸಮುದಾಯಿಕ ಪರಿಹಾರ ಹುಡುಕುವುದು ಈ ಆಚರಣೆಯ ಹಿಂದಿರುವ ಉದ್ದೇಶವೇ ಗುಬ್ಬಚ್ಚಿಗಳ ದಿನ (World Sparrow Day) ಆಚರಣೆ.

ಇದನ್ನು ಪ್ರಾರಂಭಿಸಿದವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟಿಸುವಲ್ಲಿ ‘ನೇಚರ್ ಫಾರ್ ಎವರ್ ಸೊಸೈಟಿ’. ಈ ಕೊಡುಗೆ ಅನನ್ಯವಾದದ್ದು. ಈ ಸಂಸ್ಥೆಗೆ ಬೆನ್ನೆಲುಬಾದವರು ‘ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ’ -ಮುಂಬಯಿ, ಅಮೆರಿಕೆಯ ಕಾರ್ನೆಲ್ ಲ್ಯಾಬ್ ಆಫ್ ಆರ್ನಿಥಾಲಜಿ, ಫ್ರಾನ್ಸ್ ದೇಶದ ಇಕೋ-ಸೇಯ್ಸ್ ಆಕ್ಷನ್ ಫೌಂಡೇಶನ್, ಯುನೈಟೆಡ್ ಕಿಂಗ್‌ಡಂಗೆ ಸೇರಿದ ಅವಾನ್ ವೈಲ್ಡ್ ಲೈಫ್ ಟ್ರಸ್ಟ್ ಪ್ರಮುಖವಾದವರು. ಇವರೊಂದಿಗೆ ಅಂತಾರಾಷ್ಟ್ರೀಯ ಸಂಸ್ಥೆಗಳು ಕೈಜೋಡಿಸಿವೆ.

ಭಾರತದಲ್ಲಿ ಇಂಡಿಯಾಸ್ ನೇಚರ್ ಫಾರ್ ಎವರ್ ಸೊಸೈಟಿಯ ಮೊಹಮದ್ ದಿಲಾವರ್ ವಿಶ್ವ ಗುಬ್ಬಚ್ಚಿ ದಿನಾಚರಣೆಯ ಸಾರಥ್ಯ ವಹಿಸಿದ್ದಾರೆ. ತನ್ನ ʼಚಿಂವ್..ಚಿಂವ್ʼ ಸದ್ದಿನಿಂದ ಯಾವತ್ತೂ ನಮ್ಮ ಮನೆಯ ಅಂಗಳಗಳನ್ನು ಸಿಂಗರಿಸಿದ್ದ ರೆಕ್ಕೆಯ ಮಿತ್ರರನ್ನು ಪುನಾ ಆಹ್ವಾನಿಸಲು ಸಹ ವ್ಯಾಪಕ ಕ್ರಮಗಳನ್ನು ಅವರು ಶೋಧಿಸುತ್ತಾ, ಸಮುದಾಯದ ಸಹಭಾಗಿತ್ವದಲ್ಲಿ ‘ಪಕ್ಷಿಸ್ನೇಹಿ ಬದುಕು’ ರೂಢಿಸಿಕೊಳ್ಳುವುದು ಹೇಗೆ ಎಂದು ಅವರು ಮಹಾದಾರಿಗಳನ್ನು-ಕಾಲುದಾರಿಗಳನ್ನು ಹುಡುಕುತ್ತಿದ್ದಾರೆ.

ಪರಿಸರ ಅಧ್ಯಯನ ವಿಷಯದ (ಮಾಜಿ) ಪ್ರಾಧ್ಯಾಪಕರಾದ ನಾಸಿಕ್ ನಿವಾಸಿ ಮೊಹಮದ್ ದಿಲಾವರ್, ಇತರೆ ಪ್ರಾಣಿಶಾಸ್ತ್ರಜ್ಞರಂತೆ ಕಳೆದ 1990ರಲ್ಲಿಯೇ ಗುಬ್ಬಚ್ಚಿಗಳ ಸಂಖ್ಯೆಯಲ್ಲಿ ವ್ಯಾಪಕ ಕುಸಿತ ಉಂಟಾಗಿರುವುದನ್ನು ‘ಪರಿಸರದ ನೆತ್ತಿಗೇರಿದ ಜ್ವರ’ ಎಂದೇ ವ್ಯಾಖ್ಯಾನಿಸಿದ್ದಾರೆ. ನಮ್ಮ ಮನೆಗಳ ದೇವರು, ಅಜ್ಜ-ಅಮ್ಮನ ಕಟ್ಟುಹಾಕಿಸಲಾದ ಫೊಟೋಗಳ ಹಿಂದೆ ಸಂಸಾರ ಹೂಡುತ್ತಿದ್ದ ಹಾಗೂ ಮಹಡಿ ಮನೆ, ವಾಡೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಹುಲ್ಲಿನ ಸಿಂಬೆಯಾಕಾರದ ಗೂಡು ಹೆಣೆಯುತ್ತಿದ್ದ ಗುಬ್ಬಚ್ಚಿ ಈಗಿಲ್ಲವಾಗಿರುವುದು ಕಳವಳ ಮೂಡಿಸಿದೆ.

ಯುನೈಟೆಡ್ ಕಿಂಗಡಂನ ಬ್ರಿಸ್ಟಾಲ್‍ನಲ್ಲಿ ಸೇವಾ ನಿರತವಾಗಿರುವ ಸ್ವಯಂಸೇವಾ ಸಂಘಟನೆಯೊಂದು ಕಳೆದ 2010ರಿಂದ ಪ್ರಥಮ ಬಾರಿಗೆ ಅವಾನ್ ವೈಲ್ಡ್ ಲೈಫ್ ಟ್ರಸ್ಟ್ ಸಹಯೋಗದಲ್ಲಿ ಭಾರತ, ಕೀನ್ಯಾ ಹಾಗೂ ಹಾಂಗ್‍ಕಾಂಗ್ ಸೇರಿದಂತೆ ಇತರೆ ದೇಶಗಳಲ್ಲಿ ಗುಬ್ಬಚ್ಚಿಗಳ ದಾಖಲೀಕರಣಕ್ಕೆ ವಿಶೇಷ ಪ್ರಯತ್ನ ನಡೆಸಿದೆ.

ಗುಬ್ಬಚ್ಚಿಗಳು ಕಣ್ಮರೆಯಾಗುತ್ತಿರುವುದು ಏಕೆ?

ಗುಬ್ಬಚ್ಚಿಗಳು ಕಣ್ಮರೆಯಾಗಲು ಸಾಕಷ್ಟು ಕಾರಣಗಳನ್ನು ಶೋಧಿಸಲಾಗಿದ್ದರೂ, ಆ ಸಮಸ್ಯೆಗಳಿಗೆ ವ್ಯಾಪಕವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆದಿರುವ ವಯಕ್ತಿಕ ಮಟ್ಟದ ಪ್ರಯತ್ನಗಳು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅರೆದಂತಾಗಿದೆ. ಹಾಗಾಗಿ ಸಮುದಾಯದ ಸಹಭಾಗಿತ್ವದಲ್ಲಿ ‘ಮಜ್ಜಿಗೆ ಅರೆಯುವ ಕೆಲಸಕ್ಕೆ’ ಈ ಆಂದೋಲನ ಸ್ಫೂರ್ತಿ ನೀಡಬೇಕಿದೆ. ವ್ಯಾಪಕವಾಗಿ ಸೀಸ ಮಿಶ್ರಿತ ಪೆಟ್ರೋಲ್ ಬಳಕೆ, ಅದರಿಂದಾಗಿ ಮಿಥೈಯಿಲ್ ನೈಟ್ರೇಟ್ ವಾತಾವರಣಕ್ಕೆ ಬಿಡುಗಡೆಗೊಳ್ಳುತ್ತಿರುವುದು ಗುಬ್ಬಚ್ಚಿ ಸಮೂಹಕ್ಕೆ ಮಾರಣಾಂತಿಕವಾಗಿ ಪರಿಣಮಿಸಿದೆ.

ಕ್ರಿಮಿ, ಕೀಟ, ಹ್ಯಾತೆ, ಪಾತರಗಿತ್ತಿ ಮೊದಲಾದವು ಸಹ ಅವುಗಳ ಆಹಾರದ ಭಾಗವಾಗಿದ್ದು ಅವುಗಳ ದೇಹದಲ್ಲಿ ವಾತಾವರಣದ ಕಲ್ಮಶಗಳು ತುಂಬಿಕೊಂಡು, ಇವುಗಳ ಮಾರಣಹೋಮಕ್ಕೆ ಕಾರಣವಾಗುತ್ತಿವೆ.

ಜತೆಗೆ ನಮ್ಮ ಹಳೆ ಕಾಲದ ಮನೆಗಳು ಅವುಗಳ ಸಂತಾನೋತ್ಪತಿಗೆ ಪೂರಕವಾದ ನಿರ್ಮಿತಿ ಹೊಂದಿದ್ದವು. ಅದರೆ ಈಗಿನ ಆಧುನಿಕ ಮನೆಗಳಿಂದಾಗಿ, ಜೊತೆಗೆ ಅಂಗಳದಲ್ಲಿ ಒಂದೂ ಗಿಡ ನೆಡುವಷ್ಟು ಜಾಗ ಉಳಿಸಿಕೊಳ್ಳದೇ ಕಾಂಕ್ರೀಟ್ ಮನೆ ಕಟ್ಟಿರುವುದು, ಕೊನೆಪಕ್ಷ ಹೂವಿನ ಗಿಡಗಳಿವೆ ಎಂದಾದರೆ ಹೂವಿನ ಅಂದ ಅರಳಿಸಲು ಥರಹೇವಾರಿ ಕ್ರಿಮಿನಾಶಕ ಸಿಂಪಡಿಸಿ, ಸುಂದರ ಗೊಳಿಸುವಂತೆ ಮಾತ್ರ ಮಾಡುತ್ತೇವೆ. ಅದರೆ ಗಿಡ, ಬಳ್ಳಿಗಳನ್ನು ಆಶ್ರಯಿಸಿ ಬದುಕುವ ಕ್ರಿಮಿ, ಕೀಟಗಳನ್ನು ತಿನ್ನುವ, ಕಾಳುಗಳನ್ನು ನೆಚ್ಚಿಕೊಂಡು ಬದುಕುವ ಗುಬ್ಬಿಗಳ ಬದುಕಿಗೇ, ವಂಶ ಅಭಿವೃದ್ಧಿಗೆ ಸಂಚಕಾರ ತಂದಿದ್ದೇವೆ.

ಜೊತೆಗೆ, ನವ್ಯ ತಂತ್ರಜ್ಞಾನಗಳನ್ನು ಇಂದು ನಾವು ಬಳಸುವ ಕಾರಣದಿಂದಾಗಿ, ಅಂದರೆ; ಮೊಬೈಲ್ ಟವರ್‌ಗಳಿಂದ ಸೂಸುವ ವಿದ್ಯುತ್ ಕಾಂತೀಯ ತರಂಗಗಳು, ಅಲ್ಪ ಪ್ರಮಾಣದ ವಿಕಿರಣ ಸೋರಿಕೆ ಗುಬ್ಬಚ್ಚಿ ಮೊಟ್ಟೆಗಳಲ್ಲಿ ಜೀವ ವಿರೂಪುಗೊಳ್ಳದಂತೆ ಮಾಡುತ್ತಿವೆ ಎನ್ನಲಾಗಿದೆ. ಅಲ್ಲದೇ ಗಿಡ ಮರಗಳಲ್ಲಿ ಕೇಬಲ್ ವೈರುಗಳು, ಜಾಹೀರಾತುಗಳು, ಪ್ಲೆಕ್ಸ್‌ಗಳು, ಬ್ಯಾನರ್‌ಗಳು ಹೆಚ್ಚಿನ ಗಾಜುಗಳ ಬಳಕೆ ಅವುಗಳ ಸ್ವಚ್ಛಂದ ಬದುಕಿಗೆ ಮಾರಕವಾಗಿವೆ. ಅವುಗಳ ಬದುಕಿಗೆ ನಮ್ಮ ಆಸರೆ ಅನಿವಾರ್ಯ.

ಮನೆ ಅಂಗಳದಲ್ಲಿ ಗುಚ್ಛವಾಗಿ ಬೆಳೆಯುವ ನಾಲ್ಕಾರು ಹೂವಿನ ಗಿಡ (ಉದಾಹರಣೆಗೆ ದಾಸವಾಳ) ನೆಡಿ. ಕಾರ್ಬೋಹೈಡ್ರೇಟ್ ಹೆಚ್ಚಿರುವ ಗಿಡಗಳಿಗೆ ಇರುವೆ ಮುತ್ತುವುದು ಸಾಮಾನ್ಯ. ಹಾಗಾಗಿ, ಕರಿಬೇವು, ನಿಂಬೆಹಣ್ಣು, ಚೆರ್ರಿ ಗಿಡ (ಲಾಭ ಎರಡು!) ಅಥವಾ ಗಿಡ ಬೇಲಿ ಮೊರೆ ಹೋಗುವುದೂ ಅಡ್ಡಿ ಇಲ್ಲ. ಆ ಗಿಡಗಳಲ್ಲಿ ಮಣ್ಣಿನ ಅಥವಾ ಬಿದಿರಿನ ಪಕ್ಷಿಯ ಊಟದ ತಟ್ಟೆ -‘ಬರ್ಡ್ ಫೀಡರ್ಸ್’ ತೂಗುಬಿಟ್ಟು ಒಂದು ಹಿಡಿ ಕಾಳು ಹಾಕಿಡಿ. ಆ ಪದಾರ್ಥಗಳಿಗೆ ಇರುವೆ ಮುತ್ತದಂತೆ ಜಾಗ್ರತೆ ವಹಿಸಿ. ಗಿಡದ ಬುಡದಲ್ಲಿ ಅಥವಾ ಮನೆ ಅಂಗಳದಲ್ಲಿ ಬಾನಿ, ಹೊಂಡ ಅಥವಾ ಮನೆಯ ತಾರಸಿಯ ಮೇಲೆ ಅಗಲವಾದ ಬಾಯಿಯಿರುವ ಮಣ್ಣಿನ ಕುಡಿಕೆಗಳಲ್ಲಿ ನೀರು ತುಂಬಿಸಿ ಇಡಿ. ಬೇಸಿಗೆಯಲ್ಲಿ ಅವುಗಳಿಗೆ ಜೀವ ಬಂದಂತಾಗುತ್ತದೆ. ಮನೆಯ ಸುತ್ತಲೂ ಬಿದರಿನ ಬುಟ್ಟಿ, ಮಣ್ಣಿನ ಪಕ್ಷಿ ಮನೆಗಳನ್ನು ಅಥವಾ ತಗಡಿನ ಡಬ್ಬಿಗಳನ್ನು ಕಟಿ ತುಸು ಭತ್ತದ ಹುಲ್ಲು ಹಾಸಿಡಿ. ಹಾಗೆ ಮಾಡುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ.

ನಮ್ಮ ಮನೆಯ ಹೂದೋಟ, ಕಾಯಿಪಲ್ಲೆ ಕೈತೋಟಗಳಿಗೆ ಲಗ್ಗೆ ಹಾಕುವ ಹತ್ತಾರು ರೀತಿಯ ಕ್ರಿಮಿಕೀಟಗಳನ್ನು ತಾನು ತಿನ್ನುವುದಲ್ಲದೇ, ಗೆಳೆಯರನ್ನೂ ಸಹ ಕರೆತಂದು ನೈಸರ್ಗಿಕವಾಗಿಯೇ-ಸಾವಯವ ಮಾದರಿಯಲ್ಲಿ ನಿಯಂತ್ರಿಸುವುದನ್ನು ನೀವು ಕಣ್ಣಾರೆ ನೋಡಬಹುದು! ಮನೆಯ ಒಳಗೆ ಜೇಡ ಬಲೆ ಕಟ್ಟದಂತೆ, ಹಲ್ಲಿಗಳ ಉಪದ್ರವ ನೀಡದಂತೆ, ಜಿರಳೆ, ಇರುವೆ ಅಡುಗೆ ಮನೆ ಮುತ್ತದಂತೆ ಮಾಡುವುದು, ಹೀಗೆ ಅನೇಕ ಕಾರ್ಯಗಳನ್ನು ಮಾಡುವ ನಮ್ಮ ಮನೆ ಮನಗಳ ಜೊತೆ ಸಂಬಂಧ ಹೊಂದಿರುವ ಗುಬ್ಬಿಗಳ ವಂಶವನ್ನು ಉಳಿಸುವ, ಸಲುಹುವ, ಜವಾಬ್ದಾರಿ ನಮ್ಮಲ್ಲರ ಮೇಲಿದೆ.


ಡಾ.ಗುರುಪ್ರಸಾದ ಎಚ್ ಎಸ್
  • ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.

Tags: indiasave sparrowSparrowWorldWorld Sparrow Day
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಗುಡಿಬಂಡೆ ತಾಲ್ಲೂಕು ಹಂಪಸಂದ್ರ ಗ್ರಾಮದಲ್ಲಿ ಪಾದಯಾತ್ರೆ ಕೈಗೊಂಡ ಅಧಿಕಾರಿಗಳು; ಕಾಲ್ನಡಿಗೆಯಲ್ಲಿ ಜನ ಸಾಮಾನ್ಯರ ಸಮಸ್ಯೆ ಆಲಿಸಿದ ಅಪರ ಜಿಲ್ಲಾಧಿಕಾರಿ

ಗುಡಿಬಂಡೆ ತಾಲ್ಲೂಕು ಹಂಪಸಂದ್ರ ಗ್ರಾಮದಲ್ಲಿ ಪಾದಯಾತ್ರೆ ಕೈಗೊಂಡ ಅಧಿಕಾರಿಗಳು; ಕಾಲ್ನಡಿಗೆಯಲ್ಲಿ ಜನ ಸಾಮಾನ್ಯರ ಸಮಸ್ಯೆ ಆಲಿಸಿದ ಅಪರ ಜಿಲ್ಲಾಧಿಕಾರಿ

Leave a Reply Cancel reply

Your email address will not be published. Required fields are marked *

Recommended

ದೇವಾಲಯಕ್ಕೆ ಢಿಕ್ಕಿ ಹೊಡೆದ ಕ್ಯಾಂಟರ್‌ ಗಾಡಿ, ಸ್ಥಳದಲ್ಲೇ ಕ್ಲೀನರ್‌ ಸಾವು, ಪ್ರಾಣಾಪಾಯದಿಂದ ಚಾಲಕ ಪಾರು

ದೇವಾಲಯಕ್ಕೆ ಢಿಕ್ಕಿ ಹೊಡೆದ ಕ್ಯಾಂಟರ್‌ ಗಾಡಿ, ಸ್ಥಳದಲ್ಲೇ ಕ್ಲೀನರ್‌ ಸಾವು, ಪ್ರಾಣಾಪಾಯದಿಂದ ಚಾಲಕ ಪಾರು

5 years ago
ಶ್ರೀ ಶಿರಡಿ ಸಾಯಿಬಾಬಾ ದರ್ಶನ ಪಡೆದ ಸಿದ್ದರಾಮಯ್ಯ, ಮೊಯಿಲಿ

ಶ್ರೀ ಶಿರಡಿ ಸಾಯಿಬಾಬಾ ದರ್ಶನ ಪಡೆದ ಸಿದ್ದರಾಮಯ್ಯ, ಮೊಯಿಲಿ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ