• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಕೇವಲ ಅರೆ ಗಂಟಲಿನಿಂದ ಹೊರ ಬರುವ ಡಾ.ಭೀಮರಾವ್ ಅಂಬೇಡ್ಕರ್ ‌ಅವರ ಆದರ್ಶ, ತತ್ತ್ವ ಜಪ ಇನ್ನೂ ಕೊಂಚ ಆಳದಿಂದ ಬರುತ್ತಿಲ್ಲವೇಕೆ? ಅವರನ್ನು ನಮ್ಮ ಹೃದಯಗಳಿಗೆ ಬರ ಮಾಡಿಕೊಳ್ಳುತ್ತಿಲ್ಲ, ಏಕೆ?

P K Channakrishna by P K Channakrishna
July 21, 2021
in CKPLUS, NEWS & VIEWS, STATE
Reading Time: 2 mins read
0
ಕೇವಲ ಅರೆ ಗಂಟಲಿನಿಂದ ಹೊರ ಬರುವ ಡಾ.ಭೀಮರಾವ್ ಅಂಬೇಡ್ಕರ್ ‌ಅವರ ಆದರ್ಶ, ತತ್ತ್ವ ಜಪ ಇನ್ನೂ ಕೊಂಚ ಆಳದಿಂದ  ಬರುತ್ತಿಲ್ಲವೇಕೆ? ಅವರನ್ನು ನಮ್ಮ ಹೃದಯಗಳಿಗೆ ಬರ ಮಾಡಿಕೊಳ್ಳುತ್ತಿಲ್ಲ, ಏಕೆ?
930
VIEWS
FacebookTwitterWhatsuplinkedinEmail

ಅಡಗೂರು ವಿಶ್ವನಾಥ್‌ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನೂ ಹುಡುಕುತ್ತಿದ್ದೇನೆ…

ಡಾ.ಭೀಮರಾವ್ ರಾಮ್‌ಜೀ ಅಂಬೇಡ್ಕರ್ ಅವರ 130ನೇ ಜನ್ಮದಿನಾಚರಣೆ ಎಂಬ ಕಾರ್ಯಕ್ರಮ ಮುಗಿದಿದೆ. ಮುಂದಿನ ವರ್ಷದ ಕ್ಯಾಲೆಂಡರಿನ ನಿರೀಕ್ಷೆ ಶುರುವಾಗಿದೆ. ಇದಪ್ಪಾ.. ಸಂವಿಧಾನ ಶಿಲ್ಷಿಗೆ ತೋರುತ್ತಿರುವ ಗೌರವಾಭಿಮಾನ. ಕಾಂಗ್ರೆಸ್‌ಗೆ ಅಧಿಕಾರವಿಲ್ಲ, ಸುಮ್ಮನಿದೆ! ಬಿಜೆಪಿಗೆ ಅಧಿಕಾರವಿದೆ, ಬಹುಶಃ ನರ್ಮದಾ ತೀರದಲ್ಲಿ ಸರ್ದಾರ್‌ ಪಟೇಲರಿಗೆ ʼನ್ಯಾಯʼ ಸಿಕ್ಕಿದಂತೆ ಇನ್ನಾವುದೋ ನದಿ ದಂಡೆಯಲ್ಲಿ ಬಾಬಾ ಸಾಹೇಬರಿಗೂ ನ್ಯಾಯ ಸಿಗಬಹುದು!! ಇದು ಸ್ಥಾವರಗಳ ಕಾಲ..


Obituary

ಯುಗಾದಿ ಪ್ಲವ ನಾಮ ಸಂವತ್ಸರ ಹಬ್ಬ ಮುಗಿದು ಇನ್ನೇನು ಕೊನೆ ಒಬ್ಬಟ್ಟು ತಿಂದು ಮುಗಿಸಿ ಬೆಳಗಿನ ವರ್ಸತೊಡಕಿನ ಬಗ್ಗೆ ಯೋಚನೆ ಮಾಡುತ್ತಿದ್ದಾಗ ಮಾಜಿ ಮಂತ್ರಿಗಳೂ, ಈ ಕಾಲಘಟ್ಟದ ಸೂಕ್ಷ್ಮ ಮತ್ತು ಪ್ರಜ್ಞಾವಂತ ರಾಜಕಾರಣಿ ಅಡಗೂರು ವಿಶ್ವನಾಥ್‌ ಅವರು ಕಾಲ್‌ ಮಾಡಿದರು.

ಬೆಂಗಳೂರು ಶಾಸಕರ ಭವನದಲ್ಲಿ ಪತ್ರಿಕಾಗೋಷ್ಠಿ ಮಾಡಿ ಚನ್ನಪಟ್ಟಣದ ಸಿ.ಪಿ.ಯೋಗೀಶ್ವರ್ ವಿರುದ್ಧ ವಾಗ್ದಾಳಿ ನಡೆಸಿ ಹುಣಸೂರು ಉಪ ಚುನಾವಣೆಯಲ್ಲಿ ತಮ್ಮ ಬೆನ್ನಿಗಿರಿದವರ ಕಥೆಯನ್ನು ಸ್ಫೋಟಗೊಳಿಸಿದ್ದರು.‌ ಆವತ್ತಿನ ನಂತರ ಮತ್ತೆ ನಾನು ಅವರ ಜತೆ ಮಾತನಾಡಿರಲಿಲ್ಲ. ಆದರೆ, ಹಬ್ಬದ ದಿನವೇ ಕಾಲ್‌ ಮಾಡಿ, “ಚನ್ನಕೇಶವಯ್ಯ, (ಅವರು ಹಾಗೆ ಕರೆಯುತ್ತಾರೆ!) ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು” ಎಂದು ಎನ್ನುತ್ತಲೇ ತಾವು ಬರೆಯುತ್ತಿರುವ ಇನ್ನೊಂದು ಪುಸ್ತಕದ ವಿವರವನ್ನೂ ಹೇಳಿದರು. ಜತೆಗೆ, ʼಬಾಂಬೆ ಡೈರೀಸ್‌ʼ ಪುಸ್ತಕದ ಬಗ್ಗೆಯೂ ಮಾತನಾಡಿದರು.

ಅವರು ಹಬ್ಬದ ದಿನವೂ ಬರವಣಿಗೆ ಬಗ್ಗೆ ಮಾತನಾಡುವ ಉಮೇದಿನಲ್ಲಿದ್ದರು. ತಮ್ಮ ಹೊಸ ಪುಸ್ತಕದ ಬಗ್ಗೆ ಬಹಳ ಆಳವಾಗಿ ಮಾಹಿತಿ ಹಂಚಿಕೊಂಡರು. ಹೀಗೆ ಬಹುಹೊತ್ತು ಮಾತನಾಡುತ್ತಾ ಸಾಗಿದಾಗ ನಮ್ಮ ಮಾತಿನ ಮಧ್ಯೆ ಇಣುಕಿದವರು ಪೂಜ್ಯ ಕನಕರು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರು.‌

“ಜಿಡ್ಡುಗಟ್ಟಿ ಹೋಗಿದ್ದ ನಮ್ಮ ಸಮಾಜಕ್ಕೆ ವಿಶಾಲ ದೃಷ್ಟಿಕೋನ ತೋರಿದವರು, ಅದಕ್ಕೊಂದು ಸ್ಪಷ್ಟ ಮಾರ್ಗ ಹಾಕಿಕೊಟ್ಟ ಮಹಾನ್‌ ದಾರ್ಶನಿಕರಲ್ಲಿ ಖಂಡಿತವಾಗಿಯೂ ಕನಕದಾಸರು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಪ್ರಾತಃಸ್ಮರಣೀಯರು. ಆದರೆ, ನಾವೇನು ಮಾಡುತ್ತಿದ್ದೇವೆ? ಶತಮಾನಗಳು ಕಳೆದರೂ ಕನಕರ ಜೀವನದ ಬಗ್ಗೆ, ಕಥೆಗಳ ಬಗ್ಗೆ ರಂಜನೀಯವಾಗಿ ಹೇಳುತ್ತಿದ್ದೇವೆ. ಆದರೆ, ಸಮಾಜವನ್ನು ಚಿಕಿತ್ಸೆಗೆ ಒಳಪಡಿಸುವ ಬಗ್ಗೆ ಆ ಮಹನೀಯರಿಬ್ಬರು ಹೇಳಿದ್ದನ್ನು ಆಚರಣೆಗೆ ತರಲು ವಿಮುಖರಾಗಿದ್ದೇವೆ. ಇನ್ನು, ಅಂಬೇಡ್ಕರ್‌ ಅವರು ಮಹಾರಾಷ್ಟ್ರದಲ್ಲಿ ಹುಟ್ಟಿದರು, ನೆಹರು ಸಂಪುಟದಲ್ಲಿ ಸಚಿವರಾಗಿದ್ದರು, ಬಾಲ್ಯದಲ್ಲಿ ಶೋಷಣೆಗೆ ಒಳಪಟ್ಟಿದ್ದರು.. ಮತ್ತೆ ಮತ್ತೆ ಇದನ್ನೇ ಮಾತನಾಡುತ್ತಿದ್ದೇವೆ, ಹೇಳುತ್ತಿದ್ದೇವೆ, ಭಾಷಣ ಮಾಡುತ್ತಿದ್ದೇವೆ. ಹಿಂದೆಂದಿಗಿಂತಲೂ ಈಗ ಅಂಬೇಡ್ಕರ್‌ ಅವರು ಹೇಳಿದ್ದನ್ನು, ಕಂಡ ಕನಸುಗಳನ್ನು, ಅವರ ವಿಚಾರಗಳನ್ನು ಅನುಷ್ಠಾನಕ್ಕೆ ತರುವ ಅಗತ್ಯ ಅತ್ಯಂತ ತುರ್ತು ಇದೆ. ಆದರೆ, ನಮ್ಮ ಆಡಳಿತಗಾರರು ಇದನ್ನು ಬೇಕೆಂದೇ ಜಾಣ್ಮೆಯಿಂದ ವಿಸ್ಮರಿಸುತ್ತಿದ್ದಾರೆ” ಎಂದರು ಅಡಗೂರು ವಿಶ್ವನಾಥ್.‌

ಬೆಳಕರಿದರೆ, ಅಂಬೇಡ್ಕರ್‌ ಹುಟ್ಟುಹಬ್ಬ ಎಂಬುದು ಗೊತ್ತಿತ್ತು. ಬಾಬಾ ಸಾಹೇಬರಿಗೆ 130 ವರ್ಷ ತುಂಬುವುದಿತ್ತು. ಅವರ ಬಗ್ಗೆ ಬರೆಯಬೇಕೆಂಬ ತಮುಲವೂ ಇತ್ತು. ಆದರೆ, ಅಂಬೇಡ್ಕರ್‌ ಅಗಾಧದತೆಯ ಮುಂದೆ ನಾನೇನು ಬರೆಯುವುದು? ಮಹಾಸಾಗರದ ಮುಂದೆ ನಿಂತು ದಡಕ್ಕೆ ಬಂದು ಎಡತಾಕುತ್ತಿದ್ದ ಹನಿ ನೀರು ಹಿಡಿಯಲೆತ್ನಿಸುವ ವ್ಯರ್ಥ ಸಾಹಸವಾಗಿತ್ತು ನನ್ನದು.

ಬಾಲ್ಯದಿಂದ ಅವರ ಬಗ್ಗೆ ಕೇಳಿಕೊಂಡು ಬಂದಿದ್ದ ಅದೇ ಏನಕೇನ ಕಥೆಯನ್ನು ಬರೆಯುವುದಾ? ಅಥವಾ ಅವರ ಬಗ್ಗೆ ಏನಾದರೊಂದು ಹೊಸ ಲೈನು ಸಿಗುವುದಾ? ಎಂದು ಆಲೋಚಿಸುತ್ತಿದ್ದ ನನ್ನಲ್ಲಿ ವಿಶ್ವನಾಥರು ಮಾತಿನ ನಡುವೆ ಹೊಸ ಕಿಡಿ ಹೊತ್ತಿಸಿದ್ದರು.

  • ಅಡಗೂರು ವಿಶ್ವನಾಥ್‌

ನಿಜ, ಅವರು ಹೇಳಿದಂತೆ ಭಾರತವು ಡಾ.ಅಂಬೇಡ್ಕರ್‌ ಅವರನ್ನು ಮತ್ತೆ ಮತ್ತೆ ಅರ್ಥ ಮಾಡಿಕೊಳ್ಳಬೇಕಿದೆ. ಅದೂ ಸರಿಯಾಗಿ… ದೇಶದ ಉದ್ದಗಲಕ್ಕೂ ಅವರ ಪ್ರತಿಮೆಗಳನ್ನಿಟ್ಟು ಅವರ ಜನ್ಮದಿನದಂದು, ಅವರು ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದ ದಿನದಂದು ಅಥವಾ ಭೌತಿಕವಾಗಿ ಈ ಜಗತ್ತನ್ನು ತೊರೆದ ದಿನದಂದು ಅವರ ಭಾವಚಿತ್ರವನ್ನು, ಪ್ರತಿಮೆಯನ್ನೋ, ಪುತ್ಥಳಿಯನ್ನೋ ಹುಡುಕಿಕೊಂಡು ಹೋಗಿ ಮಾಲಾರ್ಪಣೆ ಮಾಡಿ, ಆಮೇಲೆ ಆ ಮಾಲೆ ಹಾಕಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್‌ ಮಾಡಿ ಅಬ್ಬಾ! ಅಂಬೇಡ್ಕರ್‌ ಜಯಂತಿ ಆಯಿತು ಎಂದು ಆರಾಮ ಕುರ್ಚಿಗೆ ಒರಗುವ ಮನಃಸ್ಥಿತಿ ಇವತ್ತು ಭರ್ತಿ ವಿಜೃಂಭಣೆ ಮಾಡುತ್ತಿದೆ.

ಆ ಮಹಾನ್‌ ನೇತಾರನನ್ನು ಮತ್ತು ಸಂವಿಧಾನ ಶಿಲ್ಪಿಯನ್ನು ವಿಗ್ರಹದಲ್ಲೋ, ಫೊಟೋಗಳಲ್ಲೋ ಹುಡುಕಿಕೊಂಡು ಹೋಗುವ ಬದಲು ಅವರನ್ನು ಪ್ರತಿಯೊಬ್ಬರು ತಮ್ಮ ತಮ್ಮ ಹೃದಯಕ್ಕೆ ಬರಮಾಡಿಕೊಳ್ಳಬೇಕು. ಆಗ ಮಾತ್ರ ಅಂಬೇಡ್ಕರ್‌ ಅನುಭವಿಸಿದ್ದೇನು? ಆ ಅನುಭವದಿಂದ ಹೇಳಿದ್ದೇನು? ನಾವು ಮಾಡಬೇಕಾದದ್ದು ಏನು? ಎಂಬುದು ಸ್ಪಷ್ಟವಾಗುತ್ತದೆ. ಆಗ ನೋಡಿ ಅಂಬೇಡ್ಕರ್‌ ತತ್ತ್ವ, ಅವರ ಆದರ್ಶ, ಅವರ ಸಮ ಸಮಾಜದ ಕನಸು, ಬುದ್ಧನ ನಂತರ ಮನುಷ್ಯರನ್ನು ಮನುಷ್ಯರಾಗಿ ನೋಡುವ ಮಾನವೀಯತೆಗಿಂತ ಮಿಗಿಲಾದ ದೈವತ್ವ ಇನ್ನೊಂದಿಲ್ಲ ಎಂದು ಸಾರಿ ಹೇಳಿದ ಆ ಮಹಾನ್‌ ವ್ಯಕ್ತಿತ್ವ ಫಲ ಸಾಕ್ಷಾತ್ಕಾರವಾಗುತ್ತದೆ.

ವಿಶ್ವನಾಥರ ಈ ಮಾತುಗಳು ಅಕ್ಷರಶಃ ನನ್ನಲ್ಲಿ ದೊಡ್ಡ ಆಲೋಚನೆಯ ಅಲೆಯನ್ನೇ ಎಬ್ಬಿಸಿದವು.

ನಿಜ, ನಮ್ಮ ದೇಶದಲ್ಲಿ ಆಗಿಹೋದ ಅನೇಕ ಮಹಾನ್‌ ಬಂಡಾಯಗಾರರಲ್ಲಿ ಅಂಬೇಡ್ಕರ್‌ ಎಲ್ಲರಂಥವರಲ್ಲ. ವ್ಯವಸ್ಥೆಯ ವಿರುದ್ಧ ವ್ಯವಸ್ಥೆಯೊಳಗಿದ್ದೇ ಆ ಬಂಡಾವನ್ನು ತಪಸ್ಸಿನಂಥೆ ಮಾಡಿದವರು. ಅಧ್ಯಯನಶೀಲತೆ ವಿಚಾರದಲ್ಲಿ ಅವರಲ್ಲಿದ್ದ ಶ್ರದ್ಧೆ, ಹೋರಾಟದಲ್ಲೂ ಫಳಫಳಿಸುತ್ತಿತ್ತು. ಸರ್ದಾರ್‌ ವಲ್ಲಭಬಾಯ್‌ ಪಟೇಲರಿಗೆ ಹೇಗೆ ಭಾರತವನ್ನು ಒಗ್ಗೂಡಿಸಬೇಕೆಂಬ ಅಸಾಧಾರಣ ಬದ್ಧತೆ ಇತ್ತೋ ಅದೇ ರೀತಿ ಅಂಬೇಡ್ಕರ್‌ ಅವರಿಗೆ ಕೂಡ ದೇಗುಲ ಕಟ್ಟಿದ ಮೇಲೆ ಅದೇ ದೇಗುಲದ ಹೊರಗಿನ ಬೀದಿಯ ಕೊನೆಯಲ್ಲಿ, ನೀರಿನ ಬಾವಿ ತೋಡಿದ ಮೇಲೆ ಅದೇ ಬಾವಿಯ ಗುಟುಕು ನೀರಾಗಿ ಊರಾಚೆಯ ಕೇರಿಯ ಕೊನೆಯಲ್ಲಿ ಅಸಹಾಕತೆಯಿಂದ ನಿಲ್ಲುತ್ತಿದ್ದವರನ್ನು ಮುಖ್ಯವಾಹಿನಿಗೆ ತಂದು ಅವರಿಗೂ ಸಮಾನತೆಯೆಂಬ ಅಮೃತಸಿಂಚನ ಮಾಡಿಸುವ ಹಠವಿತ್ತು.

ಆದರೆ, ಆಗಿದ್ದೇನು? ಅವರು ಹಿಂದುವಾಗಿ ಹುಟ್ಟಿ ಬೌದ್ಧರಾಗಿ ಈ ಭೌತಿಕ ಜಗತ್ತು ಬಿಟ್ಟುಹೋದ ಮೇಲೆ ಈ ಭಾರತಕ್ಕೆ ೬೫ ವರ್ಷವಾಗಿದೆ. ಅವರು ಹೇಳಿದ್ದು ಆಗಿದೆಯಾ? ಏನೂ ಆಗಿಯೇ ಇಲ್ಲ ಅಂದು ಹೇಳುವ ಸಿನಿಕತೆ ನನಗಿಲ್ಲ. ಆದರೆ, ಮನುಷ್ಯ ಮನುಷ್ಯನನ್ನು ನೋಡುವ ಬಗೆ ಬದಲಾಗಿದೆಯಾ? ಅವರು-ಇವರು ಎನ್ನುವ ರೀತಿಯಲ್ಲಿ ಆತ್ಮದಲ್ಲಿ ಅಡಗಿದ್ದ ಅಂತರ ಹೋಗಿದೆಯಾ? ಕೇರಿಯ ಕೊನೆಯಲ್ಲಿ, ಗುಡಿಬೀದಿಯ ಕಡೆಯಲ್ಲಿ ನಿಂತು ನಡುಬಗ್ಗಿಸಿ ನಿಲ್ಲುತ್ತಿದ್ದವರು ಸ್ಥಿತಿ ಸುಧಾರಿಸಿದ್ದಾರಾ? ಹಾಗಿದ್ದರೆ, ಎಷ್ಟು ಸುಧಾರಿಸಿದ್ದಾರೆ?

ಬರೆಯಲಿಕ್ಕೆ ಕಷ್ಟ ಎನಿಸುತ್ತಿದೆ. ಹಲವು ಬಾರಿ ಗೆದ್ದು ಲೋಕಸಭೆ, ವಿಧಾಸಭೆ ಪ್ರವೇಶಿಸಿ ಮಂತ್ರಿಯೂ ಆಗಿದ್ದ ಹಿರಿಯ ನಾಯಕ ರಮೇಶ್‌ ಜಿಗಜಿಣಗಿ ಅಂಥವರು ಯಾವುದೋ ದೇವಾಲಯದೊಳಕ್ಕೆ ಹೋಗಲಿಲ್ಲ, ಯಾರದೋ ಮತದಾರರ ಮನೆಯೊಳಕ್ಕೆ ಹೆಜ್ಜೆ ಇಡಲಿಲ್ಲ. ಯಾಕೆ ಹೀಗೆ? ಜಿಗಜಿಣಗಿ ಅವರಿಗೆ ಹೋಗಬೇಕು ಎಂಬ ಮನಸ್ಸಿದ್ದರೂ ಹೋಗಲಾಗಲಿಲ್ಲ. ಆಮೇಲೆ ಅವರೇ ಆ ಬಗ್ಗೆ ಹೇಳಿಕೊಂಡಿದ್ದರು. ಹೋದರೆ, ಮೇಲ್ಜಾತಿಯ ಮತದಾರರು ಏನಂದುಕೊಳ್ಳುತ್ತಾರೋ ಎಂಬ ಅಂಜಿಕೆ!! ಅಂಥ ದೊಡ್ಡ ವ್ಯಕ್ತಿಗೆ ಹಾಗೆ ಅನಿಸಿರಬೇಕಾದರೆ ಕೇರಿಯ ಕೊನೆಯಲ್ಲಿ, ಗುಡಿಬೀದಿಯ ಕಡೆಯಲ್ಲಿ ನಿಂತು ನಡುಬಗ್ಗಿಸಿ ನಿಲ್ಲುತ್ತಿದ್ದವರ ಸ್ಥಿತಿಯೇನು? ಈ ಘಟನೆ ಕೆಲ ವರ್ಷಗಳ ಹಿಂದಿನದ್ದು ಮಾತ್ರ. ಈಗ್ಗೆಯೂ ಪರಿಸ್ಥಿತಿ ಬದಲಾಗಿದೆಯಾ? ಇದು ಇವತ್ತಿನ ಭಾರತಕ್ಕೆ ಹಿಡಿದ ಕನ್ನಡಿ ಮಾತ್ರ.

1948 :: Dr. B.R. Ambedkar With His Wife Dr. Savita Ambedkar pic.twitter.com/OSpkn5nTBT

— indianhistorypics (@IndiaHistorypic) April 14, 2021

ಅಂಬೇಡ್ಕರ್‌ ಆಶಯದಂತೆ ಮೀಸಲು ನೀಡಿದ್ದೇವೆ, ಅದು ಅವರ ಹಕ್ಕು ಕೂಡ. ಸರಿ, ಅವರಿಗೆ ನಮ್ಮ ಹೃದಯದಲ್ಲೊಂದು ಜಾಗ ಬೇಡವೇ. ಅದನ್ನು ಯಾರು ಮಾಡುತ್ತಿಲ್ಲ.

ನನ್ನ ಪ್ರಕಾರ ಭಾರತದ ಇತಿಹಾಸದಲ್ಲಿ ಸರ್ದಾರ್‌ ವಲ್ಲಭಬಾಯ್‌ ಪಟೇಲರು ಹಾಗೂ ಅಂಬೇಡ್ಕರ್‌ ಅವರಿಬ್ಬರೂ ಬಹಳ ವಿಭಿನ್ನ. ಮೇರುಸದೃಶ್ಯರು. ಆದರೆ, ಕಾಂಗ್ರೆಸ್‌ನಿಂದ ಅನ್ಯಾಯಕ್ಕೆ ಒಳಗಾಗಿದ್ದ ಪಟೇಲರಿಗೆ ಬಿಜೆಪಿಯಿಂದ ನ್ಯಾಯ ಒದಗಿಸುವ ಕೆಲಸ ಆಯಿತು (ನರ್ಮದಾ ತೀರದಲ್ಲಿ ಅವರ ಪ್ರತಿಮೆ ಮಾಡಿದ್ದು) ಎಂದು ನನ್ನನ್ನೂ ಸೇರಿದಂತೆ ಅನೇಕರು ಭಾವಿಸಿದ್ದಾರೆ. ಅದು ಹಾಗಲ್ಲ ಎನ್ನುವ ಅಂಶ ನನಗೆ ಕೆಲ ದಿನಳಿಂದೆ ಮನವರಿಕೆ ಆಯಿತು. ಖ್ಯಾತ ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ ಅವರು ಕೆಲ ದಿನಗಳ ಹಿಂದೆ ʼದುಡ್ಡಿಗೆ ಸೋತ ಭಾರತʼ ಎನ್ನುವ ಪುಸ್ತಕ ಬರೆದಿದ್ದರು. ಅದನ್ನು ಓದಿದ ಮೇಲೆ ನನ್ನ ನಿಲುವು ಇನ್ನೂ ಸ್ಪಷ್ಟವಾಗಿ ಗಟ್ಟಿಯಾಯಿತು. ಭಾರತದ ಒಳಗಿನ ಗಟ್ಟಿತನ ಮೆಲ್ಲಗೆ ಶಿಥಿಲವಾಗುತ್ತಿದೆ. ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಎಂಬ ತೊಳಲಾಟ ಕೆಲ ವರ್ಷಗಳಿಂದೀಚೆಗೆ ದೇಶದೊಳಗೆ ಹೆಚ್ಚುತ್ತಿದೆ. ದೇಶವೇ ಆರ್ಥಿಕ ದಾರಿದ್ರ್ಯದತ್ತ ಸಾಗುತ್ತಿರುವ ಹೊತ್ತಿನಲ್ಲಿ ಒಂದಿಬ್ಬರು ಉದ್ಯಮಗಳ ಸಂಪತ್ತು ರಭಸವಾಗಿ ಹೆಚ್ಚಾಗುತ್ತಿದೆ. ಪಟೇಲರು ಕೂಡಿಸಿ ಕಟ್ಟಿದ ಬಲಿಷ್ಠ ಭಾರತದ ಗೋಡೆಗಳಲ್ಲಿ ರಂಧ್ರಗಳು ಬಿದ್ದು ನೀರು ಜಿನುಗುತ್ತಿದೆ. ಎಚ್ಚೆತ್ತುಕೊಳ್ಳಬೇಕು, ಇದಕ್ಕೆ ದಿವ್ಯೌಷಧ ಎಂದರೆ ಅಂಬೇಡ್ಕರ್‌ ತತ್ತ್ವ ಮಾತ್ರ.

ಇದರ ಬಗ್ಗೆ ಇವತ್ತು ಒಬ್ಬ ನಾಯಕನೂ ಮಾತನಾಡಲಿಲ್ಲ. ಅವರಿಗೆ ಅಂಬೇಡ್ಕರ್‌ ಹೇಳಿದ್ದು ಬೇಕಾಗಿಲ್ಲ. ಅವರ ಕಂಡ ಕನಸು ಬೇಕಾಗಿಲ್ಲ. ಅದು ಬಿಜೆಪಿ ಇರಬಹುದು ಅಥವಾ ಕಾಂಗ್ರೆಸ್‌ ಇರಬಹುದು. ಟ್ವಿಟರಿನಲ್ಲಿ ಸಂವಿಧಾನ ಶಿಲ್ಪಿಯನ್ನು ಮೆರವಣಿಗೆ ಮಾಡಿಸಿ, ಪ್ರತಿಮೆಗೆ ಹಾರ ಹಾಕಿ ಅವರನ್ನು ಇನ್ನೊಂದು ಜಯಂತಿ ವರೆಗೂ ಜೋಪಾನ ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

ಇದರೊಟ್ಟಿಗೆ ಇನ್ನೊಂದು ದೊಡ್ಡ ಸತ್ಯಶೋಧನೆಯನ್ನು ಬಿಜೆಪಿ ಮಾಡಿದೆ. 1952ರ ಮಹಾಚುನಾವಣೆಯಲ್ಲೇ ಆಗಲೀ, ಅದರ ಮರುವರ್ಷ ನಡೆದ ಮರು ಚುನಾವಣೆಯಲ್ಲೇ ಆಗಲಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಲೋಕಸಭೆಗೆ ಗೆದ್ದು ಬರಲಿಲ್ಲ. ಅವರು ಗೆದ್ದು ಬರಲಿಲ್ಲ ಅನ್ನುವುದಕ್ಕಿಂದ ಕಾಂಗ್ರೆಸ್‌ ಪಕ್ಷ ಅವರು ಸೋಲುವಂತೆ ನೋಡಿಕೊಂಡಿತು. ಇದು ನಿಜವೂ ಇರಬಹದು. ಆದರೆ, ಈ ವಿಷಯವನ್ನು ಅಂಬೇಡ್ಕರ್‌ ಅವರು ಹುಟ್ಟಿ ೧೩೦ ವರ್ಷದ ನಂತರ, ಅವರು ಅಗಲಿದೆ ೬೫ ವರ್ಷದ ನಂತರ ಬಿಜೆಪಿ ಪ್ರಸ್ತಾಪ ಮಾಡುತ್ತಿದೆ. ಆ ಪಕ್ಷದ ಕೆಲ ನಾಯಕರು ದೇಶದುದ್ದಕ್ಕೂ ಇದೇ ವಿಷಯವನ್ನು ಇವತ್ತು ಉಲ್ಲೇಖಿಸಿದ್ದಾರೆ.

ರಾಷ್ಟ್ರಕ್ಕೆ ಸಂವಿಧಾನವನ್ನು ಅರ್ಪಣೆ ಮಾಡಿದ ನಂತರವಂತೂ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿನ ಮನೆಮಾತಾಗಿಬಿಟ್ಟರು. ಆ ಕಾಲದ ವಿಶ್ವದ ಪ್ರತಿ ಮೂಲೆಯಲ್ಲಿದ್ದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಬಾಬಾ ಸಾಹೇಬರ ಬಗ್ಗೆ ಚರ್ಚೆಯಾಗುತ್ತಿತ್ತು. ಶ್ರೇಷ್ಠ ರಾಜಕೀಯ ಚಿಂತಕರು, ಅರ್ಥಶಾಸ್ತ್ರಜ್ಞರು, ವಿದೇಶಿ ನೀತಿ ನಿರೂಪಕರು ಡಾ.ಬಿ.ಆರ್.ಅಂಬೇಡ್ಕರ್ ಅವರ ಜ್ಞಾನದ ಬಗ್ಗೆ ಬೆರಗಾಗಿದ್ದರು. ಆದರೆ, ಈ ಜಗತ್ಪ್ರಸಿದ್ಧಿಯೇ ಬಾಬಾ ಸಾಹೇಬರಿಗೆ ಮುಳುವಾಯಿತೇನೋ..? ಗೊತ್ತಿಲ್ಲ.

ಈ ದೇಶಕ್ಕೆ ಪ್ರಧಾನಮಂತ್ರಿ, ರಾಷ್ಟ್ರಪತಿ ಆಗುವಂಥ ಎಲ್ಲ ಅರ್ಹತೆ ಇದ್ದರೂ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಸಂಪುಟದಲ್ಲಿ ಇರಲಾಗದಂಥ ಉಸಿರುಗಟ್ಟಿಸುವ ವಾತಾವರಣವನ್ನು ನಿರ್ಮಾಣ ಮಾಡಲಾಯಿತು. ಇದನ್ನು ಯಾರು ಅಲ್ಲಗಳೆಯುವಂತಿಲ್ಲ. ಕಾಂಗ್ರೆಸ್‌ ಮತ್ತು ನೆಹರು ಕೃಪಾಪೋಷಿತ ರಾಜಕೀಯ ವ್ಯವಸ್ಥೆ ಅವರನ್ನು ಅತ್ಯಂತ ಕೆಟ್ಟದ್ದಾಗಿ ನಡೆಸಿಕೊಂಡಿತು ಎಂಬುದು ರಹಸ್ಯ ಇತಿಹಾಸವೇನಲ್ಲ. ದುರಂತವೆಂದರೆ, ಈವರೆಗೂ ತಾನು ಮಾಡಿದ ತಪ್ಪಿನ ಬಗ್ಗೆ ಕಾಂಗ್ರೆಸ್‌ ಪಶ್ಚಾತ್ತಾಪ ಪಟ್ಟಿಲ್ಲ ಹಾಗೂ ಆ ಮಹಾನ್‌ ವ್ಯಕ್ತಿಯ ಕ್ಷಮೆಯನ್ನೂ ಕೇಳಿಲ್ಲ.

130ನೇ ಜನ್ಮದಿನದ ನಿಮಿತ್ತ ಇಡೀ ದೇಶವೇ ಬಾಬಾ ಸಾಹೇಬರನ್ನು ಸ್ಮರಣೆ ಮಾಡುತ್ತಿದೆ. ಮುಖ್ಯಮಂತ್ರಿಗಳು, ಮಂತ್ರಿ ಮಹೋದಯರು, ಅಧಿಕಾರಿಗಳು ಎಲ್ಲರೂ ಎಲ್ಲ ಕಡೆ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಂದಲೇ ಸಂವಿಧಾನ, ಅವರಿಂದಲೇ ಪ್ರಜಾಪ್ರಭುತ್ವ ಎಂದೆಲ್ಲ ಚರ್ಚೆ ಮಾಡುತ್ತಿದ್ದೇವೆ. ಆದರೆ, ಅವರು ಹೇಳಿದ್ದ ಒಂದು ಮಾತು, “ನಾವು.. ಮನುಷ್ಯರೆಲ್ಲ ಒಂದು, ಎಲ್ಲರೂ ಸಮಾನರು” ಎನ್ನುವುದನ್ನು ಮಾತ್ರ ಮರೆಯುತ್ತಿದ್ದೇವೆ. ಕೇವಲ ಅರೆ ಗಂಟಲಿನಿಂದ ಬರುವ ಅಂಬೇಡ್ಕರ್‌ ವಾದ, ತತ್ತ್ವಜಪ ಇನ್ನೂ ಕೊಂಚ ಆಳದಲ್ಲಿರುವ ಹೃದಯದಿಂದ ಏಕೆ ಬರುತ್ತಿಲ್ಲ?

ಕಾಂಗ್ರೆಸ್‌ಗೆ ಅಧಿಕಾರವಿಲ್ಲ, ಸುಮ್ಮನಿದೆ! ಆದರೆ, ಬಿಜೆಪಿಗೆ ಅಧಿಕಾರವಿದೆ, ಬಹುಶಃ ನರ್ಮದಾ ತೀರದಲ್ಲಿ ಪಟೇಲರಿಗೆ ʼನ್ಯಾಯʼ ಸಿಕ್ಕಿದಂತೆ ಇನ್ನಾವುದೋ ನದಿ ದಂಡೆಯಲ್ಲಿ ಬಾಬಾ ಸಾಹೇಬರಿಗೂ ನ್ಯಾಯ ಸಿಗಬಹುದು.

ಆದರೆ, ಸಿರಿತನ-ಬಡತನದಲ್ಲಿ ಆಕಾಶ-ಭೂಮಿಯಷ್ಟು ವ್ಯತ್ಯಾಸವನ್ನು ಮೈಮೇಲೆ ಹೇರಿಕೊಡಿರುವ ಮುಂಬಯಿಯಲ್ಲಿ ಮಹಾರಾಷ್ಟ್ರ ಸರಕಾರ ಈಗಾಗಲೇ ಇಂಥ ಯೋಜನೆಯೊಂದನ್ನು ಸಂವಿಧಾನ ಶೀಲ್ಪಿಗಾಗಿ ರೂಪಿಸಿದೆ!

ಕಾಲವೂ ಕರಗುತ್ತಿದೆ. ಸ್ಥಾವರಗಳಿಗೆ ಕೊರತೆ ಇಲ್ಲ, ಜಂಗಮಕ್ಕೆ ಉಳಿವಿಲ್ಲ. ಇವತ್ತಿನ ಭಾರತಕ್ಕೆ ನನ್ನ ಪ್ರಣಾಮಗಳು!! ಜತೆಗೆ, ಅಡಗೂರು ವಿಶ್ವನಾಥ್‌ ಕೇಳಿದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದೇನೆ.

****ʼ

  • Dr B R Ambedkar photos courtesy: Wikipedia
Tags: adagur h vishwanathambedkar 130th jayantibr ambedkarbr ambedkar birthday 2021indiakarnataka
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಭಾರತರತ್ನ ನೀಡಲು 34 ವರ್ಷ ವಿಳಂಬ ಮಾಡಿದ ಕಾಂಗ್ರೆಸ್‌ ಪಕ್ಷವನ್ನು ಇತಿಹಾಸ ಕ್ಷಮಿಸುವುದಿಲ್ಲ ಎಂದ ಡಾ.ಕೆ.ಸುಧಾಕರ್

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಭಾರತರತ್ನ ನೀಡಲು 34 ವರ್ಷ ವಿಳಂಬ ಮಾಡಿದ ಕಾಂಗ್ರೆಸ್‌ ಪಕ್ಷವನ್ನು ಇತಿಹಾಸ ಕ್ಷಮಿಸುವುದಿಲ್ಲ ಎಂದ ಡಾ.ಕೆ.ಸುಧಾಕರ್

Leave a Reply Cancel reply

Your email address will not be published. Required fields are marked *

Recommended

ಎಲ್ಲ ಸರಕಾರಿ ಅಧಿಕಾರಿಗಳು & ಸಿಬ್ಬಂದಿಗೂ ಕೋವಿಡ್‌ ಲಸಿಕೆ ಕಡ್ಡಾಯ; ಎರಡನೇ ಅಲೆ ತಡೆಯಲು ಇದು ಸಹಾಯಕ ಎಂದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಎಲ್ಲ ಸರಕಾರಿ ಅಧಿಕಾರಿಗಳು & ಸಿಬ್ಬಂದಿಗೂ ಕೋವಿಡ್‌ ಲಸಿಕೆ ಕಡ್ಡಾಯ; ಎರಡನೇ ಅಲೆ ತಡೆಯಲು ಇದು ಸಹಾಯಕ ಎಂದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್

5 years ago
KDP ಸಭೆಯಿಂದ ಪತ್ರಕರ್ತರನ್ನು ಹೊರಗಟ್ಟಿದ ಮುಖ್ಯಮಂತ್ರಿ

KDP ಸಭೆಯಿಂದ ಪತ್ರಕರ್ತರನ್ನು ಹೊರಗಟ್ಟಿದ ಮುಖ್ಯಮಂತ್ರಿ

2 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ