• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಆರೋಗ್ಯ ಸಚಿವರ ತವರಿನಲ್ಲಿರುವ ನೂರೆಂಟು ವರ್ಷಗಳ ನಿಸ್ವಾರ್ಥ ಸೇವೆಯ ಇತಿಹಾಸವುಳ್ಳ #CSI ಆಸ್ಪತ್ರೆ ಮೇಲೆ ಖಾಸಗಿ ನರ್ಸಿಂಗ್‌ ಹೋಂ ವಕ್ರದೃಷ್ಟಿ; ಸರ್ವೀಸ್‌ ಬದಲು ಭರ್ತಿ ಸುಲಿಗೆ!!

cknewsnow desk by cknewsnow desk
May 13, 2021
in CHIKKABALLAPUR, COVID-19, STATE
Reading Time: 2 mins read
0
ಆರೋಗ್ಯ ಸಚಿವರ ತವರಿನಲ್ಲಿರುವ ನೂರೆಂಟು ವರ್ಷಗಳ ನಿಸ್ವಾರ್ಥ ಸೇವೆಯ ಇತಿಹಾಸವುಳ್ಳ #CSI ಆಸ್ಪತ್ರೆ ಮೇಲೆ ಖಾಸಗಿ ನರ್ಸಿಂಗ್‌ ಹೋಂ ವಕ್ರದೃಷ್ಟಿ; ಸರ್ವೀಸ್‌ ಬದಲು ಭರ್ತಿ ಸುಲಿಗೆ!!
966
VIEWS
FacebookTwitterWhatsuplinkedinEmail

Special Story

ಸೇವೆ, ಆರೈಕೆ, ಮಾತೃಪ್ರೇಮ, ನಿಸ್ವಾರ್ಥ ಮನೋಭಾವ.. ಇವು ಚಿಕ್ಕಬಳ್ಳಾಪುರದ ಸಿಎಸ್‌ಐ ನಾಲ್ಕು ಸ್ತಂಭಗಳಾಗಿದ್ದವು. ಆದರೆ ಈಗ??

M Krishnappa Chikkaballapura

ಚಿಕ್ಕಬಳ್ಳಾಪುರ: ಮದರ್ ಥೆರೆಸಾ ಅವರ ಆಶಯದಂತೆ ಕಳೆದೊಂದು ಶತಮಾನದಿಂದ ದಕ್ಷಿಣ ಭಾರತದಲ್ಲೇ ಆರೋಗ್ಯ ಸೇವೆಯಲ್ಲಿ ಉನ್ನತ ಹೆಸರು ಮಾಡಿದ್ದ ನಗರದ ಸಿಎಸ್ಐ ಆಸ್ಪತ್ರೆ (ಮಿಷನ್‌ ಆಸ್ಪತ್ರೆ) ಇದೀಗ ಮೂಲ ಆಶಯವನ್ನೇ ಮರೆತು ಹಣ ದೋಚುವ ಅಡ್ಡೆಯಾಗಿ ಬದಲಾಗಿದೆ.

ಹೌದು. 1913ರಲ್ಲಿ ಸ್ಥಾಪನೆಯಾಗಿ ಚಿಕ್ಕಬಳ್ಳಾಪುರ ಜನರ ಜೀವರಕ್ಷಕ ತಾಣವಾಗಿದ್ದ ಸಿಎಸ್ಐ ಆಸ್ಪತ್ರೆ ಎಂದರೆ ಜನತೆಗೆ ಅಪಾರ ಭರವಸೆ ಇತ್ತು. ಅಲ್ಲಿಗೆ ಹೋದರೆ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಹಾಗೂ ಜೀವವೂ ಉಳಿಯುತ್ತದೆ ಎಂಬ ನಂಬಿಕೆ ಇತ್ತು. ಡಾ.ಹಿಕ್ಲಿಂಗ್, ಡಾ.ಕಟಿಂಗ್, ಡಾ.ರಾಬಿನ್ ಸನ್ ಅವರಂಥ ಶ್ರೇಷ್ಠ ವೈದ್ಯರು ಸೇವೆ ಸಲ್ಲಿಸಿದ್ದ ಆಸ್ಪತ್ರೆ ಇದಾಗಿತ್ತು. ನಿಸ್ವಾರ್ಥತೆಯಿಂದ ಸೇವೆ ಮಾಡುತ್ತಿದ್ದ ಅನೇಕ ಅರೆವೈದ್ಯಕೀಯ ಸಿಬ್ಬಂದಿ, ದಾದಿಯರು ಇದ್ದ ಅತ್ಯುತ್ತಮ ಚಿಕಿತ್ಸಕ ತಾಣವಾಗಿತ್ತು.

ಅಷ್ಟೇ ಅಲ್ಲ, ಚಿಕ್ಕಬಳ್ಳಾಪುರ ಸಿಎಸ್ಐ ಆಸ್ಪತ್ರೆ ಎಂದರೆ ಕರ್ನಾಟಕದ ಎಲ್ಲ ಜಿಲ್ಲೆಗಳೂ ಸೇರಿದಂತೆ ನೆರೆಯ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಭಾಗಗಳಿಂದ ಜನರು ಬಂದು ಚಿಕಿತ್ಸೆ ಪಡೆದು ಗುಣಮುಖರಾಗಿ ಹೋಗುತ್ತಿದ್ದರು. ಎಲ್ಲೆಲ್ಲೋ ಹೋದರೂ ಗುಣಮುಖವಾಗದ ಅನೇಕ ಕಾಯಿಲೆಗಳನ್ನು ಇಲ್ಲಿದ್ದ ಸೇವಾತತ್ಪರ ವೈದ್ಯರು ಗುಣಪಡಿಸುತ್ತಿದ್ದರಲ್ಲದೆ, ʼವೈದ್ಯೋ ನಾರಾಯಣೋ ಹರಿʼ ಎಂದ ಮಾತನ್ನು ಸತ್ಯ ಮಾಡಿದ್ದರು.

ನೂರಾರು ಮೈಲು ದೂರದಿಂದ ಇಲ್ಲಿಗೆ ಬರುತ್ತಿದ್ದ ರೋಗಿಗಳು ಕೂಡ ಅನೇಕ ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿದು ಸಂಪೂರ್ಣ ಗುಣಮುಖರಾಗಿ ವಾಪಸ್‌ ಹೋಗುತ್ತಿದ್ದರು. ರೋಗಿಗಳ ಜೊತೆ ಬರುತ್ತಿದ್ದ ಸಂಬಂಧಿಕರನ್ನು ಆಸ್ಪತ್ರೆಯ ಸಿಬ್ಬಂದಿ ಬಹಳ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ಸೇವೆ, ಆರೈಕೆ, ಮಾತೃಪ್ರೇಮ, ನಿಸ್ವಾರ್ಥ ಮನೋಭಾವ ಈ ಆಸ್ಪತ್ರೆಯ ನಾಲ್ಕು ಸ್ತಂಭಗಳಾಗಿದ್ದವು.

ಅಂಥ ಆಸ್ಪತ್ರೆಗೆ ಏನಾಗಿದೆ?

ಈಗ ಈ ಆಸ್ಪತ್ರೆ ಮೊದಲಿನಂತೆ ಇಲ್ಲ. ರೋಗಿಗಳ ಪಾಲಿಗೆ ಅಕ್ಷರಶಃ ನರಕವಾಗಿದೆ. ಆಸ್ಪತ್ರೆಯ ಆಡಳಿತ ಮಂಡಳಿಯ ಧನದಾಹ ಜನರನ್ನು ಕಿತ್ತು ತಿನ್ನುತ್ತಿದೆ. ವೈದ್ಯಸೇವೆ ಎಂಬುದು ಮರೀಚಿಕೆಯಾಗಿ ಹೆಣದ ಮೇಲೂ ಹಣ ಮಾಡುವ ನಿಕೃಷ್ಠ ಪರಿಸ್ಥಿತಿಗೆ ತಲುಪಿದೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ.

ಇಡೀ ಜಗತ್ತೇ ಕೋವಿಡ್‌ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯ ಸಾವಿನ ಮನೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೋಂಕು ಮರಣ ಮೃದಂಗ ಭಾರಿಸುತ್ತಿದೆ. ನಿತ್ಯವೂ ಹೆಣಗಳ ಮೆರವಣಿಗೆ ನಡೆದಿದೆ. ಇಂಥ ಸಂಕಷ್ಟ ಸಮಯದಲ್ಲೂ ಸಿಎಸ್‌ಐ ಆಸ್ಪತ್ರೆ ಹಣ ಮಾಡುವ ದಂಧೆಯಲ್ಲಿ ನಿರತವಾಗಿದೆ.

ಯಾಕೆ ಹೀಗಾಯಿತು?

108 ವರ್ಷಗಳ ಇತಿಹಾಸವುಳ್ಳ ಸಿಎಸ್ಐ ಆಸ್ಪತ್ರೆಯು ಉಚಿತ ಚಿಕಿತ್ಸೆ ಹಾಗೂ ನಿಸ್ವಾರ್ಥ ಸೇವೆಗೆ ಹೆಸರಾಗಿತ್ತು. ಎರಡೂವರೆ ವರ್ಷಗಳ ಹಿಂದೆಯಷ್ಟೆ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಆಗಿದ್ದ ಡಾ.ರಿತೀಶ್ ಜಾನ್ಸನ್ ಅವರು ವೈಯಕ್ತಿಕ ಆರೋಗ್ಯದ ಸಮಸ್ಯೆಯಿಂದ ರಜೆ ಮೇಲೆ ತೆರಳಿದ್ದೇ ಈ ಆಸ್ಪತ್ರೆಗೆ ಗ್ರಹಣವಾಗಿ ಮಾರ್ಪಟ್ಟಿತು.

ಡಾ.ರಿತೀಶ್‌ ಜಾನ್ಸನ್‌ ಅವರ ಜಾಗಕ್ಕೆ ಪ್ರಭಾರಿಯಾಗಿ ನೇಮಕಗೊಂಡ ಡಾ.ಜಾಯ್ ಕ್ರೈಸ್ಟ್ ಅವರು ಈ ಆಸ್ಪತ್ರೆಗೆ ಸಂಭಂದವಿಲ್ಲದ ಅವರ ತಂದೆ ಮತ್ತಿತರರ ಅಣತಿಯಂತೆ ನಡೆದುಕೊಳ್ಳುವ ಮೂಲಕ ಕೋವಿಡ್‌ ಕಷ್ಟಕಾಲವನ್ನೇ ಹಣ ಮಾಡುವ ಸುಗ್ಗಿಕಾಲವನ್ನಾಗಿ ಮಾರ್ಪಡಿಸಿಕೊಳ್ಳಲು ಮೂಲಗಳ ಪ್ರಕಾರ ಇಲ್ಲಿನ ಇವರು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಬಿಷಪ್ ಅವರ ಗಮನಕ್ಕೂ ತಾರದೆ ಕೊವಿಡ್ ಕೇರ್ ಸೆಂಟರ್ ಮಾಡಲು ಹುನ್ನಾರ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ ಆಸ್ಪತ್ರೆಯ ಮೂಲ ಆಶಯಗಳನ್ನೆ ಮೂಲೆಗುಂಪಾಗಿದ್ದಾರೆ ಎನ್ನುವ ದೂರುಗಳು ಸಹ ವ್ಯಾಪಕವಾಗಿ ಕೇಳಿಬರುತ್ತಿವೆ. ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಅಲ್ಲಿನ ಸಿಬ್ಬಂದಿ ಹಾಗೂ ಸಮುದಾಯದ ಬಹುತೇಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಖಾಸಗಿ ನರ್ಸಿಂಗ್‌ ಹೋಂ ಕರಾಮತ್ತು

ಈ ಅವ್ಯವಸ್ಥೆಗೆ ಪೂರಕವಾಗಿ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಸಿಎಸ್ಐ ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಜೊತೆ ಕೈಜೋಡಿಸಿ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಮುಂದಾಗಿದ್ದಾರೆ ಎಂದು ಕ್ರೈಸ್ತ ಮುಖಂಡ ಸ್ಯಾಮ್ಯೂಯೆಲ್ ಸಂದೀಪ್ ಗಂಭೀರ ಆರೋಪ ಮಾಡಿದ್ದಾರೆ.

ದಕ್ಷಿಣ ಭಾರತದಲ್ಲಿಯೇ ಚಿಕ್ಕಬಳ್ಳಾಪುರ ಸಿಎಸ್ಐ ಆಸ್ಪತ್ರೆ ಬಹಳ ಹೆಸರುವಾಸಿಯಾಗಿತ್ತು. ಆಸ್ಪತ್ರೆಯ ಇತಿಹಾಸಕ್ಕೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ಇತಿಹಾಸ ಪ್ರಸಿದ್ಧ ಹಾಗೂ ಉದಾತ್ತ ಸೇವೆಯ ಈ ಆಸ್ಪತ್ರೆಯನ್ನು ಖಾಸಗಿ ಕೊರೊನಾ ಆರೈಕೆ ಕೇಂದ್ರವನ್ನಾಗಿ ಮಾಡಿ ಹಣ ಲೂಟಿ ಮಾಡುವ ಹುನ್ನಾರ ನಡೆಲಾಗುತ್ತಿದೆ ಎಂದು ಸಂದೀಪ್‌ ದೂರಿದ್ದಾರೆ.

ಇನ್ನು ಖಾಸಗಿ ಆಸ್ಪತ್ರೆ ವೈದ್ಯರೊಬ್ಬರು ಹಣದಾಸೆಗೆ ಬಿದ್ದು ಸಿಎಸ್‌ಐ ಮೇಲೆ ವಕ್ರದೃಷ್ಟಿ ಬೀರಿದ್ದಾರೆ. ತಮ್ಮದೇ ಆದ ಮೂರು ಅಂತಸ್ತಿನ ನರ್ಸಿಂಗ್‌ ಹೋಂ ಅನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಮಾಡದೇ, ಅಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಭರ್ತಿ ಹಣ ಮಾಡುತ್ತಿದ್ದಾರೆಂದು ಸ್ವತಃ ಸ್ಯಾಮ್ಯೂಯೆಲ್ ಸಂದೀಪ್ ಮಾಡುವ ಆರೋಪ.

ಈಗ ಸಿಎಸ್ಐ ಆಸ್ಪತ್ರೆಯಲ್ಲಿ ಕೋವಿಡ್‌ ನೆಪವೊಡ್ಡಿ ರೋಗಿಗಳಿಗೆ ದುಬಾರಿ ಶುಲ್ಕ ವಿಧಿಸಿ ವಸೂಲಿ ಮಾಡಲು ವ್ಯವಸ್ಥಿತ ಹುನ್ನಾರ ನಡೆದಿದೆ. ದುರಂತ ಎಂದರೆ ಈ ಆಸ್ಪತ್ರೆ ಕೊವಿಡ್ ಕೇರ್ ಸೆಂಟರ್ ಆಗಿ ಮಾರ್ಪಡಿಸಲು ಕೆಲ ತಾಂತ್ರಿಕ ಸಮಸ್ಯೆ ಗಳಿದ್ದು, ಅದಕ್ಕಿನ್ನೂ ಪರವಾನಗಿ ಸಿಗಲು ಫೈಲ್ ಹಿಂದೆ ಬಿದ್ದಿದೆ ಆಡಳಿತ ಮಂಡಳಿ. ಹೀಗಿದ್ದರೂ ಪರವಾನಗಿ ಸಿಕ್ಕಿಲ್ಲ ಎಂಬುದು ನಿಶ್ಚಳ. ಚಿಕ್ಕಬಳ್ಳಾಪುರದಲ್ಲಿ ಜನಪ್ರಿಯಗೊಂಡ ಒಂದೆರಡು ಆಸ್ಪತ್ರೆಗಳು ದಿನಕ್ಕೆ ಸಾಮಾನ್ಯ ಕೊಠಡಿಗೆ 10 ಸಾವಿರದಿಂದ 12 ಸಾವಿರ ರೂ., ಹಾಗೂ ಆಕ್ಸಿಜನ್ ಕೊಟ್ಟರೆ 15 ರಿಂದ 22 ಸಾವಿರ ರೂ., ಮತ್ತು ಐಸಿಯು ಆರೈಕೆಗೆ 25 ಸಾವಿರ ರೂ. ನಿಗಧಿಪಡಿಸಿರುವ ಮಾಹಿತಿ ಇಡೀ ನಗರದಲ್ಲಿ ಹಬ್ಬಿದೆ. ಅದರಂತೆ ಈ ಆಸ್ಪತ್ರೆ ಲೂಟಿ ಮಾಡಬಹುದೆಂಬ ಆಸೆಯಿಂದ ಇಲಾಖೆಯೊಂದಕ್ಕೆ ಪರವಾನಗಿ ಪಡೆಯಲು ಎಡತಾಕುತ್ತಿದೆ ಎಂದು ಗೊತ್ತಾಗಿದೆ.

ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ

ಸಿಎಸ್‌ಐ ಆಸ್ಪತ್ರೆಯನ್ನು ಅಗತ್ಯವಾದರೆ ಸರಕಾರಿ ಕೋವಿಡ್‌ ಆಸ್ಪತ್ರೆಯನ್ನಾಗಿ ರೂಪಿಸಲಿ. ಆದರೆ, ಅಲ್ಲಿ ಖಾಸಗಿಯವರು ಕೋವಿಡ್‌ ಹೆಸರೇಳಿಕೊಂಡು ಹಣ ದೋಚುವುದಕ್ಕೆ ಅವಕಾಶ ನೀಡಬಾರದು ಎಂದು ಸ್ಯಾಮ್ಯೂಯೆಲ್ ಸಂದೀಪ್ ಜಿಲ್ಲಾಡಳಿತವನ್ನು ಒತ್ತಾಯ ಮಾಡಿದ್ದಾರೆ.

ಒಂದು ವೇಳೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದೆ ಇದ್ದರೆ ಪ್ರತಿಭಟನೆ ನಡಸುವುದರ ಜತೆಗೆ, ಕ್ರೈಸ್ತ ಸಮುದಾಯದೊಂದಿಗೆ ಧರಣಿ ಕೂರಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಸಿಬ್ಬಂದಿಗೆ ವೇತನ ನೀಡಿಲ್ಲ

ಸಿಕೆನ್ಯೂಸ್‌ ನೌ ಸಂಗ್ರಹಿಸಿರುವ ಮಾಹಿತಿಯಂತೆ ಆಸ್ಪತ್ರೆಯಲ್ಲಿ 35ಕ್ಕೂ ಹೆಚ್ಚು ಕಾಯಂ ಸಿಬ್ಬಂದಿ ಇದ್ದಾರೆ. ಆದರೆ ಇವರಿಗೆ ಕಳೆದ ಒಂದೂವರೆ ವರ್ಷದಿಂದ ವೇತನವನ್ನೇ ನೀಡಲಾಗಿಲ್ಲ. ಅಲ್ಲಿನ ವ್ಯವಸ್ಥೆ ಸರಿ ಇಲ್ಲದ ಕಾರಣಕ್ಕೆ ರೋಗಿಗಳು ಬರುತ್ತಿಲ್ಲ. ಬೆಂಗಳೂರಿನ ಆರ್ಚ್‌ ಬಿಷಪ್‌ ಅವರ ನಿಯಂತ್ರಣಕ್ಕೆ ಈ ಆಸ್ಪತ್ರೆ ಬರಲಿದ್ದು, ಅವರಾದರೂ ಗಮನ ಹರಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಏನಂತಾರೆ?

ಸಿಎಸ್‌ಐ ಖಾಸಗಿ ಆಸ್ಪತ್ರೆಯಾದ್ದರಿಂದ ನಾವೇನೂ ಮಾಡಲಾಗದು. ಆದರೆ, ಸಿಬ್ಬಂದಿಗೆ ವೇತನ ನೀಡಿಲ್ಲ ಎಂದರೆ ತಪ್ಪಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರ ಜತೆ ಮಾತನಾಡುತ್ತೇನೆ. ಇನ್ನು ಸಿಎಸ್‌ಐಗೆ ಆಸ್ಪತ್ರೆ ಪರವಾನಗಿ ಇಲ್ಲ, ಕೇವಲ ಕ್ಲಿನಿಕ್‌ ಪರವಾನಗಿಯಷ್ಟೇ ಇದೆ. ಅದಕ್ಕೆ ಕೋವಿಡ್‌ ಕೇರ್‌ಗೆ ಅನುಮತಿ ಕೊಡಬಹುದು. ಆದರೆ, ಅಲ್ಲಿ ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಸೂಕ್ತ ಅವಕಾಶ ಇಲ್ಲ. ಹೀಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅವರು ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಅವರಿಗೆ ಅನುಮತಿ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿ ಏನಾದರೂ ಈ ಆಸ್ಪತ್ರೆ ಅಭಿವೃದ್ಧಿಗೆ ಮುಂದಾದರೆ, ಜಿಲ್ಲಾಡಳಿತ ಖಂಡಿತಾ ಸಹಕಾರ ನೀಡುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಸಿಕೆನ್ಯೂಸ್‌ ನೌ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.

Tags: 108 years legacychikkaballapuracovid19csi hospital chikkaballapurakarnatakaಚಿಕ್ಕಬಳ್ಳಾಪುರಸಿಎಸ್‌ಐ ಆಸ್ಪತ್ರೆ
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಚಾಮರಾಜನಗರ, ಕೋಲಾರ ಜಿಲ್ಲೆಗಳ ಆಕ್ಸಿಜನ್‌ ದುರಂತಗಳ ಎಫೆಕ್ಟ್:‌ ಎಚ್ಚೆತ್ತುಕೊಂಡ ಆರೋಗ್ಯ ಸಚಿವರ ತವರು ಜಿಲ್ಲಾಡಳಿತ, ಆಮ್ಲಜನಕ-ರೆಮಿಡಿಸ್ವೀರ್‌ ಕೊರತೆ ಇಲ್ಲ ಎಂದ ಡಿಸಿ

ರೆಮಿಡಿಸಿವರ್‌ ಕಂಪನಿಗಳಿಗೆ ನೋಟೀಸ್; ಪೂರೈಕೆ ತಡವಾದರೆ ಮುಲಾಜಿಲ್ಲದೆ ಕಾನೂನು ಕ್ರಮ, ಡ್ರಗ್‌ ತಯಾರಕರಿಗೆ ಕಾನೂನು ಗೊತ್ತಿಲ್ಲವೆ ಎಂದು ಗುಡುಗಿದ ಡಿಸಿಎಂ ಡಾ.ಸಿಎನ್.‌ಅಶ್ವತ್ಥನಾರಾಯಣ

Leave a Reply Cancel reply

Your email address will not be published. Required fields are marked *

Recommended

ಸೀಸನ್‌, ಚಾಪ್ಟರ್ ಲೆಕ್ಕದಲ್ಲಿ ಸಿದ್ದರಾಮಯ್ಯ ಸರಕಾರದ ಭ್ರಷ್ಟಾಚಾರ!!

ಸೀಸನ್‌, ಚಾಪ್ಟರ್ ಲೆಕ್ಕದಲ್ಲಿ ಸಿದ್ದರಾಮಯ್ಯ ಸರಕಾರದ ಭ್ರಷ್ಟಾಚಾರ!!

2 years ago
ವಿಕಲಚೇತನರ ಕಷ್ಟಕ್ಕೆ ಮಿಡಿದ KSRTC

ವಿಕಲಚೇತನರ ಕಷ್ಟಕ್ಕೆ ಮಿಡಿದ KSRTC

3 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ