• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಎತ್ತಿನಹೊಳೆ: ಬೊಮ್ಮಾಯಿಗೆ ಎಚ್‌ಡಿಕೆ ಪತ್ರ ಬರೆದರೆ ಸಾಕೆ?

P K Channakrishna by P K Channakrishna
August 26, 2021
in STATE
Reading Time: 2 mins read
0
ಕೋಲಾರದಲ್ಲಿ ನಿಂತು ಕೋಡಿಹಳ್ಳಿ ಚಳಿಬಿಡಿಸಿದ ಕುಮಾರಸ್ವಾಮಿ; ಡೋಂಗಿಗಳಿಂದ ಪಾಠ ಕಲಿಯಬೇಕಿಲ್ಲ ಎಂದ ದಳಪತಿ
1.2k
VIEWS
FacebookTwitterWhatsuplinkedinEmail

ಜಲ ವಿಜ್ಞಾನದ ಮರು ಅಧ್ಯಯನಕ್ಕೆ ಹೆಚ್.‌ಡಿ.ಕುಮಾರಸ್ವಾಮಿ & ಹೆಚ್.‌ಡಿ.ದೇವೇಗೌಡರು ಕೇಂದ್ರವನ್ನು ಒತ್ತಾಯಿಸಲಿ ಎಂದು ಆಗ್ರಹಿಸಿದ ಆರ್.‌ಆಂಜನೇಯ ರೆಡ್ಡಿ

ಬೆಂಗಳೂರು: ಬರಪೀಡಿತ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ಎತ್ತಿನಹೊಳೆ ಯೋಜನೆಯ ಭೈರಗೊಂಡ್ಲು ಜಲಾಶಯದ ಬಗ್ಗೆ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.‌ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರದ ಬಗ್ಗೆ ಎರಡೂ ಜಿಲ್ಲೆಗಳಲ್ಲಿ ಈಗ ವ್ಯಾಪಕ ಚರ್ಚೆ ಆಗುತ್ತಿದೆ.

ಯೋಜನೆಯ ಕಾಮಗಾರಿ ತೆವಳುತ್ತಾ ಸಾಗುತ್ತಿದ್ದು, ಮತ್ತೊಮ್ಮೆ ಹೊಸ ಸಮಗ್ರ ಯೋಜನಾ ವರದಿ (ಡಿಪಿಆರ್) ಮಾಡಿಕೊಂಡು ಯೋಜನಾ ವೆಚ್ಚವನ್ನು 23,000 ಕೋಟಿ ರೂ.ಗಳಿಗೆ ಹೆಚ್ಚಿಸಿಕೊಳ್ಳುವ ಹಾಗೂ ಈ ಯೋಜನೆಗೆ ರಾಷ್ಟ್ರೀಯ ಯೋಜನಾ ಸ್ಥಾನಮಾನಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹಾಕಿ ಮತ್ತಷ್ಟು ಹಣವನ್ನು ಕೊಳ್ಳೆ ಹೊಡೆಯುವ ಹುನ್ನಾರವನ್ನು ಸಿಕೆನ್ಯೂಸ್ ನೌ ಬಯಲಿಗೆಳೆದ ಬೆನ್ನಲ್ಲಿಯೇ ಸಿಎಂಗೆ  ಪತ್ರ ಬರೆದಿದ್ದಾರೆ ಕುಮಾರಸ್ವಾಮಿ.

ಅವರು, ಯೋಜನೆಯ ವಿಳಂಬ ಅಥವಾ ಭೈರಗೊಂಡ್ಲು ಜಲಾಶಯದ ಬಗ್ಗೆ ಪ್ರಸ್ತಾಪ ಮಾಡುವುದೇನೋ ಸರಿ. ಆದರೆ, ನೀರೇ ಇಲ್ಲದ ಕಾಗದದ ಮೇಲಿನ ಹುಲಿಯಂತಾಗಿರುವ ಈ ಯೋಜನೆಯ ʼಜಲ ವಿಜ್ಞಾನʼದ (ಹೈಡ್ರಾಲಜಿ) ಮರು ಅಧ್ಯಯನಕ್ಕೆ ಕೇಂದ್ರದ ಸರಕಾರದ ಮೇಲೆ ಒತ್ತಡ ಹೇರಬೇಕು. ಈ ನಿಟ್ಟಿನಲ್ಲಿ ಅವರು ತಮ್ಮ ತಂದೆಯೂ ಆದ ಮಾಜಿ ಪ್ರಧಾನಿ ಹೆಚ್.‌ಡಿ.ದೇವೇಗೌಡರ ಜತೆಗೂಡಿ ದನಿ ಎತ್ತಲಿ ಎಂಬ ಒತ್ತಾಯ ಎರಡೂ ಜಿಲ್ಲೆಗಳಲ್ಲಿ ಕೇಳಿಬಂದಿದೆ.

ಎಚ್ಡಿಕೆ ಬರೆದ ಪತ್ರದಲ್ಲೇನಿದೆ?

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ದೇವರಾಯನದುರ್ಗದ ಬಳಿಯ ಭೈರಗೊಂಡ್ಲುವಿನಲ್ಲಿ ನಿರ್ಮಾಣ ಮಾಡಲಾಗುತ್ತಿರುವ 5.78 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದ ಬಗ್ಗೆ ಪತ್ರದಲ್ಲಿ ಕುಮಾರಸ್ವಾಮಿ ಗಂಭೀರ ಪ್ರಶ್ನೆ ಎತ್ತಿದ್ದಾರೆ.

yetthinahole 1Download

ಮೊದಲು ಇಲ್ಲಿ 10 ಟಿಎಂಸಿ ಕೆಪಾಸಿಟಿಯ ಜಲಾಶಯ ನಿರ್ಮಾಣ ಮಾಡುವ ಉದ್ದೇಶವಿತ್ತು ಸರಕಾರಕ್ಕೆ. ಆದರೆ, ಅರಣ್ಯ ಹಾಗೂ ವನ್ಯ ಸಂಪತ್ತು ಮುಳುಗಡೆಯಾಗುತ್ತದೆ ಎಂಬ ಕಾರಣಕ್ಕೆ ನೀರಿನ ಸಂಗ್ರಹ ಪ್ರಮಾಣವನ್ನು 10ರಿಂದ 5.78 ಟಿಎಂಸಿಗೆ ಕುಗ್ಗಿಸಿ ಸರಕಾರ ಅನಮೋದನೆ ನೀಡಿತ್ತು. ಈಗ ನೋಡಿದರೆ, ಭೂ ಸ್ವಾಧೀನಕ್ಕೆ ಕಷ್ಟವಾಗುತ್ತಿದೆ ಎಂಬ ನೆಪವೊಡ್ಡಿ ನೀರಿನ ಸಂಗ್ರಹ ಪ್ರಮಾಣವನ್ನು ಕೇವಲ 2 ಟಿಎಂಸಿಗೆ ಇಳಿಸುವ ಹುನ್ನಾರವನ್ನು ವಿಶ್ವೇಶ್ವರಯ್ಯ ಜಲ ನಿಗಮ ನಡೆಸುತ್ತಿದೆ ಎಂಬ ಅಂಶವನ್ನು ಕುಮಾರಸ್ವಾಮಿ ಅವರು ಪ್ರಸ್ತಾಪ ಮಾಡಿದ್ದಾರಲ್ಲದೆ, ಕೂಡಲೇ ಈ ಕ್ರಮವನ್ನು ಕೈಬಿಡಬೇಕು ಎಂದು ಪತ್ರದಲ್ಲಿ ಒತ್ತಾಯ ಮಾಡಿದ್ದಾರೆ.

ಪತ್ರದ ಬಗ್ಗೆ ಹೋರಾಟಗಾರರು ಹೇಳುವುದೇನು?

ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗೆ ಬರೆದ ಪತ್ರವಾಗಲಿ ಅಥವಾ ಅದರಲ್ಲಿ ಪ್ರಸ್ತಾಪ ಮಾಡಿದ ಅಂಶಗಳ ಬಗ್ಗೆ ಆಗಲಿ ನಮ್ಮ ತಕರಾರಿಲ್ಲ ಎಂದಿರುವ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ, “ಕುಮಾರಸ್ವಾಮಿ ಅವರು ಯೋಜನೆಯ ಇತರೆ ಅಂಶಗಳ ಬಗ್ಗೆ ದನಿ ಎತ್ತುವುದಕ್ಕಿಂತ ಎತ್ತಿನಹೊಳೆ ಯೋಜನೆಯಿಂದ ನಿಜವಾಗಿಯೂ ನೀರು ಸಿಗುತ್ತದಾ? ಸರಕಾರ ಮತ್ತು ಗುತ್ತಿಗೆದಾರರು ಹೇಳುವಷ್ಟು ನೀರು ಅಲ್ಲಿ ಲಭ್ಯವಾಗುತ್ತದಾ? ಎಂದು ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಪ್ರಶ್ನೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.

  • ಆರ್.‌ ಆಂಜನೇಯ ರೆಡ್ಡಿ

ಎತ್ತಿನಹೊಳೆ ಯೋಜನೆಯ ಬಗ್ಗೆ 2012ರಲ್ಲೇ ಕೇಂದ್ರಿಯ ಜಲ ಆಯೋಗ (Central Water Commission-CWC) ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ದಿನಾಂಕ 9-5-2012ರಂದು ರಾಜ್ಯ ಸರಕಾರಕ್ಕೆ ಮಹತ್ತ್ವದ ಪತ್ರ ಬರೆದು ಕಠಿಣ ಎಚ್ಚರಿಕೆ ನೀಡಿತ್ತು.

“ಯೋಜನೆಯಲ್ಲಿ ಅನೇಕ ಲೋಪದೋಷಗಳಿದ್ದು, ಪ್ರತಿಕೂಲಕರ ಫಲಿತಾಂಶ ಕಟ್ಟಿಟ್ಟ ಬುತ್ತಿ. ಕನಿಷ್ಠ ಒಂದು ಮಳೆ ವರ್ಷದಲ್ಲಾದರೂ ಯೋಜನಾ ಪ್ರದೇಶದ ಮಳೆಯ ಪ್ರಮಾಣದ ಅಧ್ಯಯನ, ಮಳೆ ನೀರಿನ ಇಳುವರಿ, ಸಂಗ್ರಹಗಾರಗಳ ಸಾಮರ್ಥ್ಯ, ಪಶ್ಚಿಮ ಇಳಿಜಾರಿನಿಂದ ಪೂರ್ವಕ್ಕೆ ಸಾಗಿಸಬಹುದಾದ ನೀರಿನ ಪ್ರಮಾಣದ ನಿಖರ ಅಧ್ಯಯನ ಮಾಡದೇ ಯೋಜನೆಯನ್ನು ಜಾರಿಗೆ ತರುವುದು ಸೂಕ್ತವಲ್ಲ. ಯೋಜನೆ ಹಾಗೂ ಯೋಜನೆಯ ಸಮಗ್ರ ಜಲವಿಜ್ಞಾನ (Hydrology)ದ ಮರು ಅಧ್ಯಯನ ಮಾಡಲೇಬೇಕು” ಎಂಬ ಅಂಶಗಳನ್ನು ಆ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿತ್ತು. ಜತೆಗೆ, ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ (NIH) ಕೂಡ ಕೆಲ ಆಕ್ಷೇಪಗಳನ್ನು ಎತ್ತಿತ್ತು ಎಂಬ ಅಂಶವನ್ನು ರೆಡ್ಡಿ ಅವರು ಎಚ್‌ಡಿಕೆಗೆ ನೆನಪು ಮಾಡಿದ್ದಾರೆ.

ಕೇಂದ್ರಿಯ ಜಲ ಆಯೋಗ ನೀರಿನ ಲಭ್ಯತೆಯ ಬಗ್ಗೆಯೇ ಎತ್ತಿದ್ದ ಪ್ರಶ್ನೆಯನ್ನು ಅಲಕ್ಷಿಸಿ ಈಗಾಗಲೇ ಎರಡು ಸಲ ಡಿಪಿಆರ್‌ ಮಾಡಿಕೊಂಡ ಯೋಜನೆಯೊಳಗಿನ ಒಳಸುಳಿಗಳ ಬಗ್ಗೆ ಹೆಚ್‌ಡಿಕೆ ಮಾತನಾಡಬೇಕು ಎಂದು ಒತ್ತಾಯ ಮಾಡಿದ ಆಂಜನೇಯ ರೆಡ್ಡಿ, ಅತಿ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿಯಾದ ನೀವು ಹಾಗೂ ಮಾಜಿ ಪ್ರಧಾನಿಯೂ ಆಗಿರುವ ನಿಮ್ಮ ತಂದೆಯವರಾದ ಹೆಚ್.‌ಡಿ.ದೇವೇಗೌಡರು ಕೇಂದ್ರ ಸರಕಾರಕ್ಕೆ ಪತ್ರ ಬರೆದು ಅಥವಾ ವಿಧಾನಸಭೆ, ಸಂಸತ್ತಿನಲ್ಲಿ ಇಡೀ ಯೋಜನೆಯ ʼಜಲ ವಿಜ್ಞಾನʼದ ಸಮಗ್ರ ಮರು ಅಧ್ಯಯನಕ್ಕೆ ಒತ್ತಾಯ ಮಾಬೇಕು ಎಂದು ಆಗ್ರಹಪಡಿಸಿದ್ದಾರೆ.

ಬರಪೀಡಿತ ಜಿಲ್ಲೆಗಳ ಪರವಾಗಿ ನೀವಿಬ್ಬರೂ ದನಿಯೆತ್ತಿದರೆ ನ್ಯಾಯ ಸಿಗುವ ಸಾಧ್ಯತೆ ಇದೆ. ಏಕೆಂದರೆ, ಎತ್ತಿನಹೊಳೆ ಕಾಂಗ್ರೆಸ್‌ & ಬಿಜೆಪಿ ಸರಕಾರಗಳ ಪಾಪದ ಕೂಸು. ನಿಮ್ಮ ನೇತೃತ್ವದ ಸಮ್ಮಿಶ್ರ ಸರಕಾರದ ಅವಧಿಯಲ್ಲಾದರೂ ಈ ಯೋಜನೆ ಒಳಸುಳಿಗಳ ಬಗ್ಗೆ ನೀವು ಕ್ರಮ ವಹಿಸುವ ನಿರೀಕ್ಷೆ ನಮಗಿತ್ತು. ಆದರೆ, ನೀವು ಕೂಡ ಅಲಕ್ಷ್ಯ ಮಾಡಿದಿರಿ. ಈಗ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದರೆ ಉಪಯೋಗ ಇಲ್ಲ. ಇಡೀ ಯೋಜನೆಯಲ್ಲಿ ಲಭ್ಯವಾಗುವ ನೀರಿನ ಬಗ್ಗೆ ಖಾತರಿ ಮಾಡಿಕೊಳ್ಳಿ. ಈ ಬಗ್ಗೆ ಕೇಂದ್ರಿಯ ಜಲ ಆಯೋಗದಿಂದ ಜಲ ವಿಜ್ಞಾನದ ಮರು ಅಧ್ಯಯನ ಮಾಡಿಸಲು ನಿಮ್ಮ ತಂದೆಯವರ ಜತೆ ಸೇರಿ ನೀವೂ ಒತ್ತಾಯ ಮಾಡಿ. ಸದನದ ಹೊರಗೆ ಮತ್ತು ಒಳಗೆ ದನಿ ಎತ್ತಿ.

ಆರ್.‌ಆಂಜನೇಯ ರೆಡ್ಡಿ, ಅಧ್ಯಕ್ಷ, ಶಾಶ್ವತ ನೀರಾವರಿ ಹೋರಾಟ ಸಮಿತಿ

ಗುತ್ತಿಗೆದಾರರು ಹಾಗೂ ಸರಕಾರ ಹೇಳಿದಷ್ಟು ನೀರು ಎತ್ತಿಹೊಳೆ ಯೋಜನೆಯಿಂದ ಸಿಗುವುದಿಲ್ಲ ಎಂಬುದು ಈಗಾಗಲೇ ಅನೇಕ ವೈಜ್ಞಾನಿಕ ಅಧ್ಯಯನಗಳು ಹಾಗೂ ವೈಜ್ಞಾನಿಕ ಸಂಸ್ಥೆಗಳ ಪರಿಶೋಧನೆಯಿಂದ ಸ್ಪಷ್ಟವಾಗಿ ಗೊತ್ತಾಗಿದೆ. ಆದರೆ, ಈ ವೈಜ್ಞಾನಿಕ ಅಭಿಪ್ರಾಯವನ್ನು ಸರಕಾರವು ಗುತ್ತಿಗೆದಾರರ ಮರ್ಜಿಗೆ ಒಳಪಟ್ಟು ಅಲಕ್ಷ್ಯ ಮಾಡುತ್ತಿದೆ. ಗುತ್ತಿಗೆದಾರರ ಧನದಾಹ, ರಾಜಕಾರಣಿಗಳು ಮತ್ತು ಅಧಿಕಾರಶಾಹಿಯ ಭ್ರಷ್ಟಾಚಾರದಿಂದ ಈ ಯೋಜನೆ ಹಳ್ಳ ಹಿಡಿಯುತ್ತಿದೆ. ಈಗಲಾದರೂ ರಾಜಕೀಯವನ್ನು ಬದಿಗಿಟ್ಟು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಎರಡೂ ಜಿಲ್ಲೆಗಳ ಜನರ ಬಗ್ಗೆ ಬದ್ಧತೆ ಇದ್ದರೆ ʼಜಲ ವಿಜ್ಞಾನʼದ ಮರು ಅಧ್ಯಯನದ ಬಗ್ಗೆ ಒತ್ತಾಯಿಸಲಿ. ಆ ಮೂಲಕ ಎತ್ತಿನಹೊಳೆ ಬಗ್ಗೆ ಭರವಸೆ ಕಳೆದುಕೊಂಡಿರುವ ಜಿಲ್ಲೆಗಳಿಗೆ ಅನ್ಯಾಯವಾಗುವುದನ್ನು ತಪ್ಪಿಸಲಿ ಎಂದು ಆಂಜನೇಯ ರೆಡ್ಡಿ ಒತ್ತಾಯ ಮಾಡಿದ್ದಾರೆ.

ಎತ್ತಿನಹೊಳೆ ಯೋಜನೆ ಶುರುವಾಗಿ ಇಷ್ಟು ವರ್ಷಗಳಾದರೂ ಯೋಜನೆಯ ಫಲದ ಬಗ್ಗೆ ಜನರಿಗೆ ನಂಬಿಕೆ ಬಂದಿಲ್ಲ. ಕೇಂದ್ರ ಸರಕಾರದ ಪ್ರತಿಷ್ಟಿತ ಕೇಂದ್ರಿಯ ಜಲ ಆಯೋಗದ ವರದಿಯನ್ನೇ ಕಸದ ಬುಟ್ಟಿಗೆ ಹಾಕಿ ಕೇವಲ ಖಾಸಗಿ ಏಜೆನ್ಸಿಗಳ ವರದಿ, ಗುತ್ತಿಗೆದಾರರ ಮೇಲೆ ರಾಜ್ಯದ ಅವಲಂಬನೆಯಾಗಿದ್ದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿರುವ ರೆಡ್ಡ ಅವರು, ಈಗಲಾದರೂ ಆಯೋಗದಿಂದ ಯೋಜನೆಯ ಆತ್ಮವಾದ ಹೈಡ್ರಾಲಜಿ ಅಧ್ಯಯನ ಮಾಡಿಸಿ ಬರಪೀಡಿತ ಜಿಲ್ಲೆಗಳಿಗೆ ಆಗುವ ಮಹಾಮೋಸವನ್ನು ತಪ್ಪಿಸಲು ಶ್ರಮಿಸಬೇಕು ಎಂದು ಕುಮಾರಸ್ವಾಮಿ ಅವರನ್ನು ಒತ್ತಾಯ ಮಾಡಿದ್ದಾರೆ.

ಯಡಿಯೂರಪ್ಪ ಸಂಶಯಾಸ್ಪದ ಹೆಜ್ಜೆ

  • ಎತ್ತಿನಹೊಳೆ ಯೋಜನೆಯನ್ನು ವೇದಾವತಿ ವ್ಯಾಲಿಗೆ ತಿರುಗಿಸಲು ಇದೇ ಸಭೆಯಲ್ಲಿ ಯಡಿಯೂರಪ್ಪ ಸೂಚಿಸಿದ್ದರು!!

ಮುಖ್ಯಮಂತ್ರಿಯಾಗಿ ಜಲ ಸಂಪನ್ಮೂಲ ಖಾತೆಯನ್ನೂ ತಮ್ಮ ಬಳಿಯೇ ಇಟ್ಟುಕೊಂಡಿದ್ದ ಯಡಿಯೂರಪ್ಪ ಅವರು ಅಧಿಕಾರದಿಂದ ನಿರ್ಗಮಿಸುವುದಕ್ಕೆ ಕೆಲ ದಿನಗಳ ಹಿಂದೆ ಸಮಗ್ರ ಯೋಜನಾ ವರದಿಯಲ್ಲೇ ಇಲ್ಲದ ವೇದಾವತಿ ವ್ಯಾಲಿಗೆ ಎತ್ತಿಹೊಳೆಯನ್ನು ತಿರುಗಿಸಬೇಕು ಎಂದು ಅಧಿಕಾರಿಗಳಿಗೆ ಡೆಡ್‌ಲೈನ್‌ ಹಾಕಿದ್ದರು. ಲಭ್ಯವಿರುವ ಮಾಹಿತಿ ಪ್ರಕಾರ ಅವರು 1,500 ಕೋಟಿ ರೂ. ಬಿಡುಗಡೆ ಮಾಡಿ ಹೋಗಿದ್ದಾರೆ ಎಂಬ ಅನುಮಾನವಿದೆ. ಈ ಬಗ್ಗೆಯೇ ಬಹಿರಂಗವಾಗಿ ಕುಮಾರಸ್ವಾಮಿ ಮಾತನಾಡಬೇಕು ಎಂಬುದು ಆಂಜನೇಯ ರೆಡ್ಡಿ ಆಗ್ರಹ.

ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ
ಎತ್ತಿನಹೊಳೆ ಎತ್ತ? ಈವರೆಗೆ 9003.86 ಕೋಟಿ ರೂ. ಖರ್ಚು!!

ವೇದಾವತಿ ವ್ಯಾಲಿಯ ಪ್ರಸ್ತಾಪ ಇಡೀ ಎತ್ತಿನಹೊಳೆ ಯೋಜನೆ ಸಾಚಾತನದ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಿದೆ. ಕೇವಲ ಚಿಕ್ಕಬಳ್ಳಾಪುರ, ಕೋಲಾರದ ಜನರ ಕುಡಿಯುವ ನೀರಿನ ಉದ್ದೇಶಕ್ಕಾಗಿ ರೂಪುಗೊಂಡ ಈ ಯೋಜನೆ ಕ್ರಮೇಣ ಅನೇಕ ಅಡ್ಡದಾರಿಗಳತ್ತ ಹೊರಳುತ್ತಿದೆ. ನೀರಿನ ಲಭ್ಯತೆಯೇ ಇಲ್ಲದ, ಕೇಂದ್ರಿಯ ಜಲ ಆಯೋಗ ಒಪ್ಪಿಕೊಳ್ಳದ ಈ ಯೋಜನೆಗೆ ಸಾವಿರಾರು ಕೋಟಿ ರೂ. ಹಣ ಸುರಿದು, ಅಂತಿಮವಾಗಿ ನಿಗದಿತ ಭಾಗಕ್ಕೆ ನೀರನ್ನೇ ಕೊಡದೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆಯ ವೇದಾವತಿ ವ್ಯಾಲಿಯಲ್ಲಿ ಯೋಜನೆಯನ್ನು ಸಮಾಧಿ ಮಾಡಲು ಹುನ್ನಾರ ನಡೆದಿದೆ ಎಂದು ಆಂಜನೇಯ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ
ಎತ್ತಿನಹೊಳೆಯಲ್ಲಿ ಮತ್ತಷ್ಟು ಎತ್ತುವಳಿ! ರಾಷ್ಟ್ರೀಯ ಯೋಜನೆ ಸ್ಟೇಟಸ್ ಎಂಬ ಸ್ಮಾರ್ಟ್ ಐಡಿಯಾ!!

ಮಾಜಿ ಪ್ರಧಾನಿ ಹೆಚ್.‌ಡಿ.ದೇವೇಗೌಡರು ಸ್ವತಃ ನೀರಾವರಿ ವಿಚಾರಗಳಲ್ಲಿ ನೈಪುಣ್ಯತೆ ಹೊಂದಿದವರಾಗಿದ್ದು, ಅವರು ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಪ್ರದಾನಿ ಮೇಲೆ ಒತ್ತಡ ತರಬೇಕು ಹಾಗೂ ಸಂಸತ್ತಿನಲ್ಲೂ ದನಿ ಎತ್ತಬೇಕು ಎಂದು ಅವರ ಒತ್ತಾಯವಾಗಿದೆ.

Tags: basavaraj bommaichikkaballapuracwcdrinking water projecthd devegowdahd kumaraswamykarnatakakolaryettinaholeYettinahole project
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ದಿನ 2: ಸಿಇಟಿ ಪರೀಕ್ಷೆ ಸುಖಾಂತ್ಯ

ಆ.28 ರಿಂದ 30ರವರೆಗೆ ಸಿಇಟಿ-2021 ಪರೀಕ್ಷೆ

Leave a Reply Cancel reply

Your email address will not be published. Required fields are marked *

Recommended

ಭಾರತೀಯ ಸಂಸ್ಕೃತಿ ಅಧ್ಯಯನ ಸಮಿತಿ ತುಂಬಾ ಉತ್ತರ ಭಾರತೀಯರು!! ದಕ್ಷಿಣ ಭಾರತಕ್ಕೆ ಅನ್ಯಾಯವಾಗಿದೆ ಎಂದ ಎಚ್‌ಡಿಕೆ

ಅನ್ನದ ಭಾಷೆಯಾಗಲಿ ಕನ್ನಡ

4 years ago
ತಮಿಳುನಾಡಿಗೆ ಕೇರ್‌ ಮಾಡಬೇಡಿ, ಮೊದಲು ಪ್ರಧಾನಿ ಮನವೊಲಿಸಿ

ಕೊಲೆಯಾದ ಕೂಡಲೇ ಕಾಲ್ಕಿತ್ತ ಸಿಎಂ!!

3 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ