• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಕಾಸಿಗಾಗಿ ಪೋಸ್ಟಿಂಗ್‌‌: ಕೋಲಾರ ಕೇಸಿನ ಮೇಲೆ ರಾಜಕೀಯ ಒತ್ತಡ; ದೂರೇ ಅದಲು ಬದಲು! ಧುತ್ತನೆದ್ದ 2ನೇ FIR!!

P K Channakrishna by P K Channakrishna
August 5, 2023
in CKPLUS, CRIME, EDITORS'S PICKS, STATE
Reading Time: 3 mins read
0
ಕಾಸಿಗಾಗಿ ಪೋಸ್ಟಿಂಗ್‌‌: ಕೋಲಾರ ಕೇಸಿನ ಮೇಲೆ ರಾಜಕೀಯ ಒತ್ತಡ; ದೂರೇ ಅದಲು ಬದಲು! ಧುತ್ತನೆದ್ದ 2ನೇ FIR!!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಜತೆ ಮುಭಾರಕ್.‌ (ಬಲದಿಂದ ಎರಡನೇ ವ್ಯಕ್ತಿ)

1.1k
VIEWS
FacebookTwitterWhatsuplinkedinEmail

₹1.50 ಕೋಟಿ ಡಿಮಾಂಡ್;‌ ಸಿಎಂ ರಾಜಕೀಯ ಕಾರ್ಯದರ್ಶಿ, MLC ನಸೀರ್‌ ಅಹಮದ್‌ ಹೆಸರಿನಲ್ಲಿ ವಂಚನೆ ಪ್ರಕರಣಕ್ಕೆ ಟ್ವಿಸ್ಟ್!! ಒತ್ತಡಕ್ಕೆ ಮಣಿದರಾ ಪೊಲೀಸರು

ಕೋಲಾರ: ಪೊಲೀಸ್‌ ಇಲಾಖೆಯಲ್ಲಿ ನಡೆಯುತ್ತಿರುವ ವರ್ಗಾವಣೆ ದಂಧೆ ಪರಾಕಾಷ್ಠೆ ಮುಟ್ಟಿರುವ ಬೆನ್ನಲ್ಲಿಯೇ ಕೋಲಾರದಲ್ಲಿ ನಡೆದಿರುವ FIR ತಿದ್ದುಪಡಿಯ ಕರ್ಮಕಾಂಡ ಅನೇಕ ತಿರುವುಗಳಿಗೆ, ಅನುಮಾನಗಳಿಗೆ ಕಾರಣವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಸದಸ್ಯ ನಸೀರ್ ಅಹ್ಮದ್ ಹೆಸರಿನಲ್ಲಿ ನಡೆದಿದೆ ಎನ್ನಲಾದ ವಂಚನೆ ಕೇಸಿನ ತನಿಖೆಯನ್ನು ಹಳ್ಳ ಹಿಡಿಸುವ ಪ್ರಯತ್ನ ನಡೆದಿದಿದ್ದು, ಕೋಲಾರ ಪೊಲೀಸರ ಮೇಲೆ ಅನೇಕ ಅನುಮಾನಗಳಿಗೆ ಕಾರಣವಾಗಿದೆ.

  • ಮೊದಲ FIR

ಅಲ್ಲದೆ; ಇಡೀ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೀತಿದಿಯಾ? ಎನ್ನುವ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಮಿಗಿಲಾಗಿ ವರ್ಗಾವಣೆಗಾಗಿ 1.50 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇರಿಸಿದ್ದ ಪ್ರಕರಣದಲ್ಲಿ ಎರಡು ಬಾರಿ FIR ಮಾಡಿರುವ ಕೋಲಾರ ಪೊಲೀಸರು ರಾತ್ರೋರಾತ್ರಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ದೂರನ್ನೇ ಅದಲು ಬದಲು ಮಾಡಿರುವ ಅತೀ ಚಾಣಾಕ್ಷ ಕೃತ್ಯ ಎಸಗಿದ್ದಾರೆ.

ಈ ಪ್ರಕರಣದಲ್ಲಿ ರಾಜಕೀಯ ಒತ್ತಡ ಕೆಲಸ ಮಾಡಿರುವುದು ಖಚಿತ ಎನ್ನಲಾಗಿದ್ದು, ಪ್ರಕರಣದಲ್ಲಿ ನಸೀರ್‌ ಅಹಮದ್‌ ಅವರೇ ನೇರ ಭಾಗಿ ಆಗಿದ್ದಾರಾ? ಅಥವಾ ಇಬ್ಬರು ಏಜೆಂಟ್‌ʼಗಳಷ್ಟೇ ಇದ್ದಾರಾ? ಎನ್ನುವ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕಿದೆ.

  • ಎರಡನೇ FIR
ಏನಿದು ಪ್ರಕರಣ?

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋಲಾರ ನಗರದ ಗಲ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಎರಡು FIR ಗಳನ್ನು ದಾಖಲು ಮಾಡಲಾಗಿದ್ದು, ಮೊದಲ FIRಗೂ ಎರಡನೇ FIRಗೂ ದೂರೇ ಅದಲು ಬದಲಾಗಿದೆ. ಆ ಎರಡೂ FIRಗಳು ಸಿಕೆನ್ಯೂಸ್‌ ನೌ ಗೆ ಲಭ್ಯವಾಗಿವೆ.

ಮೊದಲ FIRನಲ್ಲಿ ವರ್ಗಾವಣೆ ಒಂದನ್ನು ಮಾಡಿಸಿಕೊಡಲು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌ ಅವರ ಹೆಸರಿನಲ್ಲಿ 1.50 ಕೋಟಿ ರೂಪಾಯಿಗೆ ಡೀಲ್‌ ಕುದುರಿಸಿ, ಅದರ ಅಡ್ವಾನ್ಸ್‌ ಆಗಿ 25 ಲಕ್ಷ ರೂ. ಪಡೆಯಲಾಗಿತ್ತು ಎಂದು ಉಲ್ಲೇಖ ಮಾಡಲಾಗಿದೆ. ಬೆಂಗಳೂರಿನ ಆಡುಗೋಡಿಯ ಪ್ರತಾಪ್‌ ಬಿ.ಎನ್.‌ ಎಂಬುವವರ ದೂರನ್ನಾಧರಿಸಿ ಇಲ್ಲಿನ ಗಲ್‌ ಪೇಟೆ ಪೋಲೀಸರು ಮೊದಲ FIR ದಾಖಲಿಸಿದ್ದರು.

ಮೊದಲನೇ FIRನಲ್ಲಿ ದೂರುದಾರ ಪ್ರತಾಪ್ ವರ್ಗಾವಣೆ ವಿಚಾರಕ್ಕೆ ಹಣ ನೀಡಿದ್ದರು ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಈ ಕೇಸಿನಲ್ಲಿ ಹೊಸದಾಗಿ ನೀಡಿರುವ ದೂರಿನಲ್ಲಿ ವರ್ಗಾವಣೆ ಡೀಲಿಂಗ್ ಮಾಹಿತಿ ಮಾಯವಾಗಿ ʼಕಾಮಗಾರಿ ಬಾಕಿ ಬಿಲ್ ನೀಡಲು ಲಂಚಕ್ಕೆ ಬೇಡಿಕೆʼ ಎಂದು ಉಲ್ಲೇಖ ಮಾಡಲಾಗಿದೆ. ಜತೆಗೆ, ಬೆಂಗಳೂರಿನ ಉದ್ಯಮಿ ಹಾಗೂ ಗುತ್ತಿಗೆದಾರ ಪ್ರತಾಪ್ ದೂರು ನೀಡಿದ್ದಾರೆ ಎಂದಿದೆ. ಕೋಲಾರದ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಜುಲೈ 31ರಂದು ಅವರು ನೀಡಿದ್ದ ದೂರು ಇದಾಗಿದೆ.

ದೂರು ನೀಡಿದ ದಿನವೇ ಪ್ರತಾಪ್‌ ಅವರಿಂದ ಹಣ ಪಡೆದಿದ್ದ ಆರೋಪಿ ಹಾಗೂ ಕೋಲಾರ ನಗರಸಭೆ ಕಾಂಗ್ರೆಸ್ ಸದಸ್ಯ ಮುಬಾರಕ್‌ ಎಂಬಾತನನ್ನು ಬಂಧಿಸಿ, ಮರುದಿನ ಕೋರ್ಟ್ ನಲ್ಲಿ ಹಾಜರುಪಡಿಸಿದ್ದ ಪೊಲೀಸರು, ಕೊನೆಗೆ FIR ತಿದ್ದುಪಡಿ ಮಾಡಿದ್ದು, ದೂರುದಾರ ಪ್ರತಾಪ್ ಅವರ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

FIRನಲ್ಲಿ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರ ಹೆಸರಿದ್ದರೆ ಸರಕಾರಕ್ಕೆ ಮುಜುಗರ ತಪ್ಪದು ಎನ್ನುವ ಕಾರಣಕ್ಕೆ ಪ್ರಭಾವಿಗಳ ಒತ್ತಡಕ್ಕೆ ಒಳಗಾದ ಪ್ರತಾಪ್ ಹೊಸದಾಗಿ ದೂರು ನೀಡಿದರಾ? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಅಲ್ಲದೆ, ಒಂದೇ ಕೇಸ್ ನಲ್ಲಿ ಎರಡು ಬಾರಿ FIR ಮಾಡಿರುವ ಕೋಲಾರ ಗಲ್ ಪೇಟೆ ಠಾಣೆ ಪೊಲೀಸರ ಮೇಲೆ ರಾಜಕೀಯ ಒತ್ತಡ ಹೇರಲಾಗಿದೆಯಾ ಎನ್ನುವ ಅಂಶವೂ ವ್ಯಾಪಕವಾಗಿ ಹರಿದಾಡುತ್ತಿದೆ. ಇಷ್ಟಕ್ಕೂ ಪೊಲೀಸರ ಮೇಲೆ ಒತ್ತಡ ಹೇರಿದ ಶಕ್ತಿ ಯಾವುದು ಎನ್ನುವುದರತ್ತ ಎಲ್ಲರ ಗಮನ ನೆಟ್ಟಿದೆ. ಸದ್ಯ ನಿನ್ನೆ ಅರೋಪಿ ಮುಬಾರಕ್ ಗೆ ಕೋಲಾರ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ.

ಲಭ್ಯ ಮಾಹಿತಿ ಪ್ರಕಾರ ವರ್ಗಾವಣೆಗೆ 1.15 ಕೋಟಿ ಹಣಕ್ಕೆ ಬೇಡಿಕೆ ಇಟ್ಟು, 84 ಲಕ್ಷ ಹಣ ನೀಡಿರುವುದಾಗಿ ದೂರು ಗುತ್ತಿಗೆದಾರ ನೀಡಿರುವ ದೂರು ಈಗ ನೇರ ಸಿಎಂ ಕಚೇರಿಗೇ ಉರುಳಾಗುವ ಸಾಧ್ಯತೆ ಇದೆ. ಏಕೆಂದರೆ, ನಸೀರ್ ಅಹ್ಮದ್ ಗೆ ಈ ಮುಬಾರಕ್ ಪರಮಾಪ್ತ ಎನ್ನಲಾಗಿದೆ. ಪ್ರತಾಪ್‌ ಜತೆ ಡೀಲ್‌ ಕುದುರಿಲು ಮುಬಾರಕ್‌ ನಡೆಸಿರುವ ದೂರವಾಣಿ ಸಂಭಾಷಣೆಯ ವಿವರಗಳೂ ಪ್ರತಾಪ್‌ ಬಳಿ ಇವೆ ಎನ್ನಲಾಗಿದ್ದು, ಅವು ಈಗಾಗಲೇ ಯಾರಿಗಾದರೂ ತಲುಪಿರಬಹುದಾ? ಎನ್ಜುವ ಅನುಮಾನವಿದೆ.

ಮುಭಾರಕ್

ಈ ಡೀಲ್‌ʼಗೆ ಸಂಬಂಧಿಸಿದಂತೆ ಕೋಲಾರ, ಬೆಂಗಳೂರು ಸೇರಿದಂತೆ ಹಲವಾರು ಕಡೆ ಮಧ್ಯವರ್ತಿಗಳನ್ನು ಪ್ರತಾಪ್‌ ಭೇಟಿ ಮಾಡಿದ್ದು, ಎಲ್ಲಾ ಕಡೆಯೂ ನಸೀರ್‌ ಅಹಮದ್‌ ಹೆಸರು ಉಲ್ಲೇಖ ಆಗಿದೆ ಎಂದು ಗೊತ್ತಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಗಲ್‌ ಪೇಟೆ ಪೊಲೀಸರು ಆರೋಪಿ ಮುಬಾರಕ್‌ ನನ್ನು ಬಂಧಿಸಿದ್ದರು.

ಪ್ತಕರಣದ ಅಸಲಿ ಕಥೆ

ಆಡುಗೋಡಿ ಪೋಲೀಸ್ ಠಾಣೆಗೆ ಆಯುಧ ತರಬೇತಿಗೆ ತೆರಳಿದ್ದಾಗ ಪ್ರತಾಪ್‌ ಗೆ ಪರಿಚಯವಾಗಿದ್ದ ಕೋಲಾರದ ಪೀರ್ ಸೈಯ್ಯದ್ ಖಾದರ್, ನಂತರ ನನಗೆ ದೊಡ್ಡ ದೊಡ್ಡ ವ್ಯಕ್ತಿಗಳು ಪರಿಚಯ ಎಂದು ನಂಬಿಸಿದ್ದ. ವರ್ಗಾವಣೆ ವಿಷಯಕ್ಕೆ ನೆರವು ಕೋರಿದ್ದ ಪ್ರತಾಪ್‌ʼಗೆ ನಗರಸಭೆ ಸದಸ್ಯ ಮುಭಾರಕ್‌ ಪರಿಚಯ ಮಾಡಿಸಿದ್ದ ಸೈಯ್ಯದ್ ಖಾದರ್. ಆಗ ಕೆಲಸ ಮಾಡಿಕೊಡುವುದಾಗಿ ಹೇಳಿ ಎಂಎಲ್ಸಿ ನಜೀರ್ ಅಹ್ಮದ್ ಬಳಿ ಮಾತನಾಡಿ ತಿಳಿಸುತ್ತೇನೆ ಎಂದು ಮತ್ತೂ ನಂಬಿಸಿದ್ದ ಮುಬಾರಕ್ ಮಾತನ್ನು ಪ್ರತಾಪ್‌ ಪೂರ್ಣವಾಗಿ ನಂಬಿದ್ದರು.

ದಿನಾಂಕ 2.7.2023 ರಂದು ವರ್ಗಾವಣೆಗೆ ಬಗ್ಗೆ ಬೆಂಗಳೂರಿನ ರೇಸ್ ಕೋರ್ಸ್ ಬಳಿ ಮಾತನಾಡಿದ್ದ ಮುಬಾರಕ್, ವರ್ಗಾವಣೆ ಮಾಡಿಸಲು 1.50 ಕೋಟಿ ಬೇಡಿಕೆ ಇಟ್ಟಿದ್ದರು. ಅದಕ್ಕೆ ಮುಂಗಡವಾಗಿ 25 ಲಕ್ಷ ರೂ. ಪಡೆದುಕೊಂಡಿದ್ದರು. ನಂತರ ಕೋಲಾರದ ಬೈಪಾಸ್ನಲ್ಲಿರುವ ನಾಗಾರ್ಜುನ ಹೋಟೆಲ್ ಬಳಿ ನಗದು ರೂಪದಲ್ಲಿ ದಿನಾಂಕ 22.7.2023 ರಂದು ಸೈಯ್ಯದ್ ಪಿರ್ ಗೆ 9 ಲಕ್ಷ ರೂಪಾಯಿ ಕೊಟ್ಟಿದ್ದರು ಪ್ರತಾಪ್.‌ ಹಣ ಪಡೆದ ಮೇಲೆ ವರ್ಗಾವಣೆ ಆಗುವುದು ತಡವಾದ ಹಿನ್ನೆಲೆಯಲ್ಲಿ ಪ್ರತಾಪ್‌ ಮುಬಾರಕ್‌ ಮೇಲೆ ಒತ್ತಡ ಹೇರಿದ್ದರು. ಇದರಿಂದ ಕೊಂಚ ವಿಚಲಿನಾಗಿದ್ದ ಮುಬಾರಕ್‌ ವರ್ಗಾವಣೆಯ ಬಗ್ಗೆ ನಜೀರ್ ಅಹ್ಮದ್ ಜತೆ ನಡೆಸಿದ ಸಂಬಾಷಣೆ ಆಡಿಯೋ ದಾಖಲೆಗಳನ್ನು ಪ್ರತಾಪ್‌ ಗೆ ಕಳುಹಿಸಿದ್ದರು. ಅಲ್ಲಿಗೂ ಸುಮ್ಮನಾಗದ ಪ್ರತಾಪ್‌ ನಿರಂತರ ಒತ್ತಡ ಹೇರುತ್ತಲೇ ಇದ್ದರು. ಇಷ್ಟರಲ್ಲಿ ಇಡೀ ಪ್ರಕರಣದ ವಿವರಗಳು ಎಲ್ಲೆಡೆ ಹರಿದಾಡತೊಡಗಿದ್ದವು.

ಕೊನೆಗೆ ಈ ಇಕ್ಕಟ್ಟಿನಿಂದ ಹೊರಬರಬೇಕು ಎಂದು ನಿರ್ಧರಿಸಿದ ಮುಬಾರಕ್‌, ಕೋಲಾರ ಹಾಲು ಒಕ್ಕೂಟದಲ್ಲಿ ಗುತ್ತಿಗೆ ಕೊಡಿಸುವುದಾಗಿ ನಂಬಿಸಿ ಮಾಲೂರು ಶಾಸಕ ನಂಜೇಗೌಡರರನ್ನು ಪ್ರತಾಪ್‌ ಗೆ ಪರಿಚಯಿಸಿದ್ದ. ನಂಜೇಗೌಡರನ್ನು ಪರಿಚಯಿಸಿದ ಮೇಲೆ ಗುತ್ತಿಗೆ ಕೊಡಿಸುವುದಾಗಿ ತಿಳಿಸಿ, ಮತ್ತೊಂದು ಡೀಲ್ ಗೆ ಕೈ ಹಾಕಿದ ಆರೋಪಿಗಳು, ಡೈರಿ ಅಧ್ಯಕ್ಷರು 25 ಲಕ್ಷಕ್ಕೆ ಬೇಡಿಕೆ ಇಟ್ಟಿರುವುದಾಗಿ ಹೇಳಿ ಹೊಸ ಕಥೆ ಕಟ್ಟಿದ್ದರು. ಆಗ ಪ್ರತಾಪ್ ಜಾಗೃತರಾಗಿದ್ದಾರೆ.

ಕೊನೆಗೆ ಈ ಬಗ್ಗೆ ತಮ್ಮ ಸಂಬಂದಿಕರ ಬಳಿ ಅವರು ಆಳವಾಗಿ ವಿಚಾರಿಸಿಕೊಂದಿದ್ದಾರೆ. ಡೈರಿ ಡೀಲ್ ಕೈಕೊಡಲಿದೆ ಎಂದು ಅವರಿಗೆ ಸ್ಪಷ್ಟವಾಗಿ ಗೊತ್ತಾಗಿದೆ. ಅದರಲ್ಲೂ ಮಾಲೂರು ಶಾಸಕ ನಂಜೇಗೌಡರು ಹಾಗೆಲ್ಲಾ ಹಣ ಪಡೆಯುವುದಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ. ಅಂತಿಮವಾಗಿ ಹಣಕ್ಕಾಗಿ ಪ್ರತಾಪ್‌ ಆರೋಪಿ ಮುಬಾರಕ್‌ ಗೆ ಗಂಟು ಬಿದ್ದಿದ್ದಾರೆ. ಹಣ ವಾಪಸ್ ಕೇಳಿದ್ದಕ್ಕೆ ಬೆದರಿಕೆ ಹಾಕಿರುವ ಮುಬಾರಕ್‌ ವಿರುದ್ಧ ಪ್ರತಾಪ್‌ ಧೈರ್ಯವಾಗಿ ದೂರು ದಾಖಲಿಸಿದ್ದಾರೆ. ದೂರು ದಾಖಲು ಮಾಡಿಕೊಂಡಿದ್ದ ಗಲ್‌ ಪೇಟೆ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಯಾವಾಗ ಈ FIR ದಾಖಲಾಯಿತೋ, ಮೊದಲೇ ವರ್ಗಾವಣೆ ದಂಧೆಯ ಸುಳಿಯಲ್ಲಿ ಸಿಲುಕಿದ್ದ ಕೆಲ ರಾಜಕೀಯ ಶಕ್ತಿಗಳು ಜಾಗೃತವಾಗಿವೆ. ರಾಜಕೀಯ ಪ್ರಭಾವ ದೊಡ್ಡ ಪ್ರಮಾಣದಲ್ಲಿ ಈ ಪ್ರಕರಣದಲ್ಲಿ ಕೆಲಸ ಮಾಡಿದೆ. ಅಲ್ಲಿಗೆ ದೂರುಗಳು ಅದಲು ಬದಲಾಗಿ ಹೊಸ FIR ಜನ್ಮ ತಾಳಿದೆ.

ಈ ಕೆಳಗಿನ ಸುದ್ದಿಯನ್ನೂ ಓದಿ

ಗೃಹ ಇಲಾಖೆಯಲ್ಲಿ yst ಟ್ಯಾಕ್ಸ್ ದಂಧೆಕೋರರು; 250 ಕೋಟಿ ಕಲೆಕ್ಷನ್’ಗೆ ಬಿಡಿಎಗೆ ಟಾರ್ಗೆಟ್ ಫಿಕ್ಸ್
Tags: cash for postingchief minister political secretaryckcknewsnowcorruptioncrimekarnatakaKarnataka transfer scamkolarNaseer Ahamadpolice
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಮುಂದಿನ ತಿಂಗಳೇ 5 ಗ್ಯಾರಂಟಿ!

ಬಿಜೆಪಿಗೆ ಸಿದ್ದು ಚಾಲೆಂಜ್!‌

Leave a Reply Cancel reply

Your email address will not be published. Required fields are marked *

Recommended

ಬಲವಿದ್ದರೂ ಸೋತ ಕಾಂಗ್ರೆಸ್; ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷಗಿರಿ ಬಿಜೆಪಿ ಪಾಲು

ಕೋವಿಡ್ ಎರಡನೇ ಅಲೆ ತಡೆಯಲು ಮದುವೆ ಸಮಾರಂಭಗಳಿಗೆ ಮಾರ್ಷಲ್‌ಗಳ ನಿಯೋಜನೆ ಮಾಡಲು ಸರಕಾರ ನಿರ್ಧಾರ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

4 years ago
ರಕ್ತದಾನ ಶ್ರೇಷ್ಠ ದಾನ ಎಂದ ಡಾ.ನರಸಿಂಹಮೂರ್ತಿ

ರಕ್ತದಾನ ಶ್ರೇಷ್ಠ ದಾನ ಎಂದ ಡಾ.ನರಸಿಂಹಮೂರ್ತಿ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ