• About
  • Advertise
  • Careers
  • Contact
Thursday, May 15, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home ET CINEMA

ಹಾಡಿದವು ಕಣ್ಣುಗಳು!!

P K Channakrishna by P K Channakrishna
July 27, 2020
in ET CINEMA
Reading Time: 1 min read
0
ಹಾಡಿದವು ಕಣ್ಣುಗಳು!!
924
VIEWS
FacebookTwitterWhatsuplinkedinEmail

ಹಾಡುತ್ತಿವೆ ಕಣ್ಣಗಳು..

ಬಹಳ ದಿನಗಳ ಹಿಂದೆ ನನ್ನ ವಾಟ್ಸಾಪು ಸ್ಟೇಟಸ್ ಮೇಲೆ ಮೂಡಿದ್ದ ಇವೆರಡು ಪದಗಳು ನನ್ನ ಆಪ್ತ ಬಳಗದಲ್ಲಿ ವೈರಲ್ ಆಗಿದ್ದವು.., ಸುಳ್ಳಲ್ಲ. ಇದಾದ ಮೇಲೆ ’ಚೆಲುವಾದ ರಾಕ್ಷಸಿ’, ’ಮಧುವಂತಿ’ ಎಂಬ ಇನ್ನೆರಡು ಸ್ಟೇಟಸ್ಸುಗಳು ಇಷ್ಟೇ ಸದ್ದು ಮಾಡಿ ಅಷ್ಟೇ ಗೆಳೆಯರ ಪಾಲಿಗೆ ಬಿಡಿಸಲಾಗದ ಒಗಟುಗಳಾಗಿದ್ದವು. ಅದರಲ್ಲೂ ಅಕ್ಕಪಕ್ಕದ ಕೆಲ ಪಾಪರಾಜ್ಜಿಗಳು ನನ್ನ ಕಣ್ಣುಗಳಲ್ಲೇ ಹಾಡುವ ಕಣ್ಣುಗಳನ್ನು ಹುಡುಕಲು ಯತ್ನಿಸಿದ್ದವು. ಅದಾದ ಮೇಲೆ ನನ್ನ ಚೇಷ್ಟೆಗಳಲ್ಲಿ ಆ ಚೆಲುವಾದ ರಾಕ್ಷಸಿಯನ್ನು ಹುಡುಕೀಹುಡುಕಿ ಧಣಿದುಹೋಗಿದ್ದವು. ಇನ್ನು ಮಧುವಂತಿಗೆ ಬಂದರೆ, ಆ ಮಧುವಂತಿಗೆ ಹಾಕಿದ ಪಾತಾಳಗರಡಿ ಒಂದು ವ್ಯರ್ಥ ಯತ್ನವಾಗಿತ್ತಷ್ಟೇ.

ಯಾರಿಗೂ ಕಾಣದೇ ಹೃದಯದಲ್ಲೋ ಅಥವಾ ಪ್ರಾಣವಾಯುವಿನ ಯಾವುದೋ ಸೆಲೆಯ ಪಾತಾಳದಲ್ಲಿ ಮಡುಗಟ್ಟಿ ಗುಡಿ ಕಟ್ಟಿಕೊಳ್ಳುವ ಇಂಥ ಭಾವನೆಗಳು ಯಾವಾಗಲೂ ಅಜ್ಞಾತವೇ. ಆ ಅಗಾಧ ಅಜ್ಞಾತದಲ್ಲಿ ನಾನು ಕೂಡ ಆಜ್ಞಾತವಾಸಿಯೇ. ಹೀಗಾಗಿ ಇದನ್ನು ಅಜ್ಞಾತವಾಸಿಯೊಬ್ಬನ ಸ್ವಗತ ಎನ್ನಬಹುದು ಅಥವಾ ಆಲಾಪನೆ ಎಂತಲೂ ಕರೆಯಬಹುದು.

ಇರಲಿ, ಇಲ್ಲಿ ನಾನು ಬರೆಯಲು ಹೊರಟಿದ್ದು ಇದನ್ನಲ್ಲ, ಪೀಠಿಕೆ ಉದ್ದವಾಗಿದ್ದಕ್ಕೆ ಕ್ಷಮೆ ಇರಲಿ..

ಕೆಲ ದಿನಗಳಿಂದ ನೆಟ್ಮನೆಯಲ್ಲಿ ಬಹಳ ಸದ್ದು ಮಾಡಿ ಪ್ರತಿಯೊಬ್ಬರನ್ನೂ ಸೂಜಿಗಲ್ಲಿನಂತೆ ಸೆಳೆದುಬಿಟ್ಟವರು ಮಾನಸಿ ಸುಧೀರ್ ಅವರು. ನಮ್ಮ ಬಯಲುಸೀಮೆಯ ಅದರಲ್ಲೂ ಅವಿಭಜಿತ ಕೋಲಾರ ಜಿಲ್ಲೆಯ ಬಹದೊಡ್ಡ ಕಾವ್ಯಕೃಷಿಕ ಶ್ರೀ ಬಿ.ಆರ್. ಲಕ್ಷ್ಮಣರಾಯರ ’ಏನೀ ಅದ್ಭುತವೇ’ ಕವಿತೆಯನ್ನು ಹಾಡಿ, ತಮ್ಮ ಭಾವಜಾಲದಿಂದಲೇ ಕಟ್ಟಿಹಾಕಿಬಿಟ್ಟ, ಕೊರೊನಾ ಕಷ್ಟಕಾಲದಲ್ಲೂ ಪ್ರತಿಮನಸ್ಸಿಗೂ ಕಾವ್ಯಸಾಂತ್ವನದ ಧನ್ಯತೆಯ ಭಾವ ಕೊಟ್ಟ ಅವರನ್ನು ಹೇಗೆ ಹೊಗಳಬೇಕೋ ಗೊತ್ತಾಗುತ್ತಿಲ್ಲ. ಜಾಲತಾಣಗಳಲ್ಲಿ ಈಗಾಗಲೇ ಲಕ್ಷೋಪಲಕ್ಷ ಷೇರುಗಳನ್ನು ಕಂಡಿರುವ ಅವರ ಕಾವ್ಯಭಾವಾಭಿನಯ ಜೀವಪ್ರೀತಿಯ ಮನಸ್ಸುಗಳಿಗೆ ಅಮೃತ ಸಿಂಚನವೇ ಸರಿ.

ಮಾನಸಿ ಸುಧೀರ್

ಮತ್ತೆ ಮತ್ತೆ ಅವರ ವಿಡಿಯೋವನ್ನು ನೋಡಿದಾಗ ನನಗೆ ನೆನಪಾಗಿದ್ದು ಆ ಹಳೆಯ ನನ್ನ ಸ್ಟೇಟಸ್ಸು. ಜೀವನದ ಪುಟ್ಟಪುಟ್ಟ ಅದ್ಭುತಗಳು, ಸಂತೋಷಗಳು ಮಾನಸಿ ಅವರ ಕಂಗಳಲ್ಲಿ, ಭಾವಾಭಿನಯದಲ್ಲಿ ಸಾಕ್ಷಾತ್ಕಾರವಾಗಿದ್ದವು, ಅವುಗಳನ್ನು ನಾನು ಕಂಡೆ. ಅವರ ಕಂಗಳು ಹಾಡಿದ್ದವು, ಮಾತಾಡಿದ್ದವು, ನರ್ತಿಸಿದ್ದವು!!

ಅಭಿನಯವೆಂಬ ತಾಯಿಯ ’ಮಾನಸಪುತ್ರಿ’ ಮಾನಸಿ ಅವರು.

ಕಡೆಗೆ ನನಗನಿಸಿದ್ದು ಇಷ್ಟು.

ನಮಸ್ಕಾರ.

Tags: manasi sudhir
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಪ್ರಕಾಶ್ ರೈ ಸಂಸ್ಥೆಗೆ ಸರಕಾರದ ಹಣ; ದಾರಿ ತಪ್ಪಿದ ಕಲಾವಿದ ಎಂದು ಕುಟುಕಿದ JDS

ಪ್ರಕಾಶ್ ರೈ ಸಂಸ್ಥೆಗೆ ಸರಕಾರದ ಹಣ; ದಾರಿ ತಪ್ಪಿದ ಕಲಾವಿದ ಎಂದು ಕುಟುಕಿದ JDS

by cknewsnow desk
April 16, 2024
0

ಕುಮಾರಸ್ವಾಮಿ ಅವರನ್ನು ದಾರಿ ತಪ್ಪಿದ ಮಗ ಎಂದ ನಟನಿಗೆ ತಿರುಗೇಟು ಕೊಟ್ಟ ದಳ

ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್‌ಗೆ ನೋಟಿಸ್

ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್‌ಗೆ ನೋಟಿಸ್

by cknewsnow desk
December 10, 2023
0

ಗುಟ್ಕಾ ಜಾಹೀರಾತು ತಂದಿಟ್ಟ ಸಂಕಷ್ಟ

ಧೂಳ್ ಎಬ್ಬಿಸುತ್ತಿದೆ ಸಲಾರ್ ಟ್ರೇಲರ್

ಧೂಳ್ ಎಬ್ಬಿಸುತ್ತಿದೆ ಸಲಾರ್ ಟ್ರೇಲರ್

by cknewsnow desk
December 5, 2023
0

ಜಾಲತಾಣ ಜಗತ್ತಿನಲ್ಲಿ ಪ್ರಭಾಸ್ ಅಭಿಮಾನಿಗಳ ಹಬ್ಬವೋ ಹಬ್ಬ

ಕಾಂತಾರ-2 FIRST LOOK

ಕಾಂತಾರ-2 FIRST LOOK

by cknewsnow desk
November 27, 2023
0

ಬೆಚ್ಚಿಬೀಳೀಸಿದ ರಿಷಬ್‌ ಶೆಟ್ಟಿ ಅವತಾರ

ಕಾಂತಾರ 2 ಫಸ್ಟ್ ಲುಕ್: ರಿಷಬ್ ಶೆಟ್ಟಿ ಭಯಂಕರ

ಕಾಂತಾರ 2 ಫಸ್ಟ್ ಲುಕ್: ರಿಷಬ್ ಶೆಟ್ಟಿ ಭಯಂಕರ

by P K Channakrishna
November 27, 2023
0

ಏಳು ಭಾಷೆಗಳಲ್ಲಿ ನಿರ್ಮಾಣ; ಕನ್ನಡ ಚಿತ್ರರಂಗದ ದಾಖಲೆ

ಪೈರಸಿ ಹಾವಳಿಯಿಂದ ವರ್ಷಕ್ಕೆ 20,000 ಕೋಟಿ ರೂ. ನಷ್ಟ

ಪೈರಸಿ ಹಾವಳಿಯಿಂದ ವರ್ಷಕ್ಕೆ 20,000 ಕೋಟಿ ರೂ. ನಷ್ಟ

by P K Channakrishna
November 5, 2023
0

ಸಿನಿಮಾ ಪೈರಸಿ ತಡೆಗೆ ಕೇಂದ್ರದಿಂದ ಕಠಿಣ ಕ್ರಮ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್

Next Post
ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು...

Leave a Reply Cancel reply

Your email address will not be published. Required fields are marked *

Recommended

ನಾನು ಹೇಳಿದ್ದೇ ಒಂದು, ನೀವು ಬರೆದಿದ್ದೇ ಒಂದು ಎಂದು ಉಲ್ಟಾ ಹೊಡೆದ ಸಿಎಂಗೆ ಎಸ್.ಎಂ.ಕೃಷ್ಣ ಕ್ಲಾಸ್

ನಾನು ಹೇಳಿದ್ದೇ ಒಂದು, ನೀವು ಬರೆದಿದ್ದೇ ಒಂದು ಎಂದು ಉಲ್ಟಾ ಹೊಡೆದ ಸಿಎಂಗೆ ಎಸ್.ಎಂ.ಕೃಷ್ಣ ಕ್ಲಾಸ್

2 years ago
ಕೋಲಾರದ ವಿಸ್ಟ್ರಾನ್‌ ಐಫೋನ್‌ ಘಟಕದ ಮೇಲೆ ದಾಳಿ; ಪ್ರಧಾನಮಂತ್ರಿ ನರೇಂದ್ರ ಮೋದಿ ಕಳವಳಕ್ಕೆ ಕಾರಣವೇನು?

ಸಿನಿಮಾ ಪ್ರದರ್ಶನ, ಸಭೆ, ಸಮಾರಂಭ, ರಾಜಕೀಯ ಸಮಾವೇಶ ಬಂದ್‌ ಮಾಡಿ; 18 ವರ್ಷಕ್ಕೂ ಮೇಲ್ಪಟ್ಟವರಿಗೂ ಲಸಿಕೆ ಕೊಡಿ ಎಂದು ಪ್ರಧಾನಮಂತ್ರಿ ಮೋದಿಗೆ ಕಠಿಣ ಸಲಹೆ ಕೊಟ್ಟ ಭಾರತೀಯ ವೈದ್ಯ ಮಂಡಳಿ-IMA

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ