• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS

ಮಂಜುನಾಥನೇ, ಕೋವಿಡ್ ಮಾರಿಯನ್ನು ಕೊನೆಗಾಣಿಸು..

cknewsnow desk by cknewsnow desk
July 14, 2020
in NEWS & VIEWS
Reading Time: 1 min read
0
ಮಂಜುನಾಥನೇ, ಕೋವಿಡ್ ಮಾರಿಯನ್ನು ಕೊನೆಗಾಣಿಸು..
915
VIEWS
FacebookTwitterWhatsuplinkedinEmail

-ವರದಿ, ಚಿತ್ರಗಳು: ಸೋಮಶೇಖರ ಗೌಡ

ಧರ್ಮಸ್ಥಳ/ಕುಕ್ಕೆ ಸುಬ್ರಮಣ್ಯ:
ಮಳೆಗಾಲದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ಟೂರ್ ಮಾಡುವುದು ಬಹಳ ಮಜವಾಗಿರುತ್ತದೆ. ಅದರಲ್ಲೂ ಕೆಲವರು ಇದೇ ವೇಳೆ ಟೆಂಪಲ್ ಟ್ರಾವೆಲ್ ಮಾಡುತ್ತಾರೆ. ಸೋನೆ ಮಳೆ ಮತ್ತು ತಣ್ಣನೆಯ ವಾತಾವರಣದಲ್ಲಿದೇವರ ದರ್ಶನ ಮಾಡುವುದು ಹಿತವಾಗಿರುತ್ತದೆ ಎಂದು ಭಕ್ತರು ಹೇಳಿದ್ದಾರೆ.

ಕೋವಿಡ್ 19 ರಾಜ್ಯಾದ್ಯಂತ ತಾಂಡವವಾಡುತ್ತಿದ್ದರೂ ಭಕ್ತರು ಮಾತ್ರ ತಮ್ಮ ನೆಚ್ಚಿನ ದೇವರನ್ನು ಮೊರೆಹೋಗುತ್ತಿದ್ದಾರೆ. ಈ ಸೋಂಕಿನ ಕಾಯಿಲೆ ಹೊತ್ತಿನಲ್ಲಿ ಪುಣ್ಯಕ್ಷೇತ್ರಗಳಿಗೆ ಏಕೆ ಹೋದಿರಿ ಅಂತ ಕೇಳಿದರೆ, “ಹೋಗಬೇಕು ಅನಿಸಿತು. ಹೋದೆವು. ಮನಸ್ಸಿಗೆ ತೃಪ್ತಿಯಾಗುವಷ್ಟು ದರ್ಶನವಾಯಿತು” ಎಂದು ತಿಳಿಸಿದರು.

ಈ ಸೀಸನ್ನಿನಲ್ಲಿ ಯಾತ್ರಿಕರು ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಸೌತಡ್ಕ, ಶೃಂಗೇರಿ, ಹೊರನಾಡು, ಕೊಲ್ಲೂರು, ಉಡುಪಿ ಮುಂತಾದ ದೈವತಾಣಗಳ ಕಡೆ ಹೋಗುವುದು ಹೆಚ್ಚು.

ದೈವದ ಜತೆಗೆ ಪ್ರಕೃತಿಯ ಪೂಜೆ:
ಮಳೆಗಾಲ ಆರಂಭವಾಗಿರುವ ಕಾರಣಕ್ಕೆ ಮಲೆನಾಡು ಮತ್ತು ಕರಾವಳಿ ಭಾಗದ ದೇಗುಲಗಳತ್ತ ಬೆಂಗಳೂರು ಮತ್ತಿತರೆ ಕಡೆಯಿಂದ ಭಕ್ತರು ದೇಗುಲಗಳತ್ತ ಹೆಚ್ಚೆಚ್ಚು ಧಾವಿಸುತ್ತಿದ್ದಾರೆ. ಮುಖ್ಯವಾಗಿ ಭಕ್ತರ ಸಂದಣಿ ಇರುವುದಿಲ್ಲ ಹಾಗೂ ಪ್ರಕೃತಿಯ ಸೊಬಗು ಸವಿಯಬೇಕಾದರೆ ಇದೇ ಸುಸಮಯ ಎಂಬುದು ಯಾತ್ರಿಕರು ನೀಡುವ ಕಾರಣ.

ಬುಧವಾರವಷ್ಟೇ ಧರ್ಮಸ್ಥಳ, ಸೌತಡ್ಕ ಮತ್ತು ಕುಕ್ಕೆಗೆ ಹೋಗಿಬಂದ ಹಿರಿಯ ಪತ್ರಕರ್ತ ಗುರು ಪ್ರಸಾದ್ ಹೇಳಿದ್ದು ಇಷ್ಟು.. “ದೇವರ ದರ್ಶನಕ್ಕೆ ಇದು ಸರಿಯಾದ ಸಮಯ. ಮಳೆಗಾಲ, ಎಲ್ಲಿ ನೋಡಿದರೂ ಮಳೆ, ಇಳೆ ತುಂಬಾ ನೀರು. ಪ್ರಕೃತಿ ನಿತ್ಯಹಸಿರಿಗೆ ಮತ್ತಷ್ಟು ಮೆರಗು ಬರುವ ಕಾಲವಿದು. ಆ ಸೋನೆ ಮಳೆಯಲ್ಲಿ ತೊಯ್ದು ದೇವರ ದರ್ಶನ ಮಾಡುವುದರಲ್ಲಿ ಅದೊಂದು ರೀತಿಯ ಆನಂದವಿದೆ. ಕೋವಿಡ್ ಇಲ್ಲದಿದ್ದರೆ ಇಡೀ ರಾಜ್ಯದ ದೇವಾಲಯಗಳನ್ನು ಒಂದು ಸುತ್ತು ಹಾಕುವ ಆಸೆ ಇತ್ತು” ಎಂದು ಹೇಳುತ್ತಾರೆ.

ಧರ್ಮಸ್ಥಳ ಹೇಗಿದೆ?:
ಈ ವಾತಾವರಣದಲ್ಲಿ ಧರ್ಮಸ್ಥಳ ಬಹಳ ಸೊಗಸಾಗಿದೆ. ವಿರಳ ಜನ ಸಾಂದ್ರತೆಯಿಂದ ದೇವರ ದರ್ಶನ ಅರ್ಧ ಗಂಟೆಯಲ್ಲಿ ಆಯಿತು. ಬೀದಿಗಳು, ರಸ್ತೆಗಳು ಖಾಲಿ ಖಾಲಿ. ಕಡಿಮೆ ಹೋಟೆಲ್, ಅಂಗಡಿಗಳು ತೆರೆದಿದ್ದವು. ದೇಗುಲದಲ್ಲಿ ಸ್ವಾಮಿಯ ಪ್ರಸಾದ ಸಿಗುತ್ತಿತ್ತಾದರೂ, ಅನ್ನಪೂರ್ಣ ಭೋಜನ ಶಾಲೆಯನ್ನು ಮುಚ್ಚಲಾಗಿತ್ತು. ಹಾಗೆಯೇ ಬಹುತೇಕ ಎಲ್ಲ ವಸತಿ ಗೃಹಗೃಹಗಳು ಖಾಲಿ ಇದ್ದವು. ನೇತ್ರಾವತಿಯಲ್ಲಿ ಸಮೃದ್ಧ ನೀರಿದ್ದರೂ ಸ್ನಾನದ ಘಟ್ಟಗಳಲ್ಲಿ ಭಕ್ತರ ದಟ್ಟಣಿ ಕಂಡುಬರಲಿಲ್ಲ. ದೇವಸ್ಥಾನಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗಿತ್ತು ಹಾಗೂ ಸಾಮಾಜಿಕ ಅಂತರ ಪಾಲಿಬೇಕಾಗಿತ್ತು. ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಕೋವಿಡ್ ಬಗ್ಗೆ ಎಲ್ಲ ರೀತಿಯ ಕಟ್ಟೆಚ್ಚರಗಳನ್ನು ವಹಿಸಲಾಗಿತ್ತು. ದರ್ಶನ ಮುಗಿದ ನಂತರ ಜನರು ತಮ್ಮ ಊರುಗಳಿಗೆ ತಡಮಾಡದೇ ಹೊರಡುತ್ತಿದ್ದರು ಎಂದು ಚಿಕ್ಕಬಳ್ಳಾಪುರದ ಸೋಮಶೇಖರ್ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತ ತಿಳಿಸಿದರು.

ಕುಕ್ಕೆ ಸುಬ್ರಮಣ್ಯ

ಕುಕ್ಕೆಯಲ್ಲೂ ಇದೇ ನೋಟ:
ಪ್ರತಿದಿನವೂ ಸಾವಿರಾರು ಭಕ್ತರು ಭೇಟಿ ನೀಡುವ ಕುಕ್ಕೆ ಸುಬ್ರಮಣ್ಯ ಕ್ಷೇತ್ರದಲ್ಲೂ ಭಕ್ತರು ವಿರಳವಾಗಿದ್ದರು. ಮಳೆಯ ಕಾರಣಕ್ಕೆ ಕಉಮಾರಧಾರ ನದಿಯಲ್ಲಿ ನೀರು ಚೆನ್ನಾಗಿದೆ. ಆದರೆ ಸ್ನಾನಘಟ್ಟಗಳಲ್ಲಿ ಭಕ್ಕರು ವಿರಳವಾಗಿದ್ದರು. ಕೆಲ ಭಕ್ತರು ಸುರಿಯುವ ಮಳೆಯಲ್ಲೇ ನದಿಯಲ್ಲಿ ಪುಣ್ಯಸ್ನಾನ ಮಾಡುತ್ತಿದ್ದರು. ನಾವೂ ಮಾಡಿದೆವು ಎಂದು ಅವರು ಮಾಹಿತಿ ನೀಡಿದರು.

ಇನ್ನು ಹತ್ತೇ ನಿಮಿಷದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನವಾಯಿತು. ಅಲ್ಲಿಯೂ ದೇವರ ಪ್ರಸಾದ ವಿನಿಯೋಗವಾಗುತ್ತಿದ್ದು, ಭೋಜನ ಶಾಲೆಯನ್ನು ಬಂದ್ ಮಾಡಲಾಗಿದೆ. ದೇಗುಲದಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಇದೇ ವೇಳೆ ಕುಕ್ಕೆ ದೇಗುಲದ ಮುಂದಿನ ರಾಜಬೀದಿಯ ಅಗಲೀಕರಣ ಕಾಮಗಾರಿ ನಡೆಯುತ್ತಿದೆ ಎಂದು ಅವರು ತಿಳಿಸಿದರು

ಭಕ್ತರು ವಿರಳ:
ಕೋವಿಡ್ ಕಾರಣಕ್ಕೆ ಮತ್ತೆ ಲಾಕ್ ಡೌನ್ ಅಗುತ್ತದೆ ಎಂಬ ಆತಂಕವೂ ಭಕ್ತರನ್ನು ಕಾಡುತ್ತಿದೆ. ಹೀಗಾಗಿ ಮತ್ತೆ ದೇಗುಲಗಳನ್ನು ಮುಚ್ಚಿದರೆ ಮತ್ತೆ ಯವಾಗ ತೆರೆಯುತ್ತಾರೋ ಗೊತ್ತಿಲ್ಲ. ಹೀಗಾಗಿ ಒಮ್ಮೆ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆಯುವ ಇಚ್ಚೆಯಾಯಿತು. ಏನಾದರಾಗಲಿ ಎಂದು ಬುಧವಾರ ರಾತ್ರಿ ಧರ್ಮಸ್ಥಳಕ್ಕೆ ಬಂದು ಗುರುವಾರ ಬೆಳಗ್ಗೆ
ದೇವರ ದರ್ಶನ ಪಡೆದೆ. ನನ್ನ ಮನಸ್ಸಿಗೆ ಅವರ್ಣನೀಯ ಸಮಾಧಾನವಾಗಿದೆ ಎಂದು ಸೋಮಶೇಖರ್ ಮಾಹಿತಿ ನೀಡಿದರು.

ಕೆಲಸ ಹೋಯಿತು, ದೇವರು ನೆನಪಾದರು:
ಕೋವಿಡ್ ಬಿಕ್ಕಟ್ಟಿನಿಂದ ನನ್ನ ಕೆಲಸ ಹೋಯಿತು ಎನ್ನುವ ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿ ಹೇಮಾ ಅವರು, “ಜೀವನ ಕಷ್ಟವಾಗಿದೆ. ಸಂಬಳ ಬರುತ್ತಿಲ್ಲ. ನಮ್ಮ ಖಾಸಗಿ ಶಾಲೆಯಲ್ಲಿ ಕಳೆದ ಮೂರು ತಿಂಗಳಿಂದ ಅರ್ಧ ವೇತನ ನೀಡುತ್ತಿದ್ದಾರೆ. ನನ್ನ ಪತಿಯ ಕೆಲಸವೂ ಹೋಗಿದೆ. ಮಕ್ಕಳ ಫೀಸು ಕಟ್ಟಬೇಕು. ಮುಂದಿನ ಭವಿಷ್ಯ ಹೇಗಪ್ಪ ಎನ್ನುವಂತಾಗಿದೆ. ಅದಕ್ಕೆ ಈ ಕೊರೋನ ಬೇಗ ಕೊನೆಗಾಣಲಿ ಎಂದು ಎಂದು ಪ್ರಾರ್ಥಿಸಲು ಧರ್ಮಸ್ಥಳಕ್ಕೆ ಬಂದಿದ್ದೇನೆ” ಎಂದು ತಿಳಿಸಿದರು.

ಭಕ್ತರೇನು ಮಾಡಬೇಕು?:
*ಆದಷ್ಟು ಜನರು ತಮ್ಮ ಮನೆಗಳಲ್ಲಿಯೇ ಉಳಿದರೆ ಮೇಲು
*ಕೋವಿಡ್ ನಿಯಂತ್ರಣ ಮೀರಿ ವ್ಯಾಪಿಸುತ್ತಿರುವ ಕಾರಣ ಪ್ರವಾಸ ಒಳ್ಳೆಯದಲ್ಲ
*ಪ್ರಯಾಣದ ವೇಳೆ ಅಥವಾ ದೇಗುಲಗಳ ಬಳಿ ಸೋಕಿತರು ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ಚು
*ಮಳೆಗಾಲ, ಜತೆಗೆ ವಾತಾವರಣ ಶೀತವಾಗಿರುವ ಕಾರಣಕ್ಕೆ ಜನ ರಿಸ್ಕ್ ತೆಗೆದುಕೊಳ್ಳದಿರುವುದೇ ಮೇಲು
*ಪೂಜೆ ಪುನಸ್ಕಾರಗಳನ್ನು ಮನೆಗೆ ಸೀಮಿತಗೊಳಿಕೊಂಡರೆ ಉತ್ತಮ

Tags: covid-19 karnatakakukke subramanya templesri manjunatha swamy
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ನಾಯಕರಲ್ಲಿ ಏಕತೆ ಬೆಸೆದ ನಾಡಪ್ರಭುಗಳು

ನಾಯಕರಲ್ಲಿ ಏಕತೆ ಬೆಸೆದ ನಾಡಪ್ರಭುಗಳು

Leave a Reply Cancel reply

Your email address will not be published. Required fields are marked *

Recommended

ಕೋವಿಡ್-19 ಲಸಿಕೆ ಸಂಶೋಧಿಸಿದ ರಷ್ಯ; ಚೀನ, ಅಮೆರಿಕಕ್ಕೆ ಸಡ್ಡು ಹೊಡೆದ ಪುಟಿನ್

ಕೋವಿಡ್-19 ಲಸಿಕೆ ಸಂಶೋಧಿಸಿದ ರಷ್ಯ; ಚೀನ, ಅಮೆರಿಕಕ್ಕೆ ಸಡ್ಡು ಹೊಡೆದ ಪುಟಿನ್

5 years ago
ಸಿದ್ದರಾಮಯ್ಯ v/s ಸರಕಾರ; ಕೋವಿಡ್ ನಡುವೆ ಸಖತ್ ಪಾಲಿಟಿಕ್ಸ್

ತೀವ್ರ ಬರಗಾಲ ಇದ್ದರೂ ಕೃಷಿ ಮನ್ನಾ ಮಾಡುವುದಿಲ್ಲ ಎಂದ ಸರಕಾರ

1 year ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ