• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home COVID-19

ಸಾವಿಗೂ ಗೌರವ, ಮರ್ಯಾದೆ ಬೇಡವೇ? ನಾವು ಎಂಥವರು ಆಗಬೇಕೆಂದು ನಾವೇ ನಿರ್ಧರಿಸೋಣ..

cknewsnow desk by cknewsnow desk
July 27, 2020
in COVID-19, GUEST COLUMN, NEWS & VIEWS
Reading Time: 1 min read
0
ಸಾವಿಗೂ ಗೌರವ, ಮರ್ಯಾದೆ ಬೇಡವೇ? ನಾವು ಎಂಥವರು ಆಗಬೇಕೆಂದು ನಾವೇ ನಿರ್ಧರಿಸೋಣ..
926
VIEWS
FacebookTwitterWhatsuplinkedinEmail

ಕೋವಿಡ್ -19 ಕಷ್ಟಕಾಲದಲ್ಲಿ ಮನುಷ್ಯನ ಜೀವಕ್ಕೆ ಮೂರುಕಾಸಿನ ಬೆಲೆಯಿಲ್ಲ ಎಂಬುದು ಗೊತ್ತಾಗುತ್ತಿದೆ. ಕೊನೆಗೆ, ಸೋಂಕಿನ ಕಾರಣಕ್ಕೆ ಸತ್ತರೇ ಅಂಥ ಸಾವು ಯಾರಿಗೂ ಬೇಡ.. ಅಂಥ ಸಾವುಗಳ ಸುತ್ತ… ಹಿರಿಯ ಪತ್ರಕರ್ತ ದು.ಗು ಲಕ್ಷ್ಮಣ ಅವರು ಬರೆದಿದ್ದಾರೆ, ಓದಿ…


ಹುಟ್ಟಿದವರೆಲ್ಲರೂ ಸಾಯಲೇಬೇಕು. ಅದು ಪ್ರಕೃತಿ ನಿಯಮ. ಯಾರಿಗೆ ಯಾವಾಗ ಸಾವು ಬರುತ್ತದೆಂಬುದು ಮಾತ್ರ ನಿಗೂಢ. ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿ ಬೇಗ ಸಾಯದೆಯೂ ಇರಬಹುದು. ಆರೋಗ್ಯವಂತನೆಂದು ಕಾಣುವ ವ್ಯಕ್ತಿ ಬೇಗ ಸಾಯಲೂಬಹುದು. ರೋಗ ನಿರೋಧಕ ಶಕ್ತಿ (ಇಮ್ಯೂನಿಟಿ) ಚೆನ್ನಾಗಿರುವ ವ್ಯಕ್ತಿ ದೀರ್ಘಕಾಲ ಬದುಕಲೂಬಹುದು. ಆದರೆ ಸಾವು ಇಂತಹುದೇ ಕ್ಷಣದಲ್ಲಿ ಸಂಭವಿಸುತ್ತದೆಂದು ಯಾವ ಜ್ಯೋತಿಷಿಗೂ ಹೇಳಲಸಾಧ್ಯ.

ಹುಟ್ಟು ಹೇಗೆ ಮಾನವನ ಬದುಕಿನಲ್ಲಿ ಒಂದು ಆಕಸ್ಮಿಕ ಘಟನೆಯೋ ಸಾವು ಒಂದು ನಿರೀಕ್ಷಿತ ಘಟನೆ. ಆದರೆ ಎರಡು ಸಂದರ್ಭಗಳಲ್ಲೂ ಆ ಘಟನೆ ಗೌರವ, ಮರ್ಯಾದೆಗಳನ್ನು ಬೇಡುತ್ತದೆ. ಹುಟ್ಟಿದಾಗ ಸಂಭ್ರಮ, ಸಡಗರ ಹೇಗೆ ಸಹಜ ಪ್ರಕ್ರಿಯೆಯೋ, ಸತ್ತಾಗ ಶ್ರದ್ಧಾಂಜಲಿಯ ಗೌರವ, ಗುಣಗಾನ ಅಷ್ಟೇ ಸಹಜ. ಎಂಥ ಪರಮ ನೀಚನೇ ಸತ್ತರೂ ಆತನ ಒಂದೆರಡು ಉತ್ತಮ ಗುಣಗಳನ್ನಾದರೂ ಆ ಹೊತ್ತಿನಲ್ಲಿ ಸ್ಮರಿಸಿಕೊಳ್ಳುವುದಿದೆ.

ಹೀಗೆ ಸಾವು ಕೂಡ ಮರ್ಯಾದೆ, ಗೌರವಕ್ಕೆ ಅರ್ಹವಾದ ಪ್ರತಿಯೊಬ್ಬರ ಬದುಕಿನ ಪ್ರಮುಖ ವಿದ್ಯಮಾನ ವಾಗಿದ್ದರೂ ಈ ಕೋವಿಡ್ 19ರ ದುರಿತ ಕಾಲದಲ್ಲಿ ಸಾವು ಅನಾಥವಾಗತೊಡಗಿರುವುದು ಕಾಲದ ಮಹಿಮೆಯೋ ಅಥವಾ ಮೂಢನಂಬಿಕೆಯ ಪರಾಕಾಷ್ಠೆಯೋ ಎಂಬುದು ಚಿಂತನಾರ್ಹ. ಬಹುತೇಕ ಪ್ರಸಂಗಗಳಲ್ಲಿ ಮೂಢನಂಬಿಕೆ ಹಾಗೂ ಅರಿವಿನ ಕೊರತೆಯಿಂದಾಗಿ ಕೋವಿಡ್ ಕಾರಣದಿಂದ ಸಾವಿಗೀಡಾದವರನ್ನು ಅನಾಥ ಶವದಂತೆ ಕಾಣಲಾಗಿದೆ. ಬಳ್ಳಾರಿಯಲ್ಲಿ ಕೋವಿಡ್ ಕಾರಣದಿಂದ ಸಾವಿಗೀಡಾದವರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ಲಾಸ್ಟಿಕ್ ಶೀಟಿನಲ್ಲಿ ಸುತ್ತಿ ಪ್ರಾಣಿಗಳನ್ನು ಎಳೆದುಕೊಂಡು ಬರುವಂತೆ (ಪ್ರಾಣಿಗಳನ್ನೂ ಆ ರೀತಿ ಮಾಡುವುದಿಲ್ಲ) ನೆಲದ ಮೇಲೆ ಎಳೆದುಕೊಂಡು ಬಂದು ಮೊದಲೇ ತೋಡಿದ್ದ ಆಳವಾದ ಗುಂಡಿಗೆ ಒಟ್ಟಿಗೇ ಎಸೆದ ವಿಡಿಯೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದನ್ನು ನೋಡಿದ ಪ್ರಜ್ಞಾವಂತರೆಲ್ಲರೂ ಮರುಗಿದ್ದರು. ಯಾದಗಿರಿಯಲ್ಲಂತೂ ಆಸ್ಪತ್ರೆಯಲ್ಲಿ ಸಾವಿಗೀಡಾದ ಕೋವಿಡ್ ರೋಗಿಯನ್ನು ಪ್ಲಾಸ್ಟಿಕ್ ಶೀಟ್ನಲ್ಲಿ ಸುತ್ತಿ ಜೆಸಿಬಿಯಲ್ಲಿ ತಂದು ಗುಂಡಿಗೆ ಎಸೆಯಲಾಯಿತು.

ಮಂಗಳೂರು, ಬೆಂಗಳೂರು ಮತ್ತಿತರೆ ಕೆಲವೆಡೆಗಳಲ್ಲಿ ರೋಗದಿಂದ ಸಾವಿಗೀಡಾದವರ ಶವಗಳನ್ನು ಊರೊಳಗಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸುವುದಕ್ಕೇ ಜನರು ಅವಕಾಶ ನೀಡದೆ ಪ್ರತಿಭಟಿಸಿದರು. ಮಂಗಳೂರಿನಲ್ಲಿ ಬಿಜೆಪಿಯ ಶಾಸಕರೊಬ್ಬರು, ಅವರು ಸ್ವತಃ ವೈದ್ಯರಾಗಿದ್ದರೂ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಕೂಡದೆಂಬ ಸಾರ್ವಜನಿಕರ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಬೆಂಗಳೂರಿನ ಒಂದೆರಡು ಕಡೆ ತಾವಿರುವ ಮನೆಯ ಸಮೀಪವೇ ಸ್ಮಶಾನವಿರುವುದರಿಂದ ಅಲ್ಲಿ ಕೋವಿಡ್ಡಿನಿಂದ ಸಾವಿಗೀಡಾದವರ ಅಂತ್ಯಸಂಸ್ಕಾರ ನಡೆಸಕೂಡದೆಂದು ಅಲ್ಲಿನ ಕೆಲವು ನಿವಾಸಿಗಳು ಪ್ರತಿಭಟಿಸಿದರು. ಮಂಗಳೂರಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಗದೆ ಕೊನೆಗೆ ಆ ಶವವನ್ನು ಬಂಟ್ವಾಳಕ್ಕೆ ಸಾಗಿಸಿ ಅಂತ್ಯಸಂಸ್ಕಾರ ನಡೆಸಲಾಯಿತು. ಅಲ್ಲಿ ಇನ್ನೋರ್ವ ಬಿಜೆಪಿ ಶಾಸಕರು ತಮ್ಮ ಜಮೀನಿನಲ್ಲೇ ಶವ ಸಂಸ್ಕಾರಕ್ಕೆ ಅವಕಾಶ ನೀಡಿ ಮಾನವೀಯತೆ ಮೆರೆದಿದ್ದರು. ಬೆಂಗಳೂರಿನಲ್ಲಿ ಜನರ ಪ್ರತಿಭಟನೆ ಎದುರಿಸಿದ ಸಾವಿಗೀಡಾದ ವ್ಯಕ್ತಿಯ ಕುಟುಂಬದವರು ಕೊನೆಗೆ ತಮ್ಮ ಊರಿಗೆ ತೆಗೆದುಕೊಂಡು ಹೋಗಿ ಅಂತೂ ಇಂತೂ ಅಂತ್ಯಸಂಸ್ಕಾರ ನೆರವೇರಿಸಬೇಕಾಯಿತು.

ಕೋವಿಡ್ ರೋಗ ಸಾವಿಗೀಡಾದವರಿಂದಲೂ ಹರಡುತ್ತದೆ ಎಂಬ ಮೂಢನಂಬಿಕೆಯೇ ಈ ಎಲ್ಲ ಅಧ್ವಾನಗಳಿಗೆ ಕಾರಣ. ಸೋಂಕು ಹರಡುವುದು ಮನುಷ್ಯನ ಉಸಿರಾಟದಿಂದ. ಉಸಿರಾಟವೇ ಇಲ್ಲದಿದ್ದಲ್ಲಿ ಸೋಂಕು ಹೊರಗೆ ಬರುವುದಾದರೂ ಹೇಗೆ? ಮೃತದೇಹದ ಪಕ್ಕದಲ್ಲೇ ಇದ್ದರೂ ಸೋಂಕು ಹರಡುವುದಿಲ್ಲ. ಆ ದೇಹವನ್ನು ಬರಿಗೈನಿಂದ ಸ್ಪರ್ಶಿಸಿದಲ್ಲಿ ಮಾತ್ರ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ವ್ಯಕ್ತಿ ಸತ್ತ ಬಳಿಕ ಸೂಕ್ತ ಗೌರವದೊಂದಿಗೆ ಅಂತಿಮ ಕ್ರಿಯೆ ನಡೆಸಬೇಕು ಎಂದು ಮಣಿಪಾಲ್ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ, ನುರಿತ ವೈದ್ಯ ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ.

ಮನುಷ್ಯ ಮೃತಪಟ್ಟ ಎರಡರಿಂದ ಆರು ಗಂಟೆಯೊಳಗೆ ವೈರಾಣು ಸಾಯುತ್ತದೆ. ಮೃತ ದೇಹ ಹಸ್ತಾಂತರಿಸುವಾಗ ಅದಕ್ಕಿಂತ ಹೆಚ್ಚು ಅವರು ಹಿಡಿದಿರುವುದರಿಂದ ದೇಹದಲ್ಲಿ ವೈರಾಣು ಇರುವುದಿಲ್ಲ. ಆದರೆ ಹೊದಿಕೆ, ಮೇಲ್ಮೈನಲ್ಲಿ ಇರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಬೇಕು. ಸಂಬಂಧಿಕರು ಮಾಸ್ಕ್ ಹಾಕಿಕೊಂಡು ದೂರದೂರ ನಿಂತು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರೆ ಏನೂ ತೊಂದರೆಯಾಗೋದಿಲ್ಲ ಎಂಬುದು ದಾವಣಗೆರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್ ಅವರ ಸ್ಪಷ್ಟ ಅಭಿಮತ.

ಸರ್ಕಾರದ ಸ್ಥಳೀಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಿ ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಅವರೇ ಅಂತ್ಯಸಂಸ್ಕಾರ ನಡೆಸಲು ಅವಕಾಶ ಕಲ್ಪಿಸಬೇಕು. ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸುವುದು ಅರ್ಥಹೀನ. ಯಾರೇ ಅಡ್ಡಿಪಡಿಸಿದರೂ ಕ್ರಿಮಿನಲ್ ಪ್ರಕರಣ ದಾಖಲಿಸಿ, ಬಂಧಿಸುವ ಮೂಲಕ ಕಠಿಣ ಸಂದೇಶ ರವಾನಿಸಬೇಕೆಂದು ಮಂಗಳೂರಿನ ವೈದ್ಯ ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯ ಖಡಕ್ ಆಗಿಯೇ ಹೇಳಿದ್ದಾರೆ.

ಮೊದಲು ಯಾವುದೇ ವ್ಯಕ್ತಿ ಮೃತಪಟ್ಟರೆ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಧಾವಿಸುತ್ತಿದ್ದ ಜನರೇ ಈಗ ಕೋವಿಡ್ಡಿನಿಂದ ಮೃತಪಟ್ಟವರನ್ನು ಮಣ್ಣು ಮಾಡದಂತೆ ತಡೆಯಲು ಓಡೋಡಿ ಬರುತ್ತಿರುವುದು ವಿಪರ್ಯಾಸ. ಮೃತದೇಹದಿಂದಲೂ ಸೋಂಕು ಹರಡುತ್ತದೆ ಎಂಬ ಸುದ್ದಿಯ ಅಬ್ಬರದ ಮುಂದೆ ಮಾನವೀಯತೆ ಗೌಣವಾಗಿದೆ. ಮೃತ ಶರೀರದಿಂದ ಸೋಂಕು ಹರಡುವುದಿಲ್ಲ ಎಂದು ವೈದ್ಯರು ಪರಿಪರಿಯಾಗಿ ಹೇಳಿದರೂ ಜನರು ಕೇಳುತ್ತಿಲ್ಲ. ಶರೀರದಿಂದ ಉಸಿರೇ ಹೊರಡದಿದ್ದ ಮೇಲೆ ಸೋಂಕು ಹೇಗೆ ಹೊರಸೂಸುತ್ತದೆ? ಆ ಭೀತಿಯನ್ನು ಬಿಟ್ಟುಬಿಡಿ ಎಂದು ವೈದ್ಯಸಮೂಹ ವಿನಂತಿಸಿಕೊಂಡರೂ ಜನರು ಕ್ಯಾರೇ ಎನ್ನುತ್ತಿಲ್ಲ.

ಈಚೆಗೆ ತೀರ್ಥಹಳ್ಳಿ ತಾಲ್ಲೂಕಿನ ನನ್ನ ಆಪ್ತ ಸ್ನೇಹಿತರೊಬ್ಬರ ಬಂಧು ಶಿವಮೊಗ್ಗೆಯ ಆಸ್ಪತ್ರೆಯಲ್ಲಿ ಸಾವಿಗೀಡಾದರು. ಅವರು ಸಾವಿಗೀಡಾದದ್ದು ಹೃದಯಾಘಾತ ಹಾಗೂ ಮೂತ್ರಪಿಂಡ ವೈಫಲ್ಯದಿಂದ. ಆದರೆ ಅವರು ಕೋವಿಡ್ಡಿನಿಂದಲೇ ಮೃತಪಟ್ಟಿದ್ದಾರೆಂದು ಸುದ್ದಿ ಹರಡಿತು. ಹಾಗಾಗಿ ಮೃತದೇಹವನ್ನು ಯಾವುದೇ ಕಾರಣಕ್ಕೂ ಊರಿಗೆ ತರಕೂಡದೆಂದು ಊರಿನ ವಿದ್ಯಾವಂತರೆನಿಸಿಕೊಂಡ ಬಂಧುಬಳಗದವರು ಮತ್ತಿತರರು ತಾಕೀತು ಮಾಡಿದರು. ಕೊನೆಗೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲೇ ಅಂತ್ಯಸಂಸ್ಕಾರ ನೆರವೇರಿಸಬೇಕಾಯಿತು. ಅಂತ್ಯಸಂಸ್ಕಾರಕ್ಕೆ ಅಗತ್ಯವಾಗಿ ಬರಬೇಕಾದ ಕೆಲವು ಬಂಧುಗಳೂ ಬರಲಿಲ್ಲ. ಅನಾನುಕೂಲದಿಂದಲ್ಲ, ಕೋವಿಡ್ ಹೆದರಿಕೆಯಿಂದ! ಆದರೆ ಆ ಚಿತಾಗಾರವನ್ನು ತನ್ನ ಮನೆಯೆಂದೇ ಭಾವಿಸಿರುವ ಚಿತಾಗಾರದ ಮೇಲ್ವಿಚಾರಕಿ ಅನಸೂಯಮ್ಮ ಮಾತ್ರ ಸಕಲ ಗೌರವ ಮರ್ಯಾದೆ ಸಂಪ್ರದಾಯಗಳೊಂದಿಗೆ ಮೃತದೇಹದ ಅಂತ್ಯಸಂಸ್ಕಾರಕ್ಕೆ ನೆರವಾಗಿ ಮಾನವೀಯತೆ ಮೆರೆದರು. ಆಕೆಯೇನೂ ಅಂತಹ ವಿದ್ಯಾವಂತೆಯಲ್ಲ. ಆದರೆ ಅತ್ಯಂತ ಹೃದಯವಂತಳಾಗಿದ್ದರು. ವಿವೇಕವಂತೆಯಾಗಿದ್ದರು. ಹಾಗಾಗಿ ಕೋವಿಡ್ ಭೀತಿ ಆಕೆಯನ್ನು ಕಾಡಲಿಲ್ಲ. ನನ್ನ ಸ್ನೇಹಿತರ ಬಂಧುಬಳಗ ಈಗಲೂ ಕೋವಿಡ್ ಭೀತಿಯಿಂದ ಸಂತ್ರಸ್ತ ಕುಟುಂಬದೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ. ಕೋವಿಡ್ ಕಾರಣಕ್ಕೆ ಸಾವು ಬರದಿದ್ದರೂ ಸುಖಾಸುಮ್ಮನೆ ಮೃತವ್ಯಕ್ತಿಗೆ ಕೋವಿಡ್ ಕಳಂಕ ಅಂಟಿಸಿಯೇಬಿಟ್ಟಿದ್ದಾರೆ!

ನಮ್ಮ ಪಕ್ಕದ ಮನೆಯವರು ಉಳಿದ ಸಮಯದಲ್ಲಿ ಬಹಳ ಆತ್ಮೀಯವಾಗಿ ಎಲ್ಲಿ ಸಿಕ್ಕಿದರೂ ಮಾತನಾಡುತ್ತಾರೆ. ಗೌರವಿಸುತ್ತಾರೆ. ಆದರೆ ಲಾಕ್ ಡೌನ್-1 ಮತ್ತು ಲಾಕ್ ಡೌನ್-2ರ ಸಂದರ್ಭದಲ್ಲಿ ನಾನು ಎದುರಿಗೆ ಸುಳಿದರೂ ಅಪ್ಪಿತಪ್ಪಿಯೂ ಅವರು ಮಾತನಾಡುವುದಿಲ್ಲ. ಮಾತನಾಡಿದರೆ ಎಲ್ಲಿ ಕೊರೋನಾ ಬಂದುಬಿಡುತ್ತದೆಯೋ ಎಂಬ ಭಯ! ಲಾಕ್ಡೌನ್ ಮುಗಿಯುತ್ತಿದ್ದಂತೆ ಮತ್ತೆ ಆತ್ಮೀಯವಾಗಿ ಮಾತಿಗೆ ಶುರುಹಚ್ಚಿಕೊಳ್ತಾರೆ. ಆಗ ಕೋವಿಡ್ ಭೀತಿ ಅವರನ್ನು ಕಾಡುವುದಿಲ್ಲ! ಅಷ್ಟಕ್ಕೂ ಅವರು ಕೂಡ ವಿದ್ಯಾವಂತರು!

ನಂಬಿಕೆ ಅಥವಾ ಮೂಢನಂಬಿಕೆಗಳನ್ನು ಇಟ್ಟುಕೊಳ್ಳುವುದು/ಇಟ್ಟುಕೊಳ್ಳದಿರುವುದು ಅವರವರ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟಿದ್ದು. ಅದರ ಬಗ್ಗೆ ನನ್ನದೇನೂ ತಕರಾರಿಲ್ಲ. ಆದರೆ ಪ್ರಜ್ಞಾವಂತಿಕೆ ಮೆರೆಯುವುದು, ಹೃದಯವಂತರಾಗುವುದು, ವಿವೇಕದ ನಡೆ ಪ್ರದರ್ಶಿಸುವುದು ಮಾನವ ಜನ್ಮದ ಶ್ರೇಷ್ಠ ಲಕ್ಷಣ.

ನಾವು ಎಂಥವರಾಗಬೇಕೆಂದು ನಾವೇ ನಿರ್ಧರಿಸೋಣ.

ಬೆಂಗಳೂರಿನ ನಂದಿದುರ್ಗದ ರಸ್ತೆಯಲ್ಲಿ ಕೋವಿಡ್’ಗೆ ಬಲಿಯಾದ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ಮಾಡಿದ ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ಕಾರ್ಯಕರ್ತರು.
BNMK photographs

ದು.ಗು. ಲಕ್ಷ್ಮಣ: ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ’ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ’ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.
Tags: covid deaths in karnatakacovid-19 karnatakadu gu lakshman
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗಕ್ಕೆ ಶಿವರಾಜ್ ಕುಮಾರ್  ಸಾರಥ್ಯ

ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗಕ್ಕೆ ಶಿವರಾಜ್ ಕುಮಾರ್ ಸಾರಥ್ಯ

Leave a Reply Cancel reply

Your email address will not be published. Required fields are marked *

Recommended

ದ್ವಿತೀಯ ಪಿಯುಸಿ ಫಲಿತಾಂಶ; ಗುಡಿಬಂಡೆ ಕಾಲೇಜ್ ಉತ್ತಮ ಸಾಧನೆ

ದ್ವಿತೀಯ ಪಿಯುಸಿ ಫಲಿತಾಂಶ; ಗುಡಿಬಂಡೆ ಕಾಲೇಜ್ ಉತ್ತಮ ಸಾಧನೆ

1 year ago
ಹೊಸ ಪ್ರಭೇದದ ಕೊರೊನಾ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ, ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ: ಡಾ.ಕೆ.ಸುಧಾಕರ್

ಕೋವಿಡ್‌ 2ನೇ ಅಲೆಯಲ್ಲಿ ತೇಲುತ್ತಿದೆ ಕರ್ನಾಟಕ! ಯುವ‌ಜನರು ಮತ್ತು ಮಧ್ಯ ವಯಸ್ಕರಲ್ಲಿಯೇ ಹೆಚ್ಚುತ್ತಿದೆ ಸಾವು!! ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ