• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home ET CINEMA

ಬದುಕಿನಲ್ಲಿ ಲೆಕ್ಕ ಮುಖ್ಯ, ಆದರೆ ಅದು ಯಾವಾಗಲೂ ಕೈ ಹಿಡಿಯುವುದಿಲ್ಲ ಗೊತ್ತಾ?

P K Channakrishna by P K Channakrishna
August 3, 2020
in ET CINEMA, STATE
Reading Time: 1 min read
0
ಬದುಕಿನಲ್ಲಿ ಲೆಕ್ಕ ಮುಖ್ಯ, ಆದರೆ ಅದು ಯಾವಾಗಲೂ ಕೈ ಹಿಡಿಯುವುದಿಲ್ಲ ಗೊತ್ತಾ?
915
VIEWS
FacebookTwitterWhatsuplinkedinEmail

ಚಿತ್ರ ವಿಮರ್ಶೆ


2011ರಲ್ಲಿ ಸಿಲ್ಕ್’ಸ್ಮಿತಾ ಬಯೋಪಿಕ್ ‘ ಡರ್ಟಿ ಪಿಕ್ಚರ್’ ಸಿನಿಮಾದಲ್ಲಿ ನಟಿಸಿದಾಗಲೇ ವಿದ್ಯಾಬಾಲನ್ ಎಂಬ ನಟಿ ಇಡೀ ಭಾರತವನ್ನು ಶೇಕ್ ಮಾಡಿದ್ದರು. ಅದಾದ ಮೇಲೆ ಬಂದ ’ಕಹಾನಿ’ಯಲ್ಲಿ ಅವರ ಅಭಿನಯ ಮನೋಜ್ಞ. ಬಳಿಕ 2019ರಲ್ಲಿ ತೆಲುಗಿನಲ್ಲಿ ಎನ್’ಟಿಆರ್ ಬಯೋಪಿಕ್’ಗಳಾದ ’ಕಥಾನಾಯಕುಡು’ / ’ಮಹಾನಾಯಕುಡು’ ಚಿತ್ರಗಳಲ್ಲಿ ಅವರು, ಎನ್’ಟಿಆರ್ ಮೊದಲ ಪತ್ನಿ ಬಸವತಾರಕಂ ಪಾತ್ರದಲ್ಲಿ ಜೀವಿಸಿದ್ದರು. ಇದಾದ ಮೇಲೆ ಬಂದ ಚಿತ್ರವೇ ’ಮಿಷನ್ ಮಂಗಲ್’. ಈ ಚಿತ್ರದಲ್ಲಿ ಓರ್ವ ಗೃಹಿಣಿಯಾಗಿ, ಸದಾ ಸಿಡುಕುವ ಪತಿಯ ಪತ್ನಿಯಾಗಿ, ಮಾತು ಕೇಳದ ಮಗನ ತಾಯಿಯಾಗಿ ಮತ್ತು ಇಸ್ತ್ರೋ ವಿಜ್ಞಾನಿಯಾಗಿ ನಟಿಸಿ ಎಲ್ಲರನ್ನೂ ಮೆಚ್ಚಿಸಿದ್ದರು. ಅದರಲ್ಲಿ ಹೀರೋ ಅಕ್ಷಯ್ ಕುಮಾರ್ ಅವರನ್ನು ಸರಿಗಟ್ಟುವಂತೆ ನಟಿಸಿದ್ದರು. ಈಗ ’ಶಕುಂತಲಾ ದೇವಿ’. ಕೋವಿಡ್ ಕಾರಣಕ್ಕೆ ಒಟಿಟಿ ಫ್ಲಾಟ್’ಫಾರ್ಮನಲ್ಲಿ ರಿಲೀಸ್ ಆದರೂ ದೇಶವಷ್ಟೇ ಅಲ್ಲ, ಇಡೀ ಜಗತ್ತಿನಾದ್ಯಂತ ಸೌಂಡ್ ಮಾಡುತ್ತಿದೆ ಈ ಸಿನಿಮಾ.

ಏನೀದು ಸಿನಿಮಾ?

ಶಕುಂತಲಾ ದೇವಿ! ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಬೆಂಗಳೂರಿಗರಿಗಂತೂ ಅವರು ತಮ್ಮವರೇ. ಗಣಿತದ ವಿಸ್ಮಯ, ಮಾನವ ಕಂಪ್ಯೂಟರ್. ಲೆಕ್ಕಗಳ ಮೂಲಕವೇ ಇಡೀ ಜಗತ್ತನ್ನು ನಿಬ್ಬೆರಗು ಮಾಡಿದ ಅನನ್ಯ ಪ್ರತಿಭೆ. ಹುಟ್ಟಿದ್ದು ಬೆಂಗಳೂರು, ಅಂತಿಮ ಪಯಣ ಮುಗಿಸಿದ್ದೂ ಬೆಂಗಳೂರಿನಲ್ಲಿಯೇ.

ಗಣಿತದ ಜತೆ ಖಗೋಳ, ಜ್ಯೋತಿಷ್ಯದಿಂದ ಜಗತ್ತಿನ ಗಮನ ಸೆಳೆದಿದ್ದ ಅವರು ‘ಲೆಕ್ಕದ ರಾಣಿ’ ಎಂಬುದಾಗಿಯೂ ಖ್ಯಾತರು. ಮಾತ್ರವಲ್ಲ, ಜಗತ್ತಿನ ಅತ್ಯಂತ ವೇಗದ ಮಾನವ ಕಂಪ್ಯೂಟರ್ ಎಂಬ ಹೆಗ್ಗಳಿಕೆಯೂ ಇವರದಾಗಿತ್ತು. ಇವರು ಸಾಲ್ವ್ ಮಾಡದ ಲೆಕ್ಕವಿಲ್ಲ, ಯಾವ ಲೆಕ್ಕಕ್ಕೂ ಸೋತವರಲ್ಲ. ಗಿನ್ನೆಸ್ ದಾಖಲೆಯನ್ನೇರಿದ್ದರು. ಬದುಕಿನುದ್ದಕ್ಕೂ ಸದಾ ಸುದ್ದಿಯಲ್ಲಿದ್ದ ಅವರು, ಕೊನೆಗಾಲದಲ್ಲೂ ಗಣಿತೇತರ ಸುದ್ದಿಗಳಲ್ಲೇ ಮುಳುಗಿಬಿಟ್ಟಿದ್ದರು. ಅವರ ಇಳಿವಯಸ್ಸಿನಲ್ಲೂ ಇನ್ನಿಲ್ಲದ ಸುದ್ದಿಗಳು ಬಂದವು! ಅದು ನಿಜಕ್ಕೂ ವಿಪರ್ಯಾಸವೇ. ಇರಲಿ, ಈಗ ಅವರೊಂದು ಸಿನಿಮಾ ಆಗಿದ್ದಾರೆ. ಅವರ ಬದುಕು ಬೆಳ್ಳಿತೆರೆಯ ಮೇಲೆ ಬಂದಿದೆ.

ಶಕುಂತಲಾ ದೇವಿ

ಹೇಗಿದೆ ಸಿನಿಮಾ?:

ಅಮೆಜಾನ್ ಪ್ರೈಮಿನಲ್ಲಿ ಸಿನಿಮಾ ರಿಲೀಸ್ ಆಗಿದೆ. ಕೋವಿಡ್ ಕಾರಣಕ್ಕೆ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸುಗಳು ಬಂದ್. ಹೀಗಾಗಿ ನಿರ್ಮಾಪಕರು ಒಟಿಟಿ ಮೂಲಕ ಬಿಡುಗಡೆ ಮಾಡಿದ್ದಾರೆ. ಕೆಲ ದಿನಗಳಿಂದಲೇ ಅಮೆಜಾನ್,ನಲ್ಲಿ ಬರುವ ನಿರೀಕ್ಷೆಇದ್ದಿದ್ದರಿಂದ ವರ ಮಹಾಲಕ್ಷ್ಮೀ ಹಬ್ಬದ ಸಂಭ್ರಮದ ನಡುವೆಯೇ ಮಕ್ಕಳ ಜತೆ ಕೂತು ನೋಡಿದ ಈ ಸಿನಿಮಾ ಇನ್ನಿಲ್ಲದ ಹಾಗೆ ಕಾಡಿದ್ದರಲ್ಲಿ ಎರಡು ಮಾತಿಲ್ಲ. ಬೆಂಗಳೂರು ಮತ್ತು ಬೆಂಗಳೂರಿನಲ್ಲೇ ಅವರು ಕಂಡ ಯಶಸ್ಸು, ಆ ಯಶಸ್ಸನ್ನು ನೋಡುತ್ತಲೇ ಉಬ್ಬಿಹೋಗುವ ನಮಗೆ, ಶಕುಂತಲಾ ದೇವಿಯವರ ತಮುಲಗಳು, ನೋವುಗಳು ಅವರ ಲೆಕ್ಕದಂತೆ ಅಂಕೆಗೆ ಸಿಗುವುದಿಲ್ಲ. ಬಹುವಾಗಿ ಯೋಚಿಸುವಂತೆ ಮಾಡುತ್ತವೆ. ಕಷ್ಟಗಳಿಂದಲೇ ಮೇಲೆ ಬರುವ ಅವರು, ಯಾವ ಗಾಡ್’ಫಾದರ್ ಇಲ್ಲದೇ ಶಿಖರ ಸಾಧನೆ ಮಾಡುವ ಕಥೆ ಕಣ್ಣಾಲಿಗಳನ್ನು ತೇವಗೊಳಿಸುತ್ತದೆ. ಅದಾದ ಮೇಲೆ ಪ್ರೀತಿ, ಪ್ರೇಮ, ನೋವು ಇತ್ಯಾದಿ ನಮ್ಮ ಮನಸ್ಸನ್ನು ಕಲಕುತ್ತವೆ.

ಆ ಲೆಕ್ಕದ ತಾಯಿ, ಅವರ ಮೇಲೆಯೇ ಕೇಸು ಹಾಕುವ ಮಗಳು ಅನುಪಮಾ ಬ್ಯಾನರ್ಜಿ (ಸನ್ಯಾ ಮಲ್ಹೋತ್ರ), ಆ ಕ್ಷಣದಲ್ಲಿ ಶಕುಂತಲಾ ದೇವಿ ಅವರಿಗೇ ಕೈಕೊಡುವ ಮಾನವ ಸಂಬಂಧಗಳ ಲೆಕ್ಕಗಳು ತೀವ್ರವಾಗಿ ಯೋಚನೆ ಮಾಡುವಂತೆ ಮಾಡುತ್ತವೆ. ನಿರ್ದೇಶಕಿ ಅನುಪಮಾ ಮೆನನ್ ಥೇಟ್ ಲೆಕ್ಕದಂತೆಯೇ ಸಿನಿಮಾದ ದೃಶ್ಯಗಳನ್ನು 1,2,3,4 ಹಾಗೂ +,- ನಂತೆ ಪೋಣಿಸಿಕೊಂಡು ಹೋಗಿದ್ದಾರೆ. ನಮ್ಮ ಸಮಾಜದಲ್ಲಿ ಬಹು ಅನನ್ಯ ಎಂದುಕೊಳ್ಳುವ ತಾಯಿ-ಮಗಳ ಬಾಂಧವ್ಯ ’ಶಕುಂತಲಾ ದೇವಿ’ ಸಿನಿಮಾದಲ್ಲಿ ’ಹೌದಾ! ಹೀಗಾ!!’ ಎಂದು ಕಣ್ಣಗಲಿಸುವಂತೆ ಮಾಡುತ್ತದೆ. ಇಡೀ ಸಿನಿಮಾ ನೋಡಿದ ಮೇಲೆ ಹೀಗೆ ಅನಿಸದೇ ಇರದು.
‘ಬದುಕಿನಲ್ಲಿ ಲೆಕ್ಕ ಮುಖ್ಯ, ಆದರೆ ಅದು ಯಾವಾಗಲೂ ಕೈ ಹಿಡಿಯುವುದಿಲ್ಲ..!!’

ಒಟ್ಟಾರೆಯಾಗಿ, ಇಡೀ ಸಿನಿಮಾ ಹತ್ತು ಹಲವು ಟ್ವಿಸ್ಟುಗಳಿಂದ ಥ್ರಿಲ್ಲರ್ ಕಥೆಯಂತೆ ಸಾಗುತ್ತದೆ. ತಂದೆ-ತಾಯಿ ಮೇಲೆ ಅವರಿಗಷ್ಟೇನು ಇರದ ಅನುಭೂತಿ, ಪ್ರೀತಿಯಲ್ಲಿ ತನ್ನನ್ನು ವಂಚಿಸುವ ವ್ಯಕ್ತಿಯೊಬ್ಬರಿಗೆ ಪಿಸ್ತೂಲಿನಿಂದ ಗುಂಡಿಕ್ಕುವುದು, ಅದಾದ ಮೇಲೆ ಬ್ರಿಟನ್’ಗೆ ಹೋಗಬೇಕಾಗಿ ಬಂದದ್ದು, ಅಲ್ಲಿ ಅವರು ಎದುರಿಸುವ ಸಮಸ್ಯೆಗಳು ಮತ್ತು ನಡೆಸುವ ಸಂಘರ್ಷಗಳು, ಅಂತಿಮವಾಗಿ ಮಗಳ ಜತೆಗೇ ಉಂಟಾಗುವ ಮನಸ್ತಾಪ… ಹೀಗೆ ಲೆಕ್ಕದಂತೆ ಶಕುಂತಲಾ ದೇವಿ ಅವರ ಕಷ್ಟಗಳೂ ಬೇಕಾದಷ್ಟಿವೆ. ಅವೆಲ್ಲವನ್ನೂ ಮನೋಜ್ಞವಾಗಿ, ನೈಜವಾಗಿ ಚಿತ್ರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಚಿತ್ರದ ಮೊದಲ ಭಾಗದಷ್ಟೇ ದ್ವಿತೀಯ ಭಾಗವೂ ಗಟ್ಟಿಯಾಗಿ ಪ್ರೇಕ್ಷಕರ ಮನಸ್ಸನ್ನು ಹಿಡಿದಿಡುತ್ತದೆ.

ನಿರ್ದೇಶಕಿಯ ಜಾಣ್ಮೆ:

‘ಶಕುಂತಲಾ ದೇವಿ’ ಚಿತ್ರದ ನಿಜವಾದ ಶಕ್ತಿ ಕಥೆ ಮತ್ತು ನಿರ್ದೇಶನ. ನಮಗೆಲ್ಲ ಶಕುಂತಲಾ ದೇವಿ ಒಬ್ಬ ಗಣಿತ ತಜ್ಞೆಯಾಗಿ ಮಾತ್ರ ಗೊತ್ತು. ಆದರೆ ನಿರ್ದೇಶಕಿ ಅನು ಮೆನನ್ ಅವರು ಶಕುಂತಲಾ ದೇವಿ ಅವರ ಇನ್ನೊಂದು ಮುಖವನ್ನು ನಿರ್ದೇಶಕಿಯಾಗಿ ಅಲ್ಲದೆ ಓರ್ವ ಮಹಿಳೆಯಾಗಿ ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅದೇನು ಎಂಬುದು ಸಿನಿಮಾದಲ್ಲಿ ಕಾಣುತ್ತದೆ. ಕಥೆಯ ಜತೆಗೆ ಚಿತ್ರಕಥೆಯನ್ನು ಬಹಳ ಟೈಟಾಗಿ ಮಾಡಿಕೊಂಡಿದ್ದಾರೆ ಅವರು. ಶಕುಂತಲಾ ದೇವಿ ಅವರ ಪ್ರತಿಹೆಜ್ಜೆಗಳನ್ನು ಅವಲೋಕಿಸಿದ್ದಾರೆ. ಅವರ ಪ್ರತಿಭೆಗೆ ಹ್ಯಾಟ್ಸಾಫ್ ಹೇಳಲೇಬೇಕು.

ವಿದ್ಯಾಬಾಲನ್ ನಟನೆ:

ಇಡೀ ಸಿನಿಮಾವನ್ನು ವಿದ್ಯಾಬಾಲನ್ ಆವರಿಸಿಕೊಂಡಿದ್ದಾರೆ ಎನ್ನುವುದರಲ್ಲಿ ಡೌಟೇ ಇಲ್ಲ. ಇಡೀ ಸಿನಿಮಾದ ಅಷ್ಟದಿಕ್ಕುಗಳಲ್ಲೂ ಅವರಿದ್ದಾರೆ ಮತ್ತೂ ಇಡೀ ಸಿನಿಮಾವೇ ಅವರನ್ನೇ ಸುತ್ತುತ್ತದೆ. ಶಕುಂತಲಾ ದೇವಿ ಪಾತ್ರದಲ್ಲಿ ಅವರು ಪರಕಾಯ ಪ್ರವೇಶ ಮಾಡಿದ್ದಾರೆ. ಹೆಜ್ಜೆಹೆಜ್ಜೆಗೂ, ದೃಶ್ಯದೃಶ್ಯಕ್ಕೂ ಅವರ ನಟನೆಯಲ್ಲಿ ವೇರಿಯೇಷನ್ಸ್ ಇವೆ. ಅಹಂಭಾವ, ಅಸಹ್ಯ, ನೋವು, ಸಹನೆ, ಸಿಡುಕು.., ಇಂಥ ಭಾವನೆಗಳನ್ನು ಅವರು ಲೀಲಾಜಾಲವಾಗಿ ತೋರಿಸಿದ್ದಾರೆ. ಜತೆಗೆ ಸಂಭಾಷಣೆ ಹೇಳುವ ಪರಿ, ಆಂಗೀಕತೆ, ಕಾಸ್ಟ್ಯೂಮ್ ಸೇರಿದಂತೆ ಎಲ್ಲ ಅಂಶಗಳಲ್ಲೂ ವಿದ್ಯಾ ವಿಜೃಂಭಿಸಿದ್ದಾರೆ. ಈ ಪಾತ್ರವನ್ನು ಅವರು ಬಿಟ್ಟರೇ ಇನ್ನೊಬ್ಬ ನಟಿ ಹೀಗೆ, ಇಷ್ಟು ಸಹಜವಾಗಿ ಮಾಡಲು ಸಾಧ್ಯವೇ ಎಂದೆನಿಸಿಬಿಡುತ್ತದೆ.

ಉಳಿದ ಪಾತ್ರಗಳು ಅಗತ್ಯಕ್ಕೆ ತಕ್ಕಂತೆ ಘನವಾಗಿವೆ. ಹಿನ್ನೆಲೆ ಸಂಗೀತ, ಕ್ಯಾಮೆರಾ ಕೆಲಸ ಎಲ್ಲವೂ ಅಚ್ಚುಕಟ್ಟು. ಮಿಸ್ ಮಾಡಿಕೊಳ್ಳಲೇಬಾರದ ಸಿನಿಮಾ ಇದು.

Tags: amazon primeshakuntala devishakuntala devi movieshakuntala devi movie reviewvidya balan
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಚಾಪೆ ಕೆಳಗೆ ಸರಕಾರ, ರಂಗೋಲಿ ಕೆಳಗೆ ಖಾಸಗಿ ಆಸ್ಪತ್ರೆಗಳು; ಬೀದಿಗೆ ಬಿದ್ದ ಜನ

ಚಾಪೆ ಕೆಳಗೆ ಸರಕಾರ, ರಂಗೋಲಿ ಕೆಳಗೆ ಖಾಸಗಿ ಆಸ್ಪತ್ರೆಗಳು; ಬೀದಿಗೆ ಬಿದ್ದ ಜನ

Leave a Reply Cancel reply

Your email address will not be published. Required fields are marked *

Recommended

ಯಾವ ಜಾತಿಯಲ್ಲಿ ಹುಟ್ಟಿದರೇನಂತೆ, ಸಮಾಜದಲ್ಲಿ ಎಲ್ಲರೂ ಸಹೋದರರಂತೆ ಒಟ್ಟಾಗಿ ಜೀವಿಸೋಣ ಎಂದು ಕಿವಿಮಾತು ಹೇಳಿದ ಗುಂಜೂರು ಶ್ರೀನಿವಾಸರೆಡ್ಡಿ

ಯಾವ ಜಾತಿಯಲ್ಲಿ ಹುಟ್ಟಿದರೇನಂತೆ, ಸಮಾಜದಲ್ಲಿ ಎಲ್ಲರೂ ಸಹೋದರರಂತೆ ಒಟ್ಟಾಗಿ ಜೀವಿಸೋಣ ಎಂದು ಕಿವಿಮಾತು ಹೇಳಿದ ಗುಂಜೂರು ಶ್ರೀನಿವಾಸರೆಡ್ಡಿ

4 years ago
SSLC ರಿಸಲ್ಟ್;‌ ಒಬ್ಬ ವಿದ್ಯಾರ್ಥಿ ಮಾತ್ರ ಫೇಲ್

SSLC ರಿಸಲ್ಟ್;‌ ಒಬ್ಬ ವಿದ್ಯಾರ್ಥಿ ಮಾತ್ರ ಫೇಲ್

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ