• About
  • Advertise
  • Careers
  • Contact
Tuesday, May 20, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಕರುಣೆ ಇಲ್ಲದ ಅಗ್ನಿ; ಅಪರ ಭಗೀರಥನ ಜ್ಞಾನವನ ದಹನ!!

cknewsnow desk by cknewsnow desk
August 9, 2020
in STATE
Reading Time: 1 min read
0
ಕರುಣೆ ಇಲ್ಲದ ಅಗ್ನಿ; ಅಪರ ಭಗೀರಥನ ಜ್ಞಾನವನ ದಹನ!!
924
VIEWS
FacebookTwitterWhatsuplinkedinEmail

ಆರು ವರ್ಷದ ಹಿಂದೆ ಜಿ.ಎಸ್. ಪರಮಶಿವಯ್ಯ ಹೇಳಿದ್ದ ಮಾತು ಸತ್ಯವಾಯಿತಾ?

ಬೆಂಗಳೂರು: ಬಯಲು ಸೀಮೆಯಷ್ಟೇ ಅಲ್ಲ, ನಾಡಿನ ಪ್ರತಿಯೊಬ್ಬರೂ ಆಘಾತಗೊಳ್ಳುವ ಘಟನೆಯೊಂದು ನಡೆದುಹೋಗಿದೆ. ಅನೇಕ ನೀರಾವರಿಯ ಕನಸುಗಳು, ಆಸೆಗಳು ಮತ್ತು ಆಕಾಂಕ್ಷೆಗಳು, ಜತೆಗೆ ಅಮೂಲ್ಯವಾದ ವರದಿಗಳು ಏಕಕಾಲಕ್ಕೆ ಬೆಂಕಿಗೆ ಆಹುತಿಯಾಗಿವೆ. ದ್ವಾಪರಯುಗದಲ್ಲಿ ಅಗ್ನಿಯು ಅಮೂಲ್ಯವಾದ ಗಿಡಮೂಲಿಕೆಗಳ ತವರಾಗಿದ್ದ ಖಾಂಡವ ವನವನ್ನು ದಹಿಸಿದಂತೆ ಇಲ್ಲಿ ಕರುಣೆ ಇಲ್ಲದ ಬೆಂಕಿ ನಮ್ಮ ರಾಜ್ಯದ ಮುಂದಿನ ತಲೆಮಾರುಗಳಿಗೆ ಅಮೂಲ್ಯ ದಾಖಲೆಗಳಾಗಿದ್ದ ಕಾಗದ ಪತ್ರಗಳನ್ನು ನುಂಗಿಹಾಕಿದೆ.

ಬಯಲುಸೀಮೆ ಪಾಲಿನ ಭಗೀರಥ ಜಿ.ಎಸ್. ಪರಮಶಿವಯ್ಯ

ಏನಾಯಿತು?

ಜಿ.ಎಸ್. ಪರಮಶಿವಯ್ಯ ಅವರು ಬಯಲು ಸೀಮೆ ಪಾಲಿನ ಭಗೀರಥರು. ಬದುಕಿದ್ದಷ್ಟು ಕಾಲವೂ ಬರಪೀಡಿತ ಜಿಲ್ಲೆಗಳಿಗೆ ಶಾಶ್ವತವಾದ ನೀರಿನ ಆಸರೆ ಮಾಡಬೇಕೆಂದು ತಪಿಸಿದ ಜೀವ. ತಮ್ಮ ಜೀವಿತಾವಧಿಯ ಕೊನೆ ಕ್ಷಣದವರಗೂ ಈ ಉದ್ದೇಶಕ್ಕಾಗಿ ಬಾಳಿದ ವಿರಳ ವ್ಯಕ್ತಿ. ಅವರು ತಮ್ಮ ಮನೆಯಲ್ಲಿ ಭದ್ರವಾಗಿ ಕಾಪಿಟ್ಟುಕೊಂಡಿದ್ದ ವಿವಿಧ ಯೋಜನೆಗಳ ವರದಿಗಳು, ಯೋಜನಾ ವರದಿಗಳೆಲ್ಲ ಸುಟ್ಟು ಭಸ್ಮವಾಗಿವೆ. ಈ ಸರಕಾರಗಳಿಗೆ ಕಣ್ಣಿಲ್ಲ, ಇದ್ದರೂ ಕಾಣಲ್ಲ, ಆಳುವ ಮಂದಿಗೆ ಜನರ ನೋವು ಕೇಳುವ ಮನಸ್ಸಿಲ್ಲ.. ಹೀಗಾಗಿ ಈ ದಾಖಲೆಗಳನ್ನು ಇಟ್ಟುಕೊಂಡು ಮಾಡುವುದೇನು? ಎಲ್ಲವನ್ನೂ ತೆಗೆದುಕೊಂಡು ಹೋಗಿ ವಿಧಾನಸೌಧದ ಮುಂದೆ ಹಾಕಿ ಸುಟ್ಟುಬಿಡುತ್ತೇನೆ ಎಂದಿದ್ದರು ಪರಮಶಿವಯ್ಯನವರು. ಈಗ ಅದೇ ಆಗಿದೆ. ಅವರು ಸಂರಕ್ಷಿಸಿದ್ದ ದಾಖಲೆಗಳೆಲ್ಲ ಬೆಂಕಿಗೇ ಆಹುತಿಯಾಗಿವೆ.

ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ತಮ್ಮ ಕೊನೆಯುಸಿರು ಇರುವವರೆಗೂ ಕರ್ನಾಟಕ ರಾಜ್ಯದ ನೀರಾವರಿ ಸಲಹೆಗಾರರಾಗಿ ಸಲ್ಲಿಸಿದ ಅನನ್ಯವಾದ ನಿಸ್ವಾರ್ಥ ಸೇವೆ ಸ್ಮರಿಸುವಲ್ಲಿ ನಾವು ಕೃತಘ್ನರಾಗಿದ್ದೇವೆ. ಅವರ ಸೇವಾವಧಿಯಲ್ಲಿ ಯಶಸ್ವಿಯಾಗಿ ರೂಪಿಸಲಾದ ಸುಮಾರು 41 ನೀರಾವರಿ ಯೋಜನೆಗಳಲ್ಲಿ ಬಹುತೇಕ ಯೋಜನೆಗಳು ಅನುಷ್ಠಾನವಾಗಿ ಲಕ್ಷಾಂತರ ಎಕರೆ ಭೂಮಿಗೆ ನೀರಾವರಿಯಾಗಿದೆ. ಹಲವಾರು ಯೋಜನೆಗಳಿಗೆ ಸ್ವತಃ ಅಧ್ಯಯನ ನಡೆಸಿ, ನೂತನ ಆವಿಷ್ಕಾರ ಮಾಡಿದ್ದಲ್ಲದೆ ತಮ್ಮದೇ ಇಲಾಖೆಯ ಸಹ ಅಧಿಕಾರಿಗಳನ್ನು ಬಳಸಿಕೊಂಡು ಡಿಪಿಆರ್ ಸಹಾ ತಯಾರಿಸಿ,ರಾಜ್ಯದ ಬೊಕ್ಕಸಕ್ಕೆ ಉಳಿತಾಯವನ್ನೂ ಮಾಡಿಕೊಟ್ಟಿದ್ದರು. (ಇತ್ತೀಚೆಗೆ ಯಾವ ನೀರಾವರಿ ಅಧಿಕಾರಿಗೂ ಡಿಪಿಆರ್ ಮಾಡುವ ವ್ಯವಧಾನವಿಲ್ಲ, ಎಲ್ಲಾ ಡಿಪಿಆರ್ ಗಳು ಗುತ್ತಿಗೆದಾರರು ನೇಮಿಸಿದ ಖಾಸಗಿ ಸಂಸ್ಥೆಗಳೇ ಮಾಡಬೇಕು, ಖಾಸಗಿಯವರಿಗೆ ಡಿಪಿಆರ್ ತಯಾರಿಸಲು ನೂರಾರು ಕೋಟಿ ರೂಪಾಯಿ ಕೊಟ್ಟರೂ, ಅವರು ಮಾಡಿಕೊಟ್ಟ ಯೋಜನೆಗೆ ಸಾವಿರಾರು ಕೋಟಿ ರೂ.ಗಳನ್ನು ನಮ್ಮ ತೆರಿಗೆ ಹಣ ಖರ್ಚು ಮಾಡಿದರೂ ನೀರು ಮಾತ್ರ ನೋಡಲಾಗುವುದಿಲ್ಲ, ಇದಕ್ಕೆ ಜ್ವಲಂತ ಉದಾಹರಣೆ ಎತ್ತಿನಹೊಳೆ!!) ಇವೆಲ್ಲ ದಾಖಲೆಗಳು ಸುಟ್ಟು ಕರಕಲಾಗಿವೆ.

40 ವರ್ಷಗಳ ಅಧ್ಯಯನ:

ಕರ್ನಾಟಕವನ್ನು ಕಾಡುತ್ತಿರುವ ಸಮಸ್ಯೆಗಳ ಪರಿ ನೋಡಿ. ಒಂದೆಡೆ ಮಳೆಗಾಲದ ನೆರೆ, ಮತ್ತೊಂದು ಕಡೆ ಬೇಸಿಗೆಯ ಬರ. ಇವುಗಳ ಸಮಗ್ರ ಅಧ್ಯಯನ ಮಾಡಿ ನೆರೆ ಬರುವ ಪ್ರದೇಶಗಳಿಂದ ಬರ ಇರುವ ಬರಪೀಡಿತ ಬಯಲುಸೀಮೆ ಪ್ರದೇಶಗಳಿಗೆ ನೀರನ್ನು ಹರಿಸುವ ಮಾಸ್ಟರ್’ಪ್ಲಾನ್ ಮಾಡಿಕೊಟ್ಟವರನ್ನು ರಾಜ್ಯ ಮರೆತಿದೆ, ನಮ್ಮವರೂ ಕ್ರಮೇಣ ಮರೆಯುತ್ತಿದ್ದಾರೆ. ಸುಧೀರ್ಘವಾದ ಸರಕಾರೀ ಸೇವೆಯಿಂದ ನಿವೃತ್ತಿಯಾದ ನಂತರ 2014ರಲ್ಲಿ ತಮ್ಮ ದೇಹತ್ಯಾಗ ಮಾಡುವ ಕಟ್ಟ ಕಡೆಯ ಕ್ಷಣದವರೆಗೂ ಮಾಡಿದ ಯಜ್ಞ, ರಾಜ್ಯದ ರೈತರಿಗೆ ನೀರೊದಗಿಸುವ, ಜನ ಮತ್ತು ಜಾನುವಾರುಗಳಿಗೆ ಸುರಕ್ಷಿತ ಶುದ್ಧ ಕುಡಿಯುವ ನೀರು ಪೂರೈಸುವ, ಪಾತಾಳ ಸೇರಿರುವ ಅಂತರ್ಜಲ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅವರ 40 ವರ್ಷಗಳ ಅಧ್ಯಯನದ ಅಂಕಿ ಅಂಶಗಳುಳ್ಳ ನೂರಾರು ವರದಿಗಳು, ಸರಕಾರಕ್ಕೆ ಮಾಡಿದ ಶಿಫಾರಸ್ಸುಗಳು, ಟೊಪೊಶೀಟ್ಗಳು, ರಾಜ್ಯದ ನದಿಗಳು, ಕಾಡುವ ಪ್ರವಾಹಗಳು, ಅಣೆಕಟ್ಟುಗಳು, ಕೆರೆ ಕುಂಟೆಗಳ ಅಭಿವೃದ್ಧಿ, ಜಲಾನಯನ ಪ್ರದೇಶಗಳ ಅಭಿವೃದ್ಧಿ ಸೇರಿ ರಾಜ್ಯದ ಜಲವಿಜ್ಞಾನ ಮತ್ತು ಸಮಗ್ರ ಜಲಸಂಪನ್ಮೂಲದ ವರದಿಗಳು ಅಗ್ನಿ ಪ್ರಮಾದಕ್ಕೆ ತುತ್ತಾಗಿ ಸುಟ್ಟು ಬೂದಿ ಆಗಿಹೋಗಿವೆ.

ರಾಜ್ಯ ಕಂಡಂತೆ ನಿಜಲಿಂಗಪ್ಪನವರ ಕಾಲದಿಂದ ಇಂದಿನ ಯಡಿಯೂರಪ್ಪನವರ ವರೆಗೆ ಜಿ.ಎಸ್. ಪರಮಶಿವಯ್ಯನವರು ಖುದ್ದಾಗಿ ಬೇಟಿಯಾಗದ ಮುಖ್ಯಮಂತ್ರಿಗಳಿಲ್ಲ, ಅವರ ಸಲಹೆ ಪಡೆಯದ ನೀರಾವರಿ ಮಂತ್ರಿಗಳಿಲ್ಲ, ಅನೇಕರು ಜಿ.ಎಸ್. ಪರಮಶಿವಯ್ಯನವರ ವರದಿಗಾಗಿ ಹೊರಾಡುತ್ತಲೇ ಅಧಿಕಾರಕ್ಕೇರಿದರು ಮತ್ತೂ ಕೆಲವರು ಆತ್ಮವಂಚನೆ ಮಾಡಿಕೊಂಡು ಹಣ ಮಾಡಿಕೊಂಡರು. ತಮ್ಮ ತುಂಬು ಜೀವನದ 96 ವಸಂತಗಳನ್ನು ಪೂರೈಸಿದ ಅವರು ತಮ್ಮ ಅಂತ್ಯದ ದಿನಗಳಲ್ಲಿ ಸಾಕಷ್ಟು ಬೇಸರಗೊಂಡಿದ್ದರು, ಯಾವುದೇ ಪಕ್ಷ, ಯಾವುದೇ ಸರಕಾರ ತಮ್ಮ ಜಲಯಜ್ಞಕ್ಕೆ ಕಿವಿಗೊಡದಿದ್ದಾಗ ತಮ್ಮೆಲ್ಲಾ ವರದಿಗಳನ್ನು ವಿಧಾನಸೌಧದ ಮುಂದೆ ಸುಟ್ಟು ಹಾಕಿಬಿಡುವುದಾಗಿ ಅವರಲ್ಲಿದ್ದ ಸಾತ್ವಿಕ ಕೋಪವನ್ನು ಹೊರಹಾಕುತ್ತಿದ್ದರು. ಈಗ ಅದೇ ಆಗಿದೆ, ಅವರ ಆತ್ಮದ ನಿರಂತರ ಘೋಷ, ಅಗ್ನಿ ಪ್ರಮಾದಕ್ಕೆ ಎಡೆಮಾಡಿಕೊಟ್ಟಿದೆ.

ಸಮಾಧಾನಕರ ವಿಷಯವೆಂದರೆ ನಮ್ಮ ಬಯಲುಸೀಮೆಗೆ ಸಂಬಂಧಪಟ್ಟ ವರದಿಗಳನ್ನು ಶಾಶ್ವತ ನೀರಾವರಿ ಹೋರಾಟ ಸಮಿತಿಗೆ ಕೊಟ್ಟು ಭದ್ರಪಡಿಸಿದ್ದರು, ಮುಂದಿನ ಪೀಳಿಗೆಗಳಿಗೆ ಅತ್ಯಮೂಲ್ಯವಾದ ವೈಜ್ಞಾನಿಕ ವರದಿಗಳನ್ನು ಕ್ರೂಡೀಕರಿಸಿ ಶ್ರೀ ಜಿ.ಎಸ್. ಪರಮಶಿವಯ್ಯನವರ ನೆನಪಿನಲ್ಲಿ ಅಧ್ಯಯನ ಮತ್ತು ಮಾಹಿತಿ ಕೇಂದ್ರವನ್ನು ಸ್ಥಾಪಿಸಿ ಅವರ ಆತ್ಮ ಚಿರಶಾಂತಿಯಿಂದಿರಲು ಪ್ರಯತ್ನಿಸುತ್ತೇವೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ತಿಳಿಸಿದ್ದಾರೆ.

ಆರ್. ಆಂಜನೇಯ ರೆಡ್ಡಿ

ಬೆಂಕಿ ಅನಾಹುತದ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಆಂಜನೇಯ ರೆಡ್ಡಿ ಹೇಳಿದ್ದಿಷ್ಟು..

ಇದು ಅತ್ಯಂತ ಬೇಸರದ ಸಂಗತಿ. ಅವರಲ್ಲಿದ್ದ ಎಲ್ಲ ದಾಖಲೆಗಳನ್ನು ಸರಕಾರವೇ ಪಡೆದು ಸಂಗ್ರಹಿಸಿ ಸಂರಕ್ಷಿಸಬೇಕಾಗಿತ್ತು. ಆದರೆ ಅದು ಆಗಲಿಲ್ಲ. ಅನೇಕ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಿದ ಜಿ.ಎಸ್. ಪರಮಶಿವಯ್ಯವರು ಅತ್ಯಂತ ವಿರಳ ನೀರಾವರಿ ತಜ್ಞರು. ಆದರೆ ದಪ್ಪ ಚರ್ಮದ ಸರಕಾರಗಳ ಬಗ್ಗೆ ಅವರಿಗೆ ಯಾವಾಗಲೂ ಸಾತ್ವಿಕವಾದ ಸಿಟ್ಟಿತ್ತು.

Tags: chikkaballapurfireg s paramashivaiahkarnataka irrigationkolar
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಶ್ರೀರಾಮಪ್ರಭುವೇ ಕ್ಷಮಿಸು! ನಿನ್ನ ಹೆಸರಿಟ್ಟುಕೊಂಡವರೆಲ್ಲ ನಿನ್ನವರಲ್ಲ!!

ಶ್ರೀರಾಮಪ್ರಭುವೇ ಕ್ಷಮಿಸು! ನಿನ್ನ ಹೆಸರಿಟ್ಟುಕೊಂಡವರೆಲ್ಲ ನಿನ್ನವರಲ್ಲ!!

Leave a Reply Cancel reply

Your email address will not be published. Required fields are marked *

Recommended

ಕೋಲಾರದ ವಿಸ್ಟ್ರಾನ್‌ ಐಫೋನ್‌ ಘಟಕದ ಮೇಲೆ ದಾಳಿ; ಪ್ರಧಾನಮಂತ್ರಿ ನರೇಂದ್ರ ಮೋದಿ ಕಳವಳಕ್ಕೆ ಕಾರಣವೇನು?

2021ನೇ ವರ್ಷದ CBSE 12ನೇ ತರಗತಿ ಪರೀಕ್ಷೆ ರದ್ದು ಮಾಡಿದರು ಮೋದಿ; ಹಾಗಾದರೆ ಯಡಿಯೂರಪ್ಪ ಏನು ಮಾಡುತ್ತಾರೆ?

4 years ago
ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಕೊಡದೇ ಅನ್ಯಾಯ ಮಾಡಲೇಬೇಕು ಎಂಬುದೆ ಬಿಜೆಪಿ ಸರಕಾರದ ದುರುದ್ದೇಶ ಎಂದ ಕೃಷ್ಣಭೈರೇಗೌಡ

ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಕೊಡದೇ ಅನ್ಯಾಯ ಮಾಡಲೇಬೇಕು ಎಂಬುದೆ ಬಿಜೆಪಿ ಸರಕಾರದ ದುರುದ್ದೇಶ ಎಂದ ಕೃಷ್ಣಭೈರೇಗೌಡ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ