• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಕನ್ನಡವೆಂದರೆ ಅಷ್ಟು ಸುಲಭವೇ? 5 ಕೋಟಿ ಜನ ಮಾತನಾಡುವ ಅಭಿಜಾತ ಭಾಷೆಗೆ ಹಿಂದಿಯಿಂದ ಅಪಾಯವಿದೆಯಾ?

cknewsnow desk by cknewsnow desk
September 22, 2020
in GUEST COLUMN, STATE
Reading Time: 3 mins read
0
ಕನ್ನಡವೆಂದರೆ ಅಷ್ಟು ಸುಲಭವೇ? 5 ಕೋಟಿ ಜನ ಮಾತನಾಡುವ ಅಭಿಜಾತ ಭಾಷೆಗೆ ಹಿಂದಿಯಿಂದ ಅಪಾಯವಿದೆಯಾ?

????????????????????????????????????

933
VIEWS
FacebookTwitterWhatsuplinkedinEmail

ಹಿಂದಿಯಿಂದ ಸಾವಿರಾರು ವರುಷಗಳ ಅವಿಚ್ಛಿನ್ನ ಇತಿಹಾಸವುಳ್ಳ, 5 ಕೋಟಿ ಜನ ಮಾತನಾಡುವ ಕನ್ನಡ ಭಾಷೆ ದುರ್ಬಲವಾಗಿಬಿಡುತ್ತಾ? ಹೋಗಲಿ, ಕನ್ನಡವನ್ನೇ ದುರ್ಬಲ ಮಾಡಿಬಿಡುವಷ್ಟು ಶಕ್ತಿ ಹಿಂದಿಗೆ ಇದೆಯಾ? ಇದ್ದರೆ ಹೇಗೆ? ಪಂಪನಿಂದ ಈಗಿನ ಹೊಸ ತಲೆಮಾರಿನ ಬರಹಗಾರರವೆರಗೂ ಅಭಿಜಾತ ಭಾಷೆಯಾಗಿ ಬೆಳೆದುನಿಂತು ಜಗತ್ತಿನ ಅತ್ಯಂತ ಪುರಾತನ ಭಾಷೆಗಳಲ್ಲಿ ಒಂದಾಗಿರುವ ಕನ್ನಡವನ್ನು ರಕ್ಷಿಸುವ ಪರಿಸ್ಥಿತಿ ನಿರ್ಮಾಣ ಆಗಿದೆಯಾ? ಹೀಗೆ ಅನೇಕ ಪ್ರಶ್ನೆಗಳನ್ನು ಎತ್ತಿ ಚರ್ಚೆ ನಡೆಸಿದ್ದಾರೆ ಹಿರಿಯ ಪತ್ರಕರ್ತ ದು.ಗು. ಲಕ್ಷ್ಮಣ..


ಕೊರೋನಾ ಮತ್ತಿತರ ಅಪಸವ್ಯಗಳಿಂದಾಗಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರಿಗೆ ತಮ್ಮ ʼಪರಾಕ್ರಮ’ ತೋರುವ ಯಾವುದೇ ಸಂದರ್ಭ, ಅವಕಾಶಗಳೇ ಸಿಕ್ಕಿರಲಿಲ್ಲ. ಅಂತಾರಾಷ್ಟ್ರೀಯ ಹಿಂದಿ ದಿವಸ್ ಆಚರಣೆಗೆ ಕೇಂದ್ರ ಸರಕಾರ ಕರೆ ಕೊಟ್ಟಿದ್ದು ಕೆಲಸವಿಲ್ಲದ ಬಡಗಿಗೆ ಕೆಲಸ ಕೊಟ್ಟಂತಾಗಿದೆ. (ಬಡಗಿಯ ಬಗ್ಗೆ ನನಗೆ ಅಪಾರ ಗೌರವವಿದೆ. ಯಾರೂ ತಪ್ಪು ತಿಳಿಯುವ ಅಗತ್ಯವಿಲ್ಲ.) ರಾಜ್ಯದಾದ್ಯಂತ ಹಿಂದಿ ನಾಮಫಲಕಗಳನ್ನು ಕಿತ್ತೊಗೆಯುವ ಮೂಲಕ ನಾನಾ ರೀತಿಯಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಈ ಸಂಘಟನೆಗಳಿಗೆ ಕುಮ್ಮಕ್ಕು ಕೊಡುವ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರು `ಹಿಂದಿ ದಿವಸ್ ಭಾಷಾ ಅಹಂಕಾರದ ಸಂಕೇತ. ಅನ್ಯ ಭಾಷಿಕರ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರಲಾಗುತ್ತಿದೆ’ ಎಂದು ಕರವಸ್ತ್ರ ಇಲ್ಲದಿದ್ದರೂ ಕಣ್ಣೀರು ಹಾಕಿ, ಅಲವತ್ತುಕೊಂಡಿದ್ದಾರೆ. ಹಿಂದಿ ಹೇರಿಕೆ ಮತ್ತೊಂದು ಭಾಷೆಯ ಅವಸಾನಕ್ಕೆ ಕಾರಣವಾಗುವ ಜತೆಗೆ ದೇಶದ ಸಂಸ್ಕೃತಿ, ವೈವಿಧ್ಯತೆ, ಸಮಗ್ರತೆಗೆ ಧಕ್ಕೆ ತರುವ ಅಪಾಯವಿದೆ ಎಂದೂ ಎಚ್ಚರಿಸಿದ್ದಾರೆ.

ಒಂದು ವೇಳೆ ಕನ್ನಡಿಗರಲ್ಲಿ ಹೆಚ್ಚಿನವರು ಹಿಂದಿ ಕಲಿತುಬಿಟ್ಟರೆ ಕನ್ನಡ ಭಾಷೆ ಹಾಗಿದ್ದರೆ ಅವಸಾನ ಹಂತಕ್ಕೆ ತಲುಪುತ್ತದೆಯೇ? ಕನ್ನಡ ಅಷ್ಟೊಂದು ದುರ್ಬಲ ಭಾಷೆಯೆ? ಹಿಂದಿಯ ಹೊಡೆತದ ಮುಂದೆ ಕನ್ನಡ ದುರ್ಬಲವಾಗಿಬಿಡುತ್ತಾ? ಇದು ನನ್ನಂಥ ಜಿಜ್ಞಾಸುಗಳ ಪ್ರಶ್ನೆ.

ಒಂದು ಭಾಷೆಯ ಮೇಲೆ ಇನ್ನೊಂದನ್ನು ಹೇರುವ ಪ್ರವೃತ್ತಿ ಎಲ್ಲಿಂದ ಆರಂಭವಾಯಿತು? ಭಾಷೆಯನ್ನು ಹೇರುವುದು ಸಾಧ್ಯವಿದೆಯೆ? ಅದರಿಂದ ನಿಜವಾಗಿಯೂ ಭಾಷೆಗಳು ನಾಶವಾಗುತ್ತವೆಯೆ? ಈ ಹಿಂದಿ ಹೇರಿಕೆ ಹಿಂದಿನಿಂದಲೂ ಇದೆಯೆ? ಇತ್ತೀಚೆಗೆ ಯಾಕೆ ಇದರ ಬಗ್ಗೆ ಹೆಚ್ಚು ಚರ್ಚೆ? ಈ ಜಿಜ್ಞಾಸೆ ವ್ಯಕ್ತಪಡಿಸಿದವರು ಗೆಳೆಯರಾದ ತುಮಕೂರಿನ ಸಿಬಂತಿ ಪದ್ಮನಾಭ ಅವರು. ಫೇಸ್‌ ಬುಕ್‌ನಲ್ಲಿ ವ್ಯಕ್ತಪಡಿಸಿದ ಅವರ ಈ ಜಿಜ್ಞಾಸೆಗೆ ರಾಧಾಕೃಷ್ಣ ಹೊಳ್ಳ ಎಂಬ ಸಾಮಾಜಿಕ ಕಾರ್ಯಕರ್ತರು ನೀಡಿರುವ ಉತ್ತರ ಹೀಗಿತ್ತು:`ಭಾಷೆಯ ಹೇರಿಕೆ ಆಗುವುದು ಆಡಳಿತದಲ್ಲಿ ಅಥವಾ ಶಿಕ್ಷಣದಲ್ಲಿ. ಅದನ್ನು ಬಿಟ್ಟರೆ ಭಾಷೆಯನ್ನು ಹೇರುವುದು ಕಷ್ಟ. ಟಿಪ್ಪು ಪರ್ಷಿಯನ್ ಹೇರಲು ಪ್ರಯತ್ನಪಟ್ಟಿದ್ದ ಅಂತ ಓದಿದ್ದೇವೆ. ಹಾಗಾಗಿಯೇ ಅನೇಕ ಪರ್ಷಿಯನ್ ಶಬ್ಧಗಳು ಕನ್ನಡದೊಳಕ್ಕೂ ಇಳಿದಿವೆ. ಹಾಗೆಯೇ ಶಿಕ್ಷಣ ಮಾಧ್ಯಮದ ಮೂಲಕ ಇಂದು ಮಕ್ಕಳ ಮೇಲೆ ಇಂಗ್ಲಿಷನ್ನು ಹೇರುತ್ತಿದ್ದೇವೆ. ಹಿಂದಿ ಹೇರಿಕೆ ಆಗಿದ್ದು ಕಡಿಮೆಯೇ’.

ಸಿಬಂತಿ ಮತ್ತು ಹೊಳ್ಳ ಅವರ ನಡುವಿನ ಸಂವಾದದಲ್ಲಿ ಸಾಕಷ್ಟು ಚಿಂತನೀಯ ಅಂಶಗಳಿವೆ. ಹಿಂದಿ ಭಾಷೆಯನ್ನು ಹೇರುವುದರಿಂದ ಉಳಿದ ಪ್ರಾದೇಶಿಕ ಭಾಷೆಗಳು ನಾಶವಾಗುತ್ತವೆ ಎಂಬುದು ಬರೀ ಭ್ರಮೆ. ಹಾಗಿದ್ದರೆ ಈ ವೇಳೆಗೆ ಭಾರತದ ನೂರಾರು ಪ್ರಾದೇಶಿಕ ಭಾಷೆಗಳ ಅವಸಾನವಾಗಬೇಕಿತ್ತು. ಆದರೆ ಹಾಗಾಗಿಲ್ಲ. ಬದಲಿಗೆ ಅವು ಈಗಲೂ ಗಟ್ಟಿಯಾಗಿ ತಮ್ಮ ಅಸ್ಮಿತೆ ಹಾಗೂ ಸ್ವಂತಿಕೆಯನ್ನು ಉಳಿಸಿಕೊಂಡಿವೆ. ಆಯಾ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಹುಲುಸಾಗಿಯೇ ಬೆಳೆದಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಭಾಷೆಗಳನ್ನು ಮಾತಾಡುವ ದೇಶಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಸದ್ಯ ಭಾರತದಲ್ಲಿರುವುದು ಒಟ್ಟು 780 ಭಾಷೆಗಳು. ಇವುಗಳಲ್ಲಿ ಪ್ರಮುಖವಾದವು 122 (ಹತ್ತು ಸಾವಿರಕ್ಕಿಂತಲೂ ಅಧಿಕ ಜನರು ಮಾತನಾಡುವುದು) ಭಾರತದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಇಷ್ಟೊಂದು ಪ್ರಮುಖ ಭಾಷೆಗಳಲ್ಲಿ ಅಧಿಕೃತ ಭಾಷೆ ಎಂಬ ಸ್ಥಾನಮಾನ ನೀಡಿರುವುದು ಕೇವಲ ಇಪ್ಪತ್ತೆರಡು ಭಾಷೆಗಳಿಗೆ ಮಾತ್ರ. ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸ ಪರಂಪರೆ ಹಾಗೂ ಸ್ವತಂತ್ರ ಗುಣಲಕ್ಷಣಗಳನ್ನು ಹೊಂದಿರುವ ಕಾರಣಕ್ಕೆ ಸಂಸ್ಕೃತ, ಒಡಿಶಾ, ಕನ್ನಡ, ತಮಿಳು, ಮಲೆಯಾಳಂ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರಕಿದೆ.

ತಮಿಳುನಾಡು ಹಿಂದಿನಿಂದಲೂ ಹಿಂದಿ ಹೇರಿಕೆಯನ್ನು ವಿರೋಧಿಸಿ, ವೈಭವೀಕರಿಸಿ ಬದ್ಧ ದ್ವೇಷ ಸಾಧಿಸುತ್ತಲೇ ಬಂದಿರುವುದು ಹಳೆಯ ಸಂಗತಿ. ತಮಿಳುನಾಡಿನಲ್ಲಿ ಎಲ್ಲೇ ಹೋದರೂ ತಮಿಳುಮಯ. ತಮಿಳು ಬಿಟ್ಟರೆ ಅಲ್ಪಸ್ವಲ್ಪ ಇಂಗ್ಲಿಷ್ ಬಳಕೆ, ಅಷ್ಟೆ. ಅಕಸ್ಮಾತ್ ಹಿಂದಿ ಭಾಷೆಯ ಅರಿವಿದ್ದರೂ ಮಾತನಾಡಲು ಗೊತ್ತಿದ್ದರೂ ಅಪ್ಪಿತಪ್ಪಿಯೂ ಹಿಂದಿ ಮಾತನಾಡುವುದಿಲ್ಲ. ಆ ಮಟ್ಟದ ಭಯಂಕರ ಭಾಷಾಂಧತೆ ತಮಿಳರದು.

ಕರ್ನಾಟಕದಲ್ಲಿ ತಮಿಳುನಾಡಿನಂತೆ ಭಾಷಾಂಧತೆ ಇಲ್ಲ. ಹಿಂದಿಯ ಬಗ್ಗೆ ಆ ಮಟ್ಟದ ದ್ವೇಷ ಭಾವನೆ ಸಿಡಿದಿಲ್ಲ. ಕನ್ನಡಪರ ಸಂಘಟನೆಗಳು, ಎಡಪಂಥೀಯ ಬುದ್ದಿಜೀವಿಗಳು, ಸಾಹಿತಿಗಳೆನಿಸಿಕೊಂಡವರನ್ನು ಹೊರತುಪಡಿಸಿದರೆ ಹಿಂದಿ ಭಾಷೆಗೆ ವಿರೋಧ ವ್ಯಕ್ತಪಡಿಸುವವರು ವಿರಳ. ಕರ್ನಾಟಕದ ಹಿರಿಯ ರಾಜಕಾರಣಿಯಾಗಿದ್ದ ಅನಂತ ಕುಮಾರ್ ದಿಲ್ಲಿಯಲ್ಲಿ ಹಿಂದಿಯಲ್ಲೇ ಮಾತನಾಡಿ ಹಿಂದಿ ಭಾಷೆಯವರೇ ನಿಬ್ಬೆರಗಾಗುವಂತೆ ಮಾಡಿದ್ದರು. ಮಲ್ಲಿಕಾರ್ಜುನ ಖರ್ಗೆ, ಅನಂತಕುಮಾರ ಹೆಗಡೆ, ಪ್ರಹ್ಲಾದ ಜೋಶಿ ಮೊದಲಾದವರೂ ಹಿಂದಿಯನ್ನು ಸೊಗಸಾಗಿ ಮಾತನಾಡಬಲ್ಲವರು. ಆರ್ ಎಸ್ ಎಸ್ ನ ಅಖಿಲ ಭಾರತ ಸಹಸರಕಾರ್ಯರಾಗಿರುವ ಸೊರಬದ ದತ್ತಾತ್ರೇಯ ಹೊಸಬಾಳೆ ಕನ್ನಡ, ಇಂಗ್ಲಿಷ್ ಭಾಷೆಯಷ್ಟೇ ನಿರರ್ಗಳವಾಗಿ ಹಿಂದಿಯಲ್ಲೂ ಭಾಷಣ ಮಾಡುತ್ತಾರೆ. ಇವರೆಲ್ಲ ಹಿಂದಿಯಲ್ಲಿ ಮಾತನಾಡಿದ ಪರಿಣಾಮವಾಗಿ ಅವರಾಡುವ ಕನ್ನಡದ ಕಿಮ್ಮತ್ತು ಕಡಿಮೆಯಾಗಿಲ್ಲ. ಕನ್ನಡದ ಸಾಹಿತಿಗಳಿಗಿಂತಲೂ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ, ಬರೆಯುತ್ತಾರೆ.

ಡಿವಿಜಿ, ಮಾಸ್ತಿ, ಬೇಂದ್ರೆ, ಗೊರೂರು
courtesy: wikipedia

ಕನ್ನಡ, ಕನ್ನಡ ಎಂದು ಬೊಬ್ಬೆ ಹೊಡೆಯುವ ಕನ್ನಡಪರ ಸಂಘಟನೆಗಳಿಗೆ ಅನ್ಯ ಭಾಷಿಕರಿಂದಲೂ ಕನ್ನಡ ಬೆಳೆದು ಉದ್ಧಾರವಾಗಿದೆ ಎಂಬ ಸಾಮಾನ್ಯ ಸಂಗತಿಯೂ ಗೊತ್ತಿರಲಿಕ್ಕಿಲ್ಲ. ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿದ್ದ ದ.ರಾ. ಬೇಂದ್ರೆಯವರ ಮನೆಯ ಮಾತು ಮರಾಠಿ. ಆದರೆ ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯ, ಅಮೋಘ. `ಕನ್ನಡದ ಆಸ್ತಿ’ಯೆಂದು ಖ್ಯಾತರಾದ ಸಣ್ಣ ಕಥೆಗಳ ಸರದಾರ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮಾತೃಭಾಷೆ ತಮಿಳು. `ಮಂಕುತಿಮ್ಮನ ಕಗ್ಗ’ ಖ್ಯಾತಿಯ ಡಿವಿಜಿ ಅವರ ಪೂರ್ವಿಕರು ತಮಿಳುನಾಡಿನ ತಿರುಚಿನಾಪಳ್ಳಿ ಕಡೆಯವರು. ಮನೆಯಲ್ಲಿ ತಮಿಳು, ತೆಲುಗು ಎರಡರ  ಬಳಕೆಯೂ ಇತ್ತು. ತಮಿಳು ಮನೆ ಭಾಷೆಯಾಗಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕನ್ನಡದಲ್ಲಿ ಉತ್ಕೃಷ್ಟ ಕೃತಿಗಳನ್ನು ಬರೆದಿಲ್ಲವೆ? ಕನ್ನಡದಲ್ಲೇ ದೇವರ ಪೂಜೆಯ ಮಂತ್ರಗಳನ್ನು ಬಳಕೆಗೆ ತಂದು ಜನಪ್ರಿಯರಾದ `ಕನ್ನಡ ಪೂಜಾರಿ’ ಹಿರೇಮಗಳೂರು ಕಣ್ಣನ್ ಅವರ ಮಾತೃಭಾಷೆ ತಮಿಳು. ಕನ್ನಡ ಜಗತ್ತಿಗೆ ಅವರ ಕೊಡುಗೆಯೇನು ಕಡಿಮೆಯೆ? ಅವರ ಅದ್ಭುತ ಕನ್ನಡ ಮಾತಿನ ಮುಂದೆ ಕನ್ನಡಪರ ಸಂಘಟನೆಗಳ ಯಾವ ನಾಯಕ ಮಣಿಗಳೂ ಸರಿಸಾಟಿಯಾಗಲಾರರು. `ಭಾರತ ದರ್ಶನ’ ಉಪನ್ಯಾಸ ಖ್ಯಾತಿಯ ವಿದ್ಯಾನಂದ ಶೆಣೈ, ಜನಪ್ರಿಯ ಹರಿಕಥಾ ದಾಸರಾಗಿದ್ದ ಭದ್ರಗಿರಿ ಅಚ್ಯುತದಾಸ್ ಅವರ ಮನೆಯ ಭಾಷೆ ಕೊಂಕಣಿ. ಆದರೆ ಇವರಿಬ್ಬರು ಆಡುತ್ತಿದ್ದ ಕನ್ನಡ ಕೇಳಿದರೆ ಕನ್ನಡ ಸಾಹಿತಿಗಳು, ಪಂಡಿತರೂ ನತಮಸ್ತಕರಾಗಬೇಕು, ಅಂತಹ ಕನ್ನಡ ವಾಗ್ಝರಿ.

ಅನಂತಕುಮಾರ್‌, ದತ್ತಾತ್ರೇಯ ಹೊಸಬಾಳೆ, ಅನಂತಕುಮಾರ ಹೆಗಡೆ, ಪ್ರಹ್ಲಾದ ಜೋಶಿ, ಹಿರೇಮಗಳೂರು ಕಣ್ಣನ್.
COURTESY: respective LEADERSʼ facebook page

ದುರ್ದೈವದ ಸಂಗತಿಯೆಂದರೆ, ಕನ್ನಡಪರ ಸಂಘಟನೆಗಳ ಕೆಲ ಕಾರ್ಯಕರ್ತರಿಗೆ ನೆಟ್ಟಗೆ ಸರಳ ಕನ್ನಡವನ್ನೂ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ. ರಾಜ್ಯೋತ್ಸವಕ್ಕೆ ರಾಜ್ಯೋಸ್ತವ, ಕನ್ನಡ ಹಬ್ಬಕ್ಕೆ ಕನ್ನಡ ಅಬ್ಬ, ಹೋರಾಟಕ್ಕೆ ಓರಾಟ, ಆದರ ಎಂಬ ಶಬ್ದಕ್ಕೆ ಹಾದರ… ಹೀಗೆ ಕನ್ನಡ ಭಾಷೆಯ ಕೊಲೆಯಲ್ಲೇ ನಿತ್ಯನಿರಂತರ ನಿರತರಾಗಿದ್ದಾರೆ ಕೆಲವರು. ಕನ್ನಡ ಶಬ್ಧಗಳ ಸರಿಯಾದ ಉಚ್ಛಾರಣೆ, ಬಳಕೆಯನ್ನು ಕಲಿತುಕೊಳ್ಳಬೇಕೆಂಬ ಇಚ್ಛೆಯೇ ಈ ಮಂದಿಗಿಲ್ಲ. ನಾವು ಮಾತನಾಡಿದ್ದೇ ಸರಿ ಎಂಬ ಧೋರಣೆ ಬೇರೆ.

ಕನ್ನಡ ಬಳಕೆಯ ವಿಷಯ ಹಾಗಿರಲಿ, ಕನ್ನಡ ಸಮ್ಮೇಳನಗಳು ನಡೆದಾಗ ಅಲ್ಲಿ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡಲೆಂದು ಬಂದು ಸರಿಯಾದ ಅಂಗಡಿ ಹಾಕಲು ಜಾಗವೂ ಸಿಗದೆ ಪರದಾಡುವ ಪ್ರಕಾಶಕರನ್ನು ಅಪ್ಪಿತಪ್ಪಿ ಕೂಡ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮಾತನಾಡಿಸುವ ಗೋಜಿಗೆ ಹೋಗುವುದಿಲ್ಲ. ಅಲ್ಲಿ ನಡೆಯುವ ಗೋಷ್ಠಿಗಳಲ್ಲಿ ವೇದಿಕೆಯ  ಮೇಲೆ ತಮಗೆ ಕುರ್ಚಿ ಸಿಗುತ್ತದೋ ಇಲ್ಲವೋ ಎಂಬ ಕುರ್ಚಿ ಚಿಂತೆಯಲ್ಲೇ ಇರುತ್ತಾರೆ. ಇನ್ನು ಇವರು ಧರಿಸುವ ಬೂಟು, ಶರಟು, ಪ್ಯಾಂಟು ಬಳಸುವ ವಿಲಾಸಿ ಕಾರು ಇತ್ಯಾದಿ ಎಲ್ಲವೂ ಹಿಂದಿ ರಾಜ್ಯಗಳಲ್ಲಿ ತಯಾರಾಗಿದ್ದೇ ಆಗಿರುತ್ತದೆ! ಕರ್ನಾಟಕದಲ್ಲೇ ತಯಾರಾಗುವ ಖಾದಿ ಬಟ್ಟೆ, ಚಪ್ಪಲಿ ಧರಿಸುವ ಸರಳ ಉಡುಗೆ ತೊಡುಗೆಯ ಯಾವೊಬ್ಬ ಕನ್ನಡಪರ ಸಂಘಟನೆಯ ಕಾರ್ಯಕರ್ತನನ್ನೂ ನಾನು ಕಂಡಿಲ್ಲ. ಈಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಡ ಸಂಘಟನೆಯೊಂದರ ಮಹಿಳಾ ಘಟಕದ ಪ್ರಮುಖಿಯಾಗಿ ಆಯ್ಕೆಯಾದ ಮಹಿಳಾಮಣಿ ಮರುಕ್ಷಣವೇ ಫೇಸ್‌ಬುಕ್‌ನಲ್ಲಿ ಸಫಾರಿ ಉಡುಗೆ ತೊಟ್ಟು ಕಣ್ಣಿಗೆ ತಂಪು ಕನ್ನಡಕ ಹಾಕಿ, ವಿಲಾಸಿ ಕಾರೊಂದಕ್ಕೆ ಒರಗಿ ನಿಂತಿರುವ ಫೋಟೋ ಹಾಕಿಕೊಂಡು ಪ್ರಚಾರ ಗಿಟ್ಟಿಸಿಕೊಂಡಿದ್ದರು. ಸಫಾರಿ ಉಡುಗೆ, ಕಣ್ಣಿಗೆ ತಂಪು ಕನ್ನಡಕ, ವಿಲಾಸಿ ಕಾರು- ಇವೆಲ್ಲ ಕನ್ನಡ ಸಂಸ್ಕೃತಿ, ಪರಂಪರೆಯ ಪ್ರತೀಕವೆಂದು ಈಕೆಗೆ ಹೇಳಿದವರು ಯಾರು?

ಹಿಂದಿ ಭಾಷೆಯನ್ನು ವಿರೋಧಿಸುವ ಹಕ್ಕು ಕನ್ನಡಪರ ಸಂಘಟನೆಗಳಿಗಿದೆ. ಆದರೆ ಅದೇ ವೇಳೆ ಕನ್ನಡ ನುಡಿ, ಕನ್ನಡ ಸಂಸ್ಕೃತಿ, ಪರಂಪರೆಯನ್ನು ಸ್ವಂತ ಬದುಕಿಗೆ ರೂಢಿಸಿಕೊಳ್ಳುವ ಕರ್ತವ್ಯವೂ ಇದೆ ಎಂಬುದನ್ನು ಮರೆತರೆ ಹೇಗೆ?

***

ದು.ಗು.ಲಕ್ಷ್ಮಣ

ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯ ಮತ್ತು ಅಂಕಣಗಳನ್ನು ಮುಲಾಜಿಲ್ಲದೆ ಬರೆದ ವಿರಳ ಸಂಪಾದಕ. ‘ನೇರನೋಟ’ ಅವರ ಜನಪ್ರಿಯ ಅಂಕಣ. ಇದು ನೇರ ಅಭಿಪ್ರಾಯಗಳಿಗೆ ಹೆಸರಾದುದು. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.

Tags: hindikanndakarnataka
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಶುಕ್ರದೆಸೆ ಅಂದ್ರೆ ಇದೇನಾ? ಇಡೀ ಶುಕ್ರ ಗ್ರಹವೇ ನನ್ನದು ಎನ್ನುತ್ತಿದೆ ರಷ್ಯ!

ಶುಕ್ರದೆಸೆ ಅಂದ್ರೆ ಇದೇನಾ? ಇಡೀ ಶುಕ್ರ ಗ್ರಹವೇ ನನ್ನದು ಎನ್ನುತ್ತಿದೆ ರಷ್ಯ!

Leave a Reply Cancel reply

Your email address will not be published. Required fields are marked *

Recommended

ವೈಎಸ್‌ವಿ ದತ್ತ ಅವರು ಮತ್ತು ನನಗೆ ಬಿದ್ದ ನನ್ನದೇ ಸಾವಿನ ಕನಸು!!

ವೈಎಸ್‌ವಿ ದತ್ತ ಅವರು ಮತ್ತು ನನಗೆ ಬಿದ್ದ ನನ್ನದೇ ಸಾವಿನ ಕನಸು!!

5 years ago
ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

1 year ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ