• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ವಿಟಿ ವಿರುದ್ಧ ನಿಲ್ಲದ ಯುದ್ಧ ! ಸ್ವಾತಂತ್ರ್ಯಕ್ಕೆ ಏಳು ದಶಕ ಕಳೆದರೂ ದಾಸ್ಯವೆಂದರೆ ನಮಗೆ ಇಷ್ಟವೇಕೆ?

cknewsnow desk by cknewsnow desk
September 29, 2020
in GUEST COLUMN, NATION, STATE
Reading Time: 2 mins read
1
ವಿಟಿ ವಿರುದ್ಧ ನಿಲ್ಲದ ಯುದ್ಧ ! ಸ್ವಾತಂತ್ರ್ಯಕ್ಕೆ ಏಳು ದಶಕ ಕಳೆದರೂ ದಾಸ್ಯವೆಂದರೆ ನಮಗೆ ಇಷ್ಟವೇಕೆ?
917
VIEWS
FacebookTwitterWhatsuplinkedinEmail
top photo courtesy: India in Bahrain@IndiaInBahrain

ಭಾರತಕ್ಕೆ ಸ್ವಾಂತಂತ್ರ್ಯ ಬಂದು 73 ವರ್ಷಗಳೇ ಕಳೆದರೂ ದಾಸ್ಯದ ಮೇಲೆ ನಮಗೇಕೆ ಇನ್ನೂ ಒಲವು. ವೈಸರಾಯ್ ಟೆರಿಟರಿ ಅಥವಾ ವಿಟಿ ಎನ್ನುವ ಹೆಸರನ್ನು ನಮ್ಮ ವಿಮಾನಗಳಿಂದ ಕಿತ್ತೊಗೆಯಲು ಏಳು ದಶಕಗಳಷ್ಟು ದೀರ್ಘ ಸಮಯ ಬೇಕೆ? ಪಾಕಿಸ್ತಾನ, ಬರ್ಮಾ, ಶ್ರೀಲಂಕಾ, ನೇಪಾಳ, ಭೂತಾನ್ʼಗೆ ಸಾಧ್ಯವಾದ್ದು ಭಾರತಕ್ಕೇಕೆ ಆಗುತ್ತಿಲ್ಲ? ಈ ಬಗ್ಗೆ ವಿಚಾರಪೂರ್ಣ ಲೇಖನ ಬರೆದಿದ್ದಾರೆ ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ.

***

ನೀವು ಸದಾ ಕಾಲ ಆಕಾಶಮಾರ್ಗದಲ್ಲಿ ಪ್ರಯಾಣಿಸುವವರಾಗಿದ್ದರೆ, ನೀವು ಪ್ರಯಾಣಿಸುವ ವಿಮಾನದ ಮೇಲೆ ಕಿಟಕಿಯ ಬಳಿ ವಿಟಿ ಎಂದು ಬರೆದಿರುವುದನ್ನು ಗಮನಿಸಿರುತ್ತೀರಿ, ಅಥವಾ ಗಮನಿಸಿದ್ದರೂ ಅದೇನೆಂದು ತಿಳಿಯುವ ಗೋಜಿಗೆ ಹೋಗಿರುವುದಿಲ್ಲ. ವಿಮಾನದಲ್ಲಿ ಪದೇಪದೆ ಹಾರಾಡುವ ನಮ್ಮ ಎಂಪಿ, ಎಂಎಲ್‌ಎ, ಮಂತ್ರಿಮಾಗಧರಿಗೂ ವಿಟಿ ಎಂದರೇನೆಂದು ದೇವರಾಣೆಗೂ ತಿಳಿದಿರುವುದಿಲ್ಲ.

ವಿಟಿ ಎಂದರೇನೆಂದು ಎಂಪಿಗಳಿಗೆ, ಮಂತ್ರಿಗಳಿಗೆ ಮೊದಲ ಬಾರಿ ತಿಳಿಸಿದ ಕೀರ್ತಿ ಸಲ್ಲುವುದಿದ್ದರೆ ಅದು ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದ, ಪತ್ರಕರ್ತರೂ ಆದ ತರುಣ್ ವಿಜಯ್ (ಅವರು ನನ್ನ ಆತ್ಮೀಯ ಗೆಳೆಯರೂ ಹೌದು) ಅವರಿಗೆ ಮಾತ್ರ. 2016ರಲ್ಲಿ ಒಮ್ಮೆ ರಾಜ್ಯಸಭೆ ಕಲಾಪದ ಸಂದರ್ಭದಲ್ಲಿ ನಮ್ಮ ವಿಮಾನದ ಮೇಲೆ ನಮೂದಿಸಲಾದ ವಿಟಿ ಎಂದರೆ ಏನು ಗೊತ್ತಾ? ಎಂದು ಅವರು ಕೇಳಿದಾಗ ಅಲ್ಲಿದ್ದವರದೆಲ್ಲದ್ದು ನಿರುತ್ತರ. ವಿಟಿ ಎಂದರೇನೆಂದು ತರುಣ್ ವಿಜಯ್ ವಿವರಿಸಿ ಹೇಳಿದಾಗ ಎಲ್ಲರಿಗೂ ಕಾದಿತ್ತು ಶಾಕ್.

  • ತರುಣ್ ವಿಜಯ್
curtassy: tarun vijay facebook page

ವಿಟಿ ಎಂದರೆ ವಿಕ್ಟೋರಿಯನ್ ಅಥವಾ ವೈಸರಾಯ್ ಟೆರಿಟರಿ ಎಂದು. ಪ್ರತಿಯೊಂದು ದೇಶದ ವಿಮಾನಕ್ಕೂ ಆ ದೇಶಕ್ಕೆ ಸಂಬಂಧಿಸಿದ ನೋಂದಣಿ ಸಂಕೇತ ಇರುವುದು ಅನಿವಾರ್ಯ. ಐದು ಅಕ್ಷರಗಳಲ್ಲಿರುವ ಈ ನೊಂದಾವಣೆಯ ಸಂಕೇತ ಮೊದಲೆರಡು ಅಕ್ಷರಗಳು ವಿಮಾನ ಯಾವ ದೇಶಕ್ಕೆ ಸೇರಿದ್ದು ಎಂಬುದನ್ನು ಸಂಕೇತಿಸುತ್ತದೆ. ಉಳಿದ ಮೂರು ಅಕ್ಷರಗಳು ಆ ವಿಮಾನ ಯಾವ ಕಂಪನಿಯ ಒಡೆತನಕ್ಕೆ ಸೇರಿದೆ ಎಂಬುದನ್ನು ಸಂಕೇತಿಸುತ್ತದೆ. ಉಳಿದು ಮೂರು ಅಕ್ಷರಗಳು ಆ ವಿಮಾನ ಯಾವ ಕಂಪನಿಯ ಒಡೆತನಕ್ಕೆ ಒಳಪಟ್ಟಿದೆ ಎಂಬುದರ ಸಂಕೇತ. ಉದಾಹರಣೆಗೆ ಇಂಡಿಗೋ ಕಂಪನಿಗೆ ಸೇರಿದ ವಿಮಾನವಾದರೆ ವಿಟಿ-ಐಡಿವಿ, ಜೆಟ್ ಕಂಪನಿಗೆ ಸೇರಿದ್ದಾದರೆ ವಿಟಿ-ಜೆಎಂವಿ… ಹೀಗೆ. ಪ್ರತಿಯೊಂದು ದೇಶದಲ್ಲೂ ಇಂತಹ ನೊಂದಾವಣೆ ಕಡ್ಡಾಯ. ಈ ನೋಂದಣಿ ಅಂತಾರಾಷ್ಟ್ರೀಯ ನಿಯಮಕ್ಕೊಳಪಟ್ಟಿರುತ್ತದೆ. ಯಾವ ದೇಶದ, ಯಾವ ಏರ್‌ಲೈನ್‌ಗೆ ಸಂಬಂಧಿಸಿದ ವಿಮಾನ ಎಂಬುದನ್ನು ತಪ್ಪದೇ ನಮೂದಿಸಲೇಬೇಕು.

ವಿಟಿ ಇಟ್ಟಿದ್ದು ಯಾರು?

ನಮ್ಮ ದೇಶದ ವಿಮಾನಗಳಿಗೆ ವಿಟಿ ಎಂಬ ನೋಂದಣಿ ಸಂಕೇತ ದೊರಕಿದ್ದು ಬ್ರಿಟಿಷರು ಇಲ್ಲಿ ನಮ್ಮನ್ನಾಳುತ್ತಿದ್ದಾಗ. 1929ರಲ್ಲಿ. ಬ್ರಿಟಿಷರು ಎಲ್ಲೆಲ್ಲಿ ತಮ್ಮ ರಾಜ್ಯಭಾರ ನಡೆಸುತ್ತಿದ್ದರೋ ಅಲ್ಲೆಲ್ಲ ವಿಮಾನಗಳಿಗೆ ವಿಟಿ ಎಂದೇ ನೋಂದಣೆ ಸಂಕೇತ ನೀಡಿದ್ದರು. ಚೀನಾ, ಪಾಕಿಸ್ತಾನ, ನೇಪಾಳ ಮತ್ತು ಶ್ರೀಲಂಕಾ ದೇಶಗಳು ಆ ನಂತರ ತಮ್ಮ ನೋಂದಣೆ ಸಂಕೇತವನ್ನು ಬದಲಿಸಿಕೊಂಡವು. ಆದರೆ ಭಾರತದಲ್ಲಿ 90 ವರ್ಷಗಳ ಅನಂತರವೂ ವಿಟಿ ಬದಲಾಗಲೇ ಇಲ್ಲ. ಬ್ರಿಟಿಷರೇನೋ ತಮ್ಮ ಸಾಮ್ರಾಜ್ಯಕ್ಕೆ ವೈಸರಾಯ್ ಟೆರಿಟರಿ ಎಂದು ಹೆಮ್ಮೆಯಿಂದ ನಾಮಕರಣ ಮಾಡಿಕೊಂಡಿದ್ದಿರಬಹುದು. ಆದರೀಗ ಬ್ರಿಟಿಷರ ಸಾಮ್ರಾಜ್ಯದಡಿ ನಾವು ಭಾರತೀಯರು ಇಲ್ಲವಲ್ಲ. ಅವರ ಕಪಿಮುಷ್ಟಿಯಿಂದ ಮುಕ್ತಿ ಪಡೆದೇ ಬರೋಬ್ಬರಿ 73 ವರ್ಷಗಳಾದವು. ಆದರೆ ಗುಲಾಮಗಿರಿಯ ಸಂಕೇತವಾದ ವಿಟಿ ಎಂಬ ಸಂಕೇತವನ್ನು ಬದಲಾಯಿಸಬೇಕೆಂಬ ಸ್ವಾಭಿಮಾನ, ಸ್ವದೇಶಿತನವೇ ನಮ್ಮನ್ನಾಳಿದವರಿಗೆ ಮೂಡಲಿಲ್ಲವೆಂದರೆ ನಾವೆಂತಹ ದೌರ್ಭಾಗ್ಯಶಾಲಿಗಳು!

CURTASSY: INDIAN AIRLINES

ತರುಣ್ ವಿಜಯ್ ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ವಿಷಯ ವಿವರಿಸಿದಾಗ ಪಕ್ಷಬೇಧ ಮರೆತು ಎಲ್ಲರೂ ಒಕ್ಕೊರಲಿನಿಂದ ಈ ಗುಲಾಮಗಿರಿಯ ಸಂಕೇತವನ್ನು ತಕ್ಷಣ ಬದಲಾಯಿಸಬೇಕೆಂದು ಆಗ್ರಹಿಸಿದ್ದರು. ಆದರೆ ಅದಿನ್ನೂ ಸಾಧ್ಯವಾಗಿಲ್ಲ ಎನ್ನುವುದು ಏನನ್ನು ಸೂಚಿಸುತ್ತದೆ? ಶ್ರೀಲಂಕಾ, ಪಾಕಿಸ್ತಾನಕ್ಕೆ ಸಾಧ್ಯವಾಗುವ ಸಂಗತಿ ಭಾರತದಂಥ ಬೃಹತ್ ದೇಶಕ್ಕೆ, ಶಕ್ತಿಶಾಲಿ ದೇಶಕ್ಕೆ ಏಕೆ ಸಾಧ್ಯವಾಗುವುದಿಲ್ಲ? ನಮ್ಮ ಸ್ವಾಭಿಮಾನ ಶೂನ್ಯತೆ ಆ ಮಟ್ಟಕ್ಕೆ ತಲುಪಿಬಿಟ್ಟಿದೆಯಾ? ʼಹಿಂದುಸ್ತಾನ ಈಗಲೂ ವೈಸರಾಯ್‌ಗಳ ಸಾಮ್ರಾಜ್ಯವಾಗಿರಲು ಸಾಧ್ಯವಿಲ್ಲ. ಗುಲಾಮಗಿರಿಯ ಈ ಸಂಕೇತವನ್ನು ತಕ್ಷಣ ಬಲಾಯಿಸಬೇಕೆಂದು ತರುಣ್‌ ವಿಜಯ್ ಅವರ ಆಗ್ರಹ ಈಗಲೂ ಫಲಿಸಲಿಲ್ಲ.

ಹಾಗಂತ ವಿಟಿ ಸಂಕೇತವನ್ನು ಬದಲಿಸಲು ಪ್ರಯತ್ನಗಳೇ ನಡೆದಿಲ್ಲವೆಂದೇನಿಲ್ಲ. 2004ರಲ್ಲಿ ವಿಮಾನಯಾನ ಸಚಿವಾಲಯ ಅಂತಾರಾಷ್ಟ್ರೀಯ ನಾಗರೀಕ ಉಡ್ಡಯನ ಸಂಸ್ಥೆ (ಐಸಿಎಓ)ಯನ್ನು ಸಂಪರ್ಕಿಸಿ ತನ್ನ ಸಂಕೇತವನ್ನು ಬದಲಿಸುವಂತೆ ಆಗ್ರಹಿಸಿತ್ತು. ವಿಟಿ ಎಂದಿರುವುದನ್ನು ಬಿಎ (ಭಾರತ್) ಅಥವಾ ಐಎನ್ (ಇಂಡಿಯಾ) ಎಂದು ಬದಲಾಯಿಸಲು ಹೇಳಿತ್ತು. ಆದರೆ ಬಿ ಮತ್ತು ಐ ಸಂಕೇತಗಳನ್ನು ಚೀನಾ ಮತ್ತು ಇಟಲಿ ಕ್ರಮವಾಗಿ ತೆಗೆದುಕೊಂಡುಬಿಟ್ಟಿರುವುದರಿಂದ ಐಸಿಎಓ ಅದನ್ನು ಭಾರತಕ್ಕೆ ಕೊಡಲು ಸಮ್ಮತಿಸಲಿಲ್ಲ. ಹಾಗಾಗಿ ವಿಟಿ ಎಂಬ ಸಂಕೇತವೇ ಮುಂದುವರೆಯಲಿದೆ ಎಂದು ಆಗ ನಾಗರಿಕ ವಿಮಾನ ಸಚಿವರಾಗಿದ್ದ ಪ್ರಫುಲ್ಲ ಪಟೇಲ್ (ಯುಪಿಎ ಸರ್ಕಾರ) ಈ ಸಮಸ್ಯೆಗೆ ಇತಿಶ್ರೀ ಹಾಡಿದ್ದರು.

ಆದರೆ ಪಾಕಿಸ್ತಾನ ಎಪಿ ಎಂದು ಹೊಸ ನೋಂದಣೆ ಸಂಕೇತವನ್ನಿಟ್ಟು ಕೊಂಡಿದೆ. ಶ್ರೀಲಂಕಾ, ನೇಪಾಳ, ಭೂತಾನ್ ಕ್ರಮವಾಗಿ 4ಆರ್, 9ಎನ್ ಮತ್ತು ಎ5 ಎಂದು ನೋಂದಣೆ ಸಂಕೇತವನ್ನು ಬದಲಿಸಿವೆ.

ವಿಟಿ ಎಂಬುದು ಗುಲಾಮಿ ಸಂಕೇತ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ ಎಂದು ವಾದಿಸುವ ಪ್ರಭೃತಿಗಳೂ ಇದ್ದಾರೆ. ವಿಟಿ ಎಂದರೆ ವೈಸರಾಯ್ ಟೆರಿಟರಿ ಎಂದೇನಲ್ಲ ಎಂದು ವಾದಿಸುವವರೂ ಇದ್ದಾರೆ. ಹಾಗಿದ್ದರೆ ವಿಟಿ ಎಂದರೆ ನಿಜವಾಗಿ ಏನರ್ಥ? ಎಂದು ಕೇಳಿದರೆ ಅದಕ್ಕೂ ಸ್ಪಷ್ಟ ಉತ್ತರ ಈ ರೀತಿ ವಾದಿಸುವ ವೀರರಿಂದ ಸಿಗುವುದಿಲ್ಲ.

ಪ್ರತಿಯೊಂದು ವಾದಕ್ಕೂ ಪ್ರತಿವಾದ ಇದ್ದೇ ಇರುತ್ತದೆ. ಆ ಪ್ರತಿವಾದ ಎನ್ನುವುದು ಹಲವು ಬಾರಿ ವಿತಂಡವಾದವಾಗಿರುತ್ತದೆ ಎಂದು ಹೇಳಬೇಕಾಗಿಲ್ಲ. ಇಲ್ಲಿ ನಾವು ಗಮನಿಸಬೇಕಾದುದೇನೆಂದರೆ -ವಾದ ಅಥವಾ ಪ್ರತಿವಾದ ಎಷ್ಟು ಪ್ರಬಲ ಮತ್ತು ಸಮರ್ಥನೀಯ ಎನ್ನುವುದಕ್ಕಿಂತ ವಾಸ್ತವಾಂಶ ಏನು ಎಂಬುದನ್ನು. ವಿಟಿ ಎಂದರೆ ವೈಸರಾಯ್ ಟೆರಿಟರಿ ಎಂಬುದೇ ನಿಜವಾಗಿದ್ದರೆ ಅದು ಗುಲಾಮಗಿರಿಯ ಸಂಕೇತವಲ್ಲದೆ ಮತ್ತೇನು?

ಭಾರತ, ಇಂಡಿಯಾ ಅಲ್ಲ

ಅಸಲಿಗೆ ಸ್ವಾತಂತ್ರ್ಯ ಬಂದ ಬಳಿಕ, ಸಾವಿರಾರು ವರ್ಷಗಳಿಂದ ಅಯಾಚಿತವಾಗಿ ದೈವದತ್ತವಾಗಿ ಬಂದಿರುವ ಭಾರತವೆಂಬ ನಮ್ಮ ದೇಶದ ಹೆಸರನ್ನು ಬ್ರಿಟಿಷರು ಇಂಡಿಯಾ ಎಂದು ತಿರುಚಿದ್ದನ್ನು ನಾವಿನ್ನೂ ತಲೆಯ ಮೇಲೆ ಹೊತ್ತು ಕುಣಿದಾಡುತ್ತಿದ್ದೇವಲ್ಲ, ನಾವೆಂಥ ಸ್ವಾಭಿಮಾನಶೂನ್ಯರು? ಪುಟ್ಟ ಪುಟ್ಟ ದೇಶಗಳಾದ ಸಿಲೋನ್, ಬರ್ಮಾ ಕೂಡ ಬ್ರಿಟಿಷರಿಂದ ಮುಕ್ತವಾದ ಬಳಿಕ ಮ್ಯಾನ್ಮಾರ್, ಶ್ರೀಲಂಕಾ ಎಂದು ಹೆಸರು ಬದಲಿಸಿಕೊಂಡು ಸ್ವಾಭಿಮಾನ ಮೆರೆದಿವೆ. ಆದರೆ ನಾವು ʼಇಂಡಿಯಾ’ ಎಂದು ಕರೆಯುವುದರಲ್ಲೇ ಸಾರ್ಥಕ್ಯ ಕಾಣುತ್ತಿದ್ದೇವೆ! ಪುರೋಹಿತರು ಸಂಕಲ್ಪ ಮಾಡಿಸುವಾಗ ʼಭರತಖಂಡೇ ಭರತ ವರ್ಷೇ ಜಂಬೂದ್ವೀಪೇ…’ ಎಂದು ಹೇಳುತ್ತಾರೆಯೇ ಹೊರತು ʼಇಂಡಿಯಾ ಖಂಡೇ ಇಂಡಿಯಾ ವರ್ಷೇ ಇಂಡಿಯಾ ದ್ವೀಪೇ…’ ಎನ್ನುವುದಿಲ್ಲ. ʼಭಾರತ್ ಮಾತಾ ಕೀ ಜೈ’ ಎನ್ನುತ್ತೇವೆಯೋ ಹೊರತು ʼಇಂಡಿಯಾ ಮಾತಾ ಕೀ ಜೈ’ ಎನ್ನುವುದಿಲ್ಲ. ರಾಷ್ಟ್ರಕವಿ ಕುವೆಂಪು ʼಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಎಂದು ಹಾಡು ಕಟ್ಟಿದರೇ ಹೊರತು ʼಇಂಡಿಯಾ ಜನನಿಯ ತನುಜಾತೆ…’ ಎನ್ನಲಿಲ್ಲ.

ಇದೆಲ್ಲವೂ ನಮ್ಮನ್ನಾಳುವವರಿಗೆ ಗೊತ್ತಿಲ್ಲವೆಂದೇನಿಲ್ಲ. ಗೊತ್ತಿದ್ದರೂ ದೇಶದ ಹೆಸರನ್ನು ಮೂಲ ನೆಲೆಗೆ ತರಲು ಪ್ರಯತ್ನಿಸುತ್ತಿಲ್ಲವಲ್ಲ ಎಂಬ ವೇದನೆ ನನ್ನಂಥವರದು. ನಮ್ಮ ಸಂವಿಧಾನದಲ್ಲಿ ಕೂಡ ʼIndia that is Bharath’ ಎಂದಿದೆಯೇ ಹೊರತು ದೇಶದ ಹೆಸರು ಭಾರತ ಎಂದು ಸ್ಪಷ್ಟತೆ ಇಲ್ಲ. ದೇಶದ ಹೆಸರನ್ನೇ ಬದಲಾಯಿಸಲು ಸಾಧ್ಯವಾಗದವರು ಇನ್ನು ನಮ್ಮ ವಿಮಾನ ಸಾರಿಗೆಯ ನೋಂದಣೆ ಸಂಕೇತವನ್ನು ಬದಲಾಯಿಸುತ್ತಾರೆಂದು ನಂಬುವುದು ಹೇಗೆ?

ದಾಸ್ಯದ ಪಳೆಯುಳಿಕೆಗಳು ಸಂಪೂರ್ಣ ನಶಿಸಿಹೋಗಲು ಇನ್ನು ಅದೆಷ್ಟು ವರ್ಷಗಳು ಬೇಕೋ ಯಾರು ಬಲ್ಲರು?

ದು.ಗು. ಲಕ್ಷ್ಮಣ

ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ. ಸಿಕೆನ್ಯೂಸ್‌ ನೌ ವೆಬ್‌ತಾಣದ ಅತ್ಯಂತ ಪ್ರಮುಖ ಅಂಕಣಕಾರರು ಕೂಡ.

Tags: indian aviationtarun vijayvtvt symbol on aircraft
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಹೂತಿಟ್ಟ ಶೌರ್ಯ !! ನಾಗಾ ವೀರರ ಕೆಚ್ಚನ್ನುಈಶಾನ್ಯ ಕಣಿವೆಗಳಲ್ಲೇ ಮಣ್ಣು ಮಾಡಿದ ಪುಕ್ಕಲಾಂಗ್ಲರು

ಹೂತಿಟ್ಟ ಶೌರ್ಯ !! ನಾಗಾ ವೀರರ ಕೆಚ್ಚನ್ನುಈಶಾನ್ಯ ಕಣಿವೆಗಳಲ್ಲೇ ಮಣ್ಣು ಮಾಡಿದ ಪುಕ್ಕಲಾಂಗ್ಲರು

Comments 1

  1. Pingback: ಛತ್ರಪತಿ ಶಿವಾಜಿಯನ್ನು ಮತ್ತೆ ಆಗ್ರಾಗೆ ಬರಮಾಡಿಕೊಂಡು ಹೂತಿಟ್ಟಿದ್ದ ಇತಿಹಾಸದ ಕದ ತೆರೆದ ಯೋಗಿ ಆದಿತ್ಯನಾಥರು -

Leave a Reply Cancel reply

Your email address will not be published. Required fields are marked *

Recommended

ದೇವರಾಜ ಅರಸು ಆಶಯ ಉಲ್ಟಾ ಮಾಡಿದ ಬಿಜೆಪಿ!!

ಸಂಕಷ್ಟ ಸೂತ್ರ ಇಲ್ಲದಿರುವುದೇ ಸಂಕಷ್ಟಕ್ಕೆ ಕಾರಣ ಎಂದು ಕೈಚೆಲ್ಲಿದ ಸಿದ್ದರಾಮಯ್ಯ

3 years ago
ಲಾಕ್ ಡೌನ್ ಇಲ್ಲ

ವೈಫಲ್ಯ ಮುಚ್ಚಿಕೊಳ್ಳಲು ಬೊಮ್ಮಾಯಿ ಬುಲ್ಡೋಜರ್ ಜಪ

4 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ