• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಕಂಬ ಹತ್ತಿದ ದೋಸ್ತ್‌ʼಗೆ ಏಣಿಯಾದ ಜೀವದ ಗೆಳೆಯ; ಕರ್ತವ್ಯನಿಷ್ಠೆಗೆ ಹೊಸಬಾಷ್ಯ ಬರೆದ ಬಾಗೇಪಲ್ಲಿ ಬೆಸ್ಕಾಂ‌ ಬಾಯ್ಸ್ !!

P K Channakrishna by P K Channakrishna
October 21, 2020
in CHIKKABALLAPUR, CKPLUS, STATE
Reading Time: 2 mins read
0
ಕಂಬ ಹತ್ತಿದ ದೋಸ್ತ್‌ʼಗೆ ಏಣಿಯಾದ ಜೀವದ ಗೆಳೆಯ; ಕರ್ತವ್ಯನಿಷ್ಠೆಗೆ ಹೊಸಬಾಷ್ಯ ಬರೆದ ಬಾಗೇಪಲ್ಲಿ ಬೆಸ್ಕಾಂ‌ ಬಾಯ್ಸ್ !!
935
VIEWS
FacebookTwitterWhatsuplinkedinEmail
Photo: parashuram (in left) and anil chingari (in right)

good news

ಬಾಗೇಪಲ್ಲಿ: ‌ಇದಕ್ಕೆ ಮನಸ್ಸಿದ್ದರೆ ಮಾರ್ಗ ಎನ್ನಬಹುದು ಅಥವಾ ಕರ್ತವ್ಯದ ಮೇಲಿನ ಪ್ರೀತಿಯೂ ಎನ್ನಬಹುದು. ಏನೇ ಅಂದರೂ ಈ ಇಬ್ಬರು ಯುವ ಪವರ್‌ಮನ್‌ಗಳ ಕರ್ತವ್ಯ ಪ್ರಜ್ಞೆಗೆ ಪ್ರತಿಯೊಬ್ಬರೂ ಹ್ಯಾಟ್ಸಾಪ್‌ ಹೇಳಲೇಬೇಕು.

ಎಲ್ಲಿ ನೋಡಿದರೂ ಈಗ ವರ್ಕ್‌ ಫ್ರಮ್‌ ಹೋಮ್‌, ಮಕ್ಕಳಿಗೆ ಅನ್‌ಲೈನ್‌ ಕ್ಲಾಸುಗಳು ಕೂಡ. ಕೋವಿಡ್‌ ಕಾರಣದಿಂದ ಮನೆಗಳೇ ಕಚೇರಿಗಳಾಗಿ ಮತ್ತು ಶಾಲೆ-ಕಾಲೇಜುಗಳಾಗಿ ಬದಲಾಗಿಬಿಟ್ಟಿವೆ. ಬೆಂಗಳೂರಿನಂಥ ಮಹಾನಗರದಿಂದ ಮೊದಲುಗೊಂಡು ಬಾಗೇಪಲ್ಲಿಯಂಥ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕಿನವರೆಗೂ ಎಲ್ಲೆಲ್ಲೂ ಇದೇ ವ್ಯವಸ್ಥೆ ಮಾಮೂಲಿನಂತೆ ಆಗಿಬಿಟ್ಟಿದೆ. ಅನೇಕರು ಮನೆಗಳಲ್ಲಿಯೇ ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗಳ ಮುಂದೆ ಕೂತು ಯಂತ್ರಗಳಂತೆ ಕೆಲಸ ಮಾಡುತ್ತಿದ್ದಾರೆ. ಈ ವ್ಯವಸ್ಥೆ ಕೊಂಚವೂ ಹಳಿತಪ್ಪದಂತೆ ನಡೆಯಬೇಕಾದರೆ ಅದಕ್ಕೆ ಬೇಕಾದ ಮುಖ್ಯ ಇಂಧನವೆಂದರೆ ವಿದ್ಯುತ್. ಅದು ವ್ಯತ್ಯಯವಾಗದಂತೆ ನೋಡಿಕೊಳ್ಳುವ ಕಾಯಕದಲ್ಲಿ ಈ ಯುವಕರಿಬ್ಬರೂ ತಲ್ಲೀನರಾಗಿದ್ದಾರೆ.

ಪೂರಕ ಮಾಹಿತಿ ಮತ್ತು ಚಿತ್ರಗಳು: ಡಿ.ಎನ್.ಕೃಷ್ಣಾರೆಡ್ಡಿ

***

ಏನಿದು ಕಥೆ?

ಇವರಿಬ್ಬರ ಹೆಸರು ಅನಿಲ್‌ ಚಿಂಗಾರಿ ಮತ್ತು ಪರಶುರಾಮ್.‌ ಅನಿಲ್‌ ಮೂಲತಃ ಕಲ್ಬುರ್ಗಿಯವರು ಮತ್ತು ಪರಶುರಾಮ್‌ ದೂರದ ಬೆಳಗಾವಿಯವರು. ಬೆಸ್ಕಾಂನಲ್ಲಿ ಪವರ್‌ಮನ್‌ಗಳಾಗಿ ಕೆಲಸ ಮಾಡುತ್ತಿರುವ ಇವರಿಬ್ಬರೂ ಸಹೋದ್ಯೋಗಿಗಳು ಮಾತ್ರವಲ್ಲದೆ ಗೆಳೆಯರು ಕೂಡ. ಈಗ ಬಾಗೇಪಲ್ಲಿ ಪಟ್ಟಣದಲ್ಲಿ ಬೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಗುರುವಾರ ಬೆಳಗ್ಗೆ ಬಾಗೇಪಲ್ಲಿ ಪಟ್ಟಣದ 9ನೇ ವಾರ್ಡ್‌ನಲ್ಲಿ ವಿದ್ಯುತ್‌ ಸಂಪರ್ಕ ಕಡಿತವಾಗಿ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕರು ಬೆಸ್ಕಾಂ ಕಚೇರಿಗೆ ಕರೆ ಮಾಡಿ ದೂರು ನೀಡಿದ್ದರು. ಒಂದು ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕ ಕಡಿತವಾದರೆ ಗ್ರಾಹಕ ಸೇವಾ ಕೇಂದ್ರಕ್ಕೆ ಅದೆಷ್ಟು ದೂರುಗಳು ಬರುತ್ತವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆವತ್ತು ಕರ್ತವ್ಯದಲ್ಲಿದ್ದ ಅನಿಲ್‌ ಮತ್ತು ಪರಶುರಾಮ್‌ ತಕ್ಷಣಕ್ಕೆ ಈ ದೂರಿಗೆ ಸ್ಪಂಧಿಸಿದರಲ್ಲದೆ, ಸ್ಥಳಕ್ಕೆ ಧಾವಿಸಿದಾಗ ವಿದ್ಯುತ್‌ ಕಂಬದಲ್ಲಿ ಸಮಸ್ಯೆ ಇರುವುದು ಅವರಿಗೆ ಗೊತ್ತಾಯಿತು. ತಕ್ಷಣಕ್ಕೆ ಕಂಬ ಹತ್ತಿ ಸಮಸ್ಯೆ ಸರಿ ಮಾಡಬೇಕಿತ್ತು. ಅಕ್ಕಪಕ್ಕದ ಮನೆಗಳಲ್ಲಿ ಏಣಿ ಸಿಗಲಿಲ್ಲ. ಕಚೇರಿಯಲ್ಲಿದ್ದ ಏಣೀವಾಹನ ನಿರ್ವಹಣೆಯಲ್ಲಿತ್ತು. ಈ ಕಾರಣಕ್ಕೆ ಕಂಬದ ಪಕ್ಕದ ಮನೆಯ ಕಾಂಪೌಂಡ್‌ ಹತ್ತಿದ ಅನಿಲ್‌, ಸ್ವತಃ ತಾವೇ ಪರಶುರಾಮ್‌ಗೆ ಏಣಿಯಾದರು. ಅನಿಲ್‌ ಕಾಂಪೌಂಡ್‌ ಮೇಲೆ ನಿಂತರೆ, ಅವರ ಮೇಲೆ ಹತ್ತಿದ ಪರಶುರಾಮ್‌ ಕಂಬದಲ್ಲಿ ಆಗಿದ್ದ ತಾಂತ್ರಿಕ ಸಮಸ್ಯೆಯನ್ನು ಸರಿ ಮಾಡಿದರು. ಹೀಗೆ ಪವರ್‌ಮನ್‌ಗಳಿಬ್ಬರೂ ತಮ್ಮ ವೃತ್ತಿಬದ್ಧತೆ ಮೆರೆದದ್ದನ್ನು ಕಂಡು ಪಟ್ಟಣದ ನಿವಾಸಿಗಳು ಈ ಯುವಕರಿಗೆ ಮೆಚ್ಚುಗೆ ಸೂಚಿಸಿದರು ಮಾತ್ರವಲ್ಲದೆ, ಕೃತಜ್ಞತೆಗಳನ್ನೂ ಸಲ್ಲಿಸಿದ್ದಾರೆ.

ಏಣಿಯಾದ ಅನಿಲ್‌, ಹತ್ತಿದ ಪರಶುರಾಮ್‌

ಈ ಬಗ್ಗೆ ಸಿಕೆನ್ಯೂಸ್‌ ನೌ ಜತೆ ಮಾತನಾಡುತ್ತ ತಮ್ಮ ಅನುಭವವನ್ನು ಹಂಚಿಕೊಂಡ ಪವರ್‌ಮನ್‌ ಅನಿಲ್‌ ಚಿಂಗಾರಿ ಹೇಳಿದ್ದಿಷ್ಟು;

“ನಮ್ಮ ಕರ್ತವ್ಯವನ್ನು ನಾವು ಶ್ರದ್ಧೆಯಿಂದ ಮಾಡಿದ್ದೇವೆ. ಜನರು ನಮ್ಮ ಕೆಲಸವನ್ನು ಮೆಚ್ಚಿದ್ದಕ್ಕೆ ಸಂತೋಷವಾಗಿದೆ” ಎನ್ನುತ್ತಾರೆ. ಮುಂದುವರೆದು ಅವರು ಹೇಳಿದರು.. “ವಾರ್ಡ್‌ ನಂ 9ರಲ್ಲಿ ವಿದ್ಯುತ್‌ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಅದಕ್ಕಾಗಿ ಈ ಸಮಸ್ಯೆಯಾಗಿತ್ತು. ಗುರುವಾರ ಬೆಳಗ್ಗೆ ಆ ಪ್ರದೇಶದಲ್ಲಿ ವಿದ್ಯುತ್‌ ಸ್ಥಗಿತವಾಗಿತ್ತು. ಜನರು ಕಾಲ್‌ ಮಾಡತೊಡಗಿದರು. ನಾನು, ಪರಶುರಾಮ್‌ ಡ್ಯೂಟಿಯಲ್ಲಿದ್ದೆವು. ತಕ್ಷಣ ಸ್ಥಳಕ್ಕೆ ಧಾವಿಸಿದೆವು. ಟ್ರಾನ್ಸ್‌ಫಾರ್ಮರ್‌ನಲ್ಲಿ ವಿದ್ಯುತ್‌ ಸಂಪರ್ಕ ತೆಗೆದು ನೋಡಿದಾಗ ಕಂಬದಲ್ಲಿ ಸ್ವಲ್ಪ ಕೆಲಸವಿತ್ತು ಎಂಬುದು ಗೊತ್ತಾಯಿತು. ಆದರೆ ತಕ್ಷಣಕ್ಕೆ ಏಣಿ ಸಿಗಲಿಲ್ಲ. ಹೀಗಾಗಿ ನಾನೇ ಏಣಿಯಾಗಬೇಕಾಯಿತು. ಸುಮಾರು 76 ಕೆಜಿ ತೂಕದ ಪರಶುರಾಮ್‌ ನನ್ನ ಭುಜಗಳ ಮೇಲೆ ಹತ್ತಿ ಸಮಸ್ಯೆ ಸರಿಮಾಡಿದರು. ಬಹುಶಃ 2-3 ನಿಮಿಷಗಳಲ್ಲಿ ಈ ಕೆಲಸ ಪೂರ್ತಿಯಾಯಿತು.” ಎಂದರು.

ಇವರಿಬ್ಬರ ಕರ್ತವ್ಯನಿಷ್ಠೆಗೆ ಇಡೀ ಪಟ್ಟಣವೇ ಮಾರುಹೋಗಿದೆ. ಎದುರಿಗೆ ಸಿಗುವ ಪ್ರತಿಯೊಬ್ಬರು ಇವರನ್ನು ಕೊಂಡಾಡುತ್ತಿದ್ದಾರೆ. “ಬೆಸ್ಕಾಂನಲ್ಲಿ ಪವರ್‌ಮನ್‌ ಕೆಲಸ ಎಂದರೆ ಜೀವದ ಹಂಗು ತೊರೆದು ಕೆಲಸ ಮಾಡುವುದೇ ಎಂದರ್ಥ. ಈ ಯುವಕರು ಜನರಿಗೆ ಒಳ್ಳೆಯದು ಮಾಡಬೇಕು ಎಂಬ ಉದ್ದೇಶದಿಂದ, ಶಾಲಾ ಮಕ್ಕಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಹೀಗೆ ಕೆಲಸ ಮಾಡಿದ್ದಾರೆ. ಅವರ ಕರ್ತವ್ಯಪ್ರಜ್ಞೆ ಎಲ್ಲರಿಗೂ ಮಾದರಿ” ಎನ್ನುತ್ತಾರೆ ಹಿರಿಯ ಪತ್ರಕರ್ತ ಡಿ.ಎನ್.ಕೃಷ್ಣಾರೆಡ್ಡಿ.

***

P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಗ್ರೆಟಾ ಥನ್​ಬರ್ಗ್ʼಗೆ ತಪ್ಪಿದ ಶಾಂತಿ ನೊಬೆಲ್ 2020;‌ ವಿಶ್ವಸಂಸ್ಥೆಯ ಆಹಾರ ಕಾರ್ಯಕ್ರಮದ ಪಾಲಾಯಿತು ಪ್ರಶಸ್ತಿ

ಗ್ರೆಟಾ ಥನ್​ಬರ್ಗ್ʼಗೆ ತಪ್ಪಿದ ಶಾಂತಿ ನೊಬೆಲ್ 2020;‌ ವಿಶ್ವಸಂಸ್ಥೆಯ ಆಹಾರ ಕಾರ್ಯಕ್ರಮದ ಪಾಲಾಯಿತು ಪ್ರಶಸ್ತಿ

Leave a Reply Cancel reply

Your email address will not be published. Required fields are marked *

Recommended

ರಕ್ಷಾ ರಾಮಯ್ಯಗೆ ಟಿಕೆಟ್ ಸಿಕ್ಕಿದ್ದು ಹೇಗೆ? ಮೊಯಿಲಿಗೆ ತಪ್ಪಿದ್ದು ಯಾಕೆ?

ರಕ್ಷಾ ರಾಮಯ್ಯಗೆ ಟಿಕೆಟ್ ಸಿಕ್ಕಿದ್ದು ಹೇಗೆ? ಮೊಯಿಲಿಗೆ ತಪ್ಪಿದ್ದು ಯಾಕೆ?

1 year ago
ಬಾಗೇಪಲ್ಲಿಯಲ್ಲಿ ಗುರುಪೂರ್ಣಿಮೆ; ಸಾಯಿಬಾಬಾ ದೇಗುಲದಲ್ಲಿ ವಿಶೇಷ ಪೂಜೆ

ಬಾಗೇಪಲ್ಲಿಯಲ್ಲಿ ಗುರುಪೂರ್ಣಿಮೆ; ಸಾಯಿಬಾಬಾ ದೇಗುಲದಲ್ಲಿ ವಿಶೇಷ ಪೂಜೆ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ