• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ರಾಜರಾಜೇಶ್ವರಿ ನಗರ; ಒಳಗೊಳಗೇ ಲೆಕ್ಕ ತಪ್ಪಿತಾ ಬಿಜೆಪಿ!?

P K Channakrishna by P K Channakrishna
October 20, 2020
in CKPLUS, POLITICS, STATE
Reading Time: 2 mins read
0
ರಾಜರಾಜೇಶ್ವರಿ ನಗರ; ಒಳಗೊಳಗೇ ಲೆಕ್ಕ ತಪ್ಪಿತಾ ಬಿಜೆಪಿ!?
923
VIEWS
FacebookTwitterWhatsuplinkedinEmail

ಬೆಂಗಳೂರು: ಬಿಜೆಪಿ ಪಾಲಿಗೆ ನಿರ್ಣಾಯಕವಾಗಿರುವ ರಾಜರಾಜೇಶ್ವರಿ ನಗರ ವಿಧಾನಸಭೆ ಕೇತ್ರದ ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆ ವಿಷಯವು ಪಕ್ಷದಲ್ಲಿ ವಲಸಿಗರು ಮತ್ತು ಮೂಲ ನಿವಾಸಿಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಈ ತಿಕ್ಕಾಟದ ಲಾಭವನ್ನು ಪಡೆಯಲು ಕಾಂಗ್ರೆಸ್‌ ಸರ್ಕಸ್‌ ಮಾಡುತ್ತಿದ್ದರೆ, ಜೆಡಿಎಸ್‌ ಮಾತ್ರ ಕೊನೆಕ್ಷಣದವರೆಗೂ ಮುಗುಮ್ಮಾಗಿಯೇ ಇದ್ದು, ತನ್ನ ಗುಟ್ಟು ರಟ್ಟಾಗದಂತೆ ಎಚ್ಚರ ವಹಿಸಿದೆ.

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಬರಲು ಕಾರಣವಾದ ಕ್ಷೇತ್ರಗಳಲ್ಲಿ ಆರ್.ಆರ್.‌ನಗರವೂ ಒಂದು. ಹಾಗೇಯೇ ಸಮ್ಮಿಶ್ರ ಸರಕಾರ ಪತನವಾಗಲು ಕಾರಣವಾದ ಕ್ಷೇತ್ರವೂ ಹೌದು. ಆಪರೇಷನ್‌ ಕಮಲದ ಮೂಲಕ ಮುನಿರತ್ನ ಅವರನ್ನು ಸೆಳೆದುಕೊಂಡ ಬಿಜೆಪಿಗೆ ಈ ಕ್ಷೇತ್ರವನ್ನು ಗೆದ್ದುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಅದೇ ರೀತಿ; ಹೇಗಾದರೂ ಆಗಲಿ ಮತ್ತೆ ಮುನಿರತ್ನ ಗೆದ್ದು ಆ ಕ್ಷೇತ್ರ ಬಿಜೆಪಿ ತೆಕ್ಕೆಗೆ ಹೋಗಬಾರದು ಎಂದು ಕಾಂಗ್ರೆಸ್‌ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ಡಿಕೆಶಿ ಅಂಡ್ ಟೀಮ್‌ ಜ್ಯೋತಿಷ್ಯದ ಮೊರೆ ಹೋಗಿತ್ತು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಈ ಕಾರಣಕ್ಕಾಗಿಯೇ ದಿವಂಗತ ಐಎಎಸ್‌ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಅವರಿಗೆ ಟಿಕೆಟ್‌ ಕಾಂಗ್ರೆಸ್ ನೀಡಿದೆ.‌ ಕುಸುಮಾಗೆ ಟಿಕೆಟ್‌ ನೀಡಿದ್ದೇ ತನಗೆ ಅಡ್ವಾಂಟೇಜ್‌ ಎಂದು ಭಾವಿಸಿರುವ ಬಿಜೆಪಿಗೆ ಶನಿವಾರವಾದರೂ ಅಭ್ಯರ್ಥಿಯನ್ನು ಫೈನಲ್‌ ಮಾಡುವುದು ಸಾಧ್ಯವಾಗಲೇ ಇಲ್ಲ.

ಇದೇ ಕಾರಣಕ್ಕೆ ಆಡಳಿತ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಎನ್‌ಕ್ಯಾಶ್‌ ಮಾಡಿಕೊಳ್ಳಲು ಕಾಂಗ್ರೆಸ್‌ ತೀವ್ರ ಸರ್ಕಸ್‌ ಮಾಡುತ್ತಿದ್ದರೆ, ರಾಷ್ಟ್ರೀಯ ಪಕ್ಷಗಳ ಬಡಿದಾಟದ ನಡುವೆ ತನಗೇನಾದರೂ ನುಗ್ಗಲು ಸಾದ್ಯವೇ ಎಂದು ಜೆಡಿಎಸ್‌ ಹೊಂಚು ಹಾಕಿ ಕೂತಿದೆ.

ಮೂಲ ನಿವಾಸಿಗಳು ವರ್ಸಸ್‌ ವಲಸಿಗರು

ಕಾಂಗ್ರೆಸ್‌ನಲ್ಲಿ ತೀವ್ರವಾಗಿರುವ ವಲಸಿಗರು ಮತ್ತು ಮೂಲ ನಿವಾಸಿಗಳ ತಿಕ್ಕಾಟ ಇದೀಗ ಶಿಸ್ತಿನ ಪಕ್ಷ ಬಿಜೆಪಿಗೂ ವ್ಯಾಪಿಸಿದೆ. ಆಪರೇಷನ್‌ ಕಮಲಕ್ಕೆ ತುತ್ತಾಗಿ ಬಿಜೆಪಿ ಸೇರಿದ್ದ ಶಾಸಕರಲ್ಲಿ 10 ಮಂದಿ ಕಳೆದ ಉಪ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚಕ್ರ ತಿರುಗಿಸುತ್ತಿದ್ದಾರೆ. ಆ ಪೈಕಿ ಇತ್ತೀಚೆಗೆ ವಿಧಾನ ಪರಿಷತ್ತಿಗೆ ಎಂಟ್ರಿ ಕೊಟ್ಟ ಎಚ್.ವಿಶ್ವನಾಥ್‌, ಎಂಟಿಬಿ ನಾಗರಾಜು ಮತ್ತು ಆರ್.‌ಶಂಕರ್‌ ಕ್ಯಾಬಿನೆಟ್ ಪ್ರವೇಶಕ್ಕೆ ಆತುರ ಹೆಚ್ಚಾಗಿದೆ. ಬಿಜೆಪಿ ನಾಯತಕ್ವ ಎಂಟಿಬಿ ನಾಗರಾಜು‌, ಆರ್.‌ಶಂಕರ್‌ ಸೇರ್ಪಡೆಗೆ ಓಕೆ ಎಂದಿದೆಯಾದರೂ ವಿಶ್ವನಾಥ್‌ ಎಂಟ್ರಿಗೆ ತಡೆಯೊಡ್ಡಿ ಕೂತಿದೆ. ಕಳೆದ ಬೈ ಎಲೆಕ್ಷನ್‌ನಲ್ಲಿಯೇ ವಿಶ್ವನಾಥ್‌ಗೆ ಹುಣಸೂರು ಟಿಕೆಟ್‌ ನೀಡುವ ಬಗ್ಗೆ ಬಿಜೆಪಿ ಹಾಗೂ ವಲಸಿಗರ ನಡುವೆ ಒಂದು ಸುತ್ತಿನ ಕಿತ್ತಾಟ ನಡೆದು ವಲಸಿಗರ ಕೈಮೇಲಾಗಿತ್ತು. ಅದರಲ್ಲೂ ಬೆಳಗಾವಿಯ ಸಾಹುಕಾರ್‌ ರಮೇಶ್‌ ಜಾರಕಿಹೊಳಿ ಅಬ್ಬರಿಸಿದ್ದರು.

ಕೊನೆಗೆ ಒತ್ತಡಕ್ಕೆ ಮಣಿದ ಪಕ್ಷವು ಅಡಗೂರಿಗೆ ಟಿಕೆಟ್‌ ಕೊಟ್ಟು ಸಮಸ್ಯೆಗೆ ಮುಲಾಮು ಹಚ್ಚಿ ಸುಮ್ಮನಾಗಿತ್ತು. ಆದರೆ, ಆ ಮುಲಾಮು ಪರಿಣಾಮಕಾರಿಯಾಗಿ ಕೆಲಸ ಮಾಡಿದಂತಿಲ್ಲ. ವಿಶ್ವನಾಥ್‌ ಅವರನ್ನು ಸಾಹಿತ್ಯದ ಲೆಕ್ಕದಲ್ಲಿ ವಿಧಾನ ಪರಿಷತ್ತಿಗೆ ನಾಮಕರಣ ಮಾಡುವ ವಿಚಾರದಲ್ಲಿಯೂ ಪಕ್ಷ ಅಪಸ್ವರ ತೆಗೆದಿತ್ತು. ಆದರೆ, ಮತ್ತೆ ಬಿಜೆಪಿ ಅಡಳಿತಕ್ಕೆ ಬರಲು ಕಾರಣರಾದವರಲ್ಲಿ ಪ್ರಮುಖರು ಎಂಬ ಹಠಕ್ಕೆ ಬಿದ್ದು ಮುಖ್ಯಮಂತ್ರಿಗಳು ವಿಶ್ವನಾಥರನ್ನು ಮೇಲ್ಮನೆಗೆ ನಾಮಕರಣ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲೂ ಟೀಮ್‌ ವಲಸಿಗರ ಒತ್ತಡ ಕೆಲಸ ಮಾಡಿತ್ತು. ಬಳಿಕ ವಿಶ್ವನಾಥ್‌ ಪರಿಷತ್ತಿಗೆ ಬಂದು ಲ್ಯಾಂಡ್‌ ಆಗಿದ್ದರು.

ಮುನಿರತ್ನ

ತಿಕ್ಕಾಟ ಮತ್ತೊಮ್ಮೆ

ನವೆಂಬರ್‌ 3ರಂದು ಶಿರಾ ಮತ್ತು ಆರ್.ಆರ್.ನಗರದ ಚುನಾವಣೆ ನಡೆಯಲಿದ್ದು, ಶುಕ್ರವಾರ (ಅ.16)ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಕೊನೆ ದಿನಕ್ಕೆ ಇನ್ನು ಮೂರೇ ದಿನ ಬಾಕಿ ಇದ್ದರೂ ಈವರೆಗೂ ಟಿಕೆಟ್‌ ಯಾರಿಗೆ ಎಂಬುದು ಫೈನಲ್‌ ಆಗಿಲ್ಲ. ಇದು ವಲಸಿಗರಿಗೆ ತೀವ್ರ ಸಿಟ್ಟು ಉಂಟು ಮಾಡಿದೆ. ಸೋಮವಾರ ಬೆಳಗ್ಗೆಯೇ ದಸರಾ ಉದ್ಘಾಟನೆಗೆ ಆಹ್ವಾನ ನೀಡಲು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದ ಸಚಿವ ಎಸ್.ಟಿ.ಸೋಮಶೇಖರ್‌, “ಯಾವುದೇ ಕಾರಣಕ್ಕೂ ಮುನಿರತ್ನ ಅವರಿಗೆ ಟಿಕೆಟ್‌ ತಪ್ಪಬಾರದು. ಇದು ನಿಮ್ಮ ಜವಾಬ್ದಾರಿ” ಎಂದು ನೇರವಾಗಿಯೇ ಹೇಳಿದ್ದಾರೆಂದು ಗೊತ್ತಾಗಿದೆ. ಇದಾದ ಮೇಲೆ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆದ ಉಪ ಚುನಾವಣಾ ರಣತಂತ್ರ ರೂಪಿಸುವ ಸಭೆಯಲ್ಲಿ ಭಾಗಿಯಾಗಿದ್ದ ಸಚಿವ ರಮೇಶ್‌ ಜಾರಕಿಹೊಳಿ, ತಮ್ಮ ಜತೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ʼನಿಂದ ರಾಜಿನಾಮೆ ಕೊಟ್ಟು ಬಿಜೆಪಿ ಸೇರಿದ ಮುನಿರತ್ನ ಅವರಿಗೆ ಟಿಕೆಟ್‌ ನೀಡಲೇಬೇಕು. ಬೆಂಗಳೂರು ನಗರದಲ್ಲಿ ಬಿಜೆಪಿ‌‌ ಬಲಗೊಳ್ಳಲು ಮುನಿರತ್ನ ಅವಶ್ಯಕ ಎಂದು ಒತ್ತಾಯಿಸಿದ್ದಾರೆ.

ಈ ಒತ್ತಾಯಕ್ಕೆ ಸಭೆಯಲ್ಲಿ ಉತ್ತರಿಸಿದ ಸಿಎಂ, “ಸರಕಾರ ಅಧಿಕಾರಕ್ಕೆ ಬರಲು ಸಹಕರಿಸಿದ ಮುನಿರತ್ನ ಅವರನ್ನು ಕಡೆಗಣಿಸುವುದಿಲ್ಲ. ಒಗ್ಗಟ್ಟಿನಿಂದ ಉಪ ಚುನಾವಣೆಯನ್ನು ಗೆಲ್ಲೋಣ” ಎಂದು ಹೇಳಿದ್ದಾರೆ. ಅಲ್ಲಿಗೆ ಟೀಮ್‌ ವಲಸಿಗರು ಅರೆಮನಸ್ಸಿನಿಂದಲೇ ಆ ಸಭೆಯಿಂದ ಹೊರಬಂದರೂ, ದೆಹಲಿಯಿಂದ ಯಾವ ನಿರ್ಣಯ ಬರುತ್ತದೋ ಎಂಬ ಆತಂಕದಲ್ಲಿದ್ದಾರೆ. ಒಂದು ವೇಳೆ ಹೈಕಮಾಂಡ್‌ ಮುನಿರತ್ನಗೆ ಕೈಕೊಟ್ಟು ನಿಷ್ಠಾವಂತ ತುಳಸಿ ಮುನಿರಾಜೇಗೌಡರಿಗೆ ಮಣೆ ಹಾಕಿದರೆ ಯಾವ ರೀತಿ ಈ ಬಿಕ್ಕಟ್ಟಿಗೆ ತೇಪೆ ಹಚ್ಚಬೇಕೆಂಬ ಸೂತ್ರವೂ ಸಿಎಂ ಅಂಗಳದಲ್ಲಿ ರೆಡಿಯಾಗಿದೆ ಎಂಬ ಸುದ್ದಿಯೂ ಹೊರಬಂದಿದೆ. ಇದೇ ವೇಳೆ, ಮುನಿರತ್ನಗೆ ಟಿಕೆಟ್‌ ಕೋಡಿಸುವ ವಿಚಾರದಲ್ಲಿ ವಲಸಿಗರೆಲ್ಲರೂ ಇನ್ನಷ್ಟು ಗಟ್ಟಿಯಾಗಿ ನಿಂತಿದ್ದಾರೆ ಮಾತ್ರವಲ್ಲದೆ; ಪಕ್ಷಕ್ಕಿಂತ ನಮಗೆ ಸ್ನೇಹವೇ ಮುಖ್ಯ ಎಂಬ ಸಂದೇಶವನ್ನೂ ಅವರೆಲ್ಲರೂ ಸ್ಪಷ್ಟವಾಗಿ ಪಕ್ಷಕ್ಕೆ ರವಾನಿಸಿದ್ದಾರೆ.

ಜೆ.ಪಿ.ನಡ್ಡಾ ಅವರೊಂದಿಗೆ ತುಳಸಿ ಮುನಿರಾಜೇಗೌಡ.

ಪಕ್ಷಕ್ಕೆ ಚಿಂತೆ ಇಲ್ಲ

ಈ ನಡುವೆ 2018ರ ವಿಧಾನಸಭೆ ಚುನಾವಣೆಯಲ್ಲಿ ಇದೇ ಮುನಿರತ್ನ ವಿರುದ್ಧ ಯುದ್ಧದಂತೆ ಸೆಣಸಿದ್ದ ತುಳಸಿ ಮುನಿರಾಜೇಗೌಡರಿಗೆ ಪಕ್ಷದ ನಾಯಕತ್ವ ಬೆಂಬಲ ನೀಡುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ಮುಖ್ಯಮಂತ್ರಿ ಅವರು ಮುನಿರತ್ನ ಅವರಿಗೇ ಟಿಕೆಟ್‌ ಕೊಡಬೇಕು ಎಂದು ಪಟ್ಟು ಹಿಡಿದರೆ, ಪಕ್ಷದ ರಾಜ್ಯಾಧ್ಯಕ್ಷರು ತುಳಸಿ ಮುನಿರಾಜೇಗೌಡರ ಪರ ಬ್ಯಾಟ್‌ ಮಾಡಿದ್ದರು. ಅದಕ್ಕೆ ಕಾರಣ; ಮುನಿರತ್ನ ವಿರುದ್ಧ ಕ್ಷೇತ್ರದ ಬಿಜೆಪಿ ಕಾರ್ತಕರ್ತರಲ್ಲಿ ಮಡುಗಟ್ಟಿರುವ ಆಕ್ರೋಶ. ಕಳೆದ ಚುನಾವಣೆಯಲ್ಲಿ ಅನುಭವಿಸಿದ ಕಿರುಕುಳ. ಹೀಗಾಗಿ ಕಾರ್ಯಕರ್ತರ ಮಟ್ಟದಲ್ಲಿಯೂ ಒಡಕು ಎದ್ದು ಕಾಣುತ್ತಿದೆ. ಇದರ ನಡುವೆ ತುಳಸಿ ಮುನಿರಾಜೇಗೌಡ ಟಿಕೆಟ್‌ ಘೋಷಣೆಗೂ ಮುನ್ನವೇ ಪ್ರಚಾರವನ್ನೂ ಶುರು ಮಾಡಿಕೊಂಡಿದ್ದಾರೆ. ಇದು ವಲಸಿಗರ ಸಿಟ್ಟು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

2018ರಲ್ಲಿ ಏನಾಗಿತ್ತು?

ಚುನಾವಣೆ ಹೊತ್ತಿನಲ್ಲಿಯೇ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಗುರುತಿನ ಚೀಟಿಗಳ ಜತೆ ಒಂದು ಟ್ರಕ್‌ನಲ್ಲಿ 95 ಲಕ್ಷ ರೂ. ನಗದು ಪತ್ತೆಯಾಗಿತ್ತು. ಬಳಿಕ ಫಲಿತಾಂಶ ಹೊರಬಿದ್ದ ಮೇಲೆ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ 1,08,064 ಮತಗಳನ್ನು ಹಾಗೂ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜೇಗೌಡ 82,572 ಮತಗಳನ್ನು ಪಡೆದಿದ್ದರು. ಇಬ್ಬರ ನಡುವೆ 25,492 ಮತಗಳ ಅಂತರವಿತ್ತು. ಹೀಗಿದ್ದರೂ ಬಿಜೆಪಿ ಅಭ್ಯರ್ಥಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಚುನಾವಣಾಧಿಕಾರಿಯಿಂದ ಆಯ್ಕೆ ಪತ್ರವನ್ನು ಪಡೆದಿದ್ದ ಮುನಿರತ್ನ ವಿಧಾನಸಭೆ ಸದಸ್ಯರಾಗಿಯೂ ಪ್ರಮಾಣ ಸ್ವೀಕರಿಸಿದ್ದರು. ಆದರೆ, ಕಳೆದ ಜೂನ್-ಜುಲೈನಲ್ಲಿ ನಡೆದ ಆಪರೇಷನ್‌ ಕಮಲದ ಮೂಲಕ ಅವರು ಬಿಜೆಪಿಗೆ ಹಾರಿದ್ದರು. ಆದರೆ, ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮಾತ್ರ ಅವರನ್ನು ಒಪ್ಪುತ್ತಿಲ್ಲ.

ಬಿಜೆಪಿ ಇಕ್ಕಟ್ಟಿನಲ್ಲಿದೆಯಾ?

ಹೌದು ಎನ್ನುತ್ತಾರೆ ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಆರ್.ಟಿ.ವಿಠಲಮೂರ್ತಿ. ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಅವರು ಹೇಳಿದ್ದು ಇಷ್ಟು;

ಆರ್.ಟಿ.ವಿಠಲಮೂರ್ತಿ

“ರಾಜರಾಜೇಶ್ವರಿ ನಗರವನ್ನು ಬಿಜೆಪಿ ಕಲಸುಮೇಲೋಗರ ಮಾಡಿಕೊಂಡಿದೆ. ಆಪರೇಷನ್‌ ಕಮಲಕ್ಕೆ ಮೊದಲು ಇದೇ ಬಿಜೆಪಿಯು ಮುನಿರತ್ನ ಅವರನ್ನು ತೀವ್ರವಾಗಿ ವಿರೋಧಿಸಿತ್ತು. ಅದು ಎಷ್ಟರ ಮಟ್ಟಿಗೆ ಎಂದರೆ, ಚುನಾವಣಾ ಕಣದಲ್ಲಿ ಅವರ ವಿರುದ್ಧ ದೊಡ್ಡ ಸಮರವನ್ನೇ ನಡೆಸಿತ್ತು. ಈಗ ಮುನಿರತ್ನ ಬಿಜೆಪಿಗೆ ಬಂದು ನಾಯಕರಿಗೆ ಹತ್ತಿರವಾಗಿದ್ದಾರೆಯೇ ವಿನಾ, ಕಾರ್ಯಕರ್ತರಿಗೆ ಅಲ್ಲ. ಇದು ಒಂದು ಸಮಸ್ಯೆ. ಇನ್ನೊಂದು; ಮುನಿರತ್ನ ಮತ್ತು ತುಳಸಿ ಮುನಿರಾಜೇಗೌಡ ನಡುವೆ ಬಿಜೆಪಿ ಹೋಳಾಗಿದೆ, ಇದು ಸ್ಪಷ್ಟ. ಹೀಗಾಗಿ ಮುನಿರತ್ನಗೆ ಟಿಕೆಟ್‌ ಕೊಟ್ಟರೂ ಕಷ್ಟ, ಕೊಡದಿದ್ದರೂ ಕಷ್ಟ. ಕಾಂಗ್ರೆಸ್‌ ಅಭ್ಯರ್ಥಿಗೆ ಇದೆಲ್ಲದರ ಪ್ರಯೋಜನ ಸಿಗುವ ಸಾಧ್ಯತೆ ಇದೆ. ಜತೆಗೆ, ಆ ಕ್ಷೇತ್ರದಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ. ಮುನಿರತ್ನ ನೇರವಾಗಿ ಡಿಕೆ ಬ್ರದರ್ಸ್‌ ಎದುರೇ ಹೋರಾಟ ನಡಸಬೇಕು. ಹೀಗಾಗಿ ಆ ಕ್ಷೇತ್ರದ ಫಲಿತಾಂಶದ ಬಗ್ಗೆ ನನಗೂ ತೀವ್ರ ಕುತೂಹಲವಿದೆ” ಎನ್ನುತ್ತಾರೆ ಅವರು.

****

ಪಿ.ಕೆ.ಚನ್ನಕೃಷ್ಣ / ಪ್ರಧಾನ ಸಂಪಾದಕ, ಸಿಕೆನ್ಯೂಸ್‌ ನೌ

pl follow:

PK Channakrishna | ಪಿಕೆ ಚನ್ನಕೃಷ್ಣ@pkcklb / CKNEWSNOW@cknewsnow / Cknewsnow@Cknewsnow
Tags: bjpCongressjdskarnataka by election 2020rajarajeshwari nagar
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ಟ್ರೀಟ್ಮೆಂಟ್

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ಟ್ರೀಟ್ಮೆಂಟ್

Leave a Reply Cancel reply

Your email address will not be published. Required fields are marked *

Recommended

ಗುಡಿಬಂಡೆಯಲ್ಲಿ ಗ್ರೀನ್ ಪೊಲೀಸ್ ಸ್ಟೇಷನ್!

ಗುಡಿಬಂಡೆಯಲ್ಲಿ ಗ್ರೀನ್ ಪೊಲೀಸ್ ಸ್ಟೇಷನ್!

4 years ago
ಆಮ್ಲಜನಕ, ರೆಮಿಡಿಸ್ವೀರ್‌ ಕೃತಕ ಅಭಾವ ಸೃಷ್ಟಿ!! ಸೋಂಕಿತರ ಸಂಖ್ಯೆಗೂ-ಬೇಡಿಕೆಗೂ ತಾಳ-ಮೇಳವಿಲ್ಲ, ಸಪ್ಲೈ ಆಗುತ್ತಿರುವುದೆಲ್ಲ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದ ಡಿಸಿಎಂ

ಜುಲೈ- ಆಗಸ್ಟ್ ತಿಂಗಳು ಕೌಶಲ್ಯ ಮಾಸ: ಡಿಸಿಎಂ ಘೋಷಣೆ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ