• About
  • Advertise
  • Careers
  • Contact
Wednesday, May 14, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home KOLAR

ಕೆಜಿಎಫ್‌ನಲ್ಲಿ ಮತ್ತೆ ಮೈನಿಂಗ್‌ ಮಾಡುವುದು ಅಪಾರ ನಷ್ಟವನ್ನು ಮೈಮೇಲೆ ಎಳೆದುಕೊಳ್ಳುವುದೂ ಎರಡೂ ಒಂದೇ

P K Channakrishna by P K Channakrishna
December 8, 2020
in KOLAR, STATE, TALK
Reading Time: 2 mins read
0
ಕೆಜಿಎಫ್‌ನಲ್ಲಿ ಮತ್ತೆ ಮೈನಿಂಗ್‌ ಮಾಡುವುದು ಅಪಾರ ನಷ್ಟವನ್ನು ಮೈಮೇಲೆ ಎಳೆದುಕೊಳ್ಳುವುದೂ ಎರಡೂ ಒಂದೇ
940
VIEWS
FacebookTwitterWhatsuplinkedinEmail
ಗಣಿ ಶಾಫ್ಟ್‌ವೊಂದರ ವಿಹಂಗಮ ನೋಟ.
lead photo: CKPhotography ಸಿಕೆಪಿ@ckpixlels

Q&A

ಹಿರಿಯ ಭೂವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಸಂದರ್ಶನ

ಕೆಜಿಎಫ್‌ ಈಗ ಮತ್ತೆ ಸುದ್ದಿಯಲ್ಲಿದೆ. ಅಲ್ಲಿ ಪುನಾ ಗಣಿಗಾರಿಕೆ ಮಾಡಲು ಸಾಧ್ಯವಾ? ಅಥವಾ ಕೈಗಾರಿಕಾ ಪಾರ್ಕ್‌ ಸ್ಥಾಪನೆ ಮಾಡಬಹುದಾ? ರಾಜಕಾರಣಿಗಳು ಇನ್ನೇನು ಮೈನಿಂಗ್‌ ಆರಂಭವಾಗಿಯೇ ಬಿಡುತ್ತದೆ ಎನ್ನುತ್ತಿದ್ದಾರೆ. ಜನರೂ ಅದನ್ನೇ ನಂಬುತ್ತಿದ್ದಾರೆ. ಇದೆಲ್ಲ ನಿಜವಾ? ಹಿರಿಯ ಭೂವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಅವರು ಸಿಕೆನ್ಯೂಸ್‌ ನೌ ಜತೆ ಮಾತನಾಡುತ್ತ ಕೆಲ ಮಹತ್ತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

  • ಡಾ.ಎಂ.ವೆಂಕಟಸ್ವಾಮಿ
Q: ನಿಜಕ್ಕಾದರೆ ಕೆಜಿಎಫ್‌ನಲ್ಲಿ ಏನು ನಡೆಯುತ್ತಿದೆ? ಒಂದೆಡೆ ಗಣಿಗಳನ್ನು ರೀ ಒಪೆನ್‌ ಮಾಡ್ತೀವಿ ಅನ್ನುತ್ತಿದ್ದಾರೆ ರಾಜಕಾರಣಿಗಳು? ಇನ್ನೊಂದೆಡೆ ಇಂಡಸ್ಟ್ರೀಯಲ್‌ ಪಾರ್ಕ್‌ ಮಾಡ್ತೀವಿ ಎನ್ನುತ್ತಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು. ಇದರಲ್ಲಿ ಜನರು ಯಾವುದನ್ನು ನಂಬಬೇಕು?

ಕೆಜಿಎಫ್‌ನಲ್ಲಿ ಸುಮಾರು 12,500 ಎಕರೆಗೂ ಹೆಚ್ಚು ಭೂಮಿ ಭಾರತ್‌ ಗೋಲ್ಡ್‌ ಮೈನಿಂಗ್‌ ಕಂಪನಿ (ಬಿಜಿಎಂಎಲ್)‌ ವಶದಲ್ಲಿದೆ. ಈ ಪೈಕಿ 3,200 ಎಕರೆಯಷ್ಟು ಜಾಗದಲ್ಲಿ ಮೈನಿಂಗ್‌ ನಡೆದಿಲ್ಲ. ಬಹುಶಃ ಈ ಭಾಗದಲ್ಲಿ ಚಿನ್ನ ಇಲ್ಲ ಅನ್ನುವ ಕಾರಣಕ್ಕೆ ಹಾಗೆಯೇ ಬಿಟ್ಟಿದ್ದಾರೆ. ಈಗ ಅಲ್ಲಿ ಗಣಿಗಾರಿಕೆಗಿಂತ ಕೈಗಾರಿಕಾ ಪಾರ್ಕ್‌ ಮಾಡುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಅದರ ಫೀಸಬಲಿಟಿಯೇ ಜಾಸ್ತಿ. ಆದರೆ, ಮುಚ್ಚಿರುವ ಗಣಿಗಳಲ್ಲಿ ಮತ್ತೆ ಗಣಿಗಾರಿಕೆ ಮಾಡಲು ಸಾಧ್ಯವಿಲ್ಲ. ತೆರೆದ ಗಣಿಗಾರಿಕೆ‌ ಮಾಡಲಿಕ್ಕೂ ಕಷ್ಟ. ಹಾಗೆ ಮಾಡಬೇಕಾದರೆ ಇಡೀ ಕೆಜಿಎಫ್‌ ನಗರವನ್ನೇ ಬೇರೆಡೆಗೆ ಸ್ಥಳಾಂತರ ಮಾಡಬೇಕು. ಅಷ್ಟೆಲ್ಲ ವೆಚ್ಚ ಮಾಡಿದರೂ ಅದಕ್ಕೆ ಸರಿಹೊಂದುವಷ್ಟು ಚಿನ್ನ ಅಲ್ಲಿ ಇಲ್ಲ. ಗಣಿಗಾರಿಕೆ ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿ. ನನ್ನ ಪ್ರಕಾರ, ಡ್ರಿಲ್ಲಿಂಗ್‌ ಮಾಡುತ್ತಿರುವ ಜಾಗದಲ್ಲಿ ಚಿನ್ನ ಸಿಗುವ ಸಾಧ್ಯತೆ ಕಡಿಮೆ.

Q: ಹಾಗಾದರೆ; ಜನರನ್ನು ನಾಯಕರು ಯಾಕೆ ದಿಕ್ಕು ತಪ್ಪಿಸುತ್ತಿದ್ದಾರೆ?

ಇದೇನೂ ಹೊಸದಲ್ಲ ಬಿಡಿ. ಮುಗ್ಧ ಕಾರ್ಮಿಕರನ್ನು ದಿಕ್ಕು ತಪ್ಪಿಸುವ ಕೆಲಸ ಕಳೆದ ಇಪ್ಪತ್ತು ವರ್ಷಗಳಿಂದ ಆಗುತ್ತಲೇ ಇದೆ. ಇದೋ ಮೈನಿಂಗ್‌ ಮತ್ತೆ ಶುರು ಮಾಡುತ್ತೇವೆ, ಅದೋ ಆಸ್ಟ್ರೇಲಿಯಾ ಕಂಪನಿ ಬರುತ್ತೆ ಎಂದೆಲ್ಲ ಹೇಳಲಾಯಿತು. ಕೆಲ ಬೆಳವಣಿಗೆಗಳು ನಡೆದಿದ್ದು ನಿಜ. ಆದರೆ, ಅಲ್ಲಿ ಚಿನ್ನ ಇರಬೇಕಲ್ಲ. ಬಹುತೇಕ ಚಿನ್ನವನ್ನು ಬ್ರಿಟೀಷರೇ ಕೊಳ್ಳೆ ಹೊಡೆದುಕೊಂಡು ಹೋದರು. ಆಮೇಲೆ ನಮ್ಮ ಸರಕಾರಕ್ಕೆ ಗಣಿಗಳನ್ನು ಒಪ್ಪಿಸಿದ ಮೇಲೆ ಸಿಕ್ಕಿದ್ದು ʼಕೊಸರುʼ ಅಂತೀವಲ್ಲ, ಅಷ್ಟು ಮಾತ್ರ. ಚಿನ್ನದ ಲಭ್ಯತೆ ಇಲ್ಲ ಅನ್ನುವ ಕಾರಣಕ್ಕೆ 2002ರಲ್ಲಿ ಗಣಿಗಳನ್ನು ಮುಚ್ಚಲಾಯಿತು. ಹೀಗಾಗಿ ಮತ್ತೆ ಗಣಿಗಾರಿಕೆ ಎನ್ನುವುದು ದೂರದ ಮಾತು. ಇನ್ನು ಕೈಗಾರಿಕಾ ಪಾರ್ಕ್‌ ಮಾಡುತ್ತೇವೆ ಎನ್ನುವುದು ಒಳ್ಳೆಯ ಯೋಚನೆ. ಇದೇನಾದರೂ ಆದರೆ; ಕೆಜಿಎಫ್‌ ಜನರಿಗೆ ಖಂಡಿತಾ ಒಳ್ಳೆಯದಾಗುತ್ತದೆ. ಅಲ್ಲಿನ ಯುವಕರಿಗೆ ಕೆಲಸ ಸಿಗುತ್ತದೆ. ಆ ಪಟ್ಟಣದ ಬೆಂಗಳೂರು ಅವಲಂಭನೆ ಕಡಿಮೆಯಾಗುತ್ತದೆ.

Q: ಈಗ ಡ್ರಿಲ್ಲಿಂಗ್‌ ಮಾಡುತ್ತಿರುವ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇದೆಯಾ? ಇಲ್ಲವಾ? ಒಂದು ವೇಳೆ ಇಲ್ಲದಿದ್ದರೆ ಆ ಡ್ರಿಲ್ಲಿಂಗ್‌ ಏತಕ್ಕೆ ಮಾಡಲಾಗುತ್ತಿದೆ?

ಗಣಿಗಾರಿಕೆ ಮಾಡದೆ ಬಾಕಿ ಬಿದ್ದಿರುವ 3,200 ಎಕರೆ ಪ್ರದೇಶದಲ್ಲಿರುವ; ಅಂದರೆ, ದಕ್ಷಿಣದಲ್ಲಿ ಬಿಸಾನತ್ತಂ (ಇದು ಆಂಧ್ರ ಪ್ರದೇಶದ ಗಡಿ) ಸಮೀಪದಲ್ಲಿ ವಿರೂಪಾಕ್ಷಪುರ ಮತ್ತು ನಕ್ಕೇನಹಳ್ಳಿ ಇದೆ. ಇನ್ನು ಉತ್ತರಕ್ಕೆ ಬ್ಯಾಟರಾಯನ ಸ್ವಾಮಿ ಬೆಟ್ಟವಿದೆ. ಈ ಬೆಟ್ಟಕ್ಕೆ ಪೂರ್ವ ದಿಕ್ಕಿನಲ್ಲಿ ಒಂದು ಕಿ.ಮೀ ದೂರದ ಒಂದು ನಿರ್ದಿಷ್ಟ ಭಾಗದಲ್ಲಿ ಡ್ರಿಲ್ಲಿಂಗ್‌ ಮಾಡಲಾಗುತ್ತಿದೆ. ಉಳಿದಂತೆ ಚಿನ್ನದ ಗಣಿಗಳು 8 ಕಿ.ಮೀಯಷ್ಟು ಉದ್ದ ಇವೆ. ಈ ಗಣಿಗಳ ದಕ್ಷಿಣದ ಕೊನೆ ಭಾಗವೆಂದರೆ ಮೈಸೂರು ಮೈನ್ಸ್‌ ಅಥವಾ ಮಾರಿಕುಪ್ಪಂ ಶಾಫ್ಟ್‌, ಉತ್ತರದಲ್ಲಿ ಗೋಲ್ಕೊಂಡ ಶಾಫ್ಟ್‌ ಇದೆ. ಇನ್ನು ಇಲ್ಲಿ ಡ್ರಿಲ್ಲಿಂಗ್‌ ಮಾಡಲು ಕಾರಣವಿದೆ. ಯಾವುದೇ ಕೈಗಾರಿಕೆ ಅಥವಾ ಗಣಿಗಾರಿಕೆಗೆ ಅನುಮತಿ ನೀಡಬೇಕಾದರೆ ಕೇಂದ್ರ ಸರಕಾರ ಒಂದು ನಿಯಮವನ್ನು ತಪ್ಪದೇ ಪಾಲಿಸುತ್ತದೆ. ಆ ಜಾಗದ ಭೂಗರ್ಭದಲ್ಲಿ ಯಾವುದಾದರೂ ಅಮೂಲ್ಯ ಖನಿಜ ನಿಕ್ಷೇಪ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷೆ ಮಾಡಿಸುತ್ತದೆ. ಆ ನಿಟ್ಟಿನಲ್ಲಿ ಕೆಜಿಎಫ್‌ನಲ್ಲಿ ಡ್ರಿಲ್ಲಿಂಗ್‌ ನಡೆಯುತ್ತಿದೆ.

Q: ಕೆಜಿಎಫ್‌ನಲ್ಲಿ ಬಿಇಎಂಎಲ್‌ಗೆ ಕೊಟ್ಟಿರುವ ಜಾಗ ಯಾವುದು? ಆ ಕಂಪನಿ ಬಳಿ ಹೆಚ್ಚುವರಿ ಜಾಗವಿದೆಯಾ?

ಹೌದು. ಈಗ ಬಿಇಎಂಎಲ್‌ ಇರುವ ಜಾಗದ ಮೂಲ ಒಡೆತನ ಬಿಜಿಎಂಎಲ್‌ಗೇ ಸೇರುತ್ತದೆ. ಆ ಕಾರ್ಖಾನೆಯನ್ನು ಸ್ಥಾಪಿಸುವಾಗ ಅಗತ್ಯವಿದ್ದ ಭೂಮಿಯನ್ನು ಗಣಿಸಂಸ್ಥೆ ನೀಡಿತ್ತು. ಇದೀಗ ಕೈಗಾರಿಕಾ ಕಾರಿಡಾರ್‌ ಸ್ಥಾಪನೆ ಮಾಡುವ ಉದ್ದೇಶ ಇರುವುದರಿಂದ ಬಿಇಎಂಎಲ್‌ ಬಳಿ ಬಳಕೆಯಾಗದೆ ಉಳಿದಿರುವ ಹೆಚ್ಚುವರಿ ಭೂಮಿಯನ್ನು ವಾಪಸ್‌ ಮಾಡುವಂತೆ ಬಿಜಿಎಂಎಲ್‌ ಕೇಳುತ್ತಿದೆ ಎಂಬ ಮಾಹಿತಿ ಬಂದಿದೆ. ಬಿಇಎಂಎಲ್‌ಗೆ ಪಶ್ಚಿಮ ದಿಕ್ಕಿನಲ್ಲಿರುವ ಅಂಜನಾಪುರ ಎಂಬಲ್ಲಿ ಆ ಬಾಕಿ ಜಾಗವಿದ್ದು, ಅಲ್ಲಿಂದಲೇ ಕೈಗಾರಿಕಾ ಪಾರ್ಕ್‌ ಆರಂಭಿಸುವ ಪ್ರಸ್ತಾಪವಿದೆ. ಆ ಜಾಗವೂ ಸ್ವಲ್ಪಮಟ್ಟಿಗೆ ಒತ್ತುವರಿಯಾಗಿದೆ. ಹೀಗಾಗಿ ಆ ಜಾಗವನ್ನು ವಾಪಸ್‌ ಮಾಡುವಂತೆ ಬಿಜಿಎಂಎಲ್‌ ಕೇಳುತ್ತಿರುವುದು ಒಂದು ಮುಖ್ಯ ಬೆಳವಣಿಗೆ. ಒಟ್ಟಾರೆಯಾಗಿ ಡ್ರಿಲ್ಲಿಂಗ್‌ ಮಾಡುತ್ತಿರುವುದು, ಇನ್ನೊಂದೆಡೆ ತನ್ನ ಭೂಮಿಯನ್ನು ಬಿಜಿಎಂಎಲ್‌ ಹಿಂದಕ್ಕೆ ಕೇಳುತ್ತಿರುವುದು.. ಇವೆರಡೂ ಬೆಳವಣಿಗೆಗಳಿಂದ ಕೆಪಿಎಫ್‌ನಲ್ಲಿ ಏನಾದರೂ ಒಳ್ಳೆಯದಾಗಬಹುದು ಎಂಬ ನಿರೀಕ್ಷೆ ಗರಿಗೆದರಿದೆ.

Q: ಸಂಸದ ಮುನಿಸ್ವಾಮಿ ಸೇರಿದಂತೆ ಇನ್ನೂ ಅನೇಕರು ಡ್ರಿಲ್ಲಿಂಗ್‌ ಮಾಡುತ್ತಿರುವುದು ಗಣಿಗಾರಿಕೆ ಆರಂಭಿಸಲು ಎಂದು ಹೇಳುತ್ತಿದ್ದಾರಲ್ಲ..?

ಇಲ್ಲ. ಡ್ರಿಲ್ಲಿಂಗ್‌ ಕೆಲಸ ಗಣಿಗಾರಿಕೆಗೆ ಸಂಬಂಧಿಸಿದ್ದಲ್ಲ. ಕೈಗಾರಿಕಾ ಪಾರ್ಕ್‌ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಈ ಕಾರ್ಯ ನಡೆಯುತ್ತಿದೆ. ಭೂಮಿಯ ಆಳದಲ್ಲಿ ಏನಾದರೂ ನಿಕ್ಷೇಪಗಳಿವೆಯೇ ಎಂಬುನ್ನು ಪರಿಶೀಲಿಸಲಾಗುತ್ತಿದೆ. ಇಡೀ ಪ್ರಕ್ರಿಯೆ ಮುಗಿಯಲು ಆರು ತಿಂಗಳಾದರೂ ಬೇಕು. ಒಂದು ವೇಳೆ ಇಲ್ಲಿ ಚಿನ್ನದ ನಿಕ್ಷೇಪ ಸಿಕ್ಕರೆ ಗಣಿಗಾರಿಕೆ ನಡೆಯುತ್ತದೆ. ಚಿನ್ನದ ನಿಕ್ಷೇಪ ಸಿಗದಿದ್ದರೆ ಕೈಗಾರಿಕಾ ಪಾರ್ಕ್‌ ಬರುತ್ತದೆ. ಅಷ್ಟೇ..

Q: ಇಷ್ಟಕ್ಕೂ ಈ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್‌ ಮಾಡಲು ಸಾಧ್ಯವೇ? ಆಳ ಗಣಿಗಳಿರುವ ಜಾಗದಲ್ಲಿ ಇದೆಲ್ಲ ಕಾರ್ಯಸಾಧುವೆ?

ಖಂಡಿತಾ ಸಾಧ್ಯವಿದೆ. ಯಾಕೆಂದರೆ; ಕೈಗಾರಿಕಾ ಪಾರ್ಕ್‌ ಎಂಬುದು ಗಣಿಗಾರಿಕೆ ನಡೆದಿರುವ ಪ್ರದೇಶದಲ್ಲಿ ಬರುತ್ತಿಲ್ಲ. ಚಿನ್ನದ ಗಣಿಗಾರಿಕೆ ನಡೆದಿರುವ ಪ್ರದೇಶದ ವಿಸ್ತೀರ್ಣ 8 ಕಿ.ಮೀ ಉದ್ದ ಹಾಗೂ 2 ಕಿ.ಮೀ ಅಗಲದಷ್ಟು ಇದೆ. ಇದನ್ನು ಹೊರತುಪಡಿಸಿದ ಪ್ರದೇಶದಲ್ಲಿ ಕೈಗಾರಿಕಾ ಎಸ್ಟೇಟ್‌ ಅಂತೀರೋ ಅಥವಾ ಕೈಗಾರಿಕಾ ಪಾರ್ಕ್‌ ಅಂತೀರೋ ಅದನ್ನು ಸ್ಥಾಪನೆ ಮಾಡುವುದಕ್ಕೆ ಸಮಸ್ಯೆಯೇ ಇಲ್ಲ. ಬಹುಶಃ ಕೆಜಿಎಫ್‌ಗೆ ಗತ ವೈಭವ ತಂದುಕೊಡಲು ಇದಕ್ಕಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ.

Q: ಗಣಿ ಪ್ರದೇಶವೂ ಉದ್ದೇಶಿತ ಕೈಗಾರಿಕಾ ಪಾರ್ಕ್‌ ಸ್ಥಾಪನೆ ಮಾಡುವ ಪ್ರದೇಶಕ್ಕೆ ಹೊಂದಿಕೊಂಡೇ ಇದೆ. ಆಳ ಗಣಿಗಳಿಂದ ಅದಕ್ಕೆ ಅಪಾಯವಿಲ್ಲವೇ? ಅದರಲ್ಲಿ ನೀರು ತುಂಬಿದೆ..

ಇಲ್ಲ. ಭೂಮೇಲ್ಮೈನಿಂದ 100 ಅಡಿ ಆಳದಲ್ಲಿ ಗಣಿ ಸುರಂಗಗಳನ್ನು ಕೊರೆಯಲಾಗಿದೆ, ಅಷ್ಟೇ ಅಲ್ಲ, ಗಣಿ ಪ್ರದೇಶಕ್ಕೆ ಉದ್ದೇಶಿತ ಕೈಗಾರಿಕೆ ಪ್ರದೇಶಕ್ಕೂ ತುಂಬಾ ಅಂತರವಿದೆ. ಹೀಗಾಗಿ ಕೈಗಾರಿಕೆಗಳಿಗೆ ಯಾವುದೇ ತೊಂದರೆ ಇಲ್ಲ. ಜತೆಗೆ, ಗಣಿಗಳಲ್ಲಿ ಸಾಕಷ್ಟು ನೀರಿದೆ ಹೌದು. ಸಾಕಷ್ಟು ನೀರು ಸಂಗ್ರಹಣೆ ಇದೆ. ಈ ನೀರನ್ನೇ ಕೈಗಾರಿಕೆಗಳಿಗೂ ಬಳಕೆ ಮಾಡಬಹುದು. ಆ ನೀರಿನಲ್ಲಿ ಮೀಥೆನ್‌ನಂಥ ವಿಷಕಾರಿ ಅಂಶಗಳು ಇಲ್ಲ. ಆ ನೀರನ್ನು ಉತ್ತಮವಾಗಿ ಸಂಸ್ಕರಿಸಿ ಕುಡಿಯಬಹುದು. ಕೊಂಚ ಮಟ್ಟಿಗೆ ಸಲ್ಫೇಡ್‌ ಅಂಶವಿರುತ್ತದೆ. ವಾಟರ್‌ ಟ್ರೀಟ್ಮೆಂಟ್‌ ಮಾಡಿದ ಮೇಲೆ ಯಾವುದೇ ಸಮಸ್ಯೆ ಇಲ್ಲ. ಹೆಚ್ಚು ಮಳೆ ಬಂದಾಗ ಈ ಗಣಿಗಳಿಂದ ನೀರು ಉಕ್ಕುತ್ತದೆ. ನಾನು ಮೊದಲೇ ಹೇಳಿದಂತೆ ಗಣಿ ಸುರಂಗಗಳು ಭೂಮೇಲ್ಮೈ ಪ್ರದೇಶದಿಂದ 100 ಅಡಿ ಆಳದಲ್ಲಿವೆ. ಅಷ್ಟು ಆಳಕ್ಕೆ ಒಂದು ಪಂಪ್‌ ಅಳವಡಿಸಿ ನೀರನ್ನು ಹೊರತೆಗೆಯಬಹುದು. ಬೆಮೆಲ್‌ ಕಾರ್ಖಾನೆಗೆ ಹಾಗೂ ಅಲ್ಲಿನ ಬೆಮೆಲ್‌ ಕಾಲೋನಿಯಾದ ಭಾರತ್‌ ನಗರ, ಆಫೀಸರ್ಸ್‌ ಕಾಲೋನಿಗೂ ಇದೇ ನೀರನ್ನೇ ಪುರಸಭೆಯವರು ಸಂಸ್ಕರಿಸಿ ಪೂರೈಕೆ ಮಾಡುತ್ತಿದ್ದಾರೆ. ಈ ನೀರು ಸದ್ಯಕ್ಕೆ ಬೆಂಗಳೂರಿನಿಂದ ಕೋಲಾರ-ಚಿಕ್ಕಬಳ್ಳಾಪುರ ಕೆರೆಗಳಿಗೆ ಹರಿಸುತ್ತಿರುವ ಕೊಳಚೆ ನೀರಿಗಿಂತ ಉತ್ತಮ. ಗಣಿಗಳಲ್ಲಿ ಈಗಿರುವ ನೀರು ಖಾಲಿ ಮಾಡಿದರೆ, ಮತ್ತೆ ಶುದ್ಧ ನೀರು ತುಂಬುತ್ತದೆ. ಒಂದರ್ಥದಲ್ಲಿ ಇದು ಕೆಜಿಎಫ್‌ ಜನರಿಗೆ ಭೂಗರ್ಭದಲ್ಲಿ ನಿರ್ಮಾಣವಾಗಿರುವ ಮಾನವ ನಿರ್ಮಿತ ಜಲಾಶಯ ಎಂದು ಹೇಳಬಹುದು.

Q: ಹಾಗಾದರೆ, ಕೈಗಾರಿಕೆ ಪಾರ್ಕ್‌ ಸ್ಥಾಪನೆ ಮಾಡುವುದೇ ಉತ್ತಮ ಅಂತೀರಾ?

ಹೌದು. ಗಣಿಗಾರಿಕೆಗಿಂತ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದೇ ಉತ್ತಮ. ಇದರಿಂದ ರಾಜ್ಯಕ್ಕೆ ತುಂಬಾ ಒಳ್ಳೆಯದಾಗುತ್ತದೆ. ಕೇಂದ್ರ ಸರಕಾರದ ಆಲೋಚನೆ ಸರಿಯಾದ ದಿಕ್ಕಿನಲ್ಲೇ ಇದೆ. ಮೈನಿಂಗ್‌ ಮಾಡಿದರೆ ನಷ್ಟವನ್ನು ಮೈಮೇಲೆ ಎಳೆದುಕೊಂಡಂತೆ. ಏಕೆಂದರೆ ಡ್ರಿಲ್ಲಿಂಗ್‌ ಮಾಡುತ್ತಿರುವ ಜಾಗದಲ್ಲಿ ಚಿನ್ನದ ನಿಕ್ಷೇಪ ಸಿಗುವ ಅವಕಾಶ ತೀರಾ ಕ್ಷೀಣ ಎಂಬುದು ನನ್ನ ಅಭಿಪ್ರಾಯ.

***

ಈ ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ..
ಅಳಿದುಳಿದ ಚಿನ್ನಕ್ಕಾಗಿ ಡ್ರಿಲ್ಲಿಂಗ್; ಕೆಜಿಎಫ್ ನಿರೀಕ್ಷೆಗೆ ಮತ್ತೆ ನೀರು, ಮಾಜಿ ಮಿನಿ ಇಂಗ್ಲೆಂಡ್‌ ಮುಖದಲ್ಲಿ ಮಂದಹಾಸ
ಡಾ.ಎಂ.ವೆಂಕಟಸ್ವಾಮಿ
ನಮ್ಮ ರಾಜ್ಯದ ಹೆಸರಾಂತ ಭೂವಿಜ್ಞಾನಿ ಮತ್ತು ಲೇಖಕ. ಮೂಲತಃ ಕೆಜಿಎಫ್’ನವರೇ. ಆ ಗಣಿಗಳನ್ನು ನೋಡಿಕೊಂಡೇ ಬೆಳೆದವರು. ಅವುಗಳ ವೈಭವ ಮತ್ತು ಪತನವನ್ನು ಪ್ರತ್ಯಕ್ಷವಾಗಿ ನೋಡಿದವರು. ಅನೇಕ ವರ್ಷ ಚಿನ್ನದ ಗಣಿಗಳ ಬಗ್ಗೆ ಅಧ್ಯಯನ ಮಾಡಿದವರು ಕೂಡ. ಈ ಗಣಿಗಳ ಬಗ್ಗೆ ಅವರು ಬರೆದಿರುವ ʼಸುವರ್ಣ ಕಥನ’ ಒಂದು ಮಹತ್ತ್ವದ ಕೃತಿ. ಹಂಪಿ ವಿಶ್ವವಿದ್ಯಾಲಯ ಇದನ್ನು ಪ್ರಕಟಿಸಿದೆ. ಇನ್ನು, ಭೂವಿಜ್ಞಾನಿಯಾಗಿ ಅವರು ದೇಶದ ಉದ್ದಗಲಕ್ಕೂ ಕೆಲಸ ಮಾಡಿದ್ದಾರೆ. ಎಂಟು ವರುಷಗಳ ಕಾಲ ಈಶಾನ್ಯ ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. “ಏಳು ಪರ್ವತಗಳು ಒಂದು ನದಿ”, “ಈಶಾನ್ಯ ಭಾರತದ ಆಧುನಿಕ‌ ಕಥೆಗಳು” ಮತ್ತು “ಈಶಾನ್ಯ ಭಾರತದ ಕವಿತೆಗಳು” ನವಕರ್ನಾಟಕದಲ್ಲಿ ಪ್ರಕಟವಾಗಿವೆ.
Tags: goldkarnatakakgfkolar gold fields
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಕನಸುಗಾರ ಕನ್ನಡಿಗ ಮತ್ತು ಕಿಟ್ಟೆಲ್  ; ಸ್ಯಾಂಡಲ್‌ವುಡ್‌ನಲ್ಲಿ ಕೋವಿಡ್‌ ನಂತರ ಹೊಸ ಕನವರಿಕೆ

ಕನಸುಗಾರ ಕನ್ನಡಿಗ ಮತ್ತು ಕಿಟ್ಟೆಲ್ ; ಸ್ಯಾಂಡಲ್‌ವುಡ್‌ನಲ್ಲಿ ಕೋವಿಡ್‌ ನಂತರ ಹೊಸ ಕನವರಿಕೆ

Leave a Reply Cancel reply

Your email address will not be published. Required fields are marked *

Recommended

ಡಿಕೆಶಿಗೆ ಭರ್ಜರಿ ಆಫರ್‌ ನೀಡಿದ ಕುಮಾರಸ್ವಾಮಿ!!

ಡಿಕೆಶಿಗೆ ಭರ್ಜರಿ ಆಫರ್‌ ನೀಡಿದ ಕುಮಾರಸ್ವಾಮಿ!!

2 years ago
30 ವರ್ಷಗಳ ಭಾರತ; ಆಡ್ವಾಣಿ ಮತ್ತು ಜೋಷಿ ಅವರ ನಂತರ ಝಗಮಗಿಸುತ್ತಿರುವ ಬಿಜೆಪಿ

30 ವರ್ಷಗಳ ಭಾರತ; ಆಡ್ವಾಣಿ ಮತ್ತು ಜೋಷಿ ಅವರ ನಂತರ ಝಗಮಗಿಸುತ್ತಿರುವ ಬಿಜೆಪಿ

5 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ