• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಶಿಕ್ಷಣದಲ್ಲಿ ಕೇಂದ್ರೀಕರಣ ವ್ಯವಸ್ಥೆ; ಸಿಎಂ ನೇತೃತ್ವದಲ್ಲಿ ಶಿಕ್ಷಣ ಆಯೋಗ ರಚನೆಗೆ ಶಿಫಾರಸು

cknewsnow desk by cknewsnow desk
November 7, 2020
in STATE
Reading Time: 2 mins read
0
ಶಿಕ್ಷಣದಲ್ಲಿ ಕೇಂದ್ರೀಕರಣ ವ್ಯವಸ್ಥೆ; ಸಿಎಂ ನೇತೃತ್ವದಲ್ಲಿ ಶಿಕ್ಷಣ ಆಯೋಗ ರಚನೆಗೆ ಶಿಫಾರಸು
917
VIEWS
FacebookTwitterWhatsuplinkedinEmail
Lead photo pixabay from pexels

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕಾರ್ಯಪಡೆಯ ಅಂತಿಮ ವರದಿ

ಬೆಂಗಳೂರು: ಎಲ್ಲ ಹಂತಗಳ ಶಿಕ್ಷಣವನ್ನು ಒಂದೇ ವ್ಯಾಪ್ತಿಗೆ ತಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಶಿಕ್ಷಣ ಆಯೋಗ ರಚಿಸುವುದು, ಶಾಲಾ ಶಿಕ್ಷಣ ಹಾಗೂ ಉನ್ನತ ಶಿಕ್ಷಣದ ಸ್ವರೂಪ ಬದಲಾವಣೆ ಜತೆಗೆ, ಇಡೀ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆಮೂಲಾಗ್ರವಾಗಿ ರಾಜ್ಯದಲ್ಲಿ ಜಾರಿ ಮಾಡುವ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ನಿವೃತ್ತ ಐಎಎಸ್‌ ಆಧಿಕಾರಿ ಎಸ್‌.ವಿ.ರಂಗನಾಥ್‌ ನೇತೃತ್ವದ ಕಾರ್ಯಪಡೆ ಸರಕಾರಕ್ಕೆ ಸಲ್ಲಿಸಿದೆ.

ಬೆಂಗಳೂರಿನಲ್ಲಿ ಶನಿವಾರ ವಿಧಾನಸೌಧದಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರಿಗೆ ಕಾರ್ಯಪಡೆಯ ಅಧ್ಯಕ್ಷ ಎಸ್.ವಿ.ರಂಗನಾಥ್‌ ವರದಿ ಸಲ್ಲಿಸಿದರಲ್ಲದೆ, ಈ ವರದಿಯಲ್ಲಿ ಮಾಡಲಾಗಿರುವ ಶಿಫಾರಸುಗಳೂ ಮತ್ತೂ ಅವುಗಳ ಜಾರಿಯ ಬಗ್ಗೆ ಇಬ್ಬರೂ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

Released the final report prepared by the Task Force Committee on the implementation of #NEP2020 in a press conference today. Compliments to the task force for a comprehensive report.

Karnataka is committed to the successful implementation of the NEP.@BSYBJP @nimmasuresh pic.twitter.com/1FoVbktZhh

— Dr. C.N. Ashwath Narayan (ಮೋದಿ ಅವರ ಪರಿವಾರ) (@drashwathcn) November 7, 2020

ವರದಿ ಶೀಘ್ರ ಸಂಪುಟಕ್ಕೆ

ವರದಿಯನ್ನು ಸ್ವೀಕರಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ, ಶಿಕ್ಷಣ ನೀತಿ ಜಾರಿಯ ನಿಟ್ಟಿನಲ್ಲಿ ಈ ವರದಿಯೂ ನಮಗೆ ಸ್ಪಷ್ಟ ದಿಕ್ಸೂಚಿಯಾಗಿದೆ. ಕೂಡಲೇ ವರದಿಯ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸಂಪುಟದ ಮುಂದೆ ಇಡಲಾಗುವುದು ಎಂದರು. ಕಾರ್ಯಪಡೆ ಅಧ್ಯಕ್ಷ ಎಸ್.ವಿ.ರಂಗನಾಥ್‌, ಸದಸ್ಯರಾದ ಪ್ರೊ.ಎಂ.ಕೆ.ಶ್ರೀಧರ್‌, ಪ್ರೊ.ಅನುರಾಗ್‌ ಬೇಹರ್‌ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

3 ಅಂಶಗಳ ಆಧಾರಿತ ಸಮಗ್ರ ವರದಿ

ಇಡೀ ವರದಿ ಜಾರಿಗೆ 3 ಮೂರು ಮುಖ್ಯ ಅಂಶಗಳನ್ನು ಕಾರ್ಯಪಡೆ ಗುರುತಿಸಿದ್ದು, ಅವುಗಳ ಆಧಾರದ ಮೇಲೆ ಇಡೀ ಶಿಫಾರಸುಗಳ ಜಾರಿಯಾಗಬೇಕು ಎಂದು ತಿಳಿಸಿದೆ. ಅವುಗಳೆಂದರೆ; ಮೂಲತತ್ವ, ಆದ್ಯತೆ ಮತ್ತು ಸಂಬಂಧಪಟ್ಟವರೆಲ್ಲರೂ ನಿರ್ಣಾಯವಾಗಿ ತೊಡಗಿಸಿಕೊಳ್ಳುವುದು.

ಮೂಲತತ್ವದ ಅಡಿಯಲ್ಲಿ ಶಾಸಕಾಂಗದ ಕ್ರಿಯೆಗಳು, ರಚನಾತ್ಮಕ ಪರಿವರ್ತನೆ, ಆಡಳಿತಾತ್ಮಕ ಬದಲಾವಣೆ, ಪಠ್ಯಕ್ರಮ ಸುಧಾರಣೆ ಆಧರಿಸಿ ಕಾರ್ಯಚಟುವಟಿಕೆ ರೂಪಿಸುವುದು ನಿರಂತರ ಸಮಾಲೋಚನೆ ಮೂಲಕ ಶಿಕ್ಷಣ ನೀತಿಯ ಅನುಷ್ಠಾನದ ಹಂತಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು. ಇನ್ನು; ಆದ್ಯತೆ ಅಂಶಕ್ಕೆ ಬಂದರೆ, ಮುಖ್ಯವಾಗಿ ʼಶೂನ್ಯ ವರ್ಷʼಕ್ಕೆ (2020-2021) ಸಂಬಂಧಿಸಿ ಕಾರ್ಯಚಟುವಟಿಕೆಗೆ ಆದ್ಯತೆ ನೀಡಬೇಕು. ಈ ಅವಧಿಯಲ್ಲಿ ಶಿಕ್ಷಣ ನೀತಿ ಜಾರಿಗೆ ಬೇಕಾದ ಎಲ್ಲ ಶಾಸಕಾಂಗ, ಆಡಳಿತಾತ್ಮಕ ಹಾಗೂ ಹಣಕಾಸು ಕ್ರಮಗಳನ್ನು ಮಾಡಿ ಮುಗಿಸಿಕೊಳ್ಳಬೇಕು. ಕೊನೆಗೆ ನಿರ್ಣಾಯವಾಗಿ ತೊಡಗಿಸಿಕೊಳ್ಳುವಿಕೆ ಅಂಶಕ್ಕೆ ಬಂದರೆ; ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳೂ ಎಲ್ಲಾ ಕಾರ್ಯ ಚಟುವಟಿಕೆಗಳ ಮೇಲೆ ಹೊಣೆಗಾರಿಕೆ ಹೊಂದಿರಬೇಕು. ಶಿಕ್ಷಣ ನೀತಿಯ ನಿಬಂಧನೆಗಳ ಅನುಸಾರ ಶಾಲಾ ಹಂತದಲ್ಲಿಯೇ ಸ್ವಾಯತ್ತತೆ ನೀಡಲಾಗುವುದಲ್ಲದೆ, ಎಲ್ಲಾ ಭಾಗೀದಾರರನ್ನೂ ಒಳಗೊಳ್ಳುವುದರ ಜತೆಗೆ ಭಾಗೀದಾರರು ತಮ್ಮ ಚಟುವಟಿಕೆಗಳಲ್ಲಿ ಪೂರ್ಣವಾಗಿ ತೊಡಗಿಸಿಳ್ಳುವುದು ಮತ್ತೂ ಅದಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಸಜ್ಜು ಮಾಡಿಕೊಳ್ಳುವುದು. ಈ ಮೂರು ಅಂಶಗಳನ್ನು ಕಾರ್ಯಪಡೆ ಒತ್ತಿ ಹೇಳಿದೆ.

ಕರ್ನಾಟಕ ಶಿಕ್ಷಣ ಆಯೋಗ ಹಾಗೂ ಕರ್ನಾಟಕ ಶಿಕ್ಷಣ ಕಮಿಷನ್

ರಾಜ್ಯದ ಎಲ್ಲ ಹಂತಗಳ ಶಿಕ್ಷಣ ವ್ಯವಸ್ಥೆಯನ್ನು ಒಂದೇ ವೇದಿಕೆಗೆ ತಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ಶಿಕ್ಷಣ ಆಯೋಗ (ಕೆಎಸ್‌ಎ) ಹಾಗೂ ಕರ್ನಾಟಕ ಶಿಕ್ಷಣ ಕಮಿಷನ್ (ಕೆಇಸಿ) ಸ್ಥಾಪನೆ ಮಾಡಬೇಕೆಂದು ವರದಿಯಲ್ಲಿ ಮಾಡಿರುವ ಬಹುಮುಖ್ಯ ಶಿಫಾರಸು.

ಎಲ್ಲ ಇಲಾಖೆಗಳು, ಚಟುವಟಿಕೆಗಳು, ಅಂಗ ಸಂಸ್ಥೆಗಳು, ಸಂಘಟನೆಗಳ ನಡುವೆ ಸಂಯೋಜನೆ ಮತ್ತು ಹೊಂದಾಣಿಕೆ ಅಗತ್ಯವಿದ್ದು, ಹೀಗೆ ಸರ್ಕಾರದ ವಿವಿಧ ಸಂಸ್ಥೆಗಳು ಹಾಗೂ ಇಲಾಖೆಗಳಲ್ಲಿ ಪ್ರಗತಿಯಲ್ಲಿರುವ ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸುವ ಒಂದು ಬೃಹತ್ತಾದ ವ್ಯಾಪಕತೆಯುಳ್ಳ ಅಂಗಸಂಸ್ಥೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಇವೆರಡೂ ಸಂಸ್ಥೆಗಳನ್ನು ರೂಪಿಸಲು ಸಲಹೆ ನೀಡಿದೆ. ರಾಜ್ಯದಲ್ಲಿನ ಶೈಕ್ಷಣಿಕ ಬೆಳವಣಿಗೆಯನ್ನು ಸಮಗ್ರವಾಗಿ ಪರಿಶೀಲಿಸಲು ಇವು ಅಗತ್ಯ ಎಂದು ಕಾರ್ಯಪಡೆ ಪ್ರತಿಪಾದಿಸಿದೆ. ಉನ್ನತ ಶಿಕ್ಷಣ ಸಚಿವರು ಹಾಗೂ ಪ್ರೌಢ-ಪ್ರಾಥಮಿಕ ಶಿಕ್ಷಣ ಸಚಿವರು ಇವೆರಡೂ ಸಂಸ್ಥೆಗಳ ಉಪಾಧ್ಯಕ್ಷರಾಗಿರಬೇಕು ಎಂದು ತಿಳಿಸಲಾಗಿದೆ.

ಶಾಲಾ ಶಿಕ್ಷಣದ ಸ್ವರೂಪ

ಶಾಲಾ ಶಿಕ್ಷಣದ ಆಡಳಿತ ಹಾಗೂ ನಿಯಂತ್ರಣಕ್ಕೆ ಪ್ರಸ್ತಾಪಿತವಾದ ಸ್ವರೂಪವು ಅಧಿಕಾರದ ಪ್ರತ್ಯೇಕತೆಯನ್ನು ಹಾಗೂ ಶಾಲಾ ಶಿಕ್ಷಣದ ವಿವಿಧ ಏಜೆನ್ಸಿಗಳ ನಡುವೆ ಅವುಗಳ ವ್ಯಾಪ್ತಿಯ ಅತಿಕ್ರಮಣ ಆಗದಿರುವುದನ್ನು ಖಾತರಿಪಡಿಸುತ್ತದೆ. ಪ್ರಸ್ತಾವಿತ ಸ್ವರೂಪದಲ್ಲಿ ಸ್ವತಂತ್ರ ಅಂಗಸಂಸ್ಥೆಗಳು ಶಾಲೆಗಳ ಆಡಳಿತ, ಶಾಲಾ ನಿಯಂತ್ರಣ, ಶೈಕ್ಷಣಿಕ ವಿಷಯಗಳ ನಿರ್ಧಾರ, ಮೌಲ್ಯಮಾಪನಗಳನ್ನು ಕ್ರಮವಾಗಿ ನಡೆಸುತ್ತದೆ. ಅಧಿಕಾರದ ಈ ಪ್ರತ್ಯೇಕತೆಯನ್ನು ಕರ್ನಾಟಕ ರಾಜ್ಯ ಶೈಕ್ಷಣಿಕ ಮಂಡಳಿ (ಕೆಎಸ್‌ಇಸಿ)ಯ ಸ್ಥಾಪನೆಯು ಖಾತರಿಪಡಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

2020ರ ಸ್ವರೂಪವನ್ನು ಪ್ರತಿಫಲಿಸುವ ಕಾರ್ಯಪಡೆಯು ಉನ್ನತ ಶಿಕ್ಷಣದ ಆಡಳಿತ ಹಾಗೂ ನಿಯಂತ್ರಣವನ್ನು ಪ್ರಸ್ತಾಪಿಸುತ್ತದೆ. ಕರ್ನಾಟಕ ಉನ್ನತ ಶಿಕ್ಷಣ ಆಯೋಗವು (ಕೆಎಚ್‌ಇಸಿ) ಉನ್ನತ ಶಿಕ್ಷಣ ಕ್ಷೇತ್ರದ ಆಡಳಿತ ಹಾಗೂ ನಿಯಂತ್ರಣದ ಮೇಲ್ವಿಚಾರಣೆ ಮಾಡುವ ಸ್ವತಂತ್ರ ಸ್ವಾಯತ್ತ ಅಂಗಸಂಸ್ಥೆಗಳ ಮೇಲೆ ನಿಗಾ ಇಟ್ಟಿರುವ ಒಂದು ಸಂಸ್ಥೆ. ಉದಾಹರಣೆಗೆ, ಕರ್ನಾಟಕ ಉನ್ನತ ಶಿಕ್ಷಣ ನಿಯಂತ್ರಣಾ ಮಂಡಳಿ (ಕೆಎಚ್‌ಇಆರ್‌ಸಿ), ಕರ್ನಾಟಕ ಸಂಶೋಧನೆ ಹಾಗೂ ನಾವೀನ್ಯತೆಯ ಶೋಧನಾ ಮಂಡಳಿ (ಕೆಆರ್‌ಐಸಿ). ಕೇಂದ್ರದ ರಾಷ್ಟ್ರೀಯ ಮಾನ್ಯತಾ ಸಂಸ್ಥೆ (ನ್ಯಾಕ್)ಯು ರಾಜ್ಯದಲ್ಲಿ ಅಗತ್ಯ ಮಾನ್ಯತಾ ಸಂಸ್ಥೆ (ಎಐಗಳು)ಗಳನ್ನು ಸ್ಥಾಪಿಸುತ್ತದೆ.

ಶಾಲೆಗಳ ನಿಯಂತ್ರಣ ಹಾಗೂ ಕಾರ್ಯಾಚರಣೆ

ಕರ್ನಾಟಕ ಶಾಲಾ ಶಿಕ್ಷಣ ಮಂಡಳಿ (ಕೆಎಸ್‌ಇಸಿ) ಶಾಲಾ ಶಿಕ್ಷಣ ಹಾಗೂ ಸರಕಾರದೊಂದಿಗೆ ಸಂಬಂಧವುಳ್ಳ ವಿವಿಧ ಇಲಾಖೆಗಳು ಹಾಗೂ ಅಂಗಸಂಸ್ಥೆಗಳ ನಡುವೆ ಸಮನ್ವಯ, ಸಂಪರ್ಕಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ವಿಶಾಲ ಹಂತಗಳಲ್ಲೂ ನಿಗಾ ವಹಿಸಬೇಕು. ಶಾಲಾ ಶಿಕ್ಷಣಕ್ಕೆ ಸಾರ್ವಜನಿಕ ಧನಸಹಾಯವನ್ನು ಪರಿಣಾಮಕಾರಿಯಾಗಿ ಹೆಚ್ಚಿಸುವುದು ಹೇಗೆ ಎಂಬ ಪ್ರಯತ್ನದಲ್ಲಿ ಒಂದು ಕಾರ್ಯಪಡೆಯನ್ನು ಸ್ಥಾಪಿಸಬೇಕು. ಶಿಕ್ಷಣದ ನಿಯಂತ್ರಣಾ ಘಟಕವಾಗಿ ಎಸ್‌ಎಸ್‌ಎಸ್‌ಎ ಎಂಬ ಮತ್ತೊಂದು ಹೊಸ ಅಂಗಸಂಸ್ಥೆಯನ್ನು ಸ್ಥಾಪಿಸಬೇಕು. ಡಿಎಸ್‌ಇಆರ್‌ಟಿಯು ಸೂಕ್ತ ಭಾಗೀದಾರರೊಂದಿಗೆ ಸಮಾಲೋಚನೆ ನಡೆಸಿ ‘ಹಗುರ ಆದರೆ ಪ್ರಬಲವಾದ’ ಶಾಲಾ ಗುಣಮಟ್ಟದ ಪರಿಶೀಲನೆ ಹಾಗೂ ಮಾನ್ಯತಾ ರಚನೆ (ಎಸ್‌ಕ್ಯೂಎಎಎಫ್)ಯ ಮೇಲೆ ಆಧಾರಿತವಾದ ನಿಯಂತ್ರಣಾ ತತ್ವಗಳನ್ನು ಅಭಿವೃದ್ಧಿಪಡಿಸಬೇಕು. ಶಾಲಾ ಶಿಕ್ಷಣ ಇಲಾಖೆಯೊಳಗಿನ ಇತರ ಅಂಗಸಂಸ್ಥೆಗಳ ಜವಾಬ್ದಾರಿಗಳನ್ನು ಮರುರೂಪಿಸಬೇಕು ಮತ್ತು ಅವುಗಳ ನಡುವೆ ಕಾರ್ಯವ್ಯಾಪ್ತಿಯ ಅತಿಕ್ರಮಣ ಅಥವಾ ಆಸಕ್ತಿಗಳ ನಡುವಿನ ಸಂಘರ್ಷ ಉಂಟಾಗುವುದಿಲ್ಲ ಎಂಬುದನ್ನು ಖಾತರಿಪಡಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ಇತರೆ ಶಿಫಾರಸು

*ಮುಂದಿನ ಮೂರು ವರ್ಷಗಳಿಗೆ ತ್ರೈಮಾಸಿಕ ಕ್ಯಾಲೆಂಡರಿನಲ್ಲಿ ನಿಗದಿಪಡಿಸಲಾದ ನಿರ್ದಿಷ್ಟ ಗುರಿಗಳೊಂದಿಗೆ ʼಅನುಷ್ಠಾನ ಮಿಷನ್ʼ ಸ್ಥಾಪಿಸುವುದು ಮತ್ತು ಪ್ರತಿ ತ್ರೈಮಾಸಿಕದಲ್ಲೂ ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಿ ಅನುಷ್ಠಾನ ಕಾರ್ಯಪಡೆ (ಐಟಿಎಫ್) ಸ್ಥಾಪನೆ.
*ಸಮಗ್ರ ಶಿಕ್ಷಣದಲ್ಲಿ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ (ಕೆಎಸ್‌ಎಚ್‌ಇಸಿ)ಯಲ್ಲಿ ʼಅನುಷ್ಠಾನ ನಿಧಿʼಗೆ ಒಂದು ತತ್‌ಕ್ಷಣದ ಪೂರೈಕೆ ವ್ಯವಸ್ಥೆ ರೂಪಿಸಬೇಕು.
*ನಿಯಂತ್ರಣಾ ಅಂಗಸಂಸ್ಥೆಗಳ ಸ್ಥಾಪನೆ: ರಾಜ್ಯ ಶಾಲಾ ಗುಣಮಟ್ಟ ಪ್ರಾಧಿಕಾರ (ಎಸ್‌ಎಸ್‌ಎಸ್‌ಎ) ಮತ್ತು ಕರ್ನಾಟಕ ಉನ್ನತ ಶಿಕ್ಷಣ ನಿಯಂತ್ರಣಾ ಮಂಡಲಿ (ಕೆಎಚ್‌ಇಆರ್‌ಸಿ)ಗಳ ಸ್ಥಾಪನೆ.
*ಪ್ರಸ್ತಾವಿತ ಉನ್ನತ ಶಿಕ್ಷಣ ಮಂಡಳಿ ರಚನೆಗಾಗಿ ಹೊಸ ಕಾಯಿದೆ ರೂಪಿಸಬೇಕು.
*ಶಿಕ್ಷಣ ಇಲಾಖೆಯಲ್ಲಿ ಹಾಲಿ ಇರುವ ಅಂಗ ಸಂಸ್ಥೆಗಳೊಳಗೆ ಅಧಿಕಾರದ ಪ್ರತ್ಯೇಕತೆಯನ್ನು ಸ್ಪಷ್ಟವಾಗಿ ಗುರುತಿಸಬೇಕು.
*ಸೇವಾ ನಿಯಮಗಳಿಗೆ ತಿದ್ದುಪಡಿ ತರಬೇಕು. ನಿರ್ದಿಷ್ಟ ಸೇವಾವಧಿ (ಟೆನ್ಯೂರ್‌ಶಿಪ್ಸ್); ಶಿಕ್ಷಕರ ವೃತ್ತಿ ಪ್ರಗತಿಯ ಗಮನ ಮತ್ತಿತರೆ ಅಂಶಗಳತ್ತ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು.
*ರಾಜ್ಯದೊಳಗೆ ಗುರುತಿಸಲಾದ ವಲಯಗಳಲ್ಲಿ ವಿಶೇಷ ಶೈಕ್ಷಣಿಕ ವಲಯಗಳ ಸ್ಥಾಪನೆ
*ಸಾಮಾಜಿಕವಾಗಿ, ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಗೆ ರೂಪಿಸಲಾದ ಉಪಕ್ರಮಗಳ ಜತೆಗೆ ಲಿಂಗಾಧಾರಿತ ಮತ್ತು ವಿಶೇಷಚೇತನ ನಿಧಿ ಸ್ಥಾಪನೆ.

ಶಾಲಾ ಶಿಕ್ಷಣಕ್ಕೆ ಸಲಹೆ

*ಆರಂಭ ಹಂತದ ವರ್ಷಗಳ ಶಾಖೆ ಮತ್ತು ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಶಾಖೆಯ ಸ್ಥಾಪನೆ.
*ಶಾಲೆಯ ಆರಂಭಿಕ ಹಾಗೂ ಸಿದ್ಧತಾ ಹಂತಗಳಿಗೆ ಡಿಎಸ್‌ಇಆರ್‌ಟಿ ಪಠ್ಯಕ್ರಮ ಹಾಗೂ ಬೋಧನಾ ವಿಧಾನದ ಪರಿಷ್ಕರಣೆ ಮಾಡಬೇಕು. ಎನ್‌ಸಿಎಫ್ 2021 ಬಿಡುಗಡೆಯಾದ ಮೇಲೆ ಮಾಧ್ಯಮಿಕ ಹಾಗೂ ಪ್ರೌಢಹಂತದ ಪಠ್ಯಕ್ರಮದ ಪರಿಷ್ಕರಣೆ ಕೈಗೆತ್ತಿಕೊಳ್ಳಬಹುದು.
*ಯಶಸ್ವೀ ಶಾಲೆಗಳನ್ನು ಗುರುತಿಸುವುದು, ನಿರ್ದಿಷ್ಟವಾಗಿ ಕೆಪಿಎಸ್ ಮತ್ತು ಇತರೆ ವಿಶೇಷ ಶಾಲೆಗಳನ್ನು ಗುರುತಿಸಿ ಅವನ್ನು ಶಾಲಾ ಸಂಕೀರ್ಣ ಕೇಂದ್ರವನ್ನಾಗಿ ನಿರ್ಮಿಸುವುದು.
*ಗುರುಚೇತನವನ್ನು ಮತ್ತಷ್ಟು ಬಲಗೊಳಿಸುವುದು. ಅದನ್ನು ರಾಜ್ಯದಲ್ಲಿ ಶಿಕ್ಷಕ ವೃತ್ತಿಪರ ಅಭಿವೃದ್ಧಿಯ ವಿಶಿಷ್ಟ ವೇದಿಕೆಯನ್ನಾಗಿ ಮಾಡುವುದು.

ಉನ್ನತ ಶಿಕ್ಷಣಕ್ಕೆ ಸಲಹೆ

*ಎಚ್‌ಇಐಗಳೊಳಗೆ ಬಿಓಜಿಗಳ ಸ್ಥಾಪನೆ, ಇವು ಮಾರ್ಗದರ್ಶಕ ಸಂಸ್ಥೆಗಳಾಗಿ ಬೆಳೆಯಲು ಪ್ರಾರಂಭದಲ್ಲಿ ಕೆಎಸ್‌ಎಚ್‌ಇಸಿ ಇದರ ಕೈಹಿಡಿದು ನಡೆಸಬೇಕು. ತರುವಾಯ ಇವು ಇತರೆ ಎಚ್‌ಇಐಗಳ ಕೈಹಿಡಿದು ನಡೆಸಬಲ್ಲ ಮಾರ್ಗದರ್ಶಕ ಸಂಸ್ಥೆಗಳಾಗಬಲ್ಲವು.
*ಮಾರ್ಗದರ್ಶಕ ಸಂಸ್ಥೆಗಳನ್ನು ಗುರುತಿಸಿ ಕಾರ್ಯಾಗಾರಗಳನ್ನು ನಡೆಸಬೇಕು. ನೀತಿಯ ತತ್ವಗಳೊಂದಿಗೆ ಅನುಸರಣೆಯಾಗುತ್ತವೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.
*ಎಲ್ಲಾ ಎಚ್‌ಇಐಗಳೂ ಐಡಿಪಿಗಳನ್ನು ಅಭಿವೃದ್ಧಿಪಡಿಸಬೇಕು. ಪ್ರಾರಂಭದಲ್ಲಿ ಕೆಎಸ್‌ಎಚ್‌ಇಸಿ ಮತ್ತು ಮಾರ್ಗದರ್ಶಕ ಸಂಸ್ಥೆಗಳು ಇದರಕೈಹಿಡಿದು ನಡೆಸಬೇಕು

Tags: karnatakanational education policy 2020nep
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಅಮೆರಿಕದಲ್ಲಿ ಜೋ ಬೈಡನ್‌ ಜೋಶ್: ಸೋಲಿನ ಪ್ರಪಾತಕ್ಕೆ ಬಿದ್ದ ಡೊನಾಲ್ಡ್‌ ಟ್ರಂಪ್‌

ಅಮೆರಿಕದಲ್ಲಿ ಜೋ ಬೈಡನ್‌ ಜೋಶ್: ಸೋಲಿನ ಪ್ರಪಾತಕ್ಕೆ ಬಿದ್ದ ಡೊನಾಲ್ಡ್‌ ಟ್ರಂಪ್‌

Leave a Reply Cancel reply

Your email address will not be published. Required fields are marked *

Recommended

ಕೊನೆಗೂ ಎಕ್ಸಾಮ್‌ ಸುದ್ದಿ ಕೊಟ್ಟ ಸುರೇಶ್‌ ಕುಮಾರ್; ಸೆಕೆಂಡ್‌ ಪಿಯುಸಿ ವಿದ್ಯಾರ್ಥಿಗಳಿಗೆ ಮೇ ತಿಂಗಳಲ್ಲಿ, ಎಸ್ಎಸ್ಎಲ್ಸಿ ಮಕ್ಕಳಿಗೆ ಜೂನ್‌ನಲ್ಲಿ ಪರೀಕ್ಷೆ

ಲಾಕ್‌ಡೌನ್‌ ಮುಗಿದ ಮೇಲೆ ಮೇ ಅಂತ್ಯದೊಳಗೆ ವಿದ್ಯಾರ್ಥಿಗಳಿಗೆ ಪೂರ್ಣ ಆಹಾರ ಧಾನ್ಯ ವಿತರಣೆ: ಸಚಿವ ಸುರೇಶ್ ಕುಮಾರ್

4 years ago
ಹಿರೇವಾಗವೇಲಿ ಸ್ಫೋಟದಲ್ಲಿ ಜೀವ ಕಳೆದುಕೊಂಡ ರಾಮು ಮನೆಗೆ ಉದಾರ ನೆರವು; ಮಗನ ಪೂರ್ಣ ಶಿಕ್ಷಣ ವೆಚ್ಚ ಭರಿಸುವುದಾಗಿ ಮಾತುಕೊಟ್ಟ ಸಂದೀಪ್‌ ರೆಡ್ಡಿ

ಹಿರೇವಾಗವೇಲಿ ಸ್ಫೋಟದಲ್ಲಿ ಜೀವ ಕಳೆದುಕೊಂಡ ರಾಮು ಮನೆಗೆ ಉದಾರ ನೆರವು; ಮಗನ ಪೂರ್ಣ ಶಿಕ್ಷಣ ವೆಚ್ಚ ಭರಿಸುವುದಾಗಿ ಮಾತುಕೊಟ್ಟ ಸಂದೀಪ್‌ ರೆಡ್ಡಿ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ