• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಲೈವ್‌ನಲ್ಲೇ ಬಿಕ್ಕಳಿಸಿದ ಯಾಂಕರ್;‌ ಟ್ರಂಪ್‌ ಆಡಳಿತದ ಕರಾಳತೆಗೆ ಕನ್ನಡಿಯಿಟ್ಟ ಬ್ಲ್ಯಾಕ್‌ ಜರ್ನಲಿಸ್ಟ್!

P K Channakrishna by P K Channakrishna
December 7, 2020
in STATE, WORLD
Reading Time: 1 min read
0
ಲೈವ್‌ನಲ್ಲೇ ಬಿಕ್ಕಳಿಸಿದ ಯಾಂಕರ್;‌ ಟ್ರಂಪ್‌ ಆಡಳಿತದ ಕರಾಳತೆಗೆ ಕನ್ನಡಿಯಿಟ್ಟ ಬ್ಲ್ಯಾಕ್‌ ಜರ್ನಲಿಸ್ಟ್!
911
VIEWS
FacebookTwitterWhatsuplinkedinEmail
courtesy: CNN

ವಾಷಿಂಗ್ಟನ್:‌ ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್‌ ಆಯ್ಕೆ ಅನೇಕ ಕಾರಣಗಳಿಗೆ ಮಹತ್ತ್ವದ್ದೆನಿಸುತ್ತಿದೆ. ಈವರೆಗೂ ʼಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೆರಿಕʼ ಆಗಿದ್ದ ಆ ದೇಶವು ಇದೀಗ ʼಡಿವೈಡೆಡ್‌ ಸ್ಟೇಟ್ಸ್‌ ಆಫ್‌ ಅಮೆರಿಕʼ ಆಗಿ ಹೊರಹೊಮ್ಮಿದೆ. ನಾಲ್ಕು ದಿನಗಳ ಸತತ ಮತ ಎಣಿಕೆಯೊಂದಿಗೆ ಮುಗಿದ ಚುನಾವಣೆಯಿಂದ ಹೊರಬಿದ್ದ ಸ್ಪಷ್ಟವಾದ ಫಲಿತಾಂಶ ಇದೆನ್ನಬಹುದು.

ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾದ ಮೇಲೆ ಅಮೆರಿಕ ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿ ವಿಭಜನೆಯಾಗಿತ್ತು. ಆ ದೇಶದ ಮೂಲನಿವಾಸಿಗಳಲ್ಲಿ ಅನೇಕರು ಟ್ರಂಪ್‌ ಪರವೇ ನಿಂತರೆ, ಅದೇ ಟ್ರಂಪ್‌ ಸರಕಾರದಿಂದ ವೀಸಾ ಹೆಸರಿನಲ್ಲಿ ತೀವ್ರ ಕಿರುಕುಳಕ್ಕೆ ಒಳಗಾಗಿದ್ದ ಭಾರತೀಯ ಮೂಲದವರು ಮತ್ತು ಶ್ವೇತವರ್ಣೀಯರಿಂದ ಅಮಾನುಷ ದೌರ್ಜನ್ಯಕ್ಕೊಳಗಾಗಿದ್ದ ಕಪ್ಪು ವರ್ಣೀಯರು ಅತ್ಯಂತ ಗಟ್ಟಿಯಾಗಿ ಬೈಡನ್‌ ಪರ ನಿಂತುಬಿಟ್ಟರು. ಈಗ ಅವರ ಆನಂದ, ಸಂಭ್ರಮಕ್ಕೆ ಪಾರವೇ ಇಲ್ಲ. ಫಲಿತಾಂಶ ಹೊರಬಿದ್ದು ದಿನವೇ ಉರುಳಿದರೂ ವಿವಿಧ ನಗರಗಳ ಬೀದಿಗಳಲ್ಲಿ ಬೈಡನ್‌ ಜೋಶ ಕಮ್ಮಿಯಾಗಿಲ್ಲ.

Today is a good day.
It’s easier to be a parent this morning.
Character MATTERS.
Being a good person MATTERS.
This is a big deal.

It’s easy to do it the cheap way and get away with stuff — but it comes back around.

Today is a good day.#PresidentBiden#VotersDecided pic.twitter.com/h8YgZK4nmk

— Van Jones (@VanJones68) November 7, 2020
ಲೈವ್‌ನಲ್ಲೇ ಕಣ್ಣೀರು ಮತ್ತು ಆನಂದಬಾಷ್ಪ

ಇದೊಂದು ಬೆಳವಣಿಗೆಯಾದರೆ, ಮತ್ತೊಂದೆಡೆ ಚುನಾವಣೆ ಫಲಿತಾಂಶ ಹೊರಬಿದ್ದ ಕೂಡಲೇ ಅಮೆರಿಕದ ಜನಪ್ರಿಯ ಸುದ್ದಿವಾಹಿನಿ ಸಿಎನ್‌ಎನ್‌ ಲೈವ್‌ನಲ್ಲೇ ನಡೆದ ಪ್ರಸಂಗ ಇಡೀ ಜಗತ್ತು ಮತ್ತೊಮ್ಮೆ ಅಮೆರಿಕದ ಕಡೆ ನೋಡುವಂತೆ ಮಾಡಿತು. ಟ್ರಂಪ್‌ ಆಡಳಿತದಲ್ಲಿ ಅಮಾನವೀಯ ದಾಳಿಗಳಿಗೆ ಸಿಕ್ಕಿ ನಲುಗಿದೆವೆಂದೂ, ಬೈಡನ್‌ ಗೆಲ್ಲುವ ಮೂಲಕ ನಮಗೆಲ್ಲರಿಗೂ ಒಳ್ಳೆಯ ದಿನಗಳು ಬರಲಿವೆ ಎಂದು ಕಪ್ಪು ವರ್ಣೀಯರು ಕೂಗಿ ಹೇಳುತ್ತಿದ್ದ ಬೆನ್ನಲ್ಲೇ ಖ್ಯಾತ ನಿರೂಪಕ ವಾನ್‌ ಜೋನ್ಸ್‌ ಅವರು, ಸಿಎನ್‌ಎನ್‌ ಸುದ್ದಿವಾಹಿನಿಯ ಲೈವ್‌ನಲ್ಲಿದ್ದಾಗಲೇ ಕಣ್ಣೀರು ತುಂಬಿಕೊಂಡು ಗದ್ಗದಿತರಾದರು. ಚರ್ಚೆ ನಡೆಯುತ್ತಿದ್ದ ವೇಳೆಯಲ್ಲಿಯೇ ಯಾಂಕರ್‌ ಫಲಿತಾಂಶದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ, ಉತ್ತರಿಸಲು ಮುಂದಾದ ವಾನ್‌ ಭಾವುಕರಾದರು. ಮಾತು ಮುಂದುವರಿಸಲಾಗದೆ ಗದ್ಗದಿತರಾದರು. ʼಒಬ್ಬ ತಂದೆಯಾಗಿ, ನನ್ನ ಮಕ್ಕಳ ಪಾಲನೆಯನ್ನು ನೋಡಿಕೊಳ್ಳುವ ರಕ್ಷಕನಾಗಿ ಇವತ್ತು (ಶನಿವಾರ) ಬೆಳಗ್ಗೆಯಿಂದ ನಿಶ್ಚಿಂತೆಯಾಗಿ ಬದುಕಬಹುದು. ಮಕ್ಕಳಿಗೆ ಒಳ್ಳೆಯ ಗುಣಗಳನ್ನು ಕಲಿಸಬಹುದು” ಎಂದು ಹೇಳುತ್ತಾ ಬಿಕ್ಕಳಿಸಿದರು. ಅಕ್ಕಪಕ್ಕ ಕೂತಿದ್ದವರೆಲ್ಲ ವಾನ್‌ ಕಂಬನಿ ಕಂಡು ತಾವೂ ಭಾವುಕರಾದರು.

ಈ ಲೈವ್‌ನಲ್ಲಿ ಕಣ್ಣೀರು ತುಂಬಿಕೊಂಡ ವಾನ್‌ ಪರವಾಗಿ ಲಕ್ಷಾಂತರ ಮೇಸೇಜುಗಳು, ಸಾಂತ್ವನದ ಮಾತುಗಳು ಸಿಎನ್‌ಎನ್‌ ಸುದ್ದಿವಾಹಿನಿಗೆ ರುವುದು ಅತ್ಯಂತ ಮಹತ್ತ್ವದ ಸಂಗತಿ. ನಮ್ಮ ಕಣ್ಣೆದುರಿನಲ್ಲೇ ಜಾರ್ಜ್‌ ಫ್ಲಾಯ್ಡ್‌ರಂಥ ಅನೇಕ ಕಪ್ಪು ವರ್ಣೀಯರು ಉಸಿರಾಡಲಾಗದೇ ಜೀವ ಬಿಟ್ಟಿದ್ದಾರೆ. ಹಾಗೆ ಪ್ರಾಣ ಬಿಟ್ಟ ಎಲ್ಲರಿಗೂ ನನ್ನ ಕ್ಷಮಾಪಣೆಗಳು. ಈ ದಿನ ಅಮೆರಿಕ ಜನರೆಲ್ಲರಿಗೂ ಶುಭದಿನ. ಈಗ ನಮಗೆಲ್ಲರಿಗೂ ಕೊಂಚ ನೆಮ್ಮದಿ ಸಿಕ್ಕಂತಾಗಿದೆ” ಎಂದು ಹೇಳಿದ್ದಾರೆ.

ಇದೇ ವರ್ಷದ ಮೇ ತಿಂಗಳ ೨೫ರಂದು ೪೬ ವರ್ಷದ ಕಪುವರ್ಣೀಯ ವ್ಯಕ್ತಿ ಜಾರ್ಜ್‌ ಪ್ಲಾಯ್ಡ್‌ ಅದೇ ಅಮೆರಿಕದ ಮಿನ್ನಿಯಾ ಪೊಲೀಸ್‌ ಎಂಬಲ್ಲಿ ಅಲ್ಲಿನ ಪೊಲೀಸರು ಅತ್ಯಂತ ಪೈಶಾಚಿಕವಾಗಿ ಎಲ್ಲರೂ ನೋಡುತ್ತಿದ್ದಂತೆ ಹಾಡುಹಗಲೇ ರಸ್ತೆಯಲ್ಲಿ ಕುತ್ತಿಗೆಯ ಮೇಲೆ ಕಾಳಿಟ್ಟು ತುಳಿದು ಉಸಿರುಗಟ್ಟಿಸಿ ಕೊಂದ ಘಟನೆ ಆ ದೇಶದಲ್ಲಿ ನೆಲೆಸಿರುವ ಕಪ್ಪುವರ್ಣೀಯರೆಲ್ಲ ಬೆಚ್ಚಿಬೀಳುವಂತೆ ಮಾಡಿತ್ತು. ಡೋನಾಲ್ಡ್‌ ಟ್ರಂಪ್‌ ಆಡಳಿತ ಮಾತ್ರವಲ್ಲದೆ, ಅಬ್ರಾಹಾಂ ಲಿಂಕನ್‌ ನಂತರದ ಅಮೆರಿಕದ ಇತಿಹಾಸದಲ್ಲಿ ಈ ಘಟನೆ ಕಪ್ಪುಚುಕ್ಕೆ ಎಂದು ಇಡೀ ಜಗತ್ತು ಆ ದೇಶಕ್ಕೆ ಛೀಮಾರಿ ಹಾಕಿತ್ತು.

courtesy: Wikipedia
ಬೈಡನ್‌ ತಂದ ನೆಮ್ಮದಿ

ಇಡೀ ಚುನಾವಣೆ ಬೈಡನ್‌ ಮತ್ತು ಟ್ರಂಪ್‌ ನಡುವಿನ ಸೆಣಸು ಎಲ್ಲುವುದಕ್ಕಿಂತ ಕಪ್ಪು ವರ್ಣೀಯರ ಅಳಿವಿನ ಪ್ರಶ್ನೆ ಎಂದು ಭಾವಿಸಲಾಗಿತ್ತು. ಹೀಗಾಗಿ ಅಮೆರಿಕದ ಸಮಸ್ತ ವಲಸಿಗರೆಲ್ಲರೂ ಡೆಮಾಕ್ರಟಿಕ್‌ ಪಾರ್ಟಿಯ ವಿರುದ್ಧ ಬಲವಾಗಿ ನಿಂತರು. ಅಷ್ಟೇ ಅಲ್ಲದೆ, ಚುನಾವಣೆ ಹೊತ್ತಿನಲ್ಲೂ ಟ್ರಂಪ್‌ ಅವರು ಪ್ಲಾಯ್ಡ್‌ ಕೊಲೆಯ ಬಗ್ಗೆ ಒಂದು ವಿಷಾದವನ್ನೂ ವ್ಯಕ್ತಪಡಿಸಲಿಲ್ಲ. ಬದಲಿಗೆ, ರಿಪಬ್ಲಿಕನ್‌ ಪಕ್ಷದ ಕಾರ್ಯಕರ್ತರು, ನಾಯಕರು ಕೂಡ ಈ ಬಗ್ಗೆ ಸೊಲ್ಲೆತ್ತಲಿಲ್ಲ. ಆರದ ಗಾಯವಾಗಿ ಹಾಗೆಯೇ ಉಳಿದಿದ್ದ ಪ್ಲಾಯ್ಡ್‌ ಎಂಬ ಆಸ್ಲಿತೆಯಿಂದ ಟ್ರಂಪ್‌ ದೊಡ್ಡ ಬೆಲೆ ತೆತ್ತರೆಂದೇ ಹೇಳಬಹುದು.

Tags: america election 2020CNNjoe bidenvan jones
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಡಾರ್ಲಿಂಗ್ ಕೃಷ್ಣ ಜತೆ ಶುಗರ್ ಫ್ಯಾಕ್ಟರಿಯಲ್ಲಿ ಸೋನಲ್ ಮಾಂಥೆರೊ

ಡಾರ್ಲಿಂಗ್ ಕೃಷ್ಣ ಜತೆ ಶುಗರ್ ಫ್ಯಾಕ್ಟರಿಯಲ್ಲಿ ಸೋನಲ್ ಮಾಂಥೆರೊ

Leave a Reply Cancel reply

Your email address will not be published. Required fields are marked *

Recommended

ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪುಸೆಟ್ಟುಗಳಿಗೆ 24/7 ಉಚಿತ ವಿದ್ಯುತ್

ಜಾತಿಗಣತಿ ವರದಿ ಇಟ್ಟುಕೊಂಡು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿ; ಕಾಂಗ್ರೆಸ್ಸಿಗೆ ಹೆಚ್.ಡಿ.ಕುಮಾರಸ್ವಾಮಿ ಚಾಲೆಂಜ್

7 months ago
ಕೆಸಿಆರ್ ಪಾಲಿಗೆ ಬಿಗ್‌ ಟಾರ್ಗೆಟ್‌ ಆಗಿಬಿಟ್ಟ ಡಿಸಿಎಂ ಡಿ.ಕೆ.ಶಿವಕುಮಾರ್!!

ಕೆಸಿಆರ್ ಪಾಲಿಗೆ ಬಿಗ್‌ ಟಾರ್ಗೆಟ್‌ ಆಗಿಬಿಟ್ಟ ಡಿಸಿಎಂ ಡಿ.ಕೆ.ಶಿವಕುಮಾರ್!!

2 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ