• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಬಿಹಾರ ಫೈನಲ್‌ ರಿಸಲ್ಟ್: 43ಕ್ಕೇ ನಿಂತ ನಿತೀಶ್‌, ಬಿಜೆಪಿಗಿಂತ 1 ಸೀಟು ಹೆಚ್ಚು ಗೆದ್ದ ತೇಜಸ್ವಿ

cknewsnow desk by cknewsnow desk
November 10, 2020
in STATE
Reading Time: 2 mins read
0
ಬಿಹಾರ ಫೈನಲ್‌ ರಿಸಲ್ಟ್: 43ಕ್ಕೇ ನಿಂತ ನಿತೀಶ್‌, ಬಿಜೆಪಿಗಿಂತ 1 ಸೀಟು ಹೆಚ್ಚು ಗೆದ್ದ ತೇಜಸ್ವಿ
916
VIEWS
FacebookTwitterWhatsuplinkedinEmail

lead photo: @NitishKumar@NitishKumar

ಪಟನಾ: ಭಾರತದ ಮಟ್ಟಿಗೆ ಅಮೆರಿಕ ಚುನಾವಣೆಯಷ್ಟೇ ಮಹತ್ತ್ವ ಪಡೆದುಕೊಂಡಿದ್ದ ಬಿಹಾರದ ಫೈನಲ್‌ ಫಲಿತಾಂಶ ಬುಧವಾರ ಬೆಳಗಿನ ಜಾವ 3 ಆದರೂ ಹೊರಬೀಳಲಿಲ್ಲ. ಆದರೆ, ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಸರಕಾರ ರಚನೆಯತ್ತ ಹೆಜ್ಜೆ ಇಟ್ಟಿದೆ. ಇನ್ನು; ಆರ್‌ಜೆಡಿ-ಕಾಂಗ್ರೆಸ್‌ ನೇತೃತ್ವದ ಮಹಾ ಘಟಬಂಧನ್‌ ಕೂಡ ಉತ್ತಮ ಸಾಧನೆ ಮಾಡಿದ್ದು, ಪ್ರಬಲ ವಿರೋಧಿ ಕೂಟವಾಗಿ ಹೊರಹೊಮ್ಮಿದೆ.

ಆಲ್‌ಮೋಸ್ಟ್‌ ಮಹಾ ಘಟಬಂಧನ್‌ ಈ ಬಾರಿ ಸರಕಾರ ರಚಿಸುವುದು ಪಕ್ಕಾ ಎಂದು ಎಲ್ಲ ಸಮೀಕ್ಷೆಗಳು ಭವಿಷ್ಯ ಹೇಳಿದ್ದವು. ಆದರೆ, ಗೆಲುವಿನಲ್ಲಿ ಘಟಬಂಧನ್‌ ಮತ್ತು ಎನ್‌ಡಿಎ ನಡುವೆ ನೆಕ್‌ ಟು ನೆಕ್‌ ಫೈಟ್‌ ನಡೆದಿತ್ತು. ಪರಿಣಾಮವಾಗಿ ಘಟಬಂಧನ್‌ಗಿಂತ 9 ಕ್ಷೇತ್ರಗಳಲ್ಲಿ ಎನ್‌ಡಿಎ ಮುಂದಿತ್ತು. ಮುಂದಿನ ದಿನಗಳಲ್ಲಿ ಘಟಬಂಧನ್‌ ಸಿಕ್ಕ ಜಯ ರಾಷ್ಟ್ರ ಮತ್ತು ಪ್ರಾದೇಶಿಕ ರಾಜಕಾರಣದಲ್ಲಿ ಹೊಸ ಸಮೀಕರಣಕ್ಕೆ ನಾಂದಿಯಾಗಬಹುದು.

ಈ ಸುದ್ದಿ ಬರೆಯುವ ಹೊತ್ತಿಗೆ (ಬುಧವಾರ ಬೆಳಗಿನ ಜಾವ 3) ಚುನಾವಣಾ ಆಯೋಗದ ವೆಬ್‌ಸೈಟ್ ಗೋಡೆಯ ಮೇಲೆ ಪ್ರಕಟಿಸಿದ್ದ ಸಂಖ್ಯಾಲೆಕ್ಕದ ಪ್ರಕಾರ ತೇಜಸ್ವಿ ಯಾದವ್‌ ನೇತೃತ್ವದ ಆರ್‌ಜೆಡಿ 75 ಕ್ಷೇತ್ರಗಳಲ್ಲಿ ಗೆದ್ದತು. ಇನ್ನು ಬಿಜೆಪಿ ಲೀಡ್‌ನಲ್ಲಿದ್ದ ಎರಡು ಕ್ಷೇತ್ರ ಸೇರಿ 74 ಕ್ಷೇತ್ರಗಳಲ್ಲಿ ಗೆದ್ದು ಬೀಗಿತು. ಇನ್ನು ಕಾಂಗ್ರೆಸ್‌ ಪಕ್ಷವು ಲೀಡ್‌ನಲ್ಲಿದ್ದ ಒಂದು ಕ್ಷೇತ್ರ ಸೇರಿ 19 ಕಡೆ ಜಯಶಾಲಿಯಾಗಿದೆ. ಉಳಿದಂತೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಸಂಯುಕ್ತ ಜನತಾದಳ 43 ಕ್ಷೇತ್ರಗಳಲ್ಲಿ ಜಯಿಸಿತು.

ರಾಜ್ಯದಲ್ಲಿರುವ 7.3 ಕೋಟಿ ಮತದಾರರ ಪೈಕಿ 4.16 ಕೋಟಿ ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 243 ಸದಸ್ಯರಿರುವ ಅಸೆಂಬ್ಲಿಯಲ್ಲಿ ಸಿಂಪಲ್‌ ಮೆಜಾರಿಟಿಗೆ 122 ಕ್ಷೇತ್ರಗಳನ್ನು ಗೆದ್ದರೆ ಸಾಕು. ಆದರೆ ಎನ್‌ಡಿಎ ಸದ್ಯಕ್ಕೆ ಘಟಬಂಧನ್‌ಗಿಂತ ಕೊಂಚ ಮುಂದೆ ಇದೆ. ಅಂತಿಮ ಫಲಿತಾಂಶ ಹೊರಬರುವ ಹೊತ್ತಿಗೆ ಸಂಖ್ಯಾಬಲದಲ್ಲಿ ಯಾರಿಗೆ ಬೇಕಾದರೂ ಹೊಡೆತ ಬೀಳಬಹುದು. ಸುಮಾರು 3,755 ಅಭ್ಯರ್ಥಿಗಳು ಕಣಕ್ಕಿಳಿದು ತಮ್ಮ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ.

@TejashwiYadav@yadavtejashwi

ಜೆಡಿಯುಗೆ ಭಾರೀ ಹೊಡೆತ

ಎನ್‌ಡಿಎ ದೊಡ್ಡಣ್ಣನಂತೆ ಬಿಹಾರದಲ್ಲಿ ಚಕ್ರ ತಿರುಗಿಸಿದ್ದ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ದೊಡ್ಡ ನಷ್ಟವನ್ನೇ ಅನುಭವಿಸಿದೆ. ಅದು ಸ್ಪರ್ಧಿಸಿದ್ದ ಒಟ್ಟು 115 ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳಲ್ಲಿ ಮಾತ್ರ ದಡ ಸೇರಿದೆ. ಹಾಗೆ ನೋಡಿದರೆ 110 ಕಡೆ ಕಣದಲ್ಲಿದ್ದ ಬಿಜೆಪಿ 74 ಕ್ಷೇತ್ರಗಳಲ್ಲಿ ಗೆದ್ದು ಮಿತ್ರಪಕ್ಷ ಜೆಡಿಯುಗೇ ಶಾಕ್‌ ನೀಡಿದೆ. ಇನ್ನು 11 ಕಡೆ ಕಣದಲ್ಲಿದ್ದ ವಿಕಾಶೀಲ್ ಇನ್ಸಾನ್ ಪಾರ್ಟಿ 4 ಸ್ಥಾನಗಳನ್ನು ಜಯಿಸಿದೆ. ಹಾಗೆಯೇ 7 ಸೀಟುಗಳಲ್ಲಿ ಸ್ಪರ್ಧಿಸಿದ್ದ ಹಿಂದೂಸ್ತಾನಿ ಅವಾಮ್ ಮೋರ್ಚಾ ಅಚ್ಚರಿ ಎಂಬಂತೆ 4 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ. ಅಲ್ಲಿಗೆ ಎನ್‌ಡಿಎ ಮೈತ್ರಿಕೂಟ ಒಟ್ಟು 124 ಕ್ಷೇತ್ರಗಳಲ್ಲಿ ಗೆದ್ದು ಸರಳ ಬಹುಮತಕ್ಕಿಂತ 2 ಸೀಟು ಜಾಸ್ತಿ ಗೆದ್ದಿದೆ.

ಮೊದಲು ಬೀಗಿ ನಂತರ ಮುಗ್ಗರಿಸಿದ ಘಟಬಂಧನ್‌

ಕಾಂಗ್ರೆಸ್‌ ಮತ್ತು ಆರ್‌ಜೆಡಿ ನೇತೃತ್ವದ ಮಹಾ ಘಟಬಂಧನ್‌ ಕಡೆ ಬಂದರೆ; 144 ಕ್ಷೇತ್ರಗಳಲ್ಲಿ ಅಧಿಕಾರಕ್ಕೆ ಬಂದು ಸಿಎಂ ಕುರ್ಚಿ ಏರಲೇಬೇಕೆಂದು ಸೆಣಸಿದ ತೇಜಸ್ವಿ ಯಾದವ್‌ ಅವರ ಆರ್‌ಜೆಡಿ 75 ಕ್ಷೇತ್ರಗಳಲ್ಲಿ ಗೆದ್ದಿದೆ. ಇನ್ನು ಅಸ್ತಿತ್ವಕ್ಕಾಗಿ ಒದ್ದಾಡುತ್ತಿದ್ದ ಕಾಂಗ್ರೆಸ್‌ 70 ಕ್ಷೇತ್ರಗಳಲ್ಲಿ ಕಣಕ್ಕಿಳಿದು 19 ಕಡೆ ಗೆದ್ದು ಸ್ವಲ್ಪಮಟ್ಟಿಗೆ ಸಮಾಧಾನಕರ ಸ್ಥಿತಿಯಲ್ಲಿದೆ. ಇದಾದ ಮೇಲೆ ಸಿಪಿಐ‌ (ಎಂಎಲ್) 19 ಕಡೆ ನಿಂತು 12 ಕ್ಷೇತ್ರಗಳಲ್ಲಿ ಅದ್ಭುತ ಎನಿಸುವಷ್ಟು ಸಾಧನೆ ಮಾಡಿದೆ. ಆದರೆ, ತಲಾ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸಿಪಿಐ ಮತ್ತು ಸಿಪಿಐಎಂ ಪಕ್ಷಗಳು ಸಮಾನತೆ ಇರಲೋ ಎಂಬಂತ ತಲಾ 2 ಕ್ಷೇತ್ರಗಳಲ್ಲಿ ಗೆದ್ದಿವೆ.

ಇವೆರಡೂ ಮೈತ್ರಿಕೂಟಗಳನ್ನು ಬಿಟ್ಟು ಸಿಂಗಲ್ಲಾಗಿ ಸ್ಪರ್ಧಿಸಿದ್ದ ಆಲ್‌ ಇಂಡಿಯಾ ಮಜ್ಲೀಸ್‌ ಇ ಇತ್ತೆದುಲ್‌ ಮುಸ್ಲಿಮೀನ್‌ 5 ಕಡೆ, ಬಿಎಸ್‌ಪಿ 1 ಕ್ಷೇತ್ರದಲ್ಲಿ, ಒಂದು ಕಡೆ ಪಕ್ಷೇತರರೊಬ್ಬರು ಜಯಶಾಲಿಯಾಗಿದ್ದಾರೆ.

ಚಿರಾಗ್‌ ಪಾಸ್ವಾನ್‌ ವಿಫಲ

ಬಿಹಾರದಲ್ಲಿ ಚುನಾವಣೆ ಘೋಷಣೆಯಾದ ಮೇಲೆ ಎಲ್‌ಜೆಪಿ ಪಕ್ಷದ ನಾಯಕ ರಾಮ್‌ವಿಲಾಸ್‌ ಪಾಸ್ವಾನ್‌ ಅನಾರೋಗ್ಯದಿಂದ ನಿಧನರಾಗಿದ್ದರು, ಆದರೆ, ರಾಜ್ಯದಲ್ಲಿ ಅವರ ನಿಧನದ ಅನುಕಂಪದ ಅಲೆ ಏಳಲಿಲ್ಲ. ಎನ್‌ಡಿಎ ಮೈತ್ರಿಕೂಟದಲ್ಲೇ ಇದ್ದರೂ ಒಂದೆಡೆ ಬಿಜೆಪಿಯನ್ನು ಹೊಗಳುತ್ತ, ಇನ್ನೊಂದೆಡೆ ನಿತೀಶ್‌ ಕುಮಾರ್‌ ಅವರನ್ನು ತೆಗಳುತ್ತಾ ಸಾಗಿದ ಅವರನ್ನು ಮತದಾರರ ನಂಬಿಲ್ಲ. 137 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆ ಪಕ್ಷವು ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ. ಆದರೆ, ಅವರು ಜೆಡಿಯುಗೆ ಹಲವೆಡೆ ಆಘಾತವನ್ನೇ ನೀಡಿದ್ದಾರೆ.

ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಸುದ್ದಿಗಾರರ ಜತೆ ಮಾತನಾಡಿದ ಚುನಾವಣಾ ಆಯೋಗದ ಅಧಿಕಾರಿಗಳು; “ಇನ್ನೂ ಅಂತಿಮ ಟ್ಯಾಲಿ ನಡೆಯುತ್ತಿದೆ. ಬಹುಶಃ ಎರಡೂವರೆ ಗಂಟೆ ಹೊತ್ತಿಗೆ ಅಂತಿಮ ಫಲಿತಾಂಶ ಸಿದ್ಧವಾಗಬಹುದು. ಕ್ಷಣಕ್ಷಣ ಮಾಹಿತಿ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಾಗುತ್ತದೆ. ಇನ್ನು ಬುಧವಾರ ಬೆಳಗ್ಗೆ ನಮ್ಮ ಬ್ರೀಫಿಂಗ್‌ ಇರುತ್ತದೆ. ಗುಡ್‌ನೈಟ್”‌ ಎಂದ್ಹೇಳಿ ಹೊರಟರು.

ಈ ಸುದ್ದಿ ಬರೆಯುವ ಹೊತ್ತಿಗೆ ಪಕ್ಷಗಳ ಬಲಾಬಲ ಹೀಗಿತ್ತು

1.ಆಲ್‌ ಇಂಡಿಯಾ ಮಜ್ಲೀಸ್‌ ಇ ಇತ್ತೆದುಲ್‌ ಮುಸ್ಲಿಮೀನ್‌ / 05
2.ಬಹುಜನ ಸಮಾಜ ಪಕ್ಷ / 01
3.ಭಾರತೀಯ ಜನತಾ ಪಕ್ಷ / 74
4.ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) / 02
5.ಭಾರತೀಯ ಕಮ್ಯುನಿಸ್ಟ್‌ ಪಕ್ಷ/ಮಾರ್ಕ್ಸ್‌ವಾದಿ (ಸಿಪಿಎಂ) / 02
6.ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಎಂಎಲ್) / 12
7.ಹಿಂದೂಸ್ತಾನ್‌ ಆವಾಮ್ ಮೋರ್ಚಾ (ಸೆಕ್ಯೂಲರ್) ‌ / 04
8.ಪಕ್ಷೇತರ / 01
10.ಕಾಂಗ್ರೆಸ್‌ / 19
11.ಸಂಯುಕ್ತ ಜನತಾದಳ (ಜೆಡಿಯು) / 43
12.ಲೋಕ್‌ ಜನಶಕ್ತಿ ಪಕ್ಷ (ಎಲ್‌ಜೆಪಿ) / 01
13.ರಾಷ್ಟ್ರೀಯ ಜನತಾದಳ (ಆರ್‌ಜೆಡಿ) / 75
14.ವಿಕಾಶೀಲ್ ಇನ್ಸಾನ್ / 04

courtesy: election commission of india

Tags: bihar election 2020bjpjdurjd
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಸಿಕೆನ್ಯೂಸ್‌ ನೌ ಬದಲಾಗಿದೆ; ಓದಲು ಸುಲಭ, ಹಿತವಾದ ಸುದ್ದಿ-ವಿಶ್ಲೇಷಣೆ ಮತ್ತುಅಂಗೈನಲ್ಲೇ ಇದೆ ನಿಮ್ಮ ಸುದ್ದಿಜಗತ್ತು!!

ಸಿಕೆನ್ಯೂಸ್‌ ನೌ ಬದಲಾಗಿದೆ; ಓದಲು ಸುಲಭ, ಹಿತವಾದ ಸುದ್ದಿ-ವಿಶ್ಲೇಷಣೆ ಮತ್ತುಅಂಗೈನಲ್ಲೇ ಇದೆ ನಿಮ್ಮ ಸುದ್ದಿಜಗತ್ತು!!

Leave a Reply Cancel reply

Your email address will not be published. Required fields are marked *

Recommended

ಹೈಕಮಾಂಡ್ ಅಮ್ಮನಂತೆ ಎಂದಿದ್ದ ಡಿಕೆಶಿ ಆವತ್ತೊಂದು ದಿನ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು!

ಡಿಕೆಶಿ ಮೇಲೆ ಸಿಬಿಐ ದಾಳಿ; ಉಪ ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್‌ಗೆ ಬಿಗ್‌ಶಾಕ್‌

5 years ago
ತಿಮಿಂಗಿಲಗಳನ್ನು ಬಿಟ್ಟು ಸಣ್ಣ ಮೀನುಗಳಿಗೆ ಗಾಳ ಹಾಕಲು ಕುಮ್ಮಕ್ಕು ನೀಡುತ್ತಿರುವ ಪಟ್ಟಭದ್ರರು; ಪ್ರಭಾವಿಗಳಿಗೆ ರಕ್ಷಣೆ, ಗುಡಿಬಂಡೆ ಪೊಲೀಸರನ್ನು ಸಿಕ್ಕಿಸಲು ಷಡ್ಯಂತ್ರ?

ಕಲ್ಲು ಕ್ವಾರಿಯ ಹೊಂಡದಲ್ಲಿ ಬಟ್ಟೆ ಒಗೆಯಲು ಹೋಗಿ ಜೀವ ಕಳೆದುಕೊಂಡ ತಾಯಿ-ಮಗಳು; ಚಿಕ್ಕಬಳ್ಳಾಪುರ ಬಳಿ ದುರಂತ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ