• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ನಮ್ಮ ಚಾಚಾ‌ ನೆಹರು ಮಾಡಿದ ಮಿಸ್ಟೇಕುಗಳು; ಏಳು ದಶಕ ಕಳೆದರೂ ಮಾಯದ ಗಾಯಗಳು

cknewsnow desk by cknewsnow desk
November 14, 2020
in GUEST COLUMN, STATE
Reading Time: 2 mins read
0
ನಮ್ಮ ಚಾಚಾ‌ ನೆಹರು ಮಾಡಿದ ಮಿಸ್ಟೇಕುಗಳು; ಏಳು ದಶಕ ಕಳೆದರೂ ಮಾಯದ ಗಾಯಗಳು
1.1k
VIEWS
FacebookTwitterWhatsuplinkedinEmail

lead photo courtesy: Wikipedia

ನವೆಂಬರ್‌ 14 ಪಂಡಿತ್‌ ನೆಹರು ಅವರ ಜನ್ಮದಿನ. ಮಕ್ಕಳ ದಿನವೂ ಹೌದು. ಆದರೆ; ಅವರಿಗಿಂತ ಅವರು ರಾಷ್ಟ್ರದ ಹಿಸಾಸಕ್ತಿ ವಿಚಾರದಲ್ಲಿ ಎಸಗಿದ ತಪ್ಪುಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಅದೇ ನಿಟ್ಟಿನಲ್ಲಿ ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಇಲ್ಲಿ ಬೆಳಕು ಚೆಲ್ಲಿದ್ದಾರೆ.

****

ಸರ್ದಾರ್ ವಲ್ಲಭಭಾಯ್ ಪಟೇಲ್ ಎಲ್ಲ ದೃಷ್ಟಿಯಿಂದಲೂ ಈ ದೇಶದ ಪ್ರಥಮ ಪ್ರಧಾನಿಯಾಗಿ ಆಯ್ಕೆಯಾಗಲು ಸಮರ್ಥರಾಗಿದ್ದರು. ಆದರೆ ಮಹಾತ್ಮಗಾಂಜಿಯವರಿಗೆ ಜವಾಹರಲಾಲ್ ನೆಹರೂ ಅವರ ಬಗೆಗಿದ್ದ ಕುರುಡು ʼಧೃತರಾಷ್ಟ್ರ ವ್ಯಾಮೋಹʼದಿಂದಾಗಿ ನೆಹರು ದೇಶದ ಮೊಟ್ಟಮೊದಲ ಪ್ರಧಾನಿ ಗಾದಿಗೇರಲು ಸಾಧ್ಯವಾಯಿತು. ನೆಹರು ಅವರನ್ನು ಪ್ರಧಾನಿಯಾಗಿ ಮಾಡುವ ಮೂಲಕ ಗಾಂಧೀಜಿ ಅತಿದೊಡ್ಡ ಪ್ರಮಾದವೆಸಗಿದ್ದರು. ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾ ನಂತರದ ನಮ್ಮ ದೇಶದ ಇತಿಹಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ವೇದ್ಯವಾಗುವ ಸಂಗತಿ ಇದು.

ಹೋಗಲಿ ಬಿಡಿ. ನೆಹರೂ ಅದೃಷ್ಟವಂತರು. ಮೊದಲ ಪ್ರಧಾನಿಯಾಗುವ ಯೋಗ ಅವರ ಹಣೆಯಲ್ಲಿ ಬರೆದಿತ್ತು. ಆದರೆ ಒಂದು ದಶಕಕ್ಕೂ ಹೆಚ್ಚು ಕಾಲ ಪ್ರಧಾನಿಯಾಗಿದ್ದರೂ ನೆಹರು ಭಾರತದ ಭವಿಷ್ಯಕ್ಕೆ ಉಜ್ವಲ ಮುನ್ನುಡಿಯನ್ನು ಬರೆಯಲೇ ಇಲ್ಲ. ತಪ್ಪುಗಳ ಮೇಲೆ ತಪ್ಪುಗಳನ್ನೆಸಗುತ್ತಲೇ ಹೋದರು. ಸಹೋದ್ಯೋಗಿಗಳ, ಹಿತಚಿಂತಕರ ಮಾತಿಗೆ ಕಿವಿಗೊಡಲೇ ಇಲ್ಲ. ನೆಹರೂ ಹಿಂಬಾಲಕರು ಅವರನ್ನು ‘ಆಧುನಿಕ ಭಾರತದ ಶಿಲ್ಪಿ’ ಎಂದು ಆಗಾಗ ಬಣ್ಣಿಸುವುದುಂಟು. ಒಂದರ್ಥದಲ್ಲಿ ಅದು ನಿಜ! ಸ್ವಾತಂತ್ರ್ಯಾ ನಂತರದ ಭಾರತದ ಹತ್ತು ಹಲವು ಘನಗಂಭೀರ ಸಮಸ್ಯೆಗಳಿಗೆ ನೆಹರು ಅವರ ತಪ್ಪು ನಿರ್ಧಾರಗಳೇ ಕಾರಣ. ಆ ಮಟ್ಟಿಗೆ ಅವರು ಆಧುನಿಕ ಭಾರತದ ಶಿಲ್ಪಿಯೇ ಸರಿ!

ಗೃಹ ಮಂತ್ರಿ ಸರ್ದಾರ್ ಪಟೇಲರನ್ನು ಅವರಷ್ಟಕ್ಕೇ ಬಿಟ್ಟಿರುತ್ತಿದ್ದರೆ, ನೆಹರೂ ಮೂಗು ತೂರಿಸದಿದ್ದರೆ ಕಾಶ್ಮೀರ ಸಮಸ್ಯೆ ಪೆಡಂಭೂತವಾಗಿ ಕಾಡುತ್ತಿರಲೇ ಇಲ್ಲ. ಹೈದ್ರಾಬಾದ್, ಜುನಾಗಡದಂತಹ ಸ್ವತಂತ್ರ ಸಂಸ್ಥಾನಗಳನ್ನು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನಗೊಳಿಸಿದ ಪಟೇಲರಿಗೆ ಕಾಶ್ಮೀರವನ್ನೂ ಅದೇ ರೀತಿ ವಿಲೀನಗೊಳಿಸುವುದು ಕಷ್ಟದ ಸಂಗತಿ ಆಗಿರಲಿಲ್ಲ. ಆಗ ಕಾಶ್ಮೀರದ ರಾಜನಾಗಿದ್ದವನು ರಾಜಾ ಹರಿಸಿಂಗ್. ಆದರೆ ಸಂಸ್ಥಾನದ ಶೇ.77 ಮಂದಿ ಪ್ರಜೆಗಳು ಮುಸ್ಲಿಮರಾಗಿದ್ದರು. ಇದೇ ಕಾರಣಕ್ಕೆ ನೆರೆಯ ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿ ಎಸಗಿತು. ರಾಜಾ ಹರಿಸಿಂಗ್ ರಕ್ಷಣೆಗಾಗಿ ಪಟೇಲರ ಬಳಿ ಧಾವಿಸಿ ಬಂದರು. ಕೊಡಗಿನ ಕಲಿ ಜನರಲ್‌ ತಿಮ್ಮಯ್ಯ ಕಾಶ್ಮೀರದ ರಕ್ಷಣೆಯ ಸಂಪೂರ್ಣ ಹೊಣೆ ಹೊತ್ತಿದ್ದರು. ಪಾಕಿಸ್ಥಾನ ವಶಪಡಿಸಿಕೊಂಡ ಐದನೇ ಎರಡು ಭಾಗ ಕಾಶ್ಮೀರವನ್ನು (ಪಿಓಕೆ) ಮರಳಿ ಪಡೆಯಲು ಸೈನ್ಯದೊಂದಿಗೆ ಸಜ್ಜಾಗಿದ್ದರು. ಆದರೆ ಅವರ ಈ ಸಾಹಸಕ್ಕೆ ಅಡ್ಡ ಬಂದವರು ಸನ್ಮಾನ್ಯ ನೆಹರು! ಇದ್ದಕ್ಕಿದ್ದಂತೆ ನೆಹರು ಕದನ ವಿರಾಮ ಘೋಷಿಸಿಬಿಟ್ಟರು. ಅಸಲಿಗೆ ಅಂತಹ ಪರಿಸ್ಥಿತಿಯೇ ಆಗ ಉದ್ಭವಿಸಿರಲಿಲ್ಲ. ಅಷ್ಟೇ ಅಲ್ಲ, ನೆಹರು ಕಾಶ್ಮೀರ ಸಮಸ್ಯೆಯನ್ನು ವಿನಾಕಾರಣ ವಿಶ್ವಸಂಸ್ಥೆಗೊಯ್ದು ಅದನ್ನೊಂದು ಅಂತಾರಾಷ್ಟ್ರೀಯ ಸಮಸ್ಯೆಯಾಗಿಸಿದರು. ಜಮ್ಮು-ಕಾಶ್ಮೀರಕ್ಕೆ ೩೭೦ನೇ ವಿಧಿ ಕರುಣಿಸಿ, ವಿಶೇಷ ಸ್ಥಾನಮಾನ ಕಲ್ಪಿಸಿ, ಒಂದೇ ದೇಶದಲ್ಲಿ ಇಬ್ಬರು ಪ್ರಧಾನಿ, ಎರಡು ಸಂವಿಧಾನ, ಎರಡು ರಾಷ್ಟ್ರಧ್ವಜಗಳಿರುವಂತೆ ನೋಡಿಕೊಂಡರು. ನೆಹರು ಎಸಗಿದ ಈ ಪ್ರಮಾದವನ್ನು ಸರಿಪಡಿಸಲು ೭೩ ವರ್ಷ ಬೇಕಾಯಿತು.

ಕಲಾತ್ ವಿಲೀನಕ್ಕೆ ತಿರಸ್ಕಾರ

1947ರ ಬಲೂಚಿಸ್ಥಾನದ ಒಂದು ರಾಜ ಸಂಸ್ಥಾನವಾಗಿದ್ದ ಕಲಾತ್ ಅನ್ನು ಭಾರತದಲ್ಲಿ ವಿಲೀನಗೊಳಿಸಲು ಆ ಸಂಸ್ಥಾನದ ಮುಖ್ಯಸ್ಥನಾಗಿದ್ದ ಖಾನ್ ಎಲ್ಲ ಬಗೆಯ ಸಿದ್ಧತೆಯೊಂದಿಗೆ ನೆಹರೂ ಬಳಿಗೆ ಬಂದಿದ್ದರು. ಸಮ್ಮತಿ ಪತ್ರಕ್ಕೆ ನೆಹರೂ ಸಹಿ ಹಾಕಿದ್ದರೆ ಸಾಕಿತ್ತು. ಆದರೆ ಯಾವುದೋ ಕಾರಣಕ್ಕೆ ಕಲಾತ್ ವಿಲೀನ ಪತ್ರಕ್ಕೆ ಸಹಿ ಹಾಕಲಿಲ್ಲ. ಇದನ್ನೇ ಕಾಯುತ್ತಿದ್ದ ಪಾಕಿಸ್ತಾನ ಬಲೂಚಿಸ್ತಾನದ ಮೇಲೆ ದಾಳಿ ಮಾಡಿ ಅದನ್ನು ತನ್ನ ವಶಪಡಿಸಿಕೊಂಡಿತು. ನೆಹರು ಆಗ ಮನಸ್ಸು ಮಾಡಿದ್ದರೆ ಬಲೂಚಿಸ್ತಾನ ಭಾರತದ ಭಾಗವಾಗಿ ಉಳಿಯುತ್ತಿತ್ತು.

ಹೈದ್ರಾಬಾದ್ ವಿಲೀನಕ್ಕೂ ವಿರೋಧ

ನಿಜಾಮನ ಆಳ್ವಿಕೆಯಲ್ಲಿದ್ದ ಹೈದ್ರಾಬಾದ್ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸಲು ಪಟೇಲರು ಹೊರಟಾಗ ಎರಡು ಲಕ್ಷ ರಜಾಕಾರ್ ಸೈನಿಕರು ಆ ಸಂಸ್ಥಾನದ ಹಿಂದು ಪ್ರಜೆಗಳ ಮೇಲೆರಗಿದರು. ಈ ಅನಾಹುತವನ್ನು ತಪ್ಪಿಸಲು ಗೃಹಮಂತ್ರಿ ಪಟೇಲರು ನಿಜಾಮನ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಕೈಗೊಂಡರು. ನೆಹರೂಗೆ ಸರ್ದಾರರ ಈ ನಿರ್ಧಾರ ಸುತರಾಂ ಇಷ್ಟವಿರಲಿಲ್ಲ. ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ನೀವೇಕೆ ಕೋಮುವಾದಿ ಎಂಬ ಹಣೆಪಟ್ಟಿ ಅಂಟಿಸಿಕೊಳ್ಳಲು ಹೊರಟಿದ್ದೀರಿ? ಎಂದು ಪಟೇಲರನ್ನು ಹಂಗಿಸಿದರು. ಪಟೇಲರು ಮಾತ್ರ ಇದಕ್ಕೆ ಕ್ಯಾರೇ ಅನ್ನಲಿಲ್ಲ. ಹೀಗಾಗಿ ಹೈದ್ರಾಬಾದ್ ಭಾರತದಲ್ಲೇ ಉಳಿಯಿತು. ಇಲ್ಲದಿದ್ದರೆ ಅದೂ ಕೂಡ ಪಾಕಿಸ್ತಾನದ ಭಾಗವಾಗಿರುತ್ತಿತ್ತು.

ಕಾಬೋ ಕಣಿವೆ ಬರ್ಮಾಕ್ಕೆ ಬಹುಮಾನ

ಫಲವತ್ತಾದ, ಸಮೃದ್ಧ, ಹಸಿರು ನಳನಳಿಸುವ 11 ಸಾವಿರ ಚದರ ಕಿ.ಮೀ. ವಿಸ್ತೀರ್ಣದ ಮಣಿಪುರ ರಾಜಧಾನಿಯ ಭಾಗವಾಗಿದ್ದ ಕಾಬೋ ಕಣಿವೆ ಇತಿಹಾಸದ ದಾಖಲೆಗಳ ಪ್ರಕಾರ 1950ರಿಂದಲೂ ಭಾರತದ ಭಾಗವಾಗಿಯೇ ಇತ್ತು. ಮಣಿಪುರವನ್ನು ಬ್ರಿಟಿಷರು ವಶಪಡಿಸಿಕೊಂಡ ಬಳಿಕ ಕಾಬೋ ಕಣಿವೆಯನ್ನು1934ರಲ್ಲಿ ಬರ್ಮಾಕ್ಕೆ ಭೋಗ್ಯಕ್ಕೆ ನೀಡಿದರು. ಬರ್ಮಾ ಪ್ರತಿ ತಿಂಗಳು ಇದಕ್ಕೆ ಪ್ರತಿಯಾಗಿ ತಲಾ 500ರೂ.ಗಳನ್ನು ಮಣಿಪುರಕ್ಕೆ ಕೊಡಬೇಕಾಗಿತ್ತು. ಸ್ವಾತಂತ್ರ್ಯ ಬಂದ ಬಳಿಕ ಭೋಗ್ಯಕ್ಕೆ ನೀಡಿದ ಸಂಪದ್ಭರಿತ ಕಾಬೋ ಕಣಿವೆಯನ್ನು ಬರ್ಮಾದಿಂದ ಮತ್ತೆ ಮರಳಿ ಪಡೆಯುವ ಎಲ್ಲಾ ಅವಕಾಶಗಳಿತ್ತು. ಸೂಕ್ತ ಪರಿಹಾರ ನೀಡಿದ್ದರೆ ಬರ್ಮಾ ಅದನ್ನು ಭಾರತಕ್ಕೆ ಬಿಟ್ಟುಕೊಡುತ್ತಿತ್ತು. ಆದರೆ ನೆಹರೂಗೆ ತಾನೊಬ್ಬ ದಾನಶೂರ ಕರ್ಣನೆಂದು ತೋರಿಸಿಕೊಳ್ಳಬೇಕಾಗಿತ್ತು. ಅಂತಹ ಫಲವತ್ತಾದ ಕೃಣಿವೆಯನ್ನೇ ಬರ್ಮಾಕ್ಕೆ ಬಹುಮಾನವಾಗಿ ಬಳುವಳಿ ನೀಡಿಬಿಟ್ಟರು.

ಕೋಕೋ ದ್ವೀಪಗಳೂ ಬರ್ಮಾಕ್ಕೆ ದಾನ!

ಅಂಡಮಾನ್‌ನ ಭಾಗವಾಗಿದ್ದ ಎರಡು ಕೊಕೋ ದ್ವೀಪಗಳನ್ನೂ ಸ್ವಾತಂತ್ರ್ಯ ಬಂದ ಕೂಡಲೇ ನೆಹರೂ ಬರ್ಮಾಕ್ಕೆ ಬಹುಮಾನವಾಗಿ ನೀಡಿಬಿಟ್ಟರು. ಬರ್ಮಾ ಅವುಗಳನ್ನು ಚೀನಾ ದೇಶಕ್ಕೆ ಕೊಡುಗೆಯಾಗಿ ನೀಡಿತು. ಚೀನಾ ಮಾತ್ರ ಭಾರತದ ಮಿಲಿಟರಿ ಆಗುಹೋಗುಗಳ ಮೇಲೆ ಕಣ್ಣಿಡಲು ಆ ದ್ವೀಪದಲ್ಲೊಂದು ಎಲೆಕ್ಟ್ರಾನಿಕ್ ಸರ್ವೆಯಲೆನ್ಸ್ ಸ್ಟೇಷನ್ ಸ್ಥಾಪಿಸಿದೆ.

ಸೋಮನಾಥ ಮರು ನಿರ್ಮಾಣಕ್ಕೆ ವಿರೋಧ

ಸೌರಾಷ್ಟ್ರದಲ್ಲಿರುವ ಸೋಮನಾಥ ನಮ್ಮ ಜ್ಯೋತಿರ್ಲಿಂಗಗಳಲ್ಲಿ ಒಂದು. ಪದೇಪದೇ ಮುಸಲ್ಮಾನರ ದಾಳಿಯಿಂದಾಗಿ ಭವ್ಯ ಸೋಮನಾಥ ಮಂದಿರ ಭಗ್ನವಾಗಿ ಹೋಗಿತ್ತು. ಗೃಹಮಂತ್ರಿ ಪಟೇಲರು ಸೋಮನಾಥ ಮಂದಿರದ ಮರು ನಿರ್ಮಾಣಕ್ಕೆ ನಿರ್ಧರಿಸಿದಾಗ ಮೊದಲು ವಿರೋಧಿಸಿದ್ದು ಮುಸಲ್ಮಾನ ಮುಖಂಡರಲ್ಲ, ಪ್ರಧಾನಿ ನೆಹರು! ಹಿಂದುಗಳ ಬಗ್ಗೆ ಹಿಂದು ಧರ್ಮದ ಬಗ್ಗೆ ನೆಹರೂಗಿದ್ದ ತಾತ್ಸಾರ ಮನೋಭಾವ ತಿಳಿದಿದ್ದ ಪಟೇಲರು ಮಾತ್ರ ಹಿಂದೆಗೆಯಲಿಲ್ಲ. ಮಂದಿರ ನಿರ್ಮಾಣ ಮಾಡಿ ಉದ್ಘಾಟನೆಗೆ ಆಗ ರಾಷ್ಟ್ರಪತಿಯಾಗಿದ್ದ ಡಾ. ಬಾಬುರಾಜೇಂದ್ರ ಪ್ರಸಾದರನ್ನು ಆಮಂತ್ರಿಸಿದರು. ಭಾರತದ ಜಾತ್ಯತೀತ ನೀತಿಯನ್ನು ಎತ್ತಿ ಹಿಡಿಯಲು ಈ ಕಾರ್ಯಕ್ರಮಕ್ಕೆ ನೀವು ಹೋಗದಿರುವುದು ಲೇಸು ಎಂದು ನೆಹರೂ ರಾಜೇಂದ್ರ ಪ್ರಸಾದರ ಕಿವಿಗೆ ಹುಳ ಬಿಟ್ಟರು. ಅವರು ಮಾತ್ರ ಅದನ್ನು ಕೇಳಿಸಿಕೊಳ್ಳಲೇ ಇಲ್ಲ. ಭವ್ಯ ಸೋಮನಾಥ ಮಂದಿರವನ್ನು ತಮ್ಮ ಕೈಯ್ಯಾರೆ ಉದ್ಘಾಟಿಸಿದರು. ಹಿಂದು ಶ್ರದ್ಧಾಕೇಂದ್ರಕ್ಕೆ ಗೌರವ ಸಲ್ಲಿಸಿದರು.

ಭದ್ರತಾ ಮಂಡಳಿ ಕಾಯಂ ಸ್ಥಾನ ತಿರಸ್ಕರಿಸಿದರು

1950ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಭಾರತವನ್ನು ಕಾಯಂ ಸದಸ್ಯನನ್ನಾಗಿ ಮಾಡಿಕೊಳ್ಳಲು ಅಮೆರಿಕ ಆಹ್ವಾನ ನೀಡಿತ್ತು. ನೆಹರೂ ಮಾತ್ರ ಅದನ್ನು ತಿರಸ್ಕರಿಸಿದರು. ಚೀನಾಕ್ಕೆ ಕಾಯಂ ಸ್ಥಾನ ನೀಡದಿದ್ದರೆ ಭಾರತಕ್ಕೂ ಬೇಡ ಎಂದುಬಿಟ್ಟರು. 1955ರಲ್ಲಿ ಅಮೆರಿಕ ಮತ್ತೊಮ್ಮೆ ರಷ್ಯಾದೊಂದಿಗೆ ಸೇರಿ, ಭಾರತಕ್ಕೆ ಕಾಯಂ ಸ್ಥಾನ ನೀಡಲು ಮುಂದಾಗಿತ್ತು. ಮೊದಲು ಚೀನಾಕ್ಕೆ ಕೊಡಿ ಎಂದರು ನೆಹರು. ಹೀಗೆ ನೆಹರು ಅವರ ಕೃಪೆಯಿಂದ ಚೀನಾಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಕ್ಕಿಬಿಟ್ಟಿತು. ಭಾರತಕ್ಕೆ ಎಷ್ಟು ಸಾಧ್ಯವೋ ಅಷ್ಟು ತೊಂದರೆ ಕೊಡಲು ಈ ಅಕಾರವನ್ನು ಚೀನಾ ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ!

ಗ್ವಾದರ್ ಬಂದರು ಬೇಡವೆಂದರು

1958ರಲ್ಲಿ ಒಮನ್ ದೇಶದ ಸುಲ್ತಾನರು ಆಯಕಟ್ಟಿನ ಗ್ವಾದರ್ ಬಂದರು ಪ್ರದೇಶವನ್ನು ಭಾರತಕ್ಕೆ ನೀಡಲು ಸಿದ್ಧವಾಗಿದ್ದರು. ಆದರೆ ನೆಹರೂ ಅವರೇ ಬೇಡವೆಂದರು. ಕೂಡಲೇ ಪಾಕಿಸ್ಥಾನ ಅದನ್ನು ಖರೀದಿಸಿತು. ಇದೀಗ ಗ್ವಾದರ್ ಬಂದರು ಚೀನಾದ ಎಲ್ಲ ರಸ್ತೆ ನಿರ್ಮಾಣ ಯೋಜನೆಗಳಿಗೆ ಹೆಬ್ಬಾಗಿಲಿನಂತಾಗಿದೆ.

ನೇಪಾಳ ವಿಲೀನಕ್ಕೂ ನೆಹರೂ ಅಡ್ಡಿ

ಹಿಂದು ದೇಶವಾಗಿದ್ದ, ಹಿಂದು ಸಂಸ್ಕೃತಿ, ಪರಂಪರೆಗಳನ್ನೇ ಹೊದ್ದಿರುವ ನೇಪಾಳವನ್ನು ಭಾರತದಲ್ಲಿ ವಿಲೀನಗೊಳಿಸಲು ಅಲ್ಲಿನ ರಾಜ ತ್ರಿಭುವನ ಅವರು 1950ರಲ್ಲಿ ಬಯಸಿದ್ದರು. ಭಾರತದಲ್ಲಿ ವಿಲೀನಗೊಂಡರೆ ನೇಪಾಳದ ಸರ್ವಾಂಗೀಣ ವಿಕಾಸ ಸಾಧ್ಯವೆಂದು ತ್ರಿಭುವನ್ ನಂಬಿದ್ದರು. ಆದರೆ ಅದೇಕೋ ನೇಪಾಳ ಭಾರತದಲ್ಲಿ ವಿಲೀನಗೊಳ್ಳುವುದು ನೆಹರೂಗೆ ಬೇಕಿರಲಿಲ್ಲ. ಬಹುಶಃ ಅದು ಹಿಂದು ರಾಜ್ಯವಾಗಿದ್ದೇ ಕಾರಣ ಇರಬಹುದು! ನೇಪಾಳವೇನಾದರೂ ಭಾರತದಲ್ಲಿ ವಿಲೀನವಾಗಿದ್ದಿದ್ದರೆ ಭಾರತ ಬಲಿಷ್ಠವಾಗುತ್ತಿತ್ತು. ಚೀನಾದ ಯಾವ ದುಸ್ಸಾಹಸಕ್ಕೂ ಆಸ್ಪದವಿರುತ್ತಿರಲಿಲ್ಲ. ಇಂದು ಮಾವೋವಾದಿಗಳ ಹಿಡಿತದಲ್ಲಿ ನೇಪಾಳ ತೊಳಲಾಡಬೇಕಾದ ಅನಿವಾರ್ಯತೆಯೂ ಬರುತ್ತಿರಲಿಲ್ಲ.

ಭಾರತ ಪರಮಾಣು ಶಕ್ತಿ ರಾಷ್ಟ್ರವಾಗದಂತೆ ತಡೆ

ಚೀನಾ ದೇಶಕ್ಕೂ ಮೊದಲು ಭಾರತ ಏಷ್ಯಾದಲ್ಲೇ ಮೊದಲ ಪರಮಾಣು ಶಕ್ತಿ ರಾಷ್ಟ್ರವಾಗಬಹುದಿತ್ತು. ಅಮೆರಿಕ ಅಧ್ಯಕ್ಷರಾಗಿದ್ದ ಜಾನ್ ಎಫ್. ಕೆನಡಿ ಅವರು ರಾಜಸ್ಥಾನದ ಮರಳುಗಾಡಿನಲ್ಲಿ  ಪರಮಾಣು ಬಾಂಬ್ ಪರೀಕ್ಷೆಗೆ ನೆರವಾಗುವುದಾಗಿ ಭರವಸೆಯನ್ನೂ ನೀಡಿದ್ದರು. ‘ದೇಶದ ಭದ್ರತೆಗಿಂತ ಮುಖ್ಯವಾದದ್ದು ಬೇರೆ ಯಾವುದೂ ಅಲ್ಲ’ ಎಂಬ ವಾಕ್ಯವಿರುವ ಪತ್ರವನ್ನೂ ಕೆನಡಿ ನೆಹರೂಗೆ ಬರೆದಿದ್ದರು. ಆದರೆ ನೆಹರು ಅವರು ಕೆನಡಿ ನೀಡಿದ ಈ ಕೊಡುಗೆಯನ್ನು ತಿರಸ್ಕರಿಸಿದರು. ಕೆನಡಿಯವರ ನೆರವನ್ನು ಪಡೆದಿದ್ದರೆ ಭಾರತ ಏಷ್ಯಾದಲ್ಲೇ ಮೊದಲ ನ್ಯೂಕ್ಲಿಯರ್ ಪವರ್ ದೇಶವಾಗಿರುತ್ತಿತ್ತು.

ಚೀನಾದ ಮೇಲೆ ಕುರುಡು ವ್ಯಾಮೋಹ

ನೆಹರು ಅವರಿಗೆ ನೆರೆಯ ಚೀನಾ ದೇಶವೆಂದರೆ ಅದೇಕೋ ವ್ಯಾಮೋಹ. ಅವರೆಲ್ಲ ನಮ್ಮ ಸಹೋದರರಿದ್ದಂತೆ ಎಂಬ ಭ್ರಮೆ. ಅದಕ್ಕೇ ಹಿಂದಿ-ಚೀನೀ ಭಾಯಿ ಭಾಯಿ ಎಂದು ಘೋಷಿಸಿದರು. ಚೀನಾದ ಷಡ್ಯಂತ್ರ ನೆಹರೂಗೆ ಕೊನೆವರೆಗೂ ತಿಳಿಯಲೇ ಇಲ್ಲ. ಭಾರತದ ಸಾವಿರಾರು ಚದರ ಕಿ.ಮೀ. ಭೂಭಾಗವನ್ನು 1962ರ ಯುದ್ಧದಲ್ಲಿ ಚೀನಾದ ವಶವಾದಾಗಲೇ ನೆಹರೂಗೆ ಜ್ಞಾನೋದಯವಾಗಿದ್ದು! ಭಾರತ ಆ ಯುದ್ಧದಲ್ಲಿ ಹೀನಾಯವಾಗಿ ಸೋತು ಹೋಗಲು ನೆಹರು ಅವರ ತಪ್ಪು ನೀತಿಗಳೇ ಕಾರಣ.

ದೇಶದ ಪ್ರಥಮ ಪ್ರಧಾನಿಯಾಗಿ ನೆಹರು ಮಾಡಿದ ತಪ್ಪುಗಳು ಒಂದೆರಡಲ್ಲ. ಬಾಬು ರಾಜೇಂದ್ರ ಪ್ರಸಾದರ ‘ಇಂಡಿಯಾ ಡಿವೈಡೆಡ್’, ಲೋಹಿಯಾ ಅವರ ‘ಗಿಲ್ಟಿ ಮೆನ್ ಆಫ್ ಪಾರ್ಟಿಶನ್’ , ಹೊ.ವೆ. ಶೇಷಾದ್ರಿಯವರ ‘ಆ ಕಾಳರಾತ್ರಿ ಪ್ರಶ್ನೆ’ , ದಳವಿಯವರ ‘ಹಿಮಾಲಯನ್ ಬ್ಲಂಡರ್’ , ಎಂ.ಓ. ಮಥಾಯ್ ಬರೆದ ‘ರೆಮೆನಿಸೆನ್ಸಸ್ ಆಫ್ ದಿ ನೆಹರು ಏಜ್’, ಎಂ.ಕೆ.ಸಿಂಗ್ ಅವರ ‘ಎನ್‌ಸೈಕ್ಲೋಪೀಡಿಯಾ ಆಫ್ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್’ ಕೃತಿಯ 13ನೇ ಸಂಪುಟ ಕೃತಿಗಳನ್ನು ಓದಿದಾಗ ನೆಹರು ವ್ಯಕ್ತಿತ್ವ ಎಂತಹುದಾಗಿತ್ತು ಎಂದು ಅರಿವಾಗದೇ ಇರದು. ಈಚೆಗೆ ಪ್ರಕಟವಾದ ಬಂದೋಪಾಧ್ಯಾಯರ ‘ದಿ ಮೇಕಿಂಗ್ ಆಫ್ ಇಂಡಿಯಾಸ್ ಫಾರಿನ್ ಪಾಲಿಸಿ’ ಪುಸ್ತಕದಲ್ಲೂ ನೆಹರು ಅವರ ದ್ವಂದ್ವ ನಿಲುವುಗಳು, ದೇಶವಿರೋಧಿ ನೀತಿಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.

ನೆಹರು ಒಬ್ಬ ಪ್ರತಿಭಾವಂತ. ವಿದೇಶದಲ್ಲಿ ವ್ಯಾಸಂಗ ಮಾಡಿದ ವ್ಯಕ್ತಿ. ಪ್ರಖರ ವಾಗ್ಮಿ. ಸುಂದರ ಸದೃಢ ಶರೀರ. ಮೋಡಿ ಮಾಡಬಲ್ಲ ವ್ಯಕ್ತಿತ್ವ. ರಸಿಕ. ಇವೆಲ್ಲವೂ ನಿಜ. ಆದರೆ ಸ್ವತಂತ್ರ ಭಾರತಕ್ಕೊಂದು ಸ್ಪಷ್ಟ ದಿಕ್ಕು ದೆಸೆ ಕೊಡುವಲ್ಲಿ ಅವರು ವಿಫಲರಾದರು. ದೇಶದ ಮಿತ್ರರಾರು, ಶತ್ರುಗಳಾರು ಎಂಬುದನ್ನು ಗುರುತಿಸುವಲ್ಲಿ ಸೋತರು. ನೇತಾಜಿ, ಸಾವರ್ಕರ್‌ರಂತಹ ಪ್ರಖರ ದೇಶಭಕ್ತರನ್ನು ಅವಮಾನಿಸಿದರು. ಶೇಖ್ ಅಬ್ದುಲ್ಲಾ, ಕೃಷ್ಣ ಮೆನನ್‌ರಂತಹ ಸಮಾಜಘಾತುಕರಿಗೆ ಮಣೆಹಾಕಿದರು. ಇಂಥವರನ್ನು ನಮ್ಮ ಮಕ್ಕಳು ಚಾಚಾ ನೆಹರೂ ಎಂದು ಯಾವ ಪುರುಷಾರ್ಥಕ್ಕೆ ಕರೆಯಬೇಕು? ನೀವೇ ಹೇಳಿ.

***

ದು.ಗು. ಲಕ್ಷ್ಮಣ

ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.

Tags: childrens day in indiaindiajawaharlal nehru
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ದೀಪಾವಳಿಯ ಬೆಡಗು, ಜತೆಗೊಂದು ರಾಕೆಟ್ ಮತ್ತು ನಮ್ಮೂರಿನ ಪ್ಯಾಂಟ್‌ ಅಶ್ವತ್ಥಮ್ಮ

ದೀಪಾವಳಿಯ ಬೆಡಗು, ಜತೆಗೊಂದು ರಾಕೆಟ್ ಮತ್ತು ನಮ್ಮೂರಿನ ಪ್ಯಾಂಟ್‌ ಅಶ್ವತ್ಥಮ್ಮ

Leave a Reply Cancel reply

Your email address will not be published. Required fields are marked *

Recommended

ಮಾಗಡಿ ತಾಲ್ಲೂಕಿನಲ್ಲಿ ಇದೆಯಾ ಹಕ್ಕ-ಬುಕ್ಕರ ಸಮಾಧಿ? ಅವರ ವಂಶಸ್ಥರು ಇನ್ನೂ ಇದ್ದಾರಾ?

ಮಾಗಡಿ ತಾಲ್ಲೂಕಿನಲ್ಲಿ ಇದೆಯಾ ಹಕ್ಕ-ಬುಕ್ಕರ ಸಮಾಧಿ? ಅವರ ವಂಶಸ್ಥರು ಇನ್ನೂ ಇದ್ದಾರಾ?

4 years ago
ಬರ: ತಿಂಗಳಾದರೂ ರಾಜ್ಯದ ಸರ್ವಪಕ್ಷ ನಿಯೋಗಕ್ಕೆ ಸಮಯ ಕೊಡದ ಪ್ರಧಾನಿ

ಬರ: ತಿಂಗಳಾದರೂ ರಾಜ್ಯದ ಸರ್ವಪಕ್ಷ ನಿಯೋಗಕ್ಕೆ ಸಮಯ ಕೊಡದ ಪ್ರಧಾನಿ

2 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ