• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಇಂಡಸ್ಟ್ರಿಯಲ್ ಮತ್ತು ಪೊಲಿಟಿಕಲ್ ಹೌಸ್‌ಗಳ ಮಿಲನದಿಂದ ಜರಾಸಂಧನ ಜನನ! ಭಾರತ ದುಡ್ಡಿಗೆ ಸೋತಿದ್ದು ಹೇಗೆ ಗೊತ್ತಾ?

cknewsnow desk by cknewsnow desk
December 1, 2020
in GUEST COLUMN, STATE
Reading Time: 3 mins read
0
ಇಂಡಸ್ಟ್ರಿಯಲ್ ಮತ್ತು ಪೊಲಿಟಿಕಲ್ ಹೌಸ್‌ಗಳ ಮಿಲನದಿಂದ ಜರಾಸಂಧನ ಜನನ! ಭಾರತ ದುಡ್ಡಿಗೆ ಸೋತಿದ್ದು ಹೇಗೆ ಗೊತ್ತಾ?
928
VIEWS
FacebookTwitterWhatsuplinkedinEmail
  • ಹಿರಿಯ ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ ಅವರ ಡುಡ್ಡಿಗೆ ಸೋತ ಭಾರತ ಪುಸ್ತಕ ಈಗಷ್ಟೇ ಓದುಗರ ಕೈ ಸೇರಿದೆ. ಭಾರತದ ರಾಜಕಾರಣವು ಕಾರ್ಪೋರೇಟೀಕರಣ ಆಗುತ್ತಿರುವ ಈ ಅಪಾಯಕಾರಿ ಸನ್ನಿವೇಶವನ್ನು ಸಮರ್ಥವಾಗಿ ಚಿತ್ರಿಸಿರುವ ಕೃತಿ ಇದು. ಓದುಗರನ್ನು ತೀವ್ರವಾಗಿ ಚಿಂತನೆಗೆ ಹಚ್ಚುವ ಅನೇಕ ಬರಹಗಳು ಈ ಹೊತ್ತಿಗೆಯಲ್ಲಿವೆ. ಅದರಲ್ಲೊಂದು ಪ್ರಮುಖ ಅಧ್ಯಾಯವನ್ನು ಸಿಕೆನ್ಯೂಸ್‌ ನೌ ಓದುಗರಿಗಾಗಿ ಇಲ್ಲಿ ಕೊಡಲಾಗಿದೆ.

ದೇಶದ ಮೊದಲ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿಗಳಾದ ಟಾಟಾ ಹಾಗೂ ಬಿರ್ಲಾ ಅವರು ಜವಾಹರಲಾಲ್ ನೆಹರೂ ಅವರನ್ನು ಭೇಟಿ ಮಾಡುತ್ತಾರೆ.

ಈ ಭೇಟಿಯ ಸಂದರ್ಭದಲ್ಲಿ ನೆಹರೂ ಅವರ ಜತೆ ಮಾತುಕತೆಯಾಡುತ್ತಾ ಟಾಟಾ ಮತ್ತು ಬಿರ್ಲಾ ಒಂದು ಪ್ರಸ್ತಾವವನ್ನು ಮುಂದಿಡುತ್ತಾರೆ. ಅದೆಂದರೆ; ದೇಶ ಪ್ರಥಮ ಸಾರ್ವತ್ರಿಕ ಚುನಾವಣೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ನಿರ್ದಿಷ್ಟ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಾವು ಬಯಸಿದವರಿಗೆಂದೇ ಇಂತಿಷ್ಟು ಸೀಟುಗಳನ್ನು ಕೊಡಬೇಕು ಎಂಬುದು ಈ ಪ್ರಸ್ತಾವ.

ಆದರೆ, ಜವಾಹರಲಾಲ್ ನೆಹರೂ ಈ ಪ್ರಸ್ತಾವವನ್ನು ತಿರಸ್ಕರಿಸುತ್ತಾರೆ. ಆಗ ಟಾಟಾ, ಬಿರ್ಲಾ ಅಧಿಕಾರಯುತವಾಗಿ ಒಂದು ಮಾತು ಹೇಳುತ್ತಾರೆ. “ಮಿಸ್ಟರ್ ನೆಹರೂಜೀ.. ಇವತ್ತು ಬ್ರಿಟಿಷರಿಂದ ಈ ದೇಶ ಸ್ವಾತಂತ್ರ್ಯ ಪಡೆಯಲು ದೊಡ್ಡ ಮಟ್ಟದ ಬಂಡವಾಳ ಹೂಡಿದವರು ನಾವು. ಗಾಂಧೀಜಿಯವರ ಅಹಿಂಸಾ ಹೋರಾಟ ಯಶಸ್ವಿಯಾಗಲೂ ನಮ್ಮ ಕೊಡುಗೆಯಿದೆ. ಅದೇ ರೀತಿ ಬ್ರಿಟಿಷರ ವಿರುದ್ದ ಯಾವ್ಯಾವ ಮಾದರಿಯ ಹೋರಾಟಗಳು ಯಾರ್ಯಾರಿಂದ ನಡೆದವೋ? ಅದರ ಹಿಂದೆಯೂ ನಮ್ಮ ಬಂಡವಾಳವಿದೆ. ಹೀಗಿರುವಾಗ ಯಾವ ಕಾರಣಕ್ಕಾಗಿ ಅಧಿಕಾರದಲ್ಲಿ ನಾವು ಪಾಲುದಾರರಾಗಬಾರದು ಎಂದು ಬಯಸುತ್ತೀರಿ?”

ಅವರ ಮಾತು ಕೇಳಿದ ನೆಹರೂ ಗಂಭೀರವಾಗಿ; “ಭಾರತದಿಂದ ಬ್ರಿಟಿಷರನ್ನು ಓಡಿಸಲು ಅಗತ್ಯವಾದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೀವು ದೊಡ್ಡ ಮಟ್ಟದ ಬಂಡವಾಳ ಹಾಕಿದ್ದೀರಿ. ನಿಜ, ಆದರೆ ಈ ಬಂಡವಾಳವನ್ನು ಹಿಂಪಡೆಯಲು ನೀವು ಕೈಗಾರಿಕೆಗಳನ್ನೇ ಹೆಚ್ಚೆಚ್ಚಾಗಿ ತೆರೆಯಿರಿ. ಅದಕ್ಕೆ ಅಗತ್ಯವಾದ ಪರವಾನಗಿಯನ್ನು ನಾವು ಕೊಡುತ್ತೇವೆ” ಎನ್ನುತ್ತಾರೆ.

ಹಾಗೆಯೇ ಮುಂದುವರಿದು; “ನೀವು ಕೈಗಾರಿಕೆಗಳನ್ನು ಹೆಚ್ಚೆಚ್ಚು ಪ್ರಾರಂಭಿಸಿದರೆ ದೇಶದಲ್ಲಿ ಉದ್ಯೋಗದ ಪ್ರಮಾಣ ಹೆಚ್ಚುತ್ತದೆ. ಆ ಮೂಲಕ ಬಡತನ ನಿವಾರಣೆಗೂ ಸಹಕರಿಸಿದಂತಾಗುತ್ತದೆ. ಹಾಗೆಯೇ ಸ್ವಾತಂತ್ರ್ಯ ಹೋರಾಟಕ್ಕೆ ನೀವು ಹಾಕಿದ ಬಂಡವಾಳ ದೊಡ್ಡ ಮಟ್ಟದಲ್ಲಿ ಮರಳಿ ಪಡೆಯಲು ಸಾಧ್ಯವಾಗುತ್ತದೆ” ಎನ್ನುತ್ತಾರೆ ನೆಹರು.

ಜವಾಹರಲಾಲ್ ನೆಹರು

ನೆಹರೂ ಅವರ ಮಾತು ಕೇಳಿದ ಟಾಟಾ, ಬಿರ್ಲಾ ಇಬ್ಬರೂ; “ನೀವು ಹೇಳಿದ್ದು ಸರಿಯಾಗಿದೆ ನೆಹರೂಜೀ. ಆದರೆ ನಮ್ಮ ಪ್ರಶ್ನೆ ಎಂದರೆ ಯಾವ ಕಾರಣಕ್ಕಾಗಿ ನಾವು ರಾಜಕೀಯ ಅಧಿಕಾರದಲ್ಲಿ ಪಾಲು ಪಡೆಯಬಾರದು. ಅದನ್ನು ಹೇಳಿ” ಎನ್ನುತ್ತಾರೆ.

ಪುನಾ ನೆಹರೂ ಹೇಳುತ್ತಾರೆ. “ಒಂದು ವ್ಯವಸ್ಥೆಯಲ್ಲಿ ಇಂಡಸ್ಟ್ರಿಯಲ್ ಹೌಸ್ ಹಾಗೂ ಪೊಲಿಟಿಕಲ್ ಹೌಸ್ ಪರಸ್ಪರ ಕೈ ಜೋಡಿಸಿ ನಡೆಯಬಾರದು. ಯಾಕೆಂದರೆ, ಒಂದರ ಉದ್ದೇಶ ಲಾಭ ಪಡೆಯುವುದು. ಮತ್ತೊಂದರ ಉದ್ದೇಶ ಸೇವೆ ಮಾಡುವುದು. ಹೀಗಾಗಿ ಇವೆರಡೂ ಒಗ್ಗೂಡಿ ನಡೆದರೆ ವ್ಯವಸ್ಥೆ ಗಂಭೀರ ಅಪಾಯವನ್ನು ಎದುರಿಸಬೇಕಾಗುತ್ತದೆ.”

ಅಂದ ಹಾಗೆ; ಈ ಮಾತುಗಳನ್ನಾಡಿದ ನೆಹರೂ ಕೈಗಾರಿಕೋದ್ಯಮಿಗಳಿಂದ ಸಂಪೂರ್ಣ ದೂರವಾಗಿ ಅಧಿಕಾರ ನಡೆಸಿದರು ಎಂದಲ್ಲ. ಆದರೆ ಅವರನ್ನು ಹಿಂದಿಟ್ಟುಕೊಂಡೇ ರಾಜಕೀಯ ವ್ಯವಸ್ಥೆಯನ್ನು ಮುನ್ನಡೆಸಿದರು. ಇದನ್ನೇಕೆ ಗಮನಿಸಬೇಕು ಎಂದರೆ, ರಾಜಕಾರಣ ಎಲ್ಲಿಯವರೆಗೆ ಬಂಡವಾಳಶಾಹಿಗಳನ್ನು ಮುನ್ನೆಲೆಗೆ ತಂದು ನಿಲ್ಲಿಸಿಕೊಳ್ಳಲಿಲ್ಲವೋ? ಅಲ್ಲಿಯವರೆಗೂ ಅದು ಹಳಿಯ ಮೇಲೆ ಓಡುತ್ತಿತ್ತು.

ಆದರೆ, ಮೊದಲ ಲೋಕಸಭಾ ಚುನಾವಣೆಗೂ ಇವತ್ತಿನ ಲೋಕಸಭಾ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಈಗ ರಾಜಕೀಯ ಬೇರೆಯಲ್ಲ, ಬಂಡವಾಳಶಾಹಿಗಳು ಬೇರೆಯಲ್ಲ. ಅರ್ಥಾತ್, ನೀವು ಪೊಲಿಟಿಕಲ್ ಹೌಸ್ ನೋಡಲು ಹೋದರೆ ಅದರ ವ್ಯಾಪ್ತಿಯಲ್ಲೇ ಇಂಡಸ್ಟಿಯಲ್ ಹೌಸ್ ಕಾಣುತ್ತದೆ. ಇಂಡಸ್ಟ್ರಿಯಲ್ ಹೌಸ್ ನೋಡಲು ಹೋದರೆ ಅದರ ತೆಕ್ಕೆಯಲ್ಲೇ ಪೊಲಿಟಿಕಲ್ ಹೌಸ್ ಕಾಣುತ್ತದೆ.

ಪರಿಣಾಮ? ಇವತ್ತು ಇಡೀ ದೇಶದಲ್ಲಿ ಅಪನಂಬಿಕೆಯ ವಾತಾವರಣ ನೆಲೆಸಿದೆ. ಕರ್ನಾಟಕವನ್ನೇ ತೆಗೆದುಕೊಳ್ಳಿ. ರಾಜಕೀಯ ಭಿನ್ನಾಭಿಪ್ರಾಯಗಳೇನೇ ಇರಲಿ. ಆದರೆ ಪಕ್ಷ ಭೇದವಿಲ್ಲದೆ ಜನರ ಹಿತ ಕಾಪಾಡುವ ವಿಷಯದಲ್ಲಿ ನಮ್ಮ ರಾಜಕಾರಣಿಗಳು ಕೆಲಸ ಮಾಡುತ್ತಿದ್ದರು. ಆದರೆ ಇವತ್ತು ಯಾವುದೇ ಪಕ್ಷ-ಪಕ್ಷಗಳ ನಡುವೆ ಅಲ್ಲ, ಪ್ರತಿಯೊಂದು ಪಕ್ಷದೊಳಗೂ ಹಲವಾರು ಪಂಗಡಗಳಿವೆ. ಯಡಿಯೂರಪ್ಪ ಅವರನ್ನು ನೋಡಿದರೆ ಸಹಿಸದ ಗುಂಪಿದೆ. ಈ ಗುಂಪನ್ನು ನೋಡಿದರೆ ಯಡಿಯೂರಪ್ಪ ಅವರಿಗೆ ಅಸಹನೆಯಾಗುತ್ತದೆ.

ಇದೇ ರೀತಿ ಎಷ್ಟೇ ಮೈತ್ರಿಯ ಮಾತನಾಡಿದರೂ ದೇವೇಗೌಡರಿಗೆ ಸಿದ್ದರಾಮಯ್ಯ ಅವರ ಮೇಲೆ ನಂಬಿಕೆಯಿಲ್ಲ. ಸಿದ್ಧರಾಮಯ್ಯ ಅವರಿಗೆ ದೇವೇಗೌಡರ ಮೇಲೆ ನಂಬಿಕೆಯಿಲ್ಲ. ಇದು ಯಾವ ಮಟ್ಟಕ್ಕೆ ಹೋಗಿದೆಯೆಂದರೆ, ಜನರಲ್ಲೇ ಪರಸ್ಪರ ನಂಬಿಕೆ ಎಂಬುದಿಲ್ಲ.

ಹಾಗಂತ ಇದು ನಿನ್ನೆ, ಮೊನ್ನೆ ರೂಪುಗೊಂಡ ಸ್ಥಿತಿಯಲ್ಲ. ಯಾವಾಗ ಬಂಡವಾಳಶಾಹಿಗಳು ರಾಜಕೀಯದ ಮೇಲೆ ನಿಯಂತ್ರಣ ಪಡೆಯಲು ಶುರು ಮಾಡಿದರೋ? ಅಲ್ಲಿಂದಲೇ ಇದು ಶುರುವಾಯಿತು.

ಕರ್ನಾಟಕದಲ್ಲಿ ಕಾರ್ಪೋರೇಟೀಕರಣ

ಕರ್ನಾಟಕವನ್ನು ಉದಾಹರಣೆಯಾಗಿಟ್ಟುಕೊಂಡು ನೋಡಿದರೆ ಪೊಲಿಟಿಕಲ್ ಹೌಸ್ʼನೊಳಗೆ ಇಂಡಸ್ಟ್ರಿಯಲ್ ಹೌಸ್ʼನ ನುಸುಳುಕೋರತನ ಶುರುವಾಗಿದ್ದು ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಹಾಗಂತ ಗುಂಡೂರಾವ್ ಅವರೇ ಸ್ವಯಂ ಆಗಿ ಇದಕ್ಕೆ ಕಾರಣರೂ ಅಂತಲ್ಲ.

ಗುಂಡೂರಾಯರು ಮುಖ್ಯಮಂತ್ರಿಯಾಗುವ ಮುನ್ನ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರ ಕಾಲದಲ್ಲಿಯೇ ಪೊಲಿಟಿಕಲ್ ಹೌಸ್ʼಗೆ ಇಂಡಸ್ಟ್ರಿಯಲ್ ಹೌಸ್, ಪ್ರವೇಶ ಪಡೆಯಲು ಯತ್ನಿಸಿದರೂ ಅರಸರು ಅದಕ್ಕೆ ಅವಕಾಶ ಕೊಡಲಿಲ್ಲ. ಬದಲಿಗೆ ಇಂಡಸ್ಟ್ರಿಯಲ್ ಹೌಸ್ ನೇರವಾಗಿ ಪೊಲಿಟಿಕಲ್ ಹೌಸ್ʼಗೆ ಪ್ರವೇಶ ಪಡೆದರೆ ಜನಪ್ರತಿನಿಧಿಗಳಿಗೆ ಗೌರವ ಅಂತಿರುವುದಿಲ್ಲ. ಯಾಕೆಂದರೆ ಇಂಡಸ್ಟ್ರಿಯಲಿಸ್ಟ್ ಬಂಡವಾಳ ಹಾಕಿ ಬಂಡವಾಳ ತೆಗೆಯಲು ಬಯಸುವವರು. ಆದರೆ ಪೊಲಿಟಿಕಲ್ ಹೌಸ್ʼನಲ್ಲಿರುವವರು ಜನಸೇವೆಗೆ ಬದುಕನ್ನು ಮುಡುಪಾಗಿಟ್ಟವರು.

ರಾಜಕಾರಣಕ್ಕೆ ಬಂಡವಾಳ ಬೇಕು. ಆದರೆ ಅದು ನನ್ನ ಮೂಲಕವೇ ಕೆಳಗೆ ಹರಿಯಬೇಕೇ ಹೊರತು ನೀವೇ ನೇರವಾಗಿ ಪ್ರವೇಶ ಪಡೆದು ಹರಿಸುವಂತಾಗಬಾರದು ಎಂದರು. ಹೀಗಾಗಿ ಅರಸರ ಕಾಲದಲ್ಲಿ ಇಂಡಸ್ಟ್ರಿಯಲ್ ಹೌಸ್ ಹಾಗೂ ಪೊಲಿಟಿಕಲ್ ಹೌಸ್ ಒಂದೇ ಕಾಂಪೌಂಡಿನೊಳಗೆ ಕಾಣಲಿಲ್ಲ.

ಆದರೆ, ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದೇ ಸಂಜಯಗಾಂಧಿ ಕೃಪೆಯಿಂದ. ಅವರ ಬೆಂಬಲ ಇದ್ದ ಕಾರಣಕ್ಕಾಗಿ ಇಂದಿರಾ ಗಾಂಧಿ ಅವರು ಗುಂಡೂರಾಯರನ್ನು ಮುಖ್ಯಮಂತ್ರಿ ಮಾಡಿದರು. ಯಾವಾಗ ಗುಂಡೂರಾಯರು ಮುಖ್ಯಮಂತ್ರಿಯಾದರೋ? ಆ ನಂತರದ ದಿನಗಳಲ್ಲಿ ದಿಲ್ಲಿಯ ಇಂಡಸ್ಟ್ರಿಯಲ್ ಹೌಸ್ ಸಂಜಯ ಗಾಂಧಿ ಅವರನ್ನು ಹಿಡಿದುಕೊಂಡು ಕರ್ನಾಟಕಕ್ಕೆ ನುಸುಳತೊಡಗಿತು. ಈ ವಿಷಯದಲ್ಲಿ ಗುಂಡೂರಾವ್ ಅಮಾಯಕರಾಗಿದ್ದರು. ಹೀಗಾಗಿ ಸಂಜಯ ಗಾಂಧಿ ಮೂಲಕ ಕರ್ನಾಟಕಕ್ಕೆ ಇಂಡಸ್ಟ್ರಿಯಲ್ ಹೌಸ್ ನುಸುಳತೊಡಗಿತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದ ನಂತರ ಈ ನುಸುಳುಕೋರರ ಸಂಖ್ಯೆ ಹೆಚ್ಚಾಯಿತು. ಯಾಕೆಂದರೆ ಖುದ್ದು ಹೆಗಡೆ ಅವರಿಗೆ ಈ ಇಂಡಸ್ಟ್ರಿಯಲ್ ಹೌಸ್ʼನ ಸಂಪರ್ಕವಿತ್ತು.

ಹಾಗೆಯೇ, ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸುವ ಭರದಲ್ಲಿ, ಈ ಉದ್ದೇಶದ ಮೇಲೆ ಬಂಡವಾಳ ಹೂಡಿದ ಇಂಡಸ್ಟ್ರಿಯಲ್ ಹೌಸ್ʼಗಳಿಗೆ ಹೆಗಡೆ ಅವರು ಹೆಚ್ಚೆಚ್ಚು ಅವಕಾಶ ಮಾಡಿಕೊಡತೊಡಗಿದರು. ಲಿಕ್ಕರ್ ಲಾಬಿ, ಎಜುಕೇಶನ್ ಲಾಬಿ ಕೂಡಾ ಈ ಇಂಡಸ್ಟ್ರಿಯಲ್ ಹೌಸ್ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಮುಂದೆ ಯಾರೇ ಕರ್ನಾಟಕದ ಮುಖ್ಯಮಂತ್ರಿಯಾಗಲಿ, ಅವರಿಗೆ ಇಂಡಸ್ಟ್ರಿಯಲ್ ಹೌಸ್ʼನ ನುಸುಳುಕೋರರನ್ನು ತಡೆಯಲು ಸಾಧ್ಯವಾಗಲಿಲ್ಲ. ದೇವೇಗೌಡ ಹಾಗೂ ಪಟೇಲರ ಕಾಲದಲ್ಲಿ ಈ ನುಸುಳುಕೋರರ ಹಾವಳಿ ಸಹಿಸಿಕೊಳ್ಳಬಲ್ಲ ಮಟ್ಟದಲ್ಲಿತ್ತಾದರೂ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದ ನಂತರ ಇಂಡಸ್ಟ್ರಿಯಲ್ ಹೌಸ್ ಕರ್ನಾಟಕದ ಆಯಕಟ್ಟಿನ ಜಾಗಗಳಲ್ಲಿ ಸೆಟ್ಲ್ ಆಗುವಲ್ಲಿ ಯಶಸ್ವಿಯಾಗಿಬಿಟ್ಟಿತು.

ಎಸ್.ಎಂ.ಕೃಷ್ಣ ಕಾಲದಲ್ಲಿ

ಅದೇ ರೀತಿ ಇಂಡಸ್ಟ್ರಿಯಲ್ ಹೌಸ್ʼನ ಸಾಲಿಡ್ಡು ಸಪೋರ್ಟು ಪಡೆದ ಎಸ್.ಎಂ.ಕೃಷ್ಣ ಕೂಡ 2004 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ದೇಶದ ಅಧಿಕಾರ ಸೂತ್ರ ಹಿಡಿಯಲು ನೆರವು ನೀಡಿದರು. ಹೀಗೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸೆಟ್ಲ್ ಆದ ಇಂಡಸ್ಟ್ರಿಯಲ್ ಹೌಸ್, ಆ ನಂತರ ಯಡಿಯೂರಪ್ಪ ಮುಖ್ಯಮಂತ್ರಿಯಾದ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಮೇಲೆದ್ದು ನಿಂತುಬಿಟ್ಟಿತು.ಇದೇ ಬೆಳವಣಿಗೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆದು ಹೋಗಿದೆ ಎಂಬುದನ್ನೂ ನಾವು ನಿರ್ಲಕ್ಷಿಸಬಾರದು.

ಇವತ್ತು ಕರ್ನಾಟದ 224 ಜನಪ್ರತಿನಿಧಿಗಳ ಪೈಕಿ ಕನಿಷ್ಠ ಇನ್ನೂರು ಮಂದಿ ಉದ್ಯಮಿಗಳು. ಇಲ್ಲವೇ ವಿವಿಧ ಉದ್ಯಮಗಳಲ್ಲಿ ಪಾಲುದಾರರು ಎಂದರೆ ಇಂಡಸ್ಟ್ರಿಯಲ್ ಹೌಸ್ ಹಾಗೂ ಪೊಲಿಟಿಕಲ್ ಹೌಸ್ ಪರಸ್ಪರ ಹೇಗೆ ಬೆರೆತಿವೆ? ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಹೀಗೆ ಇಂಡಸ್ಟ್ರಿಯಲ್ ಹೌಸ್ʼಗಳು ದೇಶದ ವಿವಿಧ ಭಾಗಗಳಲ್ಲಿ ತಲೆ ಎತ್ತಿ ನಿಂತಿರುವ ಪರಿಣಾಮವಾಗಿ ಇವತ್ತು ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ ಹಾಹಾಕಾರ ಎಬ್ಬಿಸುತ್ತಿದೆ. ಒಂದು ವೇಳೆ ಅವರು ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೂ ಈ ಇಂಡಸ್ಟ್ರಿಯಲ್ ಹೌಸ್ʼನ ಪ್ರಭಾವ ಕಡಿಮೆಯಾಗುವುದಿಲ್ಲ. ಮತ್ತೂ ಸಮಾಜದ ತಳವರ್ಗದಲ್ಲಿರುವ ಜನರ ತಳಮಳ ತಪ್ಪುವುದಿಲ್ಲ.

ಯಾಕೆಂದರೆ; ನೆಹರೂ ಕಾಲದಲ್ಲಿ ಪೊಲಿಟಿಕಲ್ ಹೌಸ್ʼನ ಹಿಂಭಾಗದಲ್ಲಿದ್ದ ಇಂಡಸ್ಟ್ರಿಯಲ್ ಹೌಸ್ ಇವತ್ತು ಪೊಲಿಟಿಕಲ್ ಹೌಸ್ʼನ ಕೈ ಹಿಡಿದು ನಿರಾಯಾಸವಾಗಿ ನಡೆಯುತ್ತಿದೆ. ಹೀಗೆ ಯಾವುದನ್ನು ನೆಹರೂ ಬಯಸಿರಲಿಲ್ಲವೋ ಅದು ಸಾಧ್ಯವಾಗಿರುವುದರಿಂದ ದೇಶಾದ್ಯಂತ ಒಂದು ಅಪನಂಬಿಕೆಯ ವಾತಾವರಣ ಕಾಣುತ್ತಿದೆ.

ಇದು ಪ್ರಜಾಸತ್ತೆಯ ಮೇಲೆ ಯಾವ ಮಟ್ಟದ ಅಪಾಯವನ್ನು ತಂದೊಡ್ಡುತ್ತದೆ. ಸಾಮಾಜಿಕ ನ್ಯಾಯ ಎಂಬ ಪದವನ್ನು ಎಷ್ಟು ಹಾಸ್ಯಾಸ್ಪದಗೊಳಿಸುತ್ತದೆ ಅನ್ನುವುದನ್ನು ಅರ್ಥ ಮಾಡಿಕೊಂಡ ವಿಚಾರವಂತ ಸಮುದಾಯ ತನ್ನಿಂತಾನೇ ಒಂದು ವಿಸ್ಮಿತ ಸ್ಥಿತಿಯಲ್ಲಿದೆ.

ಗಮನಿಸಬೇಕಾದ ಸಂಗತಿ ಎಂದರೆ, ಪೊಲಿಟಿಕಲ್ ಹೌಸ್ ಮತ್ತು ಇಂಡಸ್ಟ್ರಿಯಲ್ ಹೌಸ್ ತಮ್ಮ ಪಾಡಿಗೆ ಇಂಡಿಪೆಂಡೆಂಟ್ ಆಗಿದ್ದರೆ ಅವು ಅಪಾಯಕಾರಿ ಶಕ್ತಿಗಳಾಗುವುದಿಲ್ಲ. ಬದಲಿಗೆ ವ್ಯವಸ್ಥೆಯನ್ನು ಕಟ್ಟುವ ಕೆಲಸ ಮಾಡುತ್ತವೆ. ಆದರೆ ಇವೆರಡೂ ಪರಸ್ಪರ ಸೇರಿದರೆ ಅದಕ್ಕೆ ಜರಾಸಂಧನ ರಾಕ್ಷಸ ಶಕ್ತಿ ಬರುತ್ತದೆ.

ಈಗ ಆಗಿರುವುದೇ ಅದು. ಆದರೆ, ಈ ಜರಾಸಂಧನನ್ನು ಎದುರಿಸುವುದು ಯಾರು? ಇವತ್ತು ನಡೆಯುತ್ತಿರುವ ಲೋಕಸಭಾ ಚುನಾವಣೆಗಳು ಜನಸಾಮಾನ್ಯರಲ್ಲಿ ಅತ್ಯಂತ ಹೇವರಿಕೆ ಮೂಡಿಸುತ್ತಿರುವ ಸಂದರ್ಭದಲ್ಲಿ ಈ ಕುರಿತು ಯೋಚಿಸಬೇಕಾದ ಅನಿವಾರ್ಯತೆ ಇದೆ.

***

  • ಆರ್.ಟಿ.ವಿಠ್ಠಲಮೂರ್ತಿ

ಕನ್ನಡದ ಅತ್ಯುತ್ತಮ, ವಸ್ತುನಿಷ್ಠ ಪತ್ರಕರ್ತರಲ್ಲಿ ಖಂಡಿತಾ ಒಬ್ಬರು. ರಾಜಕೀಯ ವಿಶ್ಲೇಷಣೆಯಲ್ಲಿ ಅವರದ್ದು ಸತ್ಯಮಾರ್ಗ. ಪ್ರಖರ ಬರವಣಿಗೆ ಅವರ ಶಕ್ತಿ. ಅನೇಕ ಪತ್ರಿಕೆಗಳಿಗೆ ಅಂಕಣಕಾರು ಕೂಡ. ʼಇದೊಂಥರಾ ಆತ್ಮಕಥೆʼ, ʼದುಡ್ಡಿಗೆ ಸೋತ ಭಾರತʼ ಅವರ ಕೃತಿಗಳು.

  • ಸಂತೋಷ್‌ ಸಸಿಹಿತ್ಲು

ಕನ್ನಡದ ಅತ್ಯುತ್ತಮ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರು. ರಾಜಕೀಯ-ವಿಡಂಬನಾತ್ಮಕ ವ್ಯಂಗ್ಯಚಿತ್ರಗಳನ್ನು ಬಿಡಿಸುವುದರಲ್ಲಿ ಸಸಿಹಿತ್ಲು ಅವರದ್ದು ಎತ್ತಿದ ಕೈ. ಬಹುತೇಕ ಪ್ರಮುಖ ಕನ್ನಡ ಪತ್ರಿಕೆಗಳಲ್ಲಿ ಕೆಲಸ ಮಾಡಿ, ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ.

  • ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ…
ರಾಜ್ಯ ಬಿಜೆಪಿಗೆ ಯಡಿಯೂರಪ್ಪ ಅವರೇ ಬಾಹುಬಲಿ; ಆದರೆ, ಕಟ್ಟಪ್ಪ ಯಾರೆಂಬುದೇ ಪ್ರಶ್ನೆ!!
Tags: indiaIndian politicskarnatakapolitics corporate
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಎಪಿಎಲ್-ಬಿಪಿಎಲ್ ಕಾರ್ಡ್‌ ಹೊಂದಿರುವ ಎಚ್ಐವಿ ಸೋಂಕಿತರಿಗೆ 5 ಲಕ್ಷ ರೂ.ವರೆಗೆ ಉಚಿತ ಮೆಡಿಸಿನ್

ಎಪಿಎಲ್-ಬಿಪಿಎಲ್ ಕಾರ್ಡ್‌ ಹೊಂದಿರುವ ಎಚ್ಐವಿ ಸೋಂಕಿತರಿಗೆ 5 ಲಕ್ಷ ರೂ.ವರೆಗೆ ಉಚಿತ ಮೆಡಿಸಿನ್

Leave a Reply Cancel reply

Your email address will not be published. Required fields are marked *

Recommended

ಕೋವಿಡ್‌ ಸಂಕಷ್ಟ ಕಾಲದಲ್ಲಿ ಹಾಹಾಕಾರ; ನಿರ್ಗತಿಕರಿಗೆ ಆಹಾರ, ನೀರು ಕೊಟ್ಟ ಸುಖೀಭವ ಚಾರಿಟಬಲ್ ಟ್ರಸ್ಟ್‌

ಕೋವಿಡ್‌ ಸಂಕಷ್ಟ ಕಾಲದಲ್ಲಿ ಹಾಹಾಕಾರ; ನಿರ್ಗತಿಕರಿಗೆ ಆಹಾರ, ನೀರು ಕೊಟ್ಟ ಸುಖೀಭವ ಚಾರಿಟಬಲ್ ಟ್ರಸ್ಟ್‌

4 years ago
ಗಡಿನಾಡಿನಲ್ಲೊಬ್ಬ ಫುಕುವೋಕಾ! ಅರತ್ತೈದರ ಪ್ರಾಯದಲ್ಲೂ ಸಾವಯವ ಕೃಷಿ ಮೇಲೆ ವ್ಯಾಮೋಹ; ಬರಪೀಡಿತ ಗಡಿ ಪ್ರದೇಶದಲ್ಲಿ ವರ್ಷಕ್ಕೆರಡು ಭತ್ತದ ಬೆಳೆ

ಕೇಂದ್ರದಿಂದ ರೈತರಿಗೆ 9ನೇ ಕಂತಿನ ಪರಿಹಾರ ಬಿಡುಗಡೆ ಆಗುತ್ತಿದ್ದಂತೆ ರಾಜ್ಯದಲ್ಲೂ 1,023 ಕೋಟಿ ರೂ. ರಿಲೀಸ್

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ