• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home POLITICS

ಹಳ್ಳಿಹಕ್ಕಿ ರೆಕ್ಕೆಗೆ ಕತ್ತರಿ ಹಾಕಿದ್ದು, ಹುಣಸೂರಲ್ಲಿ ಹಳ್ಳ ತೋಡಿದವರು ಯಾರು? ಶಾಸಕರ ಭವನದಲ್ಲಿ ಸತ್ಯ ನುಡಿದರಾ ವಿಶ್ವನಾಥ್

cknewsnow desk by cknewsnow desk
December 1, 2020
in POLITICS, STATE
Reading Time: 1 min read
0
ಮತ್ತೆ ಹಾಡಲಿದೆ ಹಳ್ಳಿಹಕ್ಕಿ! ಯಾರೆಲ್ಲ ಕಕ್ಕಾಬಿಕ್ಕಿ?

ಹೆಚ್.ವಿಶ್ವನಾಥ್‌

913
VIEWS
FacebookTwitterWhatsuplinkedinEmail

ಬೆಂಗಳೂರು: ಮಾಜಿ ಸಚಿವ ಎಚ್.ವಿಶ್ವನಾಥ್‌ ಸಿಡಿಸಿದ ಹೊಸ ಬಾಂಬ್‌ ಅದೆಷ್ಟರ ಮಟ್ಟಿಗೆ ಬಿಜೆಪಿಯನ್ನು ತಲ್ಲಣಗೊಳಿಸಿದೆ. ಮಂಗಳವಾರ ಬೆಳಗ್ಗೆಯಿಂದ ಸಾ.ರಾ.ಮಹೇಶ್‌ ಜತೆ ಮಾತಿನ ಯುದ್ಧ ನಡೆಸಿದ್ದ ಅವರು, ಅಹರಾಹ್ನ ಮಾಡಿದ ಪ್ರೆಸ್ಮೀಟ್‌ ಎಲ್ಲರಿಗೂ ಶಾಕ್‌ ನೀಡಿದೆ.

“ಹುಣಸೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನು ಸೋಲಲು ಪಕ್ಷದ ನಾಯಕರು ದ್ರೋಹ ಮಾಡಿದ್ದೇ ಕಾರಣ. ಚನ್ನಪಟ್ಟಣದ ಸಿ.ಪಿ.ಯೋಗೀಶ್ವರ್‌ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್‌ ಮಾಡಿದ ದ್ರೋಹವು ಬಹುಮುಖ್ಯ ಕಾರಣ” ಎಂದು ಪತ್ರಿಕಾಗೋಷ್ಠಿಯಲ್ಲೇ ವಿಶ್ವನಾಥ್‌ ನೇರ ಆರೋಪ ಮಾಡುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ದೊಡ್ಡ ಕಂಪನವೊಂದು ಎದ್ದುಬಿಟ್ಟಿತು. ಮೊದಲೇ ರಾಜ್ಯದ ಎಲ್ಲ ಆಗುಹೋಗುಗಳ ಬಗ್ಗೆ ಹದ್ದಿನ‌ ಕಣ್ಣಿಟ್ಟಿರುವ ಬಿಜೆಪಿ ಹೈಕಮಾಂಡ್‌ವರೆಗೂ ಹಳ್ಳಿಹಕ್ಕಿಯ ಶಾಕಿಂಗ್‌ ಪ್ರೆಸ್‌ಮೀಟ್‌ನ ಬ್ರೇಕಿಂಗ್‌ ನ್ಯೂಸ್‌ ತಲುಪಿದೆ.

ಮಂಗಳವಾರದ ವಿಶ್ವನಾಥರ ಇಡೀ ಎಪಿಸೋಡಿನೊಂದಿಗೆ ಬಿಜೆಪಿ ಸರಕಾರದ ಸಂಪುಟ ಸಂಕಟ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸುತ್ತ ವಿಗೂಢವಾಗಿರುವ ಆಡಳಿತದೊಳಗಿನ ಒಳಸುಳಿಗಳನ್ನು ಬೆತ್ತಲುಗೊಳಿಸಿದೆ. ಎಚ್.ವಿಶ್ವನಾಥ್‌ ಅವರ ಪತ್ರಿಕಾಗೋಷ್ಠಿಯಂತೂ ಅದೆಲ್ಲಕ್ಕೂ ಪರಾಕಾಷ್ಠೆ ಎನ್ನುವಂತೆ ಆಗಿಬಿಟ್ಟಿತು. ಹಾಗಾದರೆ ಬೆಳಗ್ಗೆಯಿಂದ ಆಗಿದ್ದೇನು? ಇಡೀ ಎಪಿಸೋಡನ್ನು ನೋಡೋಣ.

ಹೈಕೋರ್ಟ್‌ ತೀರ್ಪು

ನೇರ ಚುನಾವಣೆಯಲ್ಲಿ ಆಯ್ಕೆಯಾಗದ ವಿಶ್ವನಾಥ್‌ ಪ್ರಸಕ್ತ ವಿಧಾನಸಭೆ ಅಸ್ತಿತ್ವದಲ್ಲಿರುವ ತನಕ ಮುಖ್ಯಮಂತ್ರಿ ಆಗುವಂತಿಲ್ಲ ಎಂದು ಹೈಕೋರ್ಟ್‌, ಸೋಮವಾರದಂದು ನೀಡಿದ ತೀರ್ಪು ಇಡೀ ಎಪಿಸೋಡಿಗೆ ನಾಂದಿ ಹಾಡಿತು. ನ್ಯಾಯಾಲಯ ಕೊಟ್ಟ ತೀರ್ಪಿಗೆ ಅತ್ಯುತ್ಸಾಹದಿಂದಲೇ ಪ್ರತಿಕ್ರಿಯಿಸಿದ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್‌, ಮಂಗಳವಾರ ಬೆಳಗ್ಗೆಯೇ ಚಾಮುಂಡಿಬೆಟ್ಟಕ್ಕೆ ಹೋಗಿ ಅಮ್ಮನವರಿಗೆ ಪೂಜೆ ಸಲ್ಲಿದರು.

ಎಪಿಸೋಡಿಗೆ ಎಂಟ್ರಿ ಕೊಟ್ಟ ಸಾ.ರಾ.ಮಹೇಶ್

ಬೆಟ್ಟದ ಮೇಲೆಯೇ ಮೀಡಿಯಾ ಜತೆ ಮಾತನಾಡಿದ ಮಹೇಶ್;‌ ವಿಶ್ವನಾಥ್‌ಗೆ ದೇವರು ಕೊಟ್ಟ ಶಿಕ್ಷೆ ಇದಾಗಿದೆ ಎಂದುಬಿಟ್ಟರು. ಅಲ್ಲಿಗೇ ಈ ವಿಷಯ ಬಿಡದೇ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು, “ನ್ಯಾಯದೇವತೆ ಮೂಲಕ ತಪ್ಪು ಮಾಡಿದವರಿಗೆ ಶಿಕ್ಷೆ ಆಗಿದೆ. ಎಚ್.ವಿಶ್ವನಾಥ್‌ಗೆ ಇದು ದೇವರು ಕೊಟ್ಟ ಶಿಕ್ಷೆ. ಜೆಡಿಎಸ್ ಕಾರ್ಯಕರ್ತರು, ನಾವೂ ಇದರಿಂದ ನಿಟ್ಟುಸಿರು ಬಿಟ್ಟಿದ್ದೇವೆ. ಆಣೆ ಪ್ರಮಾಣ ನಡೆದ ಒಂದೇ ವರ್ಷಕ್ಕೆ ಸತ್ಯ ಯಾವುದೆಂದು ತೀರ್ಮಾನವಾಗಿದೆ” ಎಂದರು.

“ನಾನು ದೇವಾಲಯದಲ್ಲಿ ಅಮ್ಮನವರ ಬಳಿ ತಪ್ಪು ಯಾರದ್ದು? ಸರಿ ಯಾರದ್ದು? ಎಂದು ತೋರಿಸುವಂತೆ ಹೇಳಿದ್ದೆ. ಪ್ರಸಂಗ ನಡೆದ ಒಂದೇ ವರ್ಷಕ್ಕೆ ನ್ಯಾಯಾಲಯದ ತೀರ್ಪು ಬಂದಿದೆ. ತಪ್ಪು ಮಾಡಿದರೂ ಬಂಡತನದಿಂದ ಶಕ್ತಿದೇವತೆ ಮುಂದೆ ಕೂತರೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ” ಎಂದು ಸಾ.ರಾ.ಮಹೇಶ್ ಹೇಳಿದರು. “ವಿಶ್ವನಾಥ್‌ಗೆ ಇದು ದೇವರು ಕೊಟ್ಟ ಶಿಕ್ಷೆ ಹಾಗಾಗಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹರಕೆ ತೀರಿಸಿದ್ದೇನೆ” ಎಂದು ಅವರು ತಿಳಿಸಿದರು. ಇದಕ್ಕೆ ಆಮೇಲೆ ವಿಶ್ವನಾಥ್‌ ಬಲವಾದ ಕೌಂಟರ್‌ ಕೊಟ್ಟಿದ್ದಾರೆ.‌

ಸಾ.ರಾ.ಮಹೇಶ್ ಕೊಚ್ಚೆ ಗುಂಡಿ ಎಂದ ವಿಶ್ವನಾಥ್

ಸಾ.ರಾ.ಮಹೇಶ್ ಮಾತಿಗೆ ಕೌಂಟರ್‌ ಕೊಟ್ಟಿರುವ ವಿಶ್ವನಾಥ್‌; ಆ ಮನುಷ್ಯ ಕೊಚ್ಚೆ ಗುಂಡಿ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಎಚ್.ವಿಶ್ವನಾಥ್‌ಗೆ ನ್ಯಾಯದೇವತೆ ಶಿಕ್ಷೆ ನೀಡಿದ್ದಾಳೆ ಎಂದು ಹೇಳಿದ್ದಾರೆ. ಸಾ.ರಾ.ಮಹೇಶ್‌ ಕೊಚ್ಚೆ ಗುಂಡಿಯಂತೆ. ಅದರೊಳಕ್ಕೆ ಕಲ್ಲು ಹಾಕಿ ಪದೇಪದೆ ಗಲೀಜು ಮಾಡಿಕೊಳ್ಳಲು ನಾನು ಇಷ್ಟಪಡುವುದಿಲ್ಲ. ಇದರಿಂದ ನನ್ನ ಶುಭ್ರ ವಸ್ತ್ರವನ್ನು ಕೊಳೆ ಮಾಡಿಕೊಳ್ಳಲು ನಾನು ತಯಾರಿಲ್ಲ. ಯಾರ ಬಗ್ಗೆ ಏನು ಮಾತನಾಡಬೇಕು ಎಂಬ ಅರಿವಿಲ್ಲದೆ, ಬಾಯಿಗೆ ಬಂದಂತೆ ಮಾತನಾಡುವವರಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಬೆಳಗ್ಗೆಯಿಂದ ಸಾ.ರಾ.ಮಹೇಶ್‌ ಮತ್ತು ವಿಶ್ವನಾಥ್‌ ನಡುವೆ ನಡೆದ ಮಾತಿನ ಚಕಮಕಿಯನ್ನು ನೋಡುತ್ತಲೇ ಇದ್ದ ರಾಜ್ಯದ ಜನರು, ಆಮೇಲೆ ವಿಧಾನಸೌಧ ಮುಂಭಾಗದಲ್ಲಿ ಕೆಂಗಲ್‌ ಹನುಮಂತಯ್ಯ ಪ್ರತಿಮೆಗೆ ಗೌರವ ಸಲ್ಲಿಸಿದ ಸಿಎಂ ಯಡಿಯೂರಪ್ಪ; “ಯೋಗೀಶ್ವರ್‌ ಅವರನ್ನು ಮಂತ್ರಿ ಮಾಡುವುದು ನೂರಕ್ಕೆ ನೂರರಷ್ಟು ಖಚಿತ” ಎಂದುಬಿಟ್ಟರು. ಇನ್ನು; ಮಧ್ಯಾಹ್ನದ ನಂತರ ಬೆಂಗಳೂರಿನ ಶಾಸಕರ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಸಿಡಿಸಿದ ಬಾಂಬುಗಳು ಬಿಜೆಪಿಯನ್ನು ಅಕ್ಷಶಃ ತಲ್ಲಣಗೊಳಿಸಿವೆ. ಕಮಲ ಪಾಳಯದಲ್ಲಿ ನಡೆಯುತ್ತಿರುವ ವಿಧ್ವಂಸಕಾರಿ ರಾಜಕೀಯಕ್ಕೆ ಇದೊಂದು ನಿದರ್ಶನ ಎಂದು ಸ್ವತಃ ವಿಶ್ವನಾಥ್‌ ಅವರೇ ಹೇಳಿದರು.

ನನ್ನ ಸೋಲಿಗೆ ಆ ಇಬ್ಬರೇ ಕಾರಣ

ಮೀಡಿಯಾ ಮುಂದೆ ವಿಶ್ವನಾಥ್‌ ಹೇಳಿದ್ದಿಷ್ಟು;
⦁ ನನ್ನ ಸೋಲಿಗೆ ಸಿ.ಪಿ.ಯೋಗೀಶ್ವರ್‌ ಮತ್ತು ಎನ್.ಆರ್.ಸಂತೋಷ್‌ ಕಾರಣ. ಹುಣಸೂರು ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದಿಂದ ಚುನಾವಣೆಯ ವೆಚ್ಚಕ್ಕಾಗಿ ನೀಡಿದ ಭಾರೀ ಮೊತ್ತದ ಹಣವನ್ನು ಸೈನಿಕನಿಗೆ (ಸಿ.ಪಿ.ಯೋಗೀಶ್ವರ್), ಎನ್.ಆರ್.ಸಂತೋಷ್ ಲಪಟಾಯಿಸಿದರು. ಆ ಹಣವನ್ನು ವಿಶ್ವನಾಥ್‌ಗೆ ಕೊಟ್ಟು ಬಾ ಅಂತ ಸ್ವತಃ ಯಡಿಯೂರಪ್ಪ ಹೇಳಿ ಕಳಿಸಿದ್ದರು. ಆ ಮೊತ್ತವನ್ನು ತೆಗೆದುಕೊಂಡು ಅವರು ಹುಣಸೂರಿಗೆ ಬರಲೇ ಇಲ್ಲ.

⦁ ಬೈ ಎಲೆಕ್ಷನ್‌ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮುನ್ನವೇ ಕೆಲವರು ಹುಣಸೂರು ಮೇಲೆ ಕಣ್ಣಿಟ್ಟಿದ್ದರು. ಅಭ್ಯರ್ಥ ಹೆಸರು ಪ್ರಕಟಿಸುವ ಮೊದಲೇ ಯೋಗೀಶ್ವರ್‌ ಹುಣಸೂರು ಕ್ಷೇತ್ರದ ಉದ್ದಗಲಕ್ಕೂ ಈ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಪ್ರಚಾರ ಮಾಡಿಕೊಂಡು, ಎಲ್ಲಾ ಕಡೆ ಫ್ಲೆಕ್ಸ್-ಬ್ಯಾನರ್‌ ಕಟ್ಟಿಕೊಂಡು ಅಬ್ಬರ ಮಾಡಿದವರು ಯಾರು? ಸೀರೆ, ಕುಕ್ಕರ್‌ ಹಂಚಿದವರು ಯಾರು? ಎಲ್ಲವನ್ನೂ ಬಹಿರಂಗವಾಗಿಯೇ ಮಾಡಿ ಸಿಕ್ಕಿಬಿದ್ದರು. ಮಾಧ್ಯಮಗಳಲ್ಲಿ ಇದು ಸಿಕ್ಕಾಪಟ್ಟೆ ಚರ್ಚೆಯಾಯಿತು. ನನ್ನ ಸೋಲಿಗೆ ಇದೂ ಕಾರಣವಾಯಿತು. ಈಗ ಅಂತಹ ಕಳಂಕಿತ ವ್ಯಕ್ತಿಯನ್ನು ಯಡಿಯೂರಪ್ಪ ನೂರಕ್ಕೆ ನೂರು ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದಾರೆ. ರಾಜ್ಯವನ್ನು ಮುನ್ನಡೆಸುವ ಮುಖ್ಯಮಂತ್ರಿಯೇ ಪಕ್ಷಕ್ಕೆ ದ್ರೋಹ ಬಗೆದ, ಪಕ್ಷದ ಆಭ್ಯರ್ಥಿ ವಿರುದ್ಧವೇ ಷಡ್ಯಂತ್ರ ಮಾಡಿದ ವ್ಯಕ್ತಿಯನ್ನೇ ಮಂತ್ರಿ ಮಾಡುವೆ ಎಂದು ಹೇಳಿಕೆ ನೀಡಿದರೆ ಹೇಗೆ? ಹುಣಸೂರಿನಲ್ಲಿ ನನ್ನ ವಿರುದ್ಧ ನಡೆದ ಎಲ್ಲ ಷಡ್ಯಂತ್ರಗಳ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಹಾಗೂ ಮುಖ್ಯಮಂತ್ರಿಗೆ ಲಿಖಿತ ದೂರು ನೀಡಿದರೂ ಪ್ರಯೋಜನ ಆಗಿಲ್ಲ. ಇದರಿಂದ ನನಗೆ ತುಂಬಾ ನೋವಾಗಿದೆ. ಪಕ್ಷದ ಆಧಿಕೃತ ಅಭ್ಯರ್ಥಿಯನ್ನೇ ಸೋಲಿಸಲು ಸಂಚು ರೂಪಿಸಿದ ಇಂಥವರನ್ನು ಮಂತ್ರಿ ಮಾಡಿದರೆ ಅರ್ಥವೇನು?

⦁ ನನಗೆ ತುಂಬಾ ಆಘಾತವಾಗಿದೆ. ಯಾರು ನನ್ನಿಂದ ನೆರವು ಪಡೆದು ಸರಕಾರ ರಚಿಸಿ ಎಲ್ಲವನ್ನೂ ಅನುಭವಿಸುತ್ತಿದ್ದಾರೆಯೋ ಅವರೇ ಸಂಕಷ್ಟ ಕಾಲದಲ್ಲಿ ನನ್ನ ನೆರವಿಗೆ ಬರಲಿಲ್ಲ. ಕಳೆದ ಜೂನ್ ತಿಂಗಳಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಪಕ್ಷದ ಕೋರ್ ಕಮಿಟಿ ಕಳುಹಿಸಿದ್ದ ಮೊದಲ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆದರೆ, ಆ ಪಟ್ಟಿ ಬಿಡುಗಡೆ ಆದಾಗ ನನ್ನ ಹೆಸರೇ ಬಿಟ್ಟು ಹೋಗಿತ್ತು. ನನಗೆ ತೀವ್ರ ಶಾಕ್‌ ಆಯಿತು. ಪಕ್ಷಕ್ಕಿಂತ ಸಂಘ ಪರಿವಾರದ ಮಟ್ಟದಲ್ಲಿ ನನಗೆ ಹೆಚ್ಚು ಬೆಂಬಲ, ನೈತಿಕ ಶಕ್ತಿ ಸಿಕ್ಕಿತು. ಆದರೆ, ನಂಬಿದರೆಲ್ಲ ಕೈಕೊಟ್ಟರು. ನ್ಯಾಯಾಲಯದಲ್ಲಿ ನನ್ನ ಬಗ್ಗೆ ವಿಚಾರಣೆ ನಡೆಯುತ್ತಿದ್ದ ವೇಳೆಯಲ್ಲೂ ನನಗೆ ನಿರೀಕ್ಷಿತ ಸಹಕಾರ ಸಿಗಲೇ ಇಲ್ಲ. ಆ ಎಲ್ಲ ನೋವುಗಳು ಕಣ್ಣಿಗೆ ಕಟ್ಟಿದಂತೆ ಕಾಡುತ್ತಿವೆ.

***

  • ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ..
ಮತ್ತೆ ಹಾಡಲಿದೆ ಹಳ್ಳಿಹಕ್ಕಿ! ಯಾರೆಲ್ಲ ಕಕ್ಕಾಬಿಕ್ಕಿ?
Tags: bjpH VishwanathkarnatakaPolitics
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಶಿಕ್ಷಣದಲ್ಲಿ ಮೂಲಭೂತ ಬದಲಾವಣೆ ಉದ್ದೇಶವೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಎಂದ ಪಿಎಂ

ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೂ ಹೆಚ್ಚಾಗುತ್ತಿದೆ ಬೇಡಿಕೆ; 2ಎ ಪ್ರವರ್ಗಕ್ಕೂ ಸೇರಿಸಿಕೊಳ್ಳಲು ಆಗ್ರಹ

Leave a Reply Cancel reply

Your email address will not be published. Required fields are marked *

Recommended

ಪಿಪಿಇ ಕಿಟ್‌ ಧರಿಸಿ ಕೋವಿಡ್‌ ಸೋಂಕಿತರ ವಾರ್ಡ್‌ಗೆ ಬಂದ ಶ್ರೀಗಳು!

ಪಿಪಿಇ ಕಿಟ್‌ ಧರಿಸಿ ಕೋವಿಡ್‌ ಸೋಂಕಿತರ ವಾರ್ಡ್‌ಗೆ ಬಂದ ಶ್ರೀಗಳು!

4 years ago
3 ಕೃಷಿ ಕಾಯ್ದೆಗಳನ್ನು ಏಕಪಕ್ಷೀಯವಾಗಿ  ಪಾಸ್‌ ಮಾಡಿಕೊಂಡ ಕೇಂದ್ರ ಸರಕಾರವು ಸಂವಿಧಾನಕ್ಕೆ ಅಪಚಾರ ಮಾಡಿತಾ? ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡರು ಹೇಳಿದ್ದೇನು?

3 ಕೃಷಿ ಕಾಯ್ದೆಗಳನ್ನು ಏಕಪಕ್ಷೀಯವಾಗಿ ಪಾಸ್‌ ಮಾಡಿಕೊಂಡ ಕೇಂದ್ರ ಸರಕಾರವು ಸಂವಿಧಾನಕ್ಕೆ ಅಪಚಾರ ಮಾಡಿತಾ? ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡರು ಹೇಳಿದ್ದೇನು?

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ