• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ದೊಡ್ಡರಂಗೇಗೌಡರು: ಕಾವ್ಯದಲ್ಲಿ ಬದುಕಿನ ಮಾವು-ಬೇವನ್ನು ಹದವಾಗಿ ಬೆರೆಸಿದ ನೆಲದ ಕವಿ, ಪ್ರೀತಿ ಪ್ರಗಾಥಗಳ ನಡುವೆ ಜೀಕಿದ ಭಾವಜೀವಿ

P K Channakrishna by P K Channakrishna
January 22, 2021
in CKPLUS, STATE
Reading Time: 1 min read
0
ದೊಡ್ಡರಂಗೇಗೌಡರು: ಕಾವ್ಯದಲ್ಲಿ ಬದುಕಿನ ಮಾವು-ಬೇವನ್ನು ಹದವಾಗಿ ಬೆರೆಸಿದ ನೆಲದ ಕವಿ, ಪ್ರೀತಿ ಪ್ರಗಾಥಗಳ ನಡುವೆ ಜೀಕಿದ ಭಾವಜೀವಿ
1.1k
VIEWS
FacebookTwitterWhatsuplinkedinEmail

ಹಾವೇರಿಯಲ್ಲಿ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ

ಬೆಂಗಳೂರು: ಒಂದೆಡೆ ಕೋವಿಡ್‌ ಮಾರಿಯ ಅಬ್ಬರ, ಇನ್ನೊಂದೆಡೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ಬಂದಿರುವ ಈ ವರ್ಷ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನೆಲದ ಸೊಗಡಿನ ನೈಜಕವಿ ಡೊಡ್ಡರಂಗೇಗೌಡರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ನೆಲಕ್ಕೆ ನಿಯತ್ತಾಗಿದ್ದುಕೊಂಡು ಬರೆಯುವ ಕವಿಯೊಬ್ಬರಿಗೆ ಗೌರವ ದಕ್ಕಿದೆ.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಪರಿಷತ್ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ.

ಹಾವೇರಿಯಲ್ಲಿ ಮುಂದಿನ ಫೆಬ್ರವರಿ 26ರಿಂದ 28ರವರೆಗೆ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಕನ್ನಡ ಹಬ್ಬದ ಅಧ್ಯಕ್ಷರಾಗಿ ದೊಡ್ಡರಂಗೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಗೊ.ರು.ಚನ್ನಬಸಪ್ಪ, ವೀಣಾ ಶಾಂತೇಶ್ವರ, ಕೆ.ಎಸ್.ಭಗವಾನ್, ಎಸ್.ಆರ್.ಗುಂಜಾಳ್ ಅವರುಗಳು ಸೇರಿ ಇನ್ನು ಕೆಲವರ ಹೆಸರುಗಳು ಪಟ್ಟಿಯಲ್ಲಿದ್ದವು. ಕೊನೆಗೆ ಸರ್ವಾನುಮತದಿಂದ ಕವಿ ದೊಡ್ಡರಂಗೇಗೌಡರನ್ನು ಆಯ್ಕೆ ಮಾಡಲಾಯಿತು ಎಂದು ಬಳಿಗಾರ್‌ ಅವರು ಹೇಳಿದರು.

ಕನ್ನಡ ಪ್ರಗಾಥಗಳ ಸಾಮ್ರಾಟ

ಭಾವಗೀತೆಗಳ ಜತೆಗೆ ನೆಲದ ಸೊಗಡಿನ ಕಾವ್ಯ ರಚನೆಯಲ್ಲೂ ದೊಡ್ಡರಂಗೇಗೌಡರದು ದೊಡ್ಡ ಹೆಸರು. ಜತೆಗೆ, ಪ್ರಗಾಥಗಳ ಸೃಷ್ಟಿಯಲ್ಲೂ ಅವರದ್ದು ಎತ್ತಿದ ಕೈ. ʼಪ್ರೀತಿ ಪ್ರಗಾಥʼ ಅವರ ಪ್ರಗಾಥಗಳಲ್ಲಿ ಮಾಸ್ಟರ್‌ಪೀಸ್.‌ ಜತೆಗೆ, ಇನ್ನೊಂದು ಪ್ರಗಾಥ ʼಹಳ್ಳಿ ಹುಡುಗಿ ಹಾಡು-ಪಾಡುʼ ಹುಟ್ಟಿಸಿದ ಭಾವತೀವ್ರತೆ ಅಷ್ಟಿಷ್ಟಲ್ಲ.

ಮಾವು-ಬೇವು

ಬದುಕಿನ ಮಾವು-ಬೇವನ್ನು ಹದವಾಗಿ ಬೆರೆಸಿ ಕಾವ್ಯ ಕಟ್ಟುವುದರಲ್ಲಿ ಗೌಡರು ಅದ್ಭುತ. ಅವರು ಬರೆದು, ಸಿ.ಅಶ್ವತ್ಥ್‌ ಅವರು ರಾಗ ಸಂಯೋಜಿಸಿ ಅಮರ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿದ್ದ ʼಮಾವು-ಬೇವುʼ ಕ್ಯಾಸೆಟ್‌ ಇವತ್ತಿಗೂ ಭಾವಗೀತೆ ಪ್ರಿಯರ ಪಾಲಿಗೆ ಹ್ಹಾಟ್‌ ಫೇವರೀಟ್.‌ ಅದರಲ್ಲಿರುವ “ಹೂದೋಟದ ಹಾದಿಯಾಗೆ, ಊರಿನಾಚೆ ತೋಪಿನಾಗೆ” ಸೇರಿದಂತೆ ಅದರಲ್ಲಿರುವ ಅಷ್ಟೂ ಗೀತೆಗಳ ಮಜವೇ ಬೇರೆ. “ಮೆರೆಯಬೇಡವೋ ಮನುಜ ಅಂತರಂಗದ ಅಂಕೆ ಮೀರಿ..” ಗೀತೆಯಂತೂ ಕೋವಿಡ್‌ನ ಈ ಸಂದರ್ಭಕ್ಕೆ ಹೆಚ್ಚು ಹೊಂದೀತು ಎನ್ನಬಹುದು.

ಕಾವ್ಯದಲ್ಲಿ ರಂಗನ್ನರಳಿಸಿದರು

ಅನೇಕ ಕವನ ಸಂಕಲನ ಗುಚ್ಛಗಳನ್ನು ತಂದಿರುವ ದೊಡ್ಡರಂಗೇಗೌಡರು, ಸಮಕಾಲೀನ ಸಂದರ್ಭಕ್ಕೆ ಹಾಗೂ ಹಳ್ಳಿಯ ಅದರಲ್ಲೂ ಜನಪದ ಶೈಲಿಯ ಅಭಿವ್ಯಕ್ತಿಗೆ ಜೀವ ತುಂಬಿದವರು. ಒಂದೆಡೆ ಪ್ರಗಾಥಗಳನ್ನು ಬರೆಯುತ್ತಲೇ ಪ್ರೀತಿ-ಪ್ರಣಯಯದ ಜತೆ ಜೋಕಾಲಿ ಆಡಿದ ಗೌಡರು, ಅಷ್ಟೇ ತೀವ್ರವಾಗಿ ಕಾವ್ಯವನ್ನು ಸರಳವಾಗಿ ಬರೆದು ಕಳೆಗಟ್ಟುವಂತೆ ಮಾಡಿದರು.

ಕಣ್ಣು ನಾಲಿಗೆ ಕಡಲು ಕಾವ್ಯ, ಜಗುಲಿ ಹತ್ತಿ ಇಳಿದು, ನಾಡಾಡಿ, ಮೌನ‌ ಸ್ಪಂದನ, ಕುದಿಯುವ ಕುಲುಮೆ, ಚದುರಂಗಗ ಕುದುರೆಗಳು, ಯುಗವಾಣಿ, ಬದುಕು ತೋರಿದ ಬೆಳಕು ಮುಂತಾದ ಸಂಕಲನಗಳಲ್ಲಿ ಗೌಡರ ಕಾವ್ಯಕೃಷಿಗೆ ಜನಪದದ ಲಯಗಾರಿಕೆ ಹದವಾಗಿ ಬೆರೆತಿದೆ. ಇನ್ನು ʼವರ್ತಮಾನದ ವ್ಯಂಗ್ಯದಲ್ಲಿʼ, ʼವಿಚಾರ ವಾಹಿನಿʼ ಗೌಡರ ಗದ್ಯಕೃತಿಗಳು. ʼಅನನ್ಯನಾಡು ಅಮೆರಿಕʼ ಮತ್ತು ʼಪಿರಮಿಡ್ಡುಗಳು ಪರಿಸರದಲ್ಲಿʼ ಅವರು ಬರೆದ ಎರಡು ಪ್ರವಾಸ ಕಥನಗಳು.

ಕುರುಬರಹಳ್ಳಿಯಿಂದ ಬಂದ ಕವಿ

ತುಮಕೂರು ಜಿಲ್ಲೆಯ ಕುರುಬರಹಳ್ಳಿ ಗ್ರಾಮ ಗೌಡರ ಹುಟ್ಟೂರು. ಹುಟ್ಟಿದ್ದು 0೭ ಫೆಬ್ರುವರಿ ೧೯೪೬ರಲ್ಲಿ. ತಂದೆ ಕೆ.ರಂಗೇಗೌಡರು, ತಾಯಿ ಅಕ್ಕಮ್ಮನವರು. ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ಪಡೆದರಲ್ಲದೆ, “ಕನ್ನಡ ನವೋದಯ ಕಾವ್ಯ- ಒಂದು ಪುನರ್ ಮೌಲ್ಯಮಾಪನ” ವಿಷಯದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿವಿಯಿಂದ ಪಿ.ಹೆಚ್‍ಡಿ ಪಡೆದಿದ್ದಾರೆ.

1972ರಿಂದ 2004ರವರೆಗೂ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಹತ್ತಿರದ ಎಸ್.ಎಲ್.ಎನ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕೆಲಸ ಮಾಡಿದ್ದಾರೆ. ಜತೆಗೆ, ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಇದ್ದರು. 1982ರಲ್ಲಿ ದೊಡ್ಡರಂಗೇಗೌಡರು ʼಆಲೆಮನೆʼ ಚಿತ್ರಕ್ಕಾಗಿ ಬರೆದ ಭಾವೈಕ್ಯ ಗೀತೆಗೆ ರಾಜ್ಯ ಸರಕಾರದಿಂದ ವಿಶೇಷ ಗೀತೆ ಪ್ರಶಸ್ತಿ, ಬೆಳ್ಳಿಪದಕದ ಪುರಸ್ಕಾರ ಸಿಕ್ಕಿತ್ತು. ಜತೆಗೆ; ಅವರು ರಂಗನಾಯಕಿ, ಪರಸಂಗದ ಗೆಂಡೆತಿಮ್ಮ, ಆಲೆಮನೆ, ಅನುಪಮ, ಅರುಣರಾಗ, ಮುದುಡಿದ ತಾವರೆ ಅರಳಿತು, ಏಳು ಸುತ್ತಿನ ಕೋಟೆ, ಅಶ್ವಮೇಧ, ಹೃದಯಗೀತೆ, ಭೂಲೋಕದಲ್ಲಿ ಯಮರಾಜ, ಜನುಮದ ಜೋಡಿ, ಕುರುಬನ ರಾಣಿ, ರಮ್ಯ ಚೈತ್ರಕಾಲ, ತಂದೆಗೆ ತಕ್ಕ ಮಗ, ಪಡುವಾರಳ್ಳಿ ಪಾಂಡವರು, ಸಾಧನೆ ಶಿಖರ, ಗನೇಶನ ಮದುವೆ, ಕಾವ್ಯ, ಬೆಳ್ಳಿ ಕಾಲುಂಗುರ ಮುಂತಾದ ಚಿತ್ರಗಳಿಗೆ ಗೀತೆಗಳನ್ನು ಬರೆದಿದ್ದಾರೆ.

Tags: Doddarange Gowdakannada sahithya sammelanakannada sahitya parishat
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಕೋಲಾರದ ವಿಸ್ಟ್ರಾನ್‌ ಐಫೋನ್‌ ಘಟಕದ ಮೇಲೆ ದಾಳಿ; ಪ್ರಧಾನಮಂತ್ರಿ ನರೇಂದ್ರ ಮೋದಿ ಕಳವಳಕ್ಕೆ ಕಾರಣವೇನು?

ಮೋದಿ ಮಿಡ್ಲ್‌ಕ್ಲಾಸ್‌ನಿಂದ ಬಂದವರು, ಅದಕ್ಕೆ ಆ ಜನರ ‌ ಮನಸ್ಸು ಅರಿತು ಕೆಲಸ ಮಾಡುತ್ತಿದ್ದಾರೆ, ಭಾರತವೂ ಬದಲಾಗುತ್ತಿದೆ!

Leave a Reply Cancel reply

Your email address will not be published. Required fields are marked *

Recommended

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಹೈಕೋರ್ಟ್ ಛೀಮಾರಿ

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಹೈಕೋರ್ಟ್ ಛೀಮಾರಿ

3 years ago
ಕ್ಷೇತ್ರದ ಜನರ ಆರೋಗ್ಯ ರಕ್ಷಣೆಗಾಗಿ ಎಲ್ಲೆಡೆ ಶುದ್ಧ ಕುಡಿಯುವ ನೀರಿನ ಘಟಕ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಕ್ಷೇತ್ರದ ಜನರ ಆರೋಗ್ಯ ರಕ್ಷಣೆಗಾಗಿ ಎಲ್ಲೆಡೆ ಶುದ್ಧ ಕುಡಿಯುವ ನೀರಿನ ಘಟಕ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ