• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಚಿಂತಾಮಣಿ ತಾಲ್ಲೂಕಿನ ನರಸಾಪುರದಲ್ಲಿ ಕಲ್ಲುಕ್ವಾರಿಯ ಅಬ್ಬರಕ್ಕೆ ಜನರು ತತ್ತರ; ಮುಸ್ಸಂಜೆ ಸ್ಫೋಟಕ್ಕೆ ಮನೆಗಳಿಗೆ ನಡುಕ!! ವಿಷಗಾಳಿ, ಜಲಮೂಲಗಳು ವಿನಾಶ

P K Channakrishna by P K Channakrishna
February 4, 2021
in CHIKKABALLAPUR, STATE
Reading Time: 2 mins read
0
ಅಕ್ರಮ ಕಲ್ಲುಗಣಿಗಳ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ; ಅಕ್ರಮ ಇದ್ದರೆ ಸಕ್ರಮ ಮಾಡಿಕೊಳ್ಳಿ ಎಂದ ಸಿಎಂ

ಚಿಂತಾಮಣಿ ತಾಲ್ಲೂಕಿನ ನರಸಾಪುರ ಸಮೀಪದ ಕ್ರಷರ್‌ನ ಒಂದು ದೃಶ್ಯ.

919
VIEWS
FacebookTwitterWhatsuplinkedinEmail
  • ಪ್ರಾಕೃತಿಕ ಸಂಪತ್ತಿನ ಸಿರಿವಂತಿಕೆಯಲ್ಲಿ ಯಾವ ಮಲೆನಾಡಿಗೂ ಕಡಿಮೆ ಇರದಿದ್ದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕತ್ತು ಹಿಸುಕುವ ಕೆಲಸ ನಿರಾತಂಕವಾಗಿ ನಡೆಯುತ್ತಿದೆ. ಒಂದೆಡೆ ಪರಿಸರ ಸಂರಕ್ಷಣೆ ಜಪ ಮಾಡುತ್ತಲೇ ಇನ್ನೊಂದೆಡೆ ಅಮ್ಮನಂಥ ಪ್ರಕೃತಿಯನ್ನು ಲೂಟಿ ಮಾಡಿ ವಿವಸ್ತ್ರಗೊಳಿಸುವ ನಿರ್ಲಜ್ಜ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಬೆಂಗಳೂರು ನಗರಕ್ಕೆ ಹತ್ತಿರ ಇವೆ ಎಂಬ ಕಾರಣಕ್ಕೆ ಈ ಅವಳಿ ಜಿಲ್ಲೆಗಳು ತೆರುತ್ತಿರುವ ಬೆಲೆ ಅಷ್ಟಿಷ್ಟಲ್ಲ. ಚಿಂತಾಮಣಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಲ್ಲು ಕ್ವಾರಿಯೊಂದರ ಅಕ್ಕಪಕ್ಕದ ಹಳ್ಳಿಗಳ ಬದುಕು ನರಕಸದೃಶವಾಗಿದೆ.

ಬೆಂಗಳೂರು/ಚಿಂತಾಮಣಿ: ಕೆಲ ದಿನಗಳ ಹಿಂದೆ ಅಕ್ರಮ ಕ್ರಷರ್‌ಗಳಿದ್ದರೆ ಅರ್ಜಿ ಹಾಕಿಕೊಂಡು ಸಕ್ರಮ ಮಾಡಿಕೊಳ್ಳಿ ಎಂದು ಒಪೆನ್‌ ಆಫರ್‌ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಕಳೆದ ಮಂಗಳವಾರ (ಫೆಬ್ರವರಿ 2) ಕಾನೂನು ಚೌಕಟ್ಟಿನಲ್ಲಿರುವ ಕಲ್ಲು ಗಣಿಗಾರಿಕೆಗಳಿಗೆ ಯಾವುದೇ ಅಡ್ಡಿ ಇಲ್ಲ ಎಂಬ ಹೊಸ ವರಸೆ ಶುರು ಮಾಡಿದ್ದರು.

ಅಲ್ಲಿಗೆ; ಮುಖ್ಯಮಂತ್ರಿಗೆ ರಾಜ್ಯದಲ್ಲಿ ಪರಿಸರ ವಿನಾಶವಾದರೂ ಪರವಾಗಿಲ್ಲ, ಬೆಂಗಳೂರಿನಲ್ಲಿ ಗಗನಚುಂಬಿ ಕಟ್ಟಡಗಳು ಮಾತ್ರ ಎಗ್ಗಿಲ್ಲದೆ ಬರಲಿ ಎಂಬ ಇರಾದೆ ಇದೆ ಎಂಬ ಸಂಗತಿ ಇದೀಗ ಗುಟ್ಟಾಗೇನೂ ಇಲ್ಲ.

ಅಕ್ರಮ ಕಲ್ಲು ಗಣಿಗಳನ್ನು ಸಹಿಸಲು ಸಾಧ್ಯವಿಲ್ಲ, ಆದರೆ ಅವುಗಳನ್ನು ನಿಲ್ಲಿಸುವ ಉದ್ದೇಶವೂ ಇಲ್ಲ ಎನ್ನುವ ಅರ್ಥ ಬರುವಂತೆ ವಿಧಾನಸಭೆಯಲ್ಲಿ ಹೇಳಿದ್ದ ಅವರು, ಅಂಥ ಕಲ್ಲು ಕ್ವಾರಿಗಳಿಗೆ ಯಾವುದೇ ಅಡ್ಡಿ ಮಾಡಬಾರದು ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಫರ್ಮಾನು ಹೊರಡಿಸಿದ್ದರು. ಈ ಆದೇಶ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೂ ಅನ್ವಯವಾಗುತ್ತದೆ. ಎರಡೂ ಈ ಜಿಲ್ಲೆಗಳ ಜಿಲ್ಲಾಡಳಿತಗಳು ಈ ಬಗ್ಗೆ ಸಭೆ ನಡೆಸಿ ಗಣಿ ಇಲಾಖೆಗೆ ಸೂಚನೆ ಕೊಟ್ಟಿದ್ದೂ ಆಗಿದೆ.

ಆದರೆ, ಲೈಸನ್ಸ್‌ಗಳನ್ನು ಇಟ್ಟುಕೊಂಡು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ನೀಡಿರುವ ಮಹತ್ತ್ವದ ತೀರ್ಪುಗಳನ್ನು ಉಲ್ಲಂಘಿಸಿಕೊಂಡು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳು ಸೇರಿದಂತೆ ರಾಜ್ಯದ ಅನೇಕ ಕಡೆ ಇದುವರೆಗೂ ಕಲ್ಲುಗಣಿಗಳು ಪರಿಸರಕ್ಕೆ ಉಂಟು ಮಾಡಿರುವ ಹಾನಿಯ ಬಗ್ಗೆ ಮುಖ್ಯಮಂತ್ರಿ ಚಕಾರ ಎತ್ತಿಲ್ಲ. ಪರಿಸರ ಹೋರಾಟಗಾರರ ಹಾಗೂ ಕ್ವಾರಿಗಳಿಂದ ಕಷ್ಟಕ್ಕೆ ಸಿಲುಕಿರುವ ಜನರ ಕೂಗನ್ನು ಕಿವಿಗೆ ಹಾಕಿಕೊಳ್ಳದೆ ಅವರು ಎಂದಿನಂತೆ ಬೆಂಗಳೂರು ಬೆಳವಣಿಗೆಯತ್ತಲೇ ಗಮನ ಕೊಟ್ಟು ಎರಡೂ ಜಿಲ್ಲೆಗಳ ಪ್ರಾಕೃತಿಕ ಸಂಪತ್ತನ್ನು ಕೊಳ್ಳೆ ಹೊಡೆಯಲು ರಾಜಮಾರ್ಗ ಕಲ್ಪಿಸಿಕೊಟ್ಟ ಹಾಗಾಗಿದೆ.

ಕಳೆದ ಜನವರಿ 21ರಂದು ಮುಖ್ಯಮಂತ್ರಿಯವರ ತವರು ಜಿಲ್ಲೆ ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಆರಕ್ಕೂ ಹೆಚ್ಚು ಜನರು ಧಾರುಣ ಸಾವನ್ನಪ್ಪಿದ ನಂತರವಾದರೂ ಸರಕಾರ ಎಚ್ಚೆತ್ತುಕೊಂಡು ಇಂಥ ಕ್ವಾರಿಗಳಿಗೆ ಲಗಾಮು ಹಾಕುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಸ್ಫೋಟಕ್ಕೆ ಬಲಿಯಾದವರಿಗಾಗಿ ನೋವು ವ್ಯಕ್ತಪಡಿಸಿದರೂ ಕ್ವಾರಿಗಳು ಮಾತ್ರ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ನಿರಾತಂಕವಾಗಿ ನಡೆಯುತ್ತಿವೆ.

ಚಿಂತಾಮಣಿಯಲ್ಲೊಂದು ಕರಾಳ ಕ್ವಾರಿಲೋಕ

ಕೆಲ ದಿನಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ತಾಲ್ಲೂಕಿನ ಪೇರೇಸಂದ್ರ, ತೀಲಕುಂಟಹಳ್ಳಿ, ಬಾಗೇಪಲ್ಲಿ ಮತ್ತಿತರೆ ಕಡೆ ನಡೆಯುತ್ತಿದ್ದ ಅಕ್ರಮ ಮತ್ತು ನಿಯಮಬಾಹಿರ ಕಲ್ಲು ಗಣಿಗಳ ಮಾಹಿತಿಯನ್ನು ಬಿಚ್ಚಿಟ್ಟಿದ್ದ ಸಿಕೆನ್ಯೂಸ್‌ ನೌ.ಕಾಂ ಇದೀಗ ಚಿಂತಾಮಣಿ ತಾಲ್ಲೂಕಿನ ಅಂಭಾಜಿದುರ್ಗ ಹೋಬಳಿಯ ನರಸಾಪುರ ಮತ್ತು ಕೋಟಗಲ್ಲು ಸಮೀಪದ ಖಾಸಗಿ ಸ್ವತ್ತಿನಲ್ಲಿ ನಡೆಯುತ್ತಿರುವ ಕಲ್ಲು ಕ್ರಷರ್‌ವೊಂದು ಅಲ್ಲಿನ ಸುತ್ತಮುತ್ತಲ ಗ್ರಾಮಗಳಿಗೆ ನರಕವನ್ನೇ ಸೃಷ್ಟಿ ಮಾಡಿಟ್ಟಿದ್ದು, ಅದರ ವಿವರಗಳನ್ನು ಇಲ್ಲಿ ಅನಾವರಣ ಮಾಡಿದೆ. ಈ ಕ್ವಾರಿ ಚಿಂತಾಮಣಿ ಪಟ್ಟಣಕ್ಕೆ 13 ಕಿ.ಮೀ ದೂರದಲ್ಲಿದೆ.

ಕ್ವಾರಿಗಳಿಂದ ಕೇಳಿಸುವ ರಕ್ಕಸಿರೂಪಿ ಸ್ಫೋಟಗಳು, ಇಡೀ ದಿನ ಕಿವಿಗೆ ಚಿತ್ರಹಿಂಸೆ ನೀಡುವ ಶಬ್ದ, ರಸ್ತೆಗಳ ಮೇಲೆ ಒಂದಾದ ಮೇಲೊಂದರಂತೆ ಕರ್ಕಶ ಸದ್ದು ಮಾಡಿಕೊಂಡು ಸಾಗುವ ಯಮರೂಪಿ ಟಿಪ್ಪರ್‌ ಲಾರಿಗಳು, ಕ್ವಾರಿಗಳಿಂದ ಮುಗಿಲೆತ್ತರಕ್ಕೇಳುವ ಕಲ್ಲಿನ ಧೂಳು, ಕಲುಷಿತವಾಗುತ್ತಿರುವ ಸ್ವಚ್ಛ ಗಾಳಿ, ಜಾನುವಾರುಗಳೂ ಕುಡಿಯಲಾಗದ ವಿಷಕಾರಿ ಜಲಮೂಲಗಳಿಂದ ನರಸಾಪುರ, ಕೋಟಗಲ್ಲು, ಸುಜ್ಜನಹಳ್ಳಿ, ಕುರುಮಾಕಲಹಳ್ಳಿ, ಅನಕಲ್ಲು, ಬೋಡನಮರಿ ಗ್ರಾಮಗಳ ಜನರು ನಿತ್ಯ ನರಕದಲ್ಲಿ ಜೀವಿಸುತ್ತಿದ್ದು, ಇವರತ್ತ ಜಿಲ್ಲಾಡಳಿತವಾಗಲಿ ಅಥವಾ ಜಿಲ್ಲೆಯ ಗಣಿ-ಭೂ ವಿಜ್ಞಾನ ಇಲಾಖೆಯಾಗಲಿ ಗಮನ ಹರಿಸುತ್ತಿಲ್ಲ. ಇನ್ನು ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ನಕ್ಷೆ ಚಿಂತಾಮಣಿ ಇರಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮ್ಯಾಪುಗಳೇ ಇದ್ದಹಾಗೆ ಕಾಣುತ್ತಿಲ್ಲ.

ಯಾವುದು ಈ ಕ್ವಾರಿ?

  • ನರಸಾಪುರದ ಬಳಿಯ ಕ್ವಾರಿಯ ನೋಟ.

ಪರವಾನಗಿ ಪಡೆದುಕೊಂಡೇ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಈ ಕ್ವಾರಿಯು ನ್ಯಾಯಾಲಯಗಳು ನೀಡಿರುವ ಎಲ್ಲ ಆದೇಶಗಳನ್ನು ಗಾಳಿಗೆ ತೂರಿದೆ ಎಂಬುದು ಸ್ಥಳಕ್ಕೆ ಹೋಗಿ ನೋಡಿದರೆ ಗೊತ್ತಾಗುತ್ತದೆ. ನರಸಾಪುರ ಮತ್ತು ಕೋಟಗಲ್ಲು ಗ್ರಾಮಗಳ ವ್ಯಾಪ್ತಿಯಲ್ಲಿ ಈ ಕ್ವಾರಿ ಇದ್ದು, ಅದರ ಕಲ್ಲುಬಂಡೆಗಳು ಕೋಟಗಲ್ಲು ಗ್ರಾಮದ ವ್ಯಾಪ್ತಿಯಲ್ಲಿದ್ದರೆ, ಯಂತ್ರಗಳು ನರಸಾಪುರ ವ್ಯಾಪ್ತಿಯಲ್ಲಿವೆ. ಆ ಕ್ವಾರಿಗೆ ಬೌಂಡ್ರಿ ಫಿಕ್ಸ್‌ ಆಗಿದ್ದರೂ ಅದನ್ನು ಮೀರಿ ಕಲ್ಲು ಹೊಡೆಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಏನಿಲ್ಲವೆಂದರೂ ದಿನಕ್ಕೆ 20 ಲೋಡ್‌ಗೂ ಹೆಚ್ಚು ಎಂ ಸ್ಯಾಂಡ್‌ ಮತ್ತು ಜೆಲ್ಲಿಯನ್ನು ಇಲ್ಲಿಂದ ಸಾಗಾಣೆ ಮಾಡಲಾಗುತ್ತಿದೆ ಎಂದು ನರಸಾಪರ ಗ್ರಾಮಸ್ಥರು ಹೇಳುವ ಮಾತು. ಆ ಟಿಪ್ಪರ್‌ ಲಾರಿಗಳ ರಭಸಕ್ಕೆ ರಸ್ತೆಗಳು ಕಿತ್ತುಹೋಗಿವೆ ಹಾಗೂ ಅವು ಸಾಗುವ ವೇಗಕ್ಕೆ ಜನ-ಜಾನುವಾರುಗಳು, ಮುಖ್ಯವಾಗಿ ವೃದ್ಧರು, ಮಕ್ಕಳು ಬೆಚ್ಚಿಬೀಳುತ್ತಿದ್ದಾರೆ ಎನ್ನುತ್ತಾರೆ ಅವರು.

ಸಂಜೆ ಹೊತ್ತಿಗೆ ಸ್ಫೋಟ, ನಡುಗುವ ಹಳ್ಳಿಗಳು

ಸ್ಥಳೀಯರನ್ನು ಮಾತನಾಡಿಸಿದಾಗ ಸಿಕೆನ್ಯೂಸ್‌ ನೌ.ಕಾಂ ಹಲವಾರು ಕರಾಳ ಸಂಗತಿಗಳನ್ನು ಕಂಡುಕೊಂಡಿತು. ಪ್ರತಿದಿನ ಸಂಜೆ ೬.೩೦ ಅಥವಾ ಅದಕ್ಕೆ ಕೊಂಚ ಆಸುಪಾಸು ಸಮಯದಲ್ಲಿ ಆ ಕ್ವಾರಿಯಲ್ಲಿ ಸ್ಫೋಟಗಳನ್ನು ಸಿಡಿಸಲಾಗುತ್ತದೆ. ಹೆಚ್ಚು ಆವರ್ತಕದಲ್ಲಿ ಸ್ಫೋಟಕಗಳನ್ನು ಸಿಡಿಸಲಾಗುತ್ತಿದೆ. ಇದರಿಂದ ನರಸಾಪುರ ಸೇರಿ ಅಕ್ಕಪಕ್ಕದ ಊರುಗಳ ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. ಕೆಲ ಹಳೆಯ ಮನೆಗಳ ಗೋಡೆಗಳಂತು ನೆಲಕ್ಕುರಳಿವೆ. ವಿಪರೀತ ಎನ್ನುವಷ್ಟು ಸದ್ದು ಕೇಳಿಸುತ್ತದೆ. ಸಂಜೆ ಹೊತ್ತು ಮಕ್ಕಳು, ವೃದ್ಧರ ಪಾಲಿಗಂತೂ ನರಕದ ಕ್ಷಣಗಳೇ ಸರಿ. ಅಲ್ಲಿ ಸ್ಫೋಟ ಆಗುತ್ತಿದ್ದಂತೆ ಮನೆಗಳಲ್ಲಿನ ಪಾತ್ರೆಗಳು ಚದುರಿ ಬೀಳುತ್ತಿವೆ. ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಶಿಕ್ಷಣಾಧಿಕಾರಿಗಳು ಈ ಮಕ್ಕಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಮುಖ್ಯವಾಗಿ ಈ ಕ್ವಾರಿಗೆ ಕೇವಲ ಅರ್ಧ ಕಿ.ಮೀ ದೂರದಲ್ಲಿ ವಾಸವಿ ವಿದ್ಯಾಸಂಸ್ಥೆಯ ಶಾಲೆ ಇದೆ. ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆಯೂ ಇದೆ. ಸ್ಫೋಟದ ತೀವ್ರತೆಗೆ ಈ ಶಾಲೆಗಳ ಕಟ್ಟಡಗಳು ಕೂಡ ಬಿರುಕು ಬಿಟ್ಟುಕೊಂಡಿವೆ. ಕಲ್ಲುಕ್ವಾರಿಯ ವಿಷಕಾರಿ ಧೂಳಿನ ಗಾಳಿಯನ್ನೇ ಈ ಮಕ್ಕಳು ಸೇವಿಸುತ್ತಿದ್ದಾರೆ. ಕಲುಷಿತ ನೀರನ್ನೇ ಕುಡಿಯುತ್ತಿದ್ದಾರೆ.

  • ನರಸಾಪುರದಲ್ಲಿ ಟಿಪ್ಪರ್‌ಗಳ ಸಂಚಾರದಿಂದ ಹಾಳಾಗಿರುವ ರಸ್ತೆ ಮತ್ತು ಧೂಳೆಬ್ಬಿಸುತ್ತ ಸಾಗುವ ಟಿಪ್ಪರ್‌ ಲಾರಿ.

ಬೆಟ್ಟದಲ್ಲಿರುವ ಜಿಂಕೆ, ನವಿಲುಗಳು ಸೇರಿ ಹಲವು ಪ್ರಾಣಿ ಪಕ್ಷಿಗಳು ಸತ್ತುಹೋಗಿವೆ. ಈ ಕ್ರಷರ್ʼಗಳ ಟಿಪ್ಪರ್ ಲಾರಿಗಳಿಂದ ರಸ್ತೆಗಳೆಲ್ಲ ಹಾಳಾಗಿ ಮನೆಗಳು ಧೂಳುಮಯವಾಗಿವೆ. ಅಕ್ಕಪಕ್ಕ ಇರುವ ಕೆರೆಗಳೆಲ್ಲ ಪೂರ್ಣವಾಗಿ ಕಲುಷಿತವಾಗಿದೆ. ಕ್ವಾರಿಯ ಪಕ್ಕದಲ್ಲೇ ಇರುವ ಕೆರೆಯು ಸಂಪೂರ್ಣವಾಗಿ ಕಲುಷಿತವಾಗಿದೆ. ಜನ-ಜಾನುವಾರುಗಳಿಗೆ ಜಲಮೂಲವಾದ ಈ ಕೆರೆಯಲ್ಲಿ ಪ್ರತಿ ಭಾನುವಾರ ಟಿಪ್ಪರ್‌ ಲಾರಿಗಳನ್ನು, ಯಂತ್ರಗಳನ್ನು ತೊಳೆಯಲಾಗುತ್ತದೆ. ಇದರಿಂದ ಆ ನೀರಿಗೆ ವಿಷಕಾರಿ ಅಂಶಗಳು ಸೇರ್ಪಡೆಯಾಗುತ್ತಿವೆ ಎಂದು ಊರಿನ ಜನ ಹೇಳುತ್ತಾರೆ.

ಹೊಸಕೋಟೆ ಲಿಂಕ್‌

ಕಲ್ಲಿನಲ್ಲಿ ಹೆಚ್ಚು ಆಳಕ್ಕೆ ಕೊರೆದು ಸ್ಫೋಟಿಸುತ್ತಿರುವ ಕಾರಣ ಜನರಿಗೆ ಭೂಕಂಪನದ ಅನುಭವ ಆಗುತ್ತಿದೆ. ಸುತ್ತಲೂ ಇರುವ ವ್ಯವಸಾಯ ಭೂಮಿಗಳಲ್ಲಿ ಬೆಳೆ ಆಗುತ್ತಿಲ್ಲ. ಎಲೆಗಳ ಮೇಲೆ ಕಲ್ಲಿನ ಧೂಳು ಕೂರುತ್ತಿರುವ ಪರಿಣಾಮ ಪರಿಸರದಲ್ಲಿ ಆಗಬೇಕಾದ ದ್ವಿತಿಸಂಸ್ಲೇ಼ಷಣ ಕ್ರಿಯೆ ಹಳಿತಪ್ಪಿದೆ. ವಿಷಕಾರಿ ಅನಿಲಗಳಿಂದ ಜನ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎನ್ನುವ ಸ್ಥಳೀಯರು, ಇದೆಲ್ಲವೂ ಜಿಲ್ಲಾಡಳಿತಕ್ಕೆ ಚೆನ್ನಾಗಿ ಗೊತ್ತಿದೆ. ಗಣಿ ಇಲಾಖೆಗೆ ನಾವು ಕರೆ ಮಾಡಿ ತಿಳಿಸಿದ್ದೇವೆ. ಅಟ್‌ಲೀಸ್ಟ್‌ ಒಬ್ಬ ಅಧಿಕಾರಿಯೂ ಇಲ್ಲಿಗೆ ಬಂದು ನೋಡಿಲ್ಲ. ಹೊಸಕೋಟೆಯ ರಾಜಕೀಯ ಪ್ರಭಾವಿಯೊಬ್ಬರ ಕೃಪಾಕಟಾಕ್ಷದಲ್ಲಿ ಈ ಕ್ರಷರ್‌ ನಡೆಯುತ್ತಿದೆ. ಹೀಗಾಗಿ ಅವರ ವಿರುದ್ಧ ಮಾತನಾಡಲು ಸ್ಥಳೀಯರು ಹೆದರುತ್ತಿದ್ದಾರೆ ಎಂಬುದು ಅವರ ಮಾತುಗಳಲ್ಲೇ ಗೊತ್ತಾಯಿತು.

ಪಕ್ಕದ ನರಸಾಪುರ ಬೆಟ್ಟಕ್ಕೂ ಕುತ್ತು

ಒಂದೆಡೆ ಕೋಟಗಲ್ಲು-ನರಸಾಪುರ ಗ್ರಾಮಗಳು ಮೇಲಿನ ಕ್ರಷರ್‌ನಿಂದ ನರಕಸದೃಶ ಸ್ಥಿತಿಗೆ ಸಿಲುಕಿದ್ದರೆ ಆ ಕ್ವಾರಿಗೆ ಅರ್ಧ ಕಿ.ಮೀ ದೂರದಲ್ಲಿರುವ ನರಸಾಪುರ ಬೆಟ್ಟದ ಮೇಲೂ ಕಲ್ಲುರಕ್ಕಸರ ಕಣ್ಣು ಬಿದ್ದಿದೆ. ಈ ಬೆಟ್ಟವನ್ನು ಬಗೆಯಲು ಜಿಲ್ಲಾಡಳಿತ ಈಗಾಗಲೇ ಅನುಮತಿ ನೀಡಿದೆ ಎಂದು ಗೊತ್ತಾಗಿದ್ದು, ಅಲ್ಲಿ ಬೃಹತ್ತಾದ ಕ್ವಾರಿ ಬರಲಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಕ್ವಾರಿ ಆರಂಭವಾದರೆ ನರಸಾಪುರಕ್ಕೆ ಮಾತ್ರವಲ್ಲದೆ ಕೋಟಗಲ್ಲು, ಅನಕಲ್ಲು, ಸುಜ್ಜನಹಳ್ಳಿ, ಕುರುಮಾಕಲಹಳ್ಳಿಗೆ ಕತ್ತು ಉಂಟಾಗುವುದು ಖಚಿತ. ವಿಶೇಷವೆಂದರೆ ಈ ಬೆಟ್ಟದ ಬಗ್ಗೆ ಸ್ಥಳೀಯರಿಗೆ ಭಕ್ತಿಭಾವನೆ ಇದೆ. ಗ್ರಾಮ ದೇವರುಗಳಾದ ಕರಿಕಲಮ್ಮ, ಮುನಿಯಪ್ಪ ಸ್ವಾಮಿ ಆಲಯಗಳು ಬೆಟ್ಟದಲ್ಲಿವೆ. ಜನರು ಭಕ್ತಿಶ್ರದ್ಧೆಗಳಿಂದ ಈ ಬೆಟ್ಟಕ್ಕೆ ನಡೆದುಕೊಳ್ಳುತ್ತಾರೆ. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ದೇಶಾದ್ಯಂತ ನಿಧಿ ಸಮರ್ಪಣಾ ಅಭಿಯಾನ ನಡೆಯುತ್ತಿರುವ ಹೊತ್ತಿನಲ್ಲಿಯೇ ತಲೆ ತಲೆಮಾರುಗಳಿಂದ ಪೂಜಿಸಿಕೊಂಡು ಬರುತ್ತಿರುವ ಬೆಟ್ಟಗಳಲ್ಲಿನ ಗ್ರಾಮ ದೇವರುಗಳನ್ನು ರಾಕ್ಷಸಿ ಪ್ರವೃತ್ತಿಯಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಹೀಗಿದ್ದರೂ ಆ ಬೆಟ್ಟವನ್ನು ಕಡಿಯಲು ಅನುಮತಿ ನೀಡಲಾಗಿದೆ. ಕೆಲ ವರ್ಷಗಳ ಹಿಂದೆ ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡೆ ಬೆಟ್ಟದ ಮೇಲಿನ ದೇಗುಲವನ್ನೇ ಧ್ವಂಸ ಮಾಡಿಸಿದ್ದ ಚಿಕ್ಕಬಳ್ಳಾಪುರದ ಹಿಂದಿನ ಜಿಲ್ಲಾಧಿಕಾರಿಯೊಬ್ಬರು ಆ ದೇವರ ವಿಗ್ರಹವನ್ನೇ ವಾಹನದಲ್ಲಿ ತುಂಬಿಕೊಂಡು ಹೋಗಿದ್ದರು. ಆ ದೇವರ ವಿಗ್ರಹ ಎಲ್ಲಿ ಹೋಯಿತು ಎಂಬುದು ಇನ್ನೂ ಪತ್ತೆಯಾಗಿಲ್ಲ.

  • ನರಸಾಪುರ ಬೆಟ್ಟ

ಒಂದೆಡೆ ನಮ್ಮ ಸನಾತನ ಧರ್ಮವನ್ನು ಮರುಸ್ಥಾಪನೆ ಮಾಡಿ ಭಾರತವನ್ನು ವಿಶ್ವಗುರು ಮಾಡುತ್ತೇವೆ ಎಂದು ಭಜನೆ ಮಾಡುತ್ತಿರುವ ಬಿಜೆಪಿ ಸರಕಾರಗಳ ಕಾಲದಲ್ಲಿಯೇ ಪಾರಂಪರಿಕವಾಗಿ ನಾವು ಆರಾಧನೆ ಮಾಡಿಕೊಂಡು ಬಂದಿರುವ ಪ್ರಕೃತಿಯನ್ನು ಲೂಟಿ ಮಾಡಲು ದೊಡ್ಡ ಯಜ್ಞವೇ ನಡೆದಿದೆ. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯಲ್ಲಿ ಅದು ಅಂಕೆ ಮೀರಿ ನಡೆದಿದೆ. ಹೇಳುವುದೊಂದು, ಮಾಡುವುದೊಂದು!! ಇಂಥ ಬಿಜೆಪಿಯನ್ನು, ಇತಿಹಾಸ ಮತ್ತು ಜನರು ಕ್ಷಮಿಸುವುದಿಲ್ಲ.

  • ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ..
ಕಾನೂನಿಗೆ ಕಿಮ್ಮತ್ತಿಲ್ಲ, ಜನರ ಬಗ್ಗೆ ಕಾಳಜಿ ಇಲ್ಲ; ರಾತ್ರಿ ಎಲ್ಲರೂ ಮಲಗಿದ ಮೇಲೆ ಕಲ್ಲು ಕ್ವಾರಿಗಳಲ್ಲಿ ಸ್ಫೋಟ, ಆರೋಗ್ಯ ಸಚಿವರ ಹುಟ್ಟೂರಿಗೆ ಕೂಗಳತೆ ದೂರದಲ್ಲೇ ಕ್ರಷರ್‌ಗಳ ಕರಾಳಲೋಕ‌
  • ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ..
ಕೃಷಿ ಉಳಿಯದಿದ್ದರೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಉಳಿಯುವುದಿಲ್ಲ; ಇಸ್ರೇಲ್‌ ಮಾದರಿ ಜಪ ಮಾಡಿದರೆ ಸಾಲದು, ಸಾಧಿಸಿ ತೋರಿಸಲು ದಾರಿಗಳಿವೆ..
Tags: chikkaballapurChintamaniillegal stone crusherkarnatakaNarasapurastone crusher
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಉತ್ತರ ಪ್ರದೇಶದ ನೋಯಿಡಾದಲ್ಲಿ ಭರದಿಂದ ಸಿದ್ಧವಾಗುತ್ತಿದೆ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ವಿರಾಜಮಾನ ಪ್ರತಿಮೆ; ವರ್ಷದಲ್ಲಿಯೇ ಲೋಕಾರ್ಪಣೆ

ಉತ್ತರ ಪ್ರದೇಶದ ನೋಯಿಡಾದಲ್ಲಿ ಭರದಿಂದ ಸಿದ್ಧವಾಗುತ್ತಿದೆ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ವಿರಾಜಮಾನ ಪ್ರತಿಮೆ; ವರ್ಷದಲ್ಲಿಯೇ ಲೋಕಾರ್ಪಣೆ

Leave a Reply Cancel reply

Your email address will not be published. Required fields are marked *

Recommended

ಕಾಂಗ್ರೆಸ್‌ ಸೋತರೆ ಸಿದ್ದು ಕುರ್ಚಿಗೆ ಸಂಚಕಾರ: ಭೈರತಿ ಸುರೇಶ್

ಕಾಂಗ್ರೆಸ್‌ ಸೋತರೆ ಸಿದ್ದು ಕುರ್ಚಿಗೆ ಸಂಚಕಾರ: ಭೈರತಿ ಸುರೇಶ್

1 year ago
ಹಿರಿಯ ಪತ್ರಕರ್ತಕನಿಗೆ ಒಲಿದ ಕನ್ನಡ ಪರಿಚಾರಿಕೆಯ ಅದೃಷ್ಟ

ಹಿರಿಯ ಪತ್ರಕರ್ತಕನಿಗೆ ಒಲಿದ ಕನ್ನಡ ಪರಿಚಾರಿಕೆಯ ಅದೃಷ್ಟ

3 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ