• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಜಸ್ಟೀಸ್ ರಾಮಾಜೋಯಿಸ್‌: ವಕೀಲ, ನ್ಯಾಯಮೂರ್ತಿ, ರಾಜ್ಯಸಭೆ ಸದಸ್ಯ, ರಾಜ್ಯಪಾಲರು‌ ಮತ್ತೂ ಮಾನವೀಯತೆಯುಳ್ಳ ಸಹೃದಯತೆಯ ಪರಿಪೂರ್ಣ ಜೀವಿ

cknewsnow desk by cknewsnow desk
February 16, 2021
in GUEST COLUMN, STATE
Reading Time: 2 mins read
0
ಜಸ್ಟೀಸ್ ರಾಮಾಜೋಯಿಸ್‌: ವಕೀಲ, ನ್ಯಾಯಮೂರ್ತಿ, ರಾಜ್ಯಸಭೆ ಸದಸ್ಯ, ರಾಜ್ಯಪಾಲರು‌ ಮತ್ತೂ ಮಾನವೀಯತೆಯುಳ್ಳ  ಸಹೃದಯತೆಯ ಪರಿಪೂರ್ಣ ಜೀವಿ
924
VIEWS
FacebookTwitterWhatsuplinkedinEmail
  • ಕನ್ನಡಿಗರಷ್ಟೇ ಅಲ್ಲ, ಭಾರತೀಯರೆಲ್ಲರೂ ಮರೆಯಬಾರದ ಕೆಲವೇ ವ್ಯಕ್ತಿಗಳಲ್ಲಿ ರಾಮಾಜೋಯಿಸ್‌ ಅವರು ಖಂಡಿತಾ ಒಬ್ಬರು. ಅವರು ನಡೆದಾಡಿದ ಹಾದಿಯೆಲ್ಲವೂ ಆದರ್ಶಮಯ. ಮೌಲ್ಯಗಳಿಗಾಗಿ ಬದುಕಿ-ಬಾಳಿದ ನವ ತಲೆಮಾರಿಗೆ ಬಿಟ್ಟುಹೋದ ಬೌದ್ಧಿಕ ಸಂಪತ್ತು ಅನನ್ಯ. ಅವರ ಬದುಕೇ ಒಂದು ಪಾಠ. ಅವರೇ ಒಂದು ಜ್ಞಾನಕೋಶ. ಅಂಥ ಮೇರುವ್ಯಕ್ತಿ 2021 ಫೆಬ್ರವರಿ 16ರಂದು ಅಗಲಿದ್ದಾರೆ. ರಾಮಾಜೋಯಿಸ್‌ ಅವರನ್ನು ಅನೇಕ ವರ್ಷಗಳ ಕಾಲ ಬಹಳ ಹತ್ತಿರದಿಂದ ಒಡನಾಡಿದ ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣರು ಇಲ್ಲಿ ಸ್ಮರಿಸಿದ್ದಾರೆ.

ಅದು ಐವತ್ತರ ದಶಕದ ಕೊನೆಯ ಚರಣ. ಶಿವಮೊಗ್ಗದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಆರೆಸ್ಸೆಸ್‌ನ ಸಂಘ ಶಿಕ್ಷಾವರ್ಗ ಏರ್ಪಟ್ಟಿತ್ತು. ಮಧ್ಯದಲ್ಲಿ ಒಂದು ದಿನ ಶಿಕ್ಷಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ. ಶಿಬಿರದಲ್ಲಿ ವ್ಯವಸ್ಥೆಯ ದೃಷ್ಟಿಯಿಂದ ಆಗಿರಬಹುದಾದ ತಪ್ಪುಗಳ ಬಗ್ಗೆ ಒಂದು ಅದಾಲತ್‌ ಕಾರ್ಯಕ್ರಮ. ಆ ಅದಾಲತ್‌ ಕಾರ್ಯಕ್ರಮದಲ್ಲಿ ನ್ಯಾಯಾಧೀಶರ ಪಾತ್ರ ವಹಿಸಿದಾತ ಒಬ್ಬ ತರುಣ. ಆಗಿನ್ನೂ ಪದವಿ ಮುಗಿಸಿದ್ದ. ನ್ಯಾಯಾಧೀಶರ ಪಾತ್ರ ವಹಿಸಿ ಆತ ನೀಡುತ್ತಿದ್ದ ಚುರುಕಿನ ತೀರ್ಪುಗಳು ಅಲ್ಲಿದ್ದ ಸಂಘದ ಹಿರಿಯ ಪ್ರಚಾರಕರಾಗಿದ್ದ ಯಾದವ್‌ರಾವ್‌ ಜೋಷಿ ಅವರ ಗಮನ ಸೆಳೆಯಿತು. ಕಾರ್ಯಕ್ರಮ ಮುಗಿದ ಬಳಿಕ ಆ ತರುಣನನ್ನು ಹತ್ತಿರ ಕರೆದು ʼಜಡ್ಜ್‌ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿರುವೆ. ನೀನೇಕೆ ಕಾನೂನು ಪದವಿ ಓದಿ ನ್ಯಾಯವಾದಿ ಆಗಬಾರದು?ʼ ಎಂದರು. “ಸರ್‌, ಮನೆಯಲ್ಲಿ ಬಡತನ. ಈಗ ಡಿಗ್ರಿ ಮುಗಿಸಿದ್ದೇ ದೊಡ್ಡದು. ಇನ್ನು ಲಾ ಓದಲು ದುಡ್ಡೆಲ್ಲಿ? ನಾನು ಯಾವುದಾದರೂ ಹೈಸ್ಕೂಲ್‌ನಲ್ಲಿ ಶಿಕ್ಷಕನಾಗಿ ದುಡಿಬೇಕೆಂದಿರುವೆ” ಎಂದು ಆ ತರುಣ ವಿನೀತನಾಗಿ ಹೇಳಿದ. ಆದರೆ, ಯಾದವ್‌ರಾವ್ ಜೀ ಬಿಡಲಿಲ್ಲ. “ಇಲ್ಲ. ನೀನು ಬೆಂಗಳೂರಿಗೆ ಬಾ. ನಿನಗೆ ಲಾ ಓದಲು ಎಲ್ಲ ವ್ಯವಸ್ಥೆ ಮಾಡುವೆ” ಎಂದು ಭರವಸೆ ಕೊಟ್ಟರು. ಆ ತರುಣ ಯಾದವ್‌ರಾವ್ ಜೀ ಮಾತಿಗೆ ಕಟ್ಟುಬಿದ್ದು ಬೆಂಗಳೂರಿಗೆ ಹೊರಟ.

ವಿಕ್ರಮದಲ್ಲಿ ಉಪ ಸಂಪಾದಕ

ಬೆಂಗಳೂರಿನಲ್ಲಿ ಚಾಮರಾಜಪೇಟೆಯ ವಿಕ್ರಮ ವಾರಪತ್ರಿಕೆಯಲ್ಲಿ ತಾತ್ಕಾಲಿಕ ಉಪ ಸಂಪಾದಕನ ಕೆಲಸ. ಕೊಡುತ್ತಿದ್ದ ವೇತನ ಅಷ್ಟೋಇಷ್ಟು. ಸಂಜೆಯಾದ ಬಳಿಕ ಲಾ ಕಾಲೇಜಿನಲ್ಲಿ ವ್ಯಾಸಂಗ. ವಿಕ್ರಮದಲ್ಲಿ ಕೊಡುತ್ತಿದ್ದ ವೇತನ ಕಾಲೇಜಿನ ಫೀಸಿಗೆ ಸರಿ ಹೊಂದುತ್ತಿತ್ತು. ಕೊನೆಗೂ ಆ ತರುಣ ಲಾ ಪದವಿಧರನಾದ. ವಕೀಲ ವೃತ್ತಿ ಆರಂಭಿಸಿದ. ಆತ ಕೈಗೆ ತೆಗೆದುಕೊಂಡ ಒಂದೊಂದು ಮೊಕದ್ದಮೆಗಳಲ್ಲೂ ಗೆಲುವು. ಜನಪ್ರಿಯ ವಕೀಲನೆನಿಸಿಕೊಂಡ. ಹೈಕೋರ್ಟ್‌ನಲ್ಲಿ ವೃತ್ತಿ ಆರಂಭಿಸಿ ಜನಪ್ರಿಯ ʼರಿಟ್‌ ಪಿಟಿಷನ್‌ ಲಾಯರ್‌ʼ ಎನಿಸಿಕೊಂಡ.

ಹೀಗೆ ಹೈಸ್ಕೂಲ್‌ ಶಿಕ್ಷಕನಾಗಿ ಎಲ್ಲೋ ಕಳೆದು ಹೋಗಬೇಕಿದ್ದ ಆ ತರುಣನೆ ಮುಂದೆ ಪ್ರಖ್ಯಾತ ನ್ಯಾಯಾಧೀಶ, ರಾಜ್ಯಪಾಲರೆನಿಸಿಕೊಂಡ. ಫೆಬ್ರವರಿ 16ರಂದು (2021) ನಿಧನರಾದ ಜಸ್ಟೀಸ್‌ ರಾಮಾಜೋಯಿಸ್‌. ನ್ಯಾಯವಾದಿಯಾದ ಬಳಿಕ ರಾಮಾಜೋಯಿಸ್‌ ಮತ್ತೆ ಹಿಂದುರಿಗಿ ನೋಡಲೇ ಇಲ್ಲ. 1975ರ ತುರ್ತು ಪರಿಸ್ಥಿತಿ ವೇಳೆ ಬಂಧನದಲ್ಲಿದ್ದ ವಾಜಪೇಯಿ, ಆಡ್ವಾಣಿ ಪರ ಕೋರ್ಟಿನಲ್ಲಿ ವಾದಿಸಿ, ಅವರನ್ನು ಬಿಡುಗಡೆಗೊಳಿಸುವಂತೆ ನ್ಯಾಯಾಲಯವನ್ನು ಆಗ್ರಹಿಸಿದ್ದರು. ಅವರ ವಾದ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ಸ್ವತಃ ರಾಮಾಜೋಯಿಸ್‌ ಅವರನ್ನೇ ದೇವರಾಜ ಅರಸು ಸರಕಾರ ʼಮೀಸಾʼ ಕಾಯ್ದೆಯಡಿ ಬಂಧಿಸಿ 21 ತಿಂಗಳ ಕಾಲ ಕಾರಾಗೃಹದಲ್ಲಿರಿಸಿತ್ತು!

ರಾಮಾಜೋಯಿಸ್‌ ಅವರ ಅದೃಷ್ಟದ ಬಾಗಿಲು ತೆರೆದಿದ್ದು ಆಗಲೇ ಇರಬಹುದು. ತುರ್ತು ಪರಿಸ್ಥಿತಿ ತೊಲಗಿ ಎಲ್ಲರ ಬಿಡುಗಡೆಯಾಗಿ ಕೇಂದ್ರದಲ್ಲಿ ಜನತಾ ಸರಕಾರದ ಆಡಳಿತ ಬಂದಾಗ ರಾಮಾಜೋಯಿಸ್‌ ನ್ಯಾಯಾಧೀಶರಾಗುವ ಭಾಗ್ಯ ತಾನಾಗಿಯೇ ಒಲಿಯಿತು. ಆ ನಂತರ ಪಂಜಾಬ್-ಹರಿಯಾಣ ಹೈಕೋರ್ಟ್‌ಗೆ ನ್ಯಾಯಮೂರ್ತಿ, ಬಳಿಕ ಮುಖ್ಯ ನ್ಯಾಯಮೂರ್ತಿಯೂ ಆಗಿ ನಿವೃತ್ತರಾದರು. ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೇರಿದಾಗ ರಾಮಾಜೋಯಿಸ್‌ ಬಿಹಾರ, ಆ ನಂತರ ಜಾರ್ಖಂಡ್‌ ರಾಜ್ಯಗಳ ರಾಜ್ಯಪಾಲರಾಗುವ ಅವಕಾಶವೂ ಒದಗಿ ಬಂತು. ಸರಕಾರಿ ಮಟ್ಟದ ಅನೇಕ ಉನ್ನತ ಮಟ್ಟದ ಸಮಿತಿಗಳಿಗೆ ಮಾರ್ಗದರ್ಶಕರಾಗಿ, ಸದಸ್ಯರಾಗಿ, ಅಧ್ಯಕ್ಷರಾಗಿ ಅವರ ಸೇವೆ ಪ್ರಶಂಸನೀಯ. ರಾಜ್ಯಸಭೆ ಸದಸ್ಯರಾಗಿಯೂ ಅವರ ಸೇವೆ ಸ್ಮರಣೀಯ.

ಪ್ರಜಾಪ್ರಭುತ್ವದ ದೇಗುಲದಲ್ಲಿ

ದೆಹಲಿಯಲ್ಲಿರುವ ಪ್ರಜಾಪ್ರಭುತ್ವದ ದೇಗುಲ ಪಾರ್ಲಿಮೆಂಟ್‌ ಭವನವನ್ನು ವೀಕ್ಷಿಸಿದಾಗ ಎಂಥವರಿಗೂ ಅದರ ಭವ್ಯತೆ, ಮಹಾನತೆ ನೋಡಿ ಆನಂದವಾಗದೇ ಇರದು. ಭವ್ಯ ಹಾಗೂ ಸುಂದರ ಕಟ್ಟಡವಾಗಿ ಕಾಣುವ ಅದು ಒಳಗೂ ಕೂಡ ತನ್ನ ಸೌಂದರ್ಯವನ್ನು ಕಾಪಾಡಿಕೊಂಡಿದೆ. ಆ ಸೌಂದರ್ಯವನ್ನು ಕಾಣುವ ಒಳಗಣ್ಣು ಅಲ್ಲಿಗೆ ಹೋದವರಿಗೆ ಇರಬೇಕಷ್ಟೇ. ದೆಹಲಿಯ ಸಂಸತ್‌ ಭವನದ ಒಳಗಿನ ಸೌಂದರ್ಯವನ್ನು ಕಣ್ಣಾರೆ ಕಂಡು ಸಂತಸಪಟ್ಟವರಲ್ಲಿ ರಾಜ್ಯಸಭೆ ಸದಸ್ಯರಾಗಿದ್ದ ರಾಮಾಜೋಯಿಸ್‌ ಪ್ರಮುಖರು. ಸಂಸತ್‌ ಭವನದ ಒಳನೋಟದ ಸೌಂದರ್ಯವನ್ನು ತಾವೊಬ್ಬರೇ ಸವಿದರೆ ಸಾಲದು, ಅದನ್ನು ಉಳಿದವರು ಸವಿಯುವಂತೆ ಆಗಬೇಕು, ಸವಿದು ಕೃತಾರ್ಥರಾಗಬೇಕು ಎಂಬ ಹಂಬಲದಿಂದ ಅವರು ಸಂಸತ್‌ ಭವನದೊಳಗಿನ ಸೌಂದರ್ಯವನ್ನು ಪುಸ್ತಕರೂಪದಲ್ಲಿ ದಾಖಲಿಸಿದ್ದರು. ಭಾರತದ ಸಂಸತ್‌ ಭವನದಲ್ಲಿ ಅಂಕಿತವಾಗಿರುವ ಸಂದೇಶಗಳು ಎಂಬ ಶೀರ್ಷಿಕೆಯಡಿಯಲ್ಲಿ ಆ ಪುಸ್ತಕ ಪ್ರಕಟವಾಗಿದೆ. ಇಂಗ್ಲೀಷ್‌ನಲ್ಲೂ Message From Parliament House Bharat ಎಂಬ ಹೆಸರಿನಲ್ಲಿ ಪ್ರಕಟವಾಗಿ ದೇಶದ ಗಣ್ಯಾತಿಗಣ್ಯರೆಲ್ಲ ಅದನ್ನು ಪ್ರಶಂಸಿದ್ದಾರೆ. ಅಸಲಿಗೆ ಆ ಪುಸ್ತಕದಲ್ಲಿ ಇರುವುದಾದರೂ ಏನು?

2008ರ ಜೂನ್‌ 16ರಂದು ರಾಜ್ಯಸಭೆಗೆ ಚುನಾಯಿತರಾದ ರಾಮಾಜೋಯಿಸ್‌ ಪ್ರಮಾಣ ವಚನ ಸ್ವೀಕರಿಸಿದ್ದು ಅಗಸ್ಟ್‌ 12ರಂದು. ಅದೇ ವರ್ಷದ ಅಗಸ್ಟ್‌ 17ರಂದು ಸಂಸತ್‌ ಭವನದಲ್ಲಿ ಅವರಿಗೆ ನಿಗಧಿಯಾಗಿದ್ದ ಸ್ಥಾನದಲ್ಲಿ ಕುಳಿತುಕೊಳ್ಳಲೆಂದು ದ್ವಾರದ ಬಳಿ ಹೋದಾಗ ಅವರು ಮೊದಲು ಗುರುತಿಸಿದ್ದು ಒಳಗೆ ಕುಳಿತಿದ್ದ ಇತರೆ ಸದಸ್ಯರನ್ನಲ್ಲ. ಆದರೆ, ಆ ದ್ವಾರದ ಮೇಲ್ಭಾಗದಲ್ಲಿ ಸಿಮೆಂಟ್‌ನಲ್ಲಿ ದೇವನಾಗರಿ ಲಿಪಿಯಲ್ಲಿ ಬಂಗಾರದ ಬಣ್ಣದಲ್ಲಿ ಕೆತ್ತಲಾಗಿದ್ದ ಭಗವದ್ಗೀತೆಯ ʼಸ್ವೇ ಸ್ವೇ ಕರ್ಮಣ್ಯ ಭಿರತಃ ಸಂಸಿದ್ಧಿಂ ಲಭತೇ ನರಃʼ ಎಂಬ ೧೮ನೇ ಅಧ್ಯಾಯದ ೪೫ನೇ ಶ್ಲೋಕವನ್ನು. ʼಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪಾಲಿಗೆ ಬಂದ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸರಿಯಾಗಿ, ಪ್ರಾಮಾಣಿಕವಾಗಿ ನಿರ್ವಹಿಸಿದರೆ ಜೀವನದಲ್ಲಿ ಯಶಸ್ಸು ಖಂಡಿತಾ ಲಭ್ಯʼ ಎಂಬುದೇ ಆ ಶ್ಲೋಕದ ಅರ್ಥ. ಸಂಸತ್‌ ಭವದ ಉಳಿದ ದ್ವಾರಗಳನ್ನು ಗಮನಿಸಿದಾಗ ರಾಮಾಜೋಯಿಸ್‌ ಅವರಿಗೆ ಅಲ್ಲೆಲ್ಲ ಭಗವದ್ಗೀತೆ, ರಾಮಾಯಣ, ಮಹಾಭಾರತ, ಪಂಚತಂತ್ರ, ತೈತ್ತೇರಿಯಾ ಉಪನಿಷತ್‌ ಶಿಕ್ಷಾವಲ್ಲಿ, ಋಗ್ವೇದ, ಮನುಸೃತಿ, ಮುಂಡಕೋಪನಿಷತ್‌, ಕೌಟಿಲ್ಯನ ಅರ್ಥಶಾಸ್ತ್ರ, ಶುಕ್ರನೀತಿಯಲ್ಲಿ ಹೇಳಿದ ರಾಜಧರ್ಮ ಮುಂತಾದವುಗಳಿಂದ ಆಯ್ದ ಶ್ಲೋಕಗಳು ಕಂಡು ಬಂದವು.

ಮಾರ್ಗರೇಟ್‌ ಆಳ್ವಾ ನೀಡಿದ ಪ್ರತಿಕ್ರಿಯೆ

ಸಂಸತ್‌ ಭವನದ ದ್ವಾರ ದ್ವಾರಗಳ ಮೇಲೆ, ಗೋಡೆ ಗೋಡೆಗಳ ಮೇಲೆ ಸದಸ್ಯರಿಗೆ ಅದ್ಭುತ ಜ್ಞಾನದ ಝರಿಯನ್ನೇ ಹರಿಸು ಶ್ಲೋಕ, ಸೂಕ್ತಿಗಳನ್ನು ಬರೆದಿದ್ದ ಪುಣ್ಯಾತ್ಮನಾದರೂ ಯಾರು? ಎಂದು ರಾಮಾಜೋಯಿಸ್‌ ತಲೆಕೆಡಿಸಿಕೊಂಡು ಸಂಶೋಧನೆ ಮಾಡಿದಾಗ ಅವರಿಗೆ ಇನ್ನಷ್ಟು ಕುತೂಹಲಕರ ಮಾಹಿತಿಗಳು ದೊರೆತವು. ಲೋಕಸಭೆಯ ಮೊದಲನೇ ಅಧ್ಯಕ್ಷರಾಗಿದ್ದ ಗಣೇಶ್‌ ವಾಸುದೇವ ಮಾವಳಂಕರ್‌ (ಜಿ.ವಿ.ಮಾವಳಂಕರ್‌) ಅವರು ರಚಿಸಿದ್ದ ಇನ್‌ಸ್ಕ್ರಿಪ್ಷನ್‌ ಸಮಿತಿ ಈ ಕೆಲಸ ನಿರ್ವಹಿಸಿದ್ದೆಂದು ತಿಳಿದುಬಂತು. ರಾಮಾಜೋಯಿಸ್‌ ಅವರು ಇದನ್ನೆಲ್ಲ ಸಂಗ್ರಹಿಸಿ ಆ ಪುಸ್ತಕವನ್ನು ಎಲ್ಲ ಪ್ರಮುಖರಿಗೂ ಕಳಿಸಿದರು. ಹಿಂದೆ ಕೇಂದ್ರ ಸಚಿವರಾಗಿದ್ದ, ಅನಂತರ ಉತ್ತರಾಖಂಡದ ರಾಜ್ಯಪಾಲರಾದ ಮಾರ್ಗರೇಟ್‌ ಆಳ್ವಾ ಅವರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? “I spent 30 years in Parliament. But this is for the first time that I have read and deciphered the messages engraved in the Parliament house building. They are truly inspiring and meaningful.” (30 ವರ್ಷ ಕಾಲ ಪಾರ್ಲಿಮೆಂಟ್‌ನಲ್ಲಿ ಕಳೆದಿದ್ದರೂ ಮೊದಲನೇ ಬಾರಿಗೆ ಈ ಸಂದೇಶಗಳನ್ನು ನಿಮ್ಮ ಪುಸ್ತಕದಲ್ಲಿ ನೋಡುತ್ತಿರುವೆ. ಅವು ನಿಜಕ್ಕೂ ಪ್ರೇರಣಾದಾಯಕ ಹಾಗೂ ಅರ್ಥಪೂರ್ಣ.)

ರಾಮಾಜೋಯಿಸ್‌ ನಗರ

ರಾಮಾಜೋಯಿಸ್‌ ಅವರು ಇದಲ್ಲದೆ ಇನ್ನೂ ಹಲವು ಉಪಯಕ್ತ ಗ್ರಂಥಗಳನ್ನು ಇಂಗ್ಲಿಷ್‌ ಹಾಗೂ ಕನ್ನಡದಲ್ಲಿ ಬರೆದಿದ್ದಾರೆ. ಸಂವಿಧಾನ, ಕಾನೂನು-ಕಟ್ಟಳೆ ಕುರಿತು ಅವರು ನೀಡಿರುವ ನೀಡಿರುವ ಹಲವು ಮಹತ್ವದ ತೀರ್ಪುಗಳು ಈಗಲೂ reference judgement ಗಳಾಗಿ ಬಳಸಲ್ಪಡುತ್ತಿವೆ. ತುಮಕೂರು ಬಳಿಯ ದಲಿತ ಕೇರಿಯ ನಿವಾಸಿಗಳ ಜಮೀನನ್ನು ಯಾರೋ ಪಟ್ಟಭದ್ರರು ವಶಪಡಿಸಿಕೊಂಡು ತೊಂದರೆ ನೀಡಿದಾಗ, ರಾಮಾಜೋಯಿಸ್‌ ದಲಿತ ಬಂಧುಗಳ ಪರ ವಕಾಲತ್ತು ವಹಿಸಿ, ಅವರಿಗೆ ನ್ಯಾಯ ಸಿಗುವಂತೆ ಮಾಡಿದ ಧೀಮಂತ ನ್ಯಾಯಮೂರ್ತಿ. ಮತ್ತೆ ಭೂಮಿ ಪಡೆದುಕೊಂಡ ಆ ದಲಿತರು ತಮ್ಮ ಕೇರಿಗೆ ʼರಾಮಾಜೋಯಿಸ್‌ ನಗರʼ ಎಂದು ನೂತನ ನಾಮಕರಣ ಮಾಡಿದ್ದು ರಾಮಾಜೋಯಿಸ್‌ ಅವರ ಸಾಮಾಜಿಕ ಸಾಮರಸ್ಯ, ಸಮಾನತೆ, ಮಾನವೀಯ ಅನುಕಂಪಕ್ಕೆ ಸಂಕೇತ.

ಹಿಂದಿನಿಂದಲೂ ನನ್ನ ಪರಿಚಯವಿದ್ದ ರಾಮಾಜೋಯಿಸ್‌ ಹೊಸದಿಗಂತ ಮತ್ತು ವಿಕ್ರಮ ಪತ್ರಿಕೆಗಳ ಹಲವು ಕಾರ್ಯಕ್ರಮಗಳಿಗೆ ಆಗಮಿಸಿ ಹರಸಿದ್ದರು. ಬೆನ್ನು ತಟ್ಟಿದ್ದರು. ಉತ್ತಮ ಅಂಕಣಗಳನ್ನು ಬರೆದ ದಿನ ತಪ್ಪದೇ ನನಗೆ ಫೋನ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದ ಆ ಹೃದಯವಂತರನ್ನು ನಾನು ಹೇಗೆ ಮರೆಯಲಿ?

ಸರಳತೆ, ಶಿಸ್ತು, ಸಜ್ಜನಿಕೆ, ಪ್ರಾಮಾಣಿಕತೆ, ಸಂಸ್ಕಾರಭರಿತ ವ್ಯಕ್ತಿತ್ವದ ಪ್ರತಿರೂಪವೇ ಅವರಾಗಿದ್ದರು ಎಂದರೆ ಖಂಡಿತಾ ಅದು ಅತಿಶಯೋಕ್ತಿ ಅಲ್ಲ. ಸಾದಾರಣಾಗಿ ಗಂಭೀರ ವದನರಾಗಿರುವ ಜಡ್ಜ್‌ಗಳನ್ನು ಮಾತನಾಡಿಸುವುದೇ ಕಷ್ಟ. ಆದರೆ, ರಾಮಾಜೋಯಿಸ್‌ ಅದಕ್ಕೆ ಅಪವಾದ. ಬೇರೆಯವರು ಮಾತನಾಡಿಸುವ ಮುನ್ನವೇ ಅವರೇ ಪ್ರೀತಿಯಿಂದ ಸಲುಗೆಯಿಂದ ಮಾತನಾಡಿಸಿ ಕುಶಲ ವಿಚಾರಿಸುತ್ತಿದ್ದರು. ಆಗೆಲ್ಲ ಅವರು ನಮಗೆ ಜಡ್ಜ್‌ ಅನಿಸುತ್ತಲೇ ಇರಲಿಲ್ಲ. ನಮ್ಮ ಕುಟುಂಬದ ದೊಡ್ಡಪ್ಪನೋ ತಾತನೋ ಅವರಾಗಿದ್ದರು ಅನಿಸುತ್ತಿತ್ತು.

ತೀರ್ಥಹಳ್ಳಿ ತಾಲ್ಲೂಕು ಕುವೆಂಪು, ಹಾ.ಮಾ.ನಾಯಕ್‌, ಎಂ.ಕೆ.ಇಂದಿರಾ, ಅನಂತಮೂರ್ತಿ ಮೊದಲಾದ ಪ್ರಸಿದ್ಧ ಸಾಹಿತಿಗಳನ್ನು ನಾಡಿಗೆ ನೀಡಿದೆ. ಅದೇ ಸಾಲಿನಲ್ಲಿ ರಾಮಾಜೋಯಿಸ್‌ರವರಂಥ ಶ್ರೇಷ್ಠ ನ್ಯಾಯಮೂರ್ತಿಯನ್ನು ನೀಡಿದೆ ಎಂದಬುದು ಇಡೀ ಮಲೆನಾಡಿಗರಿಗೆ ಹೆಮ್ಮಯ ಸಂಗತಿ. ಸಂಘದ ಗರಡಿಯಲ್ಲಿ ಬೆಳೆದ ಅವರೊಬ್ಬ ಆದರ್ಶ ಸ್ವಯಂ ಸೇವಕ.


ದು.ಗು. ಲಕ್ಷ್ಮಣ

ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.

Tags: banagaloreJustice Mandagadde Rama JoiskarnatakaRama JoisRama Jois no more
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಪದವಿ ಕಾಲೇಜುಗಳಿಗೆ 8,000 ಬೋಧಕರ ನೇಮಕ; ಮುಂದೆ ಅತಿಥಿ ಉಪನ್ಯಾಸಕರೆಂಬ ಪರಿಕಲ್ಪನೆಯೇ ಇರುವುದಿಲ್ಲ ಎಂದ ಉಪ ಮುಖ್ಯಮಂತ್ರಿ

ಪದವಿ ಕಾಲೇಜುಗಳಿಗೆ 8,000 ಬೋಧಕರ ನೇಮಕ; ಮುಂದೆ ಅತಿಥಿ ಉಪನ್ಯಾಸಕರೆಂಬ ಪರಿಕಲ್ಪನೆಯೇ ಇರುವುದಿಲ್ಲ ಎಂದ ಉಪ ಮುಖ್ಯಮಂತ್ರಿ

Leave a Reply Cancel reply

Your email address will not be published. Required fields are marked *

Recommended

ಕನ್ನಡದ ಮೇಲೆ ಕಾಳಜಿ, ಜಿಲ್ಲೆಯ ಮೇಲೆ ಮಮತೆ, ನೆಲ-ಜಲ, ಭಾಷೆ ಬಗ್ಗೆ ಕಳಕಳಿ; ಸಪ್ತನದಿಗಳ ಪುನರುಜ್ಜೀವನದ ಕನಸು ಭಿತ್ತಿದ ಚಿಕ್ಕಬಳ್ಳಾಪುರ ಜಿಲ್ಲೆಯ ೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಕನ್ನಡದ ಮೇಲೆ ಕಾಳಜಿ, ಜಿಲ್ಲೆಯ ಮೇಲೆ ಮಮತೆ, ನೆಲ-ಜಲ, ಭಾಷೆ ಬಗ್ಗೆ ಕಳಕಳಿ; ಸಪ್ತನದಿಗಳ ಪುನರುಜ್ಜೀವನದ ಕನಸು ಭಿತ್ತಿದ ಚಿಕ್ಕಬಳ್ಳಾಪುರ ಜಿಲ್ಲೆಯ ೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

4 years ago
ಸರಳ ಜಂಬೂ ಸವಾರಿ; ಅಭಿಮನ್ಯು ಹೊತ್ತ ಅಂಬಾರಿಯಲ್ಲಿ ವಿರಾಜಮಾನರಾಗಿದ್ದ ಚಾಮುಂಡೇಶ್ವರಿ ಅಮ್ಮನವರಿಗೆ ನಮಿಸಿದ ನಾಡಜನ

ಸರಳ ಜಂಬೂ ಸವಾರಿ; ಅಭಿಮನ್ಯು ಹೊತ್ತ ಅಂಬಾರಿಯಲ್ಲಿ ವಿರಾಜಮಾನರಾಗಿದ್ದ ಚಾಮುಂಡೇಶ್ವರಿ ಅಮ್ಮನವರಿಗೆ ನಮಿಸಿದ ನಾಡಜನ

5 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ