• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home COVID-19

ನರೇಂದ್ರ ಮೋದಿ ಲಸಿಕೆ ರಾಯಭಾರ: ಹೊರಗೆ ಗುಣಗಾನ, ಒಳಗೆ ಅಪಮಾನ, ಪಾಕಿಸ್ತಾನದಲ್ಲೂ ಚೀನಾ ಮೇಲೆ ಅನುಮಾನ! ಭಾರತದ ಬಗ್ಗೆ ಅಭಿಮಾನ!! ಟೀಕೆ ವಿಪರ್ಯಾಸ ಮತ್ತು ವಿಪರೀತ

cknewsnow desk by cknewsnow desk
March 23, 2021
in COVID-19, GUEST COLUMN, STATE
Reading Time: 2 mins read
0
ಕೋಲಾರದ ವಿಸ್ಟ್ರಾನ್‌ ಐಫೋನ್‌ ಘಟಕದ ಮೇಲೆ ದಾಳಿ; ಪ್ರಧಾನಮಂತ್ರಿ ನರೇಂದ್ರ ಮೋದಿ ಕಳವಳಕ್ಕೆ ಕಾರಣವೇನು?
913
VIEWS
FacebookTwitterWhatsuplinkedinEmail
  • ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಅವರು ಎರಡು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಒಂದು: ಕೋವಿಡ್‌ ಬಗ್ಗೆ ಸ್ವತಃ ನಮ್ಮನ್ನಾಳುವ ನಾಯಕರು ತೋರುತ್ತಿರವ ನಿರ್ಲಕ್ಷ್ಮ. ಎರಡು: ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ ಲಸಿಕೆ ರಾಯಭಾರ. ಎರಡೂ ಮಹತ್ತ್ವದ ವಿಚಾರಗಳ ಬಗ್ಗೆ ಸೂಕ್ಷ್ಮವಾಗಿ ಅವರು ಅವಲೋಕನ ಮಾಡಿದ್ದಾರೆ.

ಕಳೆದೊಂದು ವರ್ಷಪೂರ್ತಿ ಕೋವಿಡ್ ಹೆಮ್ಮಾರಿ ಕಾಡಿದ ಪರಿ ವರ್ಣಿಸಲಸದಳ. ಈ ಹೆಮ್ಮಾರಿಯ ನಿಯಂತ್ರಣಕ್ಕಾಗಿ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಬೇಕಾಗಿ ಬಂತು. ಲಾಕ್‌ಡೌನ್ ಎಂದರೇನೆಂದು ಸಾಮಾನ್ಯ ಜನರಿಗೆ ಅದರ ಬಿಸಿ ತಟ್ಟಿದ್ದು ಆವಾಗಲೇ. ಕೋವಿಡ್ ಹೆಮ್ಮಾರಿ ನಿಯಂತ್ರಣಕ್ಕೆ ಲಾಕ್‌ಡೌನ್ ಅನಿವಾರ್ಯವಾಗಿದ್ದಿರಬಹುದು. ಆದರೆ ಇದರಿಂದಾದ ಅನಾಹುತಗಳು ಅಷ್ಟಿಷ್ಟಲ್ಲ. ವ್ಯಾಪಾರ ವಹಿವಾಟುಗಳಿಲ್ಲದೆ ಅಂಗಡಿ, ಹೋಟೆಲ್‌ಗಳು ಹೇಳತೀರದಷ್ಟು ನಷ್ಟ ಅನುಭವಿಸಿವೆ. ಸಣ್ಣಪುಟ್ಟ ವರ್ತಕರು, ಬೀದಿಬದಿಯ ವ್ಯಾಪಾರಿಗಳು ಸರ್ವನಾಶ ಹೊಂದಿದರು. ಬಹಳಷ್ಟು ಮಂದಿ ಕೆಲಸ, ಇದ್ದ ನೆಲೆ ಎರಡನ್ನೂ ಕಳೆದುಕೊಂಡು ತ್ರಿಶಂಕುವಾದರು. ಶೈಕ್ಷಣಿಕ ವಲಯ ಈಗಲೂ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಾಣವಾಗಿಲ್ಲ. ಸಣ್ಣ ಮಕ್ಕಳ ಮೇಲೆ ಈ ಶೂನ್ಯ ವರ್ಷವು ಉಂಟುಮಾಡಿರುವ ಮಾನಸಿಕ ದುಷ್ಪರಿಣಾಮ ಬಲು ಭೀಕರ. ಯಾವ ವಲಯವೂ ಈ ಒಂದು ವರ್ಷದಲ್ಲಿ ಬೆಳವಣಿಗೆಯನ್ನು ದಾಖಲಿಸಿಲ್ಲ. ಕೆಲವು ವಲಯದಲ್ಲಿ ಕೊಂಚ ಮಟ್ಟಿನ ಚೇತರಿಕೆ ಪ್ರಮಾಣ ನಗಣ್ಯವೆನಿಸುವಷ್ಟು ಕಂಡಿದೆ, ಅಷ್ಟೆ.

ಹೀಗಿರುವಾಗಲೇ ಇದೀಗ ದೇಶದಾದ್ಯಂತ ಕೊರೋನಾ ವೈರಸ್‌ನ ಎರಡನೇ ಅಲೆ ಮತ್ತೆ ಅಪ್ಪಳಿಸಿದೆ. ಅನೇಕ ರಾಜ್ಯಗಳಲ್ಲಿ (ಕರ್ನಾಟಕವೂ ಸೇರಿದಂತೆ) ಹೊಸ ಸೋಂಕು ಹರಡುವಿಕೆ ಹಚ್ಚಿದೆ. ಮತ್ತೆ ಲಾಕ್‌ಡೌನ್, ನೈಟ್ ಕರ್ಫ್ಯೂ, ಸಭೆ ಸಮಾರಂಭ, ಮದುವೆ ಮುಂಜಿಗಳಿಗೆ ನಿಷೇಧ/ ನಿರ್ಬಂಧ ಹೇರಬೇಕೆ ಎಂಬ ಗಂಭೀರ ಪ್ರಶ್ನೆಗೆ ಚಾಲನೆ ದೊರೆತಿದೆ.

ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ ಕೊರೋನಾ ವೈರಸ್ ಮತ್ತೆ ಅಟ್ಟಹಾಸದ ದಾಳಿ ನಡೆಸಿರುವುದು ಕಡಿಮೆ ಭಯಾನಕ ಸಂಗತಿಯಂತೂ ಖಂಡಿತ ಅಲ್ಲ. ಕೊರೋನಾ ದಾಳಿ ಮಾಡಿತ್ತು ಎಂಬುದನ್ನೇ ಮರೆತು ಬಿಂದಾಸ್ ಆಗಿ ಮಾಸ್ಕ್ ಧರಿಸದೆ, ಸ್ಯಾನಿಟೈಸರ್ ದ್ರಾವಣದ ಗೋಜಿಲ್ಲದೆ ಎಲ್ಲೆಂದರಲ್ಲಿ ತಿರುಗಾಡುವ ಜನರನ್ನು ನೋಡಿದರೆ ಕೋವಿಡ್‌ನ ಎರಡನೇ ಅಲೆ ಅದೆಂಥ ಅನಾಹುತಗಳನ್ನು ಸೃಷ್ಟಿಸಲಿದೆಯೋ ಎಂದು ಗಾಬರಿಯಾಗುವುದು ಸಹಜ.

ಜನರು ಹೀಗೆ ಬಿಂದಾಸ್ ಆಗಿ ಅಡ್ಡಾಡಲು ಕಾರಣಗಳಿಲ್ಲದಿಲ್ಲ. ಲಾಕ್‌ಡೌನ್ ತೆರವಾದ ಬಳಿಕ ದೊಡ್ಡ ಪ್ರಮಾಣದಲ್ಲಿ ಜರುಗಿದ್ದು ಸರ್ಕಾರಿ ಕಾರ್ಯಕ್ರಮಗಳು ಹಾಗೂ ರಾಜಕೀಯ ಸಭೆ ಸಮಾರಂಭಗಳು. ಇಂಥ ಕಡೆ ಮಾಸ್ಕ್ ಧರಿಸಬೇಕೆಂಬ ಬಗ್ಗೆ ಸರ್ಕಾರಕ್ಕೇ ಎಚ್ಚರಿಕೆಯಿರಲಿಲ್ಲ. ಯಾವುದೇ ಕೊರೋನಾ ಮುನ್ನೆಚ್ಚರಿಕೆಗಳಿಲ್ಲದೆ ಸಾಕಷ್ಟು ಸರ್ಕಾರಿ, ರಾಜಕೀಯ ಸಮಾರಂಭಗಳು ನಡೆದುಹೋಗಿವೆ. ಆದರೆ ಸರ್ಕಾರ ಜನಸಾಮಾನ್ಯರ ಮದುವೆಗಳಿಗೆ ನೂರು, ಐನೂರು ಎಂದೆಲ್ಲ ಸಂಖ್ಯಾಮಿತಿ ಹೇರಿ, ಮದುವೆಮನೆಗಳಿಗೆ ಮಾರ್ಷಲ್‌ಗಳನ್ನೂ ಕಳಿಸಿ ಕಿರಿಕಿರಿ ಮಾಡಿದ್ದು ಮಾತ್ರ ವಿಪರ್ಯಾಸದಲ್ಲಿ ವಿಪರ್ಯಾಸ. ನೂರು ಮಂದಿ ಸೇರಿದರೆ ವೈರಸ್ ದಾಳಿಯಾಗುತ್ತದೆ; ಆದರೆ ಸಾವಿರಾರು, ಲಕ್ಷಾಂತರ ಮಂದಿ ಸೇರುವೆಡೆ ವೈರಸ್ ಹರಡುವುದಿಲ್ಲ ಎಂಬುದು ಮಾತ್ರ ಬಲು ಸೋಜಿಗವೇ ಸರಿ!

ಸರ್ಕಾರ ಕೋವಿಡ್‌ನ ಕಠಿಣ ನಿರ್ಬಂಧಗಳನ್ನು ಮೊದಲು ತಾನು ಪಾಲಿಸಿದರೆ ಜನರೂ ಅದನ್ನು ಅನುಸರಿಸುತ್ತಾರೆ. ಸರ್ಕಾರವೇ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದರೆ ಜನರೇಕೆ ಅದನ್ನು ಅನುಸರಿಸುತ್ತಾರೆ? ಗಾದೆಯೇ ಇದೆಯಲ್ಲ- ಯಥಾ ರಾಜಾ ತಥಾ ಪ್ರಜಾ. ಯಾವುದೇ ಸಂದರ್ಭವಿರಲಿ, ಪ್ರಧಾನಿ ಮೋದಿ ಇತ್ತೀಚಿನವರೆಗೂ ಮಾಸ್ಕ್ ಧರಿಸದೆ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಅದರಿಂದಾಗಿ ದೇಶದ ಜನರಿಗೆ ತಾವೂ ಹೀಗೆಯೇ ಮಾಸ್ಕ್ ಧರಿಸಬೇಕು ಎಂದು ಮನವರಿಕೆಯಾಗುವುದು ಸ್ವಾಭಾವಿಕ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ಮಂತ್ರಿಗಳು, ಪ್ರತಿಪಕ್ಷ ನಾಯಕರು ಹೇಗೆಲ್ಲ ವರ್ತಿಸಿದರು ಎಂಬುದನ್ನು ಪ್ರತಿನಿತ್ಯ ಮಾಧ್ಯಮಗಳಲ್ಲಿ ಪ್ರಕಟವಾಗುವ ದೃಶ್ಯಾವಳಿಗಳೇ ಹೇಳುತ್ತವೆ! ಸಿದ್ದರಾಮಯ್ಯ ತೋಳಿಗೆ ಕೊರೋನಾ ಲಸಿಕೆ ಹಾಕಿಸಿಕೊಳ್ಳುವಾಗಲೂ ಅವರ ಸುತ್ತ ಮಾಸ್ಕ್ ಧರಿಸದೆ, ಅಂತರ ಕಾಪಾಡಿಕೊಳ್ಳದೆ ಒತ್ತೊತ್ತಾಗಿ ಜನ ನಿಂತಿರುವ ದೃಶ್ಯ ಏನನ್ನು ಸೂಚಿಸುತ್ತದೆ?

ಎರಡನೇ ಅಲೆ ಎದ್ದಿದೆಯೆಂದು ಈಗ ಮತ್ತೆ ಲಾಕ್‌ಡೌನ್‌ನಂತಹ ಕಠಿಣ ನಿರ್ಬಂಧ ಹೇರಿದರೆ ರಾಜ್ಯ, ದೇಶ ಸರ್ವನಾಶ ಹೊಂದುವುದು ನಿಶ್ಚಿತ. ಅದರ ಬದಲಿಗೆ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ಹೆಚ್ಚಿಸುವುದು, ಲಸಿಕೆ ಅಭಿಯಾನಕ್ಕೆ ಇನ್ನಷ್ಟು ರಭಸ ತಂದುಕೊಡುವುದು, ಕೇರಳ-ಮಹಾರಾಷ್ಟ್ರ- ತಮಿಳುನಾಡು ಗಡಿಗಳಲ್ಲಿ ಇನ್ನಷ್ಟು ನಿಗಾ ವಹಿಸುವುದು, ಸರ್ಕಾರದ್ದಿರಲಿ, ಖಾಸಗಿಯದ್ದಿರಲಿ ಯಾವುದೇ ಕಾರ್ಯಕ್ರಮಗಳಿಗೆ ಸಂಖ್ಯಾ ಮಿತಿಯನ್ನು ಕಡ್ಡಾಯವಾಗಿ ಜಾರಿ ಮಾಡುವುದು ಮೊದಲಾದ ಗರಿಷ್ಟ ನಿಯಂತ್ರಣ ಕ್ರಮ ಕೈಗೊಳ್ಳುವ ಅಗತ್ಯ ತುರ್ತಾಗಿದೆ. ಸಾರ್ವಜನಿಕರು ಕೂಡ ಸ್ವಯಂ ನಿರ್ಬಂಧ ವಿಧಿಸಿಕೊಂಡು ಆದಷ್ಟು ಮನೆಯೊಳಗೇ ಇರುವುದು ಸೂಕ್ತ. ಹಾಗೆ ಮಾಡದಿದ್ದರೆ ಎರಡನೇ ಅಲೆ ಏನೇನು ಅನಾಹುತಗಳನ್ನು ಸೃಷ್ಟಿಸಲಿದೆಯೋ ಯಾರೂ ಊಹಿಸುವಂತಿಲ್ಲ.


ಕೋವಿಡ್ ಹೆಮ್ಮಾರಿ ದೇಶದ ಪ್ರಗತಿಯನ್ನು ರಸಾತಳಕ್ಕೆ ತಳ್ಳಿರುವುದು ನಿಜ. ಆದರೆ ಕೋವಿಡ್ ಕಾರಣದಿಂದಾಗಿಯೇ ಇಂದು ಭಾರತದ ಕೀರ್ತಿ ಜಗದಗಲಕ್ಕೆ ಪಸರಿಸಿರುವುದೂ ಅಷ್ಟೇ ನಿಜ. ಅಮೆರಿಕ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್‌ನಂಥ ಬಲಾಢ್ಯ ದೇಶಗಳು ಕೋವಿಡ್ ನಿಯಂತ್ರಿಸಲು ಈಗಲೂ ಹೆಣಗುತ್ತಿರುವಾಗಲೇ ಭಾರತ ಮಾತ್ರ ಅಷ್ಟರೊಳಗೇ ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಉತ್ಪಾದಿಸಿ, 70 ದೇಶಗಳಿಗೆ ಪೂರೈಸಿ ದಾಖಲೆ ನಿರ್ಮಿಸಿರುವುದು ಕಡಿಮೆ ಸಾಧನೆಯಲ್ಲ.

ಈಗಾಗಲೇ 70 ದೇಶಗಳಿಗೆ 5 ಕೋಟಿ 85ಲಕ್ಷ ಡೋಸ್‌ಗಳಷ್ಟು ಲಸಿಕೆಯನ್ನು ಭಾರತ ರವಾನಿಸಿದೆ. ಈ ಪೈಕಿ ಸುಮಾರು 80 ಲಕ್ಷ ಡೋಸ್‌ಗಳಷ್ಟು ಲಸಿಕೆ 35 ದೇಶಗಳಿಗೆ ಉಚಿತವಾಗಿ ಪೂರೈಕೆಯಾಗಿದೆ. ಸುಮಾರು 3 ಕೋಟಿ 39 ಲಕ್ಷ ಡೋಸ್‌ಗಳಷ್ಟು ಲಸಿಕೆಯನ್ನು ಶುಲ್ಕ ಸಹಿತವಾಗಿ 15 ದೇಶಗಳಿಗೆ ಪೂರೈಸಿದೆ. ಸುಮಾರು 1 ಕೋಟಿ 64 ಲಕ್ಷ ಡೋಸ್‌ಗಳಷ್ಟು ಲಸಿಕೆಯನ್ನು 18 ದೇಶಗಳಿಗೆ ಕೋವ್ಯಾಕ್ಸ್ ಸೌಲಭ್ಯ ಒಪ್ಪಂದದಂತೆ ರವಾನೆಯಾಗಿದೆ. ಕಳೆದ ಜನವರಿ 20ರಿಂದಲೇ ಭೂತಾನ್, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್ ಮೊದಲಾದ ನೆರೆಯ ದೇಶಗಳಿಗೆ ಕೊರೋನಾ ಲಸಿಕೆಯ ಪೂರೈಕೆ ಆರಂಭಗೊಂಡಿದೆ. ನಮ್ಮನ್ನು ನಖಶಿಖಾಂತವಾಗಿ ದ್ವೇಷಿಸುವ ಭಾರತದ ಪರಮವೈರಿ ಪಾಕಿಸ್ತಾನಕ್ಕೂ ಇದೇ ಮಾರ್ಚ್ ತಿಂಗಳಲ್ಲಿ ಭಾರತದಿಂದ 4.5 ಕೋಟಿ ಡೋಸ್ ಲಸಿಕೆ ಉಚಿತವಾಗಿ ರವಾನೆಯಾಗಲಿದೆ!

ಶತ್ರು ದೇಶದಲ್ಲಿ ನಮ್ಮ ಲಸಿಕೆ!!

ಪಾಕಿಸ್ತಾನ ಸದ್ಯ ಚೀನಾದಿಂದ ಪೂರೈಕೆಯಾದ ಕೋವಿಡ್ ಲಸಿಕೆಯನ್ನು ಬಳಸುತ್ತಿದೆ. ಆದರದು ತೀರಾ ದುಬಾರಿ. ಲಸಿಕೆಯೊಂದಕ್ಕೆ 2000ರೂ. ಬೆಲೆ ತೆರಬೇಕಾಗಿದೆ. ಪಾಕಿಸ್ತಾನ ಸರ್ಕಾರದ್ದು ಈಗ ತೀರಾ ಆರ್ಥಿಕ ದುಸ್ಥಿತಿ. ಹಾಗಾಗಿ ಭಾರತದಿಂದ ಉಚಿತ ಲಸಿಕೆಯ ಬೇಡಿಕೆಯ ಪ್ರಸ್ತಾಪ ಸಲ್ಲಿಸಿದೆ. ಭಾರತ ಪೂರೈಸುವ ಲಸಿಕೆಯಿಂದ ದೇಶದ ಶೇ.೨೦ರಷ್ಟು ಮಂದಿಗೆ ಲಸಿಕೆ ಹಾಕಬಹುದು. ಭಾರತದ ಲಸಿಕೆಯ ಬಗ್ಗೆ ಪಾಕ್ ಪ್ರಜೆಗಳಿಗೆ ವಿಶ್ವಾಸವಿದೆ. ಆದರೆ ಚೀನಾದಿಂದ ಪಡೆದ ಲಸಿಕೆಯ ಬಗ್ಗೆ ಅನುಮಾನ ಮಾತ್ರ ಇದೆ.

ಭೂತಾನ್, ಮಾಲ್ಡೀವ್ಸ್, ಫಿಜಿ ಸೇರಿದಂತೆ ಭಾರತದಿಂದ ಲಸಿಕೆ ಪಡೆದ ಅಲ್ಲಿಯ ಪ್ರಜೆಗಳು ಭಾರತದ ತ್ರಿವರ್ಣ ಬಾವುಟ ಹಿಡಿದು, ಮೆರವಣಿಗೆ ಮಾಡಿ ಭಾರತಕ್ಕೆ, ಭಾರತದ ಪ್ರಧಾನಿಗೆ ಉಘೇ ಉಘೇ ಹೇಳುತ್ತಿದ್ದಾರೆ. ಬೀದಿ ಬೀದಿಗಳಲ್ಲಿ ಸಡಗರ, ಸಂಭ್ರಮದಿಂದ ನಲಿದಿದ್ದಾರೆ.

ಆದರೆ ಇಲ್ಲಿ ಭಾರತದಲ್ಲಿ ಮಾತ್ರ ಪ್ರಗತಿಪರರು, ಎಡಪಂಥೀಯ ಎಡ-ಬಿಡಂಗಿಗಳು ದಿನ ಬೆಳಗಾದರೆ ಪ್ರಧಾನಿ ಮೋದಿಯನ್ನು ವಾಚಾಮಗೋಚರವಾಗಿ ನಿಂದಿಸುತ್ತಾ, ಮೋದಿ ಜನವಿರೋಧಿ ಎಂದು ಜರೆಯುತ್ತಾ ದೇಶದ ಮಾನ ಹರಾಜು ಹಾಕುವುದರಲ್ಲೇ ವಿಕೃತ ಸಂತಸ ಕಾಣುತ್ತಿದ್ದಾರೆ. ವಿಪರ್ಯಾಸವೆಂದರೆ ಇದೇ ಅಲ್ಲವೆ?

ನಾವು ಬದುಕಬೇಕು. ಇತರರ ಬದುಕನ್ನೂ ಹಸನುಗೊಳಿಸಬೇಕು. ಇದೇ ನಮ್ಮ ಪ್ರಾಚೀನ ಭಾರತೀಯ ಪರಂಪರೆ ನಮಗೆ ಹೇಳಿಕೊಟ್ಟ ಪಾಠ. ಮೋದಿ ಅದನ್ನೇ ಅನುಸರಿಸುತ್ತಾರೆ.

***

ದು.ಗು. ಲಕ್ಷ್ಮಣ

  • ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.
Tags: Covid second wavecovid19 narendra modiindiavaccine diplomacy of india
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಅನ್ನದಾತರಿಗೆ ಬೆಂಬಲ ನೀಡಲು ಬಾಗೇಪಲ್ಲಿ ರೈತರ 400 ಕಿ.ಮೀ. ಕಾಲ್ನಡಿಗೆ ಯಾತ್ರೆ

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಅನ್ನದಾತರಿಗೆ ಬೆಂಬಲ ನೀಡಲು ಬಾಗೇಪಲ್ಲಿ ರೈತರ 400 ಕಿ.ಮೀ. ಕಾಲ್ನಡಿಗೆ ಯಾತ್ರೆ

Leave a Reply Cancel reply

Your email address will not be published. Required fields are marked *

Recommended

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಸಮೀಪದ ಜಂಗಮಕೋಟೆಯಲ್ಲಿ ನಾಲೆಜ್‌ ಸಿಟಿ ಸ್ಥಾಪನೆ; ಬೆಂಗಳೂರು ಉತ್ತರ (ಕೋಲಾರ) ವಿವಿಗೆ 170 ಎಕರೆ ಭೂಮಿ, ತಿಂಗಳಲ್ಲಿ ಪ್ರಕ್ರಿಯೆ ಪೂರ್ಣ

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಸಮೀಪದ ಜಂಗಮಕೋಟೆಯಲ್ಲಿ ನಾಲೆಜ್‌ ಸಿಟಿ ಸ್ಥಾಪನೆ; ಬೆಂಗಳೂರು ಉತ್ತರ (ಕೋಲಾರ) ವಿವಿಗೆ 170 ಎಕರೆ ಭೂಮಿ, ತಿಂಗಳಲ್ಲಿ ಪ್ರಕ್ರಿಯೆ ಪೂರ್ಣ

4 years ago
ಅಬ್ಬರಿಸಿದ ವರುಣ, ಉಕ್ಕಿ ಹರಿದ ಗುಡಿಬಂಡೆ ಕೆರೆ

ಅಬ್ಬರಿಸಿದ ವರುಣ, ಉಕ್ಕಿ ಹರಿದ ಗುಡಿಬಂಡೆ ಕೆರೆ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ