• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಮಾಂಜನೇಯ ಹತ್ಯೆ ಪ್ರಕರಣ: 7 ಆರೋಪಗಳ ಬಂಧನ; ಕೊಲೆ ಕಾರಣ ರಿವೀಲ್‌ ಮಾಡಿದ ಚಿಕ್ಕಬಳ್ಳಾಪುರ ಜಿಲ್ಲೆ ಎಸ್‌ಪಿ ಮಿಥುನ್‌ ಕುಮಾರ್

cknewsnow desk by cknewsnow desk
March 25, 2021
in CHIKKABALLAPUR, CRIME, STATE
Reading Time: 2 mins read
0
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಮಾಂಜನೇಯ ಹತ್ಯೆ ಪ್ರಕರಣ: 7 ಆರೋಪಗಳ ಬಂಧನ; ಕೊಲೆ ಕಾರಣ ರಿವೀಲ್‌ ಮಾಡಿದ ಚಿಕ್ಕಬಳ್ಳಾಪುರ ಜಿಲ್ಲೆ ಎಸ್‌ಪಿ ಮಿಥುನ್‌ ಕುಮಾರ್
944
VIEWS
FacebookTwitterWhatsuplinkedinEmail
  • ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಮಾಂಜನೇಯ ಕೊಲೆ ಆರೋಪಿಗಳು ಸಿಕ್ಕಿದ್ದಾರೆ. ಆ ಮಾಹಿತಿಯನ್ನು ಎಸ್‌ಪಿ ಹಂಚಿಕೊಂಡಿದ್ದಾರೇನೋ ಸರಿ. ಆದರೆ, ಆ ಕೊಲೆಯ ಮಗ್ಗುಲುಗಳು ಇಷ್ಟೇನಾ? ಜಿಲ್ಲೆಯಲ್ಲಿ ಬಹಳಷ್ಟು ಚರ್ಚೆ ಆಗುತ್ತಿರುವ ಸಂಗತಿ ಇದು.

ಚಿಕ್ಕಬಳ್ಳಾಪುರ: ತಾಲ್ಲೂಕಿನ ಆವುಲನಾಗೇನಹಳ್ಳಿ ಗ್ರಾಮಕ್ಕೆ ಸೇರಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಮಾಂಜನೇಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರದ ತಮ್ಮ ಕಚೇರಿಯಲ್ಲಿ ಗುರುವಾರ ಈ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌; “ಭೂ ವಿವಾದ ಹಾಗೂ ಹಳೆಯ ವೈಷಮ್ಯದಿಂದ ಈ ಹತ್ಯೆ ನಡೆದಿದೆ. ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಮಾಂಜನೇಯ ಪತ್ನಿ ಮಂಜುಳಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ” ಎಂದು ತಿಳಿಸಿದರು.

ಒಂಟು ಎಂಟು ಜನ ಈ ಕೊಲೆಯಲ್ಲಿ ಭಾಗಿಯಾಗಿದ್ದು, ಆ ಪೈಕಿ ಒಬ್ಬ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಶೋದ ನಡೆಸಿದ್ದೇವೆ ಎಂದು ಅವರು ತಿಳಿಸಿದರು.

  • ರಾಮಾಂಜನೇಯ

ಕೊಲೆಗೆ ಕಾರಣವಾಗಿದ್ದಾದರೂ ಏನು?

ಇಡೀ ಘಟನೆ ಬಗ್ಗೆ ಮಿಥುನ್‌ ಕುಮಾರ್‌ ಅವರು ಬ್ರೀಫ್‌ ಮಾಡಿದ್ದು ಹೀಗೆ:
ಆವುಲನಾಗೇನಹಳ್ಳಿ ಗ್ರಾಮಕ್ಕೆ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ರಾಮಾಂಜನೇಯಗೆ ಸೇರಿದ ಜಮೀನಿತ್ತು. ಅದಕ್ಕೆ ಸಂಬಂಧಿಸಿದಂತೆ ಪಕ್ಕದ ಜಮೀನಿನವರ ಜತೆ ವಿವಾದ ಕೂಡ ಇರುತ್ತದೆ. ಸಾಕಷ್ಟು ಸಲ ಗಲಾಟೆಯಾಗಿ ಪೊಲೀಸ್‌ ಠಾಣೆಯಲ್ಲಿ ಕೇಸುಗಳು ದಾಖಲಾಗಿರುತ್ತವೆ. ಪರಸ್ಪರ ದೂರು ಪ್ರತಿದೂರು ನೀಡಲಾಗಿರುತ್ತದೆ. ಆಗ ರಾಮಾಂಜನೇಯ ಮೇಲೆ ಹಾಗೂ ಈಗ ಬಂಧನಕ್ಕೊಳಗಾಗಿರುವ ಆರೋಪಿಗಳ ಮೇಲೂ ಕೇಸುಗಳು ದಾಖಲಾಗಿರುತ್ತವೆ.

ಇದೇ ಕೇಸಿಗೆ ಸಂಬಂಧಿಸಿದಂತೆ ಘಟನೆ ನಡೆದ ದಿನ ಗುಡಿಬಂಡೆ ಪೊಲೀಸ್‌ ಠಾಣೆಗೆ ರಾಮಾಂಜನೇಯ, ಆತನ ಪತ್ನಿ ಮಂಜುಳಮ್ಮ ಹಾಗೂ ಅವರ ಮಗ ಹಾಜರಾಗಿರುತ್ತಾರೆ. ಈ ಕೇಸಿನ ಕೆಲಸ ಮುಗಿಸಿಕೊಂಡು ಅಲ್ಲಿಂದ ಸಂಜೆ ನಾಲ್ಕೂವರೆ-ಐದು ಗಂಟೆ ಹೊತ್ತಿಗೆ ಊರಿಗೆ ವಾಪಸ್‌ ಬಂದು ಮಗನನ್ನು ಮನೆಯಲ್ಲಿ ಬಿಟ್ಟು ಗಂಡ-ಹೆಂಡತಿ ಇಬ್ಬರೂ ಜಮೀನಿನ ಬಳಿ ಹೋಗುತ್ತಾರೆ. ಅಷ್ಟೊತ್ತಿಗೆ ಅಲ್ಲಿ ನಾಲ್ಕು ಜನ ಇರ್ತಾರೆ. ರಾಘವೇಂದ್ರ, ಅವನ ಅಣ್ಣ ಪ್ರಸನ್ನ, ಅವರ ತಂದೆ ಅಮರ ನಾರಾಯಣಾಚಾರಿ ಹಾಗೂ ದಿಲೀಪ್‌ ಅಲ್ಲಿದ್ದವರು. ಈ ದಿಲೀಪ ಅನ್ನುವವ ಪ್ರಸನ್ನನ ಸ್ನೇಹಿತ.

ಇಷ್ಟು ಜನ ರಾಮಾಂಜನೇಯ ಬರುವುದಕ್ಕೇ ಕಾಯ್ಕೊಂಡು ಇರ್ತಾರೆ. ಅವರಿಬ್ಬರು ಬಂದ ತಕ್ಷಣವೇ ತಕರಾರು ಶುರುವಾಗಿ ಎರಡೂ ಕಡೆಯವರ ನಡುವೆ ಚಿಕ್ಕದಾಗಿ ಗಲಾಟೆ ಶುರುವಾಗುತ್ತದೆ. ಆಗ ಪ್ರಸನ್ನ, ಅರವಿಂದ ಎಂಬಾತನಿಗೆ ಫೋನ್‌ ಮಾಡುತ್ತಾನೆ. ಸ್ವಲ್ಪ ಹೊತ್ತಿನಲ್ಲಿಯೇ ಎರಡು ಬೈಕುಗಳಲ್ಲಿ ಅರವಿಂದನ ಜತೆ ಇನ್ನೂ ಮೂವರು ಸ್ಥಳಕ್ಕೆ ಬರುತ್ತಾರೆ. ಅರ್ಧ ದಾರಿಗೆ ಅವರೆಲ್ಲರನ್ನೂ ಪ್ರಸನ್ನ ಕರೆದುಕೊಂಡು ಬರುತ್ತಾನೆ. ಅವರಲ್ಲಿ ಅರವಿಂದ ಸೇರಿ ಚಿಕ್ಕ ಮಂಜ, ದೊಡ್ಡ ಮಂಜ, ಗಿರೀಶ್‌ ಎಂಬುವವರು ಇರುತ್ತಾರೆ. ಬರುವಾಗಲೇ ಇವರು ಮೂರು ಮಚ್ಚುಗಳನ್ನು ತಂದಿರುತ್ತಾರೆ. ಇವರೆಲ್ಲರೂ ರಾಮಾಂಜನೇಯ ಮೇಲೆ ಮಚ್ಚುಗಳಿಂದ ದಾಳಿ ನಡೆಸುತ್ತಾರೆ. ಅಡ್ಡಿಪಡಿಸಲು ಹೋದ ರಾಮಾಂಜನೇಯನ ಪತ್ನಿ ಮಂಜುಳಮ್ಮ ಮೇಲೂ ದಾಳಿಯಾಗಿ ಆಕೆ ತೀವ್ರವಾಗಿ ಗಾಯಗೊಳ್ಳುತ್ತಾರೆ. ಆಕೆಯ ಕೈ ಮತ್ತು ಕಾಲಿಗೆ ತೀವ್ರ ಗಾಯವಾಗಿ ಈಗ ಸರ್ಜರಿಯೂ ಆಗಿದೆ.

ಇಷ್ಟಕ್ಕೂ ರಾಮಾಂಜನೇಯ ಹಿನ್ನೆಲೆ ಏನು?

ಈ ಬಗ್ಗೆ ಮಿಥುನ್‌ ಕುಮಾರ್‌ ಅವರು ಹೇಳಿದ್ದಿಷ್ಟು. “ರಾಮಾಂಜನೇಯ ಸರಕಾರಿ ನೌಕರ ಆಗಿರುತ್ತಾನೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿ ಕೆಲಸ ಮಾಡ್ತಾ ಇರ್ತಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೆಲಸ ಮಾಡ್ತಾ ಇರ್ತಾರೆ. ಅವರು ಕೆಲವಾರು ಸಿವಿಲ್‌ ವಿವಾದಗಳಲ್ಲಿ ತಲೆಹಾಕಿರುತ್ತಾರೆ. ಈ ಕಾರಣಕ್ಕೆ ರಾಮಾಂಜನೇಯ ಮೇಲೆ ಕೆಲ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ಅವರ ಕೊಲೆ ಮಾಡಿದವರ ಮೇಲೆಯೂ ಕೆಲ ಕೇಸುಗಳು ಆಗಿವೆ. ಇನ್ನು ಬಂಧನಕ್ಕೆ ಒಳಗಾಗಿರುವ ಆರೋಪಿಗಳ ಮೇಲೆ ಪ್ರಕರಣಗಳು ದಾಖಲಾಗಿವೆಯೆ ವಿನಾ ಅವರ ವಿರುದ್ಧ ರೌಡಿಶೀಟ್‌ ಇರೋದಿಲ್ಲ. ಅವರ ಮೇಲೆ ರಾಮಾಂನೇಯ ಎಸ್‌ಸ್ಸಿಎಸ್‌ಟಿ ಕೇಸುಗಳನ್ನೂ ದಾಖಲಿಸಿದ್ದಾರೆ.

ಆದರೆ, ರಾಮಾಂಜನೇಯ ತನ್ನ ವಿರೋಧಿಗಳ ಮೇಲೆ ಹಲವಾರು ಸಂದರ್ಭಗಳಲ್ಲಿ ಅಟ್ರಾಸಿಟಿ ಕೇಸುಗಳನ್ನು ಹಾಕಿರುವುದು, ವಿರೋದಿಗಳಿಗೆ ಕಿರುಕುಳ ನೀಡಿರುವುದು ಹಾಗೂ ಆತನ ರಾಜಕೀಯ ಪ್ರಭಾವದ ಬಗ್ಗೆ ಎಸ್‌ಪಿ ಮಾತನಾಡಲು ಬಯಸಲಿಲ್ಲ. ಆತ ಕೆಲಸ ಮಾಡಿದ ಜಾಗಗಳಲ್ಲಿ ಆತನ ವಿರುದ್ಧ ಬಂದಿರುವ ದೂರುಗಳ ಬಗ್ಗೆಯೂ ಅವರು ನಮಗೆ ಏನನ್ನೂ ಹೇಳಲಿಲ್ಲ.

ಈ ಕೊಲೆಯ ಮೂಲವೇನು?

ಆವುಲನಾಗೇನಹಳ್ಳಿ ಬಳಿ ರಾಮಾಂಜನೇಯಗೆ ಸರಕಾರದಿಂದ ಎರಡೂವರೆ ಎಕರೆ ಜಮೀನು ಮಂಜೂರಾಗಿರುತ್ತದೆ. ಅದರ ಪಕ್ಕದಲ್ಲಿ ಆರೋಪಿ ಅರವಿಂದ ಅವರ ಜಮೀನೂ ಇರುತ್ತದೆ. ಇವೆರಡೂ ಜಮೀನುಗಳ ನಡುವೆ ಸಣ್ಣ ಪ್ರಮಾಣದ ಕರಾಬ್‌ ಜಮೀನು ಇರುತ್ತದೆ. ಅದರಲ್ಲಿ ಯಾರಿಗೆಷ್ಟು ಬರಬೇಕೆಂದು ವಿವಾದ ಉಂಟಾಗಿತ್ತು. ಎರಡು ತಿಂಗಳ ಹಿಂದೆ ಈ ಬಗ್ಗೆ ಗಲಾಟೆ ಆಗಿ ಗುಡಿಬಂಡೆ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿರುತ್ತದೆ. ಈ ವಿವಾದಕ್ಕೆ ಸಂಬಂಧಿಸಿ ಹಲವಾರು ಸಲ ಹೊಡೆದಾಟಗಳು, ಗಲಾಟೆಗಳು ನಡೆದಿವೆ. ಇನ್ನೂ ಈ ಕೇಸಿನ ಬಗ್ಗೆ ತನಿಖೆ ನಡೆಯುತ್ತಿದೆ. ಯಾರಾದರೂ ಕೊಲೆಗೆ ಕುಮ್ಮಕ್ಕು ನೀಡಿದ್ದಾರಾ ಎನ್ನುವುದು ಸೇರಿ ವಿವಿಧ ಆಯಾಮಗಳಲ್ಲಿ ತನಿಖೆ ಮಾಡ್ತಾ ಇದ್ದೇವೆ.

ಬಂಧನದ ಸುತ್ತ ಅನುಮಾನ

ಘಟನೆ ನಡೆದ ದಿನ ದಿನವೇ ನಾಲ್ವರು ಆರೋಪಿಗಳನ್ನು ಬಂಧಿಸುವ ಬಗ್ಗೆ ಮಾಹಿತಿ ಇತ್ತು. ಆ ಬಗ್ಗೆ ನಾಲ್ಕು ದಿನ ತಡವಾಗಿ ಪೊಲೀಸ್‌ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದರಾ? ಎಂಬ ಅನುಮಾನವೂ ದಟ್ಟವಾಗಿದೆ. ರಾಮಾಂಜನೇಯ ಕೊಲೆಯ ಸುತ್ತ ತನಿಖೆ ಮಾಡುತ್ತಿರುವ ಪೊಲೀಸರು; ತಮ್ಮ ಅಧಿಕಾರ ಹಾಗೂ ರಾಜಕೀಯ ಪ್ರಭಾವ ಬಳಸಿಕೊಂಡು ತಮ್ಮ ವಿರೋಧಿಗಳಿಗೆ ಕಿರುಕುಳ ನೀಡಿರುವ ಬಗ್ಗೆ ಬಂದಿರುವ ದೂರುಗಳ ಬಗ್ಗೆ ಮೌನ ವಹಿಸಿದ್ದಾರಾ? ಎಂಬ ಪ್ರಶ್ನೆಯೂ ಇದೀಗ ಎದುರಾಗಿದೆ.

ಮತ್ತೊಂದು ಕಡೆ ಜಿಲ್ಲಾ ಉಸ್ತುವಾರಿ ಸಚಿವ ಡಾ,ಕೆ.ಸುಧಾಕರ್‌ ಘಟನೆ ನಡೆದ ಮರುದಿನವೇ ರಾಮಾಂಜನೇಯ ಮನೆಗೆ ಭೇಟಿ ನೀಡಿದ್ದರು. ಹಿರೇನಾಗವೇಲಿ ಸ್ಫೋಟದಲ್ಲಿ ಜೀವ ಕಳೆದಕೊಂಡ ಆರು ಕಾರ್ಮಿಕರ ಮನೆಗಳತ್ತ ಎಡತಾಕದ ಸಚಿವರು, ರಾಮಾಂಜನೇಯ ಮನೆಗೆ ಮಾತ್ರ ಕೂಡಲೇ ಭೇಟಿ ನೀಡಿ ಸಾಂತ್ವನ ಹೇಳಿದ್ದರ ಬಗ್ಗೆಯೂ ಜಿಲ್ಲೆಯಲ್ಲಿ ಚರ್ಚೆ ನಡೆಯುತ್ತಿದೆ. ಅಲ್ಲದೆ, ರಾಮಾಂಜನೇಯ ಹೊಂದಿದ್ದ ರಾಜಕೀಯ ಪ್ರಭಾವದ ಬಗ್ಗೆಯೂ ತನಿಖೆಯಾಗಬೇಕು ಎಂದು ಹೆಸರು ಹೇಳಲಿಚ್ಚಿಸದ ಕೆಲ ರಾಜಕೀಯ ಮುಖಂಡರು ಹೇಳುವ ಮಾತು.

ಜಿಲ್ಲೆಯಲ್ಲಿ ಲಾ ಅಂಡ್‌ ಆರ್ಡರ್‌ ಸಮಸ್ಯೆ ಇಲ್ಲ

ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಹಾಡು ಹಗಲೇ ಕೊಲೆ ಪ್ರಕರಣಗಳು ನಡೆಯುತ್ತಿವೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಮಿಥುನ್‌ ಕುಮಾರ್‌ ಅವರು; “ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಭೂ ವಿವಾದ, ಹಳೆಯ ದ್ವೇಷ, ಹಣಕಾಸು ವ್ಯವಹಾರ, ಅನೈತಿಕ ಸಂಬಂಧದಂಥ ವಿಚಾರಗಳಿಗೆ ಮಾತ್ರ ಕೊಲೆಗಳು ಆಗುತ್ತಿವೆ. ಗುಂಪು ಘರ್ಷಣೆ ಆಥವಾ ದೊಡ್ಡ ಗಲಭೆಗಳೇನೂ ಆಗಿಲ್ಲ” ಎಂದರು.

  • ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ..
ಗುಡಿಬಂಡೆ ಬಳಿ ಜಮೀನಿನಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಬರ್ಬರ ಕೊಲೆ; ಅವರ ಪತ್ನಿ ಸ್ಥಿತಿ ಚಿಂತಾಜನಕ
Tags: crimeGK Mithun Kumar IPSgrama panchayat secretary murdergudibandemurder
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಸಿದ್ದರಾಮಯ್ಯ v/s ಸರಕಾರ; ಕೋವಿಡ್ ನಡುವೆ ಸಖತ್ ಪಾಲಿಟಿಕ್ಸ್

ಇದು ಎರಡನೇ ಅಲೆಯ ಎಫೆಕ್ಟ್‌: ಬೆಂಗಳೂರಿಗೆ ಯಾವುದೇ ರಾಜ್ಯದಿಂದ ಬಂದರೂ ಕೋವಿಡ್ ವರದಿ ಕಡ್ಡಾಯ; ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿತರ ಕೈಗೆ ಗುರುತು

Leave a Reply Cancel reply

Your email address will not be published. Required fields are marked *

Recommended

ಕುಡಿಯುವ ನೀರಿನಲ್ಲಿ ಯುರೇನಿಯಂ; ಸುರಕ್ಷಿತ ನೀರು ಕೊಡಲು ಆಗ್ರಹ

ಕುಡಿಯುವ ನೀರಿನಲ್ಲಿ ಯುರೇನಿಯಂ; ಸುರಕ್ಷಿತ ನೀರು ಕೊಡಲು ಆಗ್ರಹ

3 years ago
ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

1 year ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ