• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಗುಮ್ಮನಾಯಕನ ಪಾಳ್ಯದ ಮೇಲೆ ದಾಳಿ ಮಾಡಿದ್ದನಾ ಟಿಪ್ಪು ಸುಲ್ತಾನ್?‌ ಪಾಳೇಗಾರರ ಖಜಾನೆಯಲ್ಲಿದ್ದ ಅಪಾರ ಸಂಪತ್ತು ಎಲ್ಲಿಗೆ ಹೋಯಿತು? ಹೂತು ಹೋಗುತ್ತಿದೆ 700 ವರ್ಷಗಳ ಇತಿಹಾಸ!!

cknewsnow desk by cknewsnow desk
May 1, 2021
in CHIKKABALLAPUR, CKPLUS, STATE
Reading Time: 3 mins read
1
ಗುಮ್ಮನಾಯಕನ ಪಾಳ್ಯದ ಮೇಲೆ ದಾಳಿ ಮಾಡಿದ್ದನಾ ಟಿಪ್ಪು ಸುಲ್ತಾನ್?‌ ಪಾಳೇಗಾರರ  ಖಜಾನೆಯಲ್ಲಿದ್ದ ಅಪಾರ ಸಂಪತ್ತು ಎಲ್ಲಿಗೆ ಹೋಯಿತು? ಹೂತು ಹೋಗುತ್ತಿದೆ 700  ವರ್ಷಗಳ ಇತಿಹಾಸ!!
1.5k
VIEWS
FacebookTwitterWhatsuplinkedinEmail

SPECIAL STORY

ಬರೆದಷ್ಟು ಮುಗಿಯದ, ಕರ್ನಾಟಕದ ಇತಿಹಾಸಕಾರರು ಮರೆತ ಅಥವಾ ಉದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದ ಐತಿಹಾಸಿಕ ದುರಂತ ನೆಲೆ ಗುಮ್ಮನಾಯಕನ ಪಾಳ್ಯ. ಸ್ಥಳೀಯರಿಗೆ ರೋಚಕ ಕಥನಗಳ ಆಗರವಾದ ಈ ಪಾಳೆಯಪಟ್ಟಿನ ಮೇಲೆ ಟಿಪ್ಪು ಸುಲ್ತಾನ ಮುಗಿಬಿದ್ದಿದ್ದನಾ? ಅಲ್ಲಿದ್ದ ಅಪಾರ ಖಜಾನೆ ಸಂಪತ್ತು ಎಲ್ಲಿ ಹೋಯಿತು? ಗಂಭೀರವಾಗಿ ಸಂಶೋಧನೆಗೆ ಒಳಪಡಿಸಬೇಕಾದ ಅಂಶಗಳಿವು. ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಬೇಡವಾಗಿರುವ ಗುಮ್ಮನಾಯಕನ ಪಾಳ್ಯದ ಕಥೆಯ ಇನ್ನೊಂದು ಮಗ್ಗುಲು ಇಲ್ಲಿದೆ.

DG Pavan Kalyan Bagepalli

ಚಿಕ್ಕಬಳ್ಳಾಪುರ ಜಿಲ್ಲೆ ಐತಿಹಾಸಿಕ ಶ್ರೀಮಂತಿಕೆ ಮತ್ತು ಅವಿಚ್ಛಿನ್ನ ಚರಿತ್ರೆ ಹೊಂದಿರುವ ಅಪರೂಪದ ತಾಣ. ಜಿಲ್ಲೆಯು ಆವತಿ ನಾಡಪ್ರಭುಗಳ ಸಹಕಾರ ಸಹ ಹೊಂದಿತ್ತು ಎಂದು ಇತಿಹಾಸದ ಮೂಲಕ ತಿಳಿದುಬರುತ್ತದೆ. ಆವತಿ ನಾಡಪ್ರಭುಗಳು ವಿಜಯನಗರದ ಅರಸರ ಸಾಮಂತರಾಗಿ ಜಿಲ್ಲೆಯಲ್ಲಿ ಹಲವು ಪಾಳೆಪುಟಗಳನ್ನು ತಮ್ಮ ಅಧೀನದಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದರು. ಅದರಲ್ಲಿ ಗುಮ್ಮನಾಯಕನ ಪಾಳ್ಯದ ಕೋಟೆಯೂ ಒಂದು. ಜತೆಗೆ, ನಂದಿಬೆಟ್ಟದ ಕೋಟೆ, ಚಿಕ್ಕಬಳ್ಳಾಪುರ ಕೋಟೆ, ಗುಡಿಬಂಡೆ ಕೋಟೆ, ದೇವಿಕುಂಟೆ ಕೋಟೆ, ಸಾದಲಿ ಕೋಟೆ, ಬುರುಡುಗುಂಟೆ ಕೋಟೆ, ಅಬ್ಲೂರು ಕೋಟೆ, ಸುಗಟೂರು ಕೋಟೆ, ಶಿಡ್ಲಘಟ್ಟ ಕೋಟೆ, ಹರಿಪುರ ಕೋಟೆಗಳು ಕೂಡ ಸೇರಿದ್ದವು.

ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಹೋಬಳಿಯ ತೊಳಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಮ್ಮನಾಯಕನ ಪಾಳ್ಯ ಕೋಟೆಯು ಪಾಳೇಗಾರರ ಮನೆತನಗಳಲ್ಲಿ ಒಂದು. ಗುಮ್ಮನಾಯಕನ ಪಾಳ್ಯದಲ್ಲಿ ಜಿಲ್ಲೆಯ ಪ್ರಥಮ ಏಳುಸುತ್ತಿನ ಕೋಟೆಯನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಸುಮಾರು 700 ವರ್ಷಗಳ ಕಾಲ ಪಾಳೆಗಾರರು ಆಡಳಿತ ನಡೆಸಿದ್ದಾರೆ. ಇವರು ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಗೆ ಸೇರಿದವರು. ಈ ಕೋಟೆಯು ಕ್ರಿ.ಶ.1242ರಲ್ಲಿ ತಲೆಎತ್ತಿದೆ. ಇದರ ಮೂಲ ಪುರುಷ ʼಖಾದ್ರಿಪತಿ ನಾಯಕʼ ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಇವರ ನಂತರದ ʼಲಕ್ಕ ನಾಯಕʼ ಕ್ರಿ.ಶ.1364ರಲ್ಲಿ ಬೆಟ್ಟದ ಸುತ್ತಲು ಕೋಟೆ & ಬುರುಜುಗಳನ್ನು ಕಟ್ಟುವುದರ ಮೂಲಕ ಊರಿಗೆ ತನ್ನ ಅಣ್ಣ ʼಗುಮ್ಮರೆಡ್ಡಿ ನಾಯಕʼನ ಹೆಸರನ್ನೇ ಇಟ್ಟ. ಪಾತಪಾಳ್ಯದ ಬಳಿ ಇರುವ ಕಾಮಸಾನಪಲ್ಲಿ ಗ್ರಾಮದ ʼಗುಮ್ಮರೆಡ್ಡಿʼ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದರಿಂದ ಅವರ ನೆನಪಿಗಾಗಿ ಪಾಳೆಯಗಾರರು ನಿರ್ಮಿಸಿದ ಕೋಟೆಗೆ ʼಗುಮ್ಮನಾಯಕನ ಕೋಟೆʼ ಎಂದು ನಾಮಕರಣ ಮಾಡಿದರು. ಈ ಕೋಟೆಯನ್ನು ಆಳ್ವಿಕೆ ಮಾಡಿದ ಪಾಳೇಗಾರರ ಪೈಕಿ ʼಚಿನ್ನಮ್ಮ ನಾಯಕʼ, ʼಗುಮ್ಮ ನಾಯಕʼ, ʼದೊಡ್ಡ ವಸಂತನಾಯಕʼ, ʼಇಮ್ಮಡಿ ಕದಿರಪ್ಪನಾಯಕʼ, ʼಸಿಂಗಪ್ಪ ನಾಯಕʼರು ಪ್ರಖ್ಯಾತರಾಗಿದ್ದರು ಎಂದು ಚೆರಿತ್ರೆಯ ಪುಟಗಳು ಹೇಳುತ್ತವೆ.

ಏಳುಸುತ್ತಿನ ಕೋಟೆಯ ವೈಭವ

ಮೊದಲನೇ ಕೋಟೆಯ ಪ್ರಾರಂಭದಲ್ಲಿ ಶಾಪಗ್ರಸ್ತ ಬಾವಿಯಿದ್ದು, ವಿಶಾಲವಾಗಿ ನಿರ್ಮಿಸಿ ಸ್ನಾನದ ಗೃಹಗಳನ್ನು ನಿರ್ಮಿಸಿದ್ದಾರೆ. ಈ ಬಾವಿಯ ನಾಲ್ಕು ಪ್ರವೇಶ ದ್ವಾರಗಳನ್ನು ಹೊಂದಿದ್ದು. ಪೂರ್ವದ ಬಾಗಿಲಿಗೆ ವಿಶೇಷವಾದ ಶಿಲ್ಪ ಕಲೆಯಿದೆ. ಪಾಳೆಯಗಾರರ ಧಾರ್ಮಿಕತೆಗೆ ಮತ್ತು ಕಲೆಗೆ ನೀಡಿದ್ದ ಮಹತ್ವದ ಸಾಕ್ಷಿಯೇ ಗುಮ್ಮನಾಯಕನ ಪಾಳ್ಯದಲ್ಲಿರುವ ಐತಿಹಾಸಿಕ ಶ್ರೀ ಸೀತಾರಾಮ ಲಕ್ಷ್ಮಣ ಹನುಮಂತ ದೇವಾಲಯ. ಈ ದೇವಾಲಯದ ಸುತ್ತಲೂ ರಾಮಾಯಣ ಮತ್ತು ಮಹಾ ಭಾರತದ ಘಟನೆಗಳನ್ನು ಸಾರುವ ಕಲ್ಲಿನ ಕೆತ್ತನೆಯ ಉಬ್ಬು ಶಿಲ್ಪಗಳಿಂದ ಕೂಡಿದ್ದ ಪ್ರತಿಮೆಗಳನ್ನು ಒಳಗೊಂಡಿದೆ. ರಾಮ ಮತ್ತು ಸೀತೆಯ ವಿವಾಹ ಮಹೋತ್ಸವ ಚಿತ್ರಗಳು ಎಲ್ಲರನ್ನೂ ಆಕರ್ಷಿಸುತ್ತದೆ.

ಎರಡನೇ ಸುತ್ತಿನ ಕೋಟೆ ವಿವಿಧ ರೀತಿಯ ಸುತ್ತ ಕೋಟೆಯ ಅವಶೇಷಗಳನ್ನು ಮತ್ತು ವಿವಿಧ ಸ್ಮಾರಕಗಳನ್ನು ನೋಡಬಹುದು.

ಮೂರನೇ ಸುತ್ತಿನ ಕೋಟೆಯ ಒಳಗಡೆ ಕಲ್ಲು-ಕಂಬಗಳಿಂದ ನಿರ್ಮಾಣ ಮಾಡಿರುವ ಆಂಜನೇಯ ಸ್ವಾಮಿಯ ದೇವಸ್ಥಾನವಿದೆ. ದೇವರಿಗೆ ಕವಚ ಪಾದಗಳನ್ನು ಪಾಳೆಯಗಾರರ ಕಾಣಿಕೆಯಾಗಿ ನೀಡಿದ್ದು, ದೇವರ ಬಲ ಪಾದ ಮಾತ್ರ ಬೆಟ್ಟದ ಕೆಳಗಿರುವ ಸೇತುವೆ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಕಾಣಬಹುದು.

ನಾಲ್ಕನೇ ಕೋಟೆ ಆವರಣ ವಿಶಾಲವಾಗಿದ್ದು, ಕೋಟೆಯ ಬಳಿ ಉದ್ಭವಮೂರ್ತಿ ಶ್ರೀ ವೆಂಕಟರಮಣ ಸ್ವಾಮಿಯ ಅವತಾರದ ಶಂಕು-ಚಕ್ರ ಮತ್ತು ತಿರುನಾಮಗಳನ್ನು ಕಾಣಬಹುದು. ಈ ಆವರಣದಲ್ಲಿಯೇ ಆನೆ ಕಟ್ಟುತ್ತಿದ್ದ ಲಾಯದ ಸ್ಥಳ, ಮಂತ್ರಿಗಳು ಸಮಾಲೋಚನೆ ನಡೆಸುತ್ತಿದ್ದ ಗುಪ್ತಸ್ಥಳ, ಪಾಳೆಗಾರರು ವಿಹರಿಸುತಿದ್ದ ಬುರುಜು, ಹುಣಸಮಾರಮ್ಮನವರ ದೇವಾಲಯ, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆ, ನೀರು ಶೇಕರಿಸುತಿದ್ದ ಟ್ಯಾಂಕ್ ಮತ್ತು ಬಾವಿಗಳನ್ನು ಕಾಣಬಹುದು. ಈ ಕೋಟೆ ಬಾಗಿಲಿಗೆ ಕಿರು ಬಾಗಿಲಿದ್ದು ರಾತ್ರಿ ವೇಳೆ ಕಾವಲು ಕಾಯುವವರಿಗಾಗಿ ಅದನ್ನು ನಿರ್ಮಿಸಲಾಗಿದೆ.

ಐದನೇ ಸುತ್ತಿನ ಕೋಟೆಯಲ್ಲಿ ಪಾಳೆಗಾರರ ಆರಾಧ್ಯ ದೇವರಾದ ಶ್ರೀ ನರಸಿಂಹಸ್ವಾಮಿ ಉದ್ಭವ ಮೂರ್ತಿಯನ್ನು ಕಾಣಬಹುದು. ಅದನ್ನು ವೀಕ್ಷಿಸಲು ಮುಖವಿಟ್ಟಾಗ ಮದ್ದುಗುಂಡಿನ ವಾಸನೆ ಈಗಲೂ ಮೂಗಿಗೆ ಬಡಿಯುತ್ತದೆ. ವಿಶಾಲವಾದ ದೊರಲ ಬಾವಿ ಕಾಣುತ್ತದೆ. ಈ ಬಾವಿಯ ಬಳಿ ಶಾಸನವೂ ಇದೆ.

ಆರನೇ ಸುತ್ತಿನ ಕೋಟೆಯಲ್ಲಿ ಮದ್ದು ಗುದ್ದು ಶೇಖರಣೆ ಮಾಡುತಿದ್ದ ಕೊಠಡಿಯನ್ನು ಕಾಣಬಹುದು. ಅದನ್ನು ವೀಕ್ಷಿಸಲು ಮುಖವಿಟ್ಟಾಗ ಮದ್ದು ಗುಂಡಿನ ವಾಸನೆ ಈಗಲೂ ಮೂಗಿಗೆ ಬಡಿಯುತ್ತದೆ. ವಿಶಾಲ ದೊರಲ ಬಾವಿಯೂ ಕಾಣಿಸುತ್ತದೆ. ಈ ಬಾವಿಯ ಬಳಿ ಬಂಡೆಯ ಮೇಲೆ ಶಾಸನವಿದೆ.

ಏಳನೇ ಕೋಟೆಯಲ್ಲಿ ವಿಶಾಲವಾದ ಬಂಡೆಯ ಮೇಲೆ ಎರಡು ದೊಡ್ಡ ಕಲ್ಲುಗಳಿದ್ದು ಪಾಳೆಯಗಾರರು ಅಲ್ಲಿಂದ ಶತ್ರುಗಳನ್ನು ನೋಡಲು ಆಗಲೇ ಬೈನಾಕ್ಯೂಲರ್ ಉಪಕರಣಗಳನ್ನು ಉಪಯೋಗಿಸುತ್ತಿದ್ದರು. ಈ ಬಂಡೆಯ ಮೇಲೆ ಸೈನಿಕರು ತುಪಾಕಿಗಳಿಗೆ ಮದ್ದು ತಯಾರಿಸಲು ಉಪಯೋಗಿಸುತ್ತಿದ್ದ ತಟ್ಟೆಯಾಕರದ ಅಗಲವಾದ ಕುರುಹುಗಳನ್ನೂ ಕಾಣಬಹುದು.

ಇದರ ಸಮೀಪದಲ್ಲಿ ನೀರಿನ ಕರ್ಣಿಕಲ ದೊಣೆ ಇದೆ. ಬೆಟ್ಟದ ಮೇಲಿನ ಕೋಟೆಯನ್ನು ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿಸಲಾಗಿದೆ. 10 ಹೆಜ್ಜೆಗೆ ಒಬ್ಬರಂತೆ ಸೈನಿಕರು ಪಿರಂಗಿಗಳನ್ನು ಇಟ್ಟು ಕೋಟೆ ಕಾವಲು ಕಾಯುವುದು, ರಂಧ್ರಗಳಿಂದ ಶತ್ರುಗಳನ್ನು ಹಿಮ್ಮೆಟ್ಟಿಸಲು ಅಲ್ಲಲ್ಲಿ 5 ಅಡಿ ಅಗಲ 10 ಅಡಿ ಉದ್ದದ ವಿಸ್ತೀರ್ಣವನ್ನು ಹೊಂದಿದ ರಂಧ್ರಗಳನ್ನೂ ಕಾಣಬಹುದು.

ಟಿಪ್ಪು ಸುಲ್ತಾನನ ದಾಳಿ

Tipu Sultan Photo Courtesy: Wikipedia

ಮೈಸೂರು, ಶ್ರೀರಂಗಪಟ್ಟಣವನ್ನು ಆಳಿದ ಟಿಪ್ಪು ಸುಲ್ತಾನನ ಆಡಳಿತದ ಸಮಯದಲ್ಲಿ ಆತನ ದಾಳಿಗೆ ಸಿಲುಕಿದ ಪಾಳೆಯಗಾರರು ತಮ್ಮಲ್ಲಿದ್ದ ಅಪರೂಪದ ಚಿನ್ನಾಭರಣ, ವಜ್ರವೈಢೂರ್ಯಗಳ ಅಪಾರ ಖಜಾನೆಯನ್ನು ಕೇರಳದ ತಿರುವುನಂತಪುರದಲ್ಲಿರುವ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರಪಡಿಸಿದರು ಎಂದು ದಾಖಲೆ ಇದೆ ಎನ್ನುತ್ತಾರೆ ಗುಮ್ಮನಾಯಕನ ಪಾಳ್ಯ ಕೋಟೆಯ ಪೂರ್ವಿಕರಾದ ಅಹೋರಾತ್ರ.

ಇಂತಹ ಐತಿಹಾಸಿಕ ಮಹತ್ತ್ವ ಹೊಂದಿರುವ ಗುಮ್ಮನಾಯಕನ ಪಾಳ್ಯ ಕೋಟೆಯ ಚರಿತ್ರೆಗೆ ಆಧಾರವಾದ ಹಲವಾರು ಶಾಸನಗಳು ವಿವಿಧ ರೀತಿಯ ಕೆತ್ತನೆಗಳು ಕುರುಹುಗಳು ಸಂಶೋಧನೆಗೆ ಒಳಪಡದೇ ಇರುವುದು ತುಂಬಾ ಬೇಸರ ಸಂಗತಿ. ಇಲ್ಲಿನ ಶಾಸನಗಳು ತೆಲುಗು ಲಿಪಿಯಲ್ಲಿದ್ದು, ಈ ಶಾಸನಗಳನ್ನು ಸಂಶೋಧನೆ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು ಎನ್ನುತ್ತಾರೆ ಹರೀಶ್ ವಿ.ಪಾಳ್ಯಕೆರೆ ಅವರು.

ಗುಮ್ಮನಾಯಕನ ಪಾಳ್ಯ ಕೋಟೆಯ ರಾಜರು ವಿಜಯನಗರ ಸಾಮ್ರಾಜ್ಯದ ಅರಸರಿಗೆ ಕಪ್ಪ ಕಾಣಿಕೆ ವಸೂಲಿ ಮಾಡಿಕೊಡುತ್ತಿದ್ದುದರ ಜತೆಗೆ ತಮ್ಮದೇ ಆದ ಚಾರಿತ್ರಿಕ, ಸಾಂಸೃತಿಕ ಹಿನ್ನೆಲೆಯನ್ನು ಹೊಂದಿದ್ದರು. ಆ ಚಹರೆಗಳೆಲ್ಲವನ್ನೂ ಗುಮ್ಮನಾಯಕ ಪಾಳ್ಯ ಬಿಂಬಿಸುತ್ತದೆ.

ಇಂದು ಜನ ಪ್ರತಿನಿಧಿಗಳು, ವಿದ್ಯಾವಂತರು ಐತಿಹಾಸಿಕ ಸ್ಥಳಗಳ, ಸ್ಮಾರಕಗಳ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿರುವುದು ತುಂಬಾ ಬೇಸರ ಸಂಗತಿಯಾಗಿದೆ. ಅನಕ್ಷರಸ್ಥರೂ ಧಾರ್ಮಿಕವಾಗಿ ಹಾಗೂ ಪುರಾತನ ಸ್ಮಾರಕಗಳನ್ನು ಸಂಪತ್ತನ್ನು ಕಾಪಾಡಲು ಪ್ರಯತ್ನ ಮಾಡುತ್ತಿದ್ದರೆ, ಎಲ್ಲವನ್ನೂ ಬಲ್ಲವರು ಈ ಐತಿಹಾಸಿಕ ಶ್ರೀಮಂತಿಕೆಯನ್ನು ವಿಸ್ಮರಿಸಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಈ ಐತಿಹಾಸಿಕ ಸ್ಮಾರಕಗಳನ್ನು ಕಾಪಾಡಬೇಕು ಎನ್ನುತ್ತಾರೆ ವಿಕಾಸ್ ಕಾಲೇಜ್‌ನ ಪ್ರಾಂಶುಪಾಲ ಪಿ.ಎನ್.ಶಿವಣ್ಣ.

ಗುಮ್ಮನಾಯಕನ ಪಾಳ್ಯ ಕೋಟೆಗೆ 12ನೇ ಶತಮಾನದಿಂದ 19ನೇ ಶತಮಾನದ ಮಧ್ಯಕಾಲದವರಗೆ ಇತಿಹಾಸವಿದೆ. ಈ ಅವಿಚ್ಛಿನ್ನವಾದ ಚರಿತ್ರೆ ಹಾಗೂ ಕಲೆ ವಾಸ್ತಶಿಲ್ಪವನ್ನು ಸಂರಕ್ಷಿಸಿಕೊಳ್ಳಬೇಕಾದ ಅಗತ್ಯ ತುಂಬಾ ಇದೆ. ಈ ಜಾಗವನ್ನು ಐತಿಹಾಸಿಕ, ಪಾರಂಪರಿಕ ತಾಣವಾಗಿ ಉಳಿಸಿಕೊಳ್ಳಬೇಕಾದ ಅಗತ್ಯದ ಜತೆಗೆ, ಇದನ್ನು ಪ್ರವಾಸಿ ತಾಣವನ್ನಾಗಿಯೂ ಅಭಿವೃದ್ಧಿ ಮಾಡಬೇಕಿದೆ ಸ್ಥಳೀಯರೂ ಆದ ಬರಹಗಾರ ಎಂ.ಎಲ್.ನರಸಿಂಹ ಮೂರ್ತಿ.


  • ಈ ಲೇಖನವನ್ನು ಓದಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ..
ಇಟ್ಟಿಗೆರಾಯನ ದುರ್ಗವೆಂಬ 700 ವರ್ಷಗಳ ಐತಿಹಾಸಿಕ ಕೋಟೆ! ಆಡಳಿತ ನಡೆಸುವವರ ಅನಾದರಕ್ಕೆ ಪರಾಕಾಷ್ಠೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೊಂದು ಹಾಳುಹಂಪೆ!!

ಡಿ.ಜಿ ಪವನ್ ಕಲ್ಯಾಣ್ I ಓದಿದ್ದು ಇಂಗ್ಲೀಷ್‌ ಲಿಟರೇಚರ್.‌ ಹವ್ಯಾಸ ಇತಿಹಾಸ ಮತ್ತು ಸಂಶೋಧನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಐತಿಹಾಸಿಕ ತಾಣಗಳ ಬಗ್ಗೆ ಅತೀವ ಆಸಕ್ತಿ. ದೇವಿಕುಂಟೆ ಕೋಟೆಯ ಕುರಿತು ಆಳವಾದ ಶೋಧ ಮಾಡುತ್ತಿದ್ದಾರೆ.

Tags: bagepallichikkaballapuragummanayaka fortkarnataka historytipu sultanvijayanagara empire
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಬಾಗೇಪಲ್ಲಿಯಲ್ಲಿ ನಾಯಿಗಳ ದಾಳಿಗೆ ತತ್ತರಿಸಿದ ಜಿಂಕೆ, ಅರಣ್ಯ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ  ಬದುಕುಳಿದ ಮೂಕಜೀವಿ

ಬಾಗೇಪಲ್ಲಿಯಲ್ಲಿ ನಾಯಿಗಳ ದಾಳಿಗೆ ತತ್ತರಿಸಿದ ಜಿಂಕೆ, ಅರಣ್ಯ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಬದುಕುಳಿದ ಮೂಕಜೀವಿ

Comments 1

  1. Devappa says:
    4 years ago

    ಗುಮ್ಮಾನಾಯಕನ ಪಾಳ್ಯ ಇತಿಹಾಸ ಸಂಶೋಧನೆಗೆ ಅನುಮತಿ ನೀಡಿ ಇನ್ನು ಮಾಹಿತಿ ಹುಡುಕಿ ಹಿತಿಹಾಸ ಪುಟ್ಟ ಸೇರಿಸಬೇಕು ಸರಕಾರ, ಕರ್ನಾಟಕದಲ್ಲಿ ಇಂತಹ ಹಿತಿಹಾಸ ಎಲೆ ಮರೆ ಕಾಯಿಯಂತೆ ಇವೆ

    Reply

Leave a Reply Cancel reply

Your email address will not be published. Required fields are marked *

Recommended

ಡಿಕೆಶಿಗೆ ಭರ್ಜರಿ ಆಫರ್‌ ನೀಡಿದ ಕುಮಾರಸ್ವಾಮಿ!!

ಡಿಕೆಶಿಗೆ ಭರ್ಜರಿ ಆಫರ್‌ ನೀಡಿದ ಕುಮಾರಸ್ವಾಮಿ!!

2 years ago
ವಿದುರಾಶ್ವತ್ಥವನ್ನು ಅಂತಾರಾಷ್ಟ್ರೀಯ ಸ್ಮಾರಕ ಕೇಂದ್ರ ಮಾಡುವುದರ ಜತೆಗೆ ಚಿಕ್ಕಬಳ್ಳಾಪುರ, ಕೋಲಾರಕ್ಕೆ ಕೃಷ್ಣಾ ನದಿ ನೀರು ತರಬೇಕು: ಸಿಎಂಗೆ ಸಚಿವ ಡಾ.ಕೆ.ಸುಧಾಕರ್ ಮನವಿ

ರಾಜ್ಯದಲ್ಲಿ 300ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಸೋಂಕಿತರು ಪತ್ತೆ, ಎಲ್ಲ ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿದೆ ಚಿಕಿತ್ಸೆ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ