• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ರಂಗಸ್ಥಳದ ಶ್ರೀ ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಚೋಳರು ಕಟ್ಟಿಸಿದ ಪವಿತ್ರ ರಂಗಧಾಮ ಕೆರೆಗೆ ಬೆಂಗಳೂರು ತ್ಯಾಜ್ಯ ತುಂಬಿಸುತ್ತಿದೆ ಸರಕಾರ! ಜಿಲ್ಲಾಡಳಿತ ಸೈಲಂಟ್!!‌ ಧರ್ಮದ ಜತೆಗೆ ಪರಿಸರಕ್ಕೂ ಎಫೆಕ್ಟ್!!!

cknewsnow desk by cknewsnow desk
May 19, 2021
in CHIKKABALLAPUR, STATE
Reading Time: 2 mins read
1
ರಂಗಸ್ಥಳದ ಶ್ರೀ ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಚೋಳರು ಕಟ್ಟಿಸಿದ ಪವಿತ್ರ ರಂಗಧಾಮ ಕೆರೆಗೆ ಬೆಂಗಳೂರು ತ್ಯಾಜ್ಯ  ತುಂಬಿಸುತ್ತಿದೆ ಸರಕಾರ! ಜಿಲ್ಲಾಡಳಿತ ಸೈಲಂಟ್!!‌  ಧರ್ಮದ ಜತೆಗೆ ಪರಿಸರಕ್ಕೂ ಎಫೆಕ್ಟ್!!!

ಚಿಕ್ಕಬಳ್ಳಾಪುರದ ರಂಗಧಾಮ ಕೆರೆ.

955
VIEWS
FacebookTwitterWhatsuplinkedinEmail

Special Story

ಚೋಳರು ಕಟ್ಟಿಸಿದ ಕೆರೆ. 96 ಎಕರೆಯಷ್ಟು ವಿಶಾಲ, 3 ಐತಿಹಾಸಿಕ ಕಲ್ಯಾಣಿಗಳು ಸಾವಿರಾರು ವರ್ಷದ ಇತಿಹಾಸಕ್ಕೆ ಸಾಕ್ಷಿ. ಧರ್ಮ-ಐತಿಹಾಸಿಕ ದೃಷ್ಟಿಯಿಂದ ಸೂಕ್ಷ್ಮ ಪಾರಂಪರಿಕ ತಾಣ ರಂಗಸ್ಥಳ. ಬಿಜೆಪಿ ಸರಕಾರದ ಅವಧಿಯಲ್ಲೇ ಶ್ರೀ ರಂಗನಾಥ ಸ್ವಾಮಿ ಸನ್ನಿಧಿಯ ನಿರ್ಲಕ್ಷ್ಯವೇ!?

By PK Channakrishna I M Krishnappa

ಚಿಕ್ಕಬಳ್ಳಾಪುರ: ಜಿಲ್ಲೆಯ ಕೆರೆಗಳಿಗೆ ಬೆಂಗಳೂರಿನ ತ್ಯಾಜ್ಯ ನೀರು ಹರಿಸುವ ಮೂಲಕ ರಾಜ್ಯ ಸರಕಾರವೇ ಮಾಡುತ್ತಿರುವ ವಿಷಪ್ರಾಶನಕ್ಕೆ ಮೀನುಗಳು ಮಾತ್ರವಲ್ಲದೆ, ಇತರೆ ಜಲಚರಗಳ ಮಾರಣಹೋಮ ನಡೆಯುತ್ತಿರುವುದು ಮುಂದುವರಿದಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ಒಂದೂವರೆ ಕಿ.ಮೀ ದೂರದಲ್ಲಿರವ ಇತಿಹಾಸ ಪ್ರಸಿದ್ಧ ರಂಗಸ್ಥಳದ ಶ್ರೀ ರಂಗನಾಥ ಸ್ವಾಮಿ ದೇಗುಲಕ್ಕೆ ಅನತಿ ದೂರದಲ್ಲಿರುವ (ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ) ರಂಗಧಾಮ ಕೆರೆಗೆ ಹರಿಯುತ್ತಿರುವ ಅರೆಬರೆ ಸಂಸ್ಕರಣೆಯ ಎಚ್.ಎನ್.‌ವ್ಯಾಲಿ ನೀರಿನ ಅಪಾಯಕಾರಿ ವಿಷಾಂಶಗಳಿಗೆ ಸಿಕ್ಕಿ ಮೀನುಗಳು ಸಾವನ್ನಪ್ಪಿವೆ. ಚೋಳರ ಕಾಲದಲ್ಲಿ ನಿರ್ಮಾಣವಾದ ಈ ಐತಿಹಾಸಿಕ ಕೆರೆ ಸುಮಾರು 96 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಅಲ್ಲಿಯೇ ಮೂರು ಐತಿಹಾಸಿಕ ಕಲ್ಯಾಣಿಗಳೂ ಇವೆ. ಈ ದೃಷ್ಟಿಯಿಂದ ನೋಡಿದರೆ ಇದು ಪಾರಂಪರಿಕ ಸೂಕ್ಷ್ಮ ತಾಣವಾಗಿದೆ.

ಜಗತ್ತಿನ ನಾನಾ ಮೂಲೆಗಳಿಂದ ಶರತ್ಕಾಲದಲ್ಲಿ ಸಂತಾನೋತ್ಪತ್ತಿಗಾಗಿ ವಿದೇಶಗಳಿಂದ ಬರುತ್ತಿದ್ದ ಪಕ್ಷಿಗಳನ್ನು ನೋಡಲು ಇಲ್ಲಿಯೇ ಯಾವಾಗಲೂ ಜನಜಾತ್ರೆಯೇ ಸೇರುತ್ತಿತ್ತು. ಆದರೆ, ಕಳೆದೊಂದು ವರ್ಷದಿಂದ ಈ ಕೆರೆಗೆ ಬೆಂಗಳೂರು ತ್ಯಾಜ್ಯ ನೀರನ್ನು ಹರಿಸುವುದು ಶುರುವಾದ ಮೇಲೆ ಹೊರ ದೇಶಗಳಿಂದ ಹಕ್ಕಿಗಳು ಬರುವುದಿರಲಿ, ಅಕ್ಕಪಕ್ಕದ ಗ್ರಾಮಗಳ ಜನರೂ ಬರುವುದನ್ನೂ ನಿಲ್ಲಿಸಿದ್ದಾರೆ.

ಅಪಾಯಕಾರಿ ತ್ಯಾಜ್ಯ ನೀರು ಸುತ್ತಮುತ್ತಲ ಜನರು, ಪಶುಪಕ್ಷಗಳಿಗೆ ಮರಣಶಾಸನವಾಗಿ ಪರಿವರ್ತನೆಯಾಗಿದ್ದು, ಮೀನುಗಳ ಸಾವು ಅದಕ್ಕೊಂದು ಮುನ್ನೆಚ್ಚರಿಕೆಯ ಗಂಟೆ. ಕೆರೆಯಲ್ಲಿ ಸತ್ತು ಬಿದ್ದಿರುವ ಮೀನುಗಳನ್ನು ಕಂಡು ಆತಂಕಗೊಂಡ ಅಕ್ಕಪಕ್ಕದ ಗ್ರಾಮಸ್ಥರು, ದುರ್ನಾತ ಬೀರುತ್ತಿರುವ ಕೆರೆ ನೀರಿನ ಹತ್ತಿರಕ್ಕೂ ಸುಳಿಯದಾಗಿದ್ದಾರೆ.

ಸ್ವತಃ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರ ಸ್ವಕ್ಷೇತ್ರಕ್ಕೇ ರಾಜಧಾನಿಯ ತ್ಯಾಜ್ಯ ನೀರನ್ನು ಸಮರ್ಪಕವಾಗಿ ಸಂಸ್ಕರಣೆ ಮಾಡದೇ ನೇರವಾಗಿ ಹರಿಸಲಾಗುತ್ತಿದೆ. ಜನರ ಆರೋಗ್ಯವೂ ಹಾಳಾಗುತ್ತಿರುವುದರ ಜತೆಗೆ, ಪರಿಸರದ ಆರೋಗ್ಯವೂ ಸರ್ವನಾಶವಾಗುತ್ತಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರವಲ್ಲದೆ, ಜಿಲ್ಲಾಡಳಿತವೂ ಮೌನಕ್ಕೆ ಶರಣಾಗಿದೆ. ಒಂದೆಡೆ ಧರ್ಮೋದ್ಧಾರದ ಮಾತನಾಡುವ ಬಿಜೆಪಿ ನಾಯಕರು, ಧಾರ್ಮಿಕ ಪುಣ್ಯಧಾಮವಾದ ರಂಗಸ್ಥಳದ ಬಗ್ಗೆ ಮೌನ ವಹಿಸಿರುವುದು ಸರಿಯಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೇಳಿದ್ದು ಜಕ್ಕಲಮಡುಗು ನೀರು, ಬಿಟ್ಟಿದ್ದು ಗಲೀಜು ನೀರು

ಪರಿಸರ, ಐತಿಹಾಸಿಕವಾಗಿ ಮಾತ್ರವಲ್ಲದೆ ಧಾರ್ಮಿಕವಾಗಿಯೂ ಸೂಕ್ಷ್ಮ ಪ್ರದೇಶವಾದ ರಂಗಸ್ಥಳದ ರಂಗಧಾಮ ಕೆರೆಯನ್ನು ಅತ್ಯಂತ ರಹಸ್ಯವಾಗಿ ಎಚ್‌ಎನ್‌ ವ್ಯಾಲಿ ಯೋಜನೆಗೆ ಲಿಂಕ್‌ ಮಾಡಲಾಗಿದೆ. ಈ ಕೆರೆ ಕಲುಶಿತವಾಗಬಾರದು ಎಂಬ ಉದ್ದೇಶದಿಂದ ಜಕ್ಕಲಮಡುಗು ನೀರು ಪೂರೈಕೆ ಮಾಡುವುದಾಗಿ ಮೊದಲು ಪೈಪ್‌ಲೈನ್‌ ಎಳೆಯಲಾಯಿತು. ಅದರ ಸುತ್ತ ಸುಳ್ಳಿನ ಸರಮಾಲೆಯನ್ನೇ ಸೃಷ್ಟಿ ಮಾಡಲಾಯಿತು. ಆದರೆ, ಕೊನೆಗೆ ಬಂದಿದ್ದು ನೋಡಿದರೆ ಬೆಂಗಳೂರಿನ ಅರೆಬರೆ ಸಂಸ್ಕರಣೆ ಮಾಡಿದ ಕೊಳಚೆ ನೀರು ಎಂದು ಹೇಳುತ್ತಾರೆ ಸ್ಥಳೀಯರು.

ಈ ಬಗ್ಗೆ ಸಿಕೆನ್ಯೂಸ್‌ ನೌ ಜತೆ ಮಾತನಾಡಿದ ಸ್ಥಳೀಯರೊಬ್ಬರು, ಕೆರೆಯಲ್ಲಿ ಸತ್ತುಬಿದ್ದಿದ್ದ ಮೀನುಗಳ ಮಾಹಿತಿಯನ್ನು ಹಂಚಿಕೊಂಡರು. ಅವರು ಹೇಳಿದ್ದಿಷ್ಟು.

“ಸೋಮವಾರ ಸಂಜೆಯೇ ಮೀನುಗಳು ನೀರಿನಲ್ಲಿ ಸತ್ತು ಕೆರೆಯ ದಡಕ್ಕೆ ತೇಲಿಬಂದು ಬಿದ್ದಿದ್ದವು. ಒಂದು ಕಡೆ ಕೆರೆಯಲ್ಲಿದ್ದ ಜಲಚರಗಳು ಸಾಯುತ್ತಿದ್ದರೆ, ಇನ್ನೊಂದೆಡೆ ಅಲ್ಲಿ ವಿಷಕ್ರಿಮಿಗಳು ಉತ್ಪತ್ತಿಯಾಗಿವೆ. ಅವು ಕಣ್ಣಿಗೆ ಬಿದ್ದರೆ ತೀವ್ರ ಉರಿಯಾಗುತ್ತದೆ ಮತ್ತೂ ಸಿಕ್ಕಾಪಟ್ಟೆ ನವೆಯಾಗುತ್ತದೆ. ಕಣ್ಣಿಗೆ ತುಂಬಾ ತೊಂದರೆಯಾಗಿ ಕೊನೆಗೆ ಹೈಡ್ರಾಪ್ಸ್‌ ಹಾಕಿಕೊಂಡು ಸರಿಮಾಡಿಕೊಳ್ಳಬೇಕು” ಎಂದು ಅಳಲು ತೋಡಿಕೊಂಡರು.

ಅಪಾಯಕಾರಿ ಎಂದರೆ, ರಂಗಧಾಮ ಕೆರೆಯು ಚಿಕ್ಕಬಳ್ಳಾಪುರ ನಗರಕ್ಕೆ ಹತ್ತಿರದಲ್ಲಿದೆ. ಇದೇ ರೀತಿ ಮುಷ್ಠೂರು ಕೆರೆ, ಕಂದವಾರ ಕೆರೆಗಳು ಕೂಡ ಸನಿಹದಲ್ಲೇ ಇವೆ. ಮೂರೂ ಕೆರೆಗಳಿಗೂ ಬೆಂಗಳೂರು ನೀರು ಬಿಟ್ಟು ಸಂಪೂರ್ಣವಾಗಿ ಕಲುಶಿತಗೊಳಿಸಲಾಗಿದೆ. ಗಬ್ಬುನಾತದ ಜತೆಗೆ, ಜನರ ಆರೋಗ್ಯವನ್ನೂ ಹಾಳು ಮಾಡುತ್ತಿವೆ. ಚಿಕ್ಕಬಳ್ಳಾಪುರದ ಸುತ್ತಮುತ್ತ ಮೂರು ಬೆಳ್ಳಂದೂರು ಕೆರೆಗಳನ್ನು ಸೃಷ್ಟಿ ಮಾಡಲಾಗಿದೆ. ಕೆರೆಗಳ ತುಂಬಾ ನೊರೆ ಎದ್ದಿದ್ದು, ಆ ನೀರು ಹಸಿರು, ಕಪ್ಪು ಬಣ್ಣದಲ್ಲಿದೆ ಎಂದು ಸ್ಥಳೀಯ ಪರಿಸರ ಪ್ರೇಮಿಯೊಬ್ಬರು ನೊಂದು ಹೇಳಿದ ಮಾತು. ಅವರಗೆ ಹೆಸರು ಹೇಳಲಿಕ್ಕೂ ಭಯವಿದೆ ಎಂದರೆ ʼರಿಪಬ್ಲಿಕ್‌ ಆಫ್‌ ಚಿಕ್ಕಬಳ್ಳಾಪುರದ ಪರಿಸ್ಥಿತಿʼಯನ್ನು ಅರ್ಥ ಮಾಡಿಕೊಳ್ಳಬಹುದು.

ಕೆಲ ದಿನಗಳ ಹಿಂದೆ ಕಂದವಾರ ಕರೆಯಲ್ಲಿ ಕಂಡುಬಂದಿದ್ದ ದೃಶ್ಯವಿದು.

ಕೇಂದ್ರದ ಮಾರ್ಗಸೂಚಿ ಉಲ್ಲಂಘನೆ

ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಿಗೆ ಬೆಂಗಳೂರು ಕೊಳಚೆ ನೀರು ಹರಿಸಲು ಜಾರಿಗೆ ತಂದಿರುವ ಎಚ್‌ಎನ್‌ ವ್ಯಾಲಿ & ಕೆಸಿ ವ್ಯಾಲಿ ಯೋಜನೆಗಳು ಕೇಂದ್ರ ಸರಕಾರದ 2013ರ ಮಾರ್ಗಸೂಚಿಯನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿವೆ. 3ನೇ ಹಂತದಲ್ಲಿ ಇಂಥ ನೀರನ್ನು ಶುದ್ಧೀಕರಣ ಮಾಡಿದ ಮೇಲೆ ಮಾತ್ರವೇ ಬಳಸಿಕೊಳ್ಳಬೇಕು ಎಂಬುದು ಆ ಮಾರ್ಗಸೂಚಿಯ ಆಶಯ. ಈ ಯೋಜನೆಗಳು ಅನುಷ್ಠಾನಕ್ಕೆ ಬರುವ ಸಂದರ್ಭದಲ್ಲಿ ಈ ಮಾರ್ಗಸೂಚಿಯೂ ಬಂತು. ಅದರ ಆಧಾರದ ಮೇಲೆಯೇ ಇವೆರಡೂ ಯೋಜನೆಗಳ ಸಮಗ್ರ ಯೋಜನಾ ವರದಿ ಸಿದ್ಧವಾಯಿತು. ಆಗ ತಜ್ಞರು ಕೇಂದ್ರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಒತ್ತಿ ಹೇಳುತ್ತಾರೆ. ಆದರೆ, ರಾಜಕೀಯ ನಾಯಕರು, ಗುತ್ತಿಗೆದಾರರು, ಅಧಿಕಾರಿಗಳ ಅನೈತಿಕ ಲಾಬಿಯಿಂದ ಮೂರನೇ ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡುವ ಕೇಂದ್ರದ ಮಾರ್ಗಸೂಚಿಯ ಅತಿಮುಖ್ಯ ಅಂಶವನ್ನು ಬೇಕೆಂದೇ ನಿರ್ಲಕ್ಷ್ಯ ಮಾಡುತ್ತಾರೆ. ಆಗ ಸರಕಾರ ಒಂದು ದೊಡ್ಡ ಸುಳ್ಳು ಹೇಳುತ್ತದೆ. ಅದೇನೆಂದರೆ, ಈ ನೀರನ್ನೂ ಕೃಷಿಗಾಗಲಿ ಅಥವಾ ಕುಡಿಯುವ ಉದ್ದೇಶಕ್ಕೆ ನೇರವಾಗಿ ಬಳಸುವುದಿಲ್ಲ ಎಂದು. ಇಲ್ಲಿ ತಜ್ಞರು ಅಸಹಾಯರಾಗುತ್ತಾರೆ. ಅದರ ಪ್ರತಿಫಲವೇ ಇವತ್ತು ರಂಗಧಾಮ ಕೆರೆಯ ದುಃಸ್ಥಿತಿ ಎನ್ನುತ್ತಾರೆ ಜಿಲ್ಲೆಯ ನೀರಾವರಿ ಹೋರಾಟಗಾರ ಆರ್.ಆಂಜನೇಯ ರೆಡ್ಡಿ.

ನೇರವಾಗಿ ಕೃಷಿ ಮತ್ತು ಕುಡಿಯಲು ತ್ಯಾಜ್ಯ ನೀರನ್ನು ಬಳಸುವುದಿಲ್ಲ ಎನ್ನುವ ಸುಳ್ಳಿನೊಂದಿಗೆ ಈ ನೀರನ್ನು ಚಿಕ್ಕಬಳ್ಳಾಪುರ-ಕೋಲಾರಕ್ಕೆ ಹರಿಸಲಾಗುತ್ತಿದೆ. ಇದರ ಬಗ್ಗೆ ನಾವು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಈ ಯೋಜನೆಗಳು ಕೇಂದ್ರ ಸರಕಾರದ ಮಾರ್ಗಸೂಚಿ & ಹಸಿರು ನ್ಯಾಯಮಂಡಳಿ ಆದೇಶಗಳ ಸ್ಪಷ್ಟ ಉಲ್ಲಂಘನೆ. ಇದಲ್ಲದೆ, ಮೂರನೇ ಹಂತದ ಸಂಸ್ಕರಣೆ ಬಗ್ಗೆ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ, ಸರಕಾರಕ್ಕೂ ಅದರತ್ತ ಗಮನ ಇಲ್ಲ ಎಂದು ರೆಡ್ಡಿ ಬೇಸರ ವ್ಯಕ್ತಪಡಿಸಿದರು.

ವಿಧಿ ಇಲ್ಲದ ಅಸಹಾಯಕ ಸ್ಥಿತಿ ಜನರದ್ದು

ರಂಗಧಾಮ ಕೆರೆಯ ಆಸುಪಾಸಿನಲ್ಲಿ ಅಂಕಣಗೊಂದಿ, ದಿಣ್ಣೆ ಹೊಸಹಳ್ಳಿ ಗ್ರಾಮಗಳಿವೆ. ಜತೆಗೆ ಸುತ್ತಲೂ ಅರಣ್ಯ, ಬೆಟ್ಟಗುಡ್ಡಗಳಿವೆ. ನೋಡಲು ಬಹಳ ಸುಂದರವಾಗಿರುತ್ತದೆ. ಅದೂ ರಂಗನಾಥ ಸ್ವಾಮಿ ದೇವಾಲಯ ಇರುವುದರಿಂದ ಇಡೀ ಪ್ರದೇಶಕ್ಕೆ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ ಇದೆ. ಇಂಥ ಸಂದರ್ಭದಲ್ಲಿ ರಂಗಧಾಮ ಕೆರೆಯಲ್ಲಿರುವ ತ್ಯಾಜ್ಯ ನೀರು, ದುರ್ನಾತ ಇಡೀ ಪ್ರದೇಶದ ವಾತಾವರಣವನ್ನು ಹಾಳು ಮಾಡುತ್ತಿದೆ. ಅಲ್ಲದೆ, ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆಯನ್ನೂ ಕೆಡಿಸುತ್ತಿದೆ. ಅಲ್ಲದೆ, ಎರಡೂ ಗ್ರಾಮಗಳ ಜನರ ಆರೋಗ್ಯಕ್ಕೆ ಮಾರಕವೂ ಆಗಿದೆ ಎಂದು ಹೇಳುತ್ತಾರೆ ಚಿಕ್ಕಬಳ್ಳಾಪುರದ ಹಿರಿಯ ವಕೀಲ ನಾರಾಯಣಸ್ವಾಮಿ.

ಬೆಂಗಳೂರಿನಿಂದ ವಿಷಕಾರಿ ನೀರು ಹರಿದುಬಂದು ನಮ್ಮ ಕೆರೆಗಳನ್ನು ಸೇರಿಕೊಳ್ಳುತ್ತಿದೆ. ಆ ನೀರು ಭೂಮಿಯಾಳಕ್ಕೆ ಸೇರುತ್ತಿದೆ. ಜನರು ಬೋರ್‌ವೆಲ್‌ಗಳಿಗೆ ಸೇರುತ್ತಿರುವ ಇದೇ ನೀರನ್ನೇ ಕುಡಿಯುತ್ತಿದ್ದಾರೆ. ವ್ಯವಸಾಯ ಮತ್ತು ಪಶು ಸಂಗೋಪನೆಗೆ ಬೇರೆ ದಾರಿ ಇಲ್ಲದೆ ಈ ನೀರನ್ನೇ ಬಳಕೆ ಮಾಡಲಾಗುತ್ತಿದೆ. ಪಕ್ಷಿಗಳು, ಪಶುಗಳು ಇದೇ ನೀರನ್ನೇ ಕುಡಿಯುತ್ತಿವೆ. ಹೀಗಾಗಿ ಪಶು ಸಂಪತ್ತಿನ ಆರೋಗ್ಯವೂ ಹಾಳಾಗುತ್ತಿದೆ. ನಮ್ಮ ಹಳ್ಳಿಯ ಪಕ್ಕದ ಪೂರ್ಣಸಾಗರ ಕೆರೆಗೆ ಇದೇ ನೀರನ್ನು ಹರಿಸಲಾಗಿದೆ. ನಮ್ಮದೊಂದು ಬೋರ್‌ವೆಲ್‌ ಇತ್ತು. ಅದರಲ್ಲಿ ಶುದ್ಧ ನೀರು ಬರುತ್ತಿತ್ತು. ಈಗ ಕೆರೆಯಲ್ಲಿ ತ್ಯಾಜ್ಯ ನೀರು ತುಂಬಿದ ಪರಿಣಾಮ ಬೋರ್‌ವೆಲ್‌ನ ಮೇಲಿನ ಗ್ಯಾಪ್‌ಗಳೆಲ್ಲ ಒಪೆನ್‌ ಆಗಿದ್ದು, ಇದೀಗ ಕೆರೆಯಲ್ಲಿದ್ದ ತ್ಯಾಜ್ಯ ನೀರು ಬೋರ್‌ವೆಲ್‌ನಲ್ಲಿ ಬಂದು ತುಂಬಿದೆ. ಕೆಲವೊಮ್ಮೆ ಬಿಳಿ ನೀರು ಬಂದರೆ, ಇನ್ನೊಮ್ಮೆ ದುರ್ನಾತದಿಂದ ಕೂಡಿದ ತ್ಯಾಜ್ಯ ನೀರು ಬರುತ್ತಿದೆ. ವಾಸ್ತವಾಂಶ ಹೀಗಿದೆ. ಹಣ ಇದ್ದವರು ವಾಟರ್ ಫಿಲ್ಟರ್‌ಗಳನ್ನು ಹಾಕಿಕೊಂಡಿದ್ದಾರೆ. ಇಲ್ಲದವರ ಪರಿಸ್ಥಿತಿ ಏನು ಎಂದು ವಕೀಲ ನಾರಾಯಣಸ್ವಾಮಿ ಅವರು ಪ್ರಶ್ನಿಸುತ್ತಾರೆ.

ಒಟ್ಟಾರೆಯಾಗಿ, ರಂಗಧಾಮ ಕೆರೆಯನ್ನು ಉಳಿಸಿಕೊಳ್ಳಲು ತ್ಯಾಜ್ಯ ನೀರನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಅಥವಾ ಆ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಿಸಿ ಬಿಡಬೇಕು. ಇದು ಸ್ಥಳೀಯರ ಒತ್ತಾಯವಾಗಿದೆ.

Tags: bengaluru sewage waterchikkaballapurahn vallykarnatakakolarrangadhama lakerangasthalasri ranganathaswamy temple
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಬಾಗೇಪಲ್ಲಿಯಲ್ಲಿ ವೀಕೆಂಡ್‌ ಲಾಕ್‌ಡೌನ್‌ ಸಕ್ಸಸ್;‌ ಪಟ್ಟಣ ಸೇರಿ ತಾಲೂಕಿನಾದ್ಯಂತ ಜನಜೀವನ ಬಹತೇಕ ಸ್ತಬ್ಧ

ಇವತ್ತು ಸೂರ್ಯೋದಯದಿಂದಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 4 ದಿನ ಫುಲ್‌ ಲಾಕ್‌ಡೌನ್;‌ ಆಂಧ್ರ ಪ್ರದೇಶದವರಿಗೆ ಅವಕಾಶ ಇಲ್ಲ & ಕೋಲಾರ, ಬೆಂಗಳೂರು ಸೇರಿ ಹೊರಗಿನವರಿಗೆ ನೋ ಎಂಟ್ರಿ

Comments 1

  1. Pingback: ಅಂತಾರಾಷ್ಟ್ರೀಯ ಅಭಿವೃದ್ಧಿ ಎಂದರೆ ಇದೇನಾ ಡಾ.ಸುಧಾಕರ್‌ ಅವರೇ..? - cknewsnow

Leave a Reply Cancel reply

Your email address will not be published. Required fields are marked *

Recommended

ಕೋವಿಡ್‌ ಅಟ್ಟಹಾಸದಲ್ಲೂ ಹಳ್ಳಿಮಕ್ಕಳ ಮೊಗದಲ್ಲಿ ಮೂಡಿತು ಮಂದಹಾಸ!!

ಕೋವಿಡ್‌ ಅಟ್ಟಹಾಸದಲ್ಲೂ ಹಳ್ಳಿಮಕ್ಕಳ ಮೊಗದಲ್ಲಿ ಮೂಡಿತು ಮಂದಹಾಸ!!

4 years ago
ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಕೊಡದೇ ಅನ್ಯಾಯ ಮಾಡಲೇಬೇಕು ಎಂಬುದೆ ಬಿಜೆಪಿ ಸರಕಾರದ ದುರುದ್ದೇಶ ಎಂದ ಕೃಷ್ಣಭೈರೇಗೌಡ

ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಕೊಡದೇ ಅನ್ಯಾಯ ಮಾಡಲೇಬೇಕು ಎಂಬುದೆ ಬಿಜೆಪಿ ಸರಕಾರದ ದುರುದ್ದೇಶ ಎಂದ ಕೃಷ್ಣಭೈರೇಗೌಡ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ