• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಪರಿಣಾಮ; ʼಬಡವರ ಖರ್ಜೂರಾʼ ಬೆಳೆಯುವ ಈಚಲು ಮರಗಳ ಮಾರಣಹೋಮ

cknewsnow desk by cknewsnow desk
May 27, 2021
in CHIKKABALLAPUR, STATE
Reading Time: 1 min read
0
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಪರಿಣಾಮ; ʼಬಡವರ ಖರ್ಜೂರಾʼ ಬೆಳೆಯುವ ಈಚಲು ಮರಗಳ ಮಾರಣಹೋಮ
1.1k
VIEWS
FacebookTwitterWhatsuplinkedinEmail

photos courtesy: Wikipedia

ಈ ಹಣ್ಣು ಖರ್ಜೂರಕ್ಕಿಂತಲೂ ಚಿಕ್ಕ ಗಾತ್ರ ಇದೆ. ಹಣ್ಣಾದರೆ ಕಪ್ಪು ಬಣ್ಣದಾಗಿರುತ್ತದೆ. ಖರ್ಜೂರ ಹಣ್ಣಿನಲ್ಲಿ ಇರುವ ಪೌಷ್ಟಿಕಾಂಶಗಳು ಈಚಲಿನ ಹಣ್ಣಿನಲ್ಲಿ ಇವೆ. ಖರ್ಜೂರಕ್ಕಿಂತಲೂ ಈಚಲು ಹಣ್ಣು ತಿನ್ನಲು ಹೆಚ್ಚಾಗಿ ಸಿಹಿ ಆಗಿರುತ್ತದೆ.

by Ra Na Gopala Reddy

ಬಾಗೇಪಲ್ಲಿ: ತಾಲ್ಲೂಕಿನ ಗೂಳೂರು ಹೋಬಳಿಯ ದೇವಿಕುಂಟೆ, ಕೊಲಿಂಪಲ್ಲಿ ಬೆಟ್ಟಗಳಲ್ಲಿ ಹೆಚ್ಚಾಗಿ ಈಚಲು ಹಣ್ಣುಗಳು ಸಿಗುತ್ತಿದ್ದು, ತಿನ್ನಲು ಬಲು ರುಚಿಕರವಾಗಿರುತ್ತವೆ. ಆದರೆ, ಈಚೆಗೆ ಈಚಲು ಗಿಡಗಳು ಕಣ್ಮರೆಯಾಗುತ್ತಿವೆ.

30 ವರ್ಷಗಳ ಹಿಂದೆ ತಾಲ್ಲೂಕಿನ ಗೂಳೂರು ಹೋಬಳಿಯಲ್ಲಿ ಬಹುತೇಕವಾಗಿ ಬೆಟ್ಟ-ಗುಡ್ಡಗಳದೇ ಕಾರುಬಾರು. ಈ ಬೆಟ್ಟ-ಗುಡ್ಡಗಳಲ್ಲಿ ಗ್ರಾಮೀಣ ಪ್ರದೇಶಗಳ ಬೀಡು. ಇದೇ ಬೆಟ್ಟಗುಡ್ಡಗಳಲ್ಲಿ ಸಹಸ್ರಾರು ಜಾತಿಯ ಗಿಡ-ಮರಗಳು, ಔಷಧೀಯ ಸಸ್ಯಗಳು, ಸುಂದರವಾದ ಹೂವು ಹಾಗೂ ಹಣ್ಣುಗಳ ಗಿಡಮರಗಳು ವನ್ಯ ಸಂಪತ್ತು, ಹಸಿರನ್ನು ಹೊದ್ದು ಮಲಗುವ ರೀತಿಯಲ್ಲಿ ಬೆಟ್ಟ-ಗುಡ್ಡಗಳು ಕಾಣುತ್ತಿತ್ತು.

ಇತ್ತೀಚೆಗೆ ದುರಾಸೆಯಿಂದಾಗಿ ಬಹಳಷ್ಟು ಪ್ರಾಕೃತಿಕ ಸಂಪತ್ತು ಅಳವಿನಂಚಿಗೆ ತಲುಪಿವೆ. ಕೆಲ ಗಿಡ ಮರಗಳ ಪ್ರಬೇಧಗಳು ನಶಿಸಿ ಹೋಗಿವೆ. ಬೆಟ್ಟಗುಡ್ಡಗಳು ಹೆಚ್ಚಾಗಿ ಇರುವುದರಿಂದ ನಗರ ಪ್ರದೇಶಗಳ ಕೆಲ ಪ್ರಭಾವಿಗಳು ಗಣಿಗಾರಿಕೆಯನ್ನು ಮಾಡುತ್ತಾ ಕಲ್ಲುಬಂಡೆಗಳ ಕೊಳ್ಳೆ ಹೊಡೆಯುತ್ತಿದ್ದಾರೆ.

ಕೆಲವರು ರಾಜಕೀಯ ಪ್ರಭಾವ ಬಳಿಸಿ, ಅನುಮತಿ ಪಡೆದ ಜಾಗ ಹೊರತುಪಡಿಸಿ, ಅಕ್ರಮವಾಗಿ ಪಕ್ಕದ ಬೆಟ್ಟ-ಗುಡ್ಡಗಳಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಸ್ವಚ್ಛಂದವಾಗಿ ಕಾಣುತ್ತಿದ್ದ ಬೆಟ್ಟ-ಗುಡ್ಡಗಳು ಬೋಳಾಗಿವೆ. ಗಿಡ-ಮರಗಳು ಕಾಣಸಿಗದಾಗಿದೆ. ಬೋಳು ಬೆಟ್ಟಗಳಲ್ಲಿನ ಕಲ್ಲುಬಂಡೆಗಳನ್ನು ಕೇಕಿನಂತೆ ಕತ್ತರಿಸಿ, ಬೆಟ್ಟಗಳೇ ಇಲ್ಲದಂತೆ ಮಾಡುತ್ತಿದ್ದಾರೆ. ಹಸು, ಕುರಿ, ಮೇಕೆಗಳಿಗೆ ಮೇವು ಸಿಗದಂತೆ ಮಾಡುತ್ತಿರುವುದು ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದೆ.

‘ತಾಲ್ಲೂಕಿನ ದೇವಿಕುಂಟೆ, ಮಾಡಪ್ಪಲ್ಲಿ, ಕೊಲಿಂಪಲ್ಲಿ ಸೇರಿದಂತೆ ವಿವಿಧ ಗ್ರಾಮಗಳ ಪಕ್ಕದಲ್ಲಿನ ಬೆಟ್ಟ-ಗುಡ್ಡಗಳಲ್ಲಿ ಇದೀಗ ಈಚಲು ಮರಗಳು ಅಪರೂಪಕ್ಕೆ ಬೆಳೆದಿವೆ. ಈ ಹಣ್ಣು ಖರ್ಜೂರಕ್ಕಿಂತಲೂ ಚಿಕ್ಕ ಗಾತ್ರ ಇದೆ. ಹಣ್ಣಾದರೆ ಕಪ್ಪು ಬಣ್ಣದಾಗಿರುತ್ತದೆ. ಖರ್ಜೂರ ಹಣ್ಣಿನಲ್ಲಿ ಇರುವ ಪೌಷ್ಟಿಕಾಂಶಗಳು ಈಚಲಿನ ಹಣ್ಣಿನಲ್ಲಿ ಇವೆ. ಖರ್ಜೂರಕ್ಕಿಂತಲೂ ಈಚಲು ಹಣ್ಣು ತಿನ್ನಲು ಹೆಚ್ಚಾಗಿ ಸಿಹಿ ಆಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈಚಲು ಹಣ್ಣು ಸಿಗುತ್ತಿರುವುದು ಸಂತೋಷ ತಂದಿದೆ’ ಎಂದು ಕೊಲಿಂಪಲ್ಲಿ ಗ್ರಾಮದ ಹಿರಿಯರಾದ ಚಿನ್ನಪ್ಪಯ್ಯ ಹೇಳುತ್ತಾರೆ.

ಹಳ್ಳಿಗರ ಖರ್ಜೂರಾ

ಖರ್ಜೂರ ಹಾಗೂ ಈಚಲು ಮರಗಳು ಒಂದೇ ರೀತಿಯಲ್ಲಿ ಕಂಡರೂ ಕೆಲವು ವೈಶಿಷ್ಟಗಳು ಇವೆ. ಈಚಲು ಜಾತಿಯ ಮರಗಳನ್ನು ಗಂಡು, ಹೆಣ್ಣು ಈಚಲು ಮರಗಳು ಇವೆ. ಈಚಲು ಮರಗಳಿಂದ ನೀರಾ ಇಳಿಸುತ್ತಾರೆ. ಇದು ಹುಳಿತು ಹೆಂಡವಾಗುತ್ತದೆ. ಈಚಲು ಮರಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕಾಯಿಗಳು ಗೊಂಚಲುಗಳಾಗಿ ಬಿಟ್ಟು ಹಣ್ಣಾಗುತ್ತವೆ. ಗ್ರಾಮೀಣ ಭಾಗಗಳಲ್ಲಿ ಸಿಗುವ ಈಚಲು ಹಣ್ಣು ನೈಸರ್ಗಿಕವಾಗಿ ಸಿಗುತ್ತದೆ. ಹಣ್ಣುಗಳಲ್ಲಿ ನಾನಾ ಔಷಧೀಯ ಗುಣಗಳು ಇವೆ. ಇದನ್ನು ಬಡವರ ಖರ್ಜೂರಾ, ಹಳ್ಳಿಗರ ಖರ್ಜೂರಾ ಎಂದು ಕರೆಯುತ್ತಾರೆ ಎನ್ನುತ್ತಾರೆ ಹಿರಿಯರು.

‘ಕಿಲಕಿಲನೇ ನಗುತ್ತಿರಬೇಕಾದ ಗ್ರಾಮಗಳು ಗಳಗಳನೆ ಅಳುತ್ತಿವೆ. ಕೊರೊನಾದಂಥ ಬರೀ ಕಣ್ಣಿಗೆ ಕಾಣದ ವೈರಸ್‍ಗಳು ಹರಡಿ ಎಚ್ಚರಿಕೆಯನ್ನು ನೀಡುತ್ತಿವೆ. ಪ್ರಕೃತಿಯ ಮೇಲಿನ ಹಲ್ಲೆ, ನಾಶಗಳನ್ನು ಎಂದಿಗೂ ಸಹಿಸುವುದಿಲ್ಲ. ಚಿಕ್ಕಂದಿನಲ್ಲಿ ಈಚಲು ಹಣ್ಣು ಹೆಚ್ಚಾಗಿ ತಿನ್ನುತ್ತಿದ್ದೆವು. ಬೆಟ್ಟ-ಗುಡ್ಡಗಳಲ್ಲಿ ಗಿಡ-ಮರಗಳು, ಔಷಧೀಯ ಗಿಡಮೂಲಿಕೆಗಳು ನಾಶ ಆಗಿರುವುದರಿಂದ ಹಣ್ಣುಗಳು ಸಿಗುತ್ತಿಲ್ಲ. ಅರಣ್ಯ ಇಲಾಖೆಯವರು ಅರಣ್ಯ, ಬೆಟ್ಟ-ಗುಡ್ಡ, ಪರಿಸರದಲ್ಲಿ ನೈಸರ್ಗಿಕ ಸಂಪನ್ಮೂಲದ ಗಿಡ-ಮರಗಳನ್ನು ಉಳಿಸಿ-ಬೆಳೆಸಬೇಕು’ ಎನ್ನುತ್ತಾರೆ ಯುವ ರೈತ ಮಾಡಪ್ಪಲ್ಲಿ ನರಸಿಂಹಮೂರ್ತಿ.

ಈಚಲು ಮರಗಳನ್ನು ಉಳಿಸಿಕೊಳ್ಳಬೇಕಾಗಿದೆ. ಮೊದಲಾಗಿದ್ದರೆ ಪ್ರತಿ ಹಳ್ಳಿಯಲ್ಲಿ ಇವು ಕಾಣುತ್ತಿದ್ದವು. ಕಾಲ ಕಳೆದಂತೆ ಮರೆಯಾಗಿವೆ. ಮತ್ತೆ ತೋಟಗಾರಿಕೆ ಇಲಾಖೆ ಈಚಲು ಬೇಸಾಯಕ್ಕೆ ಪ್ರಾಮುಖ್ಯತೆ ನೀಡಿ ರೈತರಲ್ಲಿ ಅರಿವು ಮೂಡಿಸಬೇಕಾಗಿದೆ. ಬಹಳಷ್ಟು ರುಚಿಯಾದ ಈ ಹಣ್ಣಿನ ಸ್ವಾದ ಮುಂದಿನ ತಲೆಮಾರಿಗೂ ಉಳಿಯಬೇಕಾಗಿದೆ ಎನ್ನುತ್ತಾರೆ ನರಸಿಂಹಮೂರ್ತಿ.

Tags: bagepallichikkaballapuradateskarnatakaPhoenix sylvestrisstone crushersಈಚಲು
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ನೆಕ್ಸ್ಟ್ ಲೆವೆಲ್‌ಗೆ ರಾಜ್ಯದ ಪ್ರವಾಸೋದ್ಯಮ;‌ ನಂದಿ ಗಿರಿಧಾಮ ಸೇರಿ ಕೆಲ ಬೆಟ್ಟಗಳಿಗೆ ರೋಪ್‌ ವೇ, ಐದು ಕಡೆ ಹೆಲಿಪೋರ್ಟ್ & ಕುಡ್ಲದ ಸಮುದ್ರ ಕಿನಾರೆಯಲ್ಲಿ ಹಾರಲಿದೆ ಸೀ ಪ್ಲೇನ್

ವಿಜಯೇಂದ್ರ ಹಸ್ತಕ್ಷೇಪಕ್ಕೆ ಬಹಿರಂಗ ಸಡ್ಡು ಹೊಡೆದ ಸೈನಿಕ; ಸಿಎಂ ಹೆಸರಿನಲ್ಲಿ ಇನ್ನೊಬ್ಬರ ದರ್ಬಾರ್‌ ಸಹಿಸಲ್ಲ ಎಂದ ಸಿ.ಪಿ.ಯೋಗೀಶ್ವರ್‌

Leave a Reply Cancel reply

Your email address will not be published. Required fields are marked *

Recommended

ಚಿಕ್ಕಬಳ್ಳಾಪುರದಲ್ಲಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

ಚಿಕ್ಕಬಳ್ಳಾಪುರದಲ್ಲಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

3 years ago
ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಸರ್ವಸಿದ್ಧತೆ: ರಾಜ್ಯಾದ್ಯಂತ 29,451 ಕೇಂದ್ರ

ಕೋವಿಡ್ ಲಸಿಕೆ ವಿತರಣೆಗೆ ರಾಜ್ಯದಲ್ಲಿ ತಯಾರಿ; ಕೊವ್ಯಾಕ್ಸಿನ್ 3ನೇ ಹಂತದ ಕ್ಲಿನಿಕಲ್‌ ಪ್ರಯೋಗಕ್ಕೆ ಸಿಎಂ ಚಾಲನೆ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ