• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಬಾಗೇಪಲ್ಲಿ ಸರಕಾರಿ ಆಹಾರ ಗೋದಾಮುಗಳಲ್ಲಿ ಮುಕ್ಕಿಮುಕ್ಕಿ ತಿನ್ನುತ್ತಿದ್ದ ʼಹೆಗ್ಗಣʼಗಳು: ರಾಗಿ ಖರೀದಿಯಲ್ಲಿ ಖತರ್ನಾಕ್‌ ವಂಚನೆ

cknewsnow desk by cknewsnow desk
June 13, 2021
in CHIKKABALLAPUR, STATE
Reading Time: 2 mins read
0
ಬಾಗೇಪಲ್ಲಿ ಸರಕಾರಿ ಆಹಾರ ಗೋದಾಮುಗಳಲ್ಲಿ ಮುಕ್ಕಿಮುಕ್ಕಿ ತಿನ್ನುತ್ತಿದ್ದ ʼಹೆಗ್ಗಣʼಗಳು:  ರಾಗಿ ಖರೀದಿಯಲ್ಲಿ ಖತರ್ನಾಕ್‌ ವಂಚನೆ
929
VIEWS
FacebookTwitterWhatsuplinkedinEmail

ಸಿಕ್ಕಿಬಿದ್ದಿದ್ದುಹೇಗೆ? ಕ್ಲೂ ಕೊಟ್ಟವರು ಯಾರು?

ಬಿಪಿಎಲ್‌ ಕಾರ್ಡುದಾರರ ಅನ್ನಕ್ಕೇ ಕನ್ನ ಹಾಕಿದ ಕಿರಾತಕರು I ಆಹಾರ ಇಲಾಖೆಯಲ್ಲಿ 2 ಕೋಟಿ ರೂ. ಗೋಲ್‌ಮಾಲ್ ಬಯಲಿಗೆಳೆದ ಶಾಸಕ


ಬಾಗೇಪಲ್ಲಿ: ಒಂದೆಡೆ ಕೋವಿಡ್‌ ಸಂಕಷ್ಟಕ್ಕೆ ಸಿಲುಕಿ ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರೆ, ಇನ್ನೊಂದೆಡೆ ಸರಕಾರಿ ಆಹಾರ ಗೋದಾಮುಗಳಲ್ಲಿ ʼಸರಕಾರಿ ಹೆಗ್ಗಣಗಳುʼ ಬಿದ್ದಿವೆ. ಆ ಹೆಗ್ಗಣಗಳನ್ನು ಹಿಡಿಯುವ ಕೆಲಸ ಬಾಗೇಪಲ್ಲಿಯಲ್ಲಿ ಆಗಿದೆ.

ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯಲ್ಲಿ ಒಂದೆಡೆ ಹೆಗ್ಗಣಗಳು ಆಹಾರ ಧಾನ್ಯಗಳನ್ನು ತಿಂದು ಬದುಕಿದ್ದರೆ, ಇನ್ನೊಂದೆಡೆ ಆಧಿಕಾರಿ, ಸಿಬ್ಬಂದಿ ಮತ್ತು ದಲ್ಲಾಳಿಗಳೆಂಬ ಹೆಗ್ಗಣಗಳು ಕೋಟ್ಯಂತರ ರೂ. ಹಗರಣಗಳನ್ನೇ ನಡೆಸಿ ತಿಂದು ತೇಗುತ್ತಿದ್ದಾರೆ.

ಇದೇ ವೇಳೆ, ಬಡವರ ಪಾಲಿನ ಅನ್ನಕ್ಕೆ ಕನ್ನ ಹಾಕಿ ರಾಗಿ ಖರೀದಿ ಮತ್ತು ಅಕ್ಕಿ-ಗೋದಿಯಲ್ಲಿ ಕೋಟ್ಯಂತರ ರೂ. ಮೌತ್ತದ ಗೋಲ್‌ಮಾಲ್ ನಡೆದಿದ್ದು, ಅದನ್ನು ಶಾಸಕ ಎಸ್.ಎನ್‌.ಸುಬ್ಬಾರೆಡ್ಡಿ ಪತ್ತೆ ಹಚ್ಚಿದ್ದಾರೆ.

ತಾಲೂಕಿನ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಗೋದಾಮುಗಳ ಮೇಲೆ ತಹಶೀಲ್ದಾರ್ ಮತ್ತಿತರೆ ಅಧಿಕಾರಿಗಳ ಜತೆ ಶನಿವಾರ ಹಠಾತ್ ದಾಳಿ ನಡೆಸಿದ್ದ ಶಾಸಕರು, ಆಹಾರ ಇಲಾಖೆಯಲ್ಲಿ ರಾಗಿ ಖರೀದಿಐಲ್ಲಿ ನಡೆದಿರುವ ಬೃಹತ್‌ ಹಗರಣವನ್ನು ಬಯಲಿಗೆ ಎಳೆದಿದ್ದಾರೆ.

ಶನಿವಾರ ಮದ್ಯಾಹ್ಮ ಯಾವುದೇ ಮುನ್ಸೂಚನೆಯೂ ಇಲ್ಲದೆ, ಕೆಎಫ್‌ಸಿಎಸ್‌ಸಿ ಗೋದಾಮು ಮತ್ತು ಸಗಟು ಮಳಿಗೆಗಳ ಮೇಲೆ ಹಠಾತ್‌ ದಾಳಿ ನಡೆಸಿ ದಾಸ್ತಾನು ಪ್ರಮಾಣವನ್ನು ಪರಿಶೀಲನೆ ಮಾಡಿದ ಶಾಸಕರು, ಅಲ್ಲಿನ ವ್ಯವಸ್ಥಾಪಕರು ಮತ್ತು ಕಂಪ್ಯೂಟರ್ ಆಪರೇಟರ್ʼಗಳಿಗೆ ಬೆವರಿಳಿಸಿದರು.

ರಾಗಿ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

ದಾಳ ನಂತರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದ್ದಿಷ್ಟು;

ಸರಕಾರ ರೈತರಿಂದ ರಾಗಿಯನ್ನು ಬೆಂಬಲ ಬೆಲೆಗೆ ಖರೀದಿಸುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಸುಮಾರು 3,500 ಮೂಟೆಗಳಷ್ಟು ಗೋಲ್‌ಮಾಲ್ ನಡೆಸಿದ್ದಾರೆ. ರಾಗಿ ಸರಬರಾಜು ಮಾಡದೇ ಸರಕಾರದಿಂದ ಹಣ ಪಡೆದುಕೊಂಡಿರುವುದು ನನ್ನ ಗಮನಕ್ಕೆ ಬಂದಿತ್ತು. ದಲ್ಲಾಳಿಗಳು ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದು, ಇದಕ್ಕೆ ಇಲಾಖೆಯ ಸಿಬ್ಬಂದಿ ಕೂಡ ಕೈಜೋಡಿಸಿದಾರೆ.

ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ರೈತರು ಸುಮಾರು 23,000 ಕ್ವಿಂಟಾಲ್ ರಾಗಿಯನ್ನು ರೈತರು ಬೆಳೆದಿದ್ದಾರೆ. ಆದರೆ, ಇಲ್ಲಿ 28,000 ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗಿದೆ ಎಂದು ದಾಖಲೆಗಳನ್ನು ತೋರಿಸಲಾಗಿದೆ. ಇದು ಅನುಮಾನಕ್ಕೆ ಕಾರಣವಾಗಿದೆ, ಇದರ ಜತೆಗೆ ರೈತರು ತಾವು ಬೆಳೆದ ಅಷ್ಟೂ ರಾಗಿಯನ್ನು ತಾವತ್ತೂ ಮಾರಾಟ ಮಾಡುವುದಿಲ್ಲ. ತಮ್ಮ ಬಳಕೆಗೂ ಅವರು ರಾಗಿಯನ್ನು ಉಳಿಸಿಕೊಳ್ಳುತ್ತಾರೆ.

ಕೊರೋನದಂಥ ಸಂಕಷ್ಟ ಕಾಲದಲ್ಲಿ ಬಡವರ ಅಕ್ಕಿಗೆ ಕನ್ನ ಹಾಕಿ ಕೋಟ್ಯಂತರ ರೂಪಾಯಿಗಳ ಗೋಲ್‌ಮಾಲ್ ನಡೆಸಿರುವುದನ್ನು ಸರಕಾರದ ಮಟ್ಟದಲ್ಲಿ ತನಿಖೆಯನ್ನು ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡುತ್ತೇನೆ. ಮುಂದೆ ಇಲಾಖೆಯಲ್ಲಿ ಇಂಥ ಗೋಲ್‌ಮಾಲ್‌, ಅವ್ಯವಹಾರ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಎಚ್ಚರಿಕೆ ನೀಡಿದರು.

ಗೋದಾಮುಗಳಿಗೆ ಬೀಗ

ಪಡಿತರದಲ್ಲಿ ಕೋಟ್ಯಂತರ ರೂ. ಗೋಲ್‌ಮಾಲ್ ನಡೆದಿರುವ ಹಿನ್ನೆಲೆಯಲ್ಲಿ ದಾಸ್ತಾನು ಮತ್ತು ಲೆಕ್ಕಗಳು ತಾಳೆಯಾಗದ ಕಾರಣಕ್ಕೆ ಗೂಳೂರು ರಸ್ತೆಯಲ್ಲಿನ ಸಗಟು ಮಳಿಗೆ, ಎಪಿಎಂಸಿ ಯಲ್ಲಿನ ಗೋದಾಮು ಮತ್ತು ನಲ್ಲಪರೆಡ್ಡಿಪಲ್ಲಿಯಲ್ಲಿನ ಗೋದಾಮುಗಳಿಗೆ ಬೀಗಮುದ್ರೆ ಹಾಕಿಸಿದರು ಶಾಸಕರು. ತಹಶೀಲ್ದಾರ್ ಡಿ.ವಿ.ದಿವಾಕರ್ ಗೋದಾಮುಗಳಿಗೆ ಬೀಗ ಹಾಕಿಸಿ ಸೀಲ್ ಹಾಕಿಸಿದರು.

ಅಧಿಕಾರಿಗಳ ಲೆಕ್ಕದಲ್ಲಿ 40 ಲಕ್ಷ ರೂ. ಗೋಲ್‌ಮಾಲ್‌

ಶಾಸಕರು ದಾಳಿ ನಡೆಸಿದ ವೇಳೆಯಲ್ಲಿ ಮಾಹಿತಿ ನೀಡಿದ ಆಹಾರ ಶಿರಸ್ತೇದಾರ್ ರಾಜಣ್ಣ, 841 ಕ್ವಿಂಟಾಲ್ ರಾಗಿ ಮತ್ತು 400 ಕ್ವಿಂಟಾರ್ ಅಕ್ಕಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ವೆಚ್ಚ 40 ಲಕ್ಷ ರೂ. ಎಂದರು. ಆದರೆ ಈ ಅಂಕಿ-ಅಂಶಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಸುಬ್ಬಾರೆಡ್ಡಿ ಅವರು, ನನ್ನ ಬಳಿ ಇರುವ ಮಾಹಿತಿ ಪ್ರಕಾರ 1.5 ಕೋಟಿಯಿಂದ 2 ಕೋಟಿಗೂ ಮೀರಿ ಗೋಲ್‌ಮಾಲ್ ನಡೆದಿದೆ. ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದರು.

ಎಪಿಎಂಸಿ ಗೋದಾಮು ಪರಿಶೀಲನೆ

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮತ್ತು ತಹಶೀಲ್ದಾರ್ ಡಿ.ವಿ.ದಿವಾಕರ್ ಎಪಿಎಂಸಿ ಮಾರುಕಟ್ಟೆಯಲ್ಲಿರುವ ರಾಗಿ ದಾಸ್ತಾನನ್ನು ಪರಿಶೀಲಿಸಿದರು. ಮೂಟೆಗಳ ಸಂದಿಗಳಲ್ಲಿಯೇ ತೂರಿ ದಾಸ್ತಾನು ಪರಿಶೀಲಿಸಿದರಲ್ಲದೆ ಸಹಾಯಕರನ್ನು ದಾಸ್ತಾನಿನ ಮೇಲೆ ಹತ್ತಿಸಿ ಸ್ಟಾಕ್‌ ಪ್ರಮಾಣವನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣವನ್ನು ಮಾಡಿಸಿದರು.

ಕಿಲಾಡಿ ದಲ್ಲಾಳಿಗಳು

ಸರಕಾರ ಜಾರಿಗೆ ತಂದಿರುವ ರಾಗಿ ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ರಾಗಿಯನ್ನು ಖರೀದಿ ಮಾಡದೆಯೇ ಖರೀದಿ ಮಾಡಿದಂತೆ ಸುಳ್ಳು ಲೆಕ್ಕ ತೋರಿಸಿ ಬ್ರೋಕರುಗಳ ಬ್ಯಾಂಕ್ ಖಾತೆಗೆ ಲಕ್ಷಾಂತರ ರೂಪಾಯಿಗಳನ್ನು ಜಮೆ ಮಾಡಲಾಗಿತ್ತು. ಒಂದು ಹಂತದಲ್ಲಿ5,000 ಕ್ವಿಂಟಾಲ್ ರಾಗಿ ಗೋಲ್‌ಮಾಲ್ ನಡೆಸಲಾಗಿದ್ದು ಹಗರಣ ಬೆಳಕಿಗೆ ಬರುವ ಮುನ್ಸೂಚನೆ ಅರಿತ ದಲ್ಲಾಳಿಗಳು ಹಾಗೂ ಇಲಾಖೆಯ ಕೆಲವರು ರಾತ್ರೋರಾತ್ರಿ 5,000 ಕ್ವಿಂಟಾಲ್ ರಾಗಿ ಮೂಟೆಗಳನ್ನು ಗೋದಾಮು ಸೇರುವಂತೆ ಮಾಡುವ ಪ್ರಯತ್ನ ವಿಫಲವಾಗಿದೆ. ರಾಗಿ ಖರೀದಿ ಕೇಂದ್ರದಲ್ಲಿ ಗೋಲ್‌ಮಾಲ್ ಈಗ ಭಾರೀ ಸದ್ದು ಮಾಡುತ್ತಿದೆ.

ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಸಿಕ್ಕಿದ ಕ್ಲೂ

ತಾಲೂಕಿನಲ್ಲಿ 100ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳಿದ್ದು, ಪ್ರತಿಯೊಂದು ನ್ಯಾಯಬೆಲೆ ಅಂಗಡಿಗೂ 2 ಕ್ವಿಂಟಾಲ್ ರಾಗಿ ಕಡಿಮೆ ನೀಡಿದ್ದು ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಡಲಾಗುವುದು ಎಂದು ಗೋದಾಮು ವ್ಯವಸ್ಥಾಪಕರು ತಿಳಿಸಿದ್ದರು ಎಂಬ ಮಾಹಿತಿ ಇತ್ತು. ಹಗರಣ ಬಯಲಿಗೆ ಬರಲು ಈ ಅಂಶವೇ ಕಾರಣವಾಯಿತು.

ಪೊಲೀಸ್ ವಶಕ್ಕೆ ಕಂಪ್ಯೂಟರ್ ಆಪರೇಟರ್

ಶಾಸಕರು ಮತ್ತು ತಹಸೀಲ್ದಾರ್ ಗೋಲ್‌ಮಾಲ್ ಬೆಳಕಿಗೆ ಬರುತ್ತಿದ್ದಂತೆಯೇ ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆನ್ನಲಾಗುತ್ತಿರುವ ಸಗಟು ಮಳಿಗೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಅಜರುದ್ದೀನ್ ಎಂಬಾತನನ್ನು ತಹಶೀಲ್ದಾರ್ ಡಿ.ವಿ.ದಿವಾಕರ್ ಸ್ಥಳದಲ್ಲಿಯೇ ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚಿಸಿದರು. ಅದರಂತೆ ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಬಡವರ ಅಕ್ಕಿ ಗೋಲ್‌ಮಾಲ್ ಮಾಡಿ ಕೋಟ್ಯಂತರ ರೂ. ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ತಹಸೀಲ್ದಾರ್ ಮಾಹಿತಿ ನೀಡಿದರು.

Tags: bagepallichikkaballapurafood and civil suppliesfood godown scammla sn subba reddyragi
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ರೂಪಾಂತರಗೊಂಡ ಕೋವಿಡ್‌ ವೈರಾಣುವಿಗೆ ಬ್ರೇಕ್‌ ಹಾಕಲು ಬೆಂಗಳೂರು ಸೇರಿ ರಾಜ್ಯಾದ್ಯಂತ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ನೈಟ್‌ ಕರ್ಫ್ಯೂ; ಇಂದಿನಿಂದಲೇ ಜಾರಿ

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಸೇರಿ 19 ಜಿಲ್ಲೆಗಳಲ್ಲಿ ಇಂದು ಬೆಳಗ್ಗೆಯಿಂದ ಸೆಮಿ ಲಾಕ್‌ಡೌನ್‌; ನೈಟ್‌ ಕರ್ಫ್ಯೂ ಸಡಿಲಿಕೆ ಇಲ್ಲ

Leave a Reply Cancel reply

Your email address will not be published. Required fields are marked *

Recommended

ಉಳುವವನಿಂದ ಉಳ್ಳವನಿಗೆ ಭೂಮಿ! ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಲ್ಲಿ ಏನಿದೆ ಸ್ವಾಮಿ?

ಕೋವಿಡ್ ಸಂಕಷ್ಟದ ನಡುವೆಯೂ ದೊಡ್ಡ ಟಾರ್ಗೆಟ್ ಹಾಕಿಕೊಂಡ ಕೃಷಿ ಇಲಾಖೆ; ರಾಜ್ಯದಲ್ಲಿ ಶೇ.107ಕ್ಕೂ ಹೆಚ್ಚು ಬಿತ್ತನೆ, ರಸಗೊಬ್ಬರ, ಬೀಜಕ್ಕೆ ಕೊರತೆ ಇಲ್ಲವೆಂದ ಸಚಿವ ಬಿ.ಸಿ.ಪಾಟೀಲ್‌

4 years ago
12,000 ವರ್ಷಗಳ ಭಾರತೀಯ ಇತಿಹಾಸದ ಅಧ್ಯಯನದಲ್ಲಿ ಮಿಸ್‌ ಆಗಲೇಬಾರದ ನಾಗಾ-ಆಂಗ್ಲರ ಸಂಗ್ರಾಮ

12,000 ವರ್ಷಗಳ ಭಾರತೀಯ ಇತಿಹಾಸದ ಅಧ್ಯಯನದಲ್ಲಿ ಮಿಸ್‌ ಆಗಲೇಬಾರದ ನಾಗಾ-ಆಂಗ್ಲರ ಸಂಗ್ರಾಮ

5 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ