• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಬಯಲುಸೀಮೆಯಲ್ಲಿ ನವಿಲು ನರ್ತನದ ನಿತ್ಯೋತ್ಸವ

cknewsnow desk by cknewsnow desk
July 10, 2021
in CHIKKABALLAPUR, EDITORS'S PICKS, STATE
Reading Time: 2 mins read
0
ಬಯಲುಸೀಮೆಯಲ್ಲಿ ನವಿಲು ನರ್ತನದ ನಿತ್ಯೋತ್ಸವ
1.4k
VIEWS
FacebookTwitterWhatsuplinkedinEmail

ಗುಡಿಬಂಡೆ ಆಸುಪಾಸಿನಲ್ಲಿ ಮನೆ ಅಂಗಳದಲ್ಲೇ ರಾಷ್ಟ್ರಪಕ್ಷಿಗಳ Ramp Walk

by GS Bharath Gudibande

ಗುಡಿಬಂಡೆ: ಮಲೆನಾಡು, ನಾಗರಹೊಳೆ ಮತ್ತು ಬಂಡೀಪುರದಂಥ ಅರಣ್ಯಗಳಲ್ಲಿಯೇ ದಟ್ಟವಾಗಿ ಕಾಣಿಸಿಕೊಳ್ಳುವ ನವಿಲುಗಳು ಈಗ ಬಯಲುಸೀಮೆ ಬೆಡಗನ್ನೂ ಹೆಚ್ಚಿಸಿವೆ. ಅಲ್ಲದೆ, ಬರಪೀಡಿತ ಗುಡಿಬಂಡೆ ತಾಲೂಕಿನಲ್ಲಿ ನಿತ್ಯ ಜನಜೀವನದ ಭಾಗಿ ಎಲ್ಲರನ್ನೂ ಮುದಗೊಳಿಸುತ್ತಿವೆ.

ಸಾಮಾನ್ಯವಾಗಿ ನವಿಲು ಗರಿಬಿಚ್ಚಿ ನರ್ತಿಸುವುದನ್ನು ನೋಡಲು ಎಲ್ಲರೂ ಕಾತರರಾಗಿರುತ್ತಾರೆ. ಆ ಕ್ಷಣ ಕಂಡರೆ ಮನಸ್ಸು ಪುಳಕಿತವಾಗುತ್ತದೆ. ಕೆಲವೊಮ್ಮೆ ಅಂಥ ಸುಂದರ ಸನ್ನಿವೇಶ ಮಿಸ್‌ ಆದರೆ ಆಗುವ ಬೇಸರ ಅಷ್ಟಿಷ್ಟಲ್ಲ. ಆದರಿಲ್ಲಿ ಅಂಥ ಬೇಸರಕ್ಕೆ, ನಿರಾಸೆಗೆ ಅವಕಾಶವೇ ಇಲ್ಲ. ಏಕೆಂದರೆ, ಗುಡಿಬಂಡೆ ಆಸುಪಾಸಿನಲ್ಲಿ ನವಿಲುಗಳ ನರ್ತನದ ನಿತ್ಯೋತ್ಸವವೇ ನಡೆಯುತ್ತಿದೆ.‌

ಸುಸದ್ಮಪದ್ಮಗಿರಿ, ಅಮಾನಿಭೈರ ಸಾಗರ, ಆದಿನಾರಾಯಣ ಬೆಟ್ಟ ಹಾಗೂ ಸುಂದರ ನಿತ್ಯ ಹಸಿರಿನ ಅರಣ್ಯ ಪ್ರದೇಶದಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಗುಡಿಬಂಡೆ, ಇದೀಗ ನವಿಲುಗಳ ಕಾರಣಕ್ಕೆ ವನ್ಯಜೀವಿ ಪ್ರಾಣಿಪ್ರಿಯರ ಹಾಟ್‌ ಫೇವರಿಟ್‌ ತಾಣವಾಗಿ ಬದಲಾಗಿದೆ.

ಗುಡಿಬಂಡೆ ತಾಲೂಕಿನ ವಲಯ ಅರಣ್ಯ ಪ್ರದೇಶದಲ್ಲಿ ಅಪಾರ ನವಿಲುಗಳ ದಂಡೇ ಇದೆ. ರಾಷ್ಟ್ರಪಕ್ಷಿ ವೈಭವವನ್ನು ಕಣ್ತುಂಬಿಕೊಳ್ಳಬೇಕಾದರೆ ಇಲ್ಲಿಗೊಮ್ಮೆ ಬರಬೇಕು. ಅವುಗಳ ಸಂಭ್ರಮವನ್ನು ನೋಡಲು ಎರಡು ಕಂಗಳು ಸಾಲವು.  ಕೆಲ ದಿನಗಳಿಂದ ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆಯಲ್ಲಿ ಕಾಡಿನಿಂದ ನಾಡಿಗೆ, ಅದರಲ್ಲೂ ಪ್ರಕೃತಿಯ ಮಡಿಲಲ್ಲಿರುವ ಹಳ್ಳಿಗಳ ಮನೆಯಂಗಳದಲ್ಲೇ ಇವು ಪ್ರತ್ಯಕ್ಷವಾಗುತ್ತಿವೆ. ಹಿಂಡು ಹಿಂಡಾಗಿ ಬಂದು ತಮ್ಮ ಮನೆಗಳ ಮುಂದೆ ಗರಿಬಿಚ್ಚಿ ಕುಣಿಯುವ ನವಿಲುಗಳನ್ನು ಕಂಡು ಜನರೂ ರೋಮಾಂಚನಗೊಂಡಿದ್ದಾರೆ.

ಎಲ್ಲೆಲ್ಲೂ ನವಿಲು, ಜನರಿಗೆ ಪುಳಕ

ಮನೆ ಅಂಗಳದಲ್ಲಿ ಮಾತ್ರವಲ್ಲದೆ, ಹೊಲ-ಗದ್ದೆಗಳ ಬಳಿ ಈಗ ಸಾಮಾನ್ಯವಾಗಿ ನವಿಲುಗಳು ಹೆಚ್ಚಾಗಿ ಕಂಡು ಬರುತ್ತಿವೆ. ತೋಟಗಳಲ್ಲಿ ರೈತರು ಕೆಲಸ ಮಾಡುವಾಗ ನವಿಲುಗಳು ಅವರ ಆಯಾಸವನ್ನು ಕಡಿಮೆ ಮಾಡುತ್ತಿವೆ. ಮರಗಳ ಪೊದೆಗಳಲ್ಲಿ, ಹೊಲಗಳಲ್ಲಿ, ತೋಟಗಳ ನಡುವೆ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿವೆ. ಜನರು ಕೂಡ ರಾಷ್ಟ್ರಪಕ್ಷಿಗಳಿಗೆ ಹಾನಿ ಮಾಡದೇ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಾರೆ.

ನವಿಲುಗಳು ಆಹಾರ ಕೊರತೆಯಿಂದ ಕಾಡುಬಿಟ್ಟು ನಾಡಿಗೆ ಲಗ್ಗೆ ಇಟ್ಟಿವೆ. ತಮ್ಮ ಬೆಳೆಗಳನ್ನು ಅವು ತಿಂದರೂ ರೈತರಿಗೆ ಬೇಸರವಿಲ್ಲ. ಬದಲಿಗೆ ಹತ್ತಾರು ಕಷ್ಟಗಳಲ್ಲಿ ಸಿಲುಕಿರುವ ಅವರ ಮನಸ್ಸಿಗೆ ಇವು ಒಳ್ಳೆಯ ರಿಲೀಫ್‌ ನೀಡುತ್ತಿವೆ. ಮಕ್ಕಳಂತೂ ನವಿಲುಗಳ ನರ್ತನಕ್ಕೆ ಮಾರುಹೋಗುತ್ತಿದ್ದಾರೆ. ಲಾಕ್‌ಡೌನ್‌ ಸಡಿಲಿಕೆಯಾದ ಮೇಲೆ ಬರುತ್ತಿರುವ ಪ್ರವಾಸಿಗರಿಗೂ ಮೋಡಿ ಮಾಡುತ್ತಿವೆ.

  • ನವಿಲು ನರ್ತನೆಯ ಝಲಕ್‌ ನೋಡಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ..
https://www.youtube.com/watch?v=e4LOWMCQjQE&t=20s

ನವಿಲುಗಳೊಂದಿಗೆ ವಾಯುವಿಹಾರ!

ಬೆಳಗ್ಗೆ-ಸಂಜೆ ಸಮಯದಲ್ಲಿ ತಾಲೂಕಿನ ವಾಬಸಂದ್ರ, ಉಕ್ಕುಡಂ, ಎಲ್ಲೋಡು, ಯರ್ರಹಳ್ಳಿ, ಗರುಡಾಚಾರ್ಲಹಳ್ಳಿ, ಗೌರಿಬಿದನೂರು ರಸ್ತೆಯ ಅರಣ್ಯ ಪ್ರದೇಶದಲ್ಲಿ ನವಿಲುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಕಾರಣಕ್ಕೆ ಆ ಭಾಗಗಳಿಗೆ ಪಟ್ಟಣದ ಜನರು ಹೆಚ್ಚಾಗಿ ಸಂಜೆ ವೇಳೆ ವಾಯುವಿಹಾರಕ್ಕೆ ಹೋಗುತ್ತಾರೆ. ತಮ್ಮ ನಡಿಗೆಯ ನಡುವೆ ಕಣ್ಮುಂದೆ ಹಾದು ಹೋಗುವ, ಒಮ್ಮೊಮ್ಮೆ ಹಾರುವ ನವಿಲುಗಳನ್ನು ಕಂಡು ಸಂತೋಷಗೊಳ್ಳುತ್ತಿದ್ದಾರೆ.

ಅನೇಕ ಬಗೆಯ ಪ್ರಾಣಿ-ಪಕ್ಷಿ ಸೇರಿದಂತೆ ಸಕಲ ಜೀವ ಸಂಕುಲಕ್ಕೆ ಗುಡಿಬಂಡೆ ಅರಣ್ಯ ಪ್ರದೇಶವು ಆಶ್ರಯ ತಾಣವಾಗಿದೆ. ಅರಣ್ಯ ಇಲಾಖೆಯ ಅಂದಾಜಿನ ಪ್ರಕಾರ ಸುಮಾರು 10 ಸಾವಿರಕ್ಕೂ ಹೆಚ್ಚು ನವಿಲುಗಳು ಈ ಮೀಸಲು ಅರಣ್ಯ ಪ್ರದೇಶದಲ್ಲಿವೆ. ಅವುಗಳನ್ನು ಸಂರಕ್ಷಿಸಲಾಗಿದೆ.

ಹುಲುಗಪ್ಪ / ವಲಯ ಅರಣ್ಯ ಸಂರಕ್ಷಣಾಧಿಕಾರಿ, ಗುಡಿಬಂಡೆ

ನಮ್ಮ ಜಮೀನು ಮತ್ತು ಹಳ್ಳಿಯ ಸುತ್ತಮುತ್ತ ನವಿಲುಗಳು ಕಾಣಿಸಿಕೊಳ್ಳುತ್ತಿವೆ. ಅವುಗಳನ್ನು ನೋಡಿ ಮಕ್ಕಳು ಆನಂದಿಸುತ್ತಾರೆ. ಅವುಗಳನ್ನು ಕೊಲ್ಲುವುದಾಗಲಿ, ಹಿಂಸೆ ಮಾಡುವುದಾಗಲಿ ಯಾರೂ ಮಾಡುವುದಿಲ್ಲ. ಜನ ಕಾಣಿಸಿದ ಕೂಡಲೇ ಚಂಗನೆ ಹಾರಿ ಮರಗಿಡಗಳ ನಡುವೆ ಮರೆಯಾಗುತ್ತವೆ.

ಜಿ.ಎ.ಅಮರೇಶ್‌ / ರೈತ, ಗರುಡಾಚಾರ್ಲಹಳ್ಳಿ

ನನ್ನ ಮನಸ್ಸಿಗೆ ನವಿಲುಗಳ ದಂಡು ನೋಡಿ ಖುಷಿ ಎನಿಸಿತು. ನವಿಲುಗಳು ಸಂಜೆ ಸಮಯದಲ್ಲಿ ಹೆಚ್ಚಾಗಿ  ಕಾಣಿಸುತ್ತವೆ. ಅವು ಗರಿಬಿಚ್ಚಿದ ಸಂದರ್ಭದಲ್ಲಿ ಗೊಡೆಯ ಹಿಂದೆ ಕಾಣಿಸದಂತೆ ಫೋಟೊ ಮತ್ತು ವೀಡಿಯೋ ಮಾಡಲಾಯಿತು. ನಮ್ಮ ಭಾಗದ ಜನರಿಗೆ ಮತ್ತು ಮಕ್ಕಳಿಗೆ ನವಿಲು ಅಂದರೆ ಹೆಚ್ಚು ಪ್ರೀತಿ. ರೈತರು ಅವುಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ನವಿಲುಗಳು ಹಿಂಡು ಹಿಂಡಾಗಿ ಸಂಚರಿಸುವುದನ್ನು ನೋಡುವುದೇ ಸಂತೋಷ. ಸರಕಾರ ನವಿಲುಗಳ ರಕ್ಷಣೆಗೆ ಪ್ರತ್ಯೇಕವಾಗಿ ಈ ಭಾಗದಲ್ಲಿ ʼನವಿಲುಧಾಮʼ ನಿರ್ಮಿಸಬೇಕು.

ಗೋವಿಂದರೆಡ್ಡಿ / ರೈತ, ಕಡೇಹಳ್ಳಿ

Tags: adinarayana bettabagepallifarmersgudibande reserve forestIndian national birdpeacock
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಗುಡಿಬಂಡೆ ಆಸುಪಾಸಿನಲ್ಲಿ ಮನೆ ಅಂಗಳದಲ್ಲೇ ರಾಷ್ಟ್ರಪಕ್ಷಿಗಳ Ramp Walk

ಗುಡಿಬಂಡೆ ಆಸುಪಾಸಿನಲ್ಲಿ ಮನೆ ಅಂಗಳದಲ್ಲೇ ರಾಷ್ಟ್ರಪಕ್ಷಿಗಳ Ramp Walk

Leave a Reply Cancel reply

Your email address will not be published. Required fields are marked *

Recommended

ಕೊರೊನಾ ವಾರಿಯರ್ ಗೆ ಮಿಡಿದ ಸುಧಾಕರ್ ಡಾಕ್ಟರ್ ; ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ರೂ. ನೆರವು

ಜನವರಿ ಅಥವಾ ಫೆಬ್ರವರಿಯಲ್ಲಿ ಕೋವಿಡ್ 2ನೇ ಅಲೆ; ಚಳಿಗಾಲದ 45 ದಿನ ತುಂಬಾ ಎಚ್ಚರವಾಗಿರಿ ಎಂದ ಡಾಕ್ಟರ್‌

4 years ago
ಕೋವಿಡ್ ವಾರಿಯರ್ಗಳಾಗಿ ಶಿಕ್ಷಕರು; ಮುಖ್ಯಮಂತ್ರಿಗೆ ಮನವಿ

ಕೋವಿಡ್ ವಾರಿಯರ್ಗಳಾಗಿ ಶಿಕ್ಷಕರು; ಮುಖ್ಯಮಂತ್ರಿಗೆ ಮನವಿ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ