• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಗುಡಿಬಂಡೆ ಚಿಕ್ಕದು! ಗ್ರಂಥಾಲಯವೂ ಸಣ್ಣದು!! ಸರಕಾರದ ನಿರ್ಲಕ್ಷ್ಯ ಅತಿ ದೊಡ್ಡದು!!

cknewsnow desk by cknewsnow desk
July 19, 2021
in CHIKKABALLAPUR, EDITORS'S PICKS
Reading Time: 2 mins read
0
ಗುಡಿಬಂಡೆ ಚಿಕ್ಕದು! ಗ್ರಂಥಾಲಯವೂ ಸಣ್ಣದು!! ಸರಕಾರದ ನಿರ್ಲಕ್ಷ್ಯ ಅತಿ ದೊಡ್ಡದು!!
1.1k
VIEWS
FacebookTwitterWhatsuplinkedinEmail

by GS Bharath Gudibande

ಗುಡಿಬಂಡೆ: ಒಂದೆಡೆ ಗಡಿ ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ದೊಡ್ಡದಾಗಿ ಹೇಳುತ್ತಲೇ, ಮತ್ತೊಂದೆಡೆ ಇದೇ ಗಡಿ ಪ್ರದೇಶಗಳ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಸರಕಾರದ ಕಾರ್ಯವೈಖರಿಗೆ ಇಲ್ಲಿದೆ ಒಂದು ಸ್ಪಷ್ಟ ಸಾಕ್ಷಿ.

ಗಾತ್ರದಲ್ಲಿ ಬಹಳ ಚಿಕ್ಕ ತಾಲೂಕಾದರೂ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಸಾಹಿತಿಕವಾಗಿ ಭವ್ಯ ಇತಿಹಾಸವುಳ್ಳ ನೆಲೆ ಗುಡಿಬಂಡೆ. ಆದರೆ, ಗಡಿ ಪ್ರದೇಶಗಳಲ್ಲಿ ಭಾಷಾಭಿವೃದ್ಧಿಯ ಬಗ್ಗೆ ಸಾಕಷ್ಟು ಕೆಲಸ ಮಾಡಬೇಕಿದ್ದ ಸರಕಾರ ದಿವ್ಯ ನಿರ್ಲಕ್ಷ್ಯ ತೋರಿದೆ. ಅದಕ್ಕೆ ಪೂರಕವಾಗಿ ಗುಡಿಬಂಡೆಯ ಗ್ರಂಥಾಲಯವನ್ನು ಮುಖ್ಯ ಉದಾಹರಣೆಯಾಗಿ ಕೊಡಬಹುದು.

ಸುಮಾರು ಐವತ್ತು ವರ್ಷಗಳ ಇತಿಹಾಸವುಳ್ಳ ಈ ಗ್ರಂಥಾಲಯಕ್ಕೆ ಸುಸಜ್ಜಿತ ಕಟ್ಟಡವಿಲ್ಲ. ತೀರಾ ಎಂದರೆ ತೀರಾ ಹಳೆಯ ಕಟ್ಟಡ. ಜತೆಗೆ ಮೂಲಭೂತ ಸೌಕರ್ಯಗಳ ಸೊಲ್ಲೇ ಇಲ್ಲ, ಶೌಚಾಲಯವೂ ಇಲ್ಲ.. ಇನ್ನೂ ಹತ್ತಾರು ಸಮಸ್ಯೆಗಳನ್ನು ಪಟ್ಟಿ ಮಾಡಬಹುದು. ಜನರಲ್ಲಿ ಓದಿನ ಸಂಸ್ಕೃತಿ ಬೆಳೆಸಬೇಕಾದ ಗ್ರಂಥಾಲಯವೇ ಸೂಕ್ತ  ಕಾಯಕಲ್ಪವಿಲ್ಲದೆ, ಅದು ಆಡಳಿತ ವ್ಯವಸ್ಥೆಯ ಅವಕೃಪೆಯಿಂದ ಸೊರಗಿದೆ. ಈಗಲಾದರೂ ಅದನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸಬೇಕಿದೆ.

ಅನೇಕ ವರ್ಷಗಳಿಂದ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು, ಹಿರಿಯ ನಾಗರೀಕರು, ಪತ್ರಕರ್ತರ ನೆಚ್ಚಿನ ಓದಿನ ತಾಣವಾಗಿದ್ದ ಈ ಗ್ರಂಥಾಲಯದಲ್ಲಿ ಬರೀ ಕೊರತೆಗಳದ್ದೇ ಕಾರುಬಾರು. ಓದುಗರು ಬಂದು ಇಲ್ಲಿ ಕೂತು ತಾಸುಗಟ್ಟಲೇ ಕೂತು ಓದುವ ಪೂರಕ ವಾತಾವರಣವಿಲ್ಲ. ಇರಲೇಬೇಕಾದ ಅಗತ್ಯ ಸೌಕರ್ಯಗಳಿಲ್ಲ. ಹಿರಿಯ ನಾಗರೀಕರು ಬಂದರೆ ಶೌಚಕ್ಕೆ ಪರದಾಡಬೇಕು. ಸರಕಾರಿ ಮಾನದಂಡಗಳ ಪ್ರಕಾರ ಒಂದು ತಾಲೂಕು ಗ್ರಂಥಾಲಯಕ್ಕೆ ಇರಬೇಕಾದ ಯಾವುದೇ ಮೂಲಸೌಕರ್ಯವೂ ಇಲ್ಲಿಲ್ಲ.

ಇನ್ನು, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಒಮ್ಮೆಯೂ ಇತ್ತ ತಿರುಗಿ ನೋಡಿದ್ದಿಲ್ಲ. ಸಂಬಂಧಪಟ್ಟ ಅಧಿಕಾರಿಗಳ  ಗಮನವಂತೂ ಹರಿದೇ ಇಲ್ಲ. ಸಾಂಪ್ರದಾಯಿಕ ಗ್ರಂಥಾಲಯಗಳ ಸೊಗಡನ್ನು ಉಳಿಸಿಕೊಂಡೇ ಡಿಜಿಟಲ್ ಓದಿನತ್ತ ಯುವಜನರನ್ನು ಕೊಂಡೊಯ್ಯಬೇಕಾದ ಗ್ರಂಥಾಲಯ ಇಲಾಖೆ ಗಡಿ ತಾಲೂಕಿನ ವಿಷಯದಲ್ಲಿ ಗಾಢನಿದ್ದೆ ಮಾಡುತ್ತಿದೆ. ಪರಿಣಾಮವಾಗಿ ಈ ಗ್ರಂಥಾಲಯಕ್ಕೆ ಬರುವ ಓದುಗರ ಪ್ರಮಾಣ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.

ಅತ್ಯಂತ ಚಿಕ್ಕ ಗ್ರಂಥಾಲಯ

ಹೇಳಿ ಕೇಳಿ ಗುಡಿಬಂಡೆ ಅತ್ಯಂತ ಚಿಕ್ಕ ತಾಲೂಕು. ಅದಕ್ಕೆ ತಕ್ಕಂತೆ ತಾಲೂಕು ಕೇಂದ್ರದಲ್ಲಿರುವ ಗ್ರಂಥಾಲಯವೂ  ಚಿಕ್ಕದೇ. ಪಟ್ಟಣದ ಜನ ಸಂಖ್ಯೆ ಸುಮಾರು 12,000. ಆದರೆ, ಈ ಗ್ರಂಥಾಲಯದ ಒಳಗೆ 10 ಜನ ಕುಳಿತು ಓದಬಹುದಷ್ಟೇ. ಹೆಚ್ಚಿನ ಜನ ಬಂದರೆ, ಒಳಗೆ ಜಾಗವಿಲ್ಲದೆ ಹೊರಗೇ ಕೂತು ಓದಬೇಕು. ಪಟ್ಟಣದ ಗ್ರಂಥಾಲಯದ ಒಳಗೆ ಕೇವಲ ಒಂದೇ ಟೇಬಲ್ ಇದೆ. ಇದರ ಸುತ್ತಾ ಕುರ್ಚಿಗಳನ್ನು ಹಾಕಲಾಗಿದ್ದು, ಒಮ್ಮೆ 10 ಜನ ಕುಳಿತು ಓದಬಹುದು. ಹೀಗಾಗಿ ಗ್ರಂಥಾಲಯದ ಗಾತ್ರ ವಿಸ್ತರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಓದುಗರಿಗೆ ಅನುಕೂಲ ಮಾಡಿಕೊಡಬೇಕೆಂದು ಓದುಗರು ಮತ್ತು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಗದ್ದಲ, ವಾಹನಗಳ ಕಿರಿಕಿರಿ

ಇನ್ನು ಈ ಗ್ರಂಥಾಲಯವು ಮುಖ್ಯ ರಸ್ತೆಯ ಪಕ್ಕದಲ್ಲಿರುವುದರಿಂದ ವಾಹನಗಳ ಶಬ್ದದಿಂದ ಓದುಗರಿಗೆ ತೊಂದರೆ ಆಗುತ್ತಿದೆ. ಗ್ರಂಥಾಲಯದ ಒಳಗೆ ನಿಶ್ಯಬ್ದ ಇರುತ್ತಾದರೂ ಹೊರಗೆ ಮಾತ್ರ ಎಲ್ಲವೂ ಪ್ರಕ್ಷುಬ್ಧ. ಹೊಸ ಬಸ್ ನಿಲ್ದಾಣ ಇದ್ದರೂ ಎಲ್ಲಾ ಖಾಸಗಿ ಹಾಗೂ ಸರಕಾರಿ ಬಸ್ಸುಗಳು, ಆಟೋಗಳು ಗ್ರಂಥಾಲಯದ ಮುಂದೆಯೇ ನಿಲ್ಲುವುದರಿಂದ ಓದುಗರಿಗೆ ಆಗುತ್ತಿರುವ ಕಿರಿಕಿರಿ ಅಷ್ಟಿಷ್ಟಲ್ಲ. ಸಂಬಂಧಪಟ್ಟ ಅಧಿಕಾರಿಗಳು ಯಾಕೆ ಮೌನವಾಗಿದ್ದಾರೆ ಎಂಬುದು ಓದುಗರ ಪ್ರಶ್ನೆ.

ಅಲ್ಲದೆ, ಗ್ರಂಥಾಲಯದ ಸುತ್ತ ಸ್ವಚ್ಛತೆ ಮರೀಚಿಕೆಯಾಗಿದೆ. ಮುಖ್ಯರಸ್ತೆಯ ಅಗಲೀಕರಣದ ವೇಳೆ ಗ್ರಂಥಾಲಯದ ಕಾಂಪೌಡ್ ಕೆಡವಲಾಗಿತ್ತು. ಅದನ್ನು ಕೆಡವಿ ಕೆಲ ವರ್ಷಗಳೇ ಕಳೆದರೂ ಆ ಕಾಂಪೌಂಡ್ ದುರಸ್ಥಿಯಾಗಿಲ್ಲ. ಜತೆಗೆ, ಗ್ರಂಥಾಲಯದ ಸುತ್ತ ಪರಮ ಗಲೀಜು. ದುರ್ನಾತ ಬೇರೆ. ಸೊಳ್ಳೆಗಳ ಕಾಟ ವಿಪರೀತ.

ಗ್ರಂಥಾಲಯಕ್ಕೆ ಕಟ್ಟಡದ ಸಮಸ್ಯೆಯ ಜತೆಗೆ ಓದುಗರಿಗೆ ಅವಶ್ಯಕವಾದ ಪುಸ್ತಕಗಳು ಇಲ್ಲ. ಸಾರ್ವಜನಿಕರಿಗೆ ಗ್ರಂಥಾಲಯದಲ್ಲಿ ಪತ್ರಿಕೆಗಳಷ್ಟೇ ಲಭ್ಯವಾಗುತ್ತಿವೆ. ಆದರೆ, ಕನ್ನಡ ಸಾಹಿತ್ಯದಲ್ಲಿ ಪ್ರಕಟವಾಗುತ್ತಿರುವ ಮಹತ್ವದ ಕೃತಿಗಳು, ಪ್ರಮುಖ ಲೇಖಕರ ರಚನೆಗಳು ಇಲ್ಲಿ ಲಭ್ಯವಿಲ್ಲ. ಹೀಗಾಗಿ ಸಹಜವಾಗಿಯೇ ಓದುಗರು ನಿರಾಶರಾಗುತ್ತಿದ್ದಾರೆ.


ಯಾರು ಏನಂತಾರೆ?

50 ವರ್ಷಗಳಾದರೂ ಗ್ರಂಥಾಲಯದ ಅಭಿವೃದ್ಧಿಯಾಗಿಲ್ಲ. ಮಳೆ ಬಂದಾಗ ಸೋರುವ ಸ್ಥಿತಿ ಅಲ್ಲಿದೆ. ಗ್ರಂಥಾಲಯದ ಅಕ್ಕಪಕ್ಕ ಕಸದ ರಾಶಿ ಬಿದ್ದಿದ್ದು, ದುರ್ನಾತ ಬೀರುತ್ತಿದೆ. ಗ್ರಂಥಾಲಯದಲ್ಲಿ ಸರಿಯಾಗಿ ಬೆಳಕು ಇಲ್ಲ. ಜ್ಞಾನ ಕೊಡುವ ಗ್ರಂಥಾಲಯವೇ ಕಗ್ಗತ್ತಲಲ್ಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಹಳ ಕಷ್ಟವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಂಥಾಲಯಕ್ಕೆ ಎಲ್ಲ ಸೌಕರ್ಯ ಒದಗಿಸಬೇಕು.

ಪ್ರೆಸ್ ಸುಬ್ಬರಾಯಪ್ಪ ಗ್ರಂಥಾಲಯ ಸಮಿತಿ ಸದಸ್ಯ, ಗುಡಿಬಂಡೆ

ಒಂದು ಸುಸಜ್ಜಿತ ಗ್ರಂಥಾಲಯವನ್ನು ತಾಲೂಕು ಕೇಂದ್ರದಲ್ಲಿ ನಿರ್ಮಸಬೇಕು. ಓದುಗರ ಮಹಾಪೂರವೇ ಹರಿದು ಬರುವಂತೆ ಅದನ್ನು ರೂಪಿಸಲಾಗಿದೆ. ಈಗಿರುವ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಇಡುವುದಕ್ಕೂ ಸ್ಥಳ ಸಾಕಾಗುತ್ತಿಲ್ಲ. ಗ್ರಂಥಾಲಯದ ಒಳಗೆ ಒಂದೇ ಟೇಬಲ್ ಹಳೇಯ ಕಟ್ಟಡ. ವಿದ್ಯತ್ ಸಂಪರ್ಕವೂ ಸರಿಯಾಗಿ ಇಲ್ಲ. ಹೀಗಿರುವಾಗ ಸರಕಾರ ರಾಷ್ಟ್ರೀಯ ಗ್ರಂಥಾಲಯಗಳ ಸಪ್ತಾಹವನ್ನು ಕಾಟಾಚಾರಕ್ಕೆ ಆಚರಿಸಿದಂತೆ ಕಾಣುತ್ತದೆ.

ಜಿ.ಎನ್.ನವೀನ್ ಜಿಲ್ಲಾ ಯುವ ಅಧ್ಯಕ್ಷ, ಜಯ ಕರ್ನಾಟಕ

ಸಾರ್ವಜನಿಕರಿಗೆ ಜ್ಞಾನದ ಬೆಳಕು ನೀಡುತ್ತಿರುವ ಗ್ರಂಥಾಲಯಗಳೇ ಇಂದು ನೂರೆಂಟು ಸಮಸ್ಯೆ ಎದುರಿಸುತ್ತಿವೆ. ಆಧುನಿಕತೆಗೆ ತಕ್ಕಂತೆ ಸರ್ಕಾರಗಳು ಗ್ರಂಥಾಲಯಗಳಿಗೆ ಹೈಟೆಕ್‌ ಟಚ್‌ ನೀಡಿ ಉನ್ನತೀಕರಿಸಬೇಕಿದೆ. ಇದಕ್ಕೆ ಗುಡಿಬಂಡೆ ತಾಲೂಕು ಗ್ರಂಥಾಲಯವು ಎದುರು ನೋಡುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಕ್ಕಂತೆ ಪುಸ್ತಕಗಳ ಬೇಡಿಕೆಯೂ ನಿವಾರಿಸಬೇಕು.

ಶ್ರೀಕಾಂತ್ ಓದುಗ, ಕರಿಗಾಂತಮ್ಮನಹಳ್ಳಿ

ಸರಕಾರದ ಉದ್ಯೋಗ ನೇಮಕಾತಿ, ಉನ್ನತ ಶಿಕ್ಷಣ ಪ್ರವೇಶ ಸೇರಿದಂತೆ ಪ್ರತಿಯೊಂದಕ್ಕೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಯ್ಕೆ ನಡೆಯುತ್ತಿದೆ. ಬಡ ವಿದ್ಯಾರ್ಥಿಗಳು, ನಿರುದ್ಯೋಗ ಅಭ್ಯರ್ಥಿಗಳು ದುಬಾರಿ ಬೆಲೆಯ ಪುಸ್ತಕಗಳನ್ನು ಕೊಂಡು ಓದಲು ಸಾಧ್ಯವಿಲ್ಲ. ಆದ್ದರಿಂದ ಗ್ರಂಥಾಲಯದಲ್ಲಿ ಇರುವ ಪುಸ್ತಕ ಬಳಕೆ ಮಾಡಿಕೊಳ್ಳಲು ಬರುತ್ತಾರೆ. ಹೀಗೆ ಬಂದವರು ತಾಸುಗಟ್ಟಲೇ ಅಭ್ಯಾಸ ಮಾಡಬೇಕಾಗುತ್ತದೆ.

ಮಂಜುನಾಥ್ ಗುಡಿಬಂಡೆ

Tags: border talukchikkaballapuragudibandekanndakarnatakakarnataka public librarylibrary
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಜೈಲಿನಿಂದ ಹೊರಬಂದ ಕೂಡಲೇ ಮೀಡಿಯಾ ಮುಂದೆ ಕುಳಿತ ಅಲ್ಲು ಅರ್ಜುನ್‌

ಜೈಲಿನಿಂದ ಹೊರಬಂದ ಕೂಡಲೇ ಮೀಡಿಯಾ ಮುಂದೆ ಕುಳಿತ ಅಲ್ಲು ಅರ್ಜುನ್‌

by cknewsnow desk
December 14, 2024
0

ಅರೆಸ್ಟ್ ಆದ 24 ಗಂಟೆಗಳಲ್ಲೇ ಜೈಲಿನಿಂದ ರಿಲೀಸ್; ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ ಪುಷ್ಪಾ - 2

ಚಿಕ್ಕಬಳ್ಳಾಪುರಕ್ಕೆ ಬಜೆಟ್’ನಲ್ಲಿ ವಿಶೇಷ ಪ್ರಾಧಾನ್ಯತೆ ನೀಡಲು ಶ್ರಮಿಸಿದ ಸಂಸದ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರಕ್ಕೆ ಬಜೆಟ್’ನಲ್ಲಿ ವಿಶೇಷ ಪ್ರಾಧಾನ್ಯತೆ ನೀಡಲು ಶ್ರಮಿಸಿದ ಸಂಸದ ಡಾ.ಕೆ.ಸುಧಾಕರ್

by cknewsnow desk
July 23, 2024
0

ಸಂಸದರಿಗೆ ಅಭಿನಂದನೆ ಸಲ್ಲಿಸಿದ ಆರ್.ಮಿಥುನ್ ರೆಡ್ಡಿ; ಹೈದರಾಬಾದ್‌-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ನಿಂದ ಬಾಗೇಪಲ್ಲಿಗೆ ಹೆಚ್ಚು ಅನುಕೂಲ

ಬಾಗೇಪಲ್ಲಿಯಲ್ಲಿ ಗುರುಪೂರ್ಣಿಮೆ

ಬಾಗೇಪಲ್ಲಿಯಲ್ಲಿ ಗುರುಪೂರ್ಣಿಮೆ

by cknewsnow desk
July 23, 2024
0

ಶ್ರೀ ಯೋಗಿನಾರೇಯಣ ಬಲಿಜ ಟ್ರಸ್ಟ್ ವತಿಯಿಂದ ಆಚರಣೆ

ಉದ್ಯೋಗ & ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಸ

ಉದ್ಯೋಗ & ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಸ

by cknewsnow desk
July 23, 2024
0

ಪ್ರಧಾನಿ ಕನಸಿನ 'ವಿಕಸಿತ ಭಾರತ' ನಿರ್ಮಾಣಕ್ಕೆ ಶಕ್ತಿ ತುಂಬುವ ಬಜೆಟ್

ಹಾಸನ ಪೆನ್‍ಡ್ರೈವ್ ಪ್ರಕರಣ; ಅಶ್ಲೀಲ ವಿಡಿಯೋ ಲೀಕ್‌ ಹಿಂದೆ DCM ಡಿಕೆಶಿ ಕೈ ಚಳಕ

ಹಾಸನ ಪೆನ್‍ಡ್ರೈವ್ ಪ್ರಕರಣ; ಅಶ್ಲೀಲ ವಿಡಿಯೋ ಲೀಕ್‌ ಹಿಂದೆ DCM ಡಿಕೆಶಿ ಕೈ ಚಳಕ

by cknewsnow desk
May 6, 2024
0

ನಾಗಮಂಗಲದ ಎಲ್.‌ಆರ್.‌ಶಿವರಾಮೇಗೌಡ ಮಧ್ಯಸ್ಥಿಕೆ; ಮೊಬೈಲ್‌ ಸಂಭಾಷಣೆ ಆಡಿಯೋ ಬಿಡುಗಡೆ

Next Post
ಭಾಗ್ಯನಗರದ ಭವ್ಯ ಇತಿಹಾಸ ಹಾದಿಬೀದಿಯಲ್ಲಿ ಅನಾಥವಾಗಿ ನರಳುತ್ತಿದೆ!!

ಭಾಗ್ಯನಗರದ ಭವ್ಯ ಇತಿಹಾಸ ಹಾದಿಬೀದಿಯಲ್ಲಿ ಅನಾಥವಾಗಿ ನರಳುತ್ತಿದೆ!!

Leave a Reply Cancel reply

Your email address will not be published. Required fields are marked *

Recommended

ಗುಡಿಬಂಡೆಯಲ್ಲಿ ಲೋಕಾಯುಕ್ತ ದಾಳಿ

ಗುಡಿಬಂಡೆಯಲ್ಲಿ ಲೋಕಾಯುಕ್ತ ದಾಳಿ

1 year ago
ಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ; ಆಂಧ್ರದ ಗೊರಂಟ್ಲದ 13 ಜನರ ದುರ್ಮರಣ

ಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ; ಆಂಧ್ರದ ಗೊರಂಟ್ಲದ 13 ಜನರ ದುರ್ಮರಣ

2 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ