• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಗುಡಿಬಂಡೆ ಆಸ್ಮಿತೆಯಾದ ಹಳೇ ಕೋರ್ಟ್ ಜಾಗಕ್ಕೆ ಎರಡು ಇಲಾಖೆಗಳ ಬೀದಿ ಜಗಳ

cknewsnow desk by cknewsnow desk
August 20, 2021
in CHIKKABALLAPUR, STATE
Reading Time: 3 mins read
0
ಗುಡಿಬಂಡೆ ಆಸ್ಮಿತೆಯಾದ ಹಳೇ ಕೋರ್ಟ್ ಜಾಗಕ್ಕೆ ಎರಡು ಇಲಾಖೆಗಳ ಬೀದಿ ಜಗಳ
1.3k
VIEWS
FacebookTwitterWhatsuplinkedinEmail

ಅಂಗಡಿ ಕಟ್ಟುವ ಪಟ್ಟಣ ಪಂಚಾಯಿತಿ ಸ್ಪೀಡಿಗೆ ಶಾಸಕರ ಬ್ರೇಕ್;‌ ಇದು ಸಿಕೆನ್ಯೂಸ್ ನೌ ಇಂಪ್ಯಾಕ್ಟ್

by GS Bharath Gudibande

ಗುಡಿಬಂಡೆ: ತಾಲೂಕು ಪಂಚಾಯಿತಿಗೆ ಸೇರಿದ ಜಾಗದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅಂಗಡಿ ನಿರ್ಮಿಸಿಕೊಡುವ ನೆಪದಲ್ಲಿ ಒತ್ತುವರಿಗೆ ಮುಂದಾಗಿದ್ದ ಪಟ್ಟಣ ಪಂಚಾಯಿತಿ ಕೊನೆಗೂ ಹಿಂದಕ್ಕೆ ಸರಿದಿದೆ.

ಈ ಬಗ್ಗೆ ಸಿಕೆನ್ಯೂಸ್ ನೌ ವಿವರವಾದ ವರದಿ ಮಾಡಿತ್ತು. ಈಗ ಆ ವರದಿಯ ಇಂಪ್ಯಾಕ್ಟ್ʼನಿಂದ ಎಚ್ಚೆತ್ತುಕೊಂಡ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪಪಂ ಮುಖ್ಯಾಧಿಕಾರಿ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದ್ದಾರೆ.

ತಾಲೂಕು ಕಚೇರಿ ಮುಂಭಾಗದಲ್ಲಿರುವ ಹಳೇ ನ್ಯಾಯಾಲಯದ ಮುಂದೆ ಬೀದಿಬದಿ ವ್ಯಾಪಾರಿಗಳಿಗೆ 22 ಲಕ್ಷ ರೂ. ವೆಚ್ಚದಲ್ಲಿ 40 ಮೀಟರ್ ಜಾಗದಲ್ಲಿ ಶೆಲ್ಟರ್ ನಿರ್ಮಾಣ ಮಾಡಲು ಮುಂದಾಗಿದ್ದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಡುವೆ ಕೆಲ ಸಮಯ ವಾಗ್ವಾದವೇ ನಡೆಯಿತು. ಇದಕ್ಕೆ ಎರಡೂ ಕಡೆಯ ಜನಪ್ರತಿನಿಧಿಗಳು ಕೂಡ ಸಾಥ್‌ ನೀಡಿದರು.

ಜಾಗಕ್ಕಾಗಿ ವಾಗ್ವಾದಕ್ಕೆ ನಿಂತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು.


ಪಟ್ಟಣ ಪಂಚಾಯಿತಿ ಪರವಾಗಿ ಸದಸ್ಯರು ದನಿಯೆತ್ತಿದರೆ, ತಾಲೂಕು ಪಂಚಾಯಿತಿ ಪರವಾಗಿ ಮಾಜಿ ಸದಸ್ಯರು ಮಾತನಾಡಿದರು. ಕೊನೆಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಮಧ್ಯ ಪ್ರವೇಶಿಸಿ ತಾತ್ಕಾಲಿಕವಾಗಿ ಅಂಗಡಿ ನಿರ್ಮಾಣಕ್ಕೆ ಬ್ರೇಕ್ ಹಾಕಿದ್ದಾರೆ.

ನ್ಯಾಯಾಲಯದ ಇತಿಹಾಸ

ಗುಡಿಬಂಡೆ ಹಳೇ ನ್ಯಾಯಾಲಯದ ಕಟ್ಟಡಕ್ಕೆ ಸ್ವಾತಂತ್ರ್ಯ ಪೂರ್ವದ ಇತಿಹಾಸವೇ ಇದ್ದು, ಪಟ್ಟಣದಲ್ಲಿ ಲಾ ಪ್ರಾಕ್ಟೀಸ್‌ ಮಾಡುತ್ತಿದ್ದ ಅನೇಕ ಹಿರಿಯ ವಕೀಲರಿಗೆ, ತಾಲೂಕಿನಲ್ಲಿ ಕೆಲಸ ಮಾಡಿದ್ದ ಹಿಂದಿನ ಅಧಿಕಾರಿಗಳಿಗೆ ಈ ಕಟ್ಟಡವೆಂದರೆ ಅಭಿಮಾನ. ಈಗಲೂ ಈ ಕಟ್ಟಡವೆಂದರೆ ಪಟ್ಟಣದ ಜನರಿಗೆ ಗೌರವ ಭಾವ ಇದೆ.

1925ರಲ್ಲಿ ಅಂದಿನ ಅವಿಭಜಿತ ಕೋಲಾರ ಜಿಲ್ಲ್ಲಾ ಮಂಡಳಿಯ ಆಧ್ಯಕ್ಷರಾಗಿದ್ದ ಗೋಪಾಲ್ ರಾವ್ (ಇಎಸ್‌ಕ್ಯೂ) ಅವರು ಈ ಕಟ್ಟಡಕ್ಕೆ ಅಡಿಗಲ್ಲು ಹಾಕಿದ್ದರು. ಬಳಿಕ ಅದು ಬಹಳ ವರ್ಷಗಳ ಕಾಲ ಪಟ್ಟಣದ ಪ್ರವಾಸಿ ಮಂದಿರವಾಗಿತ್ತು. ಬಳಿಕ ಬೇರೊಂದು ಜಾಗದಲ್ಲಿ ಪ್ರವಾಸಿ ಮಂದಿರ ನಿರ್ಮಾಣವಾದ ಮೇಲೆ ಖಾಲಿ ಬಿದ್ದಿದ್ದ ಈ ಕಟ್ಟಡವನ್ನು 1998ರಲ್ಲಿ ಆರಂಭವಾದ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ನೀಡಲಾಯಿತು.

ಗುಡಿಬಂಡೆ ನ್ಯಾಯಾಲಯದ ಹಳೇ ಕಟ್ಟಡದ ದುಃಸ್ಥಿತಿ ಹೇಳುವ ಚಿತ್ರಗಳು.


1998 ಅಕ್ಟೋಬರ್‌ 30ರಂದು ರಾಜ್ಯ ಹೈಕೋರ್ಟ್‌ನ ಅಂದಿನ ಮುಖ್ಯನ್ಯಾಯಮೂರ್ತಿಗಳಾಗಿದ್ದ ಜಸ್ಟೀಸ್ ಆರ್.ಪಿ ಸೇಥಿ ಅವರು ಈ ಕಟ್ಟಡದಲ್ಲಿಯೇ ಆರಂಭವಾದ ನ್ಯಾಯಾಲಯಬನ್ನು ಲೋಕಾರ್ಪಣೆ ಮಾಡಿದ್ದರು. ಆಗ ಬಾಗೇಪಲ್ಲಿ ಕ್ಷೇತ್ರಕ್ಕೆ ಜಿ.ವಿ.ಶ್ರೀರಾಮ ರೆಡ್ಡಿ ಶಾಸಕರಾಗಿದ್ದರು.

  • ಜಸ್ಟೀಸ್ ಆರ್.ಪಿ ಸೇಥಿ

ಅಂದಿನ ಕಾರ್ಯಕ್ರಮದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿದ್ದ ಜಸ್ಟೀಸ್‌ ಕುಮಾರ ರಾಜರತ್ನಂ ಅವರು ಭಾಗವಹಿಸಿ ಅಧ್ಯಕ್ಷತೆಯನ್ನು ವಹಿಸಿದ್ದರು. ಹೈಕೋರ್ಟ್‌ʼನ ಅಂದಿನ ನ್ಯಾಯಮೂರ್ತಿಗಳಾಗಿದ್ದ, ಈಗ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ನಿವೃತ್ತರಾಗಿರುವ ಜಸ್ಟೀಸ್‌ ವಿ.ಗೋಪಾಲ ಗೌಡರು ಹಾಗೂ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇಂಥ ಐತಿಹಾಸಿಕ ಹಿನ್ನೆಲೆಯುಳ್ಳ ಕಟ್ಟಡದ ಪಾವಿತ್ರ್ಯತೆಯನ್ನೇ ಕಡೆಗಣಿಸಿರುವ ತಾಲೂಕು ಆಡಳಿತ ನಿರ್ಲಕ್ಷ್ಯ ನೀತಿ ತಾಳಿರುವುದು ಒಂದೆಡೆಯಾದರೆ, ಎರಡು ಇಲಾಖೆಗಳು ಜಿದ್ದಿಗೆ ಬಿದ್ದು ಈ ಅಪರೂಪದ ಕಟ್ಟಡವನ್ನು ಮತ್ತಷ್ಟು ದುಃಸ್ಥಿತಿಗೆ ತಳ್ಳಿವೆ. 96 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ, ಇನ್ನು ನಾಲ್ಕೇ ವರ್ಷಗಳಲ್ಲಿ ಶತಮಾನೋತ್ಸವ ಕಾಣಲಿರುವ ಈ ಕಟ್ಟಡವನ್ನು ಪಾರಂಪರಿಕ ಆಸ್ತಿಯಾಗಿ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿಲ್ಲ. ಆ ನಿಟ್ಟಿನಲ್ಲಿ ಯಾರೂ ಆಲೋಚನೆಯನ್ನೇ ಮಾಡುತ್ತಿಲ್ಲ.

ತಾಲೂಕು ಪಂಚಾಯಿತಿ ಹೇಳುವುದೇನು?

ಈ ಕಟ್ಟಡ ಬ್ರಿಟೀಷರ ಕಾಲದಿಂದ ತಾಲೂಕು ಪಂಚಾಯಿತಿಗೆ ಸೇರಿದೆ. ಇಲ್ಲಿ ನ್ಯಾಯಾಲಯ ಕಟ್ಟಡಕ್ಕೂ ಮುನ್ನ ಸರಕಾರಿ ಐಬಿ (ಪ್ರವಾಸಿ ಮಂದಿರ) ಇತ್ತು. ನಂತರದ ದಿನಗಳಲ್ಲಿ ಬಾಡಿಗೆ ಆಧಾರದ ಮೆರೆಗೆ ನ್ಯಾಯಾಲಯಕ್ಕೆ ಕಟ್ಟಡ ನಿರ್ಮಾಣ ಮಾಡಿ ಕೊಡಲಾಗುತ್ತಿತ್ತು. ಆಗ ತಾಲೂಕು ಪಂಚಾಯಿತಿಗೆ ಬಾಡಿಗೆ ಬರುತ್ತಿತ್ತು. ಆದರೆ ಇಂದು ಏಕಪಕ್ಷೀಯವಾಗಿ ಪಟ್ಟಣ ಪಂಚಾಯಿತಿ ಅನಧಿಕೃತವಾಗಿ ಜಾಗ ಒತ್ತುವರಿಗೆ ಮುಂದಾಗಿರುವುದು ತಪ್ಪು ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪಿ.ಸಿ.ಮಂಜುನಾಥ್ ಹೇಳುತ್ತಾರೆ.

ಇಬ್ಬರ ಜಗಳ, ಗುತ್ತಿಗೆದಾರನ ಅಳಲು

ತಾಪಂ ಹಾಗೂ ಪಪಂ ಅಧಿಕಾರಿಗಳ ಸ್ಥಳ ನಮ್ಮದು ಎಂಬ ವಾಗ್ವಾದದಿಂದ ಈಗಾಗಲೇ 2-3 ಭಾರಿ ಸ್ಥಳ ಬದಲಾವಣೆ ಮಾಡಲಾಗಿದೆ. ಕಾಮಗಾರಿ ಆರಂಭವಾಗಿ ಇನ್ನೇನು 4-5 ದಿನಗಳಲ್ಲಿ ಮುಗಿಸಬೇಕು ಎನ್ನುವಷ್ಟರಲ್ಲಿ ಆರೋಪ- ಪ್ರತ್ಯಾರೋಪಗಳಿಂದ ಕಾಮಗಾರಿ ಸ್ಥಗಿತವಾಗಿದೆ. ಈಗಾಗಲೇ ಕಾರ್ಯಾದೇಶ ಪಡೆದು ಕೆಲಸ ಮಾಡಿಸಿರುವ ಗುತ್ತಿಗೆದಾರನ ಪರಿಸ್ಥಿತಿ ಆಯೋಮಯವಾಗಿದೆ. ಈವರೆಗೂ ಆಗಿರುವ ವೆಚ್ಚದ ಹಣವನ್ನು ಯಾರು ನೀಡುತ್ತಾರೆ ಎಂದು ಕಾಂಟ್ರಾಕ್ಟರ್ ಅಳಲು ತೋಡಿಕೊಂಡರು.

ಹಾಳು ಕೊಂಪೆಯಾದ ಕಟ್ಟಡ

ಗುಡಿಬಂಡೆ ಹೃದಯ ಭಾಗದಲ್ಲಿರುವ ಹಳೇ ನ್ಯಾಯಾಲಯದ ಕಟ್ಟಡ ಈಗ ಯಾರಿಗೂ ಬೇಡವಾಗಿದೆ. ಕತ್ತಲಾದರೆ ಕುಡುಕರ ಅಡ್ಡೆಯಾಗುತ್ತಿದೆ. ಬಲಿಷ್ಠ ಗೋಡೆ, ಹೆಂಚು, ಅತ್ಯುತ್ತಮ ಗುಣಮಟ್ಟದ ಮರದಿಂದ ನಿರ್ಮಾಣವಾಗಿರುವ ಕಟ್ಟಡ ಗತಕಾಲದ ವೈಭವಕ್ಕೆ ಮೂಕಸಾಕ್ಷಿಯಾಗಿದೆ. ಕಟ್ಟಡದ ಸುತ್ತ ಗಿಡಗಂಟೆಗಳು ಬೆಳೆದು, ವಿಷಕ್ರಿಮಿಗಳು ಸೇರಿಕೊಂಡಿವೆ. ಕಸದ ರಾಶಿ ತುಂಬಿಕೊಂಡು ಪಟ್ಟಣದ ಏಕೈಕ ಮುಖ್ಯರಸ್ತೆಯಲ್ಲಿ ಸಂಚರಿಸುವ ಜನರ ಪಾಲಿಗೆ ಅಳಿದುಹೋದ ಆಸ್ಮಿತೆಯಾಗಿದೆ. ಎದುರಿಗೇ ತಾಲೂಕು ಕಚೇರಿ ಇದ್ದರೂ ಯಾರಿಗೆ ಬೇಡದ ಅನಾಥ ಶಿಶುವಿನಂತೆ ರೋಧಿಸುತ್ತಿದೆ.

ಪಟ್ಟಣದ ಮುಖ್ಯರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅಂಗಡಿ ಕಟ್ಟಿಕೊಡಲು ಪಟ್ಟಣ ಪಂಚಾಯಿತಿ ಮುಂದಾಗಿದ್ದು, ಸರಕಾರಿ ಪ್ರೌಢಶಾಲೆ ಪಕ್ಕದ ಈ ಜಾಗ ತಾಲೂಕು ಪಂಚಾಯಿತಿಗೆ ಸೇರಿದದ್ದು ಎಂಬದು ತಿಳಿದು ಬಂದಿದೆ. ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಪಡೆದು ಮುಂದಿನ ಕ್ರಮಕ್ಕೆ ಸೂಚಿಸುವೆ.

ಎಸ್.ಎನ್.ಸುಬ್ಬಾರೆಡ್ಡಿ. ಶಾಸಕರು, ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರ

ಪಟ್ಟಣದ ಬೀದಿಬದಿ ವ್ಯಾಪಾರಿಗಳಿಗೆ ಒಟ್ಟು 40 ಮೀಟರ್ ಜಾಗದಲ್ಲಿ ಶೇಲ್ಟರ್ ನಿರ್ಮಾಣ ಮಾಡಲು 22 ಲಕ್ಷ ಹಣ ಮಂಜೂರಾಗಿದ್ದು, ಶಾಸಕರ ಸಮ್ಮುಖದಲ್ಲಿ ಜಾಗದ ಸಮಸ್ಯೆ ಬಗೆಹರಿಸಿ ಕಾಮಗಾರಿ ಆರಂಭಿಸಲಾಗುವುದು.

ರಾಜಶೇಖರ್, ಮುಖ್ಯಾಧಿಕಾರಿ, ಪಪಂ, ಗುಡಿಬಂಡೆ
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ..
ತಾಲೂಕು ಪಂಚಾಯಿತಿ ಜಾಗದ ಒತ್ತುವರಿಗೆ ಮುಂದಾಯಿತಾ ಪಟ್ಟಣ ಪಂಚಾಯಿತಿ
Tags: chikkaballapuracknewsnow impactgudibande taluk panchayatikarnatakaland garbingmla sn subbareddypattana panchayati
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಚಿಕ್ಕಬಳ್ಳಾಪುರ ಪೊಲೀಸ್: ಕಳುವು ಮಾಲು ಮಾಲೀಕರಿಗೆ ವಾಪಸ್

ಚಿಕ್ಕಬಳ್ಳಾಪುರ ಪೊಲೀಸ್: ಕಳುವು ಮಾಲು ಮಾಲೀಕರಿಗೆ ವಾಪಸ್

Leave a Reply Cancel reply

Your email address will not be published. Required fields are marked *

Recommended

ಕೋಲಾರಕ್ಕೆ ಖರ್ಗೆ ಕೈ ಅಭ್ಯರ್ಥಿ! ಮೊಯ್ಲಿಗೆ ಚಿಕ್ಕಬಳ್ಳಾಪುರ ಟಿಕೆಟ್ ಅನುಮಾನ

ಕೋಲಾರಕ್ಕೆ ಖರ್ಗೆ ಕೈ ಅಭ್ಯರ್ಥಿ! ಮೊಯ್ಲಿಗೆ ಚಿಕ್ಕಬಳ್ಳಾಪುರ ಟಿಕೆಟ್ ಅನುಮಾನ

2 years ago
ಕೋಲಾರದ ಕಾಂಗ್ರೆಸ್‌ ಅಭ್ಯರ್ಥಿ ಗೌತಮ್‌ ವಿರುದ್ಧ Go Back ಚಳವಳಿ!

ಕೋಲಾರದ ಕಾಂಗ್ರೆಸ್‌ ಅಭ್ಯರ್ಥಿ ಗೌತಮ್‌ ವಿರುದ್ಧ Go Back ಚಳವಳಿ!

1 year ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ