• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಖಾಸಗಿ ಸೀಡ್ಸ್ ಕಂಪನಿ ಕೊಟ್ಟ ಬಾಳೆ ತಳಿ ಅದಲು ಬದಲು; ರೈತ ಕಂಗಾಲು

cknewsnow desk by cknewsnow desk
September 1, 2021
in CHIKKABALLAPUR, STATE
Reading Time: 2 mins read
0
ಖಾಸಗಿ ಸೀಡ್ಸ್ ಕಂಪನಿ ಕೊಟ್ಟ ಬಾಳೆ ತಳಿ ಅದಲು ಬದಲು; ರೈತ ಕಂಗಾಲು
1k
VIEWS
FacebookTwitterWhatsuplinkedinEmail

ಫಸಲು ಕೈಗೆ ಬಂದಾಗ ಕಣ್ಣೀರು ಪಾಲಾದ ಬಾಗೇಪಲ್ಲಿ ಬಾಳೆ ರೈತ

Ra Na Gopala Reddy Bagepalli

ಬಾಗೇಪಲ್ಲಿ: ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಬಾಳೆ ತೋಟ ಮಾಡಿ ಏಲಕ್ಕಿ ಬಾಳೆಹಳ್ಳಿನ ನಿರೀಕ್ಷೆಯಲ್ಲಿದ್ದ ರೈತ ಬಾಳೆ ಗಿಡ, ಏಲಕ್ಕಿ ಬದಲಾಗಿ ಮತ್ತೊಂದು ತಳಿಯ ಬಾಳೆ ಕಾಯಿಗಳನ್ನು ಬಿಟ್ಟಿರುವುದನ್ನು ನೋಡಿ ರೈತ ಕಂಗಾಲಾದ ಪ್ರಸಂಗ ನಡೆದಿದೆ. ಇದಕ್ಕೆ ಬಿತ್ತನೆ ಗಿಡಗಳನ್ನು ಸರಬರಾಜು ಮಾಡಿದ ಸೀಡ್ಸ್ ಏಜೆನ್ಸಿಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

ತಾಲ್ಲೂಕಿನ ಮಾರ್ಗಾನುಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಕಮಾಕಲಪಲ್ಲಿ ಗ್ರಾಮದ ರೈತ ರಾಮಲಿಂಗಾರೆಡ್ಡಿ ಎಂಬುವವರು ತಮ್ಮ ಮೂರೂವರೆ ಎಕರೆ ಪ್ರದೇಶದಲ್ಲಿ ಸುಮಾರು 8-9 ಲಕ್ಷ ರೂ.ಗಳನ್ನು ಖರ್ಚು ಮಾಡಿ ಬಾಳೆ ತೋಟ ಬೆಳೆಸಿದ್ದಾರೆ. ಗೌರಿಬಿದನೂರು ಸಮೀಪದ ಕಂಕರೆ ಫಾರಂನಲ್ಲಿರುವ ಐಆರ್‌ಐಂ ಎಂಟರ್ ಪ್ರೈಸಸ್ ಪ್ರೈ ಲಿ.ನಿಂದ ಏಲಕ್ಕಿ ತಳಿಯ ಸುಮಾರು 3,150 ಗಿಡಗಳನ್ನು ಖರೀದಿಸಿ ತಮ್ಮ ತೋಟದಲ್ಲಿ ನೆಟ್ಟಿದ್ದರು. ಸಾವಯವ ಕೃಷಿ ಪದ್ಧತಿಯಲ್ಲಿಯೇ ತಿಪ್ಪೆ ಗೊಬ್ಬರವನ್ನೇ ಹಾಕಿ ಬಾಳೆಯನ್ನು ಅತ್ಯಂತ ಸಮೃದ್ಧವಾಗಿ ಬೆಳೆಸಿದ್ದಾರೆ.

ಬಾಳೆ ಗಿಡ ಸುಮಾರು 12-14 ಅಡಿ ಎತ್ತರಕ್ಕೆ ಬೆಳೆದಿದ್ದು ಬಾಳೆಗೊನೆಗಳು ಬಂಪರ್ ಗಿ ಬಿಟ್ಟಿದ್ದು, ಇನ್ನೇನು ಬಾಳೆಗೊನೆಗಳು ಕಟಾವಿಗೆ ಬಂದು 20 ಲಕ್ಷ ರೂಪಾಯಿಗಳ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ಈಗ ಸಂತಸದ ಬದಲು ಆತಂಕಕ್ಕೆ ಈಡಾಗುವಂತೆ ಆಗಿದೆ.

  • ರೈತ ರಾಮಲಿಂಗಾರೆಡ್ಡಿ ಅವರ ತೋಟದಲ್ಲಿ ವಿಜ್ಞಾನಿಗಳ ಪರಿಶೀಲನೆ.

ಬಯಸಿದ್ದು ಏಲಕ್ಕಿ, ಬಂದಿದ್ದು ಮತ್ತೊಂದು ತಳಿ!

ರೈತ ರಾಮಲಿಂಗಾರೆಡ್ಡಿ ಏಲಕ್ಕಿ ಬಾಳೆಹಣ್ಣು ಬೆಳೆಯುವ ಉದ್ದೇಶದಿಂದಲೇ ಗಿಡಗಳನ್ನು (ಟಿಶ್ಯು ಕಲ್ಟರ್ ಪ್ಲಾಂಟ್) ನಾಟಿ ಮಾಡಿದ್ದರು. ಅವು ಸುಮಾರು ಒಂದು ವರ್ಷ ಸಮೃದ್ಧವಾಗಿ ಬೆಳೆದು ದೊಡ್ಡದಾಗಿ ಫಸಲು ಕೊಡುವ ಸಂದರ್ಭದಲ್ಲಿ ಏಲಕ್ಕಿ ಬಾಳೆಹಣ್ಣಿನ ಬದಲಾಗಿ ಮತ್ತೊಂದು ತಳಿಯ ಗೊನೆಗಳನ್ನು ಬಿಟ್ಟಿದ್ದು ಚಿಂತಗೆ ಕಾರಣವಾಗಿ. ಫಸಲನ್ನು ಕಂಡು ಅವರು ಹೌಹಾರಿದ್ದಾರೆ.

ಅತಿ ಹೆಚ್ಚು ಸಿಹಿ ಇರುವ ಏಲಕ್ಕಿ ಬದಲಾಗಿ ಹುಳಿ (ಬಹುಶಃ ಕರ್ಫೂರ ಬಾಳೆ) ಇರುವ ದೊಡ್ಡ ಗಾತ್ರದ ಬೇರೊಂದು ತಳಿ ಬಾಳೆಗೊನೆಗಳನ್ನು ಕಾಣುವಂತಾಗಿ ರೈತನಿಗೀಗ ಆಕಾಶವೇ ಕಳಚಿಬಿದ್ದಂತಹ ಅನುಭವವಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆಹಣ್ಣಿಗೆ ಪ್ರತಿ ಕೆಜಿಗೆ 40-45 ರೂಪಾಯಿಗಳಿದ್ದರೆ, ಈಗ ಬಿಟ್ಟಿರುವ ಬಾಳೆ ಹಣ್ಣಿನ ಬೆಲೆ ಕೇವಲ 15 ರೂಪಾಯಿಗಳಿರುವುದು ರೈತನಿಗೆ ಆತಂಕವನ್ನುಂಟು ಮಾಡಿದೆ. ಸುಮಾರು 3 ವರ್ಷದ ಬೆಳೆ ಇದಾಗಿದ್ದು, ಪ್ರತಿವರ್ಷ 20-25 ಲಕ್ಷದಂತೆ 60-70 ಲಕ್ಷಗಳ ಲಾಭದ ನಿರೀಕ್ಷೆಯಲ್ಲಿದ್ದ ರೈತ ತೀವ್ರ ನಷ್ಟಕ್ಕೆ ಗುರಿಯಾಗಿದ್ದು,  ಬೆಳೆಯನ್ನು ಇಟ್ಟುಕೊಳ್ಳುವುದೋ ಕಿತ್ತುಹಾಕುವುದೋ ಎಂಬ ಗೊಂದಲದಲ್ಲಿದ್ದಾರೆ.

ತಜ್ಞರ ತಂಡ ಭೇಟಿ, ಪರಿಶೀಲನೆ

ತಳಿಯಲ್ಲಿ ಅದಲು-ಬದಲಾಗಿ ಆತಂಕಕ್ಕೆ ಒಳಗಾಗಿರುವ ಪಾಕಮಾಕಲಪಲ್ಲಿ ಗ್ರಾಮದ ರೈತ ರಾಮಲಿಂಗಾರೆಡ್ಡಿಯವರ ಬಾಳೆ ತೋಟಕ್ಕೆ ಕೋಲಾರ ಸಮೀಪದ ಹೊಗಳಗೆರೆ  ತೋಟಗಾರಿಕಾ ಸಂಶೋಧನ ಕೇಂದ್ರದ ವಿಜ್ಞಾನಿಗಳ ತಂಡ ಬೇಟಿ ನೀಡಿ ಬಾಳೆ ತೋಟವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿದೆ. ವಿಜ್ಞಾನಿಗಳಾದ ಹೊಗಳಗೆರೆ ಕೇಂದ್ರದ ಮುಖ್ಯಸ್ಥ ಡಾ.ರಾಮಚಂದ್ರ, ಹಣ್ಣಿನ ಬೆಳೆ ತಜ್ಞ ಡಾ.ರಾಜೇಂದ್ರ ಮತ್ತು ಕೀಟತಜ್ಞ ಡಾ.ಅಶ್ವತ್ಥನಾರಾಯಣರೆಡ್ಡಿ ಹಾಗೂ ತಾಲ್ಲೂಕಿನ ತೋಟಗಾರಿಕ ಸಹಾಯಕ ನಿರ್ದೇಶಕ ವೈ.ಬಿ.ಈಶ್ವರಪ್ಪ ಭೇಟಿ ನೀಡಿ ಬಾಳೆ ಗಿಡ ಹಾಗೂ ಗೊನೆ, ಬಾಳೆ ಹಣ್ಣನ್ನು ಪರಿಶೀಲಿಸಿದರಲ್ಲದೆ ಅವುಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಮುಂದಾಗಿದ್ದಾರೆ.

ಬಾಳೆ ತೋಟದ ನಿರ್ವಹಣೆ ಬಗ್ಗೆ ಮೆಚ್ಚುಗೆ, ತಳಿಯಲ್ಲಿ ವ್ಯತ್ಯಾಸ ಪತ್ತೆ

ರೈತ ರಾಮಲಿಂಗಾರೆಡ್ಡಿ ಅವರು ಬಾಳೆತೋಟವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ, ತಳಿಯಲ್ಲಿ ವ್ಯತ್ಯಾಸವಾಗಿರುವುದು ರೈತನ ಆತಂಕಕ್ಕೆ ಕಾರಣವಾಗಿದ್ದು ತೋಟದಲ್ಲಿ ಎರಡು ತಳಿಯ ಬೆಳೆಬಂದಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಒಂದು ವಾರದಲ್ಲಿ ವರದಿಯನ್ನು ಸಲ್ಲಿಸಲಾಗುವುದು. ರೈತನಿಗೆ ಅನ್ಯಾಯ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಡಾ.ರಾಮಚಂದ್ರ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪಿ.ರಘುನಾಥರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ತೋಟದಲ್ಲಿ ಏಲಕ್ಕಿ ಬದಲಾಗಿ ಸುಗಂಧಿ, ಸೋವಂ,, ಸೇಲಂ ತಳಿಗಳನ್ನು ಹೋಲುವ ಬಾಳೆಗೊನೆಗಳು ಬಿಟ್ಟಿರುವುದು ಕಂಡುಬಂದಿದೆ. ಇವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದ ನಂತರವೇ ಸ್ಪಷ್ಟವಾದ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ. ಬಾಳೆ ಗಿಡದ ಕಾಂಡ, ಎಲೆ, ಕಾಯಿ ಮತ್ತು ಹಣ್ಣನ್ನು ಸಂಗ್ರಹಿಸಿದ್ದು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು.

ಡಾ.ರಾಜೇಂದ್ರ, ವಿಜ್ಞಾನಿ

ನಾನು ಬಾಳೆ ಗಿಡಗಳನ್ನು ಬಿತ್ತನೆ ಮಾಡಲು ಕಂಕರೆ ಫಾರಂನಿಂದ ಗಿಡಗಳನ್ನು ಏಲಕ್ಕಿ ಗಿಡಗಳೆಂದೇ ರಸೀದಿಯನ್ನು ನೀಡಿದ್ದಾರೆ. ಆದರೆ, ನಾನು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಒಂದು ವರ್ಷದ ನಂತರ ಬೆಳೆ ಕೈಸೇರುವ ಸಂದರ್ಭದಲ್ಲಿ ಮೋಸವಾಗಿದೆ. ನನಗೆ ಲಕ್ಷಾಂತರ ರೂ.ಗಳ ನಷ್ಟವಾಗಿದ್ದು, ಭಿತ್ತನೆಗೆ ಗಿಡಗಳನ್ನು ನೀಡಿರುವ ಕಂಪನಿ ವಿರುದ್ಧ ಕ್ರಮ ಜರುಗಿಸಬೇಕು ಹಾಗು ನಷ್ಟಪರಿಹಾರವನ್ನು ನೀಡಬೇಕು.

ರಾಮಲಿಂಗಾರೆಡ್ಡಿ, ರೈತ

Tags: bagepalliBananachikkaballpuaelakki bananakolarseed companyseed fault
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
1,000 ರೂ.ನತ್ತ ಎಲ್‌ಪಿಜಿ, ಮತ್ತೆ 25 ರೂ. ಏರಿಕೆ

1,000 ರೂ.ನತ್ತ ಎಲ್‌ಪಿಜಿ, ಮತ್ತೆ 25 ರೂ. ಏರಿಕೆ

Leave a Reply Cancel reply

Your email address will not be published. Required fields are marked *

Recommended

ಚಾಮುಂಡಿಬೆಟ್ಟದಲ್ಲಿ 2ನೇ ಆಷಾಢ ಶುಕ್ರವಾರದ ಸಂಭ್ರಮ

ಚಾಮುಂಡಿಬೆಟ್ಟದಲ್ಲಿ 2ನೇ ಆಷಾಢ ಶುಕ್ರವಾರದ ಸಂಭ್ರಮ

3 years ago
ಕ್ಯಾಪ್ಟನ್ ಅಭಿಮನ್ಯು ಗಜಪಡೆಗೆ ಭಾರ ಹೊರಿಸಿ ತಾಲೀಮು

ಕ್ಯಾಪ್ಟನ್ ಅಭಿಮನ್ಯು ಗಜಪಡೆಗೆ ಭಾರ ಹೊರಿಸಿ ತಾಲೀಮು

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ