• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS CRIME

ಅರಣ್ಯದಲ್ಲಿ ತಪ್ಪಿದ ಮಹಾ ದುರಂತ!!

cknewsnow desk by cknewsnow desk
September 6, 2021
in CRIME, EDITORS'S PICKS, STATE
Reading Time: 3 mins read
5
ಅರಣ್ಯದಲ್ಲಿ ತಪ್ಪಿದ ಮಹಾ ದುರಂತ!!

ವಶಕ್ಕೆ ಪಡೆದಿರುವ ವಿಷಕಾರಿ ನೀರಿನ ಟ್ಯಾಂಕರ್.

2.3k
VIEWS
FacebookTwitterWhatsuplinkedinEmail

ಗುಡಿಬಂಡೆ ಸಮೀಪದ ಕೆರೆಗೆ ವಿಷಪ್ರಾಣ!
ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ರಾಸಾಯನಿಕ ತ್ಯಾಜ್ಯ ನೀರು ವಿಲೇವಾರಿ ಟ್ಯಾಂಕರ್
ಅರಣ್ಯಾಧಿಕಾರಿಗಳು ಕಂಡೊಡನೆ ಚಾಲಕ ಪರಾರಿ

5,000 ಲೀಟರ್ ಕೆಮಿಕಲ್ ನೀರಿದ್ದ ಟ್ಯಾಂಕರ್ ಸೀಜ್‌

  • ವಾಟದಹೊಸಹಳ್ಳಿ ಕೆರೆಯ ಗೂಗಲ್‌ ಚಿತ್ರ.

by Gs Bharath Gudibande


ಗುಡಿಬಂಡೆ: ಇದು ಇಡೀ ತಾಲೂಕು ಮಾತ್ರವಲ್ಲ, ಇಡೀ ಜಿಲ್ಲೆ, ರಾಜ್ಯವೇ ಬೆಚ್ಚಿಬೀಳು ಸುದ್ದಿ!!

ಕೈಗಾರಿಕಾ ವಲಯದಿಂದ ರಾತ್ರೋರಾತ್ರಿ ಸಮೀಪದ ಚದುಮನಹಳ್ಳಿ ಹಾಗೂ ವಾಟದಹೊಸಳ್ಳಿ ಕೆರೆಗೆ ವಿಷಯುಕ್ತ ರಾಸಾಯನಿಕ ತ್ಯಾಜ್ಯ ನೀರನ್ನು ವಿಲೇವಾರಿ ಮಾಡುತ್ತಿರುವಾಗ ಅರಣ್ಯಾಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿದ ಪರಿಣಾಮ ಭಾರೀ ಅನಾಹುತ ತಪ್ಪಿಹೋಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಅರಣ್ಯ ವಲಯದ ಮೀಸಲು ಪ್ರದೇಶದ ಎನ್.ಡಿ.ಬಿ 5ನೇ ಬ್ಲಾಕ್ ಗಸ್ತು ವ್ಯಾಪ್ತಿಯ ವಾಟದಹೊಸಳ್ಳಿ ಕೆರೆಗೆ ಕಳೆದ ಅಗಸ್ಟ್ 29ರಂದು ರಾತ್ರಿ ಟ್ಯಾಂಕರ್‌ʼನಲ್ಲಿ ತುಂಬಿಕೊಂಡು ತರಲಾದ ಕೆಮಿಕಲ್ ನೀರನ್ನು ಕೆರೆಗೆ ವಿಲೇವಾರಿ ಮಾಡುತ್ತಿದ್ದಾಗ ಸ್ಥಳೀಯರ ಸಮಯ ಪ್ರಜ್ಞೆಯಿಂದ ಅರಣ್ಯಾಧಿಕಾರಿಗಳಿಗೆ ಮಾಹಿತಿ ಸಿಕ್ಕಿ ಅಪಾರ ಜೀವ ಹಾನಿ, ಅರಣ್ಯ ನಾಶಕ್ಕೆ ಕಾರಣವಾಗಲಿದ್ದ ದೊಡ್ಡ ಅನಾಹುತ ಕೂದಲೆಳೆಯಲ್ಲಿ ತಪ್ಪಿದೆ.

ಕೆಮಿಕಲ್ ಟ್ಯಾಂಕರ್‌ ಬಿಟ್ಟು ಚಾಲಕ ಎಸ್ಕೇಪ್

ಟ್ಯಾಂಕರ್‌ ದೃಶ್ಯಗಳು / ಸ್ಲೈಡ್‌ ಮಾಡಿ..

ಕೈಗಾರಿಕೆಗಳಿಂದ ಹೊರಬೀಳುವ ಅತ್ಯಂತ ವಿಷಕಾರಿ ತ್ಯಾಜ್ಯ ನೀರನ್ನು ವಾಟದಹೊಸಳ್ಳಿ ಕೆರೆಗೆ ಬಿಡುತ್ತಿದ್ದ ಸಂದರ್ಭದಲ್ಲೇ, ಅರಣ್ಯಾಧಿಕಾರಿಗಳು ಮಿಂಚಿನ ಕಾರ್ಯಾಚರಣೆ ಮಾಡಿ ಬೃಹತ್‌ ಟ್ಯಾಂಕರ್‌ ಅನ್ನು ವಶಕ್ಕೆ ಪಡೆದು ಎಫ್.ಐ.ಆರ್ ದಾಖಲಿಸಿದ್ದಾರೆ. ಟ್ಯಾಂಕರ್‌ ಅನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಟ್ಯಾಂಕರ್‌ ಯಾವ ಕಂಪನಿಗೆ ಸೇರಿದ್ದು? ಎಲ್ಲಿಂದ ಬಂದಿದೆ ಇತ್ಯಾದಿ ವಿಷಯಗಳನ್ನು ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.

ಹಾಗೆಯೇ, ಆ ರಾಸಾಯನಿಕ ನೀರನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಅದು ಯಾವ ರೀತಿಯ ವಿಷಕಾರಿ ನೀರು ಎಂಬುದು ಇನ್ನಷ್ಟೇ ತಿಳಿಯಬೇಕು. KA41 7380 ಸಂಖ್ಯೆಯ ಈ ಟ್ಯಾಂಕರ್‌ ಲಾರಿಯು ಬೆಂಗಳೂರಿನ ರಾಜರಾಜೇಶ್ವರಿ ನಗರದ ಜ್ಞಾನಭಾರತಿ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿದೆ.‌ ಆದರೆ, ಹಿಂಭಾಗದಲ್ಲಿ ಟ್ಯಾಂಕರ್‌ʼಗೆ ನೋಂದಣಿ ಸಂಖ್ಯೆಯನ್ನು ತಪ್ಪಾಗಿದೆ. ಕೇವಲ MH 46 ಎಂದಷ್ಟೇ ಇದೆ. ಅಂದರೆ, ಈ ವಾಹನ ಬಂದಿರುವ ಮಾರ್ಗದ ಮಧ್ಯೆ, ʼಕೆಲವರುʼ ಇವರಿಗೆ ಸಹಕರಿಸಿರುವ ಅನುಮಾನವೂ ಇದೆ.

 ಟ್ಯಾಂಕರ್‌ ನೀರು ವಿಲೇವಾರಿ ಆದ ಕೂಡಲೇ ನೆಲ ಸುಟ್ಟಿರುವುದು ಹಾಗೆಯೇ ಅಕ್ಕಪಕ್ಕದಲ್ಲಿದ್ದ ಮರ ಗಿಡಗಳು ಭಸ್ಮವಾಗಿರುವ ಚಿತ್ರಗಳು / ಸ್ಲೈಡ್‌ ಮಾಡಿ.. 

ಸುಟ್ಟು ಹೋಗಿದೆ ಅರಣ್ಯ ಪ್ರದೇಶ

ಟ್ಯಾಂಕರ್‌ʼನಿಂದ ವಿಲೇವಾರಿ ಆಗುತ್ತಿದ್ದ ನೀರು ನೆಲಕ್ಕೆ ಸ್ಪರ್ಶವಾಗುತ್ತಿದ್ದಂತೆ ಆ ನೆಲವೇ ಸುಟ್ಟುಹೋಗಿದೆ.  ಅಷ್ಟೇ ಅಲ್ಲದೆ; ಪಕ್ಕದಲ್ಲೇ ಇದ್ದ ಗಿಡ ಮರಗಳು ಕೂಡ ಕೆಮಿಕಲ್ʼನಿಂದ ಸುಟ್ಟು ಹೋಗಿದೆ. ಟ್ಯಾಂಕರ್‌ʼನಲ್ಲಿದ್ದ ಪೂರ್ಣ ಕೆಮಿಕಲ್ ನೀರು ವಾಟದಹೊಸಳ್ಳಿ ಕೆರೆಗೆ ಮಿಶ್ರಣವಾಗಿದ್ದರೆ ಅದರಲ್ಲಿದ್ದ ಮೀನುಗಳ ಮಾರಣಹೋಮವೇ ನಡೆದುಹೋಗುತ್ತಿತ್ತು. ಅಲ್ಲದೆ, ಆ ಕೆರೆಯ ನೀರನ್ನು ಕುಡಿದು ಬದುಕುತ್ತಿರುವ ಅರಣ್ಯದ ವನ್ಯಜೀವಿಗಳು, ಜನ-ಜಾನುವಾರುಗಳ ಜೀವಕ್ಕೆ ಭಾರೀ ಹಾನಿಯಾಗುತ್ತಿತ್ತು. ಅರಣ್ಯಾಧಿಕಾರಿಗಳು ಸಕಾಲಕ್ಕೆ ದಾಳಿ ನಡೆಸಿ ಈ ದುರಂತವನ್ನೇ ತಪ್ಪಿಸಿದ್ದಾರೆ.

ಮುಖ್ಯವಾಗಿ ವಾಟದಹೊಸಹಳ್ಳಿ ಕೆರೆ ಸದಾ ನೀರಿನಿಂದ ಇದ್ದು, ಪ್ರಕೃತಿ ರಮಣೀಯ ಅರಣ್ಯ ಪ್ರದೇಶದ ನಡುವೆ ಇದೆ. ಸುತ್ತಲೂ ಬೆಟ್ಟಗಳ ಸಾಲು ಇದೆ. ಪ್ರಾಕೃತಿಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾದ ಇಂಥ ಜಾಗದಲ್ಲಿ ವಿಷಕಾರಿ ತ್ಯಾಜ್ಯ ವಿಲೇವಾರಿ ಮಾಡಿದ್ದು ಯಾರು? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅರಣ್ಯಾಧಿಕಾರಿಗಳು ಪ್ರಕರಣ ದಾಖಲು ಮಾಡಿಕೊಂಡು, ವಿಷಕಾರಿ ಟ್ಯಾಂಕರ್‌ ಬಂದ ಜಾಡು ಹಿಡಿದು ತನಿಖೆ ಮಾಡುತ್ತಿದ್ದಾರೆ.

ಇದೇ ವೇಳೆ; ಸರಿಯಾದ ಸಮಯಕ್ಕೆ ಧಾವಿಸಿಬಂದು ವಿಷಕಾರಿ ಟ್ಯಾಂಕರ್‌ ಅನ್ನು ವಶಪಡಿಸಿಕೊಂಡು ಭಾರೀ ಅನಾಹುತ ತಪ್ಪಿಸಿದ ಅರಣ್ಯಾಧಿಕಾರಿಗಳಿಗೆ ಜೀವನ ಪರ್ಯಂತ ಋಣಿಯಾಗಿರುತ್ತೇವೆ ಎಂದು ವಾಟದಹೊಸಳ್ಳಿ ಗ್ರಾಮಸ್ಥರು ಹೇಳುತ್ತಾರೆ.

  • ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ, ಗುಡಿಬಂಡೆ

ಮೀಸಲು ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಬರುವುದೇ ತಪ್ಪು. ಕಾನೂನು ಬಾಹಿರವಾಗಿ, ಪರಿಸರಕ್ಕೆ ಮಾರಕವಾದ ಹಾಗೂ ನಾಗರೀಕರಿಗೆ ತೊಂದರೆ ಉಂಟು ಮಾಡುವ ಕೆಮಿಕಲ್ ನೀರು ಕೆರೆಗೆ ಬಿಡುವಾಗ ಅಲ್ಲಿನ ಸುತ್ತಮುತ್ತಲಿನ ಅರಣ್ಯ ಪ್ರದೇಶ, ಮರಗಿಡಗಳು ಸೇರಿದಂತೆ ಭೂಮಿ ಸುಟ್ಟುಹೋಗಿದೆ. ನಾವು ಸ್ಥಳಕ್ಕೆ ಭೇಟಿ ನೀಡಿದಾಗ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದೆವೆ.

ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ, ಗುಡಿಬಂಡೆ
  • ಕನಕರಾಜ, ಉಪ ವಲಯ ಅರಣ್ಯಾಧಿಕಾರಿ, ಗುಡಿಬಂಡೆ

ನನ್ನ ಗಸ್ತು ವ್ಯಾಪ್ತಿಯ ಎನ್.ಡಿ.ಬಿ 5ನೇ ಬ್ಲಾಕ್ʼನಲ್ಲಿ ರೈತರ ಹಾಗೂ ಗ್ರಾಮಸ್ಥರ ಖಚಿತ ಮಾಹಿತಿಯ ಮೆರೆಗೆ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಸ್ಥಳಕ್ಕೆ ಹೋದಾಗ ಕೆರೆಯ ನೀರಿಗೆ ಕೆಮಿಕಲ್ ಮಿಶ್ರಣ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು. ನಾವು ಇನ್ನೇನು ಸ್ಥಳಕ್ಕೆ ಹೋಗುವಷ್ಟರಲ್ಲಿ ಚಾಲಕ ಕೆಮಿಕಲ್ ಟ್ಯಾಂಕರ್ ಅನ್ನು ಅಲ್ಲೇ ಬಿಟ್ಟು ಪರಾರಿಯಾದ.

ಕನಕರಾಜ, ಉಪ ವಲಯ ಅರಣ್ಯಾಧಿಕಾರಿ, ಗುಡಿಬಂಡೆ

ಪ್ರಕರಣ ದಾಖಲಾಗಿದೆ

ಅಗಂತುಕ ವಿಷಕಾರಿ ಟ್ಯಾಂಕರ್‌, ಚಾಲಕ, ಮಾಲೀಕರಿ ವಿರುದ್ಧ ಗುಡಿಬಂಡೆ ಅರಣ್ಯಾಧಿಕಾರಿಗಳು ಅರಣ್ಯಕ್ಕೆ ವಿಷ ಹಾಕುವ, ಅರಣ್ಯ ನಾಶ, ಮೀಸಲು ಅರಣ್ಯಕ್ಕೆ ಅಕ್ರಮ ಪ್ರವೇಶ ಸೇರಿದಂತೆ ವಿವಿಧ ಕಲಮುಗಳ ಆಧಾರದ ಮೇಲೆ ಕೇಸ್‌ ದಾಖಲು ಮಾಡಿದ್ದಾರೆ.

ಹತ್ತಾರು ಅನುಮಾನ!!

ಇದೇ ವೇಳೆ ಅರಣ್ಯಾಧಿಕಾರಿಗಳನ್ನು ಹತ್ತಾರು ಅನುಮಾನಗಳು ಕಾಡುತ್ತಿವೆ. ಈ ವಿಷಕಾರಿ ಟ್ಯಾಂಕರ್‌ ಎಲ್ಲಿಂದ ಬಂತು? ಇದೇ ಮೊದಲು ಬಂದಿದೆಯಾ ಅಥವಾ ಈಗ್ಗೆ ಹಲವು ಬಾರಿ ಬಂದಿ ವಿಷ ಕಕ್ಕಿ ಹೋಗಿದೆಯಾ? ಇದು ಯಾರದ್ದು? ಯಾರಾದರೂ ಪ್ರಭಾವಿಗಳು ಇದ್ದಾರಾ? ಅದರೊಳಗೆ ಯಾವ ಕೆಮಿಕಲ್‌ ಇದೆ? ಗುಡಿಬಂಡೆ ಕಡೆಯಿಂದ, ಅಂದರೆ ಬೆಂಗಳೂರು ಕಡೆಯಿಂದ ಬಂತಾ? ಅಥವಾ ವಾಟದ ಹೊಸಹಳ್ಳಿ ಕಡೆಯಿಂದ ಬಂತಾ? ನಂಬರ್‌ ಪ್ಲೇಟ್‌ ಪ್ರಕಾರ ಅದು ಬೆಂಗಳೂರಿನ ವಾಹನ. ಅದು ಬೆಂಗಳೂರಿನಿಂದಲೇ ಬಂದಿದ್ದರೆ ಯಲಹಂಕ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಪೆರೇಸಂದ್ರ, ಗುಡಿಬಂಡೆ,, ಇಷ್ಟೂ ಕಡೆ ಪೊಲೀಸರ ಕಣ್ತಪ್ಪಿಸಿ ಬಂದಿದೆ. ಅಷ್ಟೇ ಅಲ್ಲ, ಹೆದ್ದಾರಿ ಗಸ್ತು ಪೊಲೀಸರ ಕಣ್ಣಿಗೆ ಬೀಳಲಿಲ್ಲವೆ? ಯಾಕೆಂದರೆ ಮುಂದೆ ನಂಬರ್‌ ಪ್ಲೇಟ್‌ ಇದೆ, ಹಿಂದೆ ಇಲ್ಲ. ಹೋಗಲಿ, ಗಾಡಿಯ ನಂಬರ್‌ ಪ್ಲೇಟ್‌ ಅಸಲಿಯಾ? ನಕಲಿಯಾ? ಅಂತಿಮವಾಗಿ ಈ ವಿಷಕಾರಿ ಟ್ಯಾಂಕರ್‌ ಪ್ರಭಾವಿಗಳಿಗೆ ಸೇರಿದ್ದಾ? ಹಾಗೆ ಆಗಿದ್ದಕ್ಕೆ ಸುಲಭವಾಗಿ ಗುಡಿಬಂಡೆ ಮೀಸಲು ಅರಣ್ಯಕ್ಕೆ ಟ್ಯಾಂಕರ್‌ ನುಗ್ಗಲು ಕಾರಣವಾಯಿತಾ?

ಹೀಗೆ ಅನೇಕ ಪ್ರಶ್ನೆಗಳು ಕಾಡುತ್ತಿವೆ. ಇವೆಲ್ಲಕ್ಕೂ ಅರಣ್ಯಾಧಿಕಾರಿಗಳು ಉತ್ತರ ಹುಡುಕುತ್ತಿದ್ದಾರೆ. ಮೊದಲೇ ದಟ್ಟ ಅರಣ್ಯ, ಅಪರಾಧ ಪ್ರಕರಣಗಳ ತಾಣವಾದ ವಾಟದ ಹೊಸಹಳ್ಳಿ ಕೆರೆಯ ಸುತ್ತಮುತ್ತ ಹಾಗೂ ಇಡೀ ತಾಲೂಕಿನ ಮೀಸಲು ಅರಣ್ಯ ಪ್ರದೇಶದ ಮೇಲೆ ತೀವ್ರ ನಿಗಾ ಇಡುವ ಅಗತ್ಯವಿದೆ. ಅಲ್ಲದೆ, ಈ ವಿನಾಶಕಾರಿ ಟ್ಯಾಂಕರ್‌ ಮೂಲವನ್ನು ಪತ್ತೆ ಹಚ್ಚಬೇಕಿದೆ.

Tags: Chemical wastechikkaballapuragudibande reserve forestindiakarnatakaPoisoning to the lakePoisonous waste disposalvatadahosahalli lakeWater pollution
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಷರತ್ತುಬದ್ಧ 5 ದಿನಗಳ ಗಣೇಶೋತ್ಸವ

ಷರತ್ತುಬದ್ಧ 5 ದಿನಗಳ ಗಣೇಶೋತ್ಸವ

Comments 5

  1. Rajesh Gudibande says:
    4 years ago

    ಸುದ್ದಿ ಚೆನ್ನಾಗಿದೆ ಸರ್

    Reply
  2. Pingback: ಕೆರೆಗೆ ವಿಷಪ್ರಾಷಣ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ - cknewsnow
  3. Pingback: ವಿಷ ವಿಲೇವಾರಿಗೆ ಅಡ್ಡಿಪಡಿಸಿದ ಹಳ್ಳಿಗರಿಗೆ ಹಣದ ಆಮಿಷ! - cknewsnow
  4. Pingback: ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನಾಟ್‌ ರೀಚೆಬಲ್!‌ - cknewsnow
  5. Pingback: ‌ವಿಷಕಾರಿ ಟ್ಯಾಂಕರ್ ತುಂಬಾ ಬರೀ ವಿಷ! - cknewsnow

Leave a Reply Cancel reply

Your email address will not be published. Required fields are marked *

Recommended

ರಾಹುಲ್ ಗಾಂಧಿ ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲ ಎಂದ ಹೆಚ್.ಡಿ.ಕುಮಾರಸ್ವಾಮಿ

ರಾಹುಲ್ ಗಾಂಧಿ ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲ ಎಂದ ಹೆಚ್.ಡಿ.ಕುಮಾರಸ್ವಾಮಿ

3 years ago
ಗಾಂಧಿ ಜಯಂತಿಗೂ ಮುನ್ನವೇ ಪಬ್ ಒಪೆನ್!

ರಾಜ್ಯದಲ್ಲಿ ಅವಧಿಗೆ ಮುನ್ನವೇ ಚುನಾವಣೆ

3 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ