by Ra Na Gopala Reddy Bagepalli
ಬಾಗೇಪಲ್ಲಿ: ಪಟ್ಟಣದ ನ್ಯಾಷನಲ್ ಕಾಲೇಜಿನ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ.ಕೆ.ಟಿ.ವೀರಾಂಜನೇಯ ಅವರು ಇಂದು ಅಧಿಕಾರ ಸ್ವೀಕಾರ ಮಾಡಿದರು. ಅವರು ತಮ್ಮ ಶಿಷ್ಯ ವಲಯದಲ್ಲಿ ಕೆಟಿವಿ ಎಂದೇ ಖ್ಯಾತರು.
ಇಂದು ಬೆಳಗ್ಗೆ ನ್ಯಾಷನಲ್ ಪಿಯು ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ ಶಿವಕುಮಾರ್ ಅವರಿಂದ ಕೆಟಿವಿ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ನ್ಯಾಷನಲ್ ಪಿಯು ಹಾಗೂ ಪದವಿ ಕಾಲೇಜಿನ ವಿವಿಧ ಪ್ರಾಧ್ಯಾಪಕರು, ಉಪನ್ಯಾಸಕರು ಕೆಟಿವಿ ಅವರಿಗೆ ಶುಭಕೋರಿದರು. 1988ರಲ್ಲಿ ಅವರು ಭೌತಶಾಸ್ತ್ರದ ಉಪನ್ಯಾಸಕರಾಗಿ ನ್ಯಾಷನಲ್ ಕಾಲೇಜ್ ಸೇರಿದ್ದರು
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶಿವಣ್ಣ, ಸಿದ್ದಲಿಂಗಯ್ಯ, ವೆಂಕಟರಾಮ್, ಶಿವಕುಮಾರ್ ಇನ್ನೂ ಮುಂತಾದವರು ಪ್ರಮುಖರು ಇದ್ದರು.