• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಕೆಂಗಲ್ ಹನುಮಂತಯ್ಯ ಅವರನ್ನು ಮರಳಿ ಸಿಎಂ ಹುದ್ದೆಗೇರಿಸುವ ಕನಸು ಈಡೇರಲಿಲ್ಲ

cknewsnow desk by cknewsnow desk
September 10, 2021
in GUEST COLUMN, POLITICS
Reading Time: 3 mins read
0
ಕೆಂಗಲ್ ಹನುಮಂತಯ್ಯ ಅವರನ್ನು ಮರಳಿ ಸಿಎಂ ಹುದ್ದೆಗೇರಿಸುವ ಕನಸು ಈಡೇರಲಿಲ್ಲ
1k
VIEWS
FacebookTwitterWhatsuplinkedinEmail

ಕಟ್ಟಿದ ಕಟ್ಟಡಕ್ಕೆ ಹೆಜ್ಜೆಯನ್ನೂ ಇಡದೇ ನಿರ್ಗಮಿಸಿದರು ಕೆಂಗಲ್‌

ಹಿರಿಯ ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ ಅವರ ʼರಾಜ ಚರಿತೆʼ ಕೃತಿಯನ್ನು ನಿನ್ನೆಯಷ್ಟೇ (ಸೆಪ್ಟೆಂಬರ್‌ 9) ಹಿರಿಯ ರಾಜಕಾರಣಿ ವಾಟಾಳ್‌ ನಾಗರಾಜ್‌ ಬಿಡುಗಡೆ ಮಾಡಿದ್ದಾರೆ. ಇತಿಹಾಸದ ಪುಟಗಳಲ್ಲಿ ದಾಖಲಾಗದೆ ಕಾಲಗರ್ಭಲ್ಲಿ ಹೂತು ಹೋಗಿದ್ದ ಅಥವಾ ಹೂಳಲ್ಪಟ್ಟಿದ್ದ ಅದೆಷ್ಟೋ ರೋಚಕ ಕಟುಸತ್ಯಗಳನ್ನು ಈ ಪುಸ್ತಕ ದರ್ಶನ ಮಾಡಿಸುತ್ತದೆ. ಅಂಥ ಸತ್ಯಗಳಲ್ಲಿ ಒಂದು ಎಳೆಯಷ್ಟೇ ಇಲ್ಲಿದೆ. ಇದು ಲೇಖಕರೇ ಆಯ್ಕೆ ಮಾಡಿದ ಅಧ್ಯಾಯ, ಸಿಕೆನ್ಯೂಸ್‌ ನೌ ಓದುಗರಿಗಾಗಿ..


  • ಕೆಂಗಲ್‌ ಹನುಮಂತಯ್ಯ ಅವರು ಕಟ್ಟಿಸಿದ ವಿರಾಜಮಾನ ವಿಧಾನಸೌಧ / ಚಿತ್ರಕೃಪೆ: ವಿಕಿಪೀಡಿಯಾ

ಕೆಂಗಲ್‌ ಹನುಮಂತಯ್ಯ ಅವರನ್ನು ಸಿಎಂ ಮಾಡಿ, ಹಿಂದೆ ಅವರೇ ಕಟ್ಟಿದ ಆ ಕಟ್ಟಡದಲ್ಲಿ ಕೂರಿಸಲು ನಡೆದಿದ್ದ ರೋಚಕ ಕತೆ ನಿಮಗೆ ಗೊತ್ತಾ? ಅಂತ ಅವರು ಕೇಳಿದರು.

ಮುಖ್ಯಮಂತ್ರಿಯಾಗಿ ವಿಧಾನಸೌಧ ಕಟ್ಟಿಸಿದ ಕೆಂಗಲ್‌ ಹನುಮಂತಯ್ಯ ಇನ್ನೇನು ಆ ಕಟ್ಟಡ ಉದ್ಘಾಟನೆಯಾಗುವ ಕಾಲ ಹತ್ತಿರ ಬಂತು ಎನ್ನುವಾಗ ಅಧಿಕಾರದಿಂಧ ಇಳಿದ ಕತೆ ನನಗೆ ಗೊತ್ತು. ಆದರೆ, ಈ ಕತೆ ಗೊತ್ತಿಲ್ಲ ಸಾರ್‌ ಎಂದೆ.

ವಾಟಾಳ್‌ ನಾಗರಾಜ್‌ ತಮ್ಮ ನೆನಪಿನ ಕೋಶಗಳಲ್ಲಿ ಮಡಚಿಕೊಂಡು ಕುಳಿತಿದ್ದ ಆ ಕತೆಯನ್ನು ಹೊರಗೆಳೆದು ವಿವರಿಸತೊಡಗಿದರು.

ವಿಠ್ಠಲಮೂರ್ತಿ, ಇದು ನಡೆದಿದ್ದು ಸುಮಾರು 1960ರ ಸುಮಾರಿಗೆ. ಆಗ ಮುಖ್ಯಮಂತ್ರಿಯಾಗಿದ್ದವರು ಬಿ.ಡಿ.ಜತ್ತಿ. ಅಷ್ಟೊತ್ತಿಗಾಗಲೇ ರಾಜ್ಯ ರಾಜಕಾರಣದಲ್ಲಿ ನಿಜಲಿಂಗಪ್ಪ ಅವರದು ಬಹುದೊಡ್ಡ ಹೆಸರು.

ಆದರೆ ಹಲವು ಕಾರಣಗಳಿಂದ ನಿಜಲಿಂಗಪ್ಪ ಹಾಗೂ ಬಿ.ಡಿ.ಜತ್ತಿ ಪರಸ್ಪರ ಕತ್ತಿ ಮಸೆಯುತ್ತಿದ್ದರು. ಒಬ್ಬರನ್ನು ಕಂಡರೆ ಒಬ್ಬರಿಗಾಗುತ್ತಿರಲಿಲ್ಲ. ಇದೇ ಕಾರಣಕ್ಕಾಗಿ ಈ ಇಬ್ಬರು ನಾಯಕರ ಜತೆ ನಿಂತ ಗುಂಪುಗಳು ಕೂಡಾ ಹಗೆ ಕಾರುತ್ತಲೇ ಇದ್ದವು.

ಇಂತಹ ಕಾಲದಲ್ಲೇ ಒಂದು ಸಲ ನಿಜಲಿಂಗಪ್ಪ ಅವರ ಬೆಂಬಲಿಗರ ಪಡೆ ಒಂದು ತೀರ್ಮಾನಕ್ಕೆ ಬಂತು. ಹೇಗಾದರೂ ಮಾಡಿ ಬಿ.ಡಿ.ಜತ್ತಿ ಅವರನ್ನು ಸಿಎಂ ಹುದ್ದೆಯಿಂದ ಪದಚ್ಯುತಗೊಳಿಸಬೇಕು ಎಂಬುದು ಅ ತೀರ್ಮಾನ.

ಸರಿ, ಕದನ ಶುರುವಾಯಿತು. ನೋಡ ನೋಡುತ್ತಿದ್ದಂತೆಯೇ ಬಿ.ಡಿ.ಜತ್ತಿ ಅವರ ವಿರುದ್ಧ ಒಂದರ ಹಿಂದೊಂದರಂತೆ ಆರೋಪಗಳು ಕೇಳಿ ಬಂದವು. ಆಗೆಲ್ಲ ಅದು ಬಹುದೊಡ್ಡ ವಿಷಯ.

ಹಗರಣಗಳ ಮೇಲೆ ಹಗರಣಗಳನ್ನು ಮಾಡಿಕೊಂಡ ಬಿ.ಡಿ.ಜತ್ತಿ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಕಟ್ಟಿಟ್ಟ ಬುತ್ತಿ ಎಂಬ ಕೂಗು ಪ್ರಬಲವಾಯಿತು.

ನಿಜಲಿಂಗಪ್ಪ ಬೆಂಬಲಿಗರ ಕೂಗು ಎಷ್ಟು ಪ್ರಬಲವಾಗಿತ್ತು ಎಂದರೆ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಕಿವಿಗೆ ಈ ವಿಷಯ ತಲುಪಿತು.

ಯಾವಾಗ ಬಿ.ಡಿ.ಜತ್ತಿ ಅವರ ವಿರುದ್ಧದ ಆರೋಪಗಳು ದಿಲ್ಲಿ ಮಟ್ಟದಲ್ಲಿ ಸದ್ದು ಮಾಡಿದವೋ? ಆಗ ಪ್ರಧಾನಿ ನೆಹರೂ ಅವರು ತಮ್ಮ ಪರಮಾಪ್ತರೊಬ್ಬರನ್ನು ಕರ್ನಾಟಕಕ್ಕೆ ಕಳಿಸಿದರು. ಜತ್ತಿ ಅವರ ವಿರುದ್ಧದ ಅರೋಪಗಳ ಕುರಿತು ತನಿಖೆ ಮಾಡಿಕೊಂಡು ಬನ್ನಿ ಎಂದರು.

ಈಗೆಲ್ಲ ಆರೋಪಗಳ ತನಿಖೆ ಎಂದರೆ ಸಂಬಂಧಪಟ್ಟ ಕಡತವನ್ನು ಮುಚ್ಚುವ ಕ್ರಿಯೆ.ಆದರೆ ಆಗೆಲ್ಲ ತನಿಖೆ ಎಂದರೆ ಸಂಬಂಧಪಟ್ಟ ಕಡತಗಳನ್ನು ಬಿಚ್ಚುವ ಕ್ರಿಯೆ.

ಯಾವಾಗ ಜತ್ತಿ ವಿರುದ್ಧದ ಆರೋಪಕ್ಕೆ ಪ್ರಧಾನಿ ಜವಾಹರಲಾಲ್ ನೆಹರೂ ಅವರೇ ಕಿವಿಗೊಟ್ಟರೋ? ಆಗ ನಿಜಲಿಂಗಪ್ಪ ಅವರ ಬೆಂಬಲಿಗರು ಹುರುಪಿನಿಂದ ಜತ್ತಿ ಜಾಗಕ್ಕೆ ಯಾರು ಬರಬೇಕು? ಅನ್ನುವ ಸಂಬಂಧ ಒಂದು ನಿರ್ಣಯಕ್ಕೆ ಬಂದರು.

ಕರ್ನಾಟಕದ ಏಕೀಕರಣಕ್ಕೆ ಒತ್ತಾಸೆ ನೀಡಿದ, ವಿಧಾನಸೌಧ ಕಟ್ಟಿಸಿದರೂ ಮುಖ್ಯಮಂತ್ರಿಯಾಗಿ ಒಳಗೆ ನುಗ್ಗಲಾಗದ ಕೆಂಗಲ್‌ ಹನುಮಂತಯ್ಯ ಅವರನ್ನು ಮರಳಿ ಮುಖ್ಯಮಂತ್ರಿ ಹುದ್ದೆಗೆ ಏರಿಸಬೇಕು ಅನ್ನುವುದು ಈ ತೀರ್ಮಾನ.

ಅಂದ ಹಾಗೆ 1956ರಲ್ಲಿ ನಡೆದ ಏಕೀಕರಣದ ಕತೆ ನಿಮಗೆ ಗೊತ್ತಿದೆ. ಆದರೆ ಆ ಏಕೀಕರಣಕ್ಕೆ ಹಳೆ ಮೈಸೂರು ಭಾಗದ ಬಹುತೇಕ ನಾಯಕರ ವಿರೋಧವಿತ್ತು. ಒಂದು ಸಲ ಏಕೀಕರಣ ಅಂತಾದರೆ ನಾಡಿನ ಅಧಿಕಾರ ಸೂತ್ರ ಉತ್ತರ ಕರ್ನಾಟಕ ಭಾಗದ ನಾಯಕರ ಕೈಗೆ ಹೋಗುತ್ತದೆ ಎಂಬುದು ಇಂತಹ ವಿರೋಧಕ್ಕೆ ಮುಖ್ಯ ಕಾರಣವಾಗಿತ್ತು.

ಹೀಗಾಗಿಯೇ ಅವತ್ತು ಕಾಂಗ್ರೆಸ್‌ ಪಕ್ಷದ ಬಹುತೇಕ ನಾಯಕರು ಏಕೀಕರಣಕ್ಕೆ ವಿರೋಧ ವ್ಯಕ್ತಪಡಿಸಿದರು. ಯಾವ ಕಾರಣಕ್ಕೂ ಏಕೀಕರಣಕ್ಕೆ ಬೆಂಬಲ ಕೊಡಬಾರದು ಎಂದು ಅವತ್ತು ಮುಖ್ಯಮಂತ್ರಿಯಾಗಿದ್ದ ಕೆಂಗಲ್‌ ಹನುಮಂತಯ್ಯ ಅವರ ಮೇಲೂ ಒತ್ತಡ ಹೇರಿದರು.

ಆದರೆ ಹನುಮಂತಯ್ಯ ಅವರು ಈ ವಾದವನ್ನು ಒಪ್ಪಲಿಲ್ಲ. ಕೇವಲ ಅಧಿಕಾರಕ್ಕಾಗಿ ನಮ್ಮದೇ ನಾಡಿನ ಒಂದು ಭಾಗ ಪ್ರತ್ಯೇಕವಾಗಿರುವುದು ಸರಿಯಲ್ಲ, ಗೌರವವೂ ಅಲ್ಲ ಎಂಬುದು ಅವರ ವಾದವಾಗಿತ್ತು.

ಪರಿಣಾಮ? ಅದಾಗಲೇ ಹಲವು ಕಾರಣಗಳಿಂದ ವಿವಿಧ ಶಕ್ತಿಗಳ ವಿರೋಧ ಕಟ್ಟಿಕೊಂಡಿದ್ದ ಹನುಮಂತಯ್ಯ ಅವರ ವಿರುದ್ಧ ಸ್ವಪಕ್ಷೀಯರೇ ದೊಡ್ಡ ಮಟ್ಟದಲ್ಲಿ ತಿರುಗಿಬಿದ್ದರು. ಮುಖ್ಯಮಂತ್ರಿ ಹುದ್ದೆಯಿಂದ ಅವರು ಪದಚ್ಯುತರಾಗುವಂತೆ ಮಾಡಿದರು.

ಅಂದ ಹಾಗೆ ಹನುಮಂತಯ್ಯ ಅವರ ಬಗ್ಗೆ ಪ್ರಧಾನಿ ನೆಹರೂ ಅವರಿಗೂ ಅಸಮಾಧಾನವಿತ್ತು. ಯಾವ ಕಾರಣಕ್ಕಾಗಿ ನೆಹರೂ ಅವರಲ್ಲಿ ಈ ಅಸಮಾಧಾನ ಬೇರೂರಿತ್ತು ಎಂದು ಹೇಳಲು ಹೊರಟರೆ ಅದೇ ದೊಡ್ಡ ಕತೆ.

ಅದೇನೇ ಇರಲಿ, ಒಟ್ಟಿನಲ್ಲಿ ಕರ್ನಾಟಕ ಏಕೀಕರಣವಾಗಬೇಕು ಎಂದು ಒತ್ತಾಸೆ ನೀಡಿದ ಕೆಂಗಲ್‌ ಹನುಮಂತಯ್ಯ ಅದರ ಪ್ರತಿಫಲವಾಗಿ ಮುಖ್ಯಮಂತ್ರಿ ಹುದ್ದೆಯನ್ನು ಕಳೆದುಕೊಳ್ಳಬೇಕಾಯಿತು.

ಹೀಗೆ ವಿಧಾನಸೌಧದಂತಹ ಅದ್ಭುತ ಕಟ್ಟಡವನ್ನು ಕಟ್ಟಿಸಿ, ಇನ್ನೇನು ಅದರ ಉದ್ಘಾಟನೆಯಾಗಬೇಕು ಅನ್ನುವ ಕಾಲಕ್ಕೆ ಕೆಂಗಲ್‌ ಹನುಮಂತಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದರಲ್ಲ?

ಅಂತಹ ಕೆಂಗಲ್‌ ಹನುಮಂತಯ್ಯ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಮತ್ತೊಮ್ಮೆ ಅವರನ್ನುಮುಖ್ಯಮಂತ್ರಿ ಹುದ್ದೆಗೇರಿಸಬೇಕು ಎಂಬುದು ನಿಜಲಿಂಗಪ್ಪ ಅವರ ಗುಂಪಿನ ಆಸೆಯಾಗಿತ್ತು. ಅದರಲ್ಲಿದ್ದ ಬಹುತೇಕರು ಉತ್ತರ ಕರ್ನಾಟಕ ಭಾಗದವರು ಎಂಬುದನ್ನು ನಾವು ವಿಶೇಷವಾಗಿ ಗುರುತಿಸಬೇಕು.

ಸರಿ, ನಿಜಲಿಂಗಪ್ಪ ಹಾಗೂ ಬಿ.ಡಿ.ಜತ್ತಿ ನಡುವಣ ಕದನ ತಾರಕಕ್ಕೇರಿತು.ಕೊನೆಗೆ ನೆಹರೂ ಅವರಿಗೆ ಆಪ್ತರಾಗಿದ್ದವರೇ ಬಂದು ಬಿ.ಡಿ.ಜತ್ತಿ ಸಮ್ಮುಖದಲ್ಲಿ ಕುಳಿತು ಅವರ ವಿರುದ್ಧದ ಆರೋಪಗಳ ಬಗ್ಗೆ ಪರಿಶೀಲನೆ ಮಾಡಿದರು. ಸಂಬಂಧಪಟ್ಟ ಕಡತಗಳನ್ನು ಇಂಚಿಂಚೂ ಬಿಡದೆ ಗಮನಿಸಿದರು.

ಒಬ್ಬ ಮುಖ್ಯಮಂತ್ರಿಯನ್ನು ಎದುರುಗಡೆ ಕೂರಿಸಿಕೊಂಡು ಅವರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ಮಾಡುವುದು ಎಂದರೆ ಅದೇನು ಸಣ್ಣ ಸಂಗತಿಯೇ? ಆದರೆ ಜತ್ತಿ ಅಂತಹ ತನಿಖೆಯನ್ನು ಎದುರಿಸಬೇಕಾಯಿತು.

ಆದರೆ ತನಿಖೆಯನ್ನು ಪೂರ್ಣಗೊಳಿಸಿದ ನೆಹರೂ ಅವರ ಪರಮಾಪ್ತರು ಜತ್ತಿ ವಿರುದ್ಧದ ಆರೋಪದಲ್ಲಿ ಹೇಳಿಕೊಳ್ಳುವಂತಹ ತಪ್ಪೇನೂ ಆಗಿಲ್ಲ ಎಂಬ ತೀರ್ಮಾನಕ್ಕೆ ಬಂದರು.

ಹಾಗೆಯೇ ಮತ್ತೊಂದು ಅಂಶ ಜತ್ತಿ ಅವರಿಗೆ ನೆರವಾಯಿತು. ಅದೆಂದರೆ ಜತ್ತಿ ಅವರ ಜಾಗಕ್ಕೆ ಯಾರನ್ನು ತರಬೇಕು ಅಂತ ನಿಜಲಿಂಗಪ್ಪ ಅವರ ಬಣ ನಿರ್ಧರಿಸಿತ್ತೋ? ಅಂತಹ ಕೆಂಗಲ್‌ ಹನುಮಂತಯ್ಯ ಅವರನ್ನು ಮತ್ತೆ ಸಿಎಂ ಮಾಡುವ ವಿಷಯದಲ್ಲಿ ನೆಹರೂ ಅವರಿಗೆ ಆಸಕ್ತಿ ಇರಲಿಲ್ಲ.

ಹೀಗಾಗಿ ಕೆಂಗಲ್‌ ಹನುಮಂತಯ್ಯ ಅವರನ್ನು ಮರಳಿ ಮುಖ್ಯಮಂತ್ರಿ ಹುದ್ದೆಗೆ ತರುವ ಮೂಲಕ ಜತ್ತಿ ಅವರನ್ನು ತಮ್ಮ ದಾರಿಯಿಂದ ನಿವಾರಿಸಿಕೊಳ್ಳಬೇಕು ಅನ್ನುವ, ಹಾಗೆಯೇ ಹಿಂದೆ ಆಗಿದ್ದ ಪ್ರಮಾದವನ್ನು ಸರಿಪಡಿಸಬೇಕು ಅನ್ನುವ ನಿಜಲಿಂಗಪ್ಪನವರ ಕನಸು ಈಡೇರಲೇ ಇಲ್ಲ.

ರಾಜ ಚರಿತೆ ಪುಸ್ತಕ ವಿಡುಗಡೆ ಮಾಡಿದ ವಾಟಾಳ್‌ ನಾಗರಾಜ್.

  • ರಾಜಚರಿತೆ
  • ಲೇಖಕ:ಆರ್.ಟಿ.ವಿಠ್ಠಲಮೂರ್ತಿ
  • ಪ್ರಕಾಶಕರು: ಸಾಧನ ಪಬ್ಲಿಕೇಷನ್ಸ್
  • ಬೆಲೆ: ರೂ. 175

Tags: cknewsnowjournalistkarnatakakengal hanumanthaiahnewspolitical historypress clubraja charitert vittala murthyvatal nagarajvidhana soudha
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

ನೀಲಂ ಸಂಜೀವ ರೆಡ್ಡಿ ಅವರನ್ನು ಸೋಲಿಸಿ ವಿ.ವಿ.ಗಿರಿ ಅವರನ್ನು ಗೆಲ್ಲಿಸಿದ ಆತ್ಮಸಾಕ್ಷಿ ಮತ

ಜನರ ತೆರಿಗೆ ದುಡ್ಡಿನಲ್ಲಿ ಬೆಳಗಾವಿಯಲ್ಲಿ ನಕಲಿ ಗಾಂಧಿಗಳ ವಿಜೃಂಭಣೆ

by cknewsnow desk
December 26, 2024
0

ಇದು ಗಾಂಧಿ ಕಾಂಗ್ರೆಸ್ ಅಲ್ಲ, ಅಲಿಬಾಬಾ ನಲವತ್ತು ಕಳ್ಳರ ಕಾಂಗ್ರೆಸ್!!; ಬೆಳಗಾವಿ ಸಮಾವೇಶದಲ್ಲಿ ಮಹಾತ್ಮ ಗಾಂಧಿ ನಿರ್ಲಕ್ಷ್ಯ

ಹೆಚ್.ಡಿ.ಕುಮಾರಸ್ವಾಮಿ ಬೀಸಿದ ಚಾಟಿಯಿಂದ ಎಚ್ಚೆತ್ತ ಸರಕಾರ

ಮೂಡಾದಲ್ಲಿ ಕುಮಾರಸ್ವಾಮಿಯದ್ದೂ ಸೈಟಿದೆ ಎಂದ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ HDK

by cknewsnow desk
July 26, 2024
0

ಹಣ ಕಟ್ಟಿ 40 ವರ್ಷ ಆಗಿದೆ, ನನಗಿನ್ನೂ ನಿವೇಶನವನ್ನೇ ಕೊಟ್ಟಿಲ್ಲ ಎಂದ ಕೇಂದ್ರ ಸಚಿವರು

ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

ರಾಮನಗರದಿಂದ ರಾಮನ ಹೆಸರು ಬೇರ್ಪಡಿಸಿದವರು ಸರ್ವನಾಶ ಆಗಲಿದ್ದಾರೆ!

by cknewsnow desk
July 26, 2024
0

ಹೆಸರು ಬದಲಿಸಿದರೆ ಭೂಮಿ ಬೆಲೆ ಹೆಚ್ಚಾಗುವುದಿಲ್ಲ; ಹೆಚ್.ಡಿ.ಕುಮಾರಸ್ವಾಮಿ ಕಿಡಿ

Next Post
ಅರಣ್ಯದಲ್ಲಿ ತಪ್ಪಿದ ಮಹಾ ದುರಂತ!!

ಕೆರೆಗೆ ವಿಷಪ್ರಾಷಣ: ವಿಷಾನಿಲದ ಭೀತಿಯಲ್ಲಿ ಸ್ಥಳೀಯ ಹಳ್ಳಿಗರು

Leave a Reply Cancel reply

Your email address will not be published. Required fields are marked *

Recommended

113ರಿಂದ 107 ಅಡಿಗೆ ಕುಸಿದ KRS ನೀರಿನ ಮಟ್ಟ

ಕಾವೇರಿ ಸಂಕಷ್ಟ; ಮಹತ್ವದ ಪರಿಹಾರೋಪಾಯ ಸೂಚಿಸಿದ ಹೆಚ್.ಡಿ.ಕುಮಾರಸ್ವಾಮಿ

2 years ago
ನವರಾತ್ರಿಯಲ್ಲಿ ದುರ್ಗಾ ದೇವಿ ಆರಾಧನೆ

ನವರಾತ್ರಿಯಲ್ಲಿ ದುರ್ಗಾ ದೇವಿ ಆರಾಧನೆ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ