• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಪ್ರೊ.ಎ.ಲಕ್ಷ್ಮೀಸಾಗರ್: ಅಪ್ಪಟ ಗಾಂಧೀವಾದಿ, ರಾಜಕಾರಣದ ಸತ್ಯವಾದಿ

cknewsnow desk by cknewsnow desk
September 12, 2021
in STATE
Reading Time: 2 mins read
0
ಪ್ರೊ.ಎ.ಲಕ್ಷ್ಮೀಸಾಗರ್: ಅಪ್ಪಟ ಗಾಂಧೀವಾದಿ, ರಾಜಕಾರಣದ ಸತ್ಯವಾದಿ
1.3k
VIEWS
FacebookTwitterWhatsuplinkedinEmail

ಲಕ್ಷ್ಮೀಸಾಗರವನ್ನು ಸಂಸತ್‌ವರೆಗೂ ಕೊಂಡೊಯ್ದ ನಾಯಕ

By GS Bharath Gudibande

ಗುಡಿಬಂಡೆ: ಕಡು ಬಡತನದಲ್ಲಿ ಹುಟ್ಟಿ ಬೆಳೆದು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಪ್ರೊ.ಎ.ಲಕ್ಷ್ಮೀಸಾಗರ್‌ ಅವರು ನಮ್ಮನ್ನಗಲಿ ಇಂದಿಗೆ 13 ವರ್ಷ. ಅವರು 2008 ಸೆಪ್ಟೆಂಬರ್‌ 12ರಂದು ನಿಧನರಾಗಿದ್ದರು.

ಹುಟ್ಟಿದ್ದು (1927 ಡಿಸೆಂಬರ್‌ 8) ಗುಡಿಬಂಡೆ ತಾಲೂಕಿನ ವರಲಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮೀಸಾಗರ ಗ್ರಾಮದಲ್ಲಿ. ತಮ್ಮ 81 ವರ್ಷಗಳ ತುಂಬು ಜೀವನದಲ್ಲಿ ಜ್ಞಾನದ ತುಂಬಿದ ಕೊಡವಾಗಿದ್ದ ಅವರು ನಾಡಿಗೆ ಸಲ್ಲಿಸಿದ ಸೇವೆ ಅನನ್ಯ. ಕಾಂಗ್ರೆಸ್ಸೇತರ ನಾಯಕನಾಗಿ, ಮೌಲ್ಯಾಧಾರಿತ, ಪ್ರಾಮಾಣಿಕ ರಾಜಕಾರಣ ಮಾಡಿದ ಅವರನ್ನು ನಾಡಿನ ಜನರು ʼಗಾಂಧಿನಗರದ ಗಾಂಧಿʼ(ಬೆಂಗಳೂರಿನ ಗಾಂಧೀನಗರ) ಎಂದೇ ನೆನಪಿಸಿಕೊಳ್ಳುತ್ತಾರೆ. ಇಂಥ ಮಹಾನ್ ವ್ಯಕ್ತಿಯ ಬಗ್ಗೆ ಗುಡಿಬಂಡೆ ತಾಲೂಕಿನ ಸಾಕಷ್ಟು ಜನರಿಗೆ ವಿವರವಾಗಿ ಗೊತ್ತಿಲ್ಲ ಎಂಬುದು ದುರ್ದೈವದ ಸಂಗತಿ.

ಈ ನಿಟ್ಟಿನಲ್ಲಿ ಸಿಕೆನ್ಯೂಸ್ ನೌ ಜಿಲ್ಲೆಯ ಮತ್ತು ತಾಲೂಕಿನ ಜನತೆಗೆ ಅವರ ಬಗ್ಗೆ ಒಂದಿಷ್ಟು ಮಾಹಿತಿ ನೀಡಲು ಪ್ರಯತ್ನಿಸಿದೆ.

ಯಾರೀ ಪ್ರೊ.ಎ.ಲಕ್ಷ್ಮೀಸಾಗರ್?‌

ಪ್ರೊ.ಎ.ಲಕ್ಷ್ಮೀಸಾಗರ್ ಅವರು ಸರಳ, ಸಜ್ಜನಿಕೆಯ ಸಾಕಾರಮೂರ್ತಿ. ವರಲಕೊಂಡ ಸಮೀಪದ ಲಕ್ಷ್ಮೀಸಾಗರ ಗ್ರಾಮದಲ್ಲಿ ಜನಿಸಿದ ಅವರ ಮೂಲ ಹೆಸರು ಚಿಕ್ಕಕೊಂಡಪ್ಪ. ನಂತರ ಬೆಂಗಳೂರಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುವ ವೇಳೆ ಆ ಹೆಸರು ಲಕ್ಷ್ಮೀಸಾಗರ್ ಎಂದೇ ಬದಲಾಯಿತು. ಹುಟ್ಟಿದ ಊರಿನ ಹೆಸರೇ ಅವರ ಹೆಸರಾಯಿತು!

ಬಡತನದಲ್ಲಿ ಬೆಂದ ಲಕ್ಷ್ಮೀಸಾಗರ್‌ ಅವರು ತಮ್ಮ ಜ್ಞಾನದಿಂದಲೇ ಉನ್ನತ ಮಟ್ಟಕ್ಕೆ ಬೆಳೆಯುತ್ತಾ ಹೋದರು. ಜನ್ಮ ತಳೆದಿದ್ದು ಅವಿಭಜಿತ ಕೋಲಾರ ಜಿಲ್ಲೆಯಲ್ಲಾದರೂ ಅವರು ರಾಜಕೀಯ ಕಾರ್ಯಕ್ಷೇತ್ರನ್ನಾಗಿ ಮಾಡಿಕೊಂಡಿದ್ದು ಬೆಂಗಳೂರನ್ನೇ. 1972-1975ರಲ್ಲಿ ರಾಜಕೀಯ ರಂಗ ಪ್ರವೇಶ ಮಾಡಿ ಚಿಕ್ಕಪೇಟೆ ವಾರ್ಡ್‌ʼನಿಂದ ಬೆಂಗಳೂರು ಸಿಟಿ ಮುನ್ಸಿಫಲ್ ಕೌನ್ಸಿಲರ್ ಆಯ್ಕೆಯಾದರು.

ಬಳಿಕ 1978, 1983 & 1985ರಲ್ಲಿ ಚಿಕ್ಕಪೇಟೆಯಿಂದ ಸ್ಪರ್ಧಿಸಿ ಸತತವಾಗಿ ಮೂರು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 1982ರಿಂದ 1983ರ ಅವಧಿಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದರು. ಆಗ ಆರ್.‌ಗುಂಡೂರಾವ್‌ ಅವರ ಸರಕಾರವಿತ್ತು. ಅಲ್ಲದೆ, 1996ರಿಂದ 2002ರವರೆಗೆ ವಿಧಾನ ಪರಿಷತ್‌ ಸದಸ್ಯರಾಗಿಯೂ ಕೆಲಸ ಮಾಡಿದ್ದರು.

ಇನ್ನು; ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಅತ್ಯಂತ ಮಹತ್ತ್ವದ್ದಾದ ನಗರಾಭಿವೃದ್ಧಿ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರಾಗಿ ಸಮರ್ಥವಾಗಿ ಕೆಲಸ ಮಾಡಿದ್ದ ಲಕ್ಷ್ಮೀಸಾಗರ್‌ ಅವರು, ಒಮ್ಮೆ ರಾಮಕೃಷ್ಣ ಹೆಗಡೆ ಅವರು ಅಧಿಕೃತ ವಿದೇಶ ಪ್ರವಾಸ ಕೈಗೊಂಡಾಗ ಮುಖ್ಯಮಂತ್ರಿಗಳ ಪ್ರತಿನಿಧಿಯಾಗಿ ಆ ಸ್ಥಾನದ ಜವಬ್ದಾರಿ ನಿರ್ವಹಿಸಿದ್ದರು. ಅಂದರೆ, ಹಂಗಾಮಿ ಸಿಎಂ ಅಗಿ ಕರ್ತವ್ಯ ನಿರ್ವಹಿಸಿದ್ದರು.

1998-2002ರ ಅವಧಿಯಲ್ಲಿ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಜನತಾದಳ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು ಅವರು. ಅಲ್ಲದೆ, ಅದೇ ಪಕ್ಷದ ಕಾರ್ಯಾಧ್ಯಕ್ಷರಾಗಿಯೂ 1996-1998ರವರೆಗೆ ಕೆಲಸ ಮಾಡಿದ್ದರು. ಜನತಾ ಪರಿವಾರದಲ್ಲಿ ರಾಜಕೀಯ ಅಗ್ರನಾಯಕರಾಗಿ ಬೆಳೆದ ಅವರು ರಾಮಕೃಷ್ಣ ಹೆಗಡೆ, ಎಚ್.‌ಡಿ.ದೇವೇಗೌಡ, ಎಸ್.‌ಆರ್.‌ಬೊಮ್ಮಾಯಿ ಮುಂತಾದ ದಿಗ್ಗಜರ ಜತೆ ಜತೆ ರಾಜಕೀಯ ಹೆಜ್ಜೆಗಳನ್ನು ಇಟ್ಟವರು.

ಬ್ರಹ್ಮಚಾರಿ ಮತ್ತು ಪರಮ ಪ್ರಾಮಾಣಿಕ

ಪ್ರೊ.ಲಕ್ಷ್ಮೀಸಾಗರ್‌ ಅವರು ತಮ್ಮ ಜ್ಞಾನ, ಪ್ರಾಮಾಣಿಕತೆ, ಬದ್ಧತೆ ನಂಬಿ ಮೇಲೆ ಬಂದವರು. ಸ್ವಜನ ಪಕ್ಷಪಾತ, ಅಪ್ರಾಮಾಣಿಕತೆ, ಸ್ವಾರ್ಥ ಎನ್ನುವ ಪದಗಳು ಅವರ ಮನೆ ಹೊಸಲಿಗೂ ಬರದಂತೆ ನೋಡಿಕೊಂಡರು. ಸಾಂಸಾರಿಕ ಜೀವನದ ಜಂಜಾಟಕ್ಕೆ ಸಿಗದೆ ಬ್ರಹ್ಮಚಾರಿಯಾಗಿಯೇ ಉಳಿದರಲ್ಲದೆ ಜನರ ಮಧ್ಯೆ ಸಂನ್ಯಾಸಿಯಂತೆ ಬದುಕಿದರು. ಜಾತಿ, ಧರ್ಮ, ಪ್ರಾಂತೀಯ ಭಾವನೆಗಳಿಗೆ ಅತೀತರಾಗಿದ್ದರು.

ಅವಿರತ ಓದು, ಜ್ಞಾನಾರ್ಜನೆ

ಪ್ರೊ.ಲಕ್ಷ್ಮೀಸಾಗರ್‌ ನಿರಂತರವಾಗಿ ಓದುತ್ತಿದ್ದರು. ಸಂವಿಧಾನ ಅವರ ನಾಲಗೆಯ ಮೇಲೆ ನಲಿಯುತ್ತಿತ್ತು. ವರ್ಲಕೊಂಡ ಹಾಗೂ ಬೀಚಗಾನಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಅವರು, ಉನ್ನತ ಮತ್ತು ಕಾನೂನು ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹೋದರು. ಆ ಸಂದರ್ಭದಲ್ಲಿ ಬಡತನದಿಂದ ಬೇಯುತ್ತಿದ್ದ ಅವರು ಶಿಕ್ಷಣ ಮತ್ತು ಊಟ-ವಸತಿಗಾಗಿ ಪಾರ್ಟ್‌ ಟೈಂ ಕೆಲಸ ಮಡುತ್ತಿದ್ದರು. ಕಾಲೇಜು ಮುಗಿದ ಮೇಲೆ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿ ಬಂದ ಹಣದಲ್ಲಿ ವಿದ್ಯಾಭ್ಯಾಸ ಮಾಡಿದ್ದರು.

ಕಾನೂನು ಪದವಿ ಮುಗಿಸಿದ ಮೇಲೆ ಕೆಲ ಕಾಲ ಉಪನ್ಯಾಸಕರಾಗಿ ಕೆಲಸ ಮಾಡಿದ್ದ ಅವರು, ನಿರಂತರವಾಗಿ ಒಂದಲ್ಲ ಒಂದು ಕೆಲಸವನ್ನು ಮಾಡುತ್ತಲೇ ಇದ್ದರು. ತಮ್ಮ ನಿತ್ಯದ ಖರ್ಚಿಗಾಗಿ ಯಾರನ್ನೂ ಒಂದು ಪೈಸೆಯನ್ನೂ ಕೇಳುತ್ತಿರಲಿಲ್ಲ ಎಂದು ಅನೇಕರು ಈಗಲೂ ಹೇಳುತ್ತಾರೆ.

  • ಪ್ರೊ.ಲಕ್ಷ್ಮೀಸಾಗರ್‌ ಅವರು ತಮ್ಮ ಸಂಸದರ ಅನುದಾನದಿಂದ ಲಕ್ಷ್ಮೀಸಾಗರ, ವರಲಕೊಂಡ ಗ್ರಾಮಗಳಿಗೆ ನೀಡಿರುವ ಕೊಡುಗೆಗಳು.

ಊರಿನ ಋಣ ತೀರಿಸಿದ ಹೃದಯವಂತ

ರಾಜಕೀಯ ಬದುಕಿಗಾಗಿ ಬೆಂಗಳೂರು ಕಾರ್ಯಕ್ಷೇತ್ರವಾದರೂ ಅವರು ಯಾವಾಗಲೂ ತಮ್ಮ ಜನ್ಮಸ್ಥಳದ ಬಗ್ಗೆ ಮಿಡಿಯುತ್ತಿದ್ದರು. ಲಕ್ಷ್ಮೀಸಾಗರಕ್ಕೆ, ಗುಡಿಬಂಡೆ ತಾಲೂಕಿಗೆ ಹಾಗೂ ಅವಿಭಜಿತ ಕೋಲಾರ ಜಿಲ್ಲೆಗೆ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.

ಮುಖ್ಯವಾಗಿ ಬಡಮಕ್ಕಳು ಚೆನ್ನಾಗಿ ಕಲಿಯಬೇಕು ಎಂದು ತಪಿಸುತ್ತಿದ್ದ ಅವರು, ಶಿಕ್ಷಣದಲ್ಲಿ ಯಾವ ಮಗುವೂ  ಹಿಂದೆ ಬೀಳಬಾರದು ಎಂಬ ದೂರದೃಷ್ಟಿಯಿಂದ ವರ್ಲಕೊಂಡ ಗ್ರಾಮದಲ್ಲಿ 73 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಪ್ರೌಡಶಾಲೆ ಕಟ್ಟಡಕ್ಕೆ ಅನುದಾನ ನೀಡಿದ್ದರು. ಆ ಶಾಲಾ ಕಟ್ಟಡ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇದೆ. ಮಂಡಿಕಲ್, ನಾರೆಮದ್ದೇಪಲ್ಲಿ, ಸೋಮೇನಹಳ್ಳಿ ಶಾಲೆಗಳ ಕೆಲ ಕಟ್ಟಡಗಳನ್ನು ರಾಜ್ಯಸಭಾ ಸದಸ್ಯರ ನಿಧಿಯಿಂದ ಕಟ್ಟಿಸಿದ್ದರು. ಲಕ್ಷ್ಮೀಸಾಗರ ಗ್ರಾಮದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನವನ್ನು ಕೂಡ ನಿರ್ಮಿಸಿದ್ದರು.

ವರ್ಲಕೊಂಡ ಗ್ರಾಮವನ್ನು ಶಿಕ್ಷಣ ಹಬ್ ಮಾಡುವುದು ಲಕ್ಷ್ಮೀಸಾಗರ್‌ ಅವರ ಕನಸಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಈ ಗ್ರಾಮದಲ್ಲಿ ಸುಮಾರು 10‌ ಕೋಟಿಗೂ ಹೆಚ್ಚು ಬೆಲೆ ಬಾಳುವ ಭೂಮಿಯಲ್ಲಿ ಶಾಲೆ ನಿರ್ಮಿಸಿ ಪ್ರತಿಯೊಬ್ಬ ವಿದ್ಯಾರ್ಥಿ ದೇಶದ ಸೇವೆ ಮಾಡುವ ನಿಟ್ಟಿನಲ್ಲಿ ಬೆಳೆಸಬೇಕೆಂಬ ಗುರಿ ಅವರದಾಗಿತ್ತು. ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಲಕ್ಷ್ಮೀಸಾಗರ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಪುಣ್ಯಸ್ಮರಣೆ ನಿಮಿತ್ತ ವರಲಕೊಂಡ ಹಾಗೂ ಲಕ್ಷ್ಮೀಸಾಗರದ ಗ್ರಾಮಸ್ಥರು ಪ್ರೊ.ಲಕ್ಷ್ಮೀಸಾಗರ್‌ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಲಕ್ಷ್ಮೀಸಾಗರ ಗ್ರಾಮದಲ್ಲಿ ಹುಟ್ಟಿ ಬೆಳೆದು, ಬೆಂಗಳೂರು ಸಿಟಿ ಮುನಿಸಿಫಲ್‌, ವಿಧಾನಸಭೆ ಹಾಗೂ ಸಂಸತ್ತಿನವರೆಗೂ ಸಾಗಿದ ಪ್ರೊ.ಲಕ್ಷ್ಮೀಸಾಗರ್‌ ಅವರು ನಡೆದ ದಾರಿ ಬಹುದೊಡ್ಡದು. ಅವರು ತಾವು ಹುಟ್ಟಿದ ಗ್ರಾಮಕ್ಕೆ ನೀಡಿರುವ ಕೊಡುಗೆಗಳು ಅನನ್ಯ. ಅವರ ಪುಣ್ಯಸ್ಮರಣೆ ನಮ್ಮೆಲ್ಲರ ಹೊಣೆಗಾರಿಕೆ. ಶೈಕ್ಷಣಿಕವಾಗಿ ನಮ್ಮ ಗ್ರಾಮಕ್ಕೆ ಕೊಡುಗೆ ನೀಡಿದ ಅವರನ್ನು ಸದಾ ಸ್ಮರಿಸುತ್ತೇವೆ.

ಎಲ್.ಎ.ಬಾಬು, ಉಪಾಧ್ಯಕ್ಷ, ವರ್ಲಕೊಂಡ ಗ್ರಾಮ ಪಂಚಾಯತಿ

Tags: A Lakshmisagarchikkaballapuraformer ministergudibandejanata Daljdskarnatakapro a lakshmisagarvaralakonda
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಹೈವೋಲ್ಟೇಜ್ ಅಧಿವೇಶನ

ಹೈವೋಲ್ಟೇಜ್ ಅಧಿವೇಶನ

Leave a Reply Cancel reply

Your email address will not be published. Required fields are marked *

Recommended

ಬಿಜೆಪಿ ಕುಟುಂಬ ರಾಜಕಾರಣದ ಪಟ್ಟಿ ಕೊಟ್ಟ ಜೆಡಿಎಸ್‌

ಬಿಜೆಪಿ ಕುಟುಂಬ ರಾಜಕಾರಣದ ಪಟ್ಟಿ ಕೊಟ್ಟ ಜೆಡಿಎಸ್‌

4 years ago
ಚಿಕ್ಕಬಳ್ಳಾಪುರದ 4 ಅವಧಿಯ ಸಂಸದ ಆರ್.ಎಲ್.ಜಾಲಪ್ಪ ಅವರು ಇನ್ನಿಲ್ಲ

ಚಿಕ್ಕಬಳ್ಳಾಪುರದ 4 ಅವಧಿಯ ಸಂಸದ ಆರ್.ಎಲ್.ಜಾಲಪ್ಪ ಅವರು ಇನ್ನಿಲ್ಲ

3 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ