• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ತಲೈವಿ: ಅಮ್ಮನ ವೈಭವೀಕರಣ! ನಿರ್ದೇಶಕನಿಗಿಲ್ಲ ಕರುಣ!!

cknewsnow desk by cknewsnow desk
September 13, 2021
in EDITORS'S PICKS, ET CINEMA, GUEST COLUMN, STATE
Reading Time: 3 mins read
0
ತಲೈವಿ: ಅಮ್ಮನ ವೈಭವೀಕರಣ! ನಿರ್ದೇಶಕನಿಗಿಲ್ಲ ಕರುಣ!!
1.2k
VIEWS
FacebookTwitterWhatsuplinkedinEmail

ಇದು ಸಿನಿಮಾ ಮಾತ್ರ! ಜಯಲಲಿತಾ ಬಯೋಪಿಕ್‌ ಅಲ್ಲ!!

#MovieReview

by HB Dinesh Bengaluru

  • ತಮಿಳು ಸಿನಿಮಾ: ತಲೈವಿ
  • ನಿರ್ದೇಶನ: ಎ.ಎಲ್.‌ವಿಜಯ್‌
  • ತಾರಾಗಣ: ಅರವಿಂದ ಸ್ವಾಮಿ, ಕಂಗನಾ ರಣಾವತ್‌
  • ರೇಟಿಂಗ್:‌ ★★★

  • ಎಂಜಿಆರ್‌ ಪಾತ್ರದಲ್ಲಿ ಅರವಿಂದ ಸ್ವಾಮಿ.

ನಮ್ಮ ದೇಶದ ರಾಜಕಾರಣದಲ್ಲಿ ಜಯಲಲಿತಾ ಅವರದ್ದು ವರ್ಣರಂಜಿತ ವ್ಯಕ್ತಿತ್ವ ಹಾಗೂ ಉಳಿದೆಲ್ಲ ಮಹಿಳಾ ರಾಜಕಾರಣಿಗಳಿಗಿಂತ ರೋಚಕ, ಸವಾಲಿನದು ಹೌದು. ಕಾರಣವಿಷ್ಟೇ; ಅವರು ಸಿನಿಮಾ ನಟಿಯಾಗಿದ್ದರು. ಜತೆಗೆ ಅಪಾರ ಜನಪ್ರಿಯತೆ ಹೊಂದಿದ್ದರು.

ಮುಂದಿನ ಡಿಸೆಂಬರ್ 5ನೇ ತಾರೀಖು ಬಂದರೆ ಜಯಲಲಿತಾ ನಿಧನರಾಗಿ ಐದು ವರ್ಷವಾಗುತ್ತದೆ. ಅದಕ್ಕೆ ನಾಲ್ಕು ತಿಂಗಳ ಮೊದಲೇ ಬಂದ ʼತಲೈವಿʼ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿತ್ತು. ಆ ನಿರೀಕ್ಷೆಗೆ ತಕ್ಕಂತೆ ಈಗ ಕೋವಿಡ್ ನಡುವೆಯೂ ನೇರವಾಗಿ ಥಿಯೇಟರ್ʼಗಳಲ್ಲಿಯೇ ಈ ಸಿನಿಮಾ ರಿಲೀಸ್ ಆಗಿದೆ.

ಈ ಸಿನಿಮಾ ನೋಡುವ ಬಗ್ಗೆ ನನಗೆ ಬಹಳ ಕುತೂಹಲವಿತ್ತು. ಕರ್ನಾಟಕದ ಜತೆಗೆ ತಮಿಳುನಾಡು ರಾಜಕೀಯವನ್ನು ಬಲ್ಲ ನನಗೆ ಅಲ್ಲಿನ ರಾಜಕೀಯದ ರೀತಿ-ರಿವಾಜುಗಳ ಬಗ್ಗೆ ಅತೀವ ಆಸಕ್ತಿ. ಅದರಲ್ಲೂ ದೇಶದ ರಾಜಕೀಯವೆಲ್ಲ ಒಂದು ದಿಕ್ಕಾದರೆ, ದ್ರಾವಿಡ ರಾಜಕೀಯವೇ ಇನ್ನೊಂದು ದಿಕ್ಕು. ಈ ಅಂಶವೂ ನನ್ನನ್ನು ʼತಲೈವಿʼ ಸಿನಿಮಾದತ್ತ ಕರೆದೊಯ್ದಿತು.

2018 ಅಗಸ್ಟ್ 7ರಂದು ತಮಿಳುನಾಡಿನ ಬಹುದೊಡ್ಡ ನಾಯಕ ಕರುಣಾನಿಧಿ ಅವರು ನಿಧನರಾದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದರು. ನಾನು ಅವರಿಗೆ ಮಾಧ್ಯಮ ಕಾರ್ಯದರ್ಶಿ ಆಗಿದ್ದೆ. ಕರುಣಾನಿಧಿ ಅವರಿಗೆ ಅಂತಿಮ ನಮನ ಸಲ್ಲಿಸಲು ಸ್ವತಃ ಮುಖ್ಯಮಂತ್ರಿಗಳೇ ಚೆನ್ನೈಗೆ ಹೊರಟಾಗ ನಾನೂ ಅವರ ಜತೆಯಲ್ಲೇ ಇದ್ದೆ. ಆದರೆ, ಕರುಣಾನಿಧಿ ಅವರ ಪಾರ್ಥೀವ ಶರೀರ ಇರಿಸಲಾಗಿದ್ದ ರಾಜಾಜಿ ಹಾಲ್ ಬಳಿಗೆ ನೆರೆ ರಾಜ್ಯದ ಮುಖ್ಯಮಂತ್ರಿಯೊಬ್ಬರು ತಲುಪಿದ್ದೇ ಭಾರೀ ಹರಸಾಹಸದಿಂದ ಎಂಬುದು ಉಲ್ಲೇಖನೀಯ. ಅಲ್ಲಿನ ಜನರ ಅಭಿಮಾನ, ಅಕ್ಕರೆ, ಅಗಲಿದ ನಾಯಕನ್ನು ನೋಡಲು ಬರುವ ಧಾವಂತ ನನ್ನನ್ನು ಚಕಿತಗೊಳಿಸಿತ್ತು.

ʼತಲೈವಿʼ ಸಿನಿಮಾ ನೋಡುತ್ತಿದ್ದಂತೆ ಆ ಚಿತ್ರಗಳೆಲ್ಲ ನನ್ನ ಸ್ಮೃತಿಪಟಲದಲ್ಲಿ ಒಮ್ಮೆ ಹಾದುಹೋದವು. ಏಕೆಂದರೆ, ಎಂ.ಜಿ.ರಾಮಚಂದ್ರನ್ (ಎಂಜಿಆರ್) ನಿಧನ, ರಾಜಾಜಿ ಹಾಲ್ ಬಳಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಿದ್ದು, ಅಲ್ಲಿ ನೆರೆದಿದ್ದ ಜನ, ಆ ಜನರ ಭಾವೋದ್ವೇಗ, ಆರ್ತನಾದ, ಉದ್ವೇಗ, ನಟ-ನಟಿಯರ ಶ್ರದ್ಧಾಂಜಲಿ, ಅಂತಿಮ ಯಾತ್ರೆ.. ಇತ್ಯಾದಿಗಳನ್ನು ನೈಜವಾಗಿ ಚಿತ್ರಿಸಿದಂತೆ ಅನಿಸಿತು. ಆ ಇಡೀ ದೃಶ್ಯಗಳನ್ನು ನಿರ್ದೇಶಕರು ರೀ ಕ್ರಿಯೇಟ್ ಮಾಡಿದ್ದಾರೆ. ಇದನ್ನು ಕಣ್ತುಂಬಿಕೊಳ್ಳುವುದೇ ಒಂದು ವಿಶೇಷ ಅನುಭೂತಿ.

ಇನ್ನು, ಇಡೀ ಸಿನಿಮಾ ತಮಿಳು ಜನರ, ಅದರಲ್ಲೂ ಜಯಲಲಿತಾ ಅವರನ್ನು ಅಭಿಮಾನಿಸುವ, ಅವರನ್ನು ʼಅಮ್ಮʼ ಎಂದು ಕರೆಯುವ, ಜತೆಗೆ, ಅವರಿಗೆ ಎಣೆ ಇಲ್ಲದ ಭಕ್ತಿ ತೋರಿಸುತ್ತಿದ್ದ ಎಐಎಡಿಎಂಕೆ ನಾಯಕರ ಭಾವನೆಗಳನ್ನು ಸಮರ್ಥವಾಗಿ ಕ್ಯಾರಿ ಮಾಡಿದೆ.

ʼತಲೈವಿʼ ಸಿನಿಮಾ ಚಿತ್ರಗಳ ಸ್ಲೈಡ್‌ ಶೋ

ಮುಖ್ಯವಾಗಿ ಜಯಲಿಲತಾ ಪಾತ್ರ ಅನೇಕ ಮಜಲು, ಶೇಡ್ʼಗಳಲ್ಲಿ ಪ್ರೇಕ್ಷಕನನ್ನು ಸೀಟಿಗೆ ಕಟ್ಟಿಹಾಕಿಬಿಡುತ್ತದೆ. ಬಾಲ್ಯದಲ್ಲಿ, ಯೌವ್ವನದಲ್ಲಿ, ಆ ನಂತರ ನಟಿಯಾಗಿ, ಕೊನೆಗೆ ಎಂಜಿಆರ್ ಹಿರೋಯಿನ್‌ ಆಗಿ, ಅವರ ನೆರಳಾಗಿ, ಆಪ್ತೆಯಾಗಿ, ಫೈನಲಿ ಎಐಎಡಿಎಂಕೆ ಸಾಮ್ರಾಜ್ಞಿಯಾಗಿ ಮೊತ್ತ ಮೊದಲ ಸಲ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡುವ ದೃಶ್ಯಕ್ಕೇ ಈ ಸಿನಿಮಾ ಮುಗಿದುಹೋಗುತ್ತದೆ. ಅದುವರೆಗೂ ಮುಂದೇನಾಗಬಹುದು? ನಂತರ ಯಾವ ಸೀನ್? ಎಂದು ಕುರ್ಚಿಗೆ ಗಮ್ ಹಾಕಿಕೊಂಡು ಕೂತಂತಿದ್ದವರಿಗೆ, “ಅರೆ.. ಛೇ! ಮುಗೀತಾ” ಎನಿಸಿಬಿಡುತ್ತದೆ. ಆ ಮಟ್ಟಿಗೆ ಚಿತ್ರಕಥೆ ಬಿಗಿಯಾಗಿದೆ. ಕಥೆಯ ಬಗ್ಗೆ ಕೆಲ ತಕರಾರುಗಳಿವೆ, ಅವನ್ನು ಮುಂದೆ ಹೇಳುತ್ತೇನೆ.

ಉಳಿದಂತೆ; ತಮಿಳುನಾಡು ರಾಜಕೀಯದ ಮಗ್ಗುಲಗಳನ್ನು ತೋರಿಸುವುದರ ಜತೆಗೆ, ತಮಿಳು ಚಿತ್ರರಂಗದ ಸಾಂಸ್ಕೃತಿಕ ಮತ್ತು ರಾಜಕೀಯದ ನಂಟನ್ನು ಈ ಸಿನಿಮಾ ಸಮರ್ಥವಾಗಿ ಅಭಿವ್ಯಕ್ತಿಗೊಳಿಸುತ್ತದೆ. ಒಂದೊಂದು ಎಳೆಯನ್ನೂ ತರುವ ಪ್ರಯತ್ನ ಮಾಡಲಾಗಿದೆ.

ತಾರಾಗಣಕ್ಕೆ ಬಂದರೆ, ಜಯಲಿಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ನಟನೆ ಇಷ್ಟವಾಗುತ್ತದೆ. ಪಾತ್ರದಲ್ಲಿ ಹದವಾಗಿ ಬೆರೆತಿರುವ ಬಗೆ, ಕ್ಷಣಕ್ಕೊಂದು ಭಾವನೆ ಅಭಿವ್ಯಕ್ತಗೊಳಿಸುವ ಪರಿ, ಕೆಲವೊಮ್ಮೆ ನಿಜವಾಗಿಯೂ ಜಯಲಲಿತಾ ಅವರೇ ಪರದೆಯ ಬಂದುಬಿಟ್ಟರಾ ಅನಿಸುವಷ್ಟರ ಮಟ್ಟಿಗೆ ಅವರು ನಟಿಸಿದ್ದಾರೆ.

ವಿಷಯ ಅದಲ್ಲ. ಹೆಸರಿಗೆ ಇದು ʼತಲೈವಿʼ ಸಿನಿಮಾ ಆದರೂ ಮಿಂಚಿರುವುದು ಮಾತ್ರ ʼತಲೈವಾʼ. ಎಂಜಿಆರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಒಂದು ಕಾಲದ ಲವರ್ ಬಾಯ್ ಅರವಿಂದ ಸ್ವಾಮಿ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಕಂಗನಾರನ್ನು ಸೈಡು ಹೊಡೆದುಬಿಟ್ಟಿದ್ದಾರೆ. ʼರೋಜಾʼ, ʼಬಾಂಬೆʼ ಚಿತ್ರಗಳಷ್ಟೇ ಅಲ್ಲದೆ, ಕೆಲ ದಿನಗಳ ಹಿಂದೆ ಬಂದ ʼನಾನ್ ಒರುವನ್ʼ ಸಿನಿಮಾದಲ್ಲಿ ವಿಲನ್ʼಗಿರಿ ಮಾಡಿದ್ದ ಅವರು ಇವರೇನಾ ಎಂದು ಬೆಕ್ಕಸ ಬೆರಗು ಮೂಡಿಸುವಂತೆ ಅಭಿನಯಿಸಿದ್ದಾರೆ. ಹಾಗೆ ನೋಡಿದರೆ, ಇದಕ್ಕೆ ʼತಲೈವಾʼ ಎಂದಿದ್ದರೆ ಸರಿ ಹೋಗುತ್ತಿತ್ತು.

ಎಂಜಿಆರ್ ಅವರ ನಟನೆ, ಪರ್ಸನಾಲಿಟಿ, ಮಾತಿನ ಲಯ, ಆಂಗಿಕತೆ, ರಾಜಕೀಯ ಕುಶಲತೆ, ಜಯಲಲಿತಾ ಜತೆಗಿನ ಪಯಣ, ಪ್ರಣಯ.. ಇತ್ಯಾದಿ ದೃಶ್ಯಗಳು ಬಂದಾಗ ಪ್ರತಿ ಫ್ರೇಮಿನಲ್ಲೂ ಅರವಿಂದ ಸ್ವಾಮಿಯೇ ಮುಂದೆ. ಕಥೆಯಲ್ಲಿ ಡಾಮಿನೇಟ್‌ ಮಾಡಿದರೂ ಅಭಿನಯದಲ್ಲಿ ಕಂಗನಾ ಹಿಂದುಳಿದುಬಿಡುತ್ತಾರೆ.

ಉಳಿದ ಪಾತ್ರಗಳ ಆಯ್ಕೆಯಲ್ಲಿ ಬಹಳಷ್ಟು ಜಾಣ್ಮೆ ಮೆರೆದಿರುವ ನಿರ್ದೇಶಕ ಕೆ.ಎಲ್.ವಿಜಯ್, ಕಣ್ಣಿಗೆ ರಾಚುವಂಥ ಕೆಲ ಎಡವಟ್ಟುಗಳನ್ನು ಮಾಡಿದ್ದಾರೆ. ಜಯಾ ವಿರೋಧಿ ಪಾತ್ರಗಳಿಗೆ ಸಮರ್ಥ ನಟರನ್ನೇ ಆಯ್ಕೆ ಮಾಡಿದ್ದರೂ ಆ ಪಾತ್ರಗಳಿಗೆ ʼಉದ್ದೇಶಪೂರ್ವಕ ಅನ್ಯಾಯʼ ಎಸಗಿದ್ದಾರೆ. ಉದಾಹರಣೆಗೆ; ಕರುಣಾನಿಧಿ ಪಾತ್ರಕ್ಕೆ ಹಿರಿಯ ನಟ ನಾಜಿರ್ ಅದ್ಭುತವಾಗಿ ಸೂಟ್ ಆಗಿದ್ದಾರೆ. ಆದರೆ, ಅವರಿಂದ ಸಂಭಾಷಣೆ ಹೇಳಿಸಿದ ರೀತಿ ಬೇಸರ ತರಿಸುತ್ತದೆ. ಆ ಪಾತ್ರಕ್ಕೆ ʼಪೂರ್ವಗ್ರಹಪೀಡಿತʼ ವ್ಯಂಗ್ಯವನ್ನು ತುರುಕಲಾಗಿದೆ. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಪಾತ್ರಗಳಿಗೂ ಅದೇ ಆಗಿದೆ. ಇಂದಿರಾ ಗಾಂಧಿ ಸಮಕ್ಷಮದಲ್ಲಿ ರಾಜ್ಯಸಭೆಯಲ್ಲಿ ಜಯಲಲಿತಾ ಭಾಷಣ ಮಾಡುವ ದೃಶ್ಯದಲ್ಲೂ ಇದೇ ತಪ್ಪನ್ನೇ ಎಸಗಲಾಗಿದೆ. ʼಅಮ್ಮʼ ಅವರನ್ನು ವೈಭವೀಕರಿಸುವ ಭರದಲ್ಲಿ ಉಳಿದ ಪಾತ್ರಗಳಿಗೆ ಚ್ಯುತಿ ತರಲಾಗಿದೆ. ಬೇಕೆಂದೇ ಮಾಡಿದಂತಿದೆ ಇದೆಲ್ಲ ಎಂದು ಯಾರಿಗಾದರೂ ಅನಿಸದೆ ಇರದು. ಈ ಬಗ್ಗೆ ನಿರ್ದೇಶಕರು ಎಚ್ಚರ ವಹಿಸಬೇಕಿತ್ತು.

ಜಯಾ ಅವರ ತಾಯಿ ಸಂಧ್ಯಾ ಪಾತ್ರದಲ್ಲಿ ಭಾಗ್ಯಶ್ರೀ, ಎಂಜಿಆರ್‌ ಪತ್ನಿ ಜಾನಕಿ ರಾಮಚಂದ್ರನ್‌ ಪಾತ್ರದಲ್ಲಿ ಮಧುಬಾಲಾ, ಗೆಳತಿ ವಿ.ಕೆ.ಶಶಿಕಲಾ ಪಾತ್ರದಲ್ಲಿ ಪೂರ್ಣ, ಇಂದಿರಾ ಗಾಂಧಿ ಪಾತ್ರದಲ್ಲಿ ಪ್ಲೋರಾ ಜಾಕೋಬ್‌ ಮುಂತಾದವರು ನಟಿಸಿದ್ದಾರಾದರೂ ಅಮ್ಮನ ವೈಭವೀಕರಣದ ಸುಳಿಯಲ್ಲಿ ಇವರಿಗೆ ಸ್ಕೋಪ್‌ ಸಿಕ್ಕಿಲ್ಲ.

ಉಳಿದಂತೆ, ನಾನು ತಾಂತ್ರಿಕ ಅಂಶಗಳ ಬಗ್ಗೆ ಬರೆಯಲು ಹೋಗಿಲ್ಲ. ಸಂಗೀತಾ, ಕ್ಯಾಮೆರಾ ಇತ್ಯಾದಿಗಳು ಎಲ್ಲೂ ಸೋತಂತೆ ಅನಿಸಲಿಲ್ಲ.

ಕೊನೆಗೆ; ʼತಲೈವಿʼ ಒಂದು ಒಳ್ಳೆಯ ಪ್ರಯತ್ನವೇನೋ ಸರಿ. ಇದರಲ್ಲಿ ಎರಡು ಮಾತಿಲ್ಲ. ಆದರೆ, ಇದನ್ನು ಜಯಲಲಿತಾ ಅವರ ಬಯೋಪಿಕ್ ಎಂದು ಹೇಳಲು ಆಗುವುದೇ ಇಲ್ಲ. ಕೇವಲ ಇದೊಂದು ಸಿನಿಮಾ, ಅಷ್ಟೇ. ಏಕೆಂದರೆ, ಜಯಾ ಅವರ ಸಕಾರಾತ್ಮಕ ಅಂಶಗಳನ್ನಷ್ಟೇ ಹೆಕ್ಕಿ ತೆಗೆದು ಕಥೆ ಪೋಣಿಸಲಾಗಿದೆ. ಪ್ರತಿದೃಶ್ಯಕ್ಕೂ ಸಿನಿಮ್ಯಾಟಿಕ್ ಫಿಕ್ಷನ್ ಟಚ್ ಕೊಟ್ಟು, ಅಮ್ಮನನ್ನು ಆಕಾಶದೆತ್ತರದಲ್ಲಿ ನಿಲ್ಲಿಸುವ ಪ್ರಯತ್ನ ಅನಗತ್ಯ ಎಳೆತದಂತಿದೆ. ರಂಜಿನೀಯ ಅಂಶಗಳ ನಡುವೆ ಸತ್ಯಗಳನ್ನು ಮರೆಮಾಚಲಾಗಿದೆ.

ಈ ಹಿಂದೆ ಕೆಲ ಬಯೋಪಿಕ್ʼಗಳನ್ನು ನೋಡಿದ್ದ ನನಗೆ ʼತಲೈವಿʼಯನ್ನು ಒಮ್ಮೆ ನೋಡಬೇಕೆನಿಸಿತ್ತು. ಈಗಲೂ ಅನಿಸುತ್ತಿದೆ, ಒಮ್ಮೆಯಷ್ಟೇ ನೋಡಿದರೆ ಸಾಕೆಂದು.


ಎಚ್.ಬಿ.ದಿನೇಶ್‌

  • ಕರ್ನಾಟಕದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿಶ್ರಾಂತ ಹಿರಿಯ ಅಧಿಕಾರಿ. ಬರವಣಿಗೆ ಮಾತ್ರವಲ್ಲದೆ ರಾಜಕೀಯ, ಕಲೆ, ಸಾಹಿತ್ಯ ಸಿನಿಮಾ, ಚರ್ಚೆ & ಸಂವಾದ ಇತ್ಯಾದಿಗಳಲ್ಲಿ ಆಸಕ್ತರು. ಸರಕಾರಿ ಸೇವೆಗೆ ಸೇರುವ ಮುನ್ನ ಪತ್ರಕರ್ತರೂ ಆಗಿದ್ದವರು.

Tags: aiadmkaravinda swamyJ Jayalalithaajayalalithaa biopickangana ranautM karunanidhimg Ramachandran dmkMovie Reviewtamailnadutamil cinemaThalaivii
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಆರೋಗ್ಯ ಕವಚ ಸೇವೆಗೆ 120 ಆಂಬ್ಯುಲೆನ್ಸ್ ಸೇರ್ಪಡೆ

ಆರೋಗ್ಯ ಕವಚ ಸೇವೆಗೆ 120 ಆಂಬ್ಯುಲೆನ್ಸ್ ಸೇರ್ಪಡೆ

Leave a Reply Cancel reply

Your email address will not be published. Required fields are marked *

Recommended

ಲಾಕ್‌ಡೌನ್‌ ರೀತಿಯಲ್ಲೇ ವೀಕೆಂಡ್‌ ಕರ್ಫ್ಯೂ; ಅನವಶ್ಯಕವಾಗಿ ಹೊರಗಿನಿಂದ  ಬೆಂಗಳೂರಿಗೆ ಬರುವವರನ್ನು ನಿರ್ಬಂಧಿಸಲು  ಪೊಲೀಸರಿಗೆ ಸೂಚನೆ ಕೊಟ್ಟ ಬೊಮ್ಮಾಯಿ

ಪಕ್ಷ ನಿಷ್ಠೆ, ತಾಳ್ಮೆ & ಜ್ಞಾನಕ್ಕೆ ಮನ್ನಣೆ; ಬಸವರಾಜ ಬೊಮ್ಮಾಯಿ ಹೊಸ ಸಿಎಂ

4 years ago
ಚಿಕ್ಕಬಳ್ಳಾಪುರದ ಜಾನಪದಕ್ಕೆ ಜಗತ್ಮನ್ನಣೆ ತಂದುಕೊಟ್ಟ ಕೀಲುಕುದುರೆ ಖ್ಯಾತಿಯ ಗೊಂಬೆ ನಾರಾಯಣಪ್ಪಅವರಿಗೆ ಜಾನಪದ ಅಕಾಡೆಮಿ ಗರಿ

ಚಿಕ್ಕಬಳ್ಳಾಪುರದ ಜಾನಪದಕ್ಕೆ ಜಗತ್ಮನ್ನಣೆ ತಂದುಕೊಟ್ಟ ಕೀಲುಕುದುರೆ ಖ್ಯಾತಿಯ ಗೊಂಬೆ ನಾರಾಯಣಪ್ಪಅವರಿಗೆ ಜಾನಪದ ಅಕಾಡೆಮಿ ಗರಿ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ