• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಬರದಿಂದ ನಲುಗಿದ್ದ ಬಾಗೇಪಲ್ಲಿ ಜನರಿಗೆ ಅನ್ನ ಕೊಡಿಸಿದ್ದರು ಆಸ್ಕರ್

cknewsnow desk by cknewsnow desk
September 14, 2021
in STATE
Reading Time: 2 mins read
0
ಬರದಿಂದ ನಲುಗಿದ್ದ ಬಾಗೇಪಲ್ಲಿ ಜನರಿಗೆ ಅನ್ನ ಕೊಡಿಸಿದ್ದರು ಆಸ್ಕರ್
1.2k
VIEWS
FacebookTwitterWhatsuplinkedinEmail

ಬಾಗೇಪಲ್ಲಿ ಭಾಗ್ಯದ ಬಾಗಿಲು ತೆರೆದ ಆಸ್ಕರ್‌ ಫರ್ನಾಂಡೀಸ್

by Ra Na Gopala Reddy Bagepalli

ಬಾಗೇಪಲ್ಲಿ: ಇಂದು (ಸೆಪ್ಟೆಂಬರ್‌ 13) ನಿಧನರಾದ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಆಸ್ಕರ್‌ ಫರ್ನಾಂಡೀಸ್ ಅವರಿಗೆ ಬಾಗೇಪಲ್ಲಿ ಜತೆ ಭಾವನಾತ್ಮಕ ನಂಟಿತ್ತು.

ಆಸ್ಕರ್‌ ಅವರು ನಿಧನರಾದ ಸುದ್ದಿ ಗೊತ್ತಾಗುತ್ತಿದ್ದಂತೆ ಇಲ್ಲಿನ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರಲ್ಲದೆ, ಕಷ್ಟಕಾಲದಲ್ಲಿ ಬಾಗೇಪಲ್ಲಿಗೆ ಆಪದ್ಭಾಂದವನಂತೆ ಬಂದ ಅವರನ್ನು ನೆನಪು ಮಾಡಿಕೊಂಡು ಕಂಬಿನಿ ಮಿಡಿದಿದ್ದಾರೆ. 

1980ರಲ್ಲಿ ಬಾಗೇಪಲ್ಲಿ ಕ್ಷೇತ್ರವು ತೀವ್ರ ಬರಕ್ಕೆ ತುತ್ತಾಗಿತ್ತು. ಈ ಕ್ಷೇತ್ರ ಮಾತ್ರವಲ್ಲ, ಆಗಿನ ಅವಿಭಜಿತ ಕೋಲಾರ ಜಿಲ್ಲೆಯ ಹನ್ನೊಂದು ತಾಲೂಕುಗಳಲ್ಲಿಯೂ ಬರ ಉಗ್ರ ತಾಂಡವವಾಡುತ್ತಿತ್ತು. ಪಟ್ಟಣದಲ್ಲಿ ವಾಸ ಮಾಡುವ ಅನೇಕರೂ ಈಗಲೂ ಆ ಬರದ ಕರಾಳತೆಯನ್ನು ನೆನಪು ಮಾಡಿಕೊಳ್ಳುತ್ತಾರೆ.

ಆ ಬರದ ಭೀಕರ ಚಿತ್ರಣ ಹೇಗಿತ್ತೆಂದರೆ, ಮಳೆ ಇಲ್ಲದೇ ಭೂಮಿ ಬಾಯಿಬಿಟ್ಟಿತ್ತು. ಕೆರೆಕಟ್ಟೆಗಳು ಒಣಗಿ ಹೋಗಿದ್ದವು. ಜಾನುವಾರುಗಳು ಮೇವಿಲ್ಲದೆ ಎಲ್ಲೆಂದರಲ್ಲಿ ಅಸುನೀಗುತ್ತಿದ್ದವು. ಜನರು ಹನಿ ನೀರಿಗೂ ತತ್ವಾರ ಪಡುವಂಥ ದುಸ್ಥಿತಿ. ಇಂಥ ವಿಷಮ ಪರಿಸ್ಥಿತಿಯಲ್ಲಿ ಬಾಗೇಪಲ್ಲಿ ಕ್ಷೇತ್ರಕ್ಕೆ ಮಿಡಿದವರು ಅಂದಿನ ಯುವ ಸಂಸದ ಆಸ್ಕರ್‌ ಫರ್ನಾಂಡೀಸ್‌ ಅವರು.

ಸ್ಥಳೀಯ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ, ಪುರಸಭೆ ಮಾಜಿ ಅಧ್ಯಕ್ಷರೂ ಆಗಿದ್ದ ಜಿ.ವಿ.ಬಾಬುರೆಡ್ಡಿ ಅವರು ಆ ದಿನಗಳನ್ನು ನೆನಪು ಮಾಡಿಕೊಂಡು ಸಿಕೆನ್ಯೂಸ್‌ ನೌ ಜತೆ ಹಂಚಿಕೊಂಡಿದ್ದು ಹೀಗೆ.

ನಮ್ಮ ತಾಲೂಕಿನ 60 ವರ್ಷ ವಯಸ್ಸಿನ ಆಸುಪಾಸಿನವರೆಲ್ಲ 1980ರ ಭೀಕರ ಬರಗಾಲವನ್ನು ಅನುಭವಿಸಿದ್ದಾರೆ. ಕುಡಿಯಲು ನೀರೂ ಸಿಗುತ್ತಿರಲಿಲ್ಲ. ಗಂಜಿಯೇ ಗತಿಯಾಗಿತ್ತು. ಈ ಕ್ಷಾಮ ನಮ್ಮೆಲ್ಲರ ಬದುಕನ್ನು ನರಕಸದೃಶ ಮಾಡಿತ್ತು. ಆ ದಿನಗಳನ್ನು ನೆನಪು ಮಾಡಿಕೊಂಡರೆ ಈಗಲೂ ಮೈ ಝುಂ ಎನ್ನುತ್ತದೆ.

ಇಂಥ ಕಷ್ಟದ ಸಂದರ್ಭದಲ್ಲಿ ನಮ್ಮ ಜನರ ನೆರವಿಗೆ ಬಂದವರು ಆಸ್ಕರ್‌ ಫರ್ನಾಂಡೀಸ್‌. ಅವರ ಜತೆ ನನಗೆ ನಿಕಟ ಪರಿಚಯ, ಆತ್ಮೀಯತೆ ಇತ್ತು. ನಾನು ಕ್ಷೇತ್ರದ ಬರದ ಪರಿಸ್ಥಿತಿಯನ್ನು ಅವರಿಗೆ ವಿವರಿಸಿದೆ. ಬೆಂಗಳೂರಿಗೆ ತೆರಳಿ ಭೇಟಿ ಎಲ್ಲ ಮಾಹಿತಿಯನ್ನೂ ನೀಡಿ ನೆರವಿಗೆ ಬನ್ನಿ ಎಂದು ಮನವಿ ಮಾಡಿಕೊಂಡೆ.

ಆಸ್ಕರ್‌ ಅವರು ಕೂಡಲೇ ಸ್ಪಂದಿಸಿದರು. ಆಗ ಅವರು ಉಡುಪಿ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. ನನ್ನ ಮನವಿಗೆ ಓಗೊಟ್ಟು ತಕ್ಷಣವೇ ಬಾಗೇಪಲ್ಲಿಗೆ ಬಂದರು. ಆಗ ಮುನಿರಾಜು ಅವರು ಕ್ಷೇತ್ರದ ಶಾಸಕರಾಗಿದ್ದರು. ಬಂದವರೇ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು. ತಕ್ಷಣವೇ ತಾಲೂಕಿನಲ್ಲಿ ಎಂಟು ಗಂಜಿ ಕೇಂದ್ರ ಮತ್ತು ಎಂಟು ಗೋ ಶಾಲೆಗಳನ್ನೂ ತೆರೆಯಲಾಯಿತು. ಅಷ್ಟೇ ಅಲ್ಲದೆ, ರಾಜ್ಯ ಸರಕಾರದಿಂದ ಅಗತ್ಯ ನೆರವನ್ನೂ ಕೊಡಿಸಿದರು. ಬರ ನಿರ್ವಹಣೆಗೆ ಸಾಕಷ್ಟು ಸಹಾಯವೂ ಹರಿದು ಬಂತು ಎಂದು ಹೇಳುತ್ತಾರೆ ಬಾಬುರೆಡ್ಡಿ ಅವರು.

ಉಡುಪಿಯಿಂದ ಮೊದಲ ಸಲ ಗೆದ್ದು ಲೋಕಸಭೆಗೆ ಹೋಗಿದ್ದ ಆಸ್ಕರ್‌ ಅವರು ಎಲ್ಲೋ ಆಂಧ್ರದ ಗಡಿಯಲ್ಲಿದ್ದ ಬಾಗೇಪಲ್ಲಿ ಜನರಿಗಾಗಿ ಮಿಡಿದಿದ್ದರು. ಅವರ ನೆರವು-ಕಾಳಜಿಯನ್ನು ನೆನಪು ಮಾಡಿಕೊಂಡರೆ ಈಗಲೂ ನನ್ನ ಹೃದಯ ಉಕ್ಕಿಬರುತ್ತದೆ ಎಂದು ಅವರು ತಮ್ಮ ಮತ್ತು ಆಸ್ಕರ್‌ ಫರ್ನಾಂಡೀಸ್‌ ನಡುವಿನ ಒಡನಾಟವನ್ನು ಸ್ಮರಿಸಿಕೊಂಡರು.

ಪಲಿಮಾರು ಶ್ರೀಗಳ ವಾಸ್ತವ್ಯ

ಕೇವಲ ಸರಕಾರದ ನೆರವಷ್ಟೇ ಕೊಡಿಸಿ ಆಸ್ಕರ್‌ ಫರ್ನಾಂಡೀಸ್‌ ಸುಮ್ಮನಾಗಲಿಲ್ಲ. ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪಲಿಮಾರು ಮಠದ ಸ್ವಾಮೀಜಿಗಳನ್ನು ಭೇಟಿಯಾಗಿ ಬಾಗೇಪಲ್ಲಿಯ ಪರಿಸ್ಥಿತಿಯನ್ನು ವಿವರಿಸಿ ನೆರವಿಗೆ ಬನ್ನಿ ಎಂದು ಕೋರಿದ್ದರು.

ಕೂಡಲೇ ಆಸ್ಕರ್‌ ಅವರ ಮನವಿಯನ್ನು ಮನ್ನಿಸಿದ ಸ್ವಾಮೀಜಿ ಅವರು ಮೂರೇ ದಿನದಲ್ಲಿ ಬಾಗೇಪಲ್ಲಿಗೆ ಆಗಮಿಸಿದರು. ಸುಮಾರು ಆರು ತಿಂಗಳ ಕಾಲ ಗಡಿದಂ ದೇವಾಲಯದ ಛತ್ರದಲ್ಲಿ ವಾಸ್ತವ್ಯ ಹೂಡಿದ ಸ್ವಾಮೀಜಿ ಅವರು, ಬರ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಂಡರು. ಪೆನಮಲೆಯಲ್ಲಿ ಸ್ವಾಮೀಜಿ ಅವರು ಶಾಲೆ ಮತ್ತು ಗೋ ಶಾಲೆಯನ್ನು ಆರಂಭ ಮಾಡಿದ್ದರು. ಜತೆಗೆ; ಬಾಲರೆಡ್ಡಿಪಲ್ಲಿ, ಪೆನಮಲೆ, ಪೆನಮಲೆ ಕಣಿವೆ, ಗಂಟ್ಲಮಲ್ಲಮ್ಮನ ಕಣಿವೆ, ಯಲ್ಲಂಪಲ್ಲಿ ಅರಣ್ಯ ಪ್ರದೇಶದಲ್ಲಿ ಸ್ವಾಮೀಜಿ ಅವರು ಬರ ಪರಿಹಾರ ಕಾರ್ಯಗಳನ್ನು ಹಮ್ಮಿಕೊಂಡಿದ್ದರು. ಗಂಟ್ಲಮಲ್ಲಮ್ಮನ ಕಣಿವೆ ಹಾಗೂ ಯಲ್ಲಂಪಲ್ಲಿ ಅರಣ್ಯ ಪ್ರದೇಶದಲ್ಲೂ ಗೋ ಶಾಲೆಗಳನ್ನು ಶ್ರೀಗಳು ತೆರೆದಿದ್ದರು. ಸತತ ಆರು ತಿಂಗಳ ಕಾಲ ಜಾನುವಾರುಗಳಿಗೆ ಮೇವು, ಜನರಿಗೆ ಆಹಾರದ ವ್ಯವಸ್ಥೆ ಮಾಡಿದ್ದರು ಸ್ವಾಮೀಜಿ .

ರಾಜೀವ್‌ ಗಾಂಧಿ ಅವರೂ ಬಂದಿದ್ದರು

1986 ಇರಬಹುದು. ಈ ಅವಧಿಯಲ್ಲೂ ಬಾಗೇಪಲ್ಲಿ ಕ್ಷೇತ್ರದಲ್ಲಿ ಮತ್ತೊಮ್ಮೆ ಭೀಕರ ಬರಗಾಲ ಬಂದಿತ್ತು. ಆಗಲೂ ಬಾಬುರೆಡ್ಡಿ ಅವರು ಇದೇ ಆಸ್ಕರ್‌ ಫರ್ನಾಂಡೀಸ್‌ ಅವರ ನೆರವು ಕೋರಿದ್ದರು. ಆಗ ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿ ನೆರವು ಕೋರಿದ ಆಸ್ಕರ್‌, ಸ್ವತಃ ಪ್ರಧಾನಿಯನ್ನೇ ಬಾಗೇಪಲ್ಲಿಗೆ ಕರೆತಂದಿದ್ದರು. ಯಾವಾಗ ರಾಜೀವ್‌ ಭೇಟಿ ನೀಡಿದರೋ ರಾಜ್ಯ ಸರಕಾರ ಬಾಗೇಪಲ್ಲಿಯತ್ತ ನೋಡಿತು. ಆಗ ರಾಮಕೃಷ್ಣ ಹೆಗಡೆ ನೇತೃತ್ವದ ಅವರ ಜನತಾ ಸರಕಾರ ಇತ್ತು. ರಾಜೀವ್‌ ಮತ್ತು ಆಸ್ಕರ್‌ ಆಪ್ತರಾಗಿದ್ದ ಕಾರಣಕ್ಕೆ ಇದೆಲ್ಲ ಸಾಧ್ಯವಾಯಿತು.

  • Photo courtesy: Rahul Gandhi @RahulGandhi

ಬಳಿಕ, ನೋಡ ನೋಡುತ್ತಿದ್ದಂತೆ ಬಾಗೇಪಲ್ಲಿ ಚಿತ್ರಣವೇ ಬದಲಾಯಿತು. ಕೆರೆ ಕಟ್ಟೆಗಳು ನಿರ್ಮಾಣವಾದವು. ಅದೇ ಮೊದಲಿಗೆ ಜನ ಬೋರ್‌ವೆಲ್‌ಗಳನ್ನು ನೋಡಿದರು. ಎಲ್ಲ ಹಳ್ಳಿಗಳಲ್ಲಿ ಬೋರ್‌ವೆಲ್‌ ತೋಡಿದ ಮೇಲೆ ಜನ ಜಾನುವಾರುಗಳ ಜಲದಾಹ ತೀರಿತು. ಹೀಗೆ, ಆಸ್ಕರ್‌ ಫರ್ನಾಂಡೀಸ್‌ ಅವರು ಬಾಗೇಪಲ್ಲಿ ಜನರಿಗೆ ನೆರವಾಗಿದ್ದಾರೆ. ಬರದಿಂದ ತತ್ತರಿಸಿದ್ದ ಬಾಗೇಪಲ್ಲಿ ಜನರಿಗೆ ಅನ್ನ ಸಿಗವಂತೆ ಮಾಡಿದ್ದರು ಆಸ್ಕರ್‌ ಫರ್ನಾಂಡೀಸ್.

Tags: bagepallichikkaballapuradroughtkolarOscar Fernandespalimaru matharajiv gandhiramakrishna hegde
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಬಾಕಿ ಶುಲ್ಕದ ನೆಪ, ಟೀಸಿ ಸಿಗದೇ ಮಕ್ಕಳ ಸ್ಥಿತಿ ಅಯ್ಯೋ ಪಾಪ!

ಬಾಕಿ ಶುಲ್ಕದ ನೆಪ, ಟೀಸಿ ಸಿಗದೇ ಮಕ್ಕಳ ಸ್ಥಿತಿ ಅಯ್ಯೋ ಪಾಪ!

Leave a Reply Cancel reply

Your email address will not be published. Required fields are marked *

Recommended

ಸ್ಥಾವರಕ್ಕಳಿವುಂಟು, ಜಂಗಮಕ್ಕಲ್ಲ ಎಂಬ ಬಸವವಾಣಿಗೆ ನಿದರ್ಶನ; ಸತ್ಯದ ಜೊತೆಯಲ್ಲೇ ಬದುಕಿ ರಾಮ ಸ್ಮರಣೆಯಲ್ಲೇ ಅಂತಿಮ ಕ್ಷಣವನ್ನೂ ಮುಗಿಸಿದ ಮಹಾತ್ಮರು ಗೋಡ್ಸೆ ಗುಂಡಿಗೆ ಬಲಿಯಾಗಿ 73 ವರ್ಷ

ಸ್ಥಾವರಕ್ಕಳಿವುಂಟು, ಜಂಗಮಕ್ಕಲ್ಲ ಎಂಬ ಬಸವವಾಣಿಗೆ ನಿದರ್ಶನ; ಸತ್ಯದ ಜೊತೆಯಲ್ಲೇ ಬದುಕಿ ರಾಮ ಸ್ಮರಣೆಯಲ್ಲೇ ಅಂತಿಮ ಕ್ಷಣವನ್ನೂ ಮುಗಿಸಿದ ಮಹಾತ್ಮರು ಗೋಡ್ಸೆ ಗುಂಡಿಗೆ ಬಲಿಯಾಗಿ 73 ವರ್ಷ

4 years ago
ಗುಡುಗಿದ ಕುಮಾರಸ್ವಾಮಿ; ವಿದ್ಯುತ್‌ ದರ ಏರಿಕೆ ಇಲ್ಲ ಎಂದ ಸರಕಾರ

ಗುಡುಗಿದ ಕುಮಾರಸ್ವಾಮಿ; ವಿದ್ಯುತ್‌ ದರ ಏರಿಕೆ ಇಲ್ಲ ಎಂದ ಸರಕಾರ

3 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ