• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಚಿಕ್ಕಬಳ್ಳಾಪುರ ಕಸಾಪ ಚುನಾವಣೆಯಲ್ಲಿ ಕೋಡಿ ರಂಗಪ್ಪ ಗೆಲುವಿಗೆ ಕಾರಣಗಳು

cknewsnow desk by cknewsnow desk
November 22, 2021
in CHIKKABALLAPUR, STATE
Reading Time: 1 min read
1
ಗಡಿ ಜಿಲ್ಲೆ ಚಿಕ್ಕಬಳ್ಳಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಚುನಾವಣೆಗೆ ಹೊಸ ತಿರುವು; ಕೋಡಿ ರಂಗಪ್ಪ ಆಯ್ಕೆಗೆ ಸಹಮತ, ಒಮ್ಮತ ಆದರೆ ಸರಿ ಎಂದ ಪ್ರೊಫೆಸರ್‌
1.3k
VIEWS
FacebookTwitterWhatsuplinkedinEmail

ಗಡಿ ಜಿಲ್ಲೆಯಲ್ಲಿ ಕನ್ನಡ ಪರಿಚಾರಿಕೆಯ ಹೊಸ ಮನ್ವಂತರ ಆರಂಭ

by M Krishnappa Chikkaballapura

ಚಿಕ್ಕಬಳ್ಳಾಪುರ: ಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಪ್ರಾಧ್ಯಾಪಕ ಹಾಗೂ ಶಿಕ್ಷಣ ತಜ್ಞ ಕೋಡಿ ರಂಗಪ್ಪ ಅವರು ಆಭೂತಪೂರ್ವ ಗೆಲುವು ಸಾಧಿಸಿರುವುದು ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಸಂತಸ ಉಂಟು ಮಾಡಿದೆ.

ಆದರೆ, ಕನ್ನಡ ತೇರನ್ನು ಎಳೆಯಲು ಮುಂದಾಳುವನ್ನು ಆಯ್ಕೆ ಮಾಡುವ ಈ ಪವಿತ್ರ ಚುನಾವಣೆಯಲ್ಲಿ ಕಾಂಚಾಣ, ಆಮಿಷ, ಜಾತಿ ಇತ್ಯಾದಿಗಳು ಹುಚ್ಚೆದ್ದು ಕುಣಿದಿವೆ. ಈ ಕಾರಣಕ್ಕೆ ಈ ಚುನಾವಣೆಯ ಪಾವಿತ್ರ್ಯತೆಯೇ ಹಾಳಾಗಿದ್ದು, ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸಮಾಧಾನಕರ ಸಂಗತಿ ಎಂದರೆ ಕೋಡಿ ರಂಗಪ್ಪ ಗೆಲುವು ಈ ಬೇಸರಕ್ಕೆ ಕೊಂಚ ಮುಲಾಮು ಹಚ್ಚಿದೆ.

ಪ್ರೊ.ಕೋಡಿ ರಂಗಪ್ಪ ಹಾಗೂ ಕಸಾಪ ಹಾಲಿ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್‌ ನಡುವೆ ಅಧ್ಯಕ್ಷಗಾದಿಗೆ ಬಿರುಸಿನ ಪೈಪೋಟಿಯೇ  ನಡೆದಿತ್ತು. ರಂಗಪ್ಪ ಅವರು ಕನ್ನಡದ ಪರಿಚಾರಿಕೆಯನ್ನೇ ಪ್ರಣಾಳಿಕೆ ಮಾಡಿಕೊಂಡು ಹೆಜ್ಜೆ ಇಟ್ಟರೆ, ಕೈವಾರ ಶ್ರೀನಿವಾಸ್‌ ಹಾಲಿ ಇದ್ದ ಅಧಿಕಾರವನ್ನು ಬಳಿಸಿಕೊಂಡು ಪ್ರಚಾರ ಆರಂಭಿಸಿದರಲ್ಲದೆ, ಗೆಲುವಿಗೆ ಏನೆಲ್ಲ ಮಾಡಬಹುದೋ ಅದೆಲ್ಲವನ್ನೂ ಮಾಡಿದರು ಎಂದು ಚಿಕ್ಕಬಳ್ಳಾಪುರ ಸಾಹಿತ್ಯಾಸಕ್ತಕರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ.

ಕೈವಾರ ಶ್ರೀನಿವಾಸ್‌

ಹಾಗಾದರೆ, ಕೈವಾರ ಶ್ರೀನಿವಾಸ್‌ ಸೋತಿದ್ದು ಏಕೆ? ಅನೇಕರು ಹತ್ತಾರು ಕಾರಣಗಳನ್ನು ನೀಡುತ್ತಾರೆ. ಅವು ಹೀಗಿವೆ;

  • ಐದು ವರ್ಷ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದ ಕೈವಾರ ಶ್ರೀನಿವಾಸ್‌ ಸಾಧನೆ ಸಮ್ಮೇಳನಗಳಿಗಷ್ಟೇ ಸೀಮಿತ. ಅವು ಅವ್ಯವಸ್ಥೆಯ ಸಮ್ಮೇಳನಗಳು ಎನ್ನುವ ಆರೋಪವಿದೆ.
  • ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆ ಇರಲಿಲ್ಲ. ಸಮ್ಮೆಳನಗಳ ಖರ್ಚು-ವೆಚ್ಚದಲ್ಲಿ ಹೆಚ್ಚೂ ಕಡಿಮೆಯಾಗಿರುವ ಆರೋಪಗಳು ಕೇಳಿಬಂದಿವೆ.
  • ಜಾತಿ ಆಧಾರದ ಮೇಲೆ ಚುನಾವಣೆ ಪ್ರಚಾರ ಮಾಡಿದ್ದು. ಸ್ವಜನ ಪಕ್ಷಪಾತ ಮತ್ತು ಓಲೈಕೆ ಹಾಗೂ ಮತದಾರರಿಗೆ ಆಮಿಷ ಒಡ್ಡಿದ್ದು, ರೆಸಾರ್ಟ್ʼಗಳಲ್ಲಿ ಮತದಾರರಿಗೆ ಆತಿಥ್ಯ ನೀಡಿದ್ದು.
  • ಕೇಂದ್ರದ ಪರಿಷತ್ತಿನಿಂದ ಬಂದ ಅನುದಾನದಲ್ಲಿ ಲೆಕ್ಕದ ಪಾರದರ್ಶಕತೆ ಇಲ್ಲದಿರುವುದು. ತಾಲೂಕು ಸಮ್ಮೇಳನಗಳಿಗೆ ಅನುದಾನ ಬಿಡುಗಡೆ ಮಾಡುವಾಗ ಕತ್ತರಿ ಹಾಕಿದ್ದು, ಅದರಲ್ಲಿ ಹಣವನ್ನು ಜೇಬಿಗಿಳಿಸಿದ ಆರೋಪವೂ ಇದೆ.
  • ತಾಲೂಕು ಕಸಾಪ ಅಧ್ಯಕ್ಷರುಗಳಿಗೆ ಇಷ್ಟ ಬಂದಾಗ ಅರ್ಧಚಂದ್ರ. ಪ್ರಶ್ನೆ ಮಾಡಿದರು ಎಂಬ ಕಾರಣಕ್ಕೆ ಚಿಕ್ಕಬಳ್ಳಾಪುರ, ಗೌರಿಬಿದನೂರು, ಚಿಂತಾಮಣಿ, ಶಿಡ್ಲಘಟ್ಟ ಘಟಕಗಳ ಅಧ್ಯಕ್ಷರ ಕಿತ್ತೊಗೆತ.
  • ಗಡಿ ತಾಲೂಕುಗಳಾದ ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರುಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಿಲ್ಲ ಹಾಗೂ ದತ್ತಿ ಕಾರ್ಯಕ್ರಮಗಳ ಸೊಲ್ಲೆ ಇಲ್ಲ.

ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ

ಶಿಷ್ಟಾಚಾರ ಮರೆತ ಕನ್ನಡಹಬ್ಬದ ಮೇಲೆ ಕೋವಿಡ್‌ ಕರಿನೆರಳಾ? ಅಥವಾ ಜಿಲ್ಲಾ ಕಸಾಪ ಎಡವಟ್ಟುಗಳಾ? ಚಿಕ್ಕಬಳ್ಳಾಪುರ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನ ನೀರಸ ಅಂತ್ಯ

ಫಲಿತಾಂಶದ ವಿವರ

ಕೋಡಿ ರಂಗಪ್ಪ ಅವರು 3,420 ಮತಗಳನ್ನು ಪಡೆಯುವುದರ ಮೂಲಕ ಜಯಭೇರಿ ಭಾರಿಸಿದರು. ಕೈವಾರ ಶ್ರೀನಿವಾಸ್ 1,041 ಮತಗಳನ್ನು ಪಡೆದು ಪರಾಜಿತರಾಗಿದ್ದಾರೆ. ರಂಗಪ್ಪ ಅವರು 2382 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಜಿಲ್ಲೆಯಾದ್ಯಂತ ಇಬ್ಬರೂ ಪಡೆದ ಮತಗಳು ಹೀಗಿವೆ;

  • ಚಿಕ್ಕಬಳ್ಳಾಪುರ: ಕೋಡಿರಂಗಪ್ಪ 1037-ಕೈವಾರ ಶ್ರೀನಿವಾಸ್ 329
  • ಗುಡಿಬಂಡೆ: ಕೋಡಿ ರಂಗಪ್ಪ 261-ಕೈವಾರ ಶ್ರೀನಿವಾಸ್ 147
  • ಚಿಂತಾಮಣಿ: ಕೋಡಿ ರಂಗಪ್ಪ 609-ಕೈವಾರ ಶ್ರೀನಿವಾಸ್ 299
  • ಬಾಗೇಪಲ್ಲಿ: ಕೋಡಿ ರಂಗಪ್ಪ 123-ಕೈವಾರ ಶ್ರೀನಿವಾಸ್ 28
  • ಗೌರಿಬಿದನೂರು: ಕೋಡಿ ರಂಗಪ್ಪ 447-ಕೈವಾರ ಶ್ರೀನಿವಾಸ್ 44
  • ಶಿಡ್ಲಘಟ್ಟ: ಕೋಡಿ ರಂಗಪ್ಪ 946-ಕೈವಾರ ಶ್ರೀನಿವಾಸ್ 194
  • ಬುದ್ಧಿವಂತರ ಕ್ಷೇತ್ರ ಎಂದೆನಿಸಿಕೊಂಡ ಈ ಚುಣಾವಣೆಯಲ್ಲೂ 72 ತಿರಸ್ಕೃತವಾಗಿವೆ.

Tags: chikkaballapuracknewsnowelection result 2021kaiwara srinivaskannada sahitya parishatkarnatakakodi rangappanews
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಆಡಳಿತ ಪಕ್ಷಕ್ಕೆ ಬಿತ್ತಾ ಕೋವಿಡ್‌ ಹೊಡೆತ!! ಸಿಎಂ ತವರು ಶಿವಮೊಗ್ಗ ಜಿಲ್ಲೆಯಲ್ಲೇ ಮುಗ್ಗರಿಸಿದ ಬಿಜೆಪಿ, ಬಳ್ಳಾರಿಯಲ್ಲೂ ಕಾಂಗ್ರೆಸ್‌; ಮಡಿಕೇರಿಯಲ್ಲಿ ಮಾತ್ರ ಅರಳಿದ ಕಮಲ

17 ಅಭ್ಯರ್ಥಿಗಳ ಕಾಂಗ್ರೆಸ್ ಪಟ್ಟಿ; ಎಂ.ಎಲ್.ಅನಿಲ್ ಕುಮಾರ್‌ಗೆ ಕೋಲಾರ-ಚಿಕ್ಕಬಳ್ಳಾಪುರ ಟಿಕೆಟ್

Comments 1

  1. ಗುಡಿಬಂಡೆ ಫಯಾಜ್ ಅಹಮದ್ ಖಾನ್ says:
    3 years ago

    ಸತ್ಯ ಮತ್ತು ಸತ್ವಯುತ ಸುದ್ದಿಗೆ ಧನ್ಯವಾದಗಳು. ಇದರ ಜೊತೆಗೆ
    ಪವಿತ್ರ ಕ್ಷೇತ್ರವಾದ ಕೈವಾಡದಲ್ಲಿ ಪರಿಷತ್ತಿನ ಕಾರ್ಯಕ್ರಮದಲ್ಲಿ ಕ್ಯಾಬರೆ ಕುಣಿಸಿದ್ದು, ಹಲ್ಲೆ ಆರೋಪಗಳಲ್ಲಿ ಜೈಲು ಸೇರಿದ್ದಿದು ,ಅವರಿಗಿಷ್ಟದ ವ್ಯಕ್ತಿಗಳಿಗೆ ಮಾತ್ರವೇ ರಾಜ್ಯೋತ್ಸವ ಪ್ರಶಸ್ತಿಗಳು ಕೊಡುವುದು ಸಾಹಿತಿಗಳ ಕಂಗೆಣ್ಣಿಗೆ ಗುರಿಯಾಯ್ತು.ಪ್ರೊ ಕೋಡಿರಂಗಪ್ಪನವರು ಯಾವುದೇ ಕಳಂಕರಹಿತವಾದವರು.ಹಿಂದಿನ ಚುನಾವಣೆಯಲ್ಲೂ ಜಾತಿ ರಾಜಕೀಯದ ಅಲೆಯಿತ್ತು.ಈ ಬಾರಿಯೂ ಇತ್ತು.ಮೂರು ವರ್ಷದ ಅವಧಿಯಿಂದ ತಮ್ಮ ಸ್ವಾರ್ಥಗಳಿಗೆ ಐದು ವರ್ಷ ಅಧಿಕಾರಾವಧಿ ಮಾಡಿದ ಮನುಬಳಿಗಾರ್ ಮತ್ತು ಅದನ್ನು ಬೆಂಬಲಿಸಿದ ಜಿಲ್ಲಾಧ್ಯಕ್ಷರುಗಳನ್ನ ಜನ ಕಿತ್ತೊಗೆದಿದ್ದು ನ್ಯಾಯೋಚಿತ.
    ಗುಡಿಬಂಡೆ ಫಯಾಜ್ ಅಹಮದ್

    Reply

Leave a Reply Cancel reply

Your email address will not be published. Required fields are marked *

Recommended

ಶಿವ ಆಭರಣಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ, ಅಭಿಷೇಕ ಪ್ರಿಯ

ಶಿವ ಆಭರಣಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ, ಅಭಿಷೇಕ ಪ್ರಿಯ

3 years ago
ಶ್ರೀ ಎಂ ಎಂಬ ಅಧುನಿಕ ಭಾರತದ ಸಂತ

ಶ್ರೀ ಎಂ ಎಂಬ ಅಧುನಿಕ ಭಾರತದ ಸಂತ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ