ಬೆಚ್ಚಿಬಿದ್ದ ಜನರು; ಮೀಸಲು ಅರಣ್ಯದ ಗ್ರಾಮಗಳ ಜನರಿಗೆ ಆತಂಕ
by GS Bharath Gudibande
ಗುಡಿಬಂಡೆ: ತಾಲೂಕಿನ ಎಲ್ಲೋಡು ಗ್ರಾಮದಲ್ಲಿ ಬುಧವಾರ ರಾತ್ರಿ ಚಿರತೆ ದಾಳಿಗೆ 20ಕ್ಕೂ ಹೆಚ್ಚು ಕುರಿಗಳು ಬಲಿಯಾಗಿರುವ ಘಟನೆ ನಡೆದಿದೆ.
ಎಲ್ಲೋಡು ಗ್ರಾಮದ ಶಿವಾರೆಡ್ಡಿ, ಬಾಬುರೆಡ್ಡಿ ಅವರಿಗೆ ಸೇರಿದ 20ಕ್ಕೂ ಹೆಚ್ವು ಕುರಿಗಳಿದ್ದು, ರಾತ್ರಿ ಸುಮಾರು 2 ಗಂಟೆಗೆ ಕುರಿ ದೊಡ್ಡಿಗೆ ನುಗ್ಗಿದ ಚಿರತೆ 20ಕ್ಕೂ ಹೆಚ್ಚು ಕುರಿಗಳನ್ನು ತಿಂದು ರಕ್ತದೋಕುಳಿ ಹರಿಸಿದೆ.
![](https://cknewsnow.com/wp-content/uploads/2022/03/cheetah-attack_gudibande01-1-576x1024.jpg)
ಚಿರತೆ ಉಪದ್ರವ ಇದೇ ಮೊದಲು
ಗುಡಿಬಂಡೆ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಚಿರತೆ ದಾಳಿ ನಡೆದಿದೆ. ಸುತ್ತಮುತ್ತಲ ಗ್ರಾಮಗಳ ಜನರು ತೀವ್ರ ಆತಂಕಕ್ಕೆ ಗುರಿಯಾಗಿದ್ದು, ಈ ಚಿರತೆ ಸುಮ್ಮನಿರುತ್ತಾ ಅಥವಾ ಪುನಾ ಪ್ರತ್ಯಕ್ಷವಾಗುತ್ತಾ ಎಂಬ ಬಗ್ಗೆ ಜನರು ಭಯದಲ್ಲಿ ಬದುಕುತ್ತಿದ್ದಾರೆ. ಅಷ್ಟೇ ಅಲ್ಲದೆ, ಜನ ಜಾರುವಾರುಗಳ ಸುರಕ್ಷತೆ ಬಗ್ಗೆ ಜನರು ಆತಂಕಗೊಂಡಿದ್ದಾರೆ.
ಅಲ್ಲದೆ, ಈ ಭಾಗದಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿ ಮೀಸಲು ಅರಣ್ಯ ಪ್ರದೇಶವಿದ್ದು, ಜನ ಸಂಚಾರದ ವೇಳೆ ಚಿರತೆ ದಾಳಿ ನಡೆಸುವ ಭೀತಿಯನ್ನೂ ಜನರು ವ್ಯಕ್ತಪಡಿಸಿದ್ದಾರೆ.
![](https://cknewsnow.com/wp-content/uploads/2022/03/cheetah-attack_gudibande02-576x1024.jpg)
![](https://cknewsnow.com/wp-content/uploads/2022/03/cheetah-attack_gudibande03-576x1024.jpg)
ನಷ್ಟ ಪರಿಹಾರಕ್ಕೆ ಕ್ರಮ
ವನ್ಯ ಪ್ರಾಣಿಗಳ ಹಾವಳಿಯಿಂದ ಮೃತಪಟ್ಟಿರುವ ಕುರಿಗಳಿಗೆ ಸರಕಾರದಿಂದ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ತಾಲೂಕು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ವೇಳೆ; ಸ್ಥಳಕ್ಕೆ ಗುಡಿಬಂಡೆಯ ತಹಸೀಲ್ದಾರ್ ಸಿಬ್ಗತ್ ವುಲ್ಲಾ, ಅರಣ್ಯಾಧಿಕಾರಿ ಚಂದ್ರಶೇಖರ ರೆಡ್ಡಿ, ತಾಲೂಕಿನ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕನಕರಾಜು ಸೇರಿದಂತೆ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
![](https://cknewsnow.com/wp-content/uploads/2022/03/gbd_yellodu-1024x902.jpeg)